ಋಗ್ವೇದಸಂಹಿತಾ ಭಾಗ – ೩೩ – ಐತರೇಯಬ್ರಾಹ್ಮಣಂ(ಮೂರನೆಯ ಭಾಗ) ಮತ್ತು ಐತರೇಯಾರಣ್ಯಕಂ(ಐತರೇಯೋಪನಿಷ್ಸಹಿತ)
ವಿಷಯಾನುಕ್ರಮಣಿಕೆ
೩೧ನೆಯ ಅಧ್ಯಾಯ
೩೨ನೆಯ ಅಧ್ಯಾಯ
ಮೊದಲೆನಯ ಖಂಡ — ಅಗ್ನಿಹೋತ್ರವೆಂಬ ಕರ್ಮದಲ್ಲಿ ಸಂಭವಿಸುವ ಲೋಪದೋಷ, ಅನಾಹುತ, ವಿಘ್ನ ಮುಂತಾದವುಗಳಿಗೆ ಹೇಳಿರುವ ಪ್ರಾಯಶ್ಚಿತ್ತ ಇತ್ಯಾದಿ — ಅಗ್ನಿಹೋತ್ರ ಮಾಡುವ ಯಜ್ಞಕರ್ತನು ಮೃತನಾದಲ್ಲಿ ಅನುಸರಿಸಬೇಕಾದ ?ಆಯಶ್ಚಿತ್ತಾದಿ ಕ್ರಮಗಳು
ಎರಡನೆಯ ಖಂಡ — ಪ್ರಾಶ್ಚಿತ್ತವಿಧಾನವು ಮುಂದುವರೆದುದು
ಮೂರನೆಯ ಖಂಡ — ಸಾನ್ನಾಯ್ಯವೆಂಬ ಹೋಮದ್ರವ್ಯವು ಕೆಟ್ಟುಹೋದರೆ ಅಥವಾ ನಷ್ಟವಾದರೆ ಮಾಡಬೇಕಾದ ಪ್ರಾಯಶ್ಚಿತ್ತವು
ನಾಲ್ಕನೆಯ ಖಂಡ — ಅಗ್ನಿಹೋತ್ರದಲ್ಲಿ ಸಂಭವಿಸಬಹುದಾದ ಇತರ ಲೋಪದೇಷಗಳು, ಹವಿಸ್ಸು ಮುಂತಾದ್ದು ಚೆಲ್ಲಿಹೋಗುವುದು. ಚಮಸವು (ಹೋಮಮಾಡುವ ಮರದ ಸೌಟು) ಮುರಿದು ಹೋಗುವುದು, ಅಥವಾ ಗಾರ್ಹಪತ್ಯಾಗ್ನಿಯು ಆರಿಹೋಗುವುದು ಮುಂತಾದ ದೋಷಗಳಿಗೆ ಪ್ರಾಯಶ್ಚಿತ್ತವು
ಐದನೆಯ ಖಂಡ — ಯಜ್ಞಾಗ್ನಿಗಳಿಂದ ಬೆರೊಂದು ಅಗ್ನಿಯನ್ನು ಹೊತ್ತಿಸುವುದಕ್ಕಾಗಿ ಅಗ್ನಿಯನ್ನು ತಂದು ಮಿಶ್ರಮಾಡುವುದು, ಮುಂತಾದ ಕರ್ಮಗಳಿಗೆ ಮಾಡುವ ಪ್ರಾಯಶ್ಚಿತ್ತವಿಧಾನ ಇತ್ಯಾದಿ.
ಆರನೆಯ ಖಂಡ — ಯಜ್ಞಾಗ್ನಿಯು ಎಂದರೆ, ಆಹವನೀಯ, ಗಾರ್ಹಪತ್ಯ, ದಕ್ಷಿಣಾಗ್ನಿ ಎಂಬ ಅಗ್ನಿಗಳಲ್ಲಿ ಯಾವುದಾದರೂ ಇತರ ಎಂದರೆ ಗ್ರಾಮದ ಮನೆಗಳಲಿ ಇರುವ ಅಗ್ನಿ, ಅರಣ್ಯದಲ್ಲಿರುವ ದಾವಾಗ್ನಿ ಅಥವಾ ಅಂತರಿಕ್ಷದಲ್ಲಿರುವ ವೈದ್ಯುತಾಗ್ನಿ (ಸಿಡಿಲು) ಮುಂತಾದವುಗಳೊಡನೆ ಸಂಸರ್ಗ (ಮಿಶ್ರ) ವಾದಲ್ಲಿ ಅವುಗಳಿಗಾಗಿ ಅನುಸರಿಸಬೇಕಾದ ದುಃಖಾಶ್ರುವನ್ನು (ಕಣ್ಣೀರನ್ನು) ಸುರಿಸಿದಲ್ಲಿ ಅಥವಾ ತನ್ನ ಪ್ರತಿಜ್ಞೆಯು ಭಂಗವಾದಲ್ಲಿ ಅತವಾ ದರ್ಶಪೂರ್ಣಮಾ ಸೇಷ್ಟಿಯನ್ನು ಆಚರಿಸದೆ ತಪ್ಪಿದಲ್ಲಿ ಅಥವಾ (ಗಾರ್ಹಪತ್ಯ) ಅಗ್ನಿಯು ಆರಿಹೋದಲ್ಲಿ ಅನುಸರಿಸಬೇಕಾದ ಪ್ರಯಶ್ಚಿತ್ತವು.
ಏಳನೆಯ ಖಂಡ — ಅಗ್ನಿಹೋತ್ರಮಾಡುವ ಪುರುಷನು ಕಾರಾಣಾಂತರದಿಂದ ದುಃಖಾಶ್ರುವನ್ನು (ಕಣ್ಣೀರನ್ನು) ಸುರಿಸಿದಲ್ಲಿ ಅಥವಾ ತನ್ನ ಪ್ರತಿಜ್ಞೆಯು ಭಂಗವಾದಲ್ಲಿ ಅಥವಾ ದರ್ಶಪೂರ್ಣಮಾ ಸೇಷ್ಟಿಯನ್ನು ಆಚರಿಸದೆ ತಪ್ಪಿದಲ್ಲಿ ಅಥವಾ (ಗಾರ್ಹಪತ್ಯ) ಅಗ್ನಿಯು ಆರಿಹೋದಲ್ಲಿ ಅನುಸರಿಸಬೇಕಾದ ಪ್ರಾಯಶ್ಚಿತ್ತವು.
ಎಂಟನೆಯ ಖಂಡ — ಆಗ್ನಿಹೋತ್ರಿಯಾದವನು ಅಗ್ರಯಣೇಷ್ಟಿಯನ್ನು ಮಾಡದೆ ಹೊಸದಾಗಿ ಬೆಳೆದ ಧಾನ್ಯವನ್ನು ಭುಜಿಸುವುದು ಮತ್ತು ಯಜ್ಞಮಾಡುವಾಗ ಇತರ ವಿಘನಮುಂತಾದವುಗಳು ಸಂಭವಿಸಿದರೆ ಆಚರಿಸಬೇಕಾದ ಪ್ರಾಯಶ್ಚಿತ್ತವು.
ಒಂಭತ್ತನೆಯ ಖಂಡ — ಪತ್ನಿ ಇಲ್ಲದ ಅಪತ್ನೀಕನೆನಿಸಿದವನು ಮಾಡಬೆಕಾದ ಅಗ್ನಿಹೋತ್ರವೆಂಬ ಕರ್ಮವನ್ನು ಹೇಗೆ ಮಾಡಬೇಕು ಇತ್ಯಾದಿ.
ಹತ್ತನೆಯ ಖಂಡ — ಪತ್ನಿ ಇಲ್ಲದ ಆಪತ್ನೀಕನಾದ ಅಗ್ನಿಹೋತ್ರಿಯು ಅಗ್ನಿಹೋತ್ರವನ್ನು ಹೇಗೆ ಮಾಡಬೇಕು ಎಂಬ ವಿಚಾರವು.
ಹನ್ನೊಂದನೆಯ ಖಂಡ — ಅಗ್ನಿಹೋತ್ರಿಯಾದವನಿಗೆ ಸಂಭವಿಸುವ ಇತ್ರ ವಿಘ್ನಗಳು. ಯಜ್ಞಾದಿಗಳ ಸಮೀಪದಲ್ಲಿರದೆ ದೂರಪ್ರದೇಶದಲ್ಲಿರುವಾಗ ಹೇಗೆ ಆಚರಿಸಬೇಕು ಇತ್ಯಾದಿ.
೩೩ನೆಯ ಅಧ್ಯಾಯ
ಶುನಃಶೇಪೋಪ್ಯಾಖ್ಯಾನವು ದೊರೆಯಾದ ಹರಿಶ್ಚಂದ್ರನ ಪುತ್ರೇಚ್ಛೆ — ಪುತ್ರ ಸಂಪತ್ತಿನ ಪ್ರಶಂಸೆ.
ಮೊದಲನೆಯ ಖಂಡವು — ರಾಜನಾದ ಹರಿಶ್ಚಂದ್ರನ ಪುತ್ರೇಚ್ಛೆ, ಪುತ್ರಸಂತಾನ ಇತ್ಯಾದಿ.
ಎರಡನೆಯ ಖಂಡವು — ಹರಿಶ್ಚಂದ್ರರಾಜನಿಗೆ ಪುತ್ರೋತ್ಪತ್ತಿಯಾಗುವುದು. ವರುಣನು ಪುನಃ ಪುನಃ ಬಂದು ಅವನ ಮಗನನ್ನು ತನಗೆ ಯಜ್ಞದಲ್ಲಿ ಆಹುತಿಯನ್ನಾಗಿ ಕೊಡಬೇಕೆಂದು ನಿರ್ಬಂಧಿಸುವುದು. ಆದರ ಹರಿಶ್ಚಂದ್ರನು ಬೇರೆ ಬೇರೆ ಕಾರಣಗಳನ್ನು ಮುಂದೆಮಾಡಿ ಯಜ್ಞವನ್ನು ಮುಂದಕ್ಕೆ ಹಾಕಿ ನುಣಿಚಿಕೊಳ್ಳುವುದು.
ಮೂರನೆಯ ಖಂಡವು — ರೋಹಿತನು ನಿಷ್ಪ್ರಾಯೋಜಕನಾಗಿ ಆರು ವರ್ಷಗಳ ಕಾಲ ಕಾಡಿನಲ್ಲಿ ಅಲೆಯುವುದು ಅನಂತರ ತನಗೆ ಬದಲಾಗಿ ವರುಣನಿಗೆ ಆಹುತಿಕೊಡುವುದಕ್ಕಾಗಿ ಶುನಃಶೇಪನೆಂಬ ಒಬ್ಬ ಬ್ರಾಹ್ಮಣಪುತ್ರನನ್ನು ಅವನ ತಂದೆತಾಯಿಗಳಿಂದ ಕ್ರಯವಾಗಿ ಪಡೆದುದು.
ನಲ್ಕನೆಯ ಖಂಡವು — ಹರಿಶ್ಚಂದ್ರನು ಮಾಡುವ ರಾಜಸೂಯಯಜ್ಞದಲ್ಲಿ ನಾಲ್ಕು ಮಂದಿ ಮಹಾ ಋಷಿಗಳು ಋತ್ತಿಕ್ಕು (ಪುರೋಹಿತ)ಗಳಾಗುವುದು. ಉದ್ದೇಶಿಸಿದ ನರಯಜ್ಞಕಾಲವು ಸಮೀಪಿಸುವುದು. ಭೀಕರವಾದ ಮರಣದಿಂಡ ತಪ್ಪಿಸುವಂತೆ ಶುನಃಶೇಪನು ದೇವತೆಗಳಿಗೆ ಮೊರೆಯಿಡುವುದು. ಅವನು ಮೊರೆಯಿಟ್ಟ ದೇವತೆಗಳು ಮತ್ತು ಉಚ್ಚರಿಸಿದ ಮಂತ್ರಗಳು
ಐದನೆಯ ಖಂಡವು — ಶುನಃಶೇಪನ ವಿಮೋಚನೆ, ಅವನ ಅಂಜಃಸವನರೂಪದ ನಿಷ್ಪೀಡನದ ಕ್ರಮ ವಿಶ್ವಾಮಿತ್ರನು ಅವನನ್ನು ತನ್ನ ಪುತ್ರನನ್ನಾಗಿ ಅಂಗೀಕರಿಸುವುದು
ಆರನೆಯ ಖಂಡವು — ವಿಶ್ವಾಮಿತ್ರನ ಸಂತತಿ ಶುನಃಶೇಪನ ಕಥೆಯನ್ನು ಪಠಿಸಿದವರಿಗೆ ಲಭಿಸುವ ಪ್ರತಿಫಲ.
೩೪ನೇ ಅಧ್ಯಾಯ
ರಾಜಸೂಯಯಾಗದ ಪ್ರಾರಂಭದಲ್ಲಿ ಆಚರಿಸಬೇಕಾದ ಕಾರ್ಯಕಲಾಪಗಳು
ಮೊದಲನೆಯ ಖಂಡ — ಬ್ರಾಹ್ಮಣರಿಗೂ ಕ್ಷತ್ರಿಯರಿಗೂ ಇರುವ ಸಂಬಂಧ
ಎರಡನೆಯ ಖಂಡ — ರಾಜಸೂಯಯಾಗವನ್ನು ಮಾಡುವುದಕ್ಕೆ ಸರಿಯಾದ ಸ್ಥಳವನ್ನು ನಿರ್ದೇಶಿಸಬೇಕೆಂದು ರಾಜರು ದೇವತೆಗಳನ್ನು ಕೇಳುವುದು
ಮೂರನೆಯ ಖಂಡ — ಇಷ್ಟಪೂರ್ತಾ, ಅಪರಿಜ್ಯಾನಿಃ ಎಂಬ ಆಹುತಿವಿಶೇಷಗಳು.
ನಾಲ್ಕನೆಯ ಖಂಡ — ಅಜೀತಪುನರ್ವಣ್ಯ ಎಂಬ ಆಹುತಿಗಳ ಸ್ವರೂಪವು.
ಐದನೆಯ ಖಂಡ — ರಾಜನು ಯಜ್ಞದೀಕ್ಷೆಯನ್ನು ವಹಿಸಿ ಯಜ್ಞಮಾಡುವಾಗ ಬ್ರಾಹ್ಮಣನಂತೆ ಪರಿಗಣಿಸಲ್ಪಡುವನು. ಆದರೆ ರಾಜರಿಗೆ ಇರಬೇಕಾದ ಸ್ಥಾನಮಾನಗಳನ್ನೂ ಮರ್ಯಾದೆಯನ್ನೂ ಆ ಕಾಲದಲ್ಲಿ ಕಳೆದುಕೊಳ್ಳುವನು ಎಂದರೆ ರಾಜನಂಟೆ ಗೌರವಿಸಲ್ಪಡುವುದಿಲ್ಲ. ಬ್ರಾಹ್ಮಣನಂತೆಯೇ ಪರಿಗಣಿಸಲ್ಪಡುವನು.
ಆರನೆಯ ಖಂಡ — ಬ್ರಾಹ್ಮಣಸ್ವರೂಪವನ್ನು ದೀಕ್ಷಾದಿಗಳ ಮೂಲಕ ಪಡೆದು ಯಜ್ಞಾಮಾಡಿದನಂತರ ಮತ್ತೆ ಕ್ಷತ್ರಿಯನಾದ ಆ ಪುರುಷನು ಹಿಂದೆ ಕ್ಷತ್ರಿಯತ್ವವನ್ನು ಹೇಗೆ ಪಡೆಯುವನು ಇತ್ಯಾದಿ.
ಏಳನೆಯ ಖಂಡ — ಕ್ಷತ್ರಿಯನಾದವನಿಗೆ ಯಜ್ಞಾದಿಗಳನ್ನು ಮಾಡಿಸುವ ಪುರೋಹಿತನ ಗೋತ್ರಪ್ರವರಾದಿಗಳು ಆ ಕ್ಷತ್ರಿಯನಿಗೆ ಸಂಬಂಧಪಡುವವು.
ಎಂಟನೆಯ ಖಂಡ — ಯಜ್ಞಾಹುತಿಯಾಗಿ ಉಳಿಯುವ ಹವಿಃಶೇಷವನ್ನು ಕಷತ್ರಿಯನಾದವನು ಭಕ್ಷಿಸಬಾರದು. ಆಕ್ಷತ್ರಿಯನ ಭಗವಾದ ಹವಿಃಶೇಷವನ್ನು ಬ್ರಹ್ಮನೆಂಬ ಋತ್ವಿಜನೇ ಭಕ್ಷಿಸಬೇಕು.
೩೫ನೆ ಅಧ್ಯಾಯ
ವಿಶ್ವಂತರ ಎಂಬ ರಾಜನಿಗೆ ಯಜ್ಞದಲ್ಲಿ ಸೋಮಪಾನ ಮಾಡುವುದಕ್ಕೆ ಬದಲಾಗಿ ಬೇರೆ ವಿಧವನ್ನು ಅನುಸರಿಸಬೇಕೆಂದು ರಾಜಮಾರ್ಗದೇಯ ಎಂಬುವನು ಉಪದೇಶಿಸುವುದು.
ಮೊದಲನೆಯ ಖಂಡವು — ಶ್ಯಾಪರ್ಣನೆಂಬುವನ ಉಪಾಖ್ಯಾನವು ರಾಮ ಎಂಬುವನು ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವುದು.
ಎರಡನೆಯ ಖಂಡವು — ಸೋಮಯಾಗದಲ್ಲಿ (ಸೋಮಪಾನದಲ್ಲಿ) ಇಂದ್ರನನ್ನು ಏಕೆ ಬಿಡಲಾಯಿತು. ಅದರಿಂದ ಕ್ಷತ್ರಿಯನೂ ಯಜ್ಞದಲ್ಲಿ ಸೋಮಪಾನಕ್ಕೆ ಅನರ್ಹನಾದನು ಎಂಬ ವಿಚಾರ
ಮೂರನೆಯ ಖಂಡವು — ಯಜ್ಞಮಾಡುವ ಕ್ಷತ್ರಿಯ ಯಜಮಾನನು ಯಜ್ಞದಲ್ಲಿ ಸೋಮಪಾನಕ್ಕೆ ಬದಲಾಗಿ ಇತರ ಭಕ್ಷಗಳನ್ನು ಭಕ್ಷಿಸುವಾಗ ಯಾವ ವಿಧವಾದ ಅನರ್ಹಭಕ್ಷಗಳನ್ನು ವರ್ಜಿಸಬೇಕೆಂಬ ವಿಚಾರ ಇತ್ಯಾದಿ.
ನಾಲ್ಕನೆಯ ಖಂಡವು — ರಾಜನಾದವನು ಹವಿಃಶೇಷಭಕ್ಷಣಾರ್ಥವಾಗಿ ಯಾವವಿಧವಾದ ದ್ರವ್ಯವನ್ನು ಆರಿಸಿಕೊಳ್ಳಬೇಕು? ನೃಗ್ರೋಧಶಬ್ದದ ಮೂಲವು ಮತ್ತು ಅರ್ಥವು
ಐದನೆಯ ಖಂಡವು — ಯಜ್ಞದಲ್ಲಿ ಕ್ಷತ್ರಿಯನಾದ ರಾಜನು ಹವಿಃಶೇಷಭಕ್ಷಣಾರ್ಥವಾಗಿ ನೃಗ್ರೋಧ ವೃಕ್ಷದ ರಸವನ್ನು ಏತಕ್ಕಾಗಿ ಪಾನಮಾಡಬೇಕೆಂಬ ವಿಷಯದಲ್ಲಿ ಸಂಕೇತವು.
ಆರನೆಯ ಖಂಡವು ಖಂಡವು — ರಾಜನಾದವನು ಯಾಗದಲ್ಲಿ ಸೋಮರಸಕ್ಕೆ ಬದಲಾಗಿ ಪಾನಮಾಡಬೇಕಾದ ನೃಗ್ರೋಧವೃಕ್ಷದ ರಸದ ಜತೆಗೆ ಸೇರಿಸುವ ಉದುಂಬರ, ಅಶ್ವತ್ಥವೃಕ್ಷ ಎಂಬ ವೃಕ್ಷಗಳ ಫಲಗಳ ಸಂಕೇತವು ಇತ್ಯಾದಿ
ಏಳನೆಯ ಖಂಡವು — ತ್ರೈತ ಎಂಬ ಸೋಮಪಾನಪಾತ್ರೆಯಿಂದ ಪಾನಮಾಡುವುದು.
ಎಂಟನೆಯ ಖಂಡವು — ನರಾಶಂಸ ಚಮಸದಿಂದ ಪಾನಮಾಡುವ ವಿಷಯ; ಸೋಮರಸಕ್ಕೆ ಬದಲಾಗಿ ಬೇರೆ ದ್ರವ್ಯವನ್ನು ಭಕ್ಷಿಸುವ ವಿಷಯದಲ್ಲಿ ನಿರ್ದೇಶಕರಾದವರ ಹೆಸರುಗಳು ಮತ್ತು ಆ ಸಂವಂಧವಾದ ಕಾರ್ಯಕಲಾಪಗಳ ವಿವರಣೆ.
೩೬ನೇ ಅಧ್ಯಾಯ
ರಾಜಸೂಯಯಾಗದಲ್ಲಿ ಸ್ತುತ್ಯಾದಿನದಲ್ಲಿ ಪಠಿಸಬೇಕಾದ ಸ್ತೋತ್ರ ಮತ್ತು ಶಸ್ತ್ರಮಂತ್ರಗಳ ವಿಷಯ
ಮೊದಲನೆಯ ಖಂಡವು — ಮಾಧ್ಯಂದಿನಸವನದಲ್ಲಿ ರಥಂತರ ಮತ್ತು ಬೃಹತ್ಸಾಮಗಳನ್ನು ಹೇಗೆ ಪಠಿಸಬೇಕೆಂಬ ವಿಚಾರ.
ಎರಡನೆಯ ಖಂಡವು — ಮರುತ್ವತೀಯ ಮತ್ತು ನಿಷ್ಕೇವಲ್ಯಶಸ್ತ್ರಗಳ ವಿಷಯದಲ್ಲಿ ಹೇಳಬೇಕಾದ ಉಳಿದ ವಿಶೇಷಸಂಗತಿಗಳು.
ಮೂರನೆಯ ಖಂಡವು — ನಿಷ್ಕೇಲ್ಯಶಸ್ತ್ರದ ನಿವಿತ್ಸೂಕ್ತವು.
ನಾಲ್ಕನೆಯ ಖಂಡವು — ಹೋತೃವರ್ಗದವರು ಎಂದರೆ ಹೋತೃವಿಗೆ ಸಹಾಯಕರಾದ ಋತ್ವಿಜರು ಪಠಿಸಬೇಕಾದ ಶಸ್ತ್ರಮಂತ್ರಗಳು ಇತ್ಯಾದಿ
೩೭ನೆಯ ಅಧ್ಯಾಯವು
ರಾಜನಿಗೆ ಉಕ್ತವಾಗಿರುವ ಪುನರಭಿಷೇಕ ಇತ್ಯಾದಿ
ಮೊದಲನೆಯ ಖಂಡವು — ಪುನರಭಿಷೇಕಕ್ಕೆ ಅವಶ್ಯಕವಾದ ಸಾಧನಸಾಮಾಗ್ರಿಗಳು
ಎರಡನೆಯ ಖಂಡವು — ಪುನರಭಿಷೇಕಕಾಲದಲ್ಲಿ ರಾಜನು ಹೇಗೆ ಸಿಂಹಾಸನವನ್ನು ಹತ್ತಬೇಕು ಮತ್ತು ಯಾವ ಮಂತ್ರಗಳನ್ನು ಪಠಿಸಬೇಕು ಇತ್ಯಾದಿ
ಮೂರನೆಯ ಖಂಡವು — ಶಾಂತಿವಾಚನ ಮಂತ್ರಗಳಿಂದ ರಾಜನನ್ನು ಪ್ರೋಕ್ಷಿಸುವುದು, ಆ ಕಾಲದಲ್ಲಿ ಭೂಃ ಮೊದಲಾದ ಶಬ್ದಗಳನ್ನು ಪಠಿಸಬೇಕೇ, ಬೇಡವೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು.
ನಾಲ್ಕನೆಯ ಖಂಡವು — ಪುನರಭಿಷೇಕವೆಂಬ ಕರ್ಮದಲ್ಲಿ ಬಳಸುವ (ಉಪಯೋಗಿಸುವ) ನಾನಾ ಸಾಧನ ಸಾಮಾಗ್ರಿಗಳ ಮತ್ತು ಪಾನಮಾಡುವ ದ್ರವರೂಪವಾದ ವಸ್ತುಗಳ ಸಂಕೇತವು; ರಾಜನು ಪಾನಮಾಡುವ ಸುರಾ ಎಂಬ ಮಾದಕದ್ರವ್ಯ ಇತ್ಯಾದಿ.
ಐದನೆಯ ಖಂಡವು — ಪುನರಭಿಷೇಕಾನಂತರ ರಾಜನು ಸಿಂಹಾಸನವನ್ನು ಬಿಟ್ಟು ಇಳಿಯುವುದು ಮತ್ತು ಆ ಕಾಲದಲ್ಲಿ ಅವನು ಪಠಿಸಬೇಕಾದ ಮಂತ್ರಗಳು
ಆರನೆಯ ಖಂಡವು — ಶತ್ರುಗಳನ್ನು ಸೋಲಿಸಲು ರಾಜರು ಅನುಸರಿಸಬೇಕಾದ ಕೆಲವು ವಿಧಿನಿಯಮಗಳು.
ಏಳನೆಯ ಖಂಡವು — ಈ ಮೂರು ಮಂತ್ರಗಳನ್ನು ಕೆಲವು ಪದಗಳನ್ನೂ ಸೇರಿಸಿ ಪಠಿಸುವುದು ಮತ್ತು ಅದರ ಫಲವು ಈ ವಿಷಯದಲ್ಲಿ ಜನಮೇಜಯರಾಜನ ಅಭಿಪ್ರಾಯವು.
೩೮ನೆಯ ಅಧ್ಯಾಯವು
ದೇವತೆಗಳು ಇಂದ್ರನಿಗೆ ಮಾಡಿದ ಮಹಾಭಿಷೇಕಕ್ರಮವು ಪಟ್ಟಭಿಷೇಕವು.
ಮೊದಲನೆಯ ಖಂಡವು — ದೇವತೆಗಳು ಇಂದ್ರನನ್ನು ರಾಜನೆಂದು (ಸಮಸ್ತರಾಜ್ಯಾಧಿಪತಿ) ಘೋಷಿಸುವುದು; ಇಂದ್ರನಸಿಂಹಾಸನವು; ಯಾವ ಮಂತ್ರಗಳನ್ನು ಪಠಿಸಿ ಇಂದ್ರನು ಸಿಂಹಾಸನವನ್ನೇರುವನು ಎಂಬ ವಿಷಯ; ದೇವತೆಗಳು ಇಂದ್ರನ ವಿಷಯಗಳೆಲ್ಲವನ್ನೂ ವರ್ಣಿಸಿ ಎಲ್ಲರಿಗೂ ಇಂದ್ರನೇ ರಾಜನಾಗಿರುವನೆಂದು ಘೋಷಿಸುವುದು.
ಎರಡನೆಯ ಖಂಡವು — ಇಂದ್ರನು ಪೀಠದಲ್ಲಿ ಪ್ರತಿಷ್ಠಿತನಾಗುವಕಾಲದಲ್ಲಿ ಪ್ರಜಾಪತಿಯು ಪಠಿಸಿದ ಮಂತ್ರಗಳು.
ಮೂರನೆಯ ಖಂಡವು — ಇಂದ್ರನು ನಾನಾ ದಿಕ್ಕುಗಳಲ್ಲಿ ಅನೇಕ ದೇವತೆಗಳಿಂದ ಅಭಿಷೇಕಮಾಡಲ್ಪಟ್ಟು ಸಮಸ್ತ ಸಾಮ್ರಾಜ್ಯಕ್ಕೂ ರಾಜನೆಂದು ಘೋಷಿಸಲ್ಪಡುವುದು.
೩೯ನೆಯ ಅಧ್ಯಾಯವು
ಮಹಾಭಿಷೇಕವನ್ನು (ಪಟ್ಟಭಿಷೇಕವನ್ನು) ಮಾಡುವ ಕ್ರಮವು ಪೂರ್ವದಲ್ಲಿ ಯಾವ ಯಾವ ಋಷಿಗಳು ಯಾವ ಯಾವ ರಾಜರಿಗೆ ಪಟ್ಟಭಿಷೇಕವನ್ನು ಮಾಡಿದರು.
ಮೊದಲನೆಯ ಖಂಡವು — ಮಹಾಭಿಷೇಕದ ಫಲಗಳು ಈ ಅಭಿಷೇಕವನ್ನು ನೆರವೇರಿಸುವಾಗ ರಾಜನಾದವನು ಪುರೋಹಿತರ ಮತ್ತು ಜನರ ಎದುರಿಗೆ ಮಾಡಬೇಕಾದ ಪ್ರತಿಜ್ಞೆ ಇತ್ಯಾದಿ
ಎರಡನೆಯ ಖಂಡವು — ರಾಜನ ಮಹಾಭಿಷೇಕಕ್ಕಾಗಿ (ಪಟ್ಟಾಭಿಷೇಕಕ್ಕಾಗಿ) ಸಿದ್ಧಪಡಿಸಬೇಕಾದ ಸಂಭಾರಾದಿಗಳು; ನಾನಾವಿಧ ವೃಕ್ಷಗಳ ಶಾಖೆಗಳು ಮತ್ತು ಧಾನ್ಯಗಳು ಇತ್ಯಾದಿ
ಮೂರನೆಯ ಖಂಡವು — ಪಟ್ಭಭಿಷೇಕಮಾಡುವುದಕ್ಕಾಗಿ ಬೇಕಾಗುವ ಇತರ ಸಲಕರಣೆಗಳು
ನಲ್ಕನೆಯ ಖಂಡವು — ಪುರೋಹಿತನು ರಾಜನನ್ನು ಅಭಿಮಂತ್ರಿಸುವ ಮಂತ್ರವು
ಐದನೆಯ ಖಂಡವು — ಅಭಿಷೇಕಕಾಲದಲ್ಲಿ ಪಠಿಸಬೇಕಾದ ಮಂತ್ರಗಳು
ಆರನೆಯ ಖಂಡವು — ರಾಜನನನ್ನು ಅಭಿಷೇಕಮಾಡುವ ಕಾಲದಲ್ಲಿ ಉಪಯೋಗಿಸುವ ದಧಿ (ಮೊಸರು) ಮೊದಲಾದ ದ್ರವ್ಯಗಳ ಪ್ರಶಂಸೆಯು, ಸುರಾ ಮೊದಲಾದ ಮಧ್ಯಪಾನವು; ರಾಜರು ಸೋಮಪಾನಮಾಡುವ ವಿಧಾನವು.
ಏಳನೆಯ ಖಂಡವು — ಪೂರ್ವದಲ್ಲಿ ಯಾವ ಯಾವ ರಾಜರು ಮೇಲೆ ಹೇಳಿದ ಕ್ರಮದಲ್ಲಿ ಪಟ್ಟಾಭಿಷಿಕ್ತರಾಗಿ ಅನೇಕ ದೇಶಗಳನ್ನು ಜಯಿಸಿ ಅಶ್ವಮೇಧಯಾಗವನ್ನು ಮಾಡಿದರು, ಜನಮೇಜಯ, ವಿಶ್ವಕರ್ಮಾ ಮೊದಲಾದ ರಾಜರ ವಿಷಯ.
ಎಂಟನೆಯ ಖಂಡವು — ಹಿಂದಿನ ಖಂಡದಲ್ಲಿ ಹೇಳಿದಂಟೆ ಅಭಿಷಿಕ್ತರಾಜರ ವಿಷಯವು; ಅಂಗನೆಂಭ ರಾಜನ ಔದಾರ್ಯ ಪ್ರಶಂಸೆ ಇತ್ಯಾದಿ.
ಒಂಭತ್ತನೆಯ ಖಂಡವು — ಹಿಂದಿನ ಕೆಲವು ರಾಜರ ಪಟ್ಟಭಿಷೇಕ ಕಥನ ಮುಂದೆವರೆದುದು. ಭರತಜನ್ಯ ಔದಾರ್ಯವು, ಸತ್ಯಹವ್ಯನ ವೃತ್ತಾಂತವು, ಸತ್ಯಹವ್ಯನ ಶಿಷ್ಯನಾದ ಅಕ್ಷದಾತಿ ಎಂಬ ರಾಜನು ತನ್ನ ಗುರು ಮತ್ತು ಪುರೋಹಿತನಾದ ಸತ್ಯಹವ್ಯನಿಗೆ ಮಾಡಿದ ಮೋಸದ ವಿಚಾರವು.
೪೦ನೆಯ ಅಧಾಯ್ಯಯವು
ಪ್ರಥಮ ಖಂಡವು — ಪುರೋಹೀತನ ವಿಚಾರ ಇತ್ಯಾದಿ ರಾಜನು ತನ್ನ ಪುರೋಹಿತನನ್ನು ನೇಮಿಸಿಕೊಳ್ಳುವ ಅವಶ್ಯಕತೆಯು; ರಾಜನು ಗಾರ್ಹಪತ್ಯಾದ್ಯಗ್ನಿಗಳನ್ನು ರಕ್ಷಿಸುವ ಕ್ರಮ; ಅಗ್ನಿಯ ಕ್ರೂರಶಕ್ತಿಗಳನ್ನು ಶಾಂತವನ್ನಾಗಿ ಮಾಡಿ ಸಮಾಧಾನ ಪಡಿಸುವ ವಿಚಾರ.
ಎರಡನೆಯ ಖಂಡವು — ಪುರೋಹಿತನನ್ನು ನೇಮಿಸಿಕೊಳ್ಳುವ ರಾಜನ ರಕ್ಷಣೆಯ ಭರವನ್ನು ಅಗ್ನಿಯು ವಹಿಸಿಕೊಳ್ಳುವನು.
ಮೂರನೆಯ ಖಂಡವು — ಪುರೋಹಿತನ ಕರ್ತವ್ಯದ ಅವಶ್ಯಕತೆಯನ್ನು ಋಗ್ವೇದದ ಮೂರು ಋಕ್ಕುಗಳಲ್ಲಿ ವಿವರಿಸಲಾಗಿರುವುದು.
ನಾಲ್ಕನೆಯ ಖಂಡವು — ಪುರೋಹಿತನ ಯೋಗ್ಯತೆ ಇತ್ಯಾದಿ; ಮೂರುವಿಧ ಪುರೋಹಿತರು, ಪುರೋಹಿತ ಸ್ಥಾನಕ್ಕೆ ಇರುವ ಅರ್ಹತೆ; ಯಾವ ಮಂತ್ರಪಠನದಿಂದ ಮತ್ತು ಯಾವ ಕರ್ಮದಿಂದ ರಾಜನು ಪುರೋಹಿತನನ್ನು ನೇಮಿಸಿಲೊಳ್ಳಬೇಕು ಇತ್ಯಾದಿ.
ಐದನೆಯ ಖಂಡವು — ರಾಜನು ತನ್ನ ಶತ್ರುಗಳನ್ನು ನಾಶಮಾಡುವುದಕ್ಕಾಗಿ ಉಪಯೋಗಿಸಬೇಕಾದ ಮಾಯಾವಿದ್ಯವು; ಅದನ್ನು ಯಾರು ಮೊದಲು ತಿಳಿಸಿದರು ಇತ್ಯಾದಿ.
ಐತರೇಯ ಬ್ರಾಹ್ಮಣದಲ್ಲಿರುವ ವಾಕ್ಯಗಳು ವರ್ಣಾನುಕ್ರಮಣಿಕೆ
ಐತರೇಯಾರಣ್ಯಕವು: ಪ್ರಥಮಾರಣ್ಯಕವು
ದ್ವಿತೀಯಾರಣ್ಯಕವು
ತೃತಿಯಾರಣ್ಯಕವು
ಚತುರ್ಥಾರಣ್ಯಕವು
ಪಂಚಮಾರಣ್ಯಕವು