ಶ್ರೀ ಗಣೇಶ ಪುರಾಣಂ – ಸಂಪುಟ ೫
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೩೬ನೆಯ ಅಧ್ಯಾಯ
ಸಹ್ಯಾದ್ರಿಪರ್ವತದಲ್ಲಿ ಸದಾಶಿವನು ಸರ್ವಮಂಗಳೆ, ದೇವರ್ಷಿಗಳು ಮತ್ತು ಪ್ರಮಥಗಣ ಇವರೊಡನೆ ಸುಖವಾಗಿ ವಿಹರಿಸುತ್ತಿರುವಾಗ ಚರುರ್ಮುಖನು ತನ್ನ ಪತ್ನಿಯರಾದ ಸಾವಿತ್ರಿ, ಗಾಯತ್ರಿಯರೊಡನೆಯೂ ಮತ್ತು ದೇವತೆಗಳು, ಗಂಧರ್ವರು ಕಿನ್ನರರು ಮೊದಲಾದವರೊಡನೆಯೂ ಕೂಡಿ, ಮಹಾದೇವನನ್ನು ಸಂದರ್ಶಿಸಬೇಕೆಂದು ಗಿರಿಯ ತಪ್ಪಲಿಗೆ ಬಂದುದು. ದೇವನನ್ನು ಸಂದರ್ಶಿಸಿ, ವಿಶಿಷ್ಟವಾದ ಒಂದು ಯಾಗವನ್ನು ಮಾಡಾಬೇಕೆಂದಿರುವ ತನ್ನ ಮನೋಗತವನ್ನರುಹಿದುದು. ದೇವನು ಇದಕ್ಖಾತಿ ಮಹರ್ಷಿಗಳನ್ನು ಆಹ್ವಾನಿಸಿದುದು. ಬಂದ ಮಹರ್ಷಿಗಳ ಹೆಸರು. ಯಾಗಕ್ಕೆ ಇವರು ನಿರ್ಧರಿಸಿದ ಮಹೂರ್ತವು ಅತ್ಯಂತ ಸನ್ನಿಹಿತವಾಗಿದ್ದರೂ ಮನೆಗೆಲಸಗಳನ್ನು ಬಿಟ್ಟು ಬೇಗನೆ ಬಾರದ್ದರಿಂದ ಹಿರಿಯಳಾದ ಸಾವಿತ್ರಿಗೆ ಬದಲಾಗಿ ಗಾಯರ್ತಿಯನ್ನೇ ಪುಣ್ಯಾಹ ಕಾರ್ಯಕ್ಕೆ ಕುಳ್ಳಿರಿದಿದುದು. ಯಾಗೀಯ ಪೂರ್ವಾಂಗ ಕರ್ಮಗಳ ವಿವರಣೆ. ಇಷ್ಟರಲ್ಲಿ ಸಾವಿತ್ರಿಯು ಅಲ್ಲಿಗೆ ಬಂದು, ತನ್ನ ಪವಿತ್ರ ಸ್ಥಾನವನ್ನು ಸವತಿಯು ಆಕ್ರಮಿಸಿದುದನ್ನು ನೋಡಿ, ಕೋಪದಿಂದ ದೇವತೆಗಳನ್ನೂ, ನುನಿಗಳನ್ನೂ ಕುರಿತು ‘ನೀವು ಜಡರಾಗಿ ಹೋಗಿರಿ’ ಎಂದು ಶಪಿಸಿದುದು. ‘ಡ’ ‘ಲ’ ಇವೆರಡಕ್ಷರಕ್ಕೆ ವ್ಯತ್ಯಾಸವಿಲ್ಲದ್ದರಿಂದ ನಾವು ಜಲರೂಪರಾಗಿ ನಿನ್ನ ಶಾಪವನ್ನು ಅನುಭವಿಸುವೆವು ಎಂದು ದೇವಿಯನ್ನು ಒಪ್ಪಿಸಿ, ದೇವತೆಗಳು ಅನೇಕ ನದಿಗಳಾಗಿ ಹರಿದುದು. ನದಿಗಳ ಹೆಸರು. ಯಾಗವನ್ನಾರಂಭಿಸುವಾಗ ವಿಘ್ನರಾಜನನ್ನು ಆರಾಧಿಸದೇ ಇದ್ದುದರಿಂದ ಇಷ್ಟೆಲ್ಲ ಅನಾಹುತಗಳು ಸಂಭವಿಸಿದವು. ಮುಂದೇನು ಗತಿ? ದೇವನಾದ ಗಣಪತಿಯನ್ನಾದರೂ ಪ್ರಸನ್ನಗೊಳಿಸುವೆನು ಎಂದು ಪಿತಾಮಹನು ಚಿಂತಿಸುತ್ತಿರುವಷ್ಟರಲ್ಲಿ ಪುಲೋಮಜಾದಿ ದೇವಪತ್ನಿಯರು ಬ್ರಹ್ಮನ ಬಳಿಗೆ ಬಂದು ‘ನೀನೇಕೆ ಯಜ್ಞವನ್ನು ಆರಂಭಿಸಬೇಕಿದ್ದಿತು? ಮತ್ತು ನಮ್ಮ ಪತಿಗಳಿಗೆ ಈ ದುರ್ದಶೆಯನ್ನೇಕೆ ಒದಗಿಸಬೇಕಿದ್ದಿತು?’ ಎಂದು ಅಧಿಕ್ಷೇಪಿಸಿದುದು ಯಜ್ಞವನ್ನು ಸಮಾಪ್ತಿಗೊಳಿಸಿ, ಎಲ್ಲರಿಗೂ ಒಳ್ಳೆಯದನ್ನುಂಟುಮಾಡುವುದಾಗಿ ಅವರಿಗೆ ಬ್ರಹ್ಮನು ಧೈರ್ಯವನ್ನು ಹೇಳಿದುದು. ಮುಂದಿನ ಕಥೆಯನ್ನು ಕೀರ್ತೀದೇವಿಗೆ ಗೃತ್ಸಮದನು ಹೇಳಲಾರಂಭಿಸಿದುದು. ದೇವತಾಸ್ತ್ರೀಯರು ಕರ್ಣಾಟಕ ದೇಶಕ್ಕೆ ಬಂದು, ಶ್ರೀರಾಮನು ಹಿಂದೊಮ್ಮೆ ಇಲ್ಲೆಲ್ಲ ಸಂಚರಿಸಿದಾಗ ಸ್ಥಾಪಿಸಿದ್ದ ವಕ್ರತುಂಡನನ್ನು ಕಂಡು, ಅಲ್ಲಿಯೇ ಕುಳಿತು ಧ್ಯಾನಾಸಕ್ತರಾದುದು. ಎಷ್ಟು ವಿಧದಿಂದ ತಪಿಸಿದರಾಗಲೀ, ಪೂಜಿಸಿದರಾಗಲೀ ದೇವನು ಪ್ರಸನ್ನನಾಗದ್ದಕ್ಕೆ ಇವರು ಚಿಂತಾಕ್ರಾಂತರಾಗಲು ‘ಶಈಪತ್ರ, ದೂರ್ವೆಗಳಿಂದ ಪೂಜಿಸಿದರೆ ದೇವನು ಪ್ರಸನ್ನನಾಗುವನು’ ಎಂದು ನಭೋವಾಣಿ ನುಡಿಯಲು ಇವರು ಅದರಂತೆ ಪೂಜಿಸಿ, ದೇವನನ್ನು ಒಲಿಸಿಕೊಂಡುದು. ದೇವನ ದಿವ್ಯರೂಪದ ವರ್ಣನೆ.
೩೭ನೆಯ ಅಧ್ಯಾಯ
ದೇವಸ್ತ್ರೀಯರು ಗಣಪತಿಯನ್ನು ಹೇಗೆ ಸ್ತುತಿಸಿದರೆಂದು ಕೀರ್ತೀದೇವಿಯು, ಪ್ರಶ್ನಿಸಲು, ಗೃತ್ಸಮದ ಮುನಿಯು ಅದನ್ನು ವಿವರಿಸಿ ಹೇಳಿದುದು. ದೇವಸ್ತ್ರೀಯರು ತಮ್ಮ ಪತಿಗಳಿಗಾಗಿ ಕ್ಷಮೆಯನ್ನು ಯಾಚಿಸಿ; ಅವರಿಗೆ ಪೂರ್ವ ರೂಪಗಳು ದೊರೆಯುವಂತೆ ಅನುಗ್ರಹಿಸಬೇಕೆಂದು ಬೇಡಿದುದು. ‘ಸಾವಿತ್ರಿಯು ಕೊಟ್ಟ ಶಾಪವನ್ನು ಅಲ್ಲಗಳೆಯಬಾರದೆಂಡೂ, ಶಾಪಗ್ರಸ್ತರಾದ ದೇವತೆಗಳು ಕೆಲವೊಂದಂಶದಿಂದ ಜಲರೂಪರಾಗಿಯೂ, ಮತ್ತೆ ಕೆಲವು ಅಂಶದಿಂದ ದೇವತೆಗಳಾಗಿಯೂ ಇರುವಂತೆ ಮಾತ್ರ ಅನುಗ್ರಹಿಸುವೆನೆಂದೂ ಆಶ್ವಾಸನವನ್ನಿತ್ತು, ‘ಶಈ’ ಪೂಜೆಯ ಮಹತ್ತ್ವವನ್ನು ಬಣ್ಣಿಸಿದುದು. ದೇವನು ಅನುಗ್ರಹಿಸಿದೊಡನೆಯೇ ದೇವತೆಗಳು ತಮ್ಮ ತಮ್ಮ ಪೂರ್ವರೂಪಗಳನ್ನು ಪಡೆದು ಬಂದು ದೇವನನ್ನು ಸ್ತುತಿಸಿದುದು. ದೇವನು ಅಂತರ್ಹಿತನಾಗಲು ದೇವತೆಗಳು ದೇವನ ಒಂದು ದಿವ್ಯವಾದ ಮೂರ್ತಿಯನ್ನು ನಿರ್ಮಿಸಿ, ‘ಹೇರಂಬ’ ಎಂಬ ಹೆಸರಿನಿಂದ ಅದನ್ನು ಸ್ಥಾಪಿಸಿ ಮಂದಿರವನ್ನು ನಿರ್ಮಿಸಿದುದು. ಮತ್ತು ಆ ಮೂರ್ತಿಯಲ್ಲಿ ಅನೇಕ ಮಹಿಮೆಗಳು ನೆಲೆಗೊಳ್ಳುವಂತೆ ಮಾಡಿದುದು. ಶ್ರೀರಾಮನಿಂದ ಸ್ಥಾಪಿತವಾಗಿದ್ದ ‘ಅರ್ಕಗಣಪತಿ’ಯನ್ನು ದೇವೇಂದ್ರನು ತನ್ನ ಅರಮನೆಯಲ್ಲಿರಿಸಲು ದೇವಲೋಕಕ್ಕೆ ಕೊಂಡೊಯ್ದು ಅರ್ಚಿಸಿದುದು. ಇದನ್ನು ಕಂಡು ಪ್ರತಿಯೊಬ್ಬ ದೇವತೆಯೂ ಅರ್ಕವೃಕ್ಷದಿಂಡಲೇ ಗಣಪತಿಯ ಮೂರ್ತಿಗಳನ್ನು ನಿರ್ಮಿಸಿಕೊಂಡು ಭಕ್ತಿಯಿಂಡ ಪೂಜಿಸಲಾರಂಭಿಸಿದುದು. ಇತ್ತ ತಪಸ್ಸಿಗೆ ಕುಳಿತಿದ್ದ ಬ್ರಹ್ಮದೇವನು ೧೨ ವರ್ಷಗಳವರೆಗೆ ಅನುಷ್ಠಿಸಿ ದೇವನನ್ನು ಪ್ರಸನ್ನೀಕರಿಸಿಕೊಂಡು, ಯಾಗವನ್ನು ಮುಂದುವರಿಸಿ ಪೂರೈಸಿದುದು. ಅವನೂ ಸಹ ಅರ್ಕವೃಕ್ಷದಿಂದಲೇ ವಿನಾಯಕನ ವಿಗ್ರಹವನ್ನು ನಿರ್ಮಿಸಿ ಶಈಪತ್ರ, ಸ್ವರ್ಣಕಮಲಪುಷ್ಪಗಳು, ಕೇದಿಗೆ, ಇತರ ಹೂವು, ಶ್ವೇತದೂರ್ವೆ ಇವುಗಳಿಂದ ಅರ್ಚಿಸಿ ಧನ್ಯನಾದುದು, ಎಂಬುದಾಗಿ ಶಈ — ಮಂದಾರಗಳ ಮಹಿಮೆಯನ್ನು ಗೃತ್ಸಮದನು ಕೀರ್ತಿಗೆ ವರ್ಣಿಸಿ ಹೇಳಿದುದು. ಇಷ್ಟೆಲ್ಲ ಕೇಳಿದ ಬಳಿಕ ರಾಣಿಯು ತನ್ನ ಪುತ್ರನನ್ನು ಬದುಕಿಸಿಕೊಟ್ಟಿದ್ದ ಮುನಿಯನ್ನು ಅವನ ಆಶ್ರಮಕ್ಕೆ ಕಳಿಸಿಕೊಟ್ಟುದು, ಫಲಶ್ರುತಿ.
೩೮ನೆಯ ಅಧ್ಯಾಯ
ಶಈ — ಮಂದಾರಗಳ ಮಹಿಮೆಯನ್ನು ವಿವರಿಸಿ ಹೇಳಿದುದಕ್ಕಾಗಿಯೂ, ತನ್ನ ಮಗನಿಗೆ ಷಡರ್ಣ ಮಂತ್ರವನ್ನು ಉಪದೇಶಿಸಿದ್ದಕ್ಕಾಗಿಯೂ ಕೀರ್ರಿದೇವಿಯು ಗೃತ್ಸಮದ ಮುನಿಯನ್ನು ಬಾಯಿತುಂಬ ಹೊಗಳಿ, ಚಿಕ್ಕ ಕೂಸಾದ ತನ್ನ ಮಗು ಕ್ಲಿಷ್ಟೋಚ್ಛಾರಣೆಯುಳ್ಳ ಷಷರ್ಣ ಮಂತ್ರವನ್ನು ಹೇಗೆ ಜಪಿಸೀತು? ಎಂದು ತನಗುಂಟದ ಸಂಶಯವನ್ನು ಮುನಿಯ ಎದುರಿಗೆ ನಿವೇದಿಸಿದುದು. ಮುನಿಯು ಈ ಬಗೆಯ ವಿಶಿಷ್ಟ ಪ್ರಶ್ನೆಯನ್ನು ರಾಣಿಯು ಮಾಡಿದುದಕ್ಕಾಗಿ ಕೀರ್ತಿದೇವಿಯನ್ನು ಹೊಗಳಿ, ಬಾಲಕನಿಗೆ ಗಜಾನನ ಮಂತ್ರವನ್ನು ತಿಳಿಯುವಂತೆ ಹೇಳಿಕೊಡುವೆನೆಂದು ಹೇಳಿ, ದೇವನ ಮೂಲಸ್ವರೂಪವನ್ನು ವರ್ಣಿಲಾರಂಭಿಸಿದುದು. ತದಂಗವಾಗಿ ದಿವೋದಾಸನ ಸಂಕ್ಷಿಪ್ತ ಚರಿತ್ರೆ. ಪರಮೇಶ್ವರನು ಕಾಶಿಯಲ್ಲಿ ನೆಲೆಸಲು ಪ್ರಯತ್ನಪಟ್ಟ ವಿಷಯದ ವಿವರಣೆ. ‘ಎಲ್ಲರಿಂದಲೂ ವಂದಿತಚರಣನಾದ ಢುಂಢಿರಾಜನನ್ನು ಶಈಪತ್ರಾದಿಗಳಿದ ರ್ಚಿಸಿದರೆ, ನಿನ್ನ ಮಗನು ಸಮ್ರಾಜನಾಗಿ ಬಾಳುವನು’ ಎಂದು ಗೃತ್ಸಮದನು ಹೇಳಿದುದು. ‘ಢುಂಢಿರಾಜನ ಸಂಪೂರ್ಣ ಪರಿಚಯವನ್ನು ಮಾಡಿಕೊಡಬೇಕೆಂದು ರಾಣಿಯು ಕೇಳಲು, ಗೃತ್ಸಮದನು ಸಂತೋಷದಿಂದ ಢುಂಢಿರಾಜನ ಚರಿತ್ರೆಯನ್ನು ಹೇಳಲು ಉಪಕ್ರಮಿಸಿದುದು. ಇದನ್ನು ತಾನು ಸ್ಕಂದನಿಂದ ತಿಳಿದುದಾಗಿಯೂ ಹೇಳಿ, ಕಥೆಯನ್ನು ಮುಂದುವರಿಸಿದುದು. ಅವಿಮುಕ್ತಕ್ಷೇತ್ರದ ಮಹಿಮಾವರ್ಣನೆ. ಶ್ರೀ ಹರಿಯು ಕಶ್ಯಪನಿಗೆ ಸೃಷ್ಟಿಯನ್ನು ಆರಂಭಿಸೆಂದು ಸೂಚಿಸಿದುದು. ಅವನು ದೇವನ ಆಜ್ಞೆಯನ್ನು ಶಿರಸಾಮಾನಿಸಿ, ಜಾರಜ ಪ್ರಜಾಸೃಷ್ಟಿಯನ್ನು ಮಾಡಿದ ನಂತರ ೨೧ ಸಹಸ್ರ ಬಗೆಯ ಅಂಡಜಗಳನ್ನೂ, ಸ್ವೇದಜಗಳನ್ನೂ ಮತ್ತು ಇದ್ಭಿಜ್ಜಗಳನ್ನೂ ಅಷ್ಟೇ ಸಂಖ್ಯೆಯಲ್ಲಿ ನಿರ್ಮಿಸಿದುದು. ಬ್ರಾಹ್ಮಣ್ಯದ ಮಹಿಮಾ ವರ್ಣನೆ. ದುರಾಚಾರಿಗಳಿಗೆ ಪಲೋಕಗಳಲ್ಲಿ ಒದಗುವ ಕಷ್ಟಗಳ ವರ್ಣನೆ. ಪಾಪಿಗಳನ್ನು ಪಾತಕ ಕೂಪಗಳಿಂದ ಉದ್ದರಿಸಲು ಬ್ರಹ್ಮಾದಿ ದೇವತೆಗಳೂ, ಮಹರ್ಷಿಗಳೂ ಸೇರಿ, ಅನೇಕ ಪವಿತ್ರ ತೀರ್ಥಗಳನ್ನು ನಿರ್ಮಿಸಿ, ಅಲ್ಲೇ ತಾವೂ ಸನ್ನಿಧಿಗೊಂಡುದು. ಧ್ಯಾನನಿರತರ ಉದ್ಧಾರಕ್ಕಾಗಿ ಪರಶಿವನೂ ಸಹ ‘ವಾರಾಣಸೀ’ ಎಂಬ ಒಂದು ಕ್ಷೇತ್ರವನ್ನು ಕಲ್ಪಿಸಿದನು ಆ ತೀರ್ಥದ ಮಹಿಮಾ ವರ್ಣನೆ. ನದಿಯ ಒಂದು ಪ್ರದೇಶಕ್ಕೆ ‘ಮಣಿಕರ್ಣಿಕಾ’ ಎಂಬ ಹೆಸರು ಬಂದುದಕ್ಕೆ ಕಾರಣ ನಿರೂಪಣೆ. ಗಂಗಾನದಿಗೆ ಅನೇಕ ನಾಮಗಳು ಬಂದುದಕ್ಕೆ ಕಾರಣಗಳು. ಢುಂಢಿರಾಜನು ವಿಶ್ವರೂಪವನ್ನು ಧರಿಸಿ ಆ ಪಟ್ಟಣದಲ್ಲಿ ನೆಲಸಿದ ವರ್ಣನೆ. ಏಕಾತ್ಮಭಾವದ ಮಹಿಮೆ. ಭೇದವನ್ನು ಭಾವಿಸುವ ಭ್ರಾಂತರಿಗೆ ಉಂಟಾಗುವ ದುಷ್ಫಲಗಳು. ಇದಕ್ಕೆ ನಿದರ್ಶನವಾಗಿ ಭಸ್ಮಾಸುರಪುತ್ರನಾದ ದುರಾಸದನ ತಪೋವರ್ಣನೆ. ಇವನಿಗೆ ಪರಮೇಶ್ವರನು ಪ್ರತ್ಯಕ್ಷನಾದುದು. ಭಗವದ್ರೂಪದ ವರ್ಣನೆ. ದೈತ್ಯಕೃತ ಪರಮೇಶ್ವರನ ಸ್ತುತಿ. ‘ತನಗೆ ಯಾರಿಂದಲೂ ಮರಣ ಬಾರದಿರಲಿ’ ಎಂದು ರಕ್ಕಸನು ವರವನ್ನು ಕೇಳಿದ್ದು. ‘ಮಹಾಗಣೇಶನ ಹೊರತು, ಮತ್ತಾರಿಂದಲೂ ನಿನಗೆ ಭಯ ಬಾರದಿರಲಿ, ವಿನಾಯಕನಿಂದ ನೀನು ನಿಗೃಹೀತನಾಗುವೆಯಾದರೂ, ಕೊನೆಗೆ ಅವನಿಂದಲೇ ಮುಕ್ತಿಯನ್ನು ಪಡೆಯುವೆ’ ಎಂದು ವರವನ್ನಿತ್ತು, ಶಿವನು ಅಂತರ್ಹಿತನಾದುದು. ದುರಾಸದನು ಸಂತೋಷದಿಂದ ಮನೆಗೆ ಹಿಂದಿರುಗಿದುದು. ಫಲಶ್ರುತಿ.
೩೯ನೆಯ ಅಧ್ಯಾಯ
ವರಗರ್ವದಿಂದ ಮತ್ತನಾದ ರಾಕ್ಷಸನು ಮನಸ್ವಿಯಾಗಿ ಜನರನ್ನು ಹಿಂಸಿಸಿದುದು. ರಾಕ್ಷಸನ ಜೈತ್ರಯಾತ್ರೆ. ಅವನ ವೇಷ — ಭೂಷಣಗಳ, ಬಲ — ದರ್ಪಗಳ ಹಾಗೂ ಅವನ ಐಶ್ಚರ್ಯ ಮತ್ತು ಸೈನ್ಯಗಳ ವಿಭವದ ವರ್ಣನೆ. ರಾಕ್ಷಸನು ಭೂಮಂಡಲವನ್ನೆಲ್ಲ ವಶಪಡಿಸಿಕೊಂಡು, ಇಂದ್ರನ ಮೇಲೆ ಯುದ್ಧಕ್ಕೆ ಹೋದುದು. ವರದ ಮಹಿಮೆಯನ್ನು ಕೇಳಿ ತಿಳಿದಿದ್ದ ಪುರಂದರನು, ರಾಜ್ಯ — ಕೋಶಗಳನ್ನು ಅಲ್ಲಲ್ಲೇ ತ್ಯಜಿಸಿ ಯಾವುದೋ ಒಂದು ಗುಹೆಯಲ್ಲಿ ನಿರಾಶನಾಗಿ ಅಡಗಿದುದು. ಮಹಾವಿಷ್ಣು ವೈಕುಂಠವನ್ನು ಬಿಟ್ಟು ಕ್ಷೀರಸಾಗರಕ್ಕೆ ಹೋಗಿ ನಿಲೆಸಿದುದು. ಶಂಕರನು ಕೈಲಾಸದಿಂದ ಕಾಶಿಗೆ ಬಂದು ವಾಸಿಸಿದುದು. ಬ್ರಹ್ಮದೇವನೂ ಸಹ ಶಿವನನ್ನು ಹಿಂಬಾಲಿಸಿದುದು. ಶೂನ್ಯವಾದ ಆಯಾ ಲೋಕಗಳ ಅಧಿಕಾರಸ್ಠಾನಗಳಲ್ಲೆಲ್ಲ ದುರಾಸದನು ರಾಕ್ಷರನ್ನೂ, ಕೆಲವೆಡೆ ತನ್ನ ಇತರ ಅನುಯಾಯಿಗಳನ್ನೂ ನಿಯಮಿಸಿ, ಬಹ ದರ್ಪದಿಂದ ರಾಜ್ಯವನ್ನಾಳಿದುದು. ದುರಾಸದನು ತನ್ನ ತಂದೆ; ಭಸ್ಮಾಸುರನು ರಾಜ್ಯವಾಳಿದ ‘ಮುಕುಂದಪುರ’ ವನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡುದು. ಭಸ್ಮಾಸುರನ ಚರಿತ್ರೆ, ಭಸ್ಮಾಸುರನ ದೌಷ್ಟ್ಯ, ಕೊನೆಗೆ ನಾರಾಯಣನು ಮೋಹಿನೀ ರೂಪವನ್ನು ಧರಿಸಿ, ರಾಕ್ಷಸನು ತನ್ನಿಂದಲೇ ತಾನು ಭಸ್ಮವಾಗಿ ಹೋಗುವಂತೆ ಮಾಡಿ, ಅವನನ್ನು ನಿಗ್ರಹಿಸಿದುದು. ದುಷ್ಟನಾದ ಭಸ್ಮಾಸುರನನ್ನು ಕೊಂದ ಮೇಲೆ ಮುಕುಂದನು ಮೋಹೀನೀ ರೂಪದಿಂದ ಆ ನಗರದಲ್ಲೇ ನೆಲೆಸಿದನು. ಇದಕ್ಕಾಗಿ ಆ ಪಟ್ಟಣಕ್ಕೆ ‘ಮುಕುಂದಪುರ’ ಎಂಬ ಹೆಸರು ಉಂಟಾದುದು. ದುರಾಸದನು ಒಡ್ಡೋಲಗದಲ್ಲಿ ಕುಳಿತಾಗ, ಸಭಿಕರ ಎದುರು ತನ್ನ ಪ್ರತಾಪವನ್ನು ಕೊಚ್ಚಿಕೊಂಡುದು. ಆಗ ಸಭಿಕರು ‘ಕಾಹೀನಗರವನ್ನು ಗೆಲ್ಲದಿದ್ದರೆ, ನಿನ್ನ ಪೌರುಷವು ವ್ಯರ್ಥ’ ಎಂದು ಚುಚ್ಚಿ ಅವನನ್ನು ರಣೊತ್ಸಾಹಿಯನ್ನಾಗಿ ಮಾಡಿದುದು. ಇದನ್ನು ಕೇಳಿದ ದುರಾಸದನು ಪದಾಹತ ಫಣಿಯಂತಾಗಿ ಸೈನ್ಯದೊಡನೆ ಯುದ್ಧಕ್ಕೆ ಹೊರಟುದು. ಇವನ ಮುತ್ತಿಗೆಯಿಂದ ಕಾಶೀನಗರಿಯು ಪ್ರಕ್ಷುಬ್ಧವಾದುದು. ಶಿವನು ಇವನನ್ನು ತನ್ನ ಭಕ್ತನೆಂಭ ಮಮತೆಯಿಂದ ತಡೆಯದಿದ್ದು, ತಾನು ‘ಕೇದಾರ ಕ್ಷೇತ್ರಕ್ಕೆ’ ತೆರಳಿದುದು. ಅನಂತರ ರಾಕ್ಷಸನು ಕಾಶೀಯಲ್ಲಿ ನಡೆಸಿದ ದುರಾಡಳಿತದ ವರ್ಣನೆ. ‘ತನ್ನನ್ನೇ ದೈವವೆಂದು ಅರ್ಚಿಸದಿದ್ದರೆ, ಅಂಥವರನ್ನು ನಿಗ್ರಹಿಸುವುದಾಗಿ ರಾಕ್ಷಸನು ಜನರನ್ನು ಎಚ್ಚರಿಸಿ ನಿರ್ಬಂಧಿಸಿದುದು. ದುಷ್ಟನ ದುರಾಡಳಿತದಿಂದ ಧರ್ಮವು ನಶಿಸಿ, ಅಧರ್ಮವು ವೃದ್ಧಿಯಾದುದು.
೪೦ನೆಯ ಅಧ್ಯಾಯ
ಅನೇಕ ಕಾಲ ಕಳೆದ ಬಳಿಕ, ದುಷ್ಟ ರಾಕ್ಷಸನಿಂದ ತಮಗುಂಟಾಗುತ್ತಿದ್ದ ಹಿಂಸೆಯನ್ನು ತಡೆಯಲಾರದೇ ದೇವತೆಗಳೂ, ದೇವರ್ಷಿಗಳು ಎಲ್ಲರೂ ಸೇರಿ ಕೇದಾರ ಕ್ಷೇತ್ರಕ್ಕೆ ಬಂದು, ಪರಶಿವನೆದುರು ತಮಗೊದಗಿದ ದುರವಸ್ಥೆಯ ಸ್ಥಿತಿಯನ್ನು ತೋಡಿಕೊಂಡಿ, ತಮ್ಮನ್ನು ಹೇಗಾದರೂ ಮಾಡಿ ರಕ್ಷಿಸಬೇಕೆಂದು ಬೇಡಿದುದು. ಶಿವನ ಇಂಗಿತದಂತೆ ಬ್ರಹ್ಮದೇವನು ಉತ್ತರಿಸುತ್ತ, ‘ರಾಕ್ಷಸನು ಶಿವದತ್ತವರೋನ್ಮತ್ತನಾದುದರಿಂದ ಅದರ ಅವಧಿಯು ಮುಗಿಯುವವರೆಗೂ ಯಾರಿಂದಲೂ ಅವನನ್ನು ಕೊಲ್ಲಲಾಗುವುದಿಲ್ಲವೆಂದೂ, ಅವನನ್ನು ಕೊಲ್ಲಬೇಕಾದರೆ ಪುರಾಣಪುರುಷನಾದ ವಿಘ್ನಹರನು ಪಾರ್ವತೀ ಗರ್ಭದಲ್ಲಿ ಜನಿಸಿದರೆ ಮಾತ್ರ ಸಾಧ್ಯವೆಂದೂ ಹೇಳಿ, ಇದಕ್ಕಾಗಿ ಪರಮೇಶ್ವರಿಯನ್ನು ಸ್ತುತಿಸುವಂತೆ ಸೂಚಿಸಿದುದು. ಅದನ್ನು ಕೇಳಿ ಎಲ್ಲರೂ ಸಂತೋಷಿಸಿ, ಪಾರ್ವತೀದೇವಿಯನ್ನು ಸುತಿತಿದುದು. ದೇವಿಯು ಆಬಿರ್ಭವಿಸಿ, ‘ವರವನ್ನು ಬೇಡಿರಿ’ ಎಂದು ಹೇಳಲು, ಬ್ರಹ್ಮನು ತಿಳಿಸಿದ ಸಂಗತಿಯನ್ನೆಲ್ಲ ದೇವರ್ಷಿಗಳು ಹೇಳಿದುದು. ದೇವಿಯು ಇದನ್ನು ಕೇಳಿ, ಗಣಪತಿಯನ್ನು ಒಮ್ಮನಸ್ಸಿನಿಂದ ಪ್ರಾರ್ಥಿಸಬೇಕೆಂದು ಹೇಳಿ, ತಾನೂ ಅವನನ್ನು ಬಣ್ಣಿಸಿದುದು. ದೇವರ್ಷಿಗಳು ಗಣಪತಿಯನ್ನು ಸ್ತುತಿಸಿದುದು. ‘ನೀವು ಹೆದರಬೇಕಾಗಿಲ್ಲ, ನಿಮ್ಮ ಪ್ರಾರ್ಥನೆಯಂತೆ ಭಯಂಕರಾಕಾರನಾದ ದುರಾಸದನನ್ನು ನಾನು ನಿಗ್ರಹಿಸುವೆನು’ ಎಂದು ದೇವನು ನಭೋವಾಣಿಯ ಮೂಲಕ ತಿಳಿಸಿದುದು. ದೇವತೆಗಳು ಪುನಃ ಶಂಕರನ ಬಳಿಗೆ ಬಂದು, ‘ನಭೋವಾಣಿಯನ್ನು ನುಡಿದವರಾರೋ ತಿಳಿಯದಲ್ಲ? ಶಂಕರನು ತಪೋನಿರತನಾಗಿರುವುದರಿಂದ ಯಾರು ನಮಗೆ ಇದರ ರಹಸ್ಯಾರ್ಥವನ್ನು ಹೇಳಬಲರು? ಎಂದು ಪಾರ್ವತಿಯನ್ನು ಪ್ರಶ್ನಿಸಲು, ನೀವು ಹೆದರಬೇಡಿ, ದುರಾಸದನು ಈಗಲೇ ಸತ್ತನೆಂದು ತಿಳಿಯಿರಿ’ ಎಂದು ಆಶ್ವಾಸನವನ್ನಿತ್ತು, ಕೋಪದಿಂದ ಬಿಸಿಯುಸಿರನ್ನು ಬಿಡಲಾರಂಭಿಸಿದುದು. ದೇವಿಯ ಬಾಯಿ, ಮೂಗು, ಕಣ್ಣು ಇವುಗಳಿಂದೆಲ್ಲ ಆತ್ಮತೇಜವು ಹೊರಹೊಮ್ಮಿದುದು. ತೇಜದ ವರ್ಣನೆ. ಹತ್ತು ಬಾಹುಗಳಿಂದ ಬಿರಾಜಿತವಾದ ಗಣಪತಿಯ ಭವ್ಯ ಮೂರ್ತಿಯು ಆವಿರ್ಭವಿಸಿದುದು. ಆ ಮಹಾಮೂರ್ತಿಯ ವರ್ಣನೆ. ದೇವರ್ಷಿಗಳು ದೇವನನ್ನು ಪ್ರಾರ್ಥಿಸಿದುದು. ಪಾರ್ವತೀದೇವಿಕೃತ ದೇವಸ್ತುತಿ. ಅನಂತರ ದೇವಿಯು ವಿನಾಯಕನನ್ನು ಪೂಜಿಸಿ ಅವನಿಗೆ ‘ವಕ್ರತುಂಡ’ ಎಂದು ಹೆಸರನ್ನಿಟ್ಟುದು.
೪೧ನೆಯ ಅಧ್ಯಾಯ
೪೨ನೆಯ ಅಧ್ಯಾಯ
ಎದುರಾಳಿಯಾದ ವಕ್ರತುಂಡನು ಬಹಳ ಪರಾಕ್ರಮಶಾಲಿ ಎಂದು ತಿಳಿದರೂ ಸಹ ಧೈರ್ಯವನ್ನವಲಂಬಿಸಿ, ರಾಕ್ಷಸನು ತನ್ನ ದೈವವಾದ ಪರಶಿವನನ್ನು ಸ್ಮರಿಸಿ, ಅಸ್ತ್ರಗಳಿಂದ ಪುನಃ ಯುದ್ಧವನ್ನಾರಂಭಿಸಿದುದು. ಕದನದ ಬಿರುಸುತನದ ವರ್ಣನೆ. ಅಷ್ಟರಲ್ಲಿ ದುರಾಸದನು ಶ್ರಾಂತನಾಗಿ, ಮಂತ್ರಿಗಳ ಮೇಲೆ ಯುದ್ಧದ ಹೊಣೆಯನ್ನು ಹೊರಸಿ, ತಾನು ಭೋಜನಕ್ಕಾಗಿ ಮನೆಗೆ ತೆರಳಲು; ಅಮಾತ್ಯರೇ ಯುದ್ಧ ಸನ್ನದ್ಧರಾದುದು, ದೇವನು ತನ್ನ ರೂಪವನ್ನು ೫೬ ಬಗೆಯಾಗಿ ರೂಪಿಸಿ, ಶತ್ರುಗಳನ್ನು ಎದುರಿಸಿದುದು. ದೇವನ ಭಿನ್ನ ಭಿನ್ನ ಮೂರ್ತಿಗಳ ವರ್ಣನೆ. ಪುನಃ ನಡೆದ ಯುದ್ಧದ ವರ್ಣನೆ. ಭೋಜನಮಾಡಿ ಹಿಂದಿರುಗಿ ಬಂದ ದುರಾಸದನು ತನ್ನ ಸೈನ್ಯವೆಲ್ಲ ನಿರ್ನಾಮವಾಗಿರುವುದನ್ನು ನೋಡಿ, ವರಕೊಡುವಾಗ ಕಪರ್ದಿಯು ಹೇಳಿದ ಮಾತುಗಳನ್ನು ಸ್ಮರಿಸಿಕೊಂಡು ತನಗೆ ಮೆತ್ಯುವಾಗುವನೆಂದು ಹೇಳಿದ ಬಾಲಕ ಇವನೇ ಇರಬೇಕೆಂದು ನಿಶ್ಚಯಿಸಿ, ತಾನು ಏಕಾಕಿಯಾದುದರಿಂಡ ಹೋರಾಡಿ ಪ್ರಯೋಜನವಿಲ್ಲವೆಂದು ತೋರಲು ಓಡಿಹೋದುದು. ಇದನ್ನು ನೋಡಿ ದೇವನು ತಾನು ವಿರಾಡ್ರೂಪವನ್ನು ಧರಿಸಿ, ದುರಾಸದನು ಎಷ್ಟು ದೂರ ಓಡಿದ್ದರೂ ತನ್ನ ದೀರ್ಘ ಕೈಗಳಿಂದ ಸಮೀಪಕ್ಕೆ ಎಳೆದುಕೊಂಡು ತನ್ನ ಒಂದು ಕಾಲನ್ನು ಅವನ ತಲೆಯ ಮೇಲಿಟ್ಟು ಅದುಮಿದುದು. ಮತ್ತೊಂದು ಪಾದವನ್ನು ಕಾಶೀನಗರಿಯಲ್ಲಿರಿಸಿದುದು. ‘ಶಿವನು ನಿನ್ನನ್ನು ವರಗಳಿಂದ ಅನುಗ್ರಹಿಸಿದ ಕಾರಣ ಕೊಲ್ಲದೆ ಬಿಟ್ಟಿರುವೆನು, ನೀನು ಈ ಕಾಶೀನಗರದಲ್ಲೇ ನೆಲೆಸಿ, ಇಲ್ಲಿ ದುರಾತ್ಮರಾರೂ ಬಾರದಂತೆ ನೋಡಿಕೋ, ಮತ್ತು ಅಂಥವರ ನೆರಳೇನಾದರೂ ಇಲ್ಲಿ ಬಿದ್ದರೂ ಅವರನ್ನು ನಿಗ್ರಹಿಸು. ಈ ಹೊಣೆ ನಿನ್ನದು.’ ಎಂದು ಹೇಳಿ, ಅವನನ್ನು ನಗರ ರಕ್ಷಣೆಗೆ ನಿಯೋಜಿಸಿದುದು. ‘ಸರ್ವದಾ ನೀನು ನನ್ನ ತಲೆಯ ಮೇಲೆ ಹೀಗೆಯೇ ನಿನ್ನ ಚರಣವನ್ನಿಟ್ಟುಕೊಂಡು ಇರಬೇಕೆಂದು’ ರಾಕ್ಷಸನು ವಿನಯದಿಂದ ದೇವನಲ್ಲಿ ಪ್ರಾರ್ಥಿಸಿ, ದೇವನನ್ನು ಒಪ್ಪಿಸಿದುದು. ಭೂ — ಭಾರಬಿಳಿದಂತಾಗಲು ಪರಮ ಸಂತುಷ್ಟರಾದ ದೇವತೆಗಳು ದೇವನ ಮೇಲೆ ಪೂಮಳೆಗರೆದು, ತಮ್ಮ ತಮ್ಮ ಸ್ಥಾನಗಳಿಗೆ ತೆರಳು, ನುನಿಗಳೂ ಸ್ವಸ್ವಾಶ್ರಮಗಳಿಗೆ ಹಿಂದಿರುಗಿದುದು. ಇತರರನೇಕರು ದೇವನನ್ನು ಭಕ್ತಿಯಿಂದ ಅರ್ಚಿಸಿ, ಸ್ವಾಭೀಷ್ಟಗಳನ್ನು ಪಡೆದುದು. ತುಂಡನಗರದಲ್ಲಿ ದೇವನು ಏಕಪಾದದಿಂದ ನೆಲೆಸಿ, ತಾನು ಸ್ವೀಕರಿಸಿದ ತಾತ್ಕಾಲಿಕ ವಿರಾಡ್ರೂಪವನ್ನು ಉಪಸಂಹರಿಸಿದುದು. ಫಲಶ್ರುತಿ.
೪೩ನೆಯ ಅಧ್ಯಾಯ
೪೪ನೆಯ ಅಧ್ಯಾಯ
೪೫ನೆಯ ಅಧ್ಯಾಯ
ದೇವತೆಗಳೂ, ಮುನಿಗಳು ಮಂದರಗಿರಿಗೇಕೆ ಹೋದರು? ಸರ್ವಸಮೃದ್ಧವೂ, ರಮಣೀಯವೂ ಆದ ಕಾಶೀನಗರವನ್ನು ಪರಶಿವನೇಕೆ ತ್ಯಜಿಸಿದನು? ಈ ಸಂಶಯವನ್ನು ಪರಿಹರಿಸಬೇಕೆಂದು ಕೀರ್ತಿಯು ಮುನಿಯನ್ನು ಪರಿಹರಿಸಬೇಕೆಂದು ಕೀರ್ತಿಯು ಮುನಿಯನ್ನು ಕೇಳಿದುದು. ಮುನಿಯು ಕಥೆಯನ್ನು ಮುಂದುವರಿಸಿ, ಹಿಂದೆ ಉಂಟಾದ ಅನಾವೃಷ್ಟಿಯನ್ನೂ, ತನ್ನಿಮಿತ್ತ ಪ್ರಜೆಗಳು ನಾಶಹೊಂದಿದುದನ್ನೂ ಕಂಡು ಮರೀಚಿಯು ಮಂದರಗಿರಿಯಲ್ಲಿ ಕುಳಿತು ಶಿವನ ಪ್ರೀತಿ ಸಂಪಾದನೆಗಾಗಿ ಘೋರತಪೋನಿರತನಾದುದನ್ನು ಸ್ಮರಿಸಿದ ದೇವತೆಗಳು ಮರೀಚೆಗೆ ವರವನ್ನನುಗ್ರಹಿಸಲು ಆ ಪ್ರದೇಶಕ್ಕೆ ತೆರಳಬೇಕೆಂದು ಶಿವನನ್ನು ಪ್ರಾರ್ಥಿಸಿದುದು. ಮಹಾದೇವನು ಮರೀಚಿಯ ಬಳಿಗೆ ತೆರಳಿ ತಪಃಕ್ಲೇಶದಿಂದ ಮುಮೂರ್ಷುವಾಗಿದ್ದ ಆ ಮುನಿಗೆ ಸಾರೂಪ್ಯ ಮುಕ್ತಿಯನ್ನು ಅನುಗ್ರಹಿಸಿ, ಸಕಲ ಮರ್ಯಾದೆಗಳೊಡನೆ ಅವನನ್ನು ತನ್ನ ಲೋಕಕ್ಕೆ ಕಳಿಸಿಕೊಟ್ಟು, ತಾನು ಮಂದರಪರ್ವತದ ಸಾನು ಪ್ರದೇಶದಲ್ಲಿ ನೆಲೆಸಿದುದು. ದೀವೋದಾಸನಲ್ಲಿ ದೋಷವನ್ನು ಹುಡುಕಿ ತಿಳಿಸಲು, ದೇವತೆಗಳನ್ನು ಶಿವನು ಕಾಶೀನಗರಿಗೆ ಕಳಿಸಿದುದು. ರಾಜನಲ್ಲಿ ದೋಷವನ್ನು ಹುಡುಕುವುದಕ್ಕೆ ಬಂದವರೆಲ್ಲರೂ ರಾಜನ ಸದ್ಗುಣಗಳಿಗೆ ಲುಬ್ಧರಾಗಿ ಅಲ್ಲಿಯೇ ನೆಲೆಸಿದುದು. ಆ ರಾಜ್ಯದ ನಾಗರಿಕರ ಧರ್ಮಶ್ರದ್ಧೆಗಳ ಹಾಗೂ ಸರ್ವಸಮೃದ್ಧಿಯ ವರ್ಣನೆ. ರಾಜನ ನ್ಯಾಯ ನೈಷ್ಠುರ್ಯ. ಹೆಚ್ಚು ಕಾಲ ಕಾಶೀನಗರದ ವಿಯೋಗವನ್ನು ಸಹಿಸಲಾರದೇ, ರಾಜನ ಧರ್ಮಕಾರ್ಯಗಳಲ್ಲಿ ವಿಘ್ನವನ್ನುಂಟುಮಾಡಿ ಬರಲು ಶಿವನು ಭೈರವರನ್ನು ಕಳಿಸಿದುದು. ಅದು ವಿಫಲವಾಗಲು, ಆದಿತ್ಯರನ್ನೂ, ಯೋಗಿನಿಯರನ್ನೂ, ದುರ್ಗಿಯನ್ನೂ, ಅಷ್ಟದಿಕ್ಪಾಲಕರನ್ನೂ ಕೊನೆಗೆ ಋಷಿಗಳನ್ನೂ ಕಳಿಸಿ, ಕಾರ್ಯವನ್ನು ಸಾಧಿಸಲಾರದೇ ಬಹಳ ಚಿಂತಿಸಿದುದು.
೪೬ನೆಯ ಅಧ್ಯಾಯ
೪೭ನೆಯ ಅಧ್ಯಾಯ
ಕೃತ್ರಿಮ ಜ್ಯೋತಿಷಿಯ ವಚನಗಳನ್ನು ರಾಜನು ಕೇಳಿ ಅದರಂತೆ ನಡೆಯುವುದಾಗಿ ವಚನವಿತ್ತುದು. ಬುದ್ಧನು ರಾಜಧಾನಿಗೆ ಬಂದು ರಾಜನನ್ನೂ, ನಾಗರಿಕರನ್ನೂ ವ್ಯಾಮೋಹಗಳಿಸಿ, ಚಾರ್ವಾಕ ದೀಕ್ಷೆಯನ್ನು ಕೊಟ್ಟು ನಾಸ್ತಿಕರನ್ನಾಗಿ ಮಾಡಿದುದು. ಸ್ತ್ರೀಯರು, ಬ್ರಾಹ್ಮಣರು, ಇವರು ತಮ್ಮ ನೀತಿಯ ಮಾರ್ಗವನ್ನು ಸರ್ವಾತ್ಮನಾ ತ್ಯಜಿಸಿ, ಧರ್ಮಭ್ರಷ್ಟರಾದುದು. ಅನಂತರ ಬುದ್ಧನು ರಾಜನನ್ನು ಕುರಿತು ‘ಕಾಶೀ ನಗರವು ಶಿವನಿಗೆ ಸೇರಿದುದೆಂದೂ, ಎಲ್ಲಿಯವರೆಗೆ ನೀನು ಧರ್ಮಾತ್ಮನಾಗಿದ್ದೆಯೋ, ಅಲ್ಲಿಯವರೆಗೂ ಈ ನಗರದಲ್ಲಿ ರಾಜ್ಯಭಾರವನ್ನು ಮಾಡಿದೆ ಎಂದೂ, ಈಗ: ನೀನು ಧರ್ಮಮಾರ್ಗವ್ಯುತನಾದುದರಿಂದ ಇಲ್ಲಿರಲು ಅನರ್ಹನಾದೆ, ಎಂದೂ ತಿಳಿಸಿ, ತನ್ನ ದಿವ್ಯರೂಪವನ್ನು ರಾಜನಿಗೆ ತೋರಿಸಿ, ರಾಜ್ಯವನ್ನು ತ್ಯಜಿಸಿ, ತಪಸ್ಸುಮಾಡೆಂದು ಬೋಧಿಸಿದುದು. ರಾಜನು ಇದುವರೆಗೆ ನಡೆದುದೆಲ್ಲವನ್ನೂ ಧ್ಯಾನ ದೃಷ್ಟಿಯಿಂದ ತಿಳಿದು, ರಾಜ್ಯಸೂತ್ರಗಳನ್ನೂ ಬುದ್ಧನಿಗೆ ಒಪ್ಪಿಸಿದುದು. ಬುದ್ಧನ ಅಂತರ್ಧಾನ. ಬುದ್ಧನು ತನ್ನ ಆಶ್ರಮಕ್ಕೆ ತೆರಳಿ ‘ವಾರಾಣಾಸಿಯನ್ನು ಸ್ವೀಕರಿಸೆಂದು’ ಪರಶಿವನಿಗೆ ದೂತರ ಮೂಲಕ ಹೇಳಿಕಳಿಸಿದುದು. ದಿವೋದಾಸನು ರಾಜವಿನ್ಹೆಗಳನ್ನೆಲ್ಲ ತ್ಯಜಿಸಿ, ಒಂದು ಪಾವನ ಪ್ರದೇಶದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ‘ಪರಮೇಶ್ವರನ ದರ್ಶನ ಎಂದಿಗೆ ದೊರೆವುದೋ’ ಎಂದು ನಿರೀಕ್ಷಿಸುತ್ತಲಿದ್ದುದು.
೪೮ನೆಯ ಅಧ್ಯಾಯ
ದಿವೋದಾಸನು ಬುದ್ಧನ ಉಪದೇಶದಿಂದ ರಾಜ್ಯವನ್ನು ಪರಿತ್ಯಜಿಸಿದ ಸಂಗತಿಯನ್ನು ತಿಳಿದು, ದೇವನು ತನ್ನ ಜ್ಯೋತಿರ್ವಿದನ ರೂಪವನ್ನು ತ್ಯಜಿಸಿ, ಸ್ವರೂಪವನ್ನು ತಳೆದು ವಾರಾಣಸಿಗೆ ಬೇಗನೆ ಬರುವಂತೆ ಹೇಳಿ ಕರೆದು ತರಲು, ಒಬ್ಬ ದೂತನನ್ನು ಅಟ್ಟಿದುದು. ಶಂಕರನು ಆನಂದದಿಂದ ವೃಷವನ್ನು ಏರಿ, ಮಹಾವಿಭವದೊಡನೆ ಕಾಶಿಗೆ ಬಂದು, ತಪೋನಿರತನಾಗಿದ್ದ ದೀವೋದಾಸನನ್ನು ತನ್ನ ದರ್ಶನದಿಂದ ಕೃತಾರ್ಥನನ್ನಾಗಿ ಮಾಡಿ, ಢುಂಢಿರಾಜನನ್ನು ಸ್ತುತಿಸಿದುದು. ‘ಪ್ರತಿ ವರ್ಷದ ಮಾಘಮಾಸ ಚತುರ್ಥೀ ಮಂಗಲವಾರ ಚಂದ್ರೋದಯಕಾಲದಲ್ಲಿ ಯಾರು ನಿನ್ನನ್ನು ಭಕ್ತಿ — ಶ್ರದ್ಧೆಗಳಿಂದ ಅಪೊಪಾದಿಗಳನ್ನು ನಿವೇದಿಸಿ ಪೂಜಿಸುವರೋ, ಅವರ ಇಷ್ಟರ್ಥಗಳನ್ನೆಲ್ಲ ಅನುಗ್ರಹಿಸುತ್ತ, ನೀನು ಇಲ್ಲಿಯೇ ನೆಲೆಸು. ನಿನ್ನ ಸ್ತೋತ್ರವನ್ನು ಪಠಿಸುವವರು ಭುಕ್ತಿ — ಮುಕ್ತಿಗಳನ್ನು ಪಡೆಯಲಿ. ನೀನು ‘ಢುಂಢಿ’ ಎಂಬ ಶುಭನಾಮದಿಂದ ಇಲ್ಲಿ ನೆಲೆಸು, ಎಂದು ಹೇಳಿ, ಗಂಡಕೀಶಿಲೆಯಿಂದ ಗಣಪತಿಯ ಮೂರ್ತಿಯನ್ನು ನಿರ್ಮಿಸಿದಿವ್ಯವಾದ ಒಂದು ಮಂದಿರದಲ್ಲಿ ಸ್ಥಾಪಿಸಿ, ತನ್ನ ನಿಲಯವನ್ನು ಪ್ರವೇಶಿಸಿದುದು. ದೇವತೆಗಳೂ ತಮ್ಮ ತಮ್ಮ ಆವಾಸಗಳಿಗೆ ತೆರಳಿದುದು. ಅನಂತರ ಶ್ರೀ ಶಂಕರನು ದಿವೋದಾಸನಿಗೆ ಮುಕ್ತಿಯನ್ನು ಅನುಗ್ರಹಿಸಿದುದು. ಮಹಾವಿಷ್ಣು ಬುದ್ಧನ ರೂಪವನ್ನು ಧರಿಸಿ, ದಿವೋದಾಸನನ್ನು ವಿಮೋಹಗೊಳಿಸಿದ್ದು, ಒಂದು ವಿಧವಾಗಿ ಒಳ್ಳೆಯದಾಗಿಯೇ ಪರಿಣಮಿಸಿದುದು. ಇಷ್ಟನ್ನೆಲ್ಲ ಕೀರ್ತೀದೇವಿಗೆ ತಿಳಿಸಿ, ಗೃತ್ಸಮದ ಮುನಿಯು ತನ್ನ ಆಶ್ರಮಕ್ಕೆ ತೆರಳಿದುದು. ನರ — ನಾರಿಯರೆಲ್ಲರೂ ಪ್ರತಿ ದಿನ ತಪ್ಪದೇ ಢುಂಢಿರಾಜನನ್ನು ಸೇವಿಸಿದುದು. ಕೀರ್ತೀದೇವಿಯು ಈ ಎಲ್ಲ ವಿಭವವನ್ನೂ ಕಂಡು, ಮಾಘ ಶುದ್ಧ ಚತುರ್ಥೀ ಮಂಗಳವಾರದ ದಿವಸ, ಮಹಾ ಗಣಪತಿಯ ವ್ರತವನ್ನು ಶ್ರದ್ಧಾ — ಭಕ್ತಿಗಳಿಂದ ಆಚರಿಸಿದುದು. ಆಗ ಅವಳು ವಿಪ್ರರಿಗಿತ್ತ ದಾನಾದಿಗಲ ವರ್ಣನೆ. ಢುಂಢಿರಾಜನು ರಾಜಪತ್ನೀ — ಪುತ್ರರಿಗೆ ದರ್ಶನವಿತ್ತುದು. ರಾಜಪುತ್ರ — ರಾಣಿಯರು ಢುಂಢಿಯನ್ನು ಅನನ್ಯವಾಗಿ ಸ್ತುತಿಸಿದುದು. ದೇವನ ರೂಪದ ವರ್ಣನೆ. ಪ್ರಸನ್ನನಾದ ಗಣಪನು ವರವನ್ನು ಬೇಡೆಂದು ಕೀರ್ತಿಗೆ ಕಥಿಸಿದುದು. ಇದರಿಂದ ಸಂತುಷ್ಟಳಾದ ಕೀರ್ತಿಯು ದೇವನನ್ನು ತಾತ್ತ್ವಿಕ ರೂಪನೆಂದು ಬಣ್ಣಿಸಿ, ತನಗೆ ದೇವನ ಚರಣಗಳಲ್ಲಿ ಭಕ್ತಿಯನ್ನೂ, ತನ್ನ ಕುಮಾರನಿಗೆ ದೀರ್ಘಾಯುಷ್ಯ ಕೀರ್ತಿಗಳನ್ನೂ ಅನುಗ್ರಹಿಸೆಂದು ಯಾಚಿದುದು. ದೇವನು ಅವನ್ನು ಸಂತೊಷಗಿಂದ ಅನುಗ್ರಹಿಸಿ, ತನ್ನ ಕೈಯ್ಯಲ್ಲಿ ಧರಿಸಿದ್ದ ಪರಶುವನ್ನು ಕೀರ್ತಿಯ ಮಗನಿಗಿತ್ತು. ಅವನನ್ನು ‘ಪರ್ಶುಬಾಹು’ ಎಂದು ಕರೆದು, ತಾನು ಅಂತರ್ಹಿತನಾದುದು.
೪೯ನೆಯ ಅಧ್ಯಾಯ
ವರವನ್ನು ಪಡೆದ ರಾಣಿಯು ದೇವನು ಅಂತರ್ಹಿತನಾದನಂತರ ಉಳಿದ ರಾತ್ರಿಯನ್ನು ದೇವತಾಧ್ಯಾನದಲ್ಲೇ ನೂಕಿ, ಪ್ರಭತದಲ್ಲೇ ಎದ್ದು, ಸ್ನಾನಮಾಡಿ ಪುನಃ ಢುಂಢಿರಾಜನನ್ನು ಪೂಜಿಸಿದಳು. ದೇವದರ್ಶನ, ಅಂತರ್ಧಾನಗಳಿಂದ ಕೀರ್ತಿಯ ಮನಸ್ಸು ಹರ್ಷ — ವಿಷದಗಳಿಂದ ಹೊಯ್ದಾಡಿದುದು. ರಾಣಿಯು ತನ್ನ ನಗರಿಗೆ ಪ್ರವೇಶಿಸುವಾಗ ರಾಜನು ಏರ್ಪಡಿಸಿದ ನಗರಾಲಂಕಾರ ವರ್ಣನೆ. ರಾಜನು ಪತ್ನೀಪುತ್ರರನ್ನು ಸ್ವಾಗತಿಸಲು ಸ್ವತಃ ಬಂದು, ಮಗನನ್ನು ಆಲಿಂಗಿಸಿ, ಪತ್ನಿಯನ್ನು ಪ್ರಿಯವಾಕ್ಯಗಳಿಂದ ಸಂತೈಸಿದುದು, ರಾಜ – ರಾಣಿಯರು ಅಂದು ರಾತ್ರಿ ಮದನಕೇಳೀನಿರತರಾದುದು. ಕೆಲ ಕಾಲ ಕಳೆದ ಮೇಲೆ ಸುಗುಣನಿಧಿಯಾದ ಕುಮಾರನಿಗೆ ಪಟ್ಟಗಟ್ಟಿ, ಗೋ, ಹಿರಣ್ಯ ಭೂಧಾನಗಳನ್ನು ಯಥೇಚ್ಛವಾಗಿ ವಿತರಿಸಿ, ತಾನು ಪತ್ನಿಯೊಡನೆ ವನವಾಸಕ್ಕಾಗಿ ಹೊರಟುಹೋದುದು. ಪರಶುಬಾಹುವಿನ ರಾಜ್ಯಾಡಳಿತದ ವರ್ಣನೆ. ಪರಶುಬಾಹು ಚಿರಕಾಲ ಪ್ರಜೆಗಳನ್ನು ಧರ್ಮದಿಂದ ಆಳಿ, ಪುತ್ರನಿಗೆ ಅಶಿಕಾರವನ್ನು ವಹಿಸಿ, ತಾನು ಸ್ವರ್ಗಕ್ಕೆ ತೆರಳಿದುದು. ಅನೇಕ ಕಲ್ಪಗಳವರೆಗೆ ಅವನು ಢುಂಢಿರಾಜನ ರೂಪದಿಂದಲೇ ನೆಲೆಸಿದುದು. ಶಈದಳ ಮಂದಾರಪುಷ್ಪಗಳ ಪೂಜಾ ಮಹಿಮೆ. ನೀಚ ಭಾವನೆ, ಮತ್ತು ವಸ್ತುಗಳಿಂದ ದೇವನನ್ನು ಅರ್ಚಿಸಿವವನಿಗೆ ಉಂಟಗುವ ದುಷ್ಫಲಗಳು. ಭಕ್ತಿಯ — ಪ್ರಶಂಸೆ. ‘ವಿನಾಯಕನ ಲೋಕವೆಲ್ಲಿದೆ? ಹೇಳಬೇಕೆಂದು’ ವ್ಯಾಸರು ಪ್ರಶ್ನಿಸಲು, ಈ ಕಥೆಯನ್ನು ನಾರದನಿಗೆ ಮೊದಲು ಹೇಳಿದವನೇ ನಾನು ಎಂದು ಬ್ರಹ್ಮನು ಆರಂಭಿಸಿ ಆ ವಿದ್ಯೆಯು ಹೇಗೆ ಪ್ರಚಾರವಾಯಿತೆಂದು ತಿಳಿಸಿದುದು. ಭಗವನ್ನಿಜಲೋಕದ ವರ್ಣನೆ, ದೈವೀವಿಭವ ಇತ್ಯಾದಿ.
೫೦ನೆಯ ಅಧ್ಯಾಯ
೫೧ನೆಯ ಅಧ್ಯಾಯ
೫೨ನೆಯ ಅಧ್ಯಾಯ
೫೩ನೆಯ ಅಧ್ಯಾಯ
೫೪ನೆಯ ಅಧ್ಯಾಯ
ವಿನಾಯಕನು ಶುಕ್ಲನ ಮನೆಯಲ್ಲಿ ಊಟ ಮಾಡಿಕೊಂಡು ಬಂದು ಹುಡುಗರೊಡನೆ ಆಟವಾಡುತ್ತ ಹಾಗೆಯೇ ವಿಶ್ರಮಿಸಿದಾಗ, ನಾಗರೀಕರೆಲ್ಲರೂ ದಿವ್ಯ ಭೋಜನವನ್ನೇರ್ಪಡಿಸಿ, ಬಾಲಕನನ್ನು ಹುಡುಕುತ್ತ ಈ ಬಗ್ಗೆ ರಾಜನನ್ನು ಪ್ರಶ್ನಿಸಿದ್ದು. ಇಲ್ಲಿಯೇ ಆಟವಾಡುತ್ತಿರಬಹುದು ಎಂದು ರಾಜನು ಹೇಳಿದನು. ಜನರು ಪ್ರತಿಯೊಂದು ಮನೆಯಲ್ಲೂ ಹುಡುಕಿದುದು. ವಿನಾಯಕನು ಶುಕ್ಲನ ಮನೆಯಲ್ಲಿ ಭೋಜನ ಮಾಡಿದ ಸಂಗತಿ ತಿಳಿದ ಬಳಿಕ ಎಲ್ಲರೂ ಬಾಲಕನನ್ನು ನಿಂದಿಸಿದುದು. ಸಾತ್ತ್ವಿಕರು ಅವನನ್ನು ಹೇಗಾದರೂ ಮಾಡಿ ತಮ್ಮ ಮನೆಗೆ ಕರೆದೊಯ್ಯಲು ಹವಣಿಸಿದುದು. ರಾಜಸರು ಅವನನ್ನು ಗದ್ದರಿಸುತ್ತ, ಮಲಗಿದವನನ್ನು ಎಬ್ಬಿಸಲು ಯತ್ನಿಸಿದುದು. ಶುಕ್ಲನು ಭಕ್ತಿಯಿಂದ ಅರ್ಪಿಸಿದ ಆಹಾರವನ್ನು ಭುಜಿಸಿರುವೆನಾದುದರಿಂದ ನಿಮ್ಮ ಮನೆಗಳಿಗೆ ಬರಲಾರೆನೆಂದು ದೇವನು ನಿರಾಕರಿಸಲು, ಜನರು ನಿರಾಶರಾದುದು, ಕೆಲವರು ಮನಸ್ವೀ ಬೈದುದು. ಇವರ ವಿಹ್ವಲತೆಯನ್ನು ಕಂಡು ದೇವನು ನಾನಾ ರೂಪಗಳನ್ನು ಧರಿಸಿ, ಎಲ್ಲರ ಮನೆಗಳಿಗೂ ಹೋಗಿ ಭುಜಿಸಿದುದು. ಕಾಯವ್ಯೂಹದ ವರ್ಣನೆ. ಪರೋಕ್ಷವಸ್ತುದರ್ಶಿಗಳಾದ ದೇವತೆಗಳು ಈ ಅದ್ಭುತವನ್ನು ಕಂಡು ಮಂಗಲವಾದ್ಯಗಳನ್ನು ಬಾಜಿಸಿದುದು, ಮತ್ತು ದೇವನ ಮೇಲೆ ಪೂ — ಮಳೆಗರೆದುದು. ರಾಜನು ಈ ಎಲ್ಲ ಅದ್ಭುತವನ್ನೂ ಕಂಡು, ಆಶ್ಚರ್ಯಪಟ್ಟದ್ದು. ರಾಜ — ನಾಗರಿಕರ ಸಂವಾದ. ಈ ಅದ್ಭುತವನ್ನು ಕೇಳಿ ಮುಗ್ಧನಾದ ರಾಜನು ಎರಡು ಮೂರು ಮನೆಗಳಿಗೆ ಹೋಗಿ ನೋಡಿದುದು. ಅಲ್ಲೆಲ್ಲ ವಿನಾಯಕನೊಡನೆ ತಾನೂ ಭುಜಿಸುತ್ತಿರುವಂತೆ ಕಂಡು ಬಂದ ಮೇಲೆ ದಿಗ್ಭ್ರಾಂತನಾಗಿ ಕುಳಿಸಿತುವಾಗ ಸನಕ — ಸನಂದನರು ಭೋಜನಾರ್ಥಿಗಳಾಗಿ ಅಲ್ಲಿಗೆ ಬಂದುದು. ಇವರು ಭೋಜನಕ್ಕಾಗಿ ತೆರಳಿದ ಮನೆಗಳಲ್ಲೆಲ್ಲ ವಿನಾಯಕನಿರುವುದು ಕಂಡುಬರಲು, ಈ ಭೂಮಿಯೇ ಭೋಜನಕ್ಕೆ ಅರ್ಹವಾದ ಪ್ರದೇಶವಲ್ಲ ಎಂದು ತೀರ್ಮಾನಿಸಿ, ಶುಕ್ಲನ ಮನೆಗೆ ಬಂದುದು. ಅಲ್ಲಿಯೂ ದೇವನು ರುವುದುದು ಕಂಡುಬರಲು, ಕ್ಷುದ್ಭಾಧಾಪೀಡಿತರಾದ ಮುನಿಗಳು, ಊರನ್ನೇ ಬಿಟ್ಟು ಹೊರಕ್ಕೆ ಬಂದುದು. ಆಗಲೂ ದೇವನ ಮೂರ್ತಿ ಅವರ ಕಣ್ಣಿಗೆ ಕಟ್ಟಿದಂತಾಗಲು, ಕಣ್ಣುಗಳನ್ನು ಮುಚ್ಚಿದುದು. ಎಷ್ಟೆಷ್ಟು ಬಗೆಯಿಂದ ಯತ್ನಿಸಿದರೂ ದೇವನ ಮೂರ್ತಿ ಅವರ ಹೃತ್ಪಟಲದಿಂದ ಮಾಯವಾಗದಿರಲು, ಇವರು ಹುಚ್ಚರಂಟಾದುದು. ದೇವನು ಇವರಿಗೆ ಆಗ ಪ್ರತ್ಯಕ್ಷನಾದುದು. ದೇವನ ದ್ವಿಯರೂಪದ ವರ್ಣನೆ. ಆಗ ಇವರಿಗೆ ಜ್ಞಾನೋದಯವಾಗಲು, ದೇವನಿಗೆ ಂದಿಸಿ ಸ್ತುತಿಸಿದುದು. ದೇವನ ಅಂತರ್ಧಾನ. ಋಷಿಗಳು ದೇವನ ಮೂರ್ತಿಯನ್ನು ಪ್ರತಿಷ್ಠಿಸಿ, ಮಂದಿರವನ್ನು ನಿರ್ಮಿಸಿದುದು. ಅದರ ಬಳಿ ನಿರ್ಮಿಸಿದ ಗಣೇಶ ತೀರ್ಹಕ್ಕೆ ಅನೇಕ ಮಹಿಮೆಗಳನ್ನು ಅನುಗ್ರಹಿಸಿದುದು. ಫಲಶ್ರುತಿ.
೫೫ನೆಯ ಅಧ್ಯಾಯ
೫೬ನೆಯ ಅಧ್ಯಾಯ
೫೭ನೆಯ ಅಧ್ಯಾಯ
೫೮ನೆಯ ಅಧ್ಯಾಯ
೫೯ನೆಯ ಅಧ್ಯಾಯ
ದೈತ್ಯರನ್ನು ನಿಮಿಷಮಾತ್ರದಲ್ಲೇ ನಿಗ್ರಹಿಸುವಂತಹ ಶಕ್ತಿ ದೇವನಿರುವಾಗ ತಾನೇ ಅದನ್ನು ಮಾಡದೇ, ಕಾಲಪುರುಷನೆನೇಕೆ ಸೃಜಿಸಿದನು? ಎಂದು ವ್ಯಾಸರು ಬ್ರಹ್ಮನನ್ನು ಪ್ರಶ್ನಿಸಲು, ಬ್ರಹ್ಮನು ಅದಕ್ಕೆ ಸಮಂಜಸವಾದ ಉತ್ತರವನ್ನು ಹೇಳಿ, ಕಥೆಯನ್ನು ಮುಂದುವರೆಸಿದುದು. ಕಾಶೀರಾಜ, ಮಂತ್ರಿಸುತರು, ದೇವನ ಜಠರವನ್ನು ಪ್ರವೇಶಿಸಿ, ಅಲ್ಲಿ ಅನೇಕ ಅದ್ಭುತಗಳನ್ನು ಕಂಡುದು. ಅಲ್ಲಿ ತೋರಿಬಂದ ಅನೇಕ ಕೋಟಿ ಬ್ರಹ್ಮಾಂಡಗಳ ವರ್ಣನೆ. ಭ್ರಾಂತಚಿತ್ರರಾದ ಇವರು ದೇವನನ್ನು ಸ್ತುತಿಸಿದುದು. ಬಾಲರೂಪದಿಂದ ದೇವರು ಇವರಿಗೆ ದರ್ಶನವಿತ್ತು ಹೊರಕ್ಕೆ ಬರಲು ಮಾರ್ಗವನ್ನು ಪ್ರದರ್ಶಿಸಿದುದು. ಬಾಲಕರೊಡನೆ ಕ್ರೀಡಿಸುತ್ತಿದ್ದ ವಿನಾಯಕನನ್ನು ರಾಜನು ನೋಡಿ ಅನೇಕ ವಿಧದಿಂದ ಸ್ತುತಿಸಿ, ನರಾಂತಕನ ಸೇನೆಯನ್ನು ಭಕ್ಷಿಸಿದ ಕಾಲಪುರುಷನಾರು? ತಿಳಿಸಬೇಕೆಂದು ಪ್ರಾರ್ಥಿಸಿದುದು. ದೇವನು ಕರುಣೆಯಿಂದ ತನ್ನ ವರದ ಹಸ್ತವನ್ನು ರಾಜನ ತಲೆಯ ಮೇಲೆ ಇರಿಸಲು, ಅವನಿಗೆ ದ್ವಿಯಜ್ಞಾನ ಉಂಟಾಗಿ ಸಕಲವೂ ತಿಳಿದುದು. ಆಗ ಅವನು ಸಂತೋಷದಿಂದ ದೇವನನ್ನು ಸ್ತುತಿಸಿದುದು. ರಾಜನಿಗೆ ಉಂಟಾಗಿದ್ದ ತಾತ್ತ್ವಿಕ ಜ್ಞಾನವನ್ನು ತನ್ನ ಮಾಯಾ ಶಕ್ತಿಯಿಂದ ಮರೆಮಾಡಲು, ರಾಜನು ಮೊದಲಿನಂತಾಗಿ ದೇವನನ್ನು ಪೂಜಿಸಿದುದು. ಪೌರರು ರಾಜನನ್ನು ನೋಡಲು ಬಂದು, ಅವನಿಗೆ ನಮಿಸಿ, ಅನೇಕ ಕಾಣಿಕೆಗಳನ್ನು ಒಪ್ಪಿಸಿದುದು. ಅನಂತರ ರಾಜನು ತನ್ನ ತಾಯಿಯ ಬಳಿಗೆ ಬಂದು ನಡೆದುದನ್ನೆಲ್ಲ ಅರುಹಿ ‘ನಿನ್ನ ಆಶೀರ್ವಾದದಿಂದ ಬದುಕಿ ಬಂದೆನೆಂದು’ ಹೇಳಿದುದು. ಮಂತ್ರಿಗಳು ರಾಜಪತ್ನಿಯ ಬಳಿಗೆ ಬಂದು ವಂಧಿಸಿದುದು. ರಾಜನು ಪತ್ನಿಯನ್ನು ಸಂಧಿಸಿ ಸಮಾಧಾನ ಮಾಡಿದುದು. ಸೈನ್ಯವೆಲ್ಲವೂ ನಿರ್ಬಾಧಕನಾಗಿ ಹಿಂದಿರುಗಿದ್ದಕ್ಕೆ ನಾಗರಿಕರು ಸಂತೋಷದಿಂದ ಪಟ್ಟಣವನ್ನು ಸಿಂಗರಿಸಿ, ತಮ್ಮ ತಮ್ಮ ಬಂಧುಗಳನ್ನು ಪ್ರೇಮಾದರಗಳಿಂದ ಸ್ವಾಗತಿಸಿಸುದು.
೬೦ನೆಯ ಅಧ್ಯಾಯ
ದೇವನು ತೋರಿದ ಅದ್ಭುತಗಳನ್ನೆಲ್ಲ ಪರ್ಯಾಲೋಚಿಸಿ, ಇವನು ಮಹಾಮಹಿಮನೆಂದು ನರಾಂತಕನು ಗ್ರಹಿಸಿದುದು. ಮತ್ತೊಮ್ಮೆ ಯತ್ನಿಸಿ ಸಾಧಿಸಿದರೆ, ವಿಜಯವನ್ನಾದರೂ ಗಳಿಸೆಯೇನು, ಇಲ್ಲವೇ ಮೃಅತನಾಗಿ ಮುಕ್ತಿಯನ್ನಾದರೂ ಗಳಿಸಿಯೇನು, ಇಲ್ಲವೇ ಮೃತನಾಗಿ ಮುಕ್ತಿಯನ್ನಾದರೂ ಪಡೆಯುವೆನೆಂದು ತೀರ್ಮಾನಿಸಿ, ವಿನಾಯಕನನ್ನು ಕುರಿತು ಮೂದಲಿಸಿ ಮಾತನಾಡಿದುದು. ‘ಸುಮ್ಮನೆ ಹರಟಬೇಡ. ಶಕ್ತಿ ಇದ್ದರೆ, ನನ್ನನ್ನು ಎದುರಿಸು’ ಎಂದು ವಿನಾಯಕನು ಗರ್ಜಿಸಿನುಡಿದು, ಇಡೀ ವಿಶ್ವವನ್ನೇ ಗುಡುಗುವಂತೆ ಮಾಡಿದುದು. ನರಾಂತಕನು ಕೋಪಾವೇಶದಿಂದ ದೇವನ ಮೇಲೆ ಧುಮ್ಮಿಕ್ಕಿದುದು. ಇದನ್ನು ನೋಡಿ ಕಾಶೀರಾಜನು ತನ್ನ ಧನುಸ್ಸನ್ನು ಸಜ್ಜುಗೊಳಿಸಿ, ‘ವ್ಯರ್ಥವಾಗಿ ಸಾಯಬೇಡ, ಶರಣು ಬಾ’ ಎಂದು ನರಾಂತಕನಿಗೆ ಬೋಧಿಸಿದುದು. ಇದನ್ನು ಕೇಳಿ ನರಾಂತಕನೂ ಅಬ್ಬರಿಸಿ, ರಾಜನನ್ನು ಹೀಯ್ಯಾಳಿಸಿದುದು. ರಜ — ರಾಕ್ಷಸರು ಪರಸ್ಪರ ವೀರವಾದಗಳನ್ನಾಡಿದುದು. ‘ವಿನಾಯಕನು ನಿನ್ನನ್ನು ವಧಿಸಲಿಕ್ಕಾಗಿ ಅವತರಿಸಿ ಬಂದಿದ್ದಾನೆ’ ಎಂದು ರಾಜನು ಕೂಗಿ ಹೇಳಿದುದನ್ನು ಕೇಳಿ ರಕ್ಕಸನು ನಡುಗಿ, ರಾಜನ ಧನುವನ್ನು ಕಸಿದುಕೊಂಡು ನೆಲಕ್ಕಪ್ಪಳಿಸಿ ಮುರಿದು ಬಿಸುಟುದು. ಮತ್ತು ವಜ್ರಮುಷ್ಟಿಯಿಂದ ರಾಜನನ್ನು ಒಮ್ಮೆ ಪ್ರಹರಿಸಿ ಕೆಡಹಿದುದು. ಆಗ ವಿನಾಯಕನು ರಾಜನ ವಿಪತ್ತಿಯನ್ನು ಸಹಿಸಲಾರದೇ ಗರ್ಜಿಸುತ್ತ ಕೊಡಲಿಯನ್ನು ಎತ್ತಿ ಹಿಡಿದು ರಾಕ್ಷಸನ ಮೇಲೆ ಬಿದ್ದು ಅದರಿಂದ ಹೊಡೆದು ಅವನನ್ನು ನೆಲಕ್ಕೆ ಕೆಡಹಿದುದು. ರಾಕ್ಷಸನು ಮೂರ್ಛೆ ತಿಳಿದೆದ್ದು ಎರಡು ಪರ್ವತಗಳನ್ನು ಕಿತ್ತು ತಂದುದೇವನ ಮೇಲೆ ಎಸೆಯಲು, ಅವನ್ನು ದೇವನು ಪುಡಿ ಪುಡಿ ಮಾಡಿ ಬಿಸುಟುದು. ವಿನಾಯಕ, ರಾಕ್ಷಸರಿಬ್ಬರೂ ಮಾಯಾ ಪ್ರಭಾವವನ್ನು ಬೀರುತ್ತ, ಅನೇಕ ರೂಪಗಳನ್ನು ತಳೆದು ಹೋರಾಡಿದುದು. ಯುದ್ಧದ ವರ್ಣನೆ. ರಾಕ್ಷಸನ ಶಕ್ತಿ ಕುಗ್ಗದಿರುವುದನ್ನು ಕಂಡು ದೇವನು ಚಿಂತಿಸುತ್ತಿರುವಷ್ಟರಲ್ಲಿ, ಪಿಕಾಕ ಧನುಸ್ಸೂ, ದಿವ್ಯ ಬಾಣಗಳೂ ಬಂದು ದೇವನೆದುರು ಬೀಳಲು, ಅವನ್ನು ತೆಗೆದುಕೊಂಡು ಎರಡು ತೀಕ್ಷ್ಣಬಾಣಗಳನ್ನು ಹೂಡಿ, ನರಾಂತಕನ ಭುಜಗಳನ್ನು ಕತ್ತರಿಸಿ, ಒಂದನ್ನು ಅವನ ಮನೆಯ ಅಂಗಳದಲ್ಲೂ, ಮತ್ತೊಂದನ್ನು ಅವನ ತಂದೆಯ ಎದುರೂ ಬೀಳುವಂತೆ ಮಾಡಿದುದು. ರಾಕ್ಷಸನಿಗೆ ಮತ್ತೆರಡು ಭುಜಗಳು ಉದಿದಿ ಅವನು ಅವುಗಳಿಂದಲೇ ಪರ್ವತಗಳನ್ನು ಕಿತ್ತು ತಂದು ಬಿಸುಡತೊಡಗಿದುದು. ದೇವನು ಅವನೊಂದಿಗೆ ಹೀಗೆ ಮಾತನಾಡಿದುದು.
೬೧ನೆಯ ಅಧ್ಯಾಯ
ನಿನ್ನ ಸಾಮರ್ಥ್ಯವು ವರ್ಣನಾತೀತವಾದರೂ, ಈ ಬಾಲಕನ ಕೈವಾಡವನ್ನು ಸ್ವಲ್ಪ ನೋಡು’ ಎಂದು ಹೇಳಿ ಮತ್ತೊಂದು ಬಾಣವನ್ನು ಪ್ರಯೋಗಿಸಿ ಅವನ ಚರಣಗಳನ್ನು ಕತ್ತರಿಸಿ ದೇವಾಂತಕನ ಮನೆಯ ಎದುರು ಅವನ್ನು ಬಿಸಾಡಿದುದು, ಪುನಃ ಅವನಿಗೆ ಚರಣಗಳು ಚಿಗುರಿದುದು, ಆಗ ರಕ್ಕಸನು ಕುಚೋದ್ಯದ ಮಾತುಗಳನ್ನಾಡುತ್ತ ದೇವನ ಮೇಲೆ ಬಿದ್ದುದು. ಮತ್ತೆ ಬಿರುದಿನಿಂದ ಇವರಿಬ್ಬರೂ ಹೋರಾಡಿದುದು. ದೇವನು ಒಂದು ತೀಕ್ಷ್ಣಬಾಣವನ್ನು ಬಿಟ್ಟು, ನರಾಂತಕನ ಶಿರವನ್ನು ಕತ್ತರಿಸಿ ದೂರ ಎಸೆದುದು. ಮತ್ತೊಂದು ಶಿರವು ಉತ್ಪನ್ನವಾಗಲು, ದೇವತೆಗಳೆಲ್ಲ ನಡುಗಿದುದು. ಶಸ್ತ್ರಾಸ್ತ್ರಗಳಿಂದ ಎಷ್ಟು ಸಲ ಇವನ ತಲೆಗಳನ್ನು ಕತ್ತರಿಸಿದರೂ, ಅವು ಹುಟ್ಟುತ್ತಲೇ ಇದ್ದುದರಿಂದ ಅವನನ್ನು ಮೋಹವು ಆವರಿಸುವಂತೆ ದೇವನು ಮಾಡಿ, ನರಾಂತಕನಿಗೆ ತನ್ನ ವಿರಾಡ್ರೂಪವನ್ನು ತೋರಿಸಿದುದು. ವಿರಾಡ್ರೂಪದ ವರ್ಣನೆ. ದೇವನು ಧಾವಿಸುತ್ತ ಬಂದು ತನ್ನ ಪಾದಾಂಗುಷ್ಠದಿಂದ ನರಾಂತಕನನ್ನು ಹೊಸಗಿ ಬಿಸುಟುದು. ದೇವರ್ಷಿಗಳು ಪುಷ್ಪವೃಷ್ಟಿಯನ್ನು ಕರೆದುದು. ಧರಣೀದೇವಿಯು ದೇವನ ಎದುರಿಗೆ ಬಂದು, ಉಳಿದ ಅರ್ಧ ಭಾಗದಷ್ಟು ಭಾರವನ್ನೂ ಬೇಗನೆ ಪರಿಹರಿಸಬೇಕೆಂದು ಯಾಚಿಸಿದುದು. ಅನಂತರ ಕಾಶೀರಾಜನು ದೇವನನ್ನು ಅರ್ಚಿಸಿ, ಸ್ತುತಿಸಿದುದು. ಪೌರರೂ ಸಂತೋಷದಿಂದ ದೇವನನ್ನು ಹೊಗಳಿದುದು. ಎಲ್ಲರೂ ದೇವನನ್ನು ಪೂಜಿಸಿ ಬ್ರಾಹ್ಮಣರಿಗೆ ಅನೇಕ ವಸ್ತುಗಳನ್ನು ದಾನವಾಗಿ ಕೊಟ್ಟು, ಅವರಿಂದ ಆಶೀರ್ವಾದ ಪಡೆದುದು.
೬೨ನೆಯ ಅಧ್ಯಾಯ
೬೩ನೆಯ ಅಧ್ಯಾಯ
ರೌದ್ರಾಕಾರನೂ, ಅಷ್ಟೇ ರೌದ್ರಸ್ವಭಾವದವನೂ ಆದ ದೇವಾಂತಕನು ಕಾಲಾಂತಕರಂತಹ ಸೈನಿಕರೊಡನೆ ಬಂದು ನಗರಿಯನ್ನು ಮುತ್ತಿದ್ದಾನೆಂದು ದೂತರು ಹೇಳಿ, ಅವರ ಕರಾಳ ರೂಪವನ್ನು ನಡುಗುತ್ತ ವರ್ಣಿಸಿಸುದು. ರಾಜನು ಇದನ್ನು ಕೇಳಿ ನಿರ್ವಿಣ್ಣನಾಗಿ, ಬಾಲಲರೊಂದಿಗೆ ಆಟವಾಡುತ್ತಲಿದ್ದ ವಿನಾಯಕನಿಗೆ ತಾನು ಕೇಳಿದ ಸಂಗತಿಯನ್ನೆಲ್ಲ ವಿವರಿಸಿ, ಅವನನ್ನು ಸ್ತುತಿಸಿದುದು. ಒಡನೆಯೇ ದೇವನು ಭವ್ಯವಾದ ಆಕೃತಿಯನ್ನು ತಳೆದು, ಸಿದ್ಧಿ — ಬುದ್ಧಿಯರೊಡನೆ ಸಿಂಹವನ್ನೇರಿ ಗರ್ಜಿಸುತ್ತ, ನಭೋಮಾರ್ಗದಿಂದ ಊರಿನಿಂದಾಚೆಗೆ ಬಂದುದು. ದೇವನ ಅದ್ಭುತ ರೂಪ — ವಿಕ್ರಮಗಳ ವರ್ಣನೆ. ಅನೇಕ ಬಗೆಯ ಸೇನೆಯನ್ನು ನಿರ್ಮಿಸುವಂತೆ ಸಿದ್ಧೀದೇವಿಗೆ ಸೂಚಿಸಿದುದು. ಅವಳು ದೇವನನ್ನು ವಂದಿಸಿ, ತನ್ನ ಶಕ್ತಿಯಿಂದ ವಿವಿಧ ಸೈನಿಕರನ್ನು ಒಡನೆಯೇ ಸೃಜಿಸಿಕೊಂಡು ದೈತ್ಯನ ಮೇಲೆ ಹೋರಾಡಲು ಹೊರಟುದು. ಅವಳ ಉಪಶಕ್ತಿ — ಸೈನ್ಯ ಇವುಗಳ ವರ್ಣನೆ. ‘ಬಾಲಕನೊಬ್ಬನೇ ತಾನೆ? ಕ್ಷಣದಲ್ಲಿ ಜಯಿಸಿಬಿಡುವೆನೆಂಬ’ ಸೊಕ್ಕಿನಿಂದ ಬಂದಿದ್ದ ದೇವಾಂತಕನ ಸೊಂಡೆ. ಸಮುದ್ರದಂತಿದ್ದ ಈ ಸೈನ್ಯವನ್ನು ನೋಡಿ, ಶುಷ್ಕವಾಗಲು ಅವನು ಬಹಳ ಚಿಂತಿಸಿಸುದು. ಕೊನೆಗೆ ವೀರನ ಕರ್ತವ್ಯವನ್ನು ಪಾಲಿಸತಕ್ಕದ್ದೆಂದು ನಿಶ್ಚಯಿಸಿ ಮುನುಗ್ಗಲು, ಅವನ ಸೇನಾನಿಗಳು ಅವನನ್ನು ಹಿಂದಕ್ಕಿರುವಂತೆ ಹೇಳಿ, ತಾವು ಮುಂದೆ ನಿಂತು ಹೋರಾಡಿದುದು. ಸೈನಿಕರ ಯುಅದ್ಹಚಾತುರ್ಯ, ಶಕ್ತಿ — ಸಾಹಸಗಳ ವರ್ಣನೆ. ಅಸುರ ಸೇನಾನಿಗಳಲ್ಲಿ ಪ್ರತಿಯೊಬ್ಬನೂ ಒಬ್ಬೊಬ್ಬ ಶಕ್ತಿ, ಅದರ ಸೇನೆ ಇವನ್ನು ಎದುರಿಸಿದ ವರ್ಣನೆ. ಯುದ್ಧ ಹಾಗೂ ಅದರ ಪರಿಣಾಮಗಳ ವಿವರಣೆ. ದೈತ್ಯ ಸೇನೆಯು ಅಪಾರವಾಗಿ ನಾಶಹೊಂದಲು, ಶುಕ್ರನು ‘ಮೃತಸಂಜೀವಿನೀ’ ಮಂತ್ರಪ್ರಭಾವದಿಂದ ಎಲ್ಲರನ್ನೂ ಬದುಕಿಸಿದುದು. ಇದನ್ನು ಕಂಡು ಈಶಿತ್ಪಶಕ್ತಿಯು ಒಂದು ನೀಚ ದೇವತೆಯನ್ನು ಸೃಜಿಸಿ, ಶುಕ್ರನ ಈ ಕಾರ್ಯವನ್ನು ತಡೆಗಟ್ಟುವಂತೆ ಹೇಳಲು, ಅವಳು ಶುಕ್ರನನ್ನು ತನ್ನ ಯೋನಿಯಲ್ಲಿ ಅಡಗಿಸಿಕೊಂಡು ಬಹು ದೂರ ಹೋಗಿ, ಅಲ್ಲಿ ಚೆಲ್ಲಿ ಬಂದುದು. ಅರಕ್ಷಿತರಾದ ದೈತ್ಯರು ಓಡಿಹೋದುದು. ದೇವಾಂತಕನೇ ಮುಂದೆ ಬಂದು ಯುದ್ಧವನ್ನಾರಂಭಿಸಿದುದು. ಮತ್ತೆ ಯುದ್ಧವು ಬಿರುಸಾದುದು. ಜಯಾಪಜಯಗಳು ಉಭಯ ಪಕ್ಷಗಳಲ್ಲೂ ಕ್ಷಣಕ್ಷಣಕ್ಕೆ ತೋರಿ, ಮಾಯಾವಾಗುತ್ತ ಬಂದುದು. ದ್ವಂದ್ವಯುದ್ಧ.
೬೪ನೆಯ ಅಧ್ಯಾಯ
೬೫ನೆಯ ಅಧ್ಯಾಯ
ದೇವನು ಅದಕ್ಕೆ ಅನುಮತಿಸಲು, ಬುದ್ಧಿಯು ಕೈಚಪ್ಪಾಳೆಯ ಮಹಿಮೆಯಿಂದ ಶಕ್ತಿಯೊಂದನ್ನು ನಿರ್ಮಿಸಿದುದು. ಆ ಶಕ್ತಿಯ ಕರಾಳ ರೂಪದ ವರ್ಣನೆ. ಇವಳನ್ನು ನೋಡಿದೊಡನೆಯೇ ಪರ ಪಕ್ಷೀಯರು ಓಡಿಹೋದುದು. ದೇವಾಂತಕನು ಈ ಕೋಲಾಹಲವನ್ನು ಕೇಳಿ, ಶಕ್ತಿಯ ಮೇಲೆ ಬಾಣಗಳನ್ನು ಪ್ರಯೋಗಿಸಿದುದು. ಶಕ್ತಿಯು ಅವನ್ನೆಲ್ಲ ನುಂಗಿ ದೇವಾಂತಕನ ಬಾಣಪ್ರಯೋಗಸಾಮರ್ಥ್ಯವನ್ನು ಕುಗ್ಗಿಸಿ, ಸೇನೆಯನ್ನೆಲ್ಲ ನುಂಗಿದುದು. ಕೊನೆಗೆ ದೇವಾಂತಕನ್ನು ತನ್ನ ಭಗದಲ್ಲಿ ಪ್ರವೇಶಿಸೆಂದು ಹೇಳಿದುದು. ತನಗೊದಗಬಹುದಾದ ಈ ಬಗೆಯ ಶಿಕ್ಷೆಗಾಗಿ ದೇವಾಂತಕನು ಹೆದರಿ, ಓಡಿದುದು. ಅವನು ಎಲ್ಲೆಲ್ಲಿ ಅಡಗಿದರೂ ಬಿಡದೇ ಹಿಡಿದು ಬಲಾತ್ಕಾರದಿಂದ ಅವನನ್ನು ತನ್ನ ಯೋನಿಯಲ್ಲಿ ಅಡಗಿಸಿ ಬುದ್ಧೀದೇವಿಯೊಡನೆ ದೇವನ ಸಮೀಪಕ್ಕೆ ಬಂದು ನಿಂತುದು. ದೇವನು ಆ ಶಕ್ತಿಯನ್ನು ದೂರ ಹೋಗೆಂದು ನಿರಾಕರಿಸಲು, ಅವಳು ಅತ್ತ ಸರಿವಾಗ, ದೇವಾಂತಕನು ಅವಳ ಯೋನಿಯಿಂದ ಜಾರಿ ಕೆಳಕ್ಕೆ ಬಿದ್ದುದು. ಕೊಂಚ ಕಾಲದ ಮೇಲೆ ಅವನಿಗೆ ಎಚ್ಚರ ಉಂಟಾಗಲು, ಅಲ್ಲಿದ್ದ ನದಿಯೊಂದರಲ್ಲಿ ಸ್ನಾನವನ್ನು ಮಾಡಿ, ಯಾರಿಗೂ ಮುಖ ತೋರಿಸಲಾರದೇ ತನ್ನ ಮನೆಗೆ ಹೊರಟುಹೋದುದು. ಇವಳ ಅಸಹ್ಯ ಕರಾಳ ರೂಪಕ್ಕಾಗಿ ಜನರು ನಕ್ಕು, ಹೆದರಿ ಬಿದ್ದು ನಡುಗಿದುದು. ಶಕ್ತಿಯು ತಾನು ನಡೆಸಿದ ಕಾರ್ಯಗಳನ್ನು ತಿಳಿಸಿ, ವಿಶ್ರಾಂತಿಗೆ ಸ್ಥಳವನ್ನು ದೆವನಲ್ಲಿ ಯಾಚಿಸುದುದು. ಅವಳನ್ನು ದೇವನು ತನ್ನ ಬಾಯಿಯಲ್ಲಿರಿಸಿಕೊಂಡು, ದೇವಾಂತಕನನ್ನು ತಾನು ನಿಗ್ರಹಿಸುವುದಾಗಿ ಅಭಯವನ್ನು ಕೊಟ್ಟದ್ದು. ಶಕ್ತಿಯು ದೇವನ ಆಸ್ಯಕಮಲವನ್ನು ಪ್ರವೇಶಿಸಿದುದು.
೬೬ನೆಯ ಅಧ್ಯಾಯ
ದೇವಾಂತಕನ ನಿರ್ವಿಣ್ಣ ಪರಿಸ್ಥಿತಿಯನ್ನು ಕಂಡು ತಾಯಿ – ತಂದೆಯರು ಮರುಗಿದುದು. ರೌದ್ರಕೇತು ಮಗನಿಂದ ಯುದ್ಧದ ಸಮಗ್ರ ವಿಷಯವನ್ನೂ ತಿಳಿದು, ಅವನಿಗೆ ಅಘೋರಮಂತ್ರವನ್ನು ಉಪದೇಶಿಸಿ, ಅದನ್ನು ಸಾಧಿಸಿ ದಿವ್ಯಾಶ್ವವನ್ನು ಪಡೆದು, ತನ್ಮೂಲಕ ಯುದ್ಧದಲ್ಲಿ ಜಯಶೀಲನಾಗೆಂದು ಉತ್ತೇಜಿಸಿದುದು. ಮಂತ್ರವನ್ನು ಜಪಿಸುವ ಕ್ರಮವನ್ನು ವಿವರವಾಗಿ ತಿಳಿಸಬೇಕೆಂದು ದೇವಾಂತಕನು ಅಪೇಕ್ಷಿಸಿದಾಗ, ರಹಸ್ಯದಲ್ಲಿ ಅವನಿಗೆ ಎಲ್ಲವನ್ನೂ ವಿವರಿಸಿ ಮಗ — ತಂದೆ ಇಬ್ಬರೂ ಸೇರಿ, ಚಿರಕಾಲ ಅನುಷ್ಠನವನ್ನು ನಡೆಸಿದುದು. ಜಪಾಂತ್ಯದಲ್ಲಿ ಷಟ್ಕೋಣಾಕಾರದ ಕುಂಡ ಒಂದನ್ನು ನಿರ್ಮಿಸಿ, ಅಭಿಚಾರಿಕ ವಿಧಾನದಿಂದ ಹೋಮವನ್ನು ಮಾಡಿದುದು. ಅಂದು ರಾತ್ರಿ ಕಳೆದು, ಸೊರ್ಯೋದಯವಾಗುವ ವೇಳೆಗೆ ಸರಿಯಾಗಿ ದಿವ್ಯಾಶ್ವ ಒಂದು ಗೋಚರಿಸಿದುದು. ಅಶ್ವದ ವರ್ಣನೆ. ಅದನ್ನು ಯಥಾಯೋಗ್ಯ ಅಲಂಕರಿಸಿ ತಂಡೆಗೆ ಮಣಿದು ಅಸುರನು ಹೊಸ ಹುರುಪಿನಿಂದ ಯುದ್ಧಕ್ಕೆ ತೆರಳಿದುದು. ಅವನ ಯುದ್ಧ ಹಾಗೂ ವೇಷ — ಭೂಷಣಗಳ ಸಿದ್ಧತೆಯ ವರ್ಣನೆ. ಇವನು ಪುನಃ ಯುದ್ಧಕ್ಕೆ ಸಿದ್ಧನಾಗಿ ಬಂದುದನ್ನು ಕಂಡು, ವಿನಾಯಕನೊಬ್ಬನನ್ನು ಹೊರತು ಉಳಿದವರೆಲ್ಲ ನಡುಗಿ, ಓಡಿದುದು. ಆದರೆ ಸಿದ್ಧೀದೇವಿಯ ಸೇನೆಯು ಮಟ್ಟಿಗೆ ಎದೆಗುಂದದೇ, ದೈತ್ಯನನ್ನು ಎದುರಿಸಿ ವಿಶೇಷವಾಗಿ ಹಿಂಸಿಸುತ್ತ ಪ್ರಸರಿಸುದುದು. ಯುದ್ಧದ ವರ್ಣನೆ. ಕ್ಷಣಕ್ಷಣಕ್ಕೂ ದೈತ್ಯ ಸೇನೆಯು ನಾಶಹೊಂದುತ್ತಿರುವುದನ್ನು ಕಂಡು, ದೇವಾಂತಕನು ಅಶ್ವವನ್ನು ಶಕ್ತಿಸೇನೆಯ ಮೇಲೆ ಹೋರಾಡಲು ಬಿಟ್ಟುದು. ಇದರ ಹಾವಳಿಯನ್ನು ಸಹಿಸಲಾರದೇ ಶಕ್ತಿಸೇನೆ ಎಲ್ಲವೂ ಓಡಿಹೋಗಿ, ವಿನಾಯಕನ ಸಮೀಪವನ್ನು ಸೇರಿದುದು.
೬೭ನೆಯ ಅಧ್ಯಾಯ
೬೮ನೆಯ ಅಧ್ಯಾಯ
ದೈತ್ಯನು ನಿದ್ರಾಸ್ತ್ರ, ಗಂಧರ್ವಾಸ್ತ್ರಗಳನ್ನು ಅಭಿಮಂತ್ರಿಸಿ, ಶತ್ರುಸೇನೆಯ ಮೇಲೆ ಪ್ರಯೋಗಿಸಿದುದು. ಇವುಗಳ ಮಹಿಮೆಯಿಂದ ಎದುರಾಳಿ ಸೈನಿಗರೆಲ್ಲ ನಿದ್ರಾವಶರಾದುದು. ದೇವನೂ ಸಹ ಗಂಧರ್ವಾಸ್ತ್ರದಿಂದ ಹೊಮ್ಮಿದ ಗಾನಧ್ವನಿಯನ್ನು ಕೇಳಿ, ಕ್ಷಣಕಾಲ ಮರುಳಾದುದು. ಇದನ್ನು ಕಂಡ ದೇವಾಂತಕನು ಅಲ್ಲೇ ಒಂದು ತ್ರಿಕೋಣಾಕಾರದ ಅಗ್ನಿಕುಂಡವನ್ನು ನಿರ್ಮಿಸಿ, ಪ್ರೇತಗಳನ್ನೇ ಆಸನದಂತೆ ಉಪಯೋಗಿಸಿ, ಆಭಿಚಾರಿಕರೀತ್ಯಾ ಮಾಂಸವನ್ನು ಅಗ್ನಿಯಲ್ಲಿ ಹೋಮಮಾಡಿದುದು. ಆ ಕಾಲದಲ್ಲಿ ರಕ್ಕಸನು ದಿಗಂಬರನಾಗಿದ್ದುದು. ಬಲಿ, ಪೂರ್ಣಾಹುತಿಗಳು ಮುಗಿದ ಬಳಿಕ, ಆ ಅಗ್ನಿಕುಂಡದಿಂದ ಒಂದು ತಾಮಸೀ ಶಕ್ತಿಯು ಹೊರಹೊರಟು ಬಂದು ರಾಕ್ಷಸನಿತ್ತಪ್ರೇತ, ರಕ್ತ ಇವನ್ನು ಭುಜಿಸಿ, ಪಾನಮಾಡಿ ಪರಿಪೂರ್ಣ ತೃಪ್ತಿಯನ್ನು ಹೊಂದಿದುದು. ಆ ಶಕ್ತಿಯ ಕರಾಳರೂಪದ ವರ್ಣನೆ. ‘ನಾನು ತೃಪ್ತಳಾದೆನು. ಯಾವ ಕಾರ್ಯವನ್ನು ಬೇಕಾದರೂ ಸಾಧಿಸಿ ಕೊಡುವೆನು. ಇನ್ನು ನೀನು ಸ್ವಲ್ಪವೂ ಭಯಪಡಬೇಡ’ ಎಂದು ಅವನನ್ನು ಸಮಾಧಾನಪಡಿಸಲು, ರಾಕ್ಷಸನು ದಿವ್ಯಾಂಬರರ್ಧಾಇಯಾಗಿ, ಸಕಲ ಯುದ್ಧೋಪಕರಣಗಳೊಂದಿಗೆ ಶಕ್ತಿಯ ತೊಡೆಯ ಮೇಲೆ ಕುಳಿತುದು. ‘ನಿನ್ನ ಬೆಂಬಲ ದೊರೆತುದರಿಂಡ ತುಚ್ಛನಾದ ಆ ಬಾಲಕನನ್ನೂ, ಅವನ ಸೇನಾಪಡೆಯನ್ನೂ ನಿಮಿಷಮಾತ್ರದಲ್ಲೇ ಕೊಂದುಬಿಡುವೆನು’ ಎಂದು ವಿಜೃಂಭಿಸಿದುದು. ದೈತ್ಯನ ಮಾತುಗಳನ್ನು ಕೇಳಿದ ಕಾಶೀರಾಜನು ಗಾನಕ್ಕೆ ಮುಗ್ಧನಾಗಿ ಕುಳಿದಿದ್ದ ವಿನಾಯಕನನ್ನು ಎಚ್ಚರಗೊಳಿಸಿ, ಸಂಗತಿಯನ್ನೆಲ್ಲ ವಿವರಿಸಿದುದು. ದೇವನು ಬುದ್ಧನಾಗಿ, ಒಡನೆಯೇ ಇದೆಲ್ಲ ಮಾಯಾಮಯವೆಂಬುದನ್ನು ತಿಳಿದು ಬಾಣಗಳನ್ನು ತನ್ನ ಬಿಲ್ಲಿನಲ್ಲಿ ಹೊಡಿ, ಅಭಿಮಂತ್ರಿಸಿ ದೈತ್ಯನ ಮೇಲೂ, ದೈತ್ಯನಿಗೆ ಆಶ್ರಯವನ್ನಿತ್ತ ಶಕ್ತಿಯ ಮೇಲೂ ಬಲವಾಗಿ ಪ್ರಯೋಗಿಸಿದುದು. ಇವೇ ಘಂಟಾಸ್ತ್ರ, ಖಗಾಸ್ತ್ರಗಳು. ಇವುಗಳಿಂದುಂಟಾದ ಉತ್ಪಾತಗಳ ವಿವರಣೆ. ಖಗಾಸ್ತ್ರದಿಂದ ಹುಟ್ಟಿ ಬಂದ ವಿಚಿತ್ರ ಜಾತಿಯ ಪಕ್ಷಿಗಳು ದೈತ್ಯಸೈನಿಕರನ್ನೆಲ್ಲ ಸಾಕಷ್ಟು ತಿಂದು, ಉಳಿದವರನ್ನು ಹೊಕ್ಕು, ಕಾಲುಗಳಿಂದ ಅಂತರಿಕ್ಷದ ವರೆಗೆ ಎತ್ತಿಕೊಂಡು ಹಾರಿಹೋಗಿ ಅಷ್ಟು ಎತ್ತರದಿಂದ ಬಿಸುಟದು. ದೈತ್ಯನು ಅದಕ್ಕೆ ನಡೆಸಿದ ಪ್ರತೀಕಾರದ ವರ್ಣನೆ. ದೇವನು ವಜ್ರಾಸ್ತ್ರವನ್ನು ಪ್ರಯೋಗಿಸಿದುದು. ಅದು ಎಲ್ಲವನ್ನೂ ನಾಶಗೊಳಿಸಿ, ದೇವಾಂತಕನ ಮೇಲೆ ಬೀಳಲು, ದೈತ್ಯನು ರೌದ್ರಾಸ್ತ್ರದಿಂದ ಒಬ್ಬ ಕರಾಳಪುರುಷನನ್ನು ನಿರ್ಮಿಸಿ, ವಜ್ರಾಸ್ತ್ರವನ್ನು ಎದುರಿಸಲು ಸೂಚಿಸಿದುದು. ಅವನ ಭೀಕರಾಕಾರದ ವರ್ಣನೆ. ದೇವನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ, ರೌದ್ರಾಸ್ತ್ರದಿಂದ ಜನಿಸಿದ ಪುರುಷನಿಗೆ ಪ್ರತಿಯಾಗಿ ಮತ್ತೊಬ್ಬ ಕರಾಳಪುರುಷನನ್ನು ಸೃಜಿಸಿ, ಅವನೊಡನೆ ಹೋರಾಟ ನಡೆಸಲು ಪ್ರೇರಿಸಿದುದು. ಇಬರಿಬ್ಬರೂ ಅಂತರಿಕ್ಷದಲ್ಲಿ ನಿಂದು ಬಹಳ ವೇಳೆ ಕಲಿತನದಿಂದ ಕಡಿದಾಡಿದುದು. ಆ ಅದ್ಭುತ ದೃಶ್ಯದ ವರ್ಣನೆ.
೬೯ನೆಯ ಅಧ್ಯಾಯ
ತನ್ನ ಮಾಯೆಗೆ ಬಲವಾದ ಪ್ರತಿ ಮಾಯೆಯನ್ನು ಸೃಜಿಸಲಾರಂಭಿಸಿದ ವಿನಾಯಕನ ಶಕ್ತಿಯನ್ನು ನೋಡಿ ದೇವಾಂತಕನು ಬಹಳ ಚಿಂತೆಗೊಳಗಾದುದು. ಆದರೂ ಪುನಃ ಧೈರ್ಯೋತ್ಸಾಹಗಳನ್ನು ತೆಗೆದುಕೊಂಡು ಮತ್ತೊಂದು ತೀಕ್ಷ್ಣ ಸಾಯಕವನ್ನು ವಿನಾಯಕನ ಮೇಲೆ ಪ್ರಯೋಗಿಸಿದುದು. ವಿನಾಯಕನ ಮೇಲೆ ಪ್ರಯೋಗಿಸಿದುದು. ವಿನಾಯಕನು ರಾಕ್ಷಸನ ಬಾಣದಿಂದ ಸೃಷ್ಟವಾದ ಶಕ್ತಿಯನ್ನೂ, ಶಕ್ತಿಯ ತೊಡೆಯ ಮೇಲೆ ಕುಳಿತು, ಬಾಣಗಳನ್ನು ಪ್ರಯೋಗಿಸುತ್ತಲಿದ್ದ ದೈತ್ಯನನ್ನೂ ನೋಡಿ, ಸ್ವಸಿದ್ಧಿಗಳನ್ನು ಪ್ರತಿಕಾರಕ್ಕಾಗಿ ಪ್ರೇರಿಸಲು, ಅಷ್ಟಮಹಾಸಿದ್ಧಿಗಳೂ ಒಮ್ಮೆಲೇ ಅಂತರಿಕ್ಷಕ್ಕೆ ಹಾರಿ, ಆ ರಾಕ್ಷಸೀ ಶಕ್ತಿಯನ್ನು ಹಿಡಿದುದು. ಶಕ್ತಿಯು ಜಾಣ್ಮೆಯಿಂದ ಜಾರಿ ತಪ್ಪಿಸಿಕೊಳ್ಳಲು, ಇವರು ಕೋಪದಿಂದ ದೇವಾಂತಕನ ಕಡೆಗೆ ಹೊರಳಿ, ಅವನ ಜುಟ್ಟನ್ನು ಭದ್ರವಾಗಿ ಹಿಡಿದು ಎಳೆಯಲಾರಂಭಿಸಿದುದು. ಶಕ್ತಿಗಳೊಡನೆ ದೇವಾಂತಕನು ಹೋರಾಡಿದ ವರ್ಣನೆ. ಪ್ರಾಕಾಮ್ಯ, ಭೂತಿ ಈ ಶಕ್ತಿಗಳ ಹೊಡೆತವನ್ನು ತಡೆಯಲಾರದೇ ರಾಕ್ಷಸನು ನೆಲಕ್ಕೆ ಬಿದ್ದು, ಮೂರ್ಛೆಗೊಂಡುದು. ಸ್ವಲ್ಪ ಕಾಲದಲ್ಲೇ ಪುನಃ ಎಚ್ಚೆತ್ತು, ಶಿವನಿಂದ ಲಬ್ದವಾದ ಕುದುರೆಯನ್ನೇರಿ ತನ್ನ ಕೈಖಡ್ಗದಿಂದ ದೇವನನ್ನು ಬಲವಾಗಿ ಹೊಡೆದು ಮೂರ್ಛೆಗೊಳಿಸಿದುದು. ಕ್ಷಣದಲ್ಲೇ ದೇವನು ಎಚ್ಚೆತ್ತು, ರಾಕ್ಷಸನ ಮೇಲೆ ಧಾವಿಸಿ ಹೋಗಿ, ತನ್ನ ನಾಲ್ಕೂ ಬಗೆಯ ಆಯುಧಗಳಿಂದ ಅವನನ್ನು ಪ್ರಹರಿಸಿದುದು. ಅದರಿಂದ ಸಹ ಯಾವ ಪ್ರಯೋಜನವೂ ಆಗದಿರಲು, ಧೂಮ್ರಕ್ಷನಿಗಾಗಿ ಸೂರ್ಯನು ಅನುಗ್ರಹಿಸಿದ್ದ ಆಯುಧದಿಂದ ಬಲವಾಗಿ ಹೊಡೆದುದು. ಅದೂ ನಿಷ್ಫಲವಾಗಲು, ಮತ್ತೆ ಪರಸ್ಪರರಿಗೆ ಶಸ್ತ್ರಯುದ್ಧವು ಆರಂಭವಾದುದು. ರಾಕ್ಷಸನು ತಂಡೆಯ ಮಾಯೆಯಿಂದ ಅದಿತಿಯನ್ನು ನಿರ್ಮಿಸಿ, ಅವಳು ಅಳುತ್ತಿರುವಂತೆ ಮಾಡಿ, ವಿನಾಯಕನನ್ನು ವ್ಯಾಮೋಹಗೊಳಿಸಲುಯತಿಸಿದುದು. ಅಷ್ಟರಲ್ಲಿ ಆಕಾಶವಾಣಿಯು ‘ಇದು ಮಾಯೆ’ ಎಂದು ತಿಳಿಸಲು, ದೇವನು ಸೂಯ್ಯೋದಯವಾಘುವುದನ್ನೇ ಕಾದು ಕುಳಿತುದು. ವಿನಾಯಕನು ಯುದ್ಧ ನಿವೃತ್ತನಾದನೆಂದು ತಿಳಿದ್ದ ದೈತ್ಯನು ಒಮ್ಮಿಂದೊಮ್ಮೆಲೇ ದೇವನು ಗಟ್ಟಿಯಾಗಿ ಗರ್ಜಿಸುತ್ತ, ತನ್ನ ಮೇಲೆ ಬಿದ್ದುದನ್ನು, ಕಂಡು ಮೆಟ್ಟಿಬಿದ್ದು ‘ಇದೇನೆಂದು’ ತಿರುಗಿ ನೋಡಿದಾಗ, ಗಜವದನನ ಅದ್ಭುತವಾದ ರೂಪವು ಕಂಡುದು. ಇದನ್ನು ಕಂಡು ದೈತ್ಯನು ನಡುಗಿಹೋದುದು. ‘ಅಯ್ಯೋ! ಇದಾವ ಅದ್ಬುತ ರೂಪ?’ ಎಂದು ಚಿಂತಿಸಿದುದು.
೭೦ನೆಯ ಅಧ್ಯಾಯ
೭೧ನೆಯ ಅಧ್ಯಾಯ
೭೨ನೆಯ ಅಧ್ಯಾಯ
ಕಾಶೀರಾಜ ವಿನಾಯಕರು ಆಶ್ರಮಕ್ಕೆ ಹಿಂದಿರುಗಿ ಬಂದುದನ್ನು ದೂತನ ಮುಖದಿಂದ ಕೇಳಿದ ಅದಿತಿಯು ಓಡಿ ಬಂದು, ಇವರನ್ನು ಪ್ರೀತಿಯಿಂದ ಸ್ವಾಗತಿಸಿದುದು. ವಿನಾಯಕನನ್ನು ಕರೆದು ತರಲು ವಿಲಂಬವಾದುದಕ್ಕೆ ಕಾಶೀರಾಜನು ಅದಿತಿ — ಕಶ್ಯಪರ ಕ್ಷಮೆಯನ್ನು ಯಾಚಿಸಿದುದು. ವಿನಾಯಕನು ತನ್ನ ನಗರಿಯಲ್ಲಿ ತೋರಿದ ಅದ್ಭುತವನ್ನೆಲ್ಲ ರಾಜನು ವಿವರಿಸಿದುದು. ಮಗುವಿಗೆ ದೃಷ್ಟಿಯಾದೀತೆಂದು ಸರಳ ಹೃದಯಿಯಾದ ಅದಿತಿಯು ನಿವಾಳಿ ತೆಗೆದುದು. ಋಷಿದಂಪತಿಗಳು ರಾಜನಿಗೆ ವೈಭವದ ಒಂದು ಔತಣವನ್ನೇರ್ಪಡಿಸಿ, ಎಲ್ಲರೂ ಒಟ್ಟಿಗೆ ಕುಳಿತು ಸಂತೋಷದಿಂದ ಭುಜಿಸಿ, ರಾಜನನ್ನು ಅವನ ನಗರಿಗೆ ಬೀಳ್ಕೊಟ್ಟುದು. ರಾಜನು ವಿನಾಯಕನ ಯೋಗಕ್ಕಾಗಿ ಕಣ್ಣೀರನ್ನು ಸುರಿಸಿ, ತನ್ನ ಮನಸ್ಸನ್ನು ಆಶ್ರಮದಲ್ಲಿಯೇ ಇರಿಸಿ, ದೇಹವನ್ನು ಮಾತ್ರ ತನ್ನ ನಗರಿಗೆ ಕೊಂಡೊಯ್ದುದು. ವಿನಾಯಕನನ್ನು ಆಶ್ರಮದಲ್ಲೇ ಬಿಟ್ಟು ಒಬ್ಬನೇ ಹಿಂದಿರುಗಿದ ರಾಜನನ್ನು ಕಂಡು, ನಾಗರೀಕರು ಬಹಳ ಜರಿದುದು. ವಿನಾಯಕನ ಮೂರ್ತಿಗಳನ್ನು ನಿರ್ಮಿಸಿ, ಪೂಜಿಸುತ್ತಿರುವಂತೆ ದೇವನು ಆಜ್ಞಾಪಿಸಿರುವೆನೆಂದು ರಾಜನು ಹೇಳಿ, ಎಲ್ಲರನ್ನೂ ಸಮಾಧಾನ ಪಡಿಸಿದುದು. ಅನಂತರ ಎಲ್ಲರೂ ವಿನಾಯಕನ ವಿಗ್ರಹಗಳನ್ನು ಸುಂದರವಾಗಿ ನಿರ್ಮಿಸಿ, ಅವಕ್ಕೆ ‘ಢುಂಢಿರಾಜ’ ಎಂಬ ಹೆಸರನ್ನಿಟ್ಟು ಭಕ್ತಿ — ಶ್ರದ್ಧೆಗಳಿಂದ ಅರ್ಚಿಸುತ್ತಿದ್ದುದು. ದೇವನು ಆಯಾ ಭಕ್ತರ ಕಾಮನೆಗಳನ್ನು ಪೂರ್ಣಗೊಳಿಸುತ್ತ ಆಯಾ ಮೂರ್ತಿಗಳಲ್ಲಿ ಸನ್ನಿಧಿಯನ್ನಿರಿಸಿದುದು. ಪರಶಿವನು ಚಿರಕಾಲ ಕಾಶಿಯಲ್ಲಿ ನೆಲೆಸಿ, ಅನಂತರ ದೇವತೆಗಳೊಡನೆ ರಜತಗಿರಿಗೆ ತೆರಳಿದುದು. ದಿವೋದಾಸನು ದೇವನನ್ನು ಸ್ಮರಿಸುತ್ತ ಕಾಶಿಯಲ್ಲೇ ನೆಲೆಸಿದುದು. ಕಾಶೀರಾಜನು ನಿರುಪಾಧಿಕವಾಗಿ ರಾಜ್ಯವಾಳಿದುದು. ಇದನ್ನು ಗಮನಿಸಿ, ದೇವನು ತನ್ನ ಈ ಅವತಾರವನ್ನು ಪರಿಸಮಾಪ್ತಿಗೊಳಿಸಲು ಇದೇ ಸಕಾಲವೆಂದು ನಿಶ್ಚಯಿಸಿ, ತಂದೆ — ತಾಯಿಯರಿಗೆ ಈ ವಿಷಯವನ್ನು ಹೇಳಿ, ಅವರಿಗೆ ಅನೇಕ ವರಗಳನ್ನಿತ್ತು ಇದ್ದಕ್ಕಿದ್ದಂತೆಯೇ ಅಂಟರ್ಹಿತನಾದುದು. ಅದೆತಿ — ಕಶ್ಯಪರ ಸಂತಾಪ. ದೇವನ ಆಜ್ಞೆಯಂತೆ ಅದಿತಿ — ಕಶ್ಯಪರು ವಿನಾಯಕನ ಮೂರ್ತಿಯನ್ನು ನಿರ್ಮಿಸಿ, ಅದಕ್ಕೆ ‘ವಿನಾಯಕ’ ಎಂದು ಹೆಸರಿಟ್ಟು, ಅದನ್ನು ಸದಾ ಪೂಜಿಸುತ್ತಿದ್ದುದು. ‘ವಿನಾಯಕನ ಅತಾರಿಕ ಕಥೆಯು ಮುಗಿದುದು. ಮುಂದೆ ಮಯೂರೇಶ್ವರನಾಗಿ ದೇವನು ಅವತರಿಸಿ, ನಡೆಸಿದ ಅದ್ಭುತ ಮಹಿಮಾಬೋಧಕ ಕಥೆಗಳನ್ನು ಹೇಳುವೆನೆಂದು’ ಗೃತ್ಸಮದನು ಕೀರ್ತೀದೇವಿಗೆ ಹೇಳಿದುದು.
ಮುಂದಿನ ಸಂಪುಟದ ಮೊದಲನೆಯ ಶ್ಲೋಕ
ಪರಿಶಿಷ್ಟ
೧. ಮಾರ್ಕಂಡೇಯರ ಪರಿಚಯ
೨. ಕಪಿನ, ಪುಲಹ ಮತ್ತು ಕಣ್ವ ಇವರ ಪರಿಚಯ
೩. ಸಾವಿತ್ರೀ, ಗಾಯತ್ರೀ, ವೇಣೀ, ಕೃಷ್ಣಾ
೪. ಧುನೀ, ಪುಲೊಃಮಜಾ, ಮಣಿಕರ್ಣಿಕಾ
೫. ವೀರುಧ, ಪಂಚರೂಪ, ಭಸ್ಮಾಸುರ ಸುತ, ಅಪರ್ಣಾಂಕ, ಕೇದಾರಕ್ಷೇತ್ರ
೬. ಭವವಲ್ಲಭಾ, ಭವಾನೀ, ಮಿಹಿಕಾ, ಆಚ್ಛುರಿಕಾ
೭. ಸಪ್ತಾವರನರೂಪ, ೫೬ ವಿನಾಯಕರು, ಪಂಚಮುಖ ವಿನಾಯಕ, ದಿವೋದಾಸ
೮. ಮರುತ್, ಮರೀಚಿ
೯. ಬುದ್ಧ, ಪ್ರತಿ, ಖೇಚರೀಮುದ್ರಾ
೧೦. ಊರ್ಜಸ್ನಾಈ
೧೧. ಝಷಸ್ನಾಈ, ವಿದ್ಯಾ
೧೨. ಅಘೋರಮಂತ್ರ, ಪಂಚಪ್ರೇತಾಸನ