ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಮಾರ್ಕಂಡೇಯ ಪುರಾಣಂ – ಸಂಚಿಕೆ ೧
ಆರಂಭಿಕ ಪುಟ
ಅನುವಾದಕರು: ಶ್ರೀ ಪಾಟಣಕರ ಚಂದ್ರಶೇಖರ ಭಟ್ಟ
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ —
ಜೈಮಿನಿಮುನಿಯು ಮಾರ್ಕಂಡೇಯ ಮಹಾಮುನಿಯ ಬಳಿಗೆ ಬಂದು ಭಾರತಕಥೆಯಲ್ಲಿನ ಸಂದೇಹಗಳನ್ನು ಪ್ರಶ್ನಿಸುವುದು. ಮಾರ್ಕಂಡೇಯಮುನಿಯು ವಿಂಧ್ಯಾದ್ರಿಯಲ್ಲಿದ್ದ ಪಕ್ಷೀಂದ್ರರನ್ನು ಕೇಳಿಕೊಳ್ಳುವಂತೆ ತಿಳಿಸಿ ಆ ಪ್ರಸಂಗದಿಂದ ವಪು ಎಂಬ ಅಪ್ಸರಾಂಗನೆಗೆ ಶಾಪಪ್ರಾಪ್ತಿಯಾದುದನ್ನು ತಿಳಿಸುವುದು.
೨ನೇ ಅಧ್ಯಾಯ —
ಕಂಕಪಕ್ಷಿ – ವಿದ್ಯುದ್ರೂಪ ರಾಕ್ಷಸರ ಯುದ್ಧಪ್ರಸ್ತಾವ, ಕಂಕನು ಹತನಾದ ಬಳಿಕ ಅವನ ಭ್ರಾತೃವಾದ ಕಂಧರನಿಂದ ರಾಕ್ಷಸನ ವಧ. ಮತ್ತು ಕಂಧರನು ಪರಿಗ್ರಹಿಸಿದ ರಾಕ್ಷಸ ಪತ್ನಿಯಲ್ಲಿ ತಾಕಿ ಎಂಬ ಕನ್ಯೆಯು ಉತ್ಪತ್ತಿ. ತಾರ್ಕ್ಷಿಯು ದ್ರೋಣ ಪತ್ನಿಯಾಗಿ ನಾಲ್ಕು ಮಹಾನುಭಾವರನ್ನು ಪಕ್ಷಿರೂಪದ ಪುತ್ರರನ್ನಾಗಿ ಪಡೆದುದು.
೩ನೇ ಅಧ್ಯಾಯ —
ಮಹಾನುಭಾವರಾದ ಪಿಂಗಾಕ್ಷ ಮುಂತಾದವರಿಗೆ ಪಕ್ಷಿಜನ್ಮವನ್ನು ಕೊಟ್ಟ ಶಾಪವು ಸಂಭವಿಸಲು ಕಾರಣ ಮತ್ತು ಆ ಪಕ್ಷಿಂದ್ರರು ವಿಂಧ್ಯಗಿರಿಗೆ ಹೋದುದು.
೪ನೇ ಅಧ್ಯಾಯ —
ನಿರ್ಗುಣನಾದ ಜನಾರ್ದನಸ್ವಾಮಿಯು ಮರ್ತ್ಯಜನ್ಮವನ್ನು ಹೊಂದುವ ಕಾರಣವನ್ನು ಜೈಮಿನಿಮುನಿಯು ಪ್ರಶ್ನಿಸಲು ಪಕ್ಷೀಂದ್ರರು ಚತುರ್ವ್ಯೂಹವರ್ಣನೆಯ ಮೂಲಕ ಉತ್ತರವನ್ನು ಹೇಳಿರುವುದು.
೫ನೇ ಅಧ್ಯಾಯ —
ಐದುಮಂದಿ ಪಾಂಡವರಿಗೆ ಧರ್ಮಪತ್ನಿಯಾದ ದ್ರೌಪದಿಯಲ್ಲಿ ಏಕಪತ್ನೀತ್ವ ಸಮರ್ಥನೆ. ಇಂದ್ರನ ಮಹಿಮೆಗೆ ಭ್ರಂಶವುಂಟಾಗಿ ಆಯಾಯ ಇಂದ್ರಾಂಶಗಳಿಂದ ಪಂಚಪಾಂಡವರು ಉತ್ಪತ್ತಿಯಾದುದು.
೬ನೇ ಅಧ್ಯಾಯ —
ಬಲರಾಮನು ಬ್ರಹ್ಮಹತ್ಯಾ ಪಾತಕಕ್ಕೆ ಗುರಿಯಾಗಿ ಪ್ರಾಯಶ್ಚಿತ್ತರೂಪವಾಗಿ ತೀರ್ಥಯಾತ್ರೆಯನ್ನು ಕೈಗೊಂಡಿರುವುದು.
೭ನೇ ಅಧ್ಯಾಯ —
ಹರಿಶ್ಚಂದ್ರರಾಜನನ್ನು ವಿಶ್ವಾಮಿತ್ರಮುನಿಯು ಕಾಡುತ್ತಿರಲು ಮುನಿಯನ್ನು ನಿಂದಿಸಿದ ವಿಶ್ವೇದೇವತೆಗಳಿಗೆ ಮುನಿಶಾಪದಿಂದ ಮಾನವಜನ್ಮಪ್ರಾಪ್ತಿ. ಮತ್ತು ದ್ರೌಪದೀಪುತ್ರರಾಗಿ ಅವರು ಜನಿಸುವುದು.
೮ನೇ ಅಧ್ಯಾಯ —
ಹರಿಶ್ಚಂದ್ರೋಪಾಖ್ಯಾನ, ರಾಜನು ಪ್ರಜಾಕೋಟಿಯ ಸಮೇತನಾಗಿ ಪುಷ್ಪವೃಷ್ಟಿಯಾಗುತ್ತಿದ್ದ ಹಾಗೆ ಸ್ವರ್ಗಕ್ಕೆ ತೆರಳಿದುದು.
೯ನೇ ಅಧ್ಯಾಯ —
ವಸಿಷ್ಠ – ವಿಶ್ವಾಮಿತ್ರಮಿನಿಗಳು ಪರಸ್ಪರ ಶಾಪದಿಂದ ಆಡಿ – ಬಕ ಎಂದ ಪಕ್ಷಿಭಾವವನ್ನು ಹೊಂದಿ ಯುದ್ಧಮಾಡುವುದು. ಬ್ರಹ್ಮದೇವನು ಸಂಧಾನಮಾಡುವುದು.
೧೦ನೇ ಅಧ್ಯಾಯ —
ಜೈಮಿನಿಯು ಪಕ್ಷೀಂದ್ರರಲ್ಲಿ ಪ್ರಾಣಿಗಳ ಗರ್ಭವಾಸ – ಜನ್ಮಾದಿ ವಿಷಯಗಳನ್ನು ಪ್ರಶ್ನಿಸುವುದು. ಆ ಪ್ರಸಂಗದಲ್ಲಿ ಜಡಪುತ್ರ. ನಾದ ಸುಮತಿ ಮತ್ತು ಅವನ ತಂದೆಯ ಸಂವಾದ ವರ್ಣನೆ.
೧೧ನೇ ಅಧ್ಯಾಯ —
ಸುಮತಿಯು ತಂದೆಗೆ ನಿಷೇಕಸಂಸ್ಕಾರದಿಂದ ಮೊದಲಾಗಿ ಗಭೋತ್ಪತ್ತಿಯನ್ನು ವರ್ಣಿಸಿದುದು.
೧೨ನೇ ಅಧ್ಯಾಯ —
ಮಹಾರೌರವ ಮುಂತಾದ ನರಕಯಾತನೆಗಳ ವರ್ಣನೆ.
೧೩ನೇ ಅಧ್ಯಾಯ —
ಯಮಪುರುಷ – ವೈಶ್ಯರಾಜರ ಸಂವಾದ.
೧೪ನೇ ಅಧ್ಯಾಯ —
ಯಮಪುರುಷನು ವೈಶ್ಯರಾಜನಿಗೆ ಪುಣ್ಯ ಪಾಪ ಕರ್ಮಗಳ ಫಲಪ್ರಾಪ್ತಿಯನ್ನು ವರ್ಣಿಸಿದುದು.
೧೫ನೇ ಅಧ್ಯಾಯ —
ಕರ್ಮಫಲವನ್ನು ಕೇಳಿದ ವೈಶ್ಯರಾಜನು ನರಕಜಂತುಗಳನ್ನು ಉದ್ಧಾರಮಾಡುತ್ತ ತಾನು ಸದ್ಗತಿಯನ್ನು ಹೊಂದಿರುವುದು.
೧೬ನೇ ಅಧ್ಯಾಯ —
ಕೌಶಿಕನೆಂಬ ವಿಪ್ರ ದಂಪತಿಗಳ ವೃತ್ತಾಂತ, ಪತಿವ್ರತಾಮಾಹಾತ್ಮ್ಯವರ್ಣನೆ, ತ್ರಿಮೂರ್ತಿಗಳು ಪುತ್ರರಾಗಿ ಜನಿಸುವಂತೆ ಸತಿ ಅನಸೂಯೆಗೆ ದೇವತೆಗಳಿಂದ ವರಪ್ರಾಪ್ತಿ. ದತ್ತಾತ್ರೇಯ ರೂಪದಿಂದ ವಿಷ್ಣುವು ಅನಸೂಯೆಗೆ ಪುತ್ರನಾಗಿ ಜನಿಸಿದುದು. ಗರ್ಗಮುನಿಯು ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೇಯ ಮಹಿಮೆಯನ್ನು ಹೇಳುವುದು.
೧೭ನೇ ಅಧ್ಯಾಯ —
ಕಾರ್ತವೀರ್ಯಾರ್ಜುನನು ದತ್ತಾತ್ರೇಯಮುನಿಯನ್ನು ಶುಶ್ರೂಷೆ ಮಾಡಿ ಕೃತಾರ್ಥನಾಗಿ ರಾಜ್ಯಭಾರಮಾಡುವುದು.
೧೮ನೇ ಅಧ್ಯಾಯ —
ಇಬ್ಬರು ನಾಗಕುಮಾರರು ತಮ್ಮ ತಂದೆಯಾದ ನಾಗರಾಜ ಅಶ್ವತರನಲ್ಲಿ ಕುವಲಯಾಶ್ವನ ವೃತ್ತಾಂತವನ್ನು ಹೇಳಲು ಉಪಕ್ರಮಿಸುವುದು.
೧೯ನೇ ಅಧ್ಯಾಯ —
ಕುವಲಯಾಶ್ವನು ಪಾತಾಲಕೇತು ದಾನವನನ್ನು ಅಟ್ಟಿಸಿಕೊಂಡುಹೋಗಿ ಪಾತಾಲವನ್ನು ಪ್ರವೇಶಮಾಡುವುದು. ಅಲ್ಲಿ ಕುವಲಯಾಶ್ವನಿಗೆ ಮದಾಲಸೆಯ ಪಾಣಿಗ್ರಹಣ. ಮತ್ತು ರಾಜಕುಮಾರನಿಂದ ದಾನವರ ವಧವರ್ಣನೆ.
೨೦ನೇ ಅಧ್ಯಾಯ —
ಮದಾಲಸೆಯು ತಾಲಕೇತು ರಾಕ್ಷಸನ ಮಾಯೆಯಿಂದ ಪತಿಯು ಮೃತನಾದಂತೆ ತಿಳಿದು ಪ್ರಾಣತ್ಯಾಗಮಾಡುವುದು. ವಿಯೋಗ ದುಃಖದಿಂದ ಕುವಲಯಾಶ್ವನು ತಪಿಸುತ್ತ ಸ್ತ್ರೀಭೋಗವನ್ನು ತ್ಯಜಿಸಿ ಪ್ರತಿಜ್ಞೆಮಾಡುವುದು.
೨೧ನೇ ಅಧ್ಯಾಯ —
ಅಶ್ವತರ ನಾಗರಾಜನು ಈಶ್ವರವರಪ್ರಭಾವದಿಂದ ಮದಲಸೆಯನ್ನು ಪುತ್ರಿಯನ್ನಾಗಿ ಹೊಂದಿರುವುದು. ಕುವಲಯಾಶ್ವನು ನಾಗರಾಜನ ಮನೆಗೆ ಹೋಗುವುದು.
೨೨ನೇ ಅಧ್ಯಾಯ —
ಮತ್ತೆ ಪಾತಾಲದಲ್ಲಿ ಕುವಲಯಾಶ್ವನಿಗೆ ಮದಾಲಸಾಪ್ರಾಪ್ತಿ. ಕುವಲಯಾಶ್ವನು ಪತ್ನೀಸಮೇತನಾಗಿ ನಗರ ಪ್ರವೇಶ ಮಾಡಿದುದು.