ಶ್ರೀ ಗಣೇಶ ಪುರಾಣಂ – ಸಂಪುಟ ೪
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೧ನೆಯ ಅಧ್ಯಾಯ
ಇದುವರೆಗೂ ವಿಸ್ತರಿಸಿ ಹೇಳಿದ ಉಪಾಖ್ಯಾನಗಳನ್ನು ಕೇಳಿದರೂ ತೃಪ್ತಿಯನ್ನು ಹೊಂದದ ಮುನಿಗಳು ಪುನಃ ಆಕ್ಯಾಯಿಕೆಗಳನ್ನು ಹೇಳಬೇಕೆಂದು ಸೂತ ಪೌರಣಿಕರನ್ನು ಪ್ರಾರ್ಥಿಸಿದುದು. ಉಪಾಸನಾಖಂಡವನ್ನು ಇರುವರೆಗೂ ಹೇಳಿರುವುದಾಗಿಯೂ, ಇನ್ನು ಮುಂದೆ ದೇವನ ಬಾಲಲೀಲಾ ವಿನೋದಗಳನ್ನು ಹೇಳುವುದರ ಮೂಲಕ ದೇವನು ದುಷ್ಟರನ್ನು ನಿಗ್ರಹಿಸಿದ ವಿಷಯವನ್ನು ಸಹ ವಿವರಿಸುವುದಾಗಿಯೂ ಸೂತರು ಹೇಳಿದುದು. ಮುನಿಗಳು ಪುರಾಣದ ಮಾಹಾತ್ಮ್ಯವನ್ನು ವರ್ಣಿಸಿದುದು. ಶ್ರೀ ಗಣೇಶನ ಬಾಲಚರಿತ್ರೆಯನ್ನು ಮೊದಲು ಬ್ರಹ್ಮದೇವನು ವ್ಯಾಸರಿಗೆ ಹೇಳಿದನೆಂದೂ, ಅದನ್ನೇ ಭುಗು ಮಹರ್ಷಿಗಳು ಸೋಮಕಾಂತ ಮಹಾರಾಜನಿಗೆ ಹೇಳಿದುದಾಗಿಯೂ, ಪರಂಪರಗತವಾದ ಆ ಕಥಾನಕವನ್ನೇ ತಾವೂ ಮುಂದುವರಿಸಿ ಹೇಳುವುದಾಗಿಯೂ ಸೂತರು ಹೇಳಿ, ವ್ಯಾಸ – ಬ್ರಹ್ಮಾ ಇವರ ಸಂವಾದದಿಂದ ಆರಂಭವಾದ ಕಥೆಗಳನ್ನು ಹೇಳಲು ಉಪಕ್ರಮಿಸಿದುದು. ‘ಶ್ರೀ ಗಣೇಶನು ಯಾವ ಯಾವ ರೂಪಗಳಿಂದ ಅವತರಿಸಿ ಯಾವ ಯಾವ ಕಾರ್ಯಗಳನ್ನು ಮಾಡಿದನೆಂಬುದನ್ನು’ ತಮಗೆ ತಿಳಿಸಬೇಕೆಂದೂ, ಉಪಾಸನಾ ಖಂಡವನ್ನು ಕೇಳಿದಾಗ್ಯೂ ತಮಗೆ ತೃಪ್ತಿಯಾಗಿಲ್ಲವೆಂದೂ ವ್ಯಾಸರು ಪ್ರಶ್ನಿಸಿದ್ದು. ಸತ್ಕಥಾ ಚರಿತ್ರೆಯನ್ನು ಕೇಳಬೇಕೆಂದು ಪ್ರಶ್ನಿಸಿದ್ದಕ್ಕೆ ಬ್ರಹ್ಮನು ಅವರನ್ನು ಹೊಗಳಿ, ಶ್ರೀ ಗಣೇಶನ ವಾಲಚರಿತ್ರೆಯನ್ನು ಒಂದು ಆಖ್ಯಾಯಿಕೆಯ ರೂಪವಾಗಿ ಹೇಳಲುಪಕ್ರಮಿಸಿ, ಇದನ್ನು ಮಹಾ ವಿಷ್ಣುವಿನಿಂದ ತಾನು ತಿಳಿದುದಾಗಿ ಹೇಳಿದುದು. ದೇವನಾದ ಗಣಪತಿಯು ಯುಗಭೇದೇನ ಭಿನ್ನ — ಭಿನ್ನ ರೂಪ, ನಾಮ ಇವನ್ನು ಧರಿಸಿ, ಬೇರೆ ಬೇರೆ ವಾಹನಗಳನ್ನೇರಿ ಅವತರಿಸಿದ ವರ್ಣನೆ. ಬಾಲಚರಿತ್ರೆಯಲ್ಲಿ ಮೊದಲನೆಯದಾಗಿ ರೌದ್ರಕೇತುವಿನ ಕಥೆಯನ್ನು ಆರಂಭಿಸಿದ್ದು. ರೌದ್ರಕೇತುವಿನ ಹೆಂಡತಿ; ಶಾರದೆಯ ರೂಪ — ಲಾವಣ್ಯಗಳ ವರ್ಣನೆ. ಅವಳು ಇಬ್ಬರು ಮಕ್ಕಳನ್ನು ಪ್ರಸವಿಸುದುದು. ಪುತ್ರೋತ್ಪತ್ತಿಯಿಂದ ರೌದ್ರಕೇತುವು ತನ್ನನ್ನು ಕೃತಕೃತ್ಯನನ್ನಾಗಿ ಭಾವಿಸಿ, ಅವಕ್ಕೆ ಜಾತಕರ್ಮಾದಿಗಳನ್ನು ವಿಜೃಂಭಣೆಯಿಂದ ನಡೆಸಿದುದು. ಬ್ರಾಹ್ಮಣರ ಸಲಹೆಯಂತೆ ಮಕ್ಕಳಿಗೆ ‘ದೇವಾಂತಕ, ನರಾಂತಕರೆಂದು’ ಹೆಸರನ್ನಿಟ್ಟಿದ್ದು. ಅವರ ದೇಹ ಶಕ್ತಿಯ ವರ್ಣನೆ. ಇವರನ್ನು ನೋಡಲು ನಾರದರ ಆಗಮನ. ಮಕ್ಕಳ ಭವಿಷ್ಯದ ವಿಷಯವಾಗಿ ದಂಪತಿಗಳು ನಾರದರನ್ನು ಪ್ರಶ್ನಿಸಿದ್ದು. ನಾರದರು ‘ಶಿವಪಂಚಾಕ್ಷರೀ’ ಮಂತರವನ್ನು ಉಪದೇಶಿಸಿ ಪರಮೇಶ್ವರನನ್ನು ಆರಾಧಿಸಬೇಕೆಂದು ಬಾಲಕರಿಗೆ ಸಲಹೆ ನೀಡಿದುದು. ನಾರದರ ಅಂತರ್ಧಾನ. ಬಾಲಕರು ತಪಸ್ಸಿಗಾಗಿ ತೆರಳಿದುದು.
೨ನೆಯ ಅಧ್ಯಾಯ
೩ನೆಯ ಅಧ್ಯಾಯ
ಮಾರನೆಯ ದಿನ ಅವರು ನಡೆಸಿದ ಚಟುವಟಿಕೆಗಳನ್ನು ಬ್ರಹ್ಮನು ವಿವರಿಸಿದುದು. ಇವರು ಆ ದಿನ ನಸುಕಿನಲ್ಲಿ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿದನಂತರ ದೇವ ಬ್ರಾಹ್ಮಣರನ್ನು ಅರ್ಚಿಸಿ, ದೇವನೆದುರು ಕಂಚಿನ ಪಾತ್ರೆಯಲ್ಲಿರಿಸಿದ್ದ ಕರಗಿದ ತುಪ್ಪದಲ್ಲಿ ತಮ್ಮ ಛಾಯೆಗಳನ್ನು ಮೊದಲು ನೋಡಿಕೊಂಡುದು. ಅನಂತರ ಗುರು — ಹಿರಿಯರಿಗೆ ವಂಧಿಸಿ, ಪಾತ್ರೆಯೊಡನೆ ಆ ತುಪ್ಪವನ್ನು ವಿಪ್ರರಿಗೆ ಸದಕ್ಷಿಣಾಕವಾಗಿ ಕೊಟ್ಟುದು. ಅನಂತರ ‘ಪರಮೇಶ್ವರನು ಕೊಟ್ಟ ವರಮಹಿಮೆಯಿಂದ ತಾನು ಸ್ವರ್ಗಲೋಕವನ್ನು ಜಯಿಸುವುದಾಗಿಯೂ, ತಮ್ಮನ್ನು ಮರ್ತ್ಯ ಹಾಗೂ ಪಾತಾಳ ಲೋಕಗಳನ್ನು ಜಯಿಸುವಂತೆಯೂ’ ಹಿರಿಯನಾದ ದೇವಾಂತಕನು ಸಲಹೆಯನ್ನಿತ್ತದು. ಹೀಗೆ ತಮ್ಮ ತಮ್ಮೊಳಗೆ ನಿಶಯಿಸಿಕೊಂಡ ಮೇಲೆ ಒಂದು ಶುಭದಿವಸ ಒಳ್ಳೆಯ ಮುಹೂರ್ತದಲ್ಲಿ ದೇವಾಂತಕನು ಅಮರಾವತೀನಗರಕ್ಕೆ ಹೋಗಿ ಅಲ್ಲಿದ್ದ ಸುಂದರವಾದ ಉದ್ಯಾನವನವನ್ನು ಮೊದಲು ಭಂಗಪಡಿಸಿದುದು. ಇದಾದನಂತರ ಯುದ್ಧಕ್ಕೆ ಸಿದ್ಧನಾಗಿ ಬಹಳ ದಿಟ್ಟತನದಿಂದ ಇಂದ್ರನೆದುರಿಗೆ ಹೋಗಿ ನಿಂತುದು. ಈ ರಾಕ್ಷಸನನ್ನೂ, ಇವನ ಚೇಷ್ಟೆ — ಸಾಹಸ ಇವನ್ನೂ ನೋಡಿ ದೇವತೆಗಳು ಹೆದರಿ ಗದ್ದಲವನ್ನೆಬ್ಬಿಸಿ ಓಡಿಹೋದುದು. ರಾಕ್ಷಸನು ಅವರನ್ನು ಬೆನ್ನಟ್ಟಿ ಹೋದುದು, ಆಗ ಉಂಟದ ಭಯಾನಕ ಉತ್ಪಾತನಗಳ ವರ್ಣನೆ. ಇಂದ್ರನೂ ಹೆದರಿಹೋದುದು. ಎಲ್ಲರೂ ರಕ್ಷಣೆಗಾಗಿ ಚಂದ್ರನ ಬಳಿಗೆ ಬಂದುದು. ಆಗ ತ್ತಯಂತರವಿಲ್ಲದೇ ಇಂದ್ರನು ತನ್ನ ಐರಾವತವನ್ನೇರಿ ವಜ್ರಾಯುಧವನ್ನು ಕೈಗೆ ತೆಗೆದುಕೊಂಡು ರಾಕ್ಷಸನಿಗೆ ಎದುರಾದುದು. ‘ರಾಕ್ಷನ ಮೇಲೆ ಧುಮುಕಿ ಸಾಹಸದಿಂದ ಹೋರಾಡು’ವಂತೆ ಇಂದ್ರನು ತನ್ನ ಸೇನೆಯನ್ನು ಗದರಿಸಿ ಪ್ರೇರಿಸಿದ್ದು. ಅವರೂ ಗ್ತಂತರವಿಲ್ಲದೆ ರಾಕ್ಷಸನಿಗೆ ಎದುರಾಗಲು, ಆಗ ದೇವಾಂತಕನು ‘ಯುದ್ಧವನ್ನು ನಿಲ್ಲಿಸಿ, ಸುಮ್ಮನೆ ಶರಣಾಗತನಾಗುವುದು ಒಳ್ಳೆಯದು’ ಎಂದು ಇಂದ್ರನಿಗೆ ಹೇಳಿ ತನಗೆ ಪರಮೇಶ್ವರನಿಂದ ಲಭ್ಧವಾದ ವರಗಲ ವಿಷಯವನ್ನು ಜ್ಞಾಪಿಸಿದುದು. ಇಂದ್ರನಿಗೆ ಇವನ ಆಕೃತಿ — ವರಲಾಭ ಇವನ್ನು ಕೇಳಿ ಎದೆ ನಡುಗಿದ್ದರೂ, ಮೇಲೆ ಮಾತ್ರ ಅದನ್ನು ತೋರ್ಪಡಿಸದೇ, ಅವನನ್ನು ಗದ್ದರಿಸಿ, ತನ್ನ ವಜ್ರಾಯುಧದಿಂದ ಒಮ್ಮೆ ಬಲವಾಗಿ ಹೊಡೆದುದು. ಗಾಜಿನ ಬುರುಡೆಯನ್ನು ಬಂಡೆಯ ಮೇಲೆ ಎಸೆದಂತಾಗಿ ವಜ್ರಾಯುಧವು ಮುರಿದು ಚೂರು ಚೂರಾಗಲು ದೇವಾಂಟಕನು ಇಂದ್ರನನ್ನು ಒಮ್ಮೆ ಗುದ್ದಿದುದು. ಇಂದ್ರನು ಪರಾಜಯವನ್ನು ಹೊಂದಿ ಓಡಿಹೋದುದು. ದೇವಾಂತಕನು ದೇವತೆಗಳನ್ನೆಲ್ಲ ಅಟ್ಟಿಕೊಂಡು ಹೋಗಿ ಇಂದ್ರನನ್ನು ಹಂಗಿಸಿದುದು. ಇವನು ದೇವತೆಗಳ ವಿಷಯದಲ್ಲಿ ತೋರಿಸಿದ ಕ್ರೌರ್ಯದ ವರ್ಣನೆ. ದೇವಾಂತಕನು ವಿಜಯವನ್ನು ಗಳಿಸಿ ತಾನು ಇಂದ್ರಪದವಿಯನ್ನೇರಿದುದು. ದೇವತೆಗಳು ಗುಡ್ಡಗಾಡಿಗೆ ಹೋಗಿ, ಗೆಡ್ಡೆ — ಗೆಣಸುಗಳ ಆಹಾರದಿಂದ ಜೀವಿಸಲಾರಂಭಿಸಿದುದು. ಇದುವರೆಗೂ ನಾಯಕನಿಲ್ಲದಂತಾಗಿದ್ದ ದೈತ್ಯ — ದಾನವರು ಇವನ ಬಳಿ ಬಂದು ಅವನ ಅಧಿಪತ್ಯವನ್ನು ಒಪ್ಪಿಕೊಂಡುದು. ದೇವಾಂತಕನಿಗೆ ಮಹೇಶ್ವರನಿತ್ತ ವರಗಳನ್ನು ತಿಳಿದಿದ್ದರಿಂದ ದೇವತೆಗಳಿಗೆ ಹಿರಿಯರಾದ ಬ್ರಹ್ಮಾ — ವಿಷ್ಣು ಇವರು ಯಾವ ವಿಧವಾಗಿಯೂ ಪ್ರತಿಭಟನೆಯನ್ನು ತೋರದೇ ತಮ್ಮ ಲೋಕಗಳನ್ನು ಬಿಟ್ಟು ತಾವು ಬೇರೆ ಕಡೆ ಮೊದಲೇ ಹೊರಟುದು. ಇಂದ್ರನ ಪದವಿಯನ್ನೇರಿದ್ದ ದೈತ್ಯನು ಬ್ರಹ್ಮಾದಿಗಳ ವಾಹನಗಳನ್ನೇರಿ ವಿಹರಿಸಿದುದು, ಮತ್ತು ಲೋಕಪಾಲಕರ ಸ್ಥಾನಗಳನ್ನು ತಮ್ಮವರನ್ನೇ ಇರಿಸಿ ನಿರಾತಂಕನಾದುದು.
೪ನೆಯ ಅಧ್ಯಾಯ
೫ನೆಯ ಅಧ್ಯಾಯ
೬ನೆಯ ಅಧ್ಯಾಯ
೭ನೆಯ ಅಧ್ಯಾಯ
೮ನೆಯ ಅಧ್ಯಾಯ
೯ನೆಯ ಅಧ್ಯಾಯ
೧೦ನೆಯ ಅಧ್ಯಾಯ
೧೧ನೆಯ ಅಧ್ಯಾಯ
೧೨ನೆಯ ಅಧ್ಯಾಯ
೧೩ನೆಯ ಅಧ್ಯಾಯ
೧೪ನೆಯ ಅಧ್ಯಾಯ
೧೫ನೆಯ ಅಧ್ಯಾಯ
೧೬ನೆಯ ಅಧ್ಯಾಯ
೧೭ನೆಯ ಅಧ್ಯಾಯ
೧೮ನೆಯ ಅಧ್ಯಾಯ
೧೯ನೆಯ ಅಧ್ಯಾಯ
೨೦ನೆಯ ಅಧ್ಯಾಯ
ಕಾಶೀರಾಜನ ಮನೆಯಲ್ಲಿ ವಿವಾಹ ಯಾವಾಗ ನಡೆಯಿತು? ಇದನ್ನು ಹೇಳಬೇಕೆಂದು ವ್ಯಾಸರು ಪರಮೇಷ್ಠಿಯನ್ನು ಪ್ರಶ್ನಿಸಿದುದು. ಪರಂಪರೆಯಾಗಿ ಬರುತ್ತಲಿದ್ದ ವಿಪತ್ತುಗಳನ್ನು ಪರಿಶೀಲಿಸಿ ‘ಇದು ಕಳೆದೊಡನೆ ಲಗ್ನವನ್ನು ಮಾಡೋಣ’ ಎಂದು ರಾಜನು ಕಾಲವನ್ನು ನೂಕುತ್ತಲೇ ಬಂದನು. ಕೂಪ — ಕಂದರರು ಮೃತರಾದ ಮೇಲೆ ಅಂಧಕ, ಅಂಭಾಸುರ ಮತ್ತು ತುಂಗ ಎಂಬ ಮೂರು ಜನ ರಾಕ್ಷಸ ವೀರರನ್ನು ನರಾಂತಕನು ಬಲಕನ ಮೇಲೆ ಧಾಳಿಗಾಗಿ ಅಟ್ಟಿದುದು. ಇವರಿಗೂ, ನಾಗರೀಕರಿಗೂ ಬಹಲ ಘೋರವಾದ ಸಂಗ್ರಾಮ ನಡೆದುದು. ಇದನ್ನು ಕೇಳಿದ ಕೂಡಲೇ ಬ್ರಹ್ಮಾದಿಗಳೆಲ್ಲ ಓಡಿಹೋದುದು. ‘ಕಶ್ಯಾಪಸುತನು ಎಂದಿಗೆ ದೃಗ್ಗೋಚರನಾದಾನು? ಅವನನ್ನು ಕೊಂದು ನಾವು ಎಂದಿಗೆ ಕೃತಕೃತ್ಯರಾದೇವು?’ ಎಂದು ಇವರು ತವಕಿಸುತ್ತಲಿದ್ದರು. ‘ಹಿಂದೆ ಬಂದ ವೀರೆಲ್ಲ ಮಡಿದು ಹೋದರು, ನಮಗೂ ಅದೇ ತತಿ ಬಂದರೂ ಬರಬಹುದು. ಏನೇ ಇರಲಿ, ಇವನನ್ನು ವಧಿಸದ ಹೊರತು ಸಜೀವರಾಗಿ ನಾವು ಹಿಂದಿರುಗಬಾರದು’ ಎಂದು ತಮ್ಮಲ್ಲೇ ನಿಶ್ಚಯಿಸುತ್ತಿರುವಷ್ಟರಲ್ಲಿ ‘ಒಬ್ಬೊಬ್ಬರು ಒಂದೊಂದು ಬಗೆಯ ಕೃತ್ರಿಮ ರೂಪವನ್ನು ಧರಿಸೋಣ’ ಎಂದು ಒಂದು ಬಗೆಯ ತೀರ್ಮಾನಕ್ಕೆ ಬಂದುದು. ಇದರಂತೆ ಅಂಧಕನು ಕಾರ್ಗತ್ತಲೆಯ ರೂಪವನ್ನು ತಳೆದು ದಿಗ್ವಿದಿಕ್ಕುಗಳನ್ನೆಲ್ಲ ವ್ಯಾಪಿಸಿ, ಯಾವುದೂ ಕಾಣದಂತೆ ಮಾಡಿದುದು. ಅಂಭಾಸುರನು ತಾನು ಜಪರೂಪವನ್ನು ಧರಿಸಿ ಪ್ರವಾಹವಾಗಿ ರಾಜಧಾನಿಯ ಮೇಲೆ ಮಳೆಯಂತೆ ಧಾರೆಯಾಗಿ ಸುರಿದುದು. ತುಂಗನು ದೊಡ್ಡ ಪರ್ವತವಾಗಿ ನಗರದ ಮೇಲೆ ಬೀಳಲು ಉಪಕ್ರಮಿಸಿದುದು. ರಾಕ್ಷಸರ ಗರ್ಜನೆಯಿಂದ ದಿಗಂಚುಗಳೆಲ್ಲ ನಡುಗಿದುದು. ಸರ್ವತ್ರ ಕತ್ತಲು ಕವಿದುದರಿಂದ ಸೂರ್ಯಮಂಡಲವು ಸಹ ಯಾರಿಗೂ ಕಾಣದಂತಾದುದು. ‘ಇದು ಪ್ರಲಯವೇ ಇರಬೇಕು’ ಎಂದು ಜನರು ಭಾವಿಸಿದುದು. ಆಗುಂಟದ ವ್ಯವಹಾರ ನೈಪರೀತ್ಯದ ವರ್ಣನೆ. ಮಳೆ, ಪರ್ವತದ ಕಲ್ಲುಗಳ ಹೊಡೆತ ಇವುಗಳಿಂದ ನಗರದ ನಾನಾ ಪ್ರದೇಶಗಳೂ, ಪ್ರಾಸಾದಗಳೂ ನೆಲಕ್ಕೆ ಉರುಳಿದುದು. ಇದರಿಂದುಂಟಾದ ವಿಪ್ಲವ ಮತ್ತು ಜನರ ಗೋಳಾಟ ಇವುಗಳ ವರ್ಣನೆ. ‘ಇದು ರಾಕ್ಷಸರ ಮಾಯೆ’ ಎಂದರಿತ ದೇವನು ಒಡನೆಯೇ ಒಂದು ವಟವೃಕ್ಷವನ್ನು ರಚಿಸಿದುದು. ವೃಕ್ಷದ ವಿಸ್ತೀರ್ಣಾದಿಗಳ ವರ್ಣನೆ. ತಾನೊಂದು ವಿಚಿತ್ರ ತರಹದ ಪಕ್ಷಿಯಾಗಿ ಮಾರ್ಪಟ್ಟು ಆ ಗಿಡದ ಮೇಲೆ ಕುಳಿತು ಜನರಿಗುಂಟಾಗುತ್ತಿದ್ದ ಮಳೆಯ ಭೀತಿಯನ್ನು ತನ್ನ ರೆಕ್ಕೆಗಳ ಪ್ರಸಾರದಿಂದ ತಪ್ಪಿಸಿದುದು. ಇಷ್ಟರಲ್ಲಾಗಲೇ ನಗರವನ್ನು ತುಂಬಿ ನಿಂತಿ ಜಲವನ್ನೆಲ್ಲ ತನ್ನ ಕೊಕ್ಕಿನಿಂದ ಕುಡಿದು ಬಿಟ್ಟುದು. ತನ್ನ ದೇಹದ ಕಾಂತಿಯಿಂದ ಕತ್ತಲೆಯನ್ನು ಕಳೆದು ಸ್ವಚ್ಛವಾದ ಬೆಳಕನ್ನುಂಟುಮಾಡಿದುದು. ಈ ವಿಪತ್ತು ಪರಿಹೃತವಾಗಲು ಜನರು ಹರ್ಷಿಸಿಅಭೂತಪೂರ್ವವಾದ ಆ ಪಕ್ಷಿಯನ್ನು ನೋಡಲು ಮುನ್ನುಗ್ಗಿ ಬಂದುದು. ಜನ ಸಮ್ಮರ್ದದ ವರ್ಣನೆ. ಕಾಶೀರಾಜನೂ ಅಲ್ಲಿಗೆ ಬಂದುದು. ತಮ್ಮನ್ನು ರಕ್ಷಿಸಿದ ದೇವನನ್ನು ಬಾಯಿ ತುಂಬ ಹೊಗಳಿದುದು. ಸಂಗಡಿಗರಿಬ್ಬರೂ ನಿರ್ವೀರ್ಯರಾದುದನ್ನು ಕಂಡು, ತುಂಗನು ರೊಚ್ಚಿಗೆದ್ದು ಒಮ್ಮೆ ಗರ್ಜಿಸಿ ದಿಕ್ಕುಗಳನ್ನೆಲ್ಲ ನಡುಗಿಸಿಬಿಟ್ಟುದು. ಅವನು ಧರಿಸಿದ್ದ ಪರ್ವತರೂಪದ ವರ್ಣನೆ. ಪರ್ವತನಾದ ತುಂಗನು ತನ್ನಲ್ಲಿದ್ದ ಗಿರಿನದೀ ಪ್ರವಾಹಗಳಿಂದ ನಗರವನ್ನು ತೇಲಿಸಲೆತ್ನಿಸಿದುದು. ಇದನ್ನು ಕಂಡ ಪಕ್ಷಿರೂಪೀ ದೇವನು ತನ್ನ ರೆಕ್ಕೆಗಳನ್ನು ಯೋಜನಾಕಾರವಾಗಿ ಪಸರಿಸಿಕೊಂಡು ಅಂತರಿಕ್ಷದಲ್ಲಿ ಸುತ್ತಲೂ ಹಾರಾಡುತ್ತ ಆ ಜಲಧಾರೆಯನ್ನು ತಡೆದುದು. ಕೊನೆಗೆ ತನ್ನ ಕೊಕ್ಕಿನಿಂದ ಆ ತುಂಗಾದ್ರಿಯನ್ನು ಕಚ್ಚಿ ಕೊಂಡು ಬಹಳ ದೂರ ಮೇಲಕ್ಕೆ ಹಾರಿಹೋದುದು. ಸೂರ್ಯನ ಪ್ರಖರ ಕಿರಣಗಳ ಉರಿಯನ್ನು ತಾಳಲಾರದೇ ಅಸುರತ್ರಯರೂ ಪ್ರಾಣಗಳನ್ನು ತ್ಯಜಿಸಿ ಭೂಮಿಗೆ ಬಿದ್ದುದು. ಅವರ ದೇಹಗಳು ನೆಲಕ್ಕೆ ಬಿದ್ದಾಗ ಅನೇಕ ವನಗಳೂ, ನಗರಗಳೂ ಚೂರ್ಣವಾದುದು. ಇವರ ದೇಹಗಳನ್ನು ನೊಡಲು ಜನರು ಧಾವಿಸಿ ಬಂದುದು. ಇವರ ದೇಹಗಳನ್ನು ನೋಡಲು ಜನರು ಧಾವಿಸಿ ಬಂದುದು. ಇವರ ದೇಹಗಳು ತುಂಡು ತುಂಡಾಗಿ ಬೀಳುವಾಗ ತೋರಿಬಂದದೃಶ್ಯದ ವರ್ಣನೆ. ದೇವನಂತೆ ಕಂಡು ಬಂದ ವಟವೃಕ್ಷವು ಕೆಲವೊಂದು ನಿಮಿಷಗಳಲ್ಲೇ ಅದೃಶ್ಯವಾದುದು. ರಾಜ ಮತ್ತು ನಾಗರಿಕರು ಎಲ್ಲರೂ ಬಾಲಕನನ್ನು ಸ್ತುತಿಸಿದುದು. ಆಗ ಉಂಟಾದ ಶುಭ ಚಿನ್ಹಗಳ ವರ್ಣನೆ. ಈ ಮಹದನಿಷ್ಟವು ನಿವೃತ್ತವಾದುದಕ್ಕೆ ರಾಜ, ನಾರೀಕರು ಎಲ್ಲರೂ ಸೇರಿ ಅನೇಕ ದಾನಗಳನ್ನೂ, ಶಾಂತಿ ಕರ್ಮಗಳನ್ನೂ ನಡೆಸಿದುದು.
೨೧ನೆಯ ಅಧ್ಯಾಯ
೨೨ನೆಯ ಅಧ್ಯಾಯ
ಮತ್ತೊಂದು ದಿವಸ ನಡೆ ಅದ್ಭುತ ಸಂಗತಿಯನ್ನು ಹೇಳಲು ಬ್ರಹ್ಮನು ಆರಂಭಿಸಿದುದು. ಕಾಶೀರಾಜಧಾನಿಯ ಜನರು ಕಶ್ಯಪಪುತ್ರನ ಬಗ್ಗೆ ತಮಗೆ ಸರಿತೋರಿದಂತೆ ಮಾತನಾಡುತ್ತಿರಲು, ಹಿರಿಯರು ಅವರನ್ನು ಸಮಾಧಾನ ಪಡಿಸಿ ಎಲ್ಲರೊಡನೆ ರಾಜನ ಸಭೆಗೆ ಬಂದು ‘ದೇವನ ಸೇವೆಯು ತಮಗೂ ಲಭಿಸಬೇಕಾಗಿರುವುದರಿಂದ ತಮ್ಮ ಮನೆಗಳಿಗೆ ಅವನನ್ನು ಕಳಿಸಿ ಕೊಡಬೇಕೆಂದು’ ಅರಸನನ್ನು ಪ್ರಾರ್ಥಿಸಿದುದು. ರಾಜನು ಇದಕ್ಕೆ ಸಂಪೂರ್ಣವಾಗಿ ತನ್ನ ಒಪ್ಪಿಗೆಯನ್ನು ಇತ್ತು, “ಭಕ್ರಿ ಇಲ್ಲದವರು ಇವನನ್ನು ಪರೀಕ್ಷಿಸುವುದಕ್ಕೆ ಮಾತ್ರ ಹೋಗಬೇಡಿ. ನನಗೆ ಬೇಕಾದ ವಸ್ತುವನ್ನು ಇತರರೂ ಗೌರವಿಸಬೇಕೆಂದು ಒತ್ತಾಯಪಡಿಸುವುದು ಅಲೌಕಿಕವಲ್ಲವೆ?’ ಎಂದು ಹೇಳಿದುದು. ಜನರೂ ರಾಜನ ಸಲಹೆಗೆ ಒಪ್ಪುತ್ತಿರುವಷ್ಟರಲ್ಲಿ, ಬಾಲಕರೊಡನೆ ಆಟವಾಡಲು ಹೋಗಿದ್ದ ವಿನಾಯಕನು ಸಭೆಗೆ ಬಂದುದು. ಸರ್ವವನ್ನೂ ತಿಳಿದವನಾದರೂ, ಛೇಡಿಸೋಣವೆಂದು ನಿಶ್ಚಯಿಸಿ, ‘ನಾನು ಅಲ್ಪನನ್ನನ್ನೇಕೆ ಪೂಜಿಸುವಿರಿ? ಅಲ್ಲದೇ ನನ್ನನ್ನು ಪೂಜಿಸಲಿಕ್ಕೆ ಪ್ರಕೃತ ನಿಮಿತತವೇನು? ನಿಮ್ಮ ಮನೆಗಳಲ್ಲಿ ಶುಭ — ಶೋಭನ ಕಾರ್ಯಗಳಿದ್ದಾಗ ಕರೆಯಿರಿ, ಆಗ ಬರುವೆನು. ಈಗೇಕೆ ಈ ವ್ಯರ್ಥ ಖರ್ಚು?’ ಎಂತಲೂ ಮತ್ತು ‘ನೀವಿಷ್ಟು ಜನ ಏಕಕಾಲದಲ್ಲಿ ಪೂಜಿಸಿದರೆ ಒಬ್ಬೊಂಟಿಗನಾದ ನಾನು ಹೇಗೆ ನಿಮ್ಮೆಲ್ಲರ ಪೂಜೆಗಳನ್ನೂ ತೆಗೆದುಕೊಳ್ಳಲಿ?’ ಎಂದೂ ಹೇಳಿದುದು. ಇದನ್ನು ಕೇಳಿದ ಹಿರಿಯರು ‘ರಾಜನ ಮನೆಯ ಮದುವೆಯು ಮುಗಿಯಿತೆಂದರೆ ನೀನು ಹೊರಟುಬಿಡುವೆ, ರಾಜನ ಪುಣ್ಯದಿಂದ ನಿನ್ನ ದರ್ಶನ ನಮಗೆ ದೊರೆತಿದೆ. ಈ ಸಮಯವನ್ನು ನಾವು ಕಳೆದುಕೊಳ್ಳಲಾರೆವು. ನಿನಗೆ ಬೇಡವಾಗಿದ್ದರೂ ನಮಗೆ ನಿನ್ನನ್ನು ಸೇವಿಸುವುದು ಬೇಕಾಗಿದೆ. ನೀನು ಭಕ್ತಿಪ್ರಿಯ. ನಾವು ಭಕ್ತರು. ನಮ್ಮ ಇಚ್ಛೆಯನ್ನು ನಡೆಸಿಕೊಡಬೇಕು.’ ಎಂದು ಪ್ರಾರ್ಥಿಸಲು, ‘ನೀವು ಭಕ್ತರಾಗಿದ್ದರೆ ಬಹಳ ಸಂತೋಷ ನನ್ನದೇನೂ ಅಭ್ಯಂತರವಿಲ್ಲ. ಪ್ರಕೃತ ನಾನು ರಾಜಾತಿಥಿಯಾಗಿದ್ದೇನೆ. ರಾಜನು ಒಪ್ಪಿ ಕಳಿಸಿಕೊಟ್ಟರೆ ನಾನು ಎಲ್ಲಿಗೆ ಬೇಕಾದರು ಬರುವೆನು.’ ಎಂದು ಹೇಳಲು, ಎಲ್ಲರೂ ‘ದೇವನು ನಮ್ಮ ಮನೆಗೆ ಬರುವನು’ ಎಂಬ ಉತ್ಸಾಹದಿಂದಲೇ ಹಿಂದಿರುಗಿ ಹೋಗಿ, ಸ್ವಾಗತ ಸಮಾರಂಭಕ್ಕೆ ತಕ್ಕ ಸಲಕರಣೆಗಳನ್ನು ಸಿದ್ಧಪಡಿಸತೊಡಗಿದುದು. ಅವರು ಏರ್ಪಡಿಸಿದ್ದ ವೈಭವಗಳ ವಿವರಣೆ. ಆ ನಗರವಾಸಿಯಾದ ‘ಶುಕ್ಲ’ ಎಂಬ ಬ್ರಾಹ್ಮಣ ತಪಸ್ವಿಯ ರಿಕ್ತ ದಶೆಯ ವರ್ಣನೆ. ಅವನ ಪತ್ನಿಯಾದ ‘ವಿದ್ರುಮೆ’ಯ ಗುಣಶೀಲಾದಿಗಳ ವರ್ಣನೆ. ಇವರ ಪರ್ಣಕುಟೀರದ ವರ್ಣನೆ. ಇಷ್ಟಾದರೂ ಇವರು ಬಹಳ ತೃಪ್ತಿಯಿಂದ ಕಾಲವನ್ನು ಕಳೆಯುತ್ತಲಿದ್ದುದು. ‘ಜನರೆಲ್ಲರೂ ವಿನಾಯಕನ ಸತ್ಕಾರದ ಸಡಗರದಲ್ಲಿದ್ದುದರಿಂದ ತಾನು ಭಿಕ್ಷೆಗೆ ಹೋದಾಗ ಯಾರೂ ಭಿಕ್ಷೆಯನ್ನೇ ಇಡಲಿಲ್ಲ. ಇರಲಿ, ವಿನಾಯಕನು ಎಲ್ಲರ ಮನೆಗೂ ಬರುವಂತೆ ನಮ್ಮ ಮನೆಗೂ ಬರುವನು. ಅವನು ಅವತಾರವೆತ್ತಿದ ಭಗವಂತನು. ಅವನಿಗೆ ಆತಿಥ್ಯವನ್ನೀಯಲು ಏನನ್ನಾದರೂ ಸಿದ್ಧ ಪಡಿಸು’ ಎಂದು ಶುಕ್ಲನು ವಿದ್ರುಮೆಗೆ ಹೇಳಿದುದು. ‘ದೇವನು ಬಡವರ ಮನೆಗೆ ಬಂದಾನೆಯೇ?’ ಎಂದು ಅವಳು ಸಂಶಯಗೊಂಡಾಗ ‘ದೇವನು ಭಾವಪ್ರಿಯನೇ ಹೊರತು, ಆಡಂಬರಪ್ರಿಯನಲ್ಲ. ನೀನು ಸಂಕೋಚ ಪಡಬೇಡ’ ಎಂದು ಸಮಾಧಾನವನ್ನು ಹೇಳಿ ಅವಳನ್ನು ಒಪ್ಪಿಸಿದುದು. ತಮ್ಮ ದಾರಿದ್ರ್ಯ ಸ್ಥಿತಿಗನುಸರಿಸಿ ಮನೆಯಲ್ಲಿ ದೊರೆತ ಮುಗ್ಗಲು ಧಾನ್ಯಗಳಿಂದಲೇ ಅತಿಥ್ಯ, ವಸ್ತ್ರ ಇವನ್ನು ಸಿದ್ಧಪಡಿಸಿದುದು. ತಮ್ಮ ಕುಟೀರವನ್ನು ರಂಗವಲ್ಯಾದಿಗಳಿಂದ ಅಲಂಕರಿಸಿದುದು. ದೊರೆತ ವನ್ಯ ಕುಸುಮಗಳನ್ನು ತಂದು ಶೇಖರಿಸಿದುದು.
೨೩ನೆಯ ಅಧ್ಯಾಯ
ದಿನದಂತೆ ಬಾಲಕನು ಹುಡುಗರೊಡನೆ ಆಟವಾಡಲು ಹೋದುದು. ರಾಜನು ಸಭೆಗೆ ಬಂದು ಭದ್ರಾಸನದಲ್ಲಿ ಮಂಡಿಸಿದುದು. ರಾಜಸಭೆಯಲ್ಲಿ ವೇಶ್ಯೆಯರು ನರ್ತಿಸುತ್ತಿದ್ದು. ಅದನ್ನು ಅರಸನು ಆಸಕ್ತಿಯಿಂದ ನೋಡುತ್ತಿರುವಷ್ಟರಲ್ಲಿ ಸನಕಾದಿಗಳು ಅಲ್ಲಿಗೆ ಬಂದುದು. ಅವರ ದೇಹದ ದಿವ್ಯಕಾಂತಿಯ ವರ್ಣನೆ. ರಾಜನು ಅವರನ್ನು ಪ್ರತ್ಯುತ್ಥಾನದಿಂದ ಗೌರವಿಸಿ, ಆಗಮನಕ್ಕೆ ಕಾರಣವನ್ನು ಕೇಳಿದುದು. ರಾಜನು ಅವರ ವಿಷಯಕವಾಗಿ ಮಾಡಿದ ವರ್ಣನೆ. ‘ನಾವು ನಿತ್ಯತೃಪ್ತರು ನಮಗೇನೂ ಬೇಕಿಲ್ಲ, ಶ್ರೀಗಜಾನನನು ಅವತಾರವನ್ನೆತ್ತಿದ ದೇವೋತ್ತನು, ಅವನನ್ನು ಸಂದರ್ಶಿಸೋಣವೆಂದು ನಿನ್ನ ಮನೆಗೆ ಬಂದಿರುವೆವು. ಇಷ್ಟೇ ಹೊರತು ಮತ್ತಾವ ಆಶೆಯಿಂದಲೂ ನಾವು ಇಲ್ಲಿಗೆ ಬಂದಿಲ್ಲವೆಂದು’ ಹೇಳಲು, ಅಷ್ಟರಲ್ಲಿ ಬಾಲಕರೊಡನೆ ತಾನೂ ಪರಮ ಪ್ರಾಕೃತನಾಗಿ ತೋರುತ್ತ ವಿನಾಯಕನು ಸಭೆಗೆ ಬಂದುದು. ‘ಇವನೇ ಕಶ್ಯಪನಂದನ. ಇವನನ್ನು ನೀವು ವಂದಿಸಿ ಪೂಜಿಸಬಹುದು’ ಎಂದು ರಾಜನು ಹೇಳಿದುದು. ಅತ್ಯಂತ ಪ್ರಾಕೃತ ಬಾಲಕನಾಗಿ ತೋರಿಬಂದ ವಿನಾಯಕನನ್ನು ನೋಡಿ ‘ಇವನ ದುರಾಚಾರದಿಂದ ಕಶ್ಯಪನೂ ಕೆಟ್ಟನು. ಇವನಿಗೆ ಸ್ಪೃಶ್ಯಾಸ್ಪೃಶ್ಯಗಳ ಪರಿವೆಯೇ ಇಲ್ಲ’ ಎಂದು ಅಸಹ್ಯಗೊಂಡುದು. ‘ನಿಮಗೇಕೆ ಬಂತು, ಈ ಅಜ್ಞಾನ? ನಿಶ್ಚಲಜ್ಞಾನವನ್ನು ಕಳೆದುಕೊಂಡ ಮೇಲೆ ನೀವು ಇಲಿಗೆ ಬಂದುದೂ ವ್ಯರ್ಥವೇ ಸರಿ.’ ಎಂದು ಬಾಲಕನು ಅಧಿಕ್ಷೇಪಿಸಿದುದು. ಬಹಳ ಅಸಹ್ಯಗೊಂಡ ಋಷಿಗಳು ಸ್ವರ್ಗಕ್ಕೆ ಹಿಂದಿರುಗಲು ರಾಜನ ಅನುಮತಿಯನ್ನು ಬೇಡಿದುದು. ರಾಜನು ದೇವನ ಗುಣಕಥನ ಮಾಡಿ, ಆತಿಥ್ಯವನ್ನು ಸ್ವೀಕರಿಸದೇ ಹೋಗಬಾರದೆಂದು ನಿರ್ಬಂಧಿಸಿದುದು. ‘ರಾಜರ ಮನೆಯ ಅನ್ನವನ್ನು ಸಾತ್ತ್ವಿಕರು ತಿನ್ನಬಾರದು’ ಂದು ಹೇಳಿ, ಅವರು ಮಣಿಕರ್ಣಿಕಾತೀರಕ್ಕೆ’ ಹೊರಟುದು. ಬಾಲಕನು ಆಟವಾಡಲು ಮೊದಲಿನಂತೆ ಹೊರಟುದು. ಬಾಲಕನು ಸ್ನಾನಾದಿಗಳನ್ನು ಮುಗಿಸಿಕೊಂಡು ನೇರವಾಗಿ ಶುಕ್ಲನ ಮನೆಗೆ ಬಂದುದು. ದೇವನು ಬಂದ ಬಗೆಯ ವರ್ಣನೆ. ಇವನನ್ನು ಕಂಡು ಪರಮ ಹರ್ಷಿತರಾದ ಮುನಿದಂಪತಿಗಳ ಪರವಶತೆ. ಶುಕ್ಲನು ಬಯಿ ತುಂಬ ದೇವನನ್ನು ಹೊಗಳಿದುದು. ದಂಪತಿಗಳು ದೇವನ ಪಾದಗಳನ್ನು ತೊಳೆದು ತೀರ್ಥವನ್ನು ತಮ್ಮ ತಲೆಯಲ್ಲಿ ಧರಿಸಿದುದು. ಅವರು ಸಲ್ಲಿಸಿದ ಪೂಜೋಪಕರಣಗಳ ವರ್ಣನೆ. ‘ಕದನ್ನವನ್ನು ದೇವನಿಗೆ ಹೇಗೆ ಅರ್ಪಿಸಲಿ?’ ಎಂದು ಸಂಕೋಚಿಸಿದ ವಿದ್ರುಮೆಯನ್ನು ಕುರಿತು ‘ತಾಯೇ! ನಿನ್ನ ಮನೆಯಲ್ಲಿ ಏನು ಇದೆಯೋ, ಅದನ್ನು ನಿಸ್ಸಂಕೋಚದಿಂದ ಕೊಡು. ಭಕ್ತಿಯಿಂದ ಏನನ್ನು ಕೊಟ್ಟರೂ ನಾನು ಅದನ್ನು ಆದರದಿಂದ ಸ್ವೀಕರಿಸಿ ತೃಪ್ತಿಯನ್ನು ಹೊಂದುವೆನು. ಸೊಕ್ಕಿನಿಂದ ಕೂಡಿದವರು ಅಮೃತವನ್ನಿತ್ತರೂ ಅದು ನನಗೆ ವಿಷದಂತಾಗುವುದು’ ಎಂದು ದೇವನು ಸಮಾಧಾನ ಪಡಿಸಿದುದು. ಗಂಜಿಯಂತಹ ಅನ್ನವನ್ನು ಸಂತೋಷದಿಂಡ ದೇವನು ಭುಜಿಸಿದುದು. ಸಂಗಡಿಗರು ಮೊದಮೊದಲು ಹಾಸ್ಯ ಮಾಡಿಅರೂ, ಅವರಲ್ಲಿ ಕೆಲವರು ಅದನ್ನೇ ಭುಜಿಸಿ ತೇಜೋವಂತರಾದುದು. ಅನ್ನವು ಪ್ರವಾಹದಂತೆ ಸಮೃದ್ಧಿಯಾಗಿ ಹರಿಯಲು ಅದನ್ನು ದೇವನು ತಾನು ದಶಭುಜನಾಗಿ ಬಾಚಿ ಭುಜಿಸಿದುದು. ತಂಬೂಲಾದಿಗಳನ್ನು ಸ್ವೀಕರಿಸಿದ ನಂತರ ಶುಕ್ಲನನ್ನು ಕುರಿತು ‘ನಾನು ಪ್ರೀತನಾಗಿದ್ದೇನೆ. ವರಗಳನ್ನು ಬೇಡು’ ಎಂದು ಹೇಳಿದುದು. ‘ನನ್ನಂತಹ ಪಾಮರನ ಮನೆಯನ್ನು ನಿನ್ನ ಪಾದಧೂಳಿಯಿಂದ ಪವಿತ್ರ ಗೊಳಿಸಿದುದೇ ದೊಡ್ಡ ವರವಲ್ಲವೇ ದೇವ! ನೀನು ನಮ್ಮ ವಿಷಯದಲ್ಲಿ ಪ್ರೀತನಾಗಿದ್ದರೆ, ‘ನಿನನನ್ನು ಎಂದೆಂದಿಗೂ ಮರೆಯಬಾರದು. ಅಂತ್ಯದಲ್ಲಿ ನಿನ್ನ ಸಾನ್ನಿಧ್ಯವನ್ನೇ ಸೇರಬೆಕು. ಇವಿಷ್ಟನ್ನು ವರಗಳನ್ನಾಗಿ ಕೊಡು’ ಎಂದು ಪ್ರಾರ್ಥಿಸಿದುದು. ‘ಅಗತ್ಯವಾಗಿ ಆಗಬಹುದು’ ಎಂದು ಹೇಳಿ, ಅವರಿಗೆ ಸುರೂಪವನ್ನೂ, ಸಕಲೈಶ್ವರ್ಯಗಳನ್ನೂ ಅನುಗ್ರಹಿಸಿ ದೇವನು ಮತ್ತೊಂದೆಡೆಗೆ ಹೊರಟುದು.
೨೪ನೆಯ ಅಧ್ಯಾಯ
೨೫ನೆಯ ಅಧ್ಯಾಯ
೨೬ನೆಯ ಅಧ್ಯಾಯ
೨೭ನೆಯ ಅಧ್ಯಾಯ
೨೮ನೆಯ ಅಧ್ಯಾಯ
೨೯ನೆಯ ಅಧ್ಯಾಯ
೩೦ನೆಯ ಅಧ್ಯಾಯ
೩೧ನೆಯ ಅಧ್ಯಾಯ
ವಾಮನಾವತಾರಿಯಾದ ಭಗವಂತನು ತಂದೆಯಾದ ಕಶ್ಯಪನಿಂದ ನಾಲ್ಕು ವೇದಗಳನ್ನೂ, ಶಾಸ್ತ್ರಗಳನ್ನೂ ಅಧ್ಯಯನಮಾಡಿದುದು. ಯಾವ ಉಪಾಯವನ್ನು ಮಾಡಿದರೆ, ದುಷ್ಟನಿಗ್ರಹ — ಶಿಷ್ಟಪಇಪಾಲನೆಗಳುಂಟಾಗಿ ಭೂಭಾರವು ಪರಿಹಾರವಾದೀತೆಂದು ಒಂದು ದಿನ ಕಶ್ಯಪನನ್ನು ಪ್ರಶ್ನಿಸಿದುದು. ಕಶ್ಯಪನು ವಾಮನನಿಗೆ ಶ್ರೀಗಣಪತಿಯ ಷಷಕ್ಷರ ಮಂತ್ರವನ್ನು ಉಪದೇಶಿಸಿ, ಮಹಾಗಣನಾಯಕನ ಗುಣಾತಿಶಯವನ್ನು ವರ್ಣಿಸಿದುದು ಮತ್ತು ಅವನನ್ನು ಕುರಿತು ತಪಸ್ಸನ್ನು ಮಾಡೆಂದು ಸೂಚಿಸಿದುದು, ವಾಮನನು ಅದರಂತೆ ನಿಶ್ಚಯಿಸಿ, ಗಹನವಾದ ಒಂದು ವಿಪಿನಕ್ಕೆ ಬಂದುದು. ಕಾನನದ ವರ್ಣನೆ. ಅಲ್ಲಿ ಅವನು ಕುಳಿತು ಏಕಾಗ್ರವಾಗಿ ತಪವನ್ನಾಚರಿಸಿದುದು. ತಪೋऽನುಷ್ಠಾನದ ವರ್ಣನೆ. ಇದಕ್ಕೆ ಮೆಚ್ಚಿದ ಗಣನಾಯಕನು ಸಿದ್ಧಿ — ಬುದ್ಧಿಯರಿಂದೊಡಗೂಡಿ ವಾಮನನೆದುರಿಗೆ ಆವಿರ್ಭವಿಸಿದುದು. ದೇವನ ದಿವ್ಯಸ್ವರೂಪದ ವರ್ಣನೆ. ವಾಮನನು ದೇವನನ್ನು ಸ್ತುತಿಸಿದುದು — ಇದರಿಂದ ಪರಮತೃಪ್ತನಾದ ಜಗದೀಶ್ವರನು ‘ವರವನ್ನು ಬೇಡು’ ಎಂದು ಹೇಳಿದುದು. ವಾಮನನು ಪುನಃ ದೇವನನ್ನು ಮನಸ್ತೃಪ್ತಿಯಾಗುವವರೆಗೂ ಬಣ್ಣಿಸಿ, ತನಗೆ ಸರ್ವತ್ರ ವಿಜಯ ದೊರೆಯುವಂತೆಯೂ, ಅಕಾಲದಲ್ಲೇ ಇಂದ್ರಪದವಿಯ ಪ್ರಾಪ್ತಿಗಾಗಿ ಹವಣಿಸುತ್ತಿರುವ ಬಲಿಯನ್ನು ನಿಗ್ರಹಿಸುವ ಸಾಮರ್ಥ್ಯತನಗೆ ಉಂಟಗುವಂತೆಯೂ ಅನುಗ್ರಹಿಸಬೇಕೆಂದು ಬೇಡಿ, ಬಲಿಯ ಸೂಕ್ಷ್ಮ ಪರಿಚಯವನ್ನು ಅರುಹಿದುದು ಅವನು ಬೇಡಿದುದನ್ನೆಲ್ಲ ಅನುಗ್ರಹಿಸಿ ದೇವನು ಅಂತರ್ಹಿತನಾಗಲು, ವಾಮನನು ತದಾಕೃತಿಯ ಮೂರ್ತಿಯೊಂದನ್ನು ಮಾಡಿಸಿ, ಭವ್ಯವಾದ ಮಂದಿರದಲ್ಲಿ ಸ್ಥಾಪಿಸಿದುದು ಮತ್ತು ಅದರ ನಿತಯಪೂಜಾವಿನಿಯೋಗಾದಿಗಳಿಗೆ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು, ಒಬ್ಬ ಮಂತರವೇತ್ತನನ್ನು ನಿಯಮಿಸಿದುದು. ಅನಂತರ ವಾಮನನು ತಂದೆಯ ಬಳಿಗೆ ಬಂದು, ಬಲಿಚಕ್ರವರ್ತಿಯ ಯಾಗಕ್ಕಾಗಿ ಹೋಗಿ ಬರಲು ಅಪ್ಪಣೆಯನ್ನು ಪಡೆದು, ಯಾಗಮಂಟಪಕ್ಕೆ ಬಂದುದು. ಅಪೂರ್ವತೇಜೋಮಯನಾದ ವಾಮನನನ್ನು ನೋಡಿ ಋಷಿಗಳೂ, ಇತರ ಸಭಿಕರೂ ‘ಇವನು ಅಸಾಧಾರಣ ಪುರುಷ’ ಎಂದು ಭಾವಿಸಿದುದು. ಬಲಿಯು ಇವನನ್ನು ಆದರದಿಂದ ಸ್ವಾಗತಿಸಿ, ಇವನ ಪೂರ್ವೋತ್ತರಗಳನ್ನೂ, ನನ್ನಿಂದ ಯಾವ ಪ್ರಯೋಜನವನ್ನು ಬಯಸಿ ಬಂದಿರುವೆ ಎಂದೂ ಪ್ರಶ್ನಿಸಿದುದು. ‘ತಾನು ಅನಾಥನೆಂದೂ, ಚಿಕ್ಕದೊಂದು ಪರ್ಣಕುಟಿಯನ್ನು ಕಟ್ಟಿಕೊಳ್ಳಲು ಮೂರು ಅಡಿಯಷ್ಟು ಅಳತೆಯ ಭೂಮಿಯನ್ನು ದಾನವಾಗಿ ಕೊಡಬೇಕೆಂದೂ ಬೇಡಿದುದು. ‘ಇವನು ಕರುಣಾಕರನಾದ ಜಗದೀಶ್ವರ’ಎಂಬುದು ಮನಸ್ಸಿಗೆ ಹೊಳೆದುದರಿಂಡ, ಬಲಿಯು ದಾನವನನ್ನು ಕೊಡಲು ತವಕಿಸುತ್ತಿರುವಾಗ ವಾಮನನ ರಹಸ್ಯವನ್ನರಿತ ಶುಕ್ರನು ಬಲಿಯ ಉದ್ಯಮವನ್ನು ತಡೆಗಟ್ಟಿದುದು. ಬಲಿಯು ಯಾವುದನ್ನೂ ಲಕ್ಷಿಸದೇ, ವಾಮನನಿಗೆ ದಾನವನ್ನು ಸಂತೋಷದಿಂದ ನೀಡಿದುದು. ಆದರೂ ಶುಕ್ರನು ಧಾರಾಪಾತ್ರೆಯನ್ನು ಪ್ರವೇಶಿಸಿ ಜಲಧಾರೆಯನ್ನು ತಡೆಯಲು, ವಾಮನನು ಇದನ್ನು ತಿಳಿದು, ಪವಿತ್ರಾಗ್ರದಿಂದ ಅವನ ಕಣ್ಣನ್ನು ತಿವಿದುದು ಮತ್ತು ವಾಮನನು ತನ್ನ ದೇಹವನ್ನು ಭೂಮ್ಯಂತರಿಕ್ಷಗಳವರೆಗೂ ವ್ಯಾಪಿಸುವಂತೆ ಮಾಡಿ, ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ಅದುಮಿ, ತಾನೂ ಅವನ ಬಳಿ ವಾಸವಾಗಿದ್ದು ಅವನಿಗೆ ಸಾನ್ನಿಧ್ಯವನ್ನು ಅನುಗ್ರಹಿಸುದುದು. ಅನಂತರ ಬ್ರಹ್ಮಾದಿ ದೇವತೆಗಳು ಸಂತುಷ್ಟರಾಗಿ ಪುಷ್ಪವೃಷ್ಟಿಗರೆದು, ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದುದು. ವಾಮನಾವತಾರ ಚರಿತ್ರೆಯ ಉಪಸಂಹಾರ ಮುಂದೆ ಶಈಪತ್ರದ ಮಹಿಮೆಯನ್ನು ಹೇಳುವೆನೆಂದು ಬ್ರಹ್ಮನು ವ್ಯಾಸರಿಗೆ ಹೇಳಿದುದು.
೩೨ನೆಯ ಅಧ್ಯಾಯ
೩೩ನೆಯ ಅಧ್ಯಾಯ
ಕೀರ್ತಿಯು ಭಕ್ತಿಯಿಂದ ಪೂಜೆಯನ್ನುಸಲ್ಲಿಸುತ್ತಿರುವಾಗ ಒಂದು ದಿನ ದೂರ್ವಾದಳಗಳು ದೊರೆಯದ್ದರಿಂದ ಸಖಿಯರು ಶಈದಳಗಲನ್ನೇ ಪೂಜೆಗಾಗಿ ತಂದಿರಿಸಿದುದು. ದೂರ್ವೆ ದೊರೆಯದ್ದರಿಂದ ಅಂದಿನ ಪೂಜೆಯು ನ್ಯೂನವಾಯಿತೆಂದು ಭಾವಿಸಿ, ಖಿನ್ನಳಾದ ರಾಣಿಯು ನಿರಶನವ್ರತವನ್ನು ಕೈಗೊಂಡು ದೇವನ ಸನ್ನಿಧಿಯಲ್ಲೇ ಮಲಗಿದುದು. ಇವಳ ನಿಷ್ಠೆಗೆ ಮೆಚ್ಚಿದ ದೇವನು ಸ್ವಪ್ನದಲ್ಲಿ ದರ್ಶನವನ್ನಿತ್ತು ‘ಶಈದಳವು ದೂರ್ವೆಗಿಂತಲೂ ಬಹಳ ಶ್ರೇಷ್ಠವಾದುದರಿಂದ ನಾನು ತೃಪ್ತನಾಗಿರುವೆನೆಂತಲೂ, ಅತ್ಯಲ್ಪಕಾಲದಲ್ಲೇ ನಿನಗೆ ಪತಿಯು ವಶನಾಗಿ, ನೀನು ಸುಪುತ್ರವತಿಯಾಗುವೆ’ ಎಂದೂ ಅನುಅಹಿಸಿ ‘ಆ ಪುತ್ರನಿಗೆ ಅಕಾಲಮೃತ್ಯು ಒದಗಿದಾಗ, ‘ಗೃತ್ಸಮದ’ ಎಂಬ ನನ್ನ ಭಕ್ತನು ಬಂದು ಅವನನ್ನು ಪುನರುಜ್ಜೀವನಗೊಳಿಸುವನೆಂದೂ ಅಭಯವನ್ನಿತ್ತುದು. ಕೀರ್ತಿಯು ರಚಿಸಿ ಪಠಿಸಿದ ಸ್ತೋತ್ರಕ್ಕೆ ಅನೇಕ ಮಹಿಗಳನ್ನಿತ್ತುದು. ದೇವನು ಅಂತರ್ಹಿತನಾದ ಬಳಿಕ ಕೀರ್ತಿಯು ಬಹಳ ಹರ್ಷಿತಳಾಗಿ ತಾನು ಕೈಗೊಂಡ ವ್ರತವನ್ನು ಸಮಾಪನಗೊಳಿಸಿದುದು. ಕೆಲಕಾಲದಲ್ಲೇ ಕೀತಿಯ ಸವತಿಯಾದ ಪ್ರಭೆಯು ರೋಗಗ್ರಸ್ತಳಾಗಿ, ತನ್ನ ರೂಪರಾಶಿಯನ್ನು ಕಳೆದುಕೊಂಡುದು. ಅವಳ ಭೀಭತ್ಸರೂಪದ ವರ್ಣನೆ. ರಾಜನು ವಿಧಿ ಇಲ್ಲದೇ ಕೀರ್ತಿಯನ್ನು ಪ್ರೀತಿಸಿ, ತನ್ಮೂಲಕ ಪುತ್ರನನ್ನು ಪಡೆದುದು. ಜಾತಕರ್ಮಾದಿಗಳನ್ನು ನಡೆಸಿ ಆ ಮಗುವಿಗೆ ‘ಕ್ಷಿಪ್ರಪ್ರಸಾದನ’ ಎಂದು ಹೆಸರನ್ನಿಟ್ಟುದು. ಬಾಲಕನ ಬೆಲವಣಿಗೆ. ಇದನ್ನು ಸಹಿಸಲಾರದೇ ಪ್ರಭೆಯು ಮಗುವಿಗೆ ತಿನ್ನಲು ವಿಷಾನ್ನವನ್ನು ಕೊಟ್ಟುದು, ಬಾಲಕನ ಮರಣ. ಕೀರ್ತೀದೇವಿಯ ವಿಲಾಪ. ಗೃತ್ಸಮದನ ಆಗಮನ ಅವನೆದುರಿಗೆ ನಡೆದ ಸಂಗತಿಯನ್ನು ಹೇಳಿ, ಬಾಲಕನು ಪುನರುಜ್ಜೀವಿಸುವಂತೆ ಮಾಡಬೇಕೆಂದು ಕೀರ್ತಿಯು ಬೇಡಿದುದು. ‘ಶಈಪುಝಾಫಲವನ್ನು ಮಗನಿಗಾಗಿ ಧಾರೆ ಎರೆದರೆ, ಅವನು ಜೀವಿಸುವನೆಂದು’ ಋಷಿಯು ಹೇಳಲು, ರಾಣಿಯು ಅದರಂತೆ ಮಾಡಿ ಮಗನನ್ನು ಬದುಕಿಸಿಕೊಂಡುದು. ಮತ್ತು ಶಈಪತ್ರದ ಮಹಿಮೆಯನ್ನು ತಿಳಿಸಲು ಮುನಿಯನ್ನು ಪ್ರಶ್ನಿಸಿದುದು. ಶಈದಳದ ಮಹಿಮೆಯನ್ನು ಮುನಿಯು ಬಹಳವಾಗಿ ವರ್ಣಿಸಿ, ನಾರದ, ಇಂದ್ರ ಇವರ ಸಂವಾದರೂಪವಾದ ಇತಿಹಾಸವನ್ನು ಹೇಳಲು ಉಪಕ್ರಮಿಸಿದುದು.
೩೪ನೆಯ ಅಧ್ಯಾಯ
೩೫ನೆಯ ಅಧ್ಯಾಯ
ಪರಿಶಿಷ್ಟ