ಶ್ರೀ ಗಣೇಶ ಪುರಾಣಂ – ಸಂಪುಟ ೭
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೯೯ನೆಯ ಅಧ್ಯಾಯ
೧೦೦ನೆಯ ಅಧ್ಯಾಯ
ನಾಗಕನ್ಯೆಯರು ವಿನಾಯಕನನ್ನು ಕರೆದುಕೊಂಡು ತಮ್ಮ ಲೋಕಕ್ಕೆ ತೆರಳಿ ಅವನಿಗೆ ಆದರೋಪಚಾರ ಪೂಜಾದಿಗಳನ್ನು ಸಲ್ಲಿಸಿ ವರ್ಣಿಸಿದುದು. ಗಣಪತಿ — ನಾಗಕನ್ಯೆಯರ ಸಂಭಾಷಾಣೆ. ಕನ್ಯೆಯರು ಗಣಪತಿಯೊಡನೆ ತಮ್ಮ ತಂದೆ ಬಾಸುಕಿಯ ಸಮೀಪಕ್ಕೆ ಬಂದುದು. ನಾಗಲೋಕದ ವೈಭವ ಹಾಗೂ ವಾಸುಕಿಯ ಸೊಕ್ಕಿನ ವರ್ಣನೆ; ಮನೆಗೆ ಬಂದ ಮಯೂರೇಶ್ವರನನ್ನು ವಾಸುಕಿಯು ಗರ್ವದಿಂದ ಗೌರವಿಸದಿರಲು, ದೇವನು ಅವನ ಹೆಡೆಯ ಮೇಲೆ ಹತ್ತಿ ಅವನ ಶಿರೋರತ್ನವನ್ನು ಕೈಗೆ ತೆಗೆದುಕೊಂಡುದು. ಅದರಿಂದ ಕುಪಿತನಾದ ಸರ್ವರಾಜನು ತನ್ನ ಶಿರವನ್ನು ಕಂಪಿಸಿ ಪೃಥಿವೀ, ಪರ್ವತಗಳು, ಸಮುದ್ರಗಳು, ಸ್ವರ್ಗಲೋಕಗಳು, ರಸಾತಲ ಎಲ್ಲವನ್ನೂ ನಡುಗಿಸಿ, ಗಣಪತಿಯ ಮೇಲೆ ಆಕ್ರೋಶವನ್ನು ತೋರಿಸಿದುದು. ಆಗ ದೇವನು ಅದನನ್ನು ಸ್ವಲೀಲೆಯಿಂದಲೇ ಮರ್ದಿಸಿ ತನ್ನ ಕಂಠದಲ್ಲಿ ಮಾಲೆಯಂತೆ ಧರಿಸಿದುದು. ಅಂದಿನಿಂದ ದೇವನಿಗೆ “ಸರ್ಪಭೂಷಣ” ಎಂದು ಹೆಸರು ಬಂದುದು. ವಾಸುಕಿಯನ್ನು ಸೋಲಿಸಿದ ಸಂಗತಿ ಆದಿಶೇಷನಿಗೆ ತಿಳಿಯಲು, ಅವನು ಕುಪಿತನಾಗಿ ತನ್ನ ವಿಷಜ್ವಾಲೆಯಿಂದ ಲೋಕಗಳನ್ನು ಸುಡಲಾರಂಭಿಸಿ ತನ್ನ ಪರಿವಾರದೊಂದಿಗೆ ದೇವನನ್ನಾಕ್ರಮಿಸಲು, ಗನಪತಿಯು ತನ್ನ ವಾಹನವಾದ ಮಯೂರನಿಗೆ ಅನುಗ್ರಹಿಸಿ ಅವನನ್ನು ಸರ್ಪಗಳೊಂದಿಗೆ ಹೋರಾಟಕ್ಕೆ ಕಳಿಸಿದುದು. ಮಯೂರದ ಹಾವಳಿಯ ವರ್ಣನೆ. ಅದನ್ನು ನೋಡಿ ಶೇಷನು ವಿಷವಾಯುವಿನಿಂದ ಶಿಖಂಡಿಯನ್ನು ಮೂರ್ಚ್ಛೆಗೊಳಿಸಿ, ತಾನು ಮಯೂರೇಶನ ಮೇಲೆ ಯುದ್ಧಕ್ಕೆ ಹೋದುದು. ದೇವನು ವಿರಾದ್ರೂಪನನ್ನು ಧರಿಸಿ ಶೇಷನ ಹೆಡೆಯ ಮೇಲೇರಿ ಕುಣಿದಾಡಿದುದು. ದೇವನ ಭಾರವನ್ನು ತಡೆಯಲಾರದೆ, ಶೇಷನು ನಿರ್ವಿಣ್ಣನಾಗಲು, ಒಡನೆಯೇ ಅವನನ್ನು ಹಿಡಿದು ದೇವನು ತನ್ನ ಸೊಂಟಕ್ಕೆ ಸುತ್ತಿಕೊಂಡುದನ್ನು ಕಂಡು ಇತರ ನಾಗಗಳು ಯುದ್ಧಕ್ಕೆ ಬಂದುದು. ಆಗ ಗಣಪತಿಯು ಅವನ್ನೆಲ್ಲ ಸೋಲಿಸಿ, ತನ್ನ ಪ್ರತ್ಯವಯವಗಳಲ್ಲೂ ಇರಿಸಿಕೊಂಡು ಕುಣಿದುದು, ಸೋತು ಹೋದ ಶೇಷನು ದೇವನ ಮಹಿಮೆಯನ್ನರಿತು, ಅವನನ್ನು ವರ್ಣಿಸುತ್ತ ಕ್ಷಮೆಯನ್ನು ಯಾಚಿಸಿದುದು. ಆಗ ಗಣಪತಿಯು ಶೇಷನ ಬಂಧನದಲ್ಲಿ ಕೊಳೆಯುತ್ತಲಿದ್ದ ಸಂಪಾತಿ, ಜಟಾಯು, ಶ್ಯೇನ ಇವರನ್ನೆಲ್ಲ ಬಿಡುಗಡೆಮಾಡಿಸಿದುದು. ಪಕ್ಷಿಗಳು ದೇವನನ್ನು ವರ್ಣಿಸಿದುದು. ಅನಂತರ ಶಿಖಂಡಿಯನ್ನೇರಿ ದೇವನು ನಾಗಕನ್ಯೆಯರೊಡನೆ ಭೂಮಿಗೆ ಬಂದುದು ದಾರಿಯಲ್ಲಿ ಕಂಡ ಭಾಗಾಸುರನನ್ನು ತನ್ನ ಪರಶುವಿನಿಂದ ಕೊಂದುದು. ದೈವೀ ಮಾಯಾವಿಮೋಹಿತರಾದ ಬಾಲಕರು ದೇವನನ್ನು ಕಾಣದೆ, ರುದಿಸಿದುದು. ದೇವನ ಕೃಪೆಯಿಂದ ಭಗಾಸುರನು ಮೃತನಾಗಲು ತಾವು ಪಾರಾದೆವೆಂಬುದನ್ನು ತಿಳಿಯಲು ಬಾಲಕರು ದೇವನನ್ನಾಲಿಂಗಿಸಿ ವರ್ಣಿಸಿದುದು. ಎಲ್ಲ ಮಿತ್ರರೊಡನೆ ಮಯೂರೇಶನು ಮನೆಗೆ ಹಿಂದಿರುಗಿವಾಗ ಉಂಟಾದ ಶಬ್ದವನ್ನು ಕೇಳಿ ಮುನಿಗಳು “ಇದೇನೆಂದು” ತಿಳಿಯಲು ಹೊರಕ್ಕೆ ಬಂದುದು. ತಮ್ಮ ಮಕ್ಕಳನ್ನೇ ಹೋಲುವ ಮತ್ತೊಂದು ಮಕ್ಕಳ ಗುಂಪು ಬರುತ್ತಿರುವುದನ್ನು ಕಂಡು ಚಕಿತರಾದುದು. ನಿಜವಾದ ಬಾಲಕರು ಮನೆಗೆ ಬಂದ ಕೂಡಲೆ, ಬಾಲಕರ ರೂಪೀ ದೇವನ ವಿಶ್ವರೂಪ ಅಂತರ್ಹಿತವಾದುದು.
೧೦೧ನೆಯ ಅಧ್ಯಾಯ
೧೦೨ನೆಯ ಅಧ್ಯಾಯ
೧೦೩ನೆಯ ಅಧ್ಯಾಯ
ದೈತ್ಯನ ಉತ್ಕರ್ಷವನ್ನು ತಡೆಯಲು ಗಣಪತಿಯು ಪ್ರಯೋಗಿಸಿದ ಬಾಣಗಳನ್ನೆಲ್ಲ ದೈತ್ಯನು ಮತ್ತೆ ವಿಫಲಗೊಳಿಸಿದುದು. ಆಗ ಅಸುರನ ಶೌರ್ಯಕ್ಕೆ ಮೆಚ್ಚಿದ ಅಗಜಾಸುತನು ವಿಶ್ವರೂಪವನ್ನು ಧರಿಸಿ ಅವನನ್ನು ವ್ಯಾಮೋಹಗೊಳಿಸಿದುದು. ಅಸುರನು ನೋಡಲಿ, ನೋಡದಿರಲಿ, ಎಲ್ಲೆಲ್ಲೂ ಗಣಪತಿಯೇ ಗೋಚರನಾಗಲು, ದಿಗ್ಭ್ರಮೆಗೊಂಡು ಓಡಲಾರಂಭಿಸಿದನು. ಆಗ ದೇವನು ಅವನ ಜುಟ್ಟನ್ನು ಬಲವಾಗಿ ಹಿಡಿದೆಳೆದುಹಂಗಿಸಲು ಅಭಿಮಾನಿಯಾದ ಕಮಲಾಸುರನು ಮತ್ತೆ ಯುದ್ಧಕ್ಕೆ ನಿಂತುದು. ದೇವನು ತನ್ನ ನಿಶಿತ ಶಸ್ತ್ರಾಘಾತದಿಂದ ದೈತ್ಯನ ದೇಹವನ್ನು ವಿದಾರಿಸಿದುದು. ಆದರೆ ದೈತ್ಯ ದೇಹದ ರಕ್ತಕಣವೆಲ್ಲ ಕಮಲನಂತೆ ಅಸುರರಾಗಿ ಪರಿಣಮಿಸಿ ಯುದ್ಧವನ್ನಾರಂಭಿಸಲು, ದೇವನು ಕೋಪದಿಂದ ಹಿಂದಿರುಗಿ ನೋಡಿ ಸಿದ್ಧಿ — ಬುದ್ಧಿಯರನ್ನು ಯುದ್ಧಕ್ಕೆ ಪ್ರೇರಿಸಿದುದು. ಅವರು ತಮ್ಮ ಮೂರೂವರೆ ಕೋಟಿ ಸೈನ್ಯದೊಂದಿಗೆ ಹೋರಾಟವನ್ನು ಆರಂಭಿಸಿ ಹೊಸದಾಗಿ ಹುಟ್ಟಿ ಬಂದ ರಾಕ್ಷಸರನ್ನೆಲ್ಲ ನುಂಗಲಾರಂಭಿಸಲು ದೇವನು ಏಕಾಕಿಯಾದ ಕಮಲನನ್ನು ಮತ್ತೆ ಶಸ್ತ್ರದಿಂದ ಹೊಡೆಯಲು, ಆಗಲೂ ಅವನ ರಕ್ತದಿಂದ ರಾಕ್ಷಸರು ಜನಿಸಿದರು. ಇದರಿಂದ ಬೇಸರಗೊಂಡ ಬೆನಕನು ಶೂಲಾಯುಧವನ್ನು ಪ್ರಯೋಗಿಸಿ ಕಮಲಾಸುರನ ದೇಹವನ್ನು ಎರಡು ಭಾಗವಾಗಿ ತುಂಡರಿಸಿ, ಶಿರವನ್ನು ಭೀಮಾನದಿಯ ದಕ್ಷಿಣದ ದಂಡೆಗೂ ಮುಂಡವನ್ನು ಕೃಷ್ಣೆಯ ಉತ್ತರ ದಂಡೆಗೂ ಚೆಲ್ಲಿದುದು ಜಯಶಾಲಿಯಾದ ದೇವನನ್ನು ಎಲ್ಲರೂ ಹೊಗಳಿದುದು. ಆಗ ಗೌರೀ, ಗಣಪರಿವೃತನಾದ ಗಂಗಾಧರನೂ, ಗೌತಮಾದಿ ಮುನಿಗಳೂ ಅಲ್ಲಿಗೆ ಬಂದುದು. ಪಾರ್ವತಿಯೂ ದೇವನನ್ನು ಲಾಲಿಸಿದುದು. ಮುನಿಗಳು ಸ್ತೋತ್ರ ಮಾಲಿಕೆಯನ್ನು ರಚಿಸಿ ಪಾಡಿದುದು. ‘ನೀನು ಎಲ್ಲಿಗೂ ಹೋಗಬೇಡ, ಇಲ್ಲಿಯೇ ಇದ್ದು ನಿಮ್ಮನ್ನು ಸಂರಕ್ಷಿಸು’ ಎಂದು ಬೇಡಲು, ಪಾರ್ವರ್ತಿ ಪರಮೇಶ್ವರರೂ, ಮಯೂರೇಶನೂ ಅಲ್ಲಿಯೇ ನೆಲೆಸಲು ಒಪ್ಪಿದುದು. ವಿಶ್ವಕರ್ಮನುಬಂದು ಅವರ ವಾಸಕ್ಕೆ ಸುಂದರವಾದ ಮಂದಿರವನ್ನು ನಿರ್ಮಿಸಿದುದು. ಅದರ ವರ್ಣನೆ. ಮಹರ್ಷಿಗಳು ಆ ನಗರಕ್ಕೆ ‘ಮಯೂರೇಶಪುರ’ ಎಂಬ ಹೆಸರನ್ನಿಟ್ಟು ಕರೆದುದು. ಹರನು ತಪೋನಿರತನಾಗಲು, ಗೌರಿಯು ಅವನನ್ನು ಉಪಚರಿಸಿದುದು. ಗಣಗಳು ಬಾಗಿಲನ್ನು ಕಾಯುತ್ತಿರಲು ಮಯೂರೇಶ್ವರದು ಮತ್ತೆ ಬಾಲಕರೊಂದಿಗೆ ಆಟದಲ್ಲಿ ವ್ಯಗ್ರನಾದುದು.
೧೦೪ನೆಯ ಅಧ್ಯಾಯ
೧೦೫ನೆಯ ಅಧ್ಯಾಯ
೧೦೬ನೆಯ ಅಧ್ಯಾಯ
೧೦೭ನೆಯ ಅಧ್ಯಾಯ
೧೦೮ನೆಯ ಅಧ್ಯಾಯ
೧೦೯ನೆಯ ಅಧ್ಯಾಯ
೧೧೦ನೆಯ ಅಧ್ಯಾಯ
೧೧೧ನೆಯ ಅಧ್ಯಾಯ
ನಂದಿಯು ಸಿಂಧುದೈತ್ಯನ ಸಭಾಮಂಟಪವನ್ನು ಪ್ರವೇಶಿಸಿ ಎಲ್ಲರನ್ನೂ ನೋಡಿದುದು ಸಭೆಯ ವರ್ಣನೆ. ನಂದಿಯನ್ನು ನೋಡಿ ಸಭಿಕರು ಅಚ್ಚರಿಗೊಂಡುದು. ಕೆಲವರು ಅವನು ಶತ್ರುಪಕ್ಷೀಯನೆಂದೂಹಿಸಿ ಅವನ ಮೇಲೆ ಕಿಡಿ ಕಾರಿದುದು. ಆಗ ದೈತ್ಯ ರಾಜನು ಸಂಜ್ಞೆಯಿಂದಲೆ ಆಸನವನ್ನು ಕೊಟ್ಟು ಆದರಿಸಿ “ವಿಷಯವೇನು?” ಎಂಬುದನ್ನು ತಿಳಿಯಲು ತಾನು ಕುತೂಹಲಗೊಂಡ ಅಂಶವನ್ನು ತನ್ನ ಮುಖಮುದ್ರೆಯಿಂದ ಸೂಚಿಸಿದುದು. ಮಹಾಸೂಕ್ಷ್ಮಮತಿಯಾದ ನಂದಿಯು ಗಂಭೀರವಾಣಿಯಿಂದ ತಾನು ಆ ಸಭೆಯಲ್ಲಿ ಕಂಡ ನ್ಯೂನತೆಯನ್ನು ಸ್ಪಷ್ಟವಾಗಿ ವಿವರಿಸಿದುದು. ಆಗ ದೈತ್ಯನು ತನ್ನ ಅವಜ್ಞತೆಯನ್ನರಿತು ನಂದಿಯ ಗುಣಗಣಗಳನ್ನು ವರ್ಣಿಸುತ್ತ ‘ಅವನು ಯಾರು, ಯಾರ ಕಡೆಯವನು, ಪ್ರಕೃತ ತನ್ನ ಬಳಿಗೆ ಬರಲು ಕಾರಣವೇನೆಂಬುದನ್ನು’ ಪ್ರಶ್ನಿಸಿದನು. ಆಗ ನಂದಿಕೇಶ್ವರನು ತನ್ನ ಉತ್ಪತ್ತಿಯನ್ನೂ ತನ್ನ ಶಕ್ತಿ — ಸಾಹಸಗಳನ್ನೂ ತಾನು ಕೈಗೊಂಡ ದೇವಸೇವಾವೃತ್ತಿಯನ್ನೂ ಮಯೂರೇಶ್ವರನ ಮಹಿಮೆ ಮತ್ತು ಅಸುರನಿಗೆ ಹೇಳಿ ಕಳಿಸಿದ ಸಂದೇಶ ಇವನ್ನು, ಸಂದೇಶದಂತೆ ನಡೆಯದಿದ್ದರೆ ಮುಂದೆ ಮಯೂರೇಶ್ವರನು ಕೈಗೊಳ್ಳಲಿರುವ ಬಲಪ್ರಯೋಗ ಸಂಗತಿಯನ್ನೂ ವಿವರಿಸಿ, ಬದ್ಧರಾದ ದೇವತೆಗಳನ್ನು ಬಿಡುಗಡೆ ಮಾಡಿ ದೈವಾನುಗ್ರಹಕ್ಕೆ ಪಾತ್ರನಾಗುವಂತೆ’ ಬೋಧಿಸಿದುದು. ಮಯೂರೇಶ್ವರನು ಹಿಂದೆ ನಡೆಸಿದ ದೈತ್ಯವಧೆಯ ಕಥೆಯನ್ನು ವಿವರಿಸಿ ದೇವನ ಆಜ್ಞೆಯನ್ನು ಈರುವುದು ಶ್ರೇಯಸ್ಕರವಲ್ಲವೆಂದು ಅಸುರನನ್ನು ಎಚ್ಚರಿಸಿದುದು. ಇವನ ಮಾತುಗಳನ್ನು ಕೇಳಿ ಅಭಿಮಾನಿಯಾದ ಸಿಂಧುದೈತ್ಯನು ನಂದಿಯ ನಡತೆಯನ್ನು “ಅಧಿಕ ಪ್ರಸಂಗತನ” ಎಂದು ಹೇಳುತ್ತ “ತನಗೆ ಯಾರಿಂದಲೂ ಭಯವಿಲ್ಲವೆಂದೂ, ಶಕ್ತಿ ಇದ್ದರೆ ಯಾರು ಬೇಕಾದರೂ ತನ್ನ ಮೇಲೆ ಯುದ್ಧವನ್ನು ಹೂಡಬಹುದೆಂದೂ, ತನ್ನನ್ನು ಸೋಲಿಸಿದ ಮೇಲೆಯೇ ದೇವತೆಗಳನ್ನು ಬಿಡಿಸಬಹುದೆಂದೂ” ಹೇಳಿ “ನೀನು ದೂತನಾಗಿರದಿದ್ದರೆ ನಿನ್ನಂತಹ ಪರಿಪುಷ್ಟ ಎತ್ತನ್ನು ನೇಗಲಿಗೆ ಉಪಯೋಗಿಸುತ್ತಿದ್ದೆನೆಂದೂ” ನಂದಿಯನ್ನು ಧಿಕ್ಕರಿಸಿದುದು. ನಂದಿಯು ದೈತ್ಯನ ಅವಿವೇಕಕ್ಕೆ ಪರಿತಪಿಸಿ ಅನೇಕ ರೀತಿಯಿಂದ ಬುದ್ಧಿವಾದವನ್ನು ಹೇಳಿ “ನಾನೇ ನಿನ್ನನ್ನು ತುಂಡರಿಸಿ, ದೇವತೆಗಳನ್ನು ಬಿಡಿಸಿಕೊಂಡು ಹೋಗುತ್ತಲಿದ್ದೆ. ಆದರೆ. ಡೇವನ ಆಜ್ಞೆ ಇಲ್ಲದ್ದರಿಂದ ಸುಮ್ಮನಿರಬೇಕಾಗಿದೆ” ಎಂದು ಕೋಪದಿಂದ, ನುಡಿದು ಬಹಳ ಬಿರುಸಿನಿಂದ ಉರಿರನ್ನು ಬಿಟ್ಟು, ದೈತ್ಯರನ್ನೆಲ್ಲ ಕೆಳಕ್ಕೆ ಕೆಡಹಿ ಸಿಂಧುವಿನ ಅನುಮತಿಗೂ ದೌಷ್ಟ್ಯವನ್ನು ದೇವನೆದುರಿಗೆ ಹೇಳಿದುದು. “ಯುದ್ದಪ್ರಸಂಗ ಒದಗಿತಲ್ಲ” ಎಂದು ಹರ್ಷಿಸಿದ ಮಯೂರೇಶ್ವರನು “ಯಾರಿಗೆ ಯುದ್ಧಕ್ಕೆ ಬರಲಿಷ್ಟವಿದೆಯೋ, ಎಲ್ಲರೂ ಹೊರಡಬಹುದೆಂದು” ಆಹ್ವಾನವನ್ನಿತ್ತುದು. “ಪ್ರಕೃತ ನಮಗಿಲ್ಲೇನು ಕೆಲಸ? ಮದುವೆಯ ವೇಳೆಗೆ ಬಂದರೆ ಸಾಕು” ಎಂದು ತಮ್ಮ ತಮ್ಮಲ್ಲೇ ನಿಶ್ಚಯಿಸಿಕೊಂಡು ಮುನಿಗಳು ತಮ್ಮ ಪಾಡಿಗೆ ತಾವು ಆಶ್ರಮಗಳಿಗೆ ಹಿಂದಿರುಗಿದುದು.
೧೧೨ನೆಯ ಅಧ್ಯಾಯ
೧೧೩ನೆಯ ಅಧ್ಯಾಯ
ಪದಾತಿಗಳು ತಮ್ಮ ನಡಿಗೆಯಿಂದ ಭೂಮಿಯನ್ನು ಕಂಪನಗೊಳಿಸುತ್ತ ಯುದ್ಧಭೂಮಿಗೆ ಹೋದುದು. ಅದರ ಭೀಕರಾಕೃತಿಯ, ವೇಷ — ಭೂಷಣಗಳ ಹಾಗೂ ಶಸ್ತ್ರಾಸ್ತ್ರಗಳ ವರ್ಣನೆ. ಗಜಾಶ್ವಸೇನೆಯ ವರ್ಣನೆ. ಮುಂದೆ ಹೋಗುತ್ತಲಿದ್ದ ಭೂತರಾಜ, ಪುಷ್ಪಸಂತರು ಇದನ್ನು ಕಂಡು ಸಿಂಧುವೇ ಸ್ವಯಂ ಯುದ್ಧಕ್ಕೆ ಬಂದುಬಿಟ್ಟಿದ್ದಾನೆಂಬ ಅಂಶವನ್ನು ಮಯೂರೇಶನಿಗೆ ಅರುಹಿದುದು. ಅಷ್ಟರಲ್ಲಿ ದೈತ್ಯಸೇನೆಯು ಮೇಲೀರಿ ಬಂದುದನ್ನು ನೋಡಿ ದೇವನು ಹರ್ಷಿಸಿ, ತನ್ನ ವಾಹನವಾದ ಮಯೂರವೆನ್ನೇರಿ ಮುಂದೆ ಹೊರಟುದು. ದೇವನು ಧರಿಸಿದ್ದ ಶಸ್ತ್ರಾಸ್ತ್ರಗಳ ಹಾಗೂ ದೇವನನ್ನು ಹಿಂಬಾಲಿಸಿದವರ ಸನ್ನಾಹೋತ್ಸಾಹಗಳ ವರ್ಣನೆ. ನಂದಿಯು ಮಯೂರೇಶನನ್ನು ವಂದಿಸಿ ಅಂತರಿಕ್ಷಕ್ಕೆ ನೆಗೆದು, ತನ್ನ ತೀಕ್ಷ್ಣ ಕೊಂಬುಗಳಿಂದ ತಿವಿಯುತ್ತಾ ಶತ್ರುಗಳ ಶಿರಗಳನ್ನು ಕತ್ತರಿಸಿದುದು. ತದೀಯರು ಅವನ ಶೌರ್ಯವನ್ನು ಪ್ರಶಂಸಿಸಿದುದು. ತನ್ನ ಕುದುರೆ, ಶ್ವೇತಚ್ಛತ್ರಗಳು ನಾಶವಾಗಲು, ಸಿಂಧು ಬೇರೊಂದಶ್ವವನ್ನೇರಿ ಕುಳಿತು, ತಮ್ಮ ವೀರ ಯೋಧರನ್ನು ಕುರಿತು, ತಮ್ಮ ವೀರ ಯೋಧರನ್ನು ಕುತಿರು, ತಮ್ಮ ವೀರ ಯೋದರನ್ನು ಕುರಿತು ‘ನಿಮ್ಮ ಪರಾಕ್ರಮವೆಲ್ಲ ಎಲ್ಲಿಗೆ ಹೋಯಿತು?’ ಎಂದು ಗದುರಿಸಲು ಕೌಸ್ತುಭ, ಮೈತ್ರರೆಂಬ ಅಮಾತ್ಯರಿಬ್ಬರು ಮುಂದೆ ಬಂದು ಅಸುರನನ್ನು ವಂದಿಸಿತಾವಿರುವಾಗ ಚಿಂತಿಸಬೇಕಾದುದಿಲ್ಲವೆಂದು ಸಮಾದಾನಪಡಿಸಿ ಯುದ್ಧಕ್ಕೆ ಹೊರಟುದು. ಅವರು ಹೋರಾಡಿದ ಬಗೆ. ವೀರಭದ್ರ, ಷಡಾನನರು ಅಮಾತ್ಯರೊಂದಿಗೆ ಯುದ್ಧಕ್ಕೆ ಬಂದುದು. ಅವರು ಬಿರುಸಿನಿಂದ ಯುದ್ಧವನ್ನು ಮಾಡಿದುದರ ವರ್ಣನೆ. ಅದರ ಪರಿಣಾಮ. ಸಿಂಧುವಿನ ಸೈನ್ಯಕ್ಕೆ ಜಯವು ದೊರೆತುದು. ರಾತ್ರಿ ಯುದ್ಧ ನಡೆದುದು. ಮತ್ತೆ ದೇವ ಸೇನೆಯವರು ದೈತ್ಯರ ಮೇಲೆ ಎರಗಿ ಬಂದುದು. ಅದನ್ನು ಕಂಡ ದೈತ್ಯಾಮಾತ್ಯರಾದ ಮೈತ್ರ — ಕೌಸ್ತುಭರು ಪ್ರಾಣಗಳನ್ನು ಪಣವಿಟ್ಟು ಹೋರಾಡಿದುದು. ಕೌಸ್ತುಭನ ಶಸ್ತ್ರಾಘಾತಕ್ಕೆ ಷಡಾನನನು ಮೂರ್ಚ್ಛೆಗೊಳ್ಳಲು, ವೀರಭದ್ರನು ಮುಂದೆ ಬಂದು, ಮೈತ್ರಕೌಸ್ತುಭರಿಬ್ಬರನ್ನೂ ಕೊಂದುದು. ದೈತ್ಯಸೇನೆಯು ಸೋತು ಓಡಿಹೋದುದು. ಸಿಂಧುದೈತ್ಯನು ಅಮಾತ್ಯರು ಮರಣ ಹೊಂದಿದುದಕ್ಕಾಗಿ ದುಃಖಿಸಿದುದು.
೧೧೪ನೆಯ ಅಧ್ಯಾಯ
ಕೌಸ್ತುಭ — ಮೈತ್ರರು ಮರಣ ಹೊಂದಿದ ಸಂಗತಿಯನ್ನು ಇತರ ವೀರರು ವರ್ಣಿಸಿದುದು. ದೈತ್ಯರಾಜನು ಮೃತರನ್ನು ಪ್ರಶಂಸಿಸುತ್ತ ಇದಕ್ಕೆ ಪ್ರತೀಕಾರವಾಗಿ ಶತ್ರುವಿನೊಡನೆ ಚಕ್ರಯುದ್ಧವನ್ನು ಮಾಡುವುದಾಗಿ ಪ್ರತಿಜ್ಞೆಯನ್ನು ಮಾಡಿ ಆಶ್ವಾರೂಢನಾಗಿ ಯುದ್ಧಕ್ಕೆ ಹೊರಟುದು. ದೈತ್ಯಸೇನೆಯ ಆರ್ಭಟದ ವರ್ಣನೆ. ಇತ್ತ ದೇವಸೇನೆಯಲ್ಲಿ ಪ್ರಮುಖರಾದ ನಂದೀ, ಪುಷ್ಪದಂತೆ ಭೂತರಾಜ, ವಿಕಟ, ಚಪಲ, ಷಡಾನನ, ವೀರಭದ್ರರು ತಮ್ಮ ವಶದಲ್ಲಿರುವ ಸೇನಾಪಡೆಯೊಂದಿಗೆ ಬಂದು ಏಳು ವ್ಯೂಹಗಳನ್ನು ನಿರ್ಮಿಸಲು, ಅತ್ತ ದೈತ್ಯಸೇನೆಯಲ್ಲೂ ಗಂಧಾಸುರ, ಮದನಕಾಂತ, ವೀರಧ್ವಜ, ಮಹಾಕಾಯ, ಶಾರ್ದೂಲ, ಧೂರ್ತ ಎಂಬ ಏಳು ಜನ ವೀರರು ತಾವೂ ಪ್ರತಿಯಾಗಿ ವ್ಯೂಹಗಳನ್ನು ನಿರ್ಮಿಸಿಕೊಂಡು ಯುದ್ಧವನ್ನು ಆರಂಭಿಸಿದುದು. ಯಾರು ಯಾರು ಯಾರ್ಯಾರೊಂದಿಗೆ ಹೇಗೆ ಹೇಗೆ ಯುದ್ಧವನ್ನು ಮಾಡಿದರೆಂಬುದರ ವರ್ಣನೆ. ಚಪಲನಿಂದ ಶಾರ್ದೂಲನು ಏಟುತಿಂದು ಮೂರ್ಚ್ಛಿತನಾಗಿ ಮತ್ತೆ ಎದ್ದು ಚಪಲನನ್ನು ಕೆಡಹಿದುದು. ಅವರ ವೀರಗರ್ಜನೆಗಳು. ಕೋಲಾಹಲದಲ್ಲಿ ವೀರರು ತಮ್ಮವರನ್ನೇ ಹೊಡೆಯಲುದ್ಯುಕ್ತರಾದುದು. ರಕ್ತದ ನದಿಯು ಹರಿದುದು. ಅದರ ಭೀಕರ ರೂಪದ ವರ್ಣನೆ. ರಕ್ತ ಮಾಂಸಗಳ ಆಸೆಗೆ ಬಲಿ ಬಿದ್ದು ಭೂತ — ಪ್ರೇತಗಳು, ಶ್ವಾಪದ — ಪಕ್ಷಿಗಳು ಅಲ್ಲಿ ಮುತ್ತಿದುದು. ದೈತ್ಯ ಸೇನೆಯು ಸೋತು ಓಡಿಹೋಗುತ್ತಿರಲು ಷಡಾನನನು ಅವರನ್ನು ಹಿಂದಟ್ಟಿಕೊಂಡು ಹೋಗಿ ಹೀಯಾಳಿಶುತ್ತ ಸದೆಬಡಿದುದು. ದೈತ್ಯ ಸೇನೆಯವರೆಲ್ಲ ಈ ನಿಂದಾವಚನ, ಏಟುಗಳಿಗೆ ಕುಪಿತರಾಗಿ ಷಣ್ಮುಖನನ್ನು ಒಮ್ಮೆಲೇ ಆಕ್ರಮಿಸಿದುದು, ಹಿರಣ್ಯಗರ್ಭಾದಿಗಳು ಷಡಾನನನ ನೆರವಿಗೆ ಸೈನ್ಯದೊಂದಿಗೆ ಬಂದು ದೈತ್ಯಸೇನೆಯನ್ನು ಸೋಲಿದಿದುದು. ಎಲ್ಲರೂ “ಮಯೂರೇಶ್ವರನಿಗೆ ವಿಜಯವಾಗಲಿ” ಎಂದು ಜಯಘೋಷವನ್ನು ಮಾಡಿದುದು.
೧೧೫ನೆಯ ಅಧ್ಯಾಯ
ತನ್ನ ಸೇನೆಯು ಸೋತುಹೋದ ಸಂಗತಿಯನ್ನು ತಿಳಿದು ಸಿಂಧುದೈತ್ಯನು ಚಿಂತಾಕ್ರಾಂತನಾದುದು. ಕ್ರಮೇಣ ಕೋಪ ಉಂಟಾಗಿ ಮಯೂರೇಶನನ್ನು ಕೊಂದೇ ಬರುವೆನೆಂದು ಪ್ರತಿಜ್ಞೆಯನ್ನು ಮಾಡಿ, ಅಶ್ವಾರೂಢನಾಗಿ ಶಸ್ತ್ರಾಸ್ತ್ರಗಳೊಡನೆ ಬಿರುದಿನಿಂದ ಯುದ್ಧಕ್ಕೆ ಹೊರಟುದು. ಇವನು ಹೊರಟ ರಭಸಕ್ಕೆ ಉಂಟಾದ ಉತ್ಪಾತಗಳು. ರಾಕ್ಷಸನು ಬಂದಕೂಡಲೇ ದೇವಸೇನೆಯಲ್ಲಿ ಕ್ಷೋಭೆಯನ್ನುಂಟುಮಾಡಿದುದು. ಇವನ ಪರಾಕ್ರಮಕ್ಕೆ ನಂದೀ, ಭೂತರಾಜ, ಪುಷ್ಪದಂತೆ, ಹಿರಣ್ಯಗರ್ಭ ಮೊದಲಾದ ವೀರರು ಬಲಿಯಾಗಿ ಮೂರ್ಚ್ಛಿತರಾದುದು. ಇವರೆಲ್ಲರನ್ನೂ ಹಿಂದಕ್ಕೆ ಸರಿಸಿದ ಬಳಿಕ, ನೇರವಾಗಿ ಅಸುರನು ಮಯೂರೇಶನ ಮೇಲೆ ಯುದ್ಧವನ್ನಾರಂಭಿಸಿದುದು. ನಾಯಕರಿಬ್ಬರೂ ಕದನಕ್ಕೆ ನಿಂತಕೂಡಲೇ, ಸಿಂಧು ದೇವನನ್ನು ಅವಹೇಳನ ಮಾಡಿದುದು. ಅದಕ್ಕೆ ಪ್ರತಿಯಾಗಿ ಗಣಪತಿಯು ಸಿಂಧುವನ್ನು ಹೀಯ್ಯಾಳಿಸಲು, ದೈತ್ಯನು ರೊಚ್ಚಿಗೆದ್ದು ಬಾಣಗಳನ್ನು ಬಿಟ್ಟುದು. ಗಣಪತಿಯು ಪ್ರತಿ ಬಾಣಗಳನ್ನು ಪ್ರಯೋಗಿಸಿ, ದೈತ್ಯನ ಅಸ್ತ್ರಗಳನ್ನು ಭಂಗಪಡಿಸಿದುದು. ಸೂರ್ಯನಿತ್ತ ಅಸ್ತ್ರ, ಮಯೂರೇಶನು ಪ್ರಯೋಗಿಸಿದ ಪರಶು ಇವೆರಡೂ ಅಂತರಿಕ್ಷದಲ್ಲಿ ಘೋರವಾಗಿ ಕದನವನ್ನು ಮಾಡಿದುದು. ಕೊನೆಗೆ ಪರಶು ದೆತ್ಯನ ಕಿರೀಟವನ್ನು ಕೆಡಹಿ, ಕಿವಿಗಳನ್ನು ಕೊಯ್ದುದು. ಇದರಿಂದ ವ್ಯಥಿತನೂ, ಕ್ರುದ್ಧನೂ ಆದ ಸಿಂಧು “ನಿನ್ನ ಸೊಂಡಿಲನ್ನೂ ಕೊಯ್ಯುವೆನೆಂದು” ಪ್ರತಿಜ್ಞೆಯನ್ನು ಮಾಡಿ ಶಸ್ತ್ರವನ್ನು ಹಿರಿದು, ಮಯೂರೇಶನ ಸಮೀಪಕ್ಕೆ ಧಾವಿಸಿ ಬಂದುದು. ಆಗ ದೇವನು ವಿಶ್ವರೂಪವನ್ನು ಧರಿಸಿ ಎಲ್ಲೆಲ್ಲೂ ತಾನೇ ಕಾಣುವಂತೆ ಮಾರ್ಪಟ್ಟುದ್ದು. ಅದನ್ನು ನೋಡಿ ದೈತ್ಯನು ನಾಚಿಕೊಂಡು ತನ್ನ ಮಂದಿರಕ್ಕೆ ಹೊರಡಲು, ದೇವನು ಅಲ್ಲೂ ಕಂಡು ಬಂದುದು. ಈ ಅದ್ಭುತವನ್ನು ಕಂಡು ಭಯಗೊಂಡ ಸಿಂಧು ಮುಖವನ್ನು ಮುಚ್ಚಿಕೊಂಡು ತನ್ನ ಊರಿಗೆ ಓಡಿ ಹೋದುದು.
೧೧೬ನೆಯ ಅಧ್ಯಾಯ
೧೧೭ನೆಯ ಅಧ್ಯಾಯ
೧೧೮ನೆಯ ಅಧ್ಯಾಯ
೧೧೯ನೆಯ ಅಧ್ಯಾಯ
೧೨೦ನೆಯ ಅಧ್ಯಾಯ
೧೨೧ನೆಯ ಅಧ್ಯಾಯ
ವೀರಭದ್ರಾದಿ ಸೇನಾಪ್ರಮುಖರೊಡನೆ ಸುಖವಾಗಿ ಕುಳಿತಿದ್ದ ಮಯೂರೇಶ್ವರನ ಬಳಿಗೆ ದೇವತೆಗಳ ಪೈಕಿ ಕಾವಲಿದ್ದ ಕೆಲವರು ಓಡೋಡಿ ಬಂದು “ಸಾಕ್ಷಾತ್ ಸಿಂಧುವೇ ಮತ್ತೆ ಯುದ್ಧಕ್ಕೆ ಬಂದಿದ್ದಾನೆ. ಅವನನ್ನು ನೋಡಿ “ಕಾಲಮೃತ್ಯುವೇ ಬಂದಿತೆಂದು” ನಮ್ಮವರೆಲ್ಲರೂ ಹೆದರಿ ಕುಳಿತಿದ್ದಾರೆ ಎಂದು ಸುರಲು ಮಯೂರೇಶ್ವರನು ಹರ್ಷಿತನಾಗಿ ತನ್ನ ಆಯುಧಗಳನ್ನೆಲ್ಲ ಸರಿಪಡಿಸಿಕೊಂಡು ಮಯೂರವನ್ನೇರಿ ಘಟ್ಟಿಯಾಗಿ ಒಮ್ಮೆ ಗರ್ಜಿಸಿದುದು. ಅಣ್ಣನು ಯುದ್ಧಕ್ಕಾಗಿ ಹೊರಟುದನ್ನು ನೋಡಿದ ಷಡಾನನನು ಅವನನ್ನು ತಡೆದು ‘ನಾವಿರುವಾಗ ನೀನೇಕೆ ಯುದ್ಧಕ್ಕೆ ಹೋಗಬೇಕು? ನಮ್ಮ ಶಕ್ತಿ ಕುಂಠಿಸಿದರೆ, ಆಗ ನೀನು ಬರುವೆಯಂತೆ’ ಎಂದು ಹೇಳಿ ಚತುರಂಗಸೇನೆಯೊಂದಿಗೆ ಯುದ್ಧಕ್ಕೆ ಹೊರಟುದು. ಇವನು ಯುದ್ಧ ಭೂಮಿಯನ್ನು ತಲುಪಿದ ಕೂಡಲೇ ರಭಸದಿಂದ ಪರಾಕ್ರಮವನ್ನು ಪ್ರಕಟಿಸಿ ಕೈಗೆ ಸಿಕ್ಕವರನ್ನು ಅವರಿವರೆನ್ನದೆ ತುಂಡರಿಸಿ ಚಲ್ಲಿದನು. ಪರಸ್ಪರ ಮತ್ಸರದಿಂದ ಹೊಡೆದಾಡಲಾರಂಭಿಸಲು, ದೊಡ್ಡದೊಂದು ಕೋಲಾಹಲವೇ ಎದ್ದು, ಅಸೃನಿಯು ಹರಿದುದು. ಯುದ್ಧ ಭೂಮಿಯ ಭೀಕರ ಸ್ವರೂಪದ ವರ್ಣನೆ. ಷಡಾನನ, ವೀರಭದ್ರ, ಭೂತರಾಜಾದಿಗಳು ಸಾಹಸದಿಂದ ಹೋರಾಡಿ ಸಿಂಧುದೈತ್ಯನ ಚತುರಂಗ ಸೇನೆಯನ್ನು ಹೋರಾಡಿ ಸಿಂಧುದೈತ್ಯನ ಚತುರಂಗ ಸೇನೆಯನ್ನು ನಿರ್ನಾಮ ಮಾಡಲು ದೇವಸೈನಿಕರು “ಮಯೂರೇಶನಿಗೆ ವಿಜಯವಾಗಲಿ, ಅವನ ಅನುಗ್ರಹದಿಂಡ ನಮ್ಮ ಸೇನೆಗೆ ವಿಜಯವು ಲಭಿಸಿತು’ ಎಂದು ಘೋಷಣ ಮಾಡಿದರು. ಇದನ್ನು ಕೇಳಿದ ಸಿಂಧು ರೊಚ್ಚಿಗೆದ್ದು “ಇಷ್ಟವಿದ್ದವರು ನನ್ನೊಡನೆ ಬರಬಹುದು ನಾನಂತೂ ಮಯೂರೇಶನನ್ನು ಕೊಂದೇ ಬರುವೆನು” ಎಂದು ನುಡಿದು ಕೈ ಚಪ್ಪಾಳೆಯಿಂದ ಚಿಗ್ವಿದಿಕ್ಕುಗಳನ್ನು ನಡುಗಿಸಿ ಶತ್ರುಗಳ ಮೇಲೆ ಬಾಣಗಳ ಸುರಿಮಳೆಯನ್ನು ಬೀರಿದುದು. ಮಂಟ್ರಪೂತ ಬಾಣಗಳಿಂದುಂಟಾದ ಅನಾಹುತ. ಅದರಿಂದ ವಿದ್ಯುಜ್ಜಿಹ್ವನೆಂಭ ರಾಕ್ಷಸನುದಿಸಿ ದೇವಸೇನೆಯವರನ್ನು ತಿನ್ನಲಾರಂಭಿಸಿದುದು ಇದನ್ನು ನೋಡಿ ಮಹಾವೀರ್ಯಶಾಲಿಗಳೆನಿಸಿದ ಷಡಾನನಾದಿಗಳು ಹೆದರಿ ಓಡಿದುದು. ಇವರು ಎಲ್ಲೆಲ್ಲಿ ಓಡಿ ಹೋದರೂ ಅಲ್ಲಿಗೆಲ್ಲ ವಿಷಮಯ ಜ್ವಾಲೆ ಬೆನ್ನಟ್ಟಿ ಬರಲು, ಎಲ್ಲರೂ ಬಂದು ಮಯೂರೇಶನ ಬೆನ್ನು ಹಿಂದೆ ಅಡಗಿ ಕುಳಿತುದು. ಆಗ ಮಯೂರೇಶನು ತನ್ನ ಪರಶುವನ್ನು ಪ್ರತಿಯಾಗಿ ಪ್ರಯೋಗಿಸಲು, ಅದರಿಂದಲೂ ಒಬ್ಬ ವ್ಯಕ್ತಿ ಹುಟ್ಟಿಬಂದುದು. ಅವನ ಭೀಕಾರಾಕೃತಿಯ ವರ್ಣನೆ. ಅವನನ್ನು ನೋಡಿ ಅಸುರನು ಬಾಣಗಳ ರಾಶಿಯನ್ನು ಅವನ ಮೇಲೆ ಸುರಿದುದು. ಆಗ ಮಯೂರೇಶನು ಕ್ರೋಧ — ಸಂತಪ್ತನಾಗಿ ಪ್ರತ್ಯಸ್ತ್ರಗಳನ್ನು ಪ್ರಯೋಗಿಸಲು ಮತ್ತೆ ಕಾಲ ಪುರುಷನು ದೈತ್ಯ ಸೈನಿಕರನ್ನು ಭಕ್ಷಿಸಲಾರಂಭಿಸಿದುದು. ದೈತ್ಯನ ಬುದ್ಧಿ ಕುಂಠಿತವಾಗಲು ಅವನು ಅತಿಯಾಗಿ ಚಿಂತಿಸಿದನು ಅಷ್ಟರಲ್ಲಿ ಸೂರ್ಯನು ಅಸ್ತಮಿಸಲು, ಯಾರಿಗೂ ಕಾಣಿಸದಂತೆ ಮೆಲ್ಲಗೆ ರಣರಂಗದಿಂದ ಕಾಲ್ದೆಗೆದು ತನ್ನ ಪಟ್ಟಣಕ್ಕೆ ಹೊರಟುಹೋಗಿ ಗುಪ್ತವಾಗಿ ಅಡಗಿ ಕುಳಿತನು. ಇತ್ತ ದೇವನು ದೈತ್ಯನು ಓಡಿಹೋದ ಸಂಗತಿಯನ್ನರಿತು ಘಟ್ಟಿಯಾಗೊಮ್ಮೆ ಗರ್ಜಿಸಿ, ತಾನು ಪ್ರಯೋಗಿಸಿದ ಕೃತಾಂತಾಸ್ತ್ರವನ್ನು ಉಪಸಂಹರಿಸಿದನು ಮತ್ತು ತನ್ನ ಗಣಗಳೊಂದಿಗೆ ಸ್ವ — ಶಿಬಿರಕ್ಕೆ ಬಿಜಯಮಾಡಿದನು.
೧೨೨ನೆಯ ಅಧ್ಯಾಯ
ಮಯೂರೇಶನು ಸಿಂಹಾಸನಾರೂಢನಾಘಿ ಗಣಗಳೊಂದಿಗೆ ಕುಳಿತುರುವಾಗ ಗೌರಮಾದಿ ಮುನಿಗಳು ಅಲ್ಲಿಗೆ ಬಂದು ದೇವನನ್ನು ಬಹು ಪರಿಯಾಗಿ ಸ್ತುತಿಸಿದುದು. ಇವರು ಈ ರೀತಿ ವರ್ಣಿಸುವ ವೇಳೆಗೆ ಸರಿಯಾಗಿ ಪಾರ್ವತೀದೇವಿಯು ಅಲ್ಲಿಗೆ ಬಂದು ಮಗನನ್ನು ಸಂತೈಸುತ್ತಿರುವಲ್ಲಿ ಭಗವಾನ್ ಭರ್ಗನು ಬಂದು ಪುತ್ರನನ್ನಾಲಿಂಗಿಸಿಕೊಂಡು ಅವನ ಪರಾಕ್ರಮವನ್ನು ಕೊಂಡಾಡಿದುದು. ಆಗ ಕದನಕುತೂಹಲಿಯಾದ ನಾರದರು ಅಲ್ಲಿಗೆ ಬಂದು “ಇಲಿಗೆ ಬಂದು ಎಷ್ಟೋ ದಿವಸಗಳು ಕಳೆದರೂ ಯಾವುದೊಂದೂ ತೀರ್ಮಾನವಾಗಲೇ ಇಲ್ಲ. ಸಿಂಧು ಸಾಯದಲ್ಲದೇ ಸುರರು ಸೆರೆಯಿಂದ ಮುಕ್ತರಾಗುವುದಿಲ್ಲ. ಅವರು ಬಿಡುಗಡೆಯನ್ನು ಹೊಂದುವವರೆಗೂ ಬೆನಕನಿಗೆ ಲಗ್ನವಾಗುವ ಹಾಗಿಲ್ಲ. ಅದುದರಿಂದ ಪ್ರಕೃತ ನಮಗೆ ಪ್ರಯಾಣಕ್ಕೆ ಅನುಮತಿಯನ್ನು ಕೊಡು. ವಿವಾಹಕಾಲಕ್ಕೆ ಸರಿಯಾಗಿ ನಾವು ಮತ್ತೆ ಬರುತ್ತೇವೆ. ಸ್ಪಷ್ಟವಾಗಿ ಹೇಳುವುದಾದರೆ ಸಿಂಧು ಸಾಯುವವಲಕ್ಷಣ ನನಗೆ ಬೇರೆ ತೋರುವುದಿಲ್ಲ” ಎಂದುದು. ಯಾರು ಎಷ್ಟು ಬಗೆಯಿಂದ ಹೇಳಿದರೂ ನಾರದರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ “ದೈತ್ಯನು ಸತ್ತುದನ್ನು ನಾನು ಕಣ್ಣಾರ ನೋಡಬೇಕು. ಮತ್ತು ದೇವತೆಗಳು ಮುಕ್ತರಾಗಿ ಬಂದುದನ್ನು ನೋಡಬೇಕು. ಆಗ ಮಾತ್ರ ನನಗೆ ನಿಮ್ಮ ಈ ವರ್ಣನೆಯಲ್ಲಿ ವಿಶ್ವಾಸ ಹುಟ್ಟುವುದು” ಎಂದು ದೇವನನ್ನು ಕೆಣಕಿ ನುಡಿಯಲು, ದೇವನು ಕುಪಿತನಾಗಿ ಒಮ್ಮೆ ಗರ್ಜಿಸಿ ತನ್ನ ಪೌರುಷವನ್ನು ಹೇಳುತ್ತ “ಸಿಂಧುವನ್ನು ಈಗಲೇ ವಧಿಸುವೆನು, ಈ ವಿಷಯದಲ್ಲಿ ಚಿಂತಿಸಬೇಕಾಗಿಲ್ಲವೆಂದು” ಆಶ್ವಾಸನವನ್ನು ಕೊಟ್ಟುದು. ದೇವನು ಕೆರಳಿ ಯುದ್ಧಕ್ಕೆ ಹೊರಟುದನ್ನು ಕಂಡು ನಂದೀ, ಭೃಂಗಿಗಳು ತಾವು ಯುದ್ಧಮಾಡುವುದಾಗಿ ನುಡಿದು ವೇಗದಿಂದ ಗಂಡಕೀಪುರಿಗೆ ತೆರಳಿದುದು, ವೀರಭದ್ರ, ಭೂತರಾಜರೂ ಅವರನ್ನು ಹಿಂಬಾಲಿಸಿದುದು. ಇವರ ಕೂಗಾಟ ಜಿಗಿದಾಟಗಳಿಗೆ ಭೂಮಿಯು ಕಂಪಿಸಿದುದು. ಇವರು ನಗರವನ್ನು ಹೊಕ್ಕು ಒಳಕ್ಕೆ ಬಂದುದನ್ನು ಚಾರರು ಸಿಂಧುವಿಗೆ ತಿಳಿಸಿದುದು. ಇದನ್ನು ಕೇಳಿ ಗಂಡ ಹೆಂಡತಿಯರಿಬ್ಬರೂ ಚಿಂತಾಸಾಗರದಲ್ಲಿ ಮುಳುಗಿದುದು. “ನನ್ನ ಹಿತನುಡಿಯನ್ನು ನಿರಾಕರಿಸಿದುದಕ್ಕೆ ಈಗ ಎಲ್ಲರೂ ಈ ದುಷ್ಫಲವನ್ನು ಉಣಬೇಕಾಗಿದೆ” ಎಂದು ಅವಳು ನುಡಿಯುತ್ತಿರುವಷ್ಟರಲ್ಲಿ ದೇವವೀರರು ಒಳಕ್ಕೆ ನುಗ್ಗಿಬಂದುದು. ಬಹು ಶೃಂಗಾರದಿಂಡ ಕೂಡಿದ ಸಭಾಮಂಡಪದ ರತ್ನಮಯ ಶಿಖರಗಳನ್ನು ಮುರಿದು ಚಲ್ಲಿದುದು. ಭೃಂಗಿಯು ಸಭಾಮಂಡಪದ ಸೌಂದರ್ಯವನ್ನೆಲ್ಲ ಭಂಗಪಡಿಸಿ, ಅಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕಿತ್ತು ಅಂಗಳಕ್ಕೆ ಬೀಸಿ ಎಸೆಯುತ್ತಿರಲು, ದೈತ್ಯಸೇನೆಯವರು ಇವರ ಪುಂಡನ್ನಡಗಿಸಲು ಇವರೊಡನೆ ಯುದ್ಧವನ್ನು ಮಾಡಿದುದು. ಮತ್ತು ದೈತ್ಯಸೇನೆಯು ವಿನಾಶವನ್ನು ಹೊಂದಿದುದು. ಆಗ ದೇವವೀರರು ಅಂತಃಪುರಕ್ಕೆ ನುಗ್ಗಿ ಸಿಂಧುವಿನ ಜುಟ್ಟನ್ನು ಹಿಡಿದೆಳೆಯುತ್ತ ತಂದು ರಣಸ್ತಂಭಕ್ಕೆ ಬಿಗಿದು ಹಾಕಲು ಯತ್ನಿಸಿದುದು. ಈ ಅಪಮಾನವನ್ನು ಸಹಿಸಲಾರದೆ, ದೈತ್ಯನು ಪನ್ನಗಾಸ್ತ್ರವನ್ನು ಪ್ರಯೋಗಿಸಲು, ಭೃಂಗಿಯು ಗಾರುಡಾಸ್ತ್ರದಿಂದ ಅದರ ಹಾವಳಿಯನ್ನು ತಪ್ಪಿಸಿದುದು. ಸಿಂಧು ಬಿಟ್ಟ ಆಗ್ನೇಯಾಸ್ತ್ರವನ್ನು ವಾರುಣಾಸ್ತ್ರದಿಂದ ತಡೆಗಟ್ಟಿದುದು. ಅಂತೆಯೇ ವಾಯ್ವಸ್ತ್ರವನ್ನು ಪರ್ವತಾಸ್ತ್ರದಿಂದ ಭಂಗಗೊಳಿಸಿದ ಮೇಲೆ ಪರಸ್ಪರರು ಮಲ್ಲಯುದ್ಧವನ್ನಾಡಿದುದು. ನಂದಿಯು ಬಂದು ದೈತ್ಯನ ಕಿರೀಟವನ್ನು ಕೆಡಹಲು, ಭೃಂಗಿಯು ಓಡಿ ಬಂದು ರಾಕ್ಷಸನ ಬೆನ್ನಿಗೊಂದು ಬಲವಾದ ಗುದ್ದನ್ನು ಹೊಡೆದುದು. ವೀರಭದ್ರನು ರಕ್ಕಸನ ಭಾರ್ಯೆಯ ಮುಡಿಯನ್ನು ಹಿಡಿದೆಳೆಯುತ್ತಿರಲು, ಭೂತರಾಜನು ಬಂದು ರೋಷದಿಂದ ರಾಕ್ಷಸನನ್ನು ಗುದ್ದಿದುದು. ದುರ್ಗೆಯು ಗಂಡನ ಈ ದುರವಸ್ಥೆ, ತನ್ನ ಅಪಮಾನ ಇತ್ಯಾದಿಗಳನ್ನು ಸಹಿಸಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ತನ್ನ ಮಂದಿರಕ್ಕೆ ಓಡಿಹೋದುದು. ಸಿಂಧು ಆವೇಶದಿಂದ ವೀರಭದ್ರನ ಕಾಲುಗಳನ್ನು ಹಿಡಿದೆಳೆದು ಕೆಡಹಿದುದು. ನಂದಿಯನ್ನು ಗುದ್ದಿದುದು. ಭೃಂಗಿಯ ಜಡೆಯನ್ನು ಹಿಡಿದು ಜುಂಗಿಸಿ ನೆಲಕ್ಕುರುಳಿಸಿದುದು, ಭೂತರಾಜನನ್ನೂ ನೆಲಕ್ಕುರುಳಿಸಿ ಮೂರ್ಛೆಗೊಳ್ಳುವಂತೆ ಮಾಡಿದುದು. ‘ಈಗಲೇ ಹೋಗಿ ಮಯೂರೇಶನನ್ನು ಕೊಂದುಬಿಡುವೆನು’ ಎಂದು ನುಡಿದು ಗರ್ಜಿಸುತ್ತ ಯುದ್ಧ ಭೂಮಿಯನ್ನು ಹೊಕ್ಕುದು. ದೇವವೀರರು ಗಜಾನನನ ಕಾಲಿಗೆ ಬಂದು ಸಿಂಧುವಿನ ಸೈನ್ಯವನ್ನು ಕೊಂದು ಅವನನ್ನು ಎಳೆದು ರಣಭೂಮಿಗೆ ತಂದುದಾಗಿ ದೇವನೆದುರು ಹೇಳಿದುದು ಮತ್ತು ಅವನನ್ನು ಈ ಭವಾರ್ಣವದಿಂದ ಶೀಘ್ರದಲ್ಲೇ ತಾರಣಮಾಡಬೇಕೆಂದು ಬೆಡಿಕೊಂಡುದು.
೧೨೩ನೆಯ ಅಧ್ಯಾಯ
ಸಿಂಧು ಯುದ್ಧಭೂಮಿಗೆ ಬಂದುದನ್ನು ಕೇಳಿ ಮಯೂರೇಶನು ಶಿಖಂಡಿಯನ್ನೇರಿ ಯುದ್ಧಕ್ಕೆ ಬೇಗನೆ ಹೊರಟುದು. ಅವನು ಧರಿಸಿದ ಆಯುಧಗಳ ವರ್ಣನೆ. ಪರಸ್ಪರರನ್ನು ನೋಡಿದುದು. ಸಿಂಹವನ್ನು ನೋಡಿದ ಗಜರಾಜ, ಗರುಡನನ್ನು ನೋಡಿದ ಸರ್ಪ, ಮಧು — ಕೈಟಭರನ್ನು ನೋಡಿದ ಮಹಾವಿಷ್ಣು, ತ್ರಿಪುರನು ಶಿವನನ್ನು ನೋಡಿದಂತೆ, ಶುಂಭ — ನಿಶುಂಭರು ಜಗದಂಬೆಯನ್ನು ಕಂಡಂತಾಗಿ ಒಡನೆಯೇ ಹೋರಾಟವನ್ನಾರಂಭಿಸಿ ಬಿಟ್ಟರು. ಈ ಯೋಧರಿಬ್ಬರ ಆಗಿನ ಕಾಲದ ಸ್ವರೂಪ, ಪರಿಸ್ಥಿತಿಗಳ ವರ್ಣನೆ. ಪರಸ್ಪರರ ಶಸ್ತ್ರಾಸ್ತ್ರಗಳು ಒಂದಕ್ಕೊಂದು ಘಟ್ಟಿಸಿದ್ದರಿಂದ ಅಗ್ನಿಯುದಿಸಿ ಪೃಥಿವೀ ಪರ್ವತ ಇವನ್ನು ದಹಿಸಲಾರಂಭಿಸಿದುದು. ಇವರಿಬ್ಬರ ಕಾಲ್ತುಳಿತದಿಂದ ಭೂಮಿಯು ಕಂಪಿಸಿದುದು. ಸಿಂಧು ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದ ಕೂಡಲೇ ಅದರಿಂದ ಉದ್ಭವಿಸಿದ ಜ್ವಾಲೆ ರಣಾಂಗಣದಲ್ಲೆಲ್ಲ ಸುತ್ತಾಡಿ ಮಯೂರೇಶ್ವರನನ್ನೂ, ಇತರ ದೇವಸೇನೆಯನ್ನೂ ಸುಡಲಾರಂಭಿಸಿ, ದಿನ್ಮೂಲೆಗಳಿಗೆಲ್ಲ ವ್ಯಾಪಿಸಿದುದು. ಆಗ ಮಯೂರೇಶನು ತನ್ನ ಪಾಶಾಯುಧವನ್ನು ಮೇಘಾಸ್ತ್ರ ಮಂತ್ರದಿಂದ ಅಭಿಮಂತ್ರಿಸಿ ಪ್ರತಿಯಾಗಿ ಪ್ರಯೋಗಿಸಿ, ಅಗ್ನಿಜ್ವಾಲೆಯನ್ನು ತಣಿಸಿದುದು. ಪಾಶಾಸ್ತ್ರವು ಇಷ್ಟಕ್ಕೆ ಸುಮ್ಮನಿರದೆ ಪರ್ವತಗಳನ್ನೆಲ್ಲ ಕಿತ್ತುತಂದು ದೈತ್ಯನ ಸೇನೆಯ ಮೇಲೆ ಬೇಳುವಂತೆ ಮಾಡಲು, ದಿಗ್ಭ್ರಾಂತರಾದ ದೈತ್ಯರು ‘ಇದು ಪ್ರಲಯಕಾಲವೇ ಸರಿ’ ಎಂದು ನಿಶ್ಚಯಿಸಿದುದು. ಸಿಂಧು ದೈತ್ಯನು ವಾಯ್ವಸ್ತ್ರದಿಂದ ಮೇಘಗಳನ್ನು ಚದುರಿಸಲು. ದೇವನು ಕೋಪಗೊಂಡು ತನ್ನ ಕೈಯ್ಯಲ್ಲಿದ್ದ ಕಮಲಾಯುದ್ಧವನ್ನು ಪರ್ವತಾಸ್ತ್ರಮಂತ್ರದಿಂದ ಅಭಿಮಂತ್ರಿಸಿ, ದೈತ್ಯನ ಮೇಲೆ ಎಸೆದುದು. ಇದರಿಂದ ದೊಡ್ಡ ದೊಡ್ಡ ಪರ್ವತಗಳು ಬಂದು ಪೃಥವಿಯನ್ನೆಲ್ಲ ಆವರಿಸಿ ಕುಳಿತುದು ದೈತ್ಯನು ವಜ್ರಾಸ್ತ್ರವನ್ನು ಪ್ರಯೋಗಿಸಿ ಪರ್ವತಗಳನ್ನು ಭೇದಿಸಲಾರಂಭಿಸಲು ಆಗ ಮಯೂರೇಶನು ತನ್ನ ಅಂಕುಶದಲ್ಲಿ ವಜ್ರಾಸ್ತ್ರದ ಮಂತ್ರಶಕ್ತಿಯನ್ನು ಸಂಕ್ರಾಂತಗೊಳಿಸಿ, ದೈತ್ಯನು ಪ್ರಯೋಗಿಸಿದ ವಜ್ರಾಸ್ತ್ರಕ್ಕೆ ಪ್ರತಿಯಾಗಿ ಪ್ರಯೋಗಿಸಿದನು. ಇವೆರಡರ ಸಂಘರ್ಷಣೆಯಿಂದ ಸಗ್ನಿಯುದಿಸಿ ಲೋಕಗಳನ್ನೆಲ್ಲ ದಹಿಸಲಾರಂಭಿಸಿದುದು. ಆಯುಧಗಳು ಒಂದನ್ನೊಂದು ಪರಾಭವಗೊಳಿಸಿದ್ದರಿಂದ ನೆಲಕ್ಕುರುಳಿದ ವಜ್ರಗಳೆಲ್ಲವೂ ಅದೃಶ್ಯವಾದುದು. ಇಷ್ಟದರೂ ಕೆಚ್ಚೆದೆಯ ಕ್ರಮ್ಯಾದನು ತನ್ನ ಮಂತ್ರಿಗಳನ್ನು ಕುರಿತು “ಈ ಶಸ್ತ್ರಾಸ್ತ್ರಗಳನ್ನು ಎಷ್ಟು ಪ್ರಯೋಗಿಸಿದರೆ ತಾನೇ ಪ್ರಯೋಜನವೇನಿದೆ? ನೋಡುತ್ತಲಿರಿ, ಒಂದೆ ಕ್ಷಣದಲ್ಲಿ ಈ ಬಾಲಕನನ್ನು ಸುಟ್ಟು ಬೂದಿಯನ್ನಾಗಿ ಮಾಡಿ ಬಿಡುವೆನು.” ಎಂದು ನಿಡುದು. ದೇವನ ಮೇಲೆ ಆಕ್ರಮಣವನ್ನು ಮಾಡಿದುದು. ಮಯೂರೇಶನು ಸಿಂಧುವನ್ನು ತನ್ನ ಕೈಯಿಂದ ಭದ್ರವಾಗಿ ಹಿಡಿದುಕೊಂಡು ಕೂಡಲೇ ವಿರಾಡ್ರೂಪವನ್ನು ಧರಿಸಿದುದು. ವಿರಾಡ್ರೂಪದ ವರ್ಣನೆ. ಇದನ್ನು ನೋಡಿದ ಸಿಂಧುದೈತ್ಯನು ರವಿಯು ತನಗೆ ವರವನ್ನೀಯುವಾಗ ಸೂಚಿಸಿದ ಸಂಗತಿಯನ್ನು ಸ್ಮರಿಸಿಕೊಂಡು “ಇನು ಇವನೊಂದಿಗೆ ಯುದ್ಧವನ್ನು ಮಾಡುವುದು ಬೇಡ. ದೈವದ ಇಚ್ಛೆ ಹೇಗಿದೆಯೋ, ಅದರಂತೆ ಆಗಿಹೋಗಲಿ’ ಎಂದು ನಿಶ್ಚಯಿಸಿದುದು. ಮತ್ತೆ ದೇವನ ಕಡೆ ತಿರುಗಿ ನೋಡಲು ವಿರಾಡ್ರೂಪಿಯಾಗಿದ್ದ ಮಯೂರೇಶನು ಹ್ರಸ್ವಾಕಾರನಾಗಿಯೂ, ಷಡ್ಬುಜಮಂಡಿತನಾಗಿಯೂ ಇರುವುದು ತೋರಿಬರಲು ಆಶ್ಚರ್ಯಚಕಿತನಾದುದು. ಆಗ ದೇವೇಶನು ಮಯೂರದಿಂದ ಕೆಳಕ್ಕಿಳಿದು ಶುದ್ಧಾಚಮನವನ್ನು ಮಾಡಿ ಮಾಹಾ ಮಂತ್ರ ಜಪದಿಂದ ಪರಶುವನ್ನು ಅಭಿಮಂತ್ರಿಸಿ ಸಿಂಧುವಿನ ಅಮೃತ ಪೂರ್ಣನಾಭಿಗೆ ಗುರಿ ಇಟ್ಟು ಪ್ರಯೋಗಿಸಲು ಆ ಪರಶು ತನ್ನ ಪ್ರಭೆಯಿಂದ ದ್ಗಿದಿಕ್ಕುಗಳೆನ್ನಲ್ಲ ಬೆಳಗುತ್ತ ದೈತ್ಯನ ಕಡೆಗೆ ಧಾವಿಸಿ ಬಂದುದು. ಮೃತ್ಯುವಿನಂತೆ ಬರುತ್ತಿರುವ ಧನುಸ್ಸನ್ನು ಸಿದ್ಧಗೊಳಿಸಿ ಬಾಣಗಳನ್ನು ಪ್ರಯೋಗಿಸುವಷ್ಟರಲ್ಲಿ ಪರಶು ದೈತ್ಯನ ನಾಭಿಯನ್ನು ಸೀಳಿಬಿಟ್ಟಿತು. ಅಲ್ಲಿದ ಅಮೃತ ರಸವು ಸಂಪೂರ್ಣವಾಗಿ ಸುರಿದುಹೋಗಲು ಬಿರುಗಾಳಿಗೆ ಸಿಲುಕಿದ ಬಾಳೆಯ ಗಿಡದಂತೆ ಅಸುರರು ನೆಲಕ್ಕುರುಳಿ ರಕ್ತವನ್ನು ಕಾರುತ್ತ, ಪ್ರಾಣಗಳನ್ನು ಬಿಟ್ಟುದು. ಮತ್ತು ಮಯೂರೇಶ್ವರನ ಪರಮಾನುಗ್ರಹದಿಂದ ಅತ್ಯಂತ ದುರ್ಲಭವಾದ ಸಾಯುಜ್ಯ ಪದವಿಯನ್ನು ಪಡೆದುದು. ಇದನ್ನು ನೋಡುತ್ತಲಿದ್ದವರೆಲ್ಲರೂ ಚಕಿತರಾದುದು. ಅದುವರೆಗೂ ವಿಮಾನಾರೂಢರಾಗಿದ್ದವರೆಲ್ಲರೂ ಕೆಳಕ್ಕಿಳಿದು ಬಂದುದು. ಅಂತರಿಕ್ಷದಿಂದ ಪುಷ್ಪವೃಷ್ಟಿ ಸುರಿದುದು. ಬಿರುಗಾಳಿ ನಿಂತು ಶುದ್ಧವಾದ ವಾತಾವರಣವೇರ್ಪಟ್ಟುದು. ದಿಕ್ಕುಗಳು ಪ್ರಸನ್ನವಾಗಿ ಗಂಧರ್ವರು ಮಧುರವಾಗಿ ಗಾನಮಾಡಿದುದು. ಅಪ್ಸರೆಯರು ನರ್ತಿಸಿದುದು. ಷಡಾನನಾದಿ ವೀರರು ಸಂತೋಷದಿಂಡ ಮಯೂರೇಶನನ್ನು ಸ್ತುತಿಸಿ ಪ್ರಾರ್ಥಿಸಿದುದು. ಶಿವ — ಪಾರ್ವತಿಯರು ಆ ಸ್ಥಳಕ್ಕೆ ಬಂದು ಗಣಪತಿಯನ್ನು ಆಲಿಂಗಿಸಿದುದು. ಶಿವನು ತನ್ನ ಮಗನ ಅದ್ಭುತ ಕೃತ್ಯವನ್ನು ಹೊಗಳಿದುದು. ದೇವತೆಗಳು ದೇವನಿಗೆ ನಮಸ್ಕರಿಸಿ ಆ ಸ್ತೋತ್ರಕ್ಕೆ ಅನೇಕ ಮಹಿಮೆಗಳುಂಟಾಗುವಂತೆ ಅನುಗ್ರಹಿಸಿದುದು ಅನಂತರ ದೇವನ ಅನುಮತಿಯನ್ನು ಪಡೆದು ಸ್ವ — ಸ್ಥಾನಗಳಿಗೆ ತೆರಳಿದುದು. ಅನಂತರ ಮಯೂರೇಶನು ತುಷ್ಟನಾಗಿ ತನ್ನ ನಿವಾಸಕ್ಕೆ ತೆರಳಿದುದು.
೧೨೪ನೆಯ ಅಧ್ಯಾಯ
೧೨೫ನೆಯ ಅಧ್ಯಾಯ
ಚಕ್ರಪಾಣಿಯು ಸಭಾಸ್ಥಾನವನ್ನು ಸಜ್ಜುಗೊಳಿಸಿದ್ದು. ದೇವನು ನಗರದ ಸೌಂದರ್ಯವನ್ನು ದೃಷ್ಟಿಸಿ ನೋಡುತ್ತ ಪುರವನ್ನು ಪ್ರವೇಶಿಸಿದುದು. ಆ ವೇಳೆಗೆ ಚಕ್ರಪಾಣಿಯು ನಿಗಡಬದ್ದರಾಗಿದ್ದ ದೇವತೆಗಳನ್ನೆಲ್ಲ ಬಿಡುಗಡೆ ಮಾಡಿ ದೇವನೆದುರು ತಂದು ನಿಲ್ಲಿಸಿದುದು. ದೇವತೆಗಳೂ, ದೇವೋತ್ತಮರೂ ಮುಂದೆ ಬಂದು ದೇವನನ್ನು ಪ್ರಮದಿಂದ ಆಲಿಂಗಿಸಿದುದು. ಅಲ್ಲಿ ನೆರೆದಿದ್ದ ಶೈವರು, ವೈಷ್ಣವರು, ಸೌರಿಗಳು, ಎಲ್ಲೆರೂ ಮಯೂರೇಶನನ್ನು ತಮ್ಮ ಆರಾಧ್ಯ ದೇವತಾ ರೂಪದಿಂದ ನೋಡಿ ಅವನಿಗೆ “ಜಯ”ವನ್ನು ಕೋರಿದರು. ಬಾಲಕ — ಬಾಲಿಕೆಯರು, ಪ್ರೌಢ — ಪ್ರೌಢೆಯರು, ಸ್ತ್ರೀ — ಪುರುಷರು ವೃದ್ಧ — ತರುಣರು ಎಲ್ಲರೂ ದೇವನನ್ನು ಭಕ್ತಿಯಿಂದ ಪೂಜಿಸಿದುದು. ಚಪಾಣಿಯು ತನ್ನನ್ನು ಧನ್ಯನೆಂದು ಹೇಳಿಕೊಂಡು ಮಯೂರೇಶನನ್ನು ಪೂಜಿಸಿದುದು. ಇಂದ್ರನು ಇದನ್ನು ಸಹಿಸದೆ “ನಾವೆಲ್ಲ ಉತ್ತಮರು ಇಲಿರುವಾಗ ನಮ್ಮೆದುರಿಗೆ ಮಯೂರೇಶನನ್ನರ್ಚಿಸಿದ್ದು ಮೂರ್ಖತನವೆಂದು” ಚಕ್ರಪಾಣಿಯನ್ನು ಅಧಿಕ್ಷೇಪಿಸಿದುದು. ಚಕ್ರಪಾಣಿಯ ಸದುತ್ತರ. ಆ ವೇಳೆಗೆ ಅತ್ಯದ್ಭುತವಾದ ಶಬ್ದವೊಂದುಂಟಾಗಲು ದೇವತೆಗಳೆಲ್ಲ ಹೆದರಿ ಮುರ್ಚ್ಛೆಗೊಂಡುದು. ಭೂಮಿ ಕಂಪಿಸಿ ಕೋಟ್ಯಧಿಕ ಸೂರ್ಯರ ಬೆಳಕು ಬಿದ್ದುದು. ಎಲ್ಲರೂ ಅತ್ತಕಡೆ ತಿರುಗಿ ನೋಡುವಷ್ಟರಲ್ಲಿ ದಶದೋರ್ದಂಡವಿರಾಜಿತನಾದ ಮಹಾ ಗಣಪತಿಯನ್ನು ಕಂಡುದು. ದೇವನು ತನ್ನ ವಿಶ್ವರೂಪವನ್ನು ತೋರಿಸಿದುದು. ಆಗ ಎಲ್ಲರೂ ಭ್ರಮರಹಿತರಾಗಿ ಐಕ್ಯಜ್ಞಾನವನ್ನು ಪಡೆದು ದೇವನನ್ನು ಭಕ್ತಿಯಿಂದ ಪೂಜಿಸಿದುದು. ಚಕ್ರಪಾಣಿಯು ಹೃಷ್ಟನಾಗಿ ಸ್ತುತಿಸಿದುದು. ಆ ಅದ್ಭುತವನ್ನೆಲ್ಲ ನೋಡಿ ಸಂತುಷ್ಟರಾದ ನಾರದ ಮಹರ್ಷಿಗಳು ಮುಂದೆ ಬಂದು ತಂದೆಯಾದ ಕಮಲಾಸನನನ್ನು ಕುರಿತು “ಸಿದ್ಧಿ — ಬುದ್ಧಿಯರನ್ನು ಮಯೂರೇಶ್ವರನಿಗೆ ಕೊಟ್ಟು ಲಗ್ನ ಮಾಡುವುದಕ್ಕೆ ಶಿವ — ಪಾರ್ವತಿಯರನ್ನು ಒಪ್ಪಿಸಿದ್ದೇನೆ. ಆದುದರಿಂದ ಸುಲಕ್ಷಣೆಯರಾದ ಅವರಿಬ್ಬರನ್ನೂ ಈ ದೇವನಿಗೆ ಕೊಟ್ಟು ಈಗಲೇ ವಿವಾಹವನ್ನು ನಡೆಸು” ಎಂದು ಪ್ರಾರ್ಥಿಸಲು, ದೇವತೆಗಳು ಬ್ರಹ್ಮನ ಬಳಿ ಏಕಾಂತವಾಗಿ ಹೋಗಿ ಅವನ ಮಕ್ಕಳನ್ನು ತಮಗಾಗಿ ಯಾಚಿಸಲು, ಬ್ರಹ್ಮದೇವನು ಅವರಿಬ್ಬರ ಕೈಗಳಲ್ಲೂ ರತ್ನಮಾಲಿಕೆಯನ್ನು ಕೊಟ್ಟು, “ಯಾರು ನಿಮ್ಮ ಮನಸ್ಸಿಗೊಪ್ಪುವರೋ ಅಂಥವರನ್ನು ವರಿಸಬಹುದೆಂದು” ಹೇಳಿದುದು. ಅವರಿಬ್ಬರೂ ಮುಂದೆ ಬಂದು ಗಣಪತಿಯ ಕೊರಳಿಗೆ ಹಾರಗಳನ್ನು ಹಾಕಿ ಎಲ್ಲರನ್ನೂ ನಿರಾಶಗೊಳಿಸಿದುದು. ಅನಂತರ ವಿಧಿ ವಿಹಿತವಾಗಿ ಗಣಪತಿಗೆ ವಿವಾಹ ನಡೆದುದು. ತಾವು ಬಂಧಮುಕ್ತರಾದುದಕ್ಕೆ ದೇವನಿಗೆ ದೇವತೆಗಳು ಕೃತಜ್ಞತೆಯನ್ನು ಸಲ್ಲಿಸಿ ಅವನ ಅಪ್ಪಣೆ ಪಡೆದು, ತಮ್ಮ ತಮ್ಮ ಸ್ಥಳಗಳಿಗೆ ತೆರಳಿದುದು. ಪಾರ್ವತಿಯು ಸೊಸೆಯರಿಬ್ಬರನ್ನೂ ಗಣಪತಿಯೊಂದಿಗೆ ತನ್ನ ತೊಡೆಗಳ ಮೇಲೆ ಕುಳ್ಳಿರಿಸಿಕೊಂಡು ಗಂಡನೊಂದಿಗೆ ಹರ್ಷಿಸಿದುದು. ಅಧ್ಯಾಯದ ಫಲಶ್ರುತಿ.
೧೨೬ನೆಯ ಅಧ್ಯಾಯ
೧೨೭ನೆಯ ಅಧ್ಯಾಯ
೧೨೮ನೆಯ ಅಧ್ಯಾಯ
೧೨೯ನೆಯ ಅಧ್ಯಾಯ
೧೩೦ನೆಯ ಅಧ್ಯಾಯ
೧೩೧ನೆಯ ಅಧ್ಯಾಯ
೧೩೨ನೆಯ ಅಧ್ಯಾಯ
ಪರಿಹಿಷ್ಟ