ಶ್ರೀ ಗಣೇಶ ಪುರಾಣಂ – ಸಂಪುಟ ೬
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೭೩ನೆಯ ಅಧ್ಯಾಯ
೭೪ನೆಯ ಅಧ್ಯಾಯ
೭೫ನೆಯ ಅಧ್ಯಾಯ
೭೬ನೆಯ ಅಧ್ಯಾಯ
೭೭ನೆಯ ಅಧ್ಯಾಯ
೭೮ನೆಯ ಅಧ್ಯಾಯ
೭೯ನೆಯ ಅಧ್ಯಾಯ
ಸಿಂಧುದೈತ್ಯನು ದೇವತೆಗಳನ್ನೆಲ್ಲ ಜಯಿಸಿ ತ್ರೈಲೋಕ್ಯಾಧಿಪತ್ಯವನ್ನೂ ಆಕ್ರಮಿಸಲು ಇದನ್ನು ಕೇಳಿ ಶಂಕರನು ತನ್ನ ಏಳು ಕೋಟಿ ಪ್ರಮಥರೊಂದಿಗೆ ‘ತ್ರಿ — ಸಂಧ್ಯಾ’ಕ್ಷೇತ್ರಕ್ಕೆ ಬಂದು ನೆಲೆಸಿದುದು. ರಾಕ್ಷಸನಿಗೆ ಭಯಪಟ್ಟು ಗೌತಮಾದಿ ಮುನಿಗಳು ಈ ಪೂರ್ವದಲ್ಲಿಯೇ ಅಲ್ಲಿಗೆ ಬಂದು ನೆಲೆಸಿದ್ದರು, ದೇವನನ್ನು ಅವರು ಸ್ವಾಗತಿಸಿ ತಮ್ಮನ್ನು ಧನ್ಯರೆಂದು ಹೊಗಳಿಕೊಂಡು, ತಮಗೊದಗಿದ ದುಃಖವನ್ನು ಅರುಹಿ, ‘ಇಲ್ಲಿಗೆ ತಾವು ಬರಲು ಕಾರಣವೇನೆಂಬುದಾಗಿ ಪ್ರಶ್ನಿಸಿದುದು. ‘ವರಪ್ರಭಾವದಿಂದ ಎಲ್ಲ ಲೋಕಗಳನ್ನೂ ಸಿಂಧು ಆವರಿಸಿದ್ದರಿಂದ ವಿಶ್ರಾಂತಿಗಾಗಿ ಇಲ್ಲಿಗೆ ಬಂದೆನೆಂದೂ, ನೀವು ಸಮ್ಮತಿಸುವುದಾದರೆ ಇಲ್ಲಿಯೇ ವಾಸವಾಗಿರಬೇಕೆಂದೂ ಹೇಳಲು ಮುನಿಗಳು ದೇವನ ಸರಳತನವನ್ನು ಕೊಂಡಾಡಿ, ಇಲ್ಲಿಯೇ ವಾಸಿಸುವ ಕೃಪೆಮಾಡಬೇಕೆಂದು, ವಿಜ್ಞಾಪಿಸಿಕೊಂಡು, ತಪಸ್ಸಿಗೆ ಯೋಗ್ಯವಾದ ಸ್ಥಾನ ಒಂದನ್ನು ತೋರಿಸಿದುದು. ಗಂಗೆ — ಗೌರಿಯರೊಂದಿಗೆ ಋಷಿಗಳ ನಡುವೆ ವಾಸಿಸಲಾರಂಭಿಸಿದ ಗಿರಿಶನಿಗೆ ಕೈಲಾಸಕ್ಕಿಂತಲೂ ಆಶ್ರಮಭೂಮಿ ಸುಖಕರವೆನಿಸಿದುದು. ದೇವನು ತಪೋನಿರತನಾದುದನ್ನು ಕಂಡು ‘ಸರ್ವೇಶ್ವರನಾದ ನೀನು ಯಾರನ್ನು ಧ್ಯಾನಿಸುತ್ತಿರುವೆ?’ ಎಂದು ಗೌರಿಯು ಪ್ರಶ್ನಿಸಲು ‘ನಿತ್ಯ, ನಿರಂಜನನಾದ ಮಹಾಗಣಪತಿಯನ್ನು ಧ್ಯಾನಿಸುವೆನೆಂದು’ ಹೇಳಿ, ಅವನನ್ನು ತತ್ತ್ವತಃ ವರ್ಣಿಸಿದುದು. ಅದರಿಂದ ಉತ್ಸುಕಳಾದ ಗೌರಿಯು ಗಣೇಶನನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನೆಯನ್ನು ತನಗೂ ಹೇಳಬೇಕೆಂದು ಪ್ರಾರ್ಥಿಸಲು, ತಪೋऽನುಷ್ಠಾನದ ಹಾಗೂ ಪೂಜೆಯ ವಿಧಾನಗಳನ್ನು ಶಿವನು ಶಿವೆಗೆ ಹೇಳಿದುದು. ಗೌರಿಯು ಮಂತ್ರವನ್ನು ಧ್ಯಾನಿಸುತ್ತ ತಪಶ್ಚರಣೆಗಾಗಿ ಏಕಾಂಟಪ್ರದೇಶಕ್ಕೆ ನಡೆದುದು.
೮೦ನೆಯ ಅಧ್ಯಾಯ
ತಪೋವನದ ಹಾಗೂ ಪಾರ್ವತಿಯ ಏಕಾಗ್ರತೆಯ ವರ್ಣನೆ. ೧೨ ವರ್ಷಗಳ ಅವಧಿಯು ಮುಗಿದ ಬಳಿಕ ಬಳಲಿದ ಭವಾನಿಗೆ ಭಗವಂತ, ಬಾಲಚಂದ್ರನು ದರ್ಶನವನ್ನು ಕೊಟ್ಟುದು ಗಣಪತಿಯ ದಿವ್ಯರೂಪದ ವರ್ಣನೆ. ಅದ್ಭುತವಾದ ಆ ರೂಪವನ್ನು ಕಂಡು ಚಕಿತಳಾಗಿ ನಿಂದಿದ್ದ ಗೌರಿಯನ್ನು ಕುರಿತು ‘ನಾನೇ ಗುಣೇಶ’ನೆಂದು ಹೇಳಿ, ತನ್ನ ಸರ್ವವ್ಯಾಪಕತ್ವವನ್ನು ತಾನೇ ವಿವರಿಸಿ ಹೇಳಿ. ‘ವರವನ್ನು ಬೇಡೆ’ನಲು ದೆವನ ದಿವ್ಯದರ್ಶನದಿಂದ ತನ್ನನ್ನು ಧನ್ಯಳೆಂದು, ಹೊಗಳಿಕೊಂಡು ‘ನೀನು ನನಗೆ ಮಗನಾಗಿ ಜನಿಸಬೇಕೆಂದು’ ವರವನ್ನು ಬೇಡಿದಳು. ‘ಹಾಗೆ ಯೇ ಆಗಲೆಂದು’ ನುಡಿದು, ದೇವನು ಅಂತರ್ಹಿತನಾಗಲು, ಪಾರ್ವತಿಯು ವಿಷಣ್ಣಳಾಗಿ ‘ತನಗೆ ಕಂಡುದೆಲ್ಲ ಸ್ವಪ್ನವಿರಬಹುದೇ’ ಎಂದು ಯೋಚಿಸುವಷ್ಟರಲ್ಲಿ ಶಿವನ ಮಾತುಗಳು ಸ್ಮರಣೆಗೆ ಬರಲು, ತಾನು ಕಂಡ ದೇವನ ರೂಪದಂತಹ ಆಕೃತಿಯೊಂದನ್ನು ನಿರ್ಮಿಸಿ ಅದಕ್ಕೆ ‘ಗಿರಿಜಾತ್ಮಜ’ನೆಂದೂ, ತಾನು ತಪಿಸಿದ ಭೂಮಿಗೆ ‘ಸಿದ್ಧಿಕ್ಷೇತ್ರ’ ಎಂದೂ ಹೆಸರನ್ನಿಟ್ಟು ಆ ಕ್ಷೇತ್ರಕ್ಕೆ ಅನೇಕ ಮಹಿಮೆಗಳನ್ನು ಅನುಗ್ರಹಿಸಿದುದು, ಮತ್ತು ತಾನು ನಿರ್ಮಿಸಿ, ಸ್ಥಾಪಿಸಿದ್ದ ಗಣಪತಿಯ ಮೂರ್ತಿಯನ್ನು ಭಕ್ತಿಯಿಂದ ಪೂಜಿಸಿ, ಅನಂತರ ಬ್ರಾಹ್ಮಣೋತ್ತಮರಿಗೆ ಅನೇಕ ದಾನಾದಿಗಳನ್ನಿತ್ತು ಪುನಃ ತ್ರಿಸಂಧ್ಯಾಕ್ಷೇತ್ರಕ್ಕೆ ಬಂದುದು. ತಪೋಮಗ್ನನಾದ ಪರಶಿವನನ್ನು ಸಂಧಿಸಿ, ನಡೆದ ಸಂಗತಿಯನ್ನೆಲ್ಲ ಅರುಹಲು, ಶಿವನು ಹೃಷ್ಟಮಾನಸನಾಗಿ ಗಿರಿಜೆಯನ್ನು ಕೊಂಡಾಡಿ ಬಹಳ ಪ್ರೀತಿಯಿಂದ ದೇವಿಯನ್ನು ಬಿದಿದಪ್ಪಲು; ಇಬ್ಬರೂ ಆನಂದಾಶ್ರುಗಳನ್ನು ಸುರಿಸಿದುದು.
೮೧ನೆಯ ಅಧ್ಯಾಯ
೮೨ನೆಯ ಅಧ್ಯಾಯ
೮೩ನೆಯ ಅಧ್ಯಾಯ
೮೪ನೆಯ ಅಧ್ಯಾಯ
೮೫ನೆಯ ಅಧ್ಯಾಯ
೮೬ನೆಯ ಅಧ್ಯಾಯ
೮೭ನೆಯ ಅಧ್ಯಾಯ
೮೮ನೆಯ ಅಧ್ಯಾಯ
೮೯ನೆಯ ಅಧ್ಯಾಯ
೯೦ನೆಯ ಅಧ್ಯಾಯ
೯೧ನೆಯ ಅಧ್ಯಾಯ
೯೨ನೆಯ ಅಧ್ಯಾಯ
೯೩ನೆಯ ಅಧ್ಯಾಯ
೯೪ನೆಯ ಅಧ್ಯಾಯ
೯೫ನೆಯ ಅಧ್ಯಾಯ
೯೬ನೆಯ ಅಧ್ಯಾಯ
೯೭ನೆಯ ಅಧ್ಯಾಯ
೯೮ನೆಯ ಅಧ್ಯಾಯ
ಗಣಪತಿಗೆ ಈ ವೇಳೆಗೆ ೮ ನೆಯ ವರ್ಷ ನಡೆಯುತ್ತಿರಲು ಒಂದು ದಿನ ತನ್ನ ಸಂಗಡಿಗರಾದ ಚಿಕ್ಕ ಪುಟ್ಟ ಬಲಕರನ್ನೆಲ್ಲ ಸಮೀಪದಲ್ಲಿ ಕುಳ್ಳಿರಿಸಿಕೊಂಡು ಸು — ಸ್ವರದಿಂದ ವೇದಗಳನ್ನು ಉಚ್ಚರಿಸಲಾರಂಭಿಸಿದುದು. ಇದರಿಂದ ಸಕಲ ಸತ್ತ್ವಗಳೂ ಪರವಶವಾದುದು. ಈ ವೇದಧ್ವನಿಯನ್ನು ಕೇಳಲು ಪರಶಿವನೂ ಅಲ್ಲಿಗೆ ಬರಲು, ಅವನ ಕಪರ್ದದ ಮೇಲಿದ್ದ ಚಂದ್ರಮನು ಈ ಸು — ಸ್ವರಕ್ಕೆ ಮೆಚ್ಚಿ ಅಮೃತವನ್ನು ವರ್ಷಿಸಿದುದು. ತತ್ಪರಿಣಾಮವಾಗಿ ನೀಲಕಂಠನ ಕಂಥದಲ್ಲಿದ್ದ ರುಂಡಗಳೆಲ್ಲ ಚೈತನ್ಯಗೊಂಡುದು. ಇಂತಹ ಪವಿತ್ರ ಸನ್ನಿವೇಶದಲ್ಲಿ ಅಲ್ಲಿಗೊಬ್ಬ ಹೊಸ ದೈತ್ಯನು ಅರಣ್ಯಕ ಪಶುವಿನಂತೆ ಸೋಗು ಹಾಕಿಕೊಂಡು ಬಂದನು. ಈ ಪ್ರಾಣಿಯನ್ನು ನೋಡಿ ಎಲ್ಲರೂ ಗಹಗಹಿಸಿ ನಕ್ಕರು. ಅದನ್ನು ಹಿಡಿಯಬೇಕೆಂದು ಗಣಪತಿಯು ಯತ್ನಿಸಿದಷ್ಟೂ ಅದು ದೂರ ದೂರ ಹೋಗಿ, ಅಂತೂ ಬಾಲಕನನ್ನು ಗಹನವಾದ ವಿಪಿನ ಒಂದಕ್ಕೆ ಕೊಂಡೊಯ್ದುದು. ಎಷ್ಟು ಪ್ರಯತ್ನಿಸಿದರೂ ಆ ಪ್ರಾಣಿ ಕೈಗೆ ಸಿಕ್ಕದೆ ಇರಲು, ಬಾಲಕನು ತನ್ನ ಪಾಶವನ್ನು ಬೀಸಿ ಆ ಮೃಗವನ್ನು ಹಿಡಿದು ತರಿಸಿದುದು, ಮತ್ತು ಅದರ ಕಂಥನಾಳವನ್ನು ಬಿಗಿದು ಅದನ್ನು ಕೊಂದುದು. ಪುನಃ ಬಾಲಕರು ಆಟವನ್ನಾಡುತ್ತಿರುವ ಸಮಯದಲ್ಲಿ ಗಣಪತಿಯ ದೃಷ್ಟಿಗೆ ವಿನತೆಯು ಬಚ್ಚಿಟ್ಟಿದ್ದ ಮೊಟ್ಟೆಯು ಗೋಚರಿಸಿದುದು. ಅದನ್ನು ತನ್ನ ಕೈಗಳಿಗೆ ತೆಗೆದುಕೊಂಡು ಒಡೆಯಲು, ಒಳಕ್ಕೆ ಸುಂದರವಾದ ನವಿಲೊಂದು ಕಂಡು ಬಂದುದು. ಪಕ್ಷಿಯ ವರ್ಣನೆ. ಆ ನವಿಲು ತನ್ನ ರೆಕ್ಕೆ — ಪುಕ್ಕುಗಳನ್ನು ಕೆದರಿಕೊಂಡು ಬಲವಾಗಿ ಬಡಿಯುತ್ತ ಮುನಿಬಾಲಕರನ್ನೆಲ್ಲ ಸಂತ್ರಸ್ತರನ್ನಾಗಿ ಮಾಡಲು, ಗುಣೇಶನು ತಾನೂ ಅದರ ಸಂಗಡ ಹೋರಾಡಿ ಅದನ್ನು ತನ್ನ ನಾಲ್ಕೂ ಆಯುಧಗಳಿಂದ ಹೊಡೆಯಲು ಆ ನವಿಲು ಜಗ್ಗದೇ ಬಾಲಕರನ್ನೆಲ್ಲ ಎತ್ತಿಕೊಂಡು ಹಾರಿಹೋದುದು. ಗಣೇಶನೂ ಸಾಹಸವನ್ನು ತೋರಿ ಅದರ ಹಿಡಿತದಿಂದ ಬಾಲಕರನ್ನೆಲ್ಲ ಬಿಡಿಸಿ, ಅದನ್ನೇರಿ ಕುಳಿತುದು. ಅಷ್ಟರಲ್ಲಿ ವಿನತೆಯು ಅಲ್ಲಿಗೆ ಬಂದು ಬಾಲಕರೊಡನೆ ಗುಣೇಶನನ್ನು ಸ್ತುತಿಸುದುದು, ಮತ್ತು ಕಶ್ಯಪನು ಈ ಪಕ್ಷಿಯ ಬಗ್ಗೆ ಸೂಚಿಸಿದ್ದ ಭವಿಷ್ಯವನ್ನು ಅರುಹಿದುದು. ‘ನಿನ್ನ ಮಕ್ಕಳನ್ನು ಬಂಧನದಿಂದ ಮುಕ್ತಿಗೊಳಿಸಿ ನಿನ್ನ ಬಳಿಗೆ ಕರೆದು ತರುವೆನು, ಚಿಂತಿಸಬೇಡ’ ಎಂದು ಆಶ್ವಾಸನವನ್ನಿತ್ತು ಮಯೂರದ ಅಭಿಮತದಂತೆ ತನ್ನ ಹೆಸರನ್ನು ‘ಮಯೂರೇಶ್ವ’ ಎಂದು ಒಪ್ಪಿಕೊಂಡುದು ವಿನತೆಯು ಸಂತುಷ್ಟಳಾಗಿ ತನ್ನ ಆಶ್ರಮಕ್ಕೆ ಹಿಂದಿರುಗಲು ‘ಮಯೂರೇಶ, ಮಯೂರೇಶ’ ಎಂದು ದೇವನ ನೂತನ ನಾಮವನ್ನು ಉದ್ಘೋಷಿಸುತ್ತ ತಮ್ಮ ತಮ್ಮ ಮನೆಗಳಿಗೆ ತೆರಳಿದುದು. ಅದುವರೆಗೂ ನಡೆದ ಸಂಗತಿಗಳನ್ನೆಲ್ಲ ಗಣಪತಿಯು ತನ್ನ ಮುದ್ದು ಮುದ್ದು ಮಾತುಗಳಿಂದ ತಾಯಿ; ಗಿರಿಜೆಗೆ ಅರುಹಿದುದು.
ಪರಿಶಿಷ್ಟ
ಮೈಥಿಲ, ಗಂಘಕೀ
ಶೌನಕ, ಸೂರ್ಯಮಂತ್ರ
ಉಪದಾ, ಶುಕ್ರೋಪದಿಷ್ಟ ಸೂರ್ಯಮಂತ್ರ ಸ್ವಾತ್ಮಸಾಥನ
ಶುಂಭ — ನಿಶುಂಭರು
ವೃತ್ರ, ಪ್ರಚಂಡ, ಕಾಲ
ಚಿದಾಭಾಸ, ಧೂಮಕೇತು, ತ್ರಿಸಂಧ್ಯಾಕ್ಷೇಗ್ರ, ಜಗದೀಶ
ಘಾಸ, ಅಷ್ಟಮೂರ್ತಿ
ಚೈತ್ಯ
ಗೃಂಜಕ, ಕ್ರೋಷ್ಟಾ, ಮರೀಚಿ
ಷಟ್ಚಕ್ರಭೇದನ, ೨೭ ತತ್ತ್ವಗಳು, ಶಿಷ್ಯ
ಅಸುರರು, ವೇತಾಲ, ಗೃಹ, ಭೂತಗಳು
ಪಿಶಾಚ, ಮಾಂಡವ್ಯ ಋಷಿ
ಪೌಷ್ಣ, ಕ್ರಮುಕ, ದರ್ಶ
ಪಾರ್ವಣ, ಅಶೋಕ, ಸ್ವರ್ಗ, ನಾಸ್ತಿಕರು
ಅಂಚಲ, ಪಾರ್ಥಿವಪೂಜಾ, ಅಪಸ್ಮಾರ, ಗರುತ್ಮಾನ್
ವೈಸಹ್ವದೇವ, ವಿಶ್ವಕರ್ಮಾ
ಚಿತ್ರಾಸನ, ಶರ್ಚಿ
ಸಾವಿತ್ರೀ, ಅರುಂಧತೀ
ರತಿ, ವ್ರತಬಂಧ, ಇಂದ್ರಕರಿ, ಶೋಚಿಷ್ಕೇಶ, ಚಿಂತಾಮಣಿ
ವಾಸುಕಿ, ಕದ್ರೂಃ
ಶುದ್ಧಿಪತ್ರ