ಶ್ರೀ ಗಣೇಶ ಪುರಾಣಂ – ಸಂಪುಟ ೩
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೫೬ನೆಯ ಅಧ್ಯಾಯ
೫೭ನೆಯ ಅಧ್ಯಾಯ
೫೮ನೆಯ ಅಧ್ಯಾಯ
೫೯ನೆಯ ಅಧ್ಯಾಯ
೬೦ನೆಯ ಅಧ್ಯಾಯ
೬೧ನೆಯ ಅಧ್ಯಾಯ
೬೨ನೆಯ ಅಧ್ಯಾಯ
೬೩ನೆಯ ಅಧ್ಯಾಯ
ಶ್ರೀಗಣನಾಥನ ಹಾಗೂ ದೂರ್ವೆಯ ಮಹಿಮೆಯನ್ನು ವಿವರಿಸಲು ಯಾರಿಗೂ ಸಾಮರ್ಥ್ಯವಿಲ್ಲವೆಂದೂ, ತಿಳಿದಮಟ್ಟಿಗೆ ತಾವು ಹೇಳುವುದಾಗಿಯೂ ಗಣಗಳು ನುಡಿದು ಇಂದ್ರ — ನಾರದರಿಗೆ ನಡೆದ ಸಂವಾದವನ್ನು ಹೇಳಲು ಆರಂಭಿಸಿದುದು. ದೊರ್ವೆಯು ಏತಕ್ಕಾಗಿ ಗಣಪತಿಗೆ ಪ್ರಿಯಕರವಾಯಿತು? ತಿಳಿಸಬೇಕೆಂದು ಇಂದ್ರನು ಪ್ರಶ್ನಿಸಿದ್ದು ಹಿಂದಕ್ಕೊಮ್ಮೆ ಕೌಂಡಿನ್ಯ ಎಂಬ ಹೆಸರಿನ ಗಣಪತಿಯ ಭಕ್ತನಿದ್ದನು. ಅವನ ಊರು ಸ್ಥಾವರ ನಗರ, ನಗರದ ದಕ್ಷಿಣಭಾಗದಲ್ಲಿ ಅವನ ಕುಟೀರವಿದ್ದಿತು. ಅವನ ಆಶ್ರಮಪ್ರದೇಶದ ವರ್ಣನೆ ಕೌಂಡಿನ್ಯನು ದೇವನ ಒಂದು ಮೂರ್ತಿಯನ್ನು ಎದುರಿಗೆ ಸ್ಥಾಪಿಸಿಕೊಂಡು ದೂರ್ವೆಗಳಿಂದ ಅದನ್ನು ನಿತ್ಯವೂ ಭಕ್ತಿಪೂರ್ವಕವಾಗಿ ಪೂಜಿಸುತ್ತಲಿದ್ದನು. ಇವನ ಹೆಂಡತಿಯ ಹೆಸರು ‘ಆಶ್ರಯೆ’ ‘ಸ್ವಾಮಿನ್!’ ದೊರ್ವೆಗಳನ್ನು ಹೊರೆಗಟ್ಟಲೆ ತಂದು, ಏಕೆ ದೇವನ ಮೇಲೆ ಭಾರ ಹೊರಿಸುವಿರಿ? ಎಂದು ಪ್ರಶ್ನಿಸಿದಳು. ಆಗ ಕೌಂಡಿನ್ಯನು ಇದಕ್ಕೆ ಒಂದು ಇತಿಹಾಸವನ್ನೇ ಹೇಳಿದನು. ಧರ್ಮನಗರದಲ್ಲಿ ಹಿಂದೊಮ್ಮೆ ದೊಡ್ಡದೊಂದು ಉತ್ಸವ ನಡೆಯಿತು. ಅದಕ್ಕೆ ದೇವತೆಗಳು ಗಂಧರ್ವರು, ಮತ್ತು ಅಪ್ಸರ ಸ್ತ್ರೀಯರೂ, ಯಕ್ಷರೂ, ರಾಕ್ಷಸರೂ ಬಂದಿದ್ದರು. ತಿಲೋತ್ತಮೆಯು ನರ್ತನ ಮಾಡುತ್ತಿರುವಾಗ ಅವಳ ಮೆಲ್ಹೊದಿಕೆಯು ಜಾರಿ ಕೆಳಕ್ಕೆ ಬಿದ್ದು, ಅವಳ ಸುಂದರ ಕುಚಗಳು ಯಮನಿಗೆ ಮೋಹಕವಾಗಿ ಕಂಡವು. ಅವನು ಮದನಬಾಣ ಸಂತಪ್ತನಾಗಿ ಅವಳನ್ನು ಆಲಿಂಗಿಸಿ ಚುಂಬಿಸುವ ಸಲುವಾಗಿ ಕೂಡಲೇ ಎದ್ದನು. ಅಷ್ಟರಲ್ಲೇ‘ಇದು ಅಲ್ಪತನ’ ಎಂಬುದು ಅವನ ಗಮನಕ್ಕೆ ಬರಲು ನಾಚಿಕೆಯಿಂದ ಒಡನೆಯೇ ಸಭೆಬಿಟ್ಟು ಹೊರಹೊರಟನು. ಅವನ ವೀರ್ಯವು ಮಾರ್ಗಮಧ್ಯೇ ಸ್ಖಲಿಸಿತು. ಅದರಿಂದ ‘ಜ್ವಾಲಾಮಾಲೀ’ ಎಂಬ ಒಬ್ಬ ಭಯಂಕರಾಕೃತಿಯವನು ಉದ್ಭವಿಸಿದನು. ಅವನ ಕ್ರೂರ ರೂಪದ ವರ್ಣನೆ. ಅವನ ಉಪಟಳಕ್ಕೆ ಹೆದರಿದ ದೇವಾದಿಗಳು ಗಣಪತಿಯನ್ನು ಸ್ತುತಿಸಿದುದು. ದೇವನು ಚಿಕ್ಕ ಮಗುವಿನ ರೂಪದಿಂದ ಪ್ರತ್ಯಕ್ಷನಾದುದು. ದೇವನ ವರ್ಣನೆ. ದೇವನ ರೂಪವನ್ನು ನೋಡಿ ಎಲ್ಲರೂ ಹೆದರಿ ‘ನೀನು ಯಾರು?’ ಎಂದು ಪ್ರಶ್ನಿಸಿದುದು ‘ನಾನು ದೇವನೆಂದೂ, ನಿಮ್ಮ ಆರ್ತನಾದವನ್ನು ಕೇಳಿ ಆ ದೈತ್ಯನನ್ನು ಧ್ವಂಸಮಾಡಲು ಬಾಲಕನಾಗಿ ಬಂದಿರುವನೆಂದೂ, ನನ್ನನ್ನು ನೀವೆಲ್ಲರೂ ಎತ್ತಿಕೊಂಡು ಹೋಗಿ ಅವನೆದುರಿಗೆ ಇರಿಸಿ, ಅನಂತರ ಕೌತುಕವನ್ನು ನೋಡಿ’ ಎಂದು ದೇವನು ಹೇಳಿದುದು. ಬಾಲಕನ ಶಕ್ತಿ — ಸಾಹಸಗಳ ವಿಷಯದಲ್ಲಿ ಮೊದಮೊದಲು ಎಲ್ಲರಿಗೂ ಸಂಶಯ ಹುಟ್ಟಿದಾಗ್ಯೂ ‘ಏನೋ ನೋಡೋಣ’ ಎಂದು ಚಿಂತಿಸುತ್ತಿರುವಷ್ಟರಲ್ಲಿ ಅನಲಾಸುರನು ಅಲ್ಲಿಗೆ ಬಂದುದು. ಅವನ ರಭಸಕ್ಕೆ ಎಲ್ಲರೂ ನಡುಗಿ ಬಾಲಕನನ್ನು ಕಂಡು ‘ನೀನೂ ಓಡಿಹೋಗಿ ಪ್ರಾಣಗಳನ್ನು ಉಳಿಸಿಕೋ’ ಎಂದು ಮುಂತಾಗಿ ಹೆದರಿಸಿ ತಾವು ಓಡಿ ಹೋದುದು. ಆದರೆ ದೇವನು ಚಲಿಸದೇ ಹಿಮಾಚಲದಂತೆ ಅಲ್ಲೇ ನಿಂತುದು.
೬೪ನೆಯ ಅಧ್ಯಾಯ
೬೫ನೆಯ ಅಧ್ಯಾಯ
೬೬ನೆಯ ಅಧ್ಯಾಯ
೬೭ನೆಯ ಅಧ್ಯಾಯ
೬೮ನೆಯ ಅಧ್ಯಾಯ
೬೯ನೆಯ ಅಧ್ಯಾಯ
೭೦ನೆಯ ಅಧ್ಯಾಯ
ಈ ವ್ರತವನ್ನು ಹಿಂದೆ ಯಾರು ಆಚರಿಸಿದರು? ಇದನ್ನು ಯಾರು ಪ್ರಚಾರಕ್ಕೆ ತಂದರು? ಮತ್ತು ಇದರಿಂದ ಲಭಿಸುವ ಪುಣ್ಯವಾವುದು? ಎಂದು ರಾಜನು ಕೇಳಲು ಸ್ಕಂದ, ಪಾರ್ವತೀ, ಅಗಸ್ತ್ಯ, ದಮಯಂತೀ, ನಳ, ಪ್ರದ್ಯುಮ್ನ, ರುಕ್ಮಿಣೀ, ಶ್ರೀಕೃಷ್ಣ ಇವರೇ ಮೊದಲಾದ ಮಹಾತ್ಮರು ಆಚರಿಸಿ, ಇಷ್ಟರ್ಥಗಳನ್ನೆಲ್ಲ ಹೊಂದಿದರೆಂದು ಬ್ರಹ್ಮದೇವನು ವ್ಯಾಸನಿಗೆ ಹೇಳಿದುದು. ಇವರು ಮಾತ್ರವೇ ಅಲ್ಲದೇ ಇತರ ದೇವ — ದೈತ್ಯಾದಿಗಳು ಸಹ ಆಚರಿಸಿರುವರು. ವ್ರತದ ಹಿರಿಮೆಯ ವರ್ಣನೆ. ಈ ವ್ರತವು ಪರಮ ರಹಸ್ಯವಾದುದಾದರೂ, ನೀನು ನನಗೆ ಪರಮಾಪ್ತನಾದುದರಿಂದ ನಿನಗೆ ಮಾತ್ರ ಇದನ್ನು ಹೇಳಿರುವೆನು, ಎಂದು ಬ್ರಹ್ಮನು ಹೇಳಿದುದು. ಇದನ್ನೂ ಉದ್ಯಾಪನೆಯ ವಿಷಯವನ್ನೂ ಸೂತಪೌರಾಣಿಕರು ಶೌನಕಾದಿ ಮಹರ್ಷಿಗಳಿಗೆ ವಿಸ್ತಾರವಾಗಿ ತಿಳಿಸಿದುದು.
೭೧ನೆಯ ಅಧ್ಯಾಯ
೭೨ನೆಯ ಅಧ್ಯಾಯ
೭೩ನೆಯ ಅಧ್ಯಾಯ
೭೪ನೆಯ ಅಧ್ಯಾಯ
ಇಂದ್ರನಿಂದ ವ್ರತದ ಮಾಹಾತ್ಮ್ಯವನ್ನು ಕೇಳಿ ತಿಳಿದ ಶೂರಸೇನನು ಸಂಕಷ್ಟಹರ ಗಣಪತಿಯ ವ್ರತವನ್ನು ಹೇಗೆ ಅನುಷ್ಠಿಸಿದನೋ, ಅದನ್ನು ಹೇಳಬೇಕೆಂದು ವ್ಯಾಸರು ಪ್ರಶ್ನಿಸಿದುದು. ಶೂರಸೇನನು ರಾಜಧಾನಿಗೆ ದೂತರನ್ನು ಅಟ್ಟಿ ಸಂಕಷ್ಟಹರ ಚತುರ್ಥೀ ವ್ರತವನ್ನು ಮಾಡುವವರಾರಾದರೂ ಇದ್ದರೆ ಅಂಥವರನ್ನು ಕಂಡುಹಿಡಿದು ತಿಳಿಸಬೇಕೆಂದು ಕಟ್ಟಪ್ಪಣೆಯನ್ನು ಮಾಡಿದ್ದು. ಅದರಂತೆ ದೂತರು ನಗರಕ್ಕೆ ಹೋಗಿ ಮನೆಮನೆಯಲ್ಲೂ ವಿಚಾರಿಸುತ್ತಿರುವಷ್ಟರಲ್ಲಿ ಕೃಮಿಗಳಿಂದ ನಿರ್ಮಿತವಾದಂತಿರುವ ದೇಹಉಳ್ಳ ಚಂಡಲಿನಿಯೊಬ್ಬಳು ದೇವವಿಮಾನದಲ್ಲಿ ಕುಳಿತಿರುವುದನ್ನು ಕಂಡು, ಸೋಜಿಗೊಂಡು ವೈಮಾನಿಕರನ್ನು ವಿಚಾರಿಸಲು ‘ಇವಳು ಜನ್ಮಾಂತರದಲ್ಲಿ ‘ಸಾರಂಗಧರ’ನೆಂಬ ಕ್ಷತ್ರಿಯನ ಹೆಂಡಿತಿಯಾದ ‘ಸುಂದರಿ’ ಎಂಬುವವಳು. ಇಂದ್ರಿಯಲಂಪಟಳಾದುದರಿಂದ ಅದಕ್ಕಾಗಿ ಪತಿಯನ್ನು ಘತಿಸಿ ವ್ಯಭಿಚಾರ ವೃತ್ತಿಯನ್ನು ನಡೆಸಿದ ಸಂಗತಿಯು ಆ ದೇಶದ ರಾಜನಿಗೆ ತಿಳಿಯಲಾಗಿ ಅವನು ಇವಳಿಗೆ ಮರಣದಂಡನೆಯನ್ನಿತ್ತನು. ಅನಂತರ ಇವಳು ನರಕದ ಸಕಲ ಕಷ್ಟಗಳ ಸವಿಯನ್ನು ಭೋಗಿಸಿ, ಈಗ ಕುಷ್ಠರೋಗಪೀಡಿತ ಚಂಡಲಿನಿಯಾಗಿರುವಳು. ಒಂದು ದಿನ ಇವಳು ಮನಸ್ವಿಯಾಗಿ ಹೆಂಡವನ್ನು ಕುಡಿದು, ಹಗಲ್ಲೆಲ ನಿದ್ರೆಹೋಗಿದ್ದವಳು ರಾತ್ರಿ ೯ ಘಂಟೆಯ ಸಮಯಕ್ಕೆ ಎಚ್ಚರಗೊಂಡಳು. ಹಸಿವು ಇವಳನ್ನು ಬಾಧಿಸಲು ಭಿಕ್ಷೆ ಬೇಡುವುದಕ್ಕಾಗಿ ಹೊರಾತಳು. ಹಾಗೆಯೇ ಬರುತ್ತಲಿರುವಾಗ ಸಂಕಷ್ಟಹರ ಚರುರ್ಥೀವ್ರತವು ನಡೆಯುತ್ತಿದ್ದ ಮನೆಗೆ ಬಂದಳು. ವ್ರತಕಾರಿಯು ಇವಳಿಗೆ ನಿವೇದಿತಾನ್ನವನ್ನು ತಿನ್ನಲು ಕೊಟ್ಟನು. ಅದನ್ನು ಭುಜಿಸುವಾಗ ಇವಳು ‘ಗಣೇಶ! ನಿನ್ನದಯೆ’ ಎಂದು ಅಕಸ್ಮಾತ್ತಾಗಿ ನುಡಿದಳು. ದೇವನ ದಿವ್ಯನಾಮದ ಮಹಿಮೆಯೇ ಅಂತಹುದು. ಒಡನೆಯೇ ಇವಳನ್ನು ಸನ್ನಿಧಿಗೆ ಕರೆತರಬೇಕೆಂದು ನಮ್ಮನ್ನು ದೇವನು ಅಜ್ಞಾಪಿಸಿದನು. ಇದೋ ನಾವು ಬಂದಿರುವೆವು. ಇದೇ ಇವಳ ಕಥೆ. ಎಂದು ಹೇಳಲು, ರಾಜದೂತರು ತಾವು ಬಂದ ಕಾರ್ಯಗೌರವವನ್ನು ತಿಳಿಸಿ ‘ಈ ಚಂಡಾಲಿನಿಯು ವ್ರತವನ್ನು ಆಚರಿಸಿದಂತಾಗಿದೆ,’ ಎಂಬುದು ನಿಮ್ಮ ಭವನೆಯಾಗಿದ್ದರೆ, ದಯೆ ಇಟ್ಟು ಇವಳನ್ನು ನಮ್ಮ ರಾಜನಿದ್ದೆಡೆಗೆ ಕರೆದು ತನ್ನಿ. ಇವಳು ಆ ವ್ರತದ ಪುಣ್ಯವನ್ನು ಧಾರೆ ಎರೆದು ದೇವವಿಮಾನವು ಚಲಿಸುವಂತೆ ಮಾಡಲಿ’ ಎಂದು ಪಾರ್ಥಿಸಿದರು. ‘ಇದಕ್ಕೆ ನಮಗೆ ದೇವನಿಂದ ಆಜ್ಞೆ ಇಲ್ಲ’ ಎಂದು ನುಡಿದು ತಮ್ಮ ವಿಮಾನವನ್ನು ಚಾಲನಮಾಡಿದರು. ಸುಂದರಿಯು ದಿವ್ಯ ದೇಹಿಯದುದು. ಇವಳನ್ನು ದೇವಗಣದವರು ಸ್ತುತಿಸಿದುದು. ಇತ್ತದೂತರು ರಾಜನೆಡೆಗೆ ಬಂದು ತಿಳಿದ ಸಮಾಚಾರವನ್ನರುಹುತ್ತಿರಲು, ಸುಂದರಿಯನ್ನು ಕರೆದೊಯ್ಯುತ್ತಿದ್ದ ವಿಮಾನವು, ರಾಜನೂ, ದೇವವಿಮಾನವೂ ಇದ್ದ ಸ್ಥಳದ ಸಮೀಪದಲ್ಲಿಯೇ ಹಾರಿತು. ಬಿದ್ದು ಹೋಗಿದ್ದ ದೇವವಿಮಾನವು ಆ ವಿಮಾನದ ಗಾಳಿಯಿಂದ ಚಲಿಸಿ ರ್ಹಾಇಹೋಯಿತು. ಇಂದ್ರನು ಅಮರಾವತಿಗೆ ತೆರಳಲು, ಸುಂದರಿಯು ತನ್ನ ಪಾಪಕೃತ್ಯಗಳನ್ನೆಲ್ಲ ಕಳೆದುಕೊಂಡು ಗಣೇಶಪದವಿಯನ್ನು ಹೊಂದಿದಳು. ಫಲಶ್ರುತಿ.
೭೫ನೆಯ ಅಧ್ಯಾಯ
೭೬ನೆಯ ಅಧ್ಯಾಯ
ಬಹು ಹಿಂದೆ ಈ ಕುಷ್ಥಿಯ ತಂದೆಯು ಗೌಡದೇಶದಲ್ಲಿ ತಪಸ್ವಿಯಾದ ಬ್ರಾಹ್ಮಣನಾಗಿ ಜನಿಸಿದ್ದನು. ಆತನ ಪತ್ನಿಯ ಹೆಸರು ‘ಶಾಕಿನೀ’ ಎಂದು. ಈತನ ಹೆಂಡತಿಯು ಪರಮ ಪತಿವ್ರತೆ, ‘ಸಾವಿತ್ರೀ’ ಎಂದು ಅವಳ ಹೆಸರು. ಏಕಪುತ್ರ ವಿಷಯವಾದ್ದರಿಂದ ತಂದೆ — ತಾಯಿಯರು ಈತನನ್ನು ಬಹಳ ಪ್ರೀತಿ — ಮುಚ್ಚಟೆಗಳಿಂದ ಬೆಳೆಸಿದ್ದರು. ಅವರ ಪ್ರೀತಿಯನ್ನು ಇವನು ದುರುಪಯೋಗಪಡಿಸಿಕೊಂಡು, ಮನೆಯಲ್ಲಿ ರತಿಯಂತಹ ಸಾಹ್ವೀಶಿರೋಮಣಿಯಾದ ಹೆಂಡತಿಯು ಇವನ ಭೋಗಕ್ಕೆ ಸರ್ವದಾ ಸಿದ್ಧಳಾಗಿದ್ದರೂ ಇವನು ಪರದಾರಲಂಪಟನೂ, ದುಷ್ಕಾರ್ಯಪ್ರವೃತ್ತನೂ ಆಗಿದ್ದನು. ಒಮ್ಮೆ ಆ ನಗರಕ್ಕೆ ವಿಶ್ವಮೋಹಿನಿಯಾದ ಒಬ್ಬ ವೇಶ್ಯೆಯು ಬಂದಳು. ಸರಿ. ಇವನು ಅವಳಿಗೆ ದಾಸನಂಟೆ ವರ್ತಿಸಲಾರಂಭಿಸಿದನು. ಮನೆಯನ್ನೆಲ್ಲ ಬರಿದು ಮಾಡಿ ಆ ವೇಶ್ಯೆಯಲ್ಲಿ ಭೋಗಪಡುತ್ತಲಿದ್ದು, ಕೆಲವು ದಿನಗಳ ಮೇಲೆ ಮನೆಯ ಕಡೆಗೇ ಬರದಂತಾದನು. ವೃದ್ಧರಾದ ಮಾತಾ — ಪಿತೃಗಳೂ, ಪತ್ನಿಯೂ ಹಸಿವು ಬಯಾರಿಕೆಗಳಿಂದ ಕಂಗೆಟ್ಟು ತೊಳಲಲಾರಂಭಿಸಿದರು. ಇವನ ತಂದೆಯು ಒಂದು ದಿನ ಇವನನ್ನು ಹುಡುಕುತ್ತಲಿರುವಾಗ ಇವನು ವೇಶ್ಯಯ ಮನೆಯಲ್ಲಿರುವುದು ತಿಳಿಯಿತು. ಅಲ್ಲಿಗೆ ಹೋಗಿ ಇವನಿಗೆ ಬುದ್ಧಿವಾದವನ್ನು ಹೇಳಲು, ಇವನು ಕೋಪಗೊಂಡು ಒಂದೇ ಹೊಡೆತದಿಂದ ತಂದೆಯನ್ನು ಕೊಂದು ದೂರ ಎಸೆದನು. ಮನೆಗೆ ಬಂದಾಗ ತಾಯಿಯು ಇವನನ್ನು ಕುರಿತು ‘ಮುದುಕನಾದ ನಿನ್ನ ತಂದೆಯನ್ನು ಹುಡುಕಿಕೊಂಡು ಬಾ’ ಎಂದು ಹೇಳಲು ಇವನು ಅತ್ಯಾಗ್ರಹಗೊಂಡು ಅವಳನ್ನೂ ಹೊಡೆದು ಸಾಯಿಸಿದನು. ಪುನಃ ವೇಶ್ಯೆಯ ಗೃಹಕ್ಕೆ ಓಡಿಹೋದನು. ಮತ್ತೆ ಒಮ್ಮೆ ಇವನು ಮನೆಗೆ ಬಂದಾಗ ಇವನ ಪತ್ನಿಯು ಇವನಿಗೆ ಧರ್ಮರಹಸ್ಯವನ್ನು ತಿಳಿಸಿ, ದುಷ್ಕರ್ಯಗಳಿಂದ ಇವನನ್ನು ನಿವೃತ್ತಿಗೊಳಿಸಲು ಯತ್ನಿಸಿದಳು. ಇವನು ಮತ್ತಿಷ್ಟೂ ಸಿಟ್ಟಿಗೆದ್ದು ಸೌದೆ, ಕಲ್ಲು, ಮುಷ್ಟಿಮೊದಲಾದುವುಗಳಿಂದ ಹೊಡೆದು ಸಾವಿತ್ರಿಯನ್ನು ಚಿತ್ರ — ವಿಚಿತ್ರ ರೀತಿಯಲ್ಲಿ ವಧಿಸಿದನು. ಅವಳು ಸಾಧ್ವೀಶಿರೋರತ್ನಳಾದುದರಿಂಡ ಅವಳಿಗೇನೋ ಸದ್ಗತಿಯೇ ಉಂಟಾಯಿತು. ಸಾವಿತ್ರಿಯ ಶವವನ್ನು ದೂರ ಬಿಸುಟು, ವೇಶ್ಯೆಯ ಮನೆಗೆ ಹೋಗಿ ತನ್ನ ಪೌರುಷವನ್ನು ಕೊಚ್ಚಿಕೊಂಡನು. ಹೀಗೆಯೇ ಬಹುಕಾಲ ಕಳೆದರೂ ಇವನ ಕಾಮವಾಸನೆ ಬೇರೇ ಕಡಿಮೆಯಾಗಲಿಲ್ಲ. ಒಮ್ಮೆ ‘ಕಾಲಭಿ’ ಎಂಬ ತಪಸ್ವಿಯ ಆಶ್ರಮಕ್ಕೆ ಇವನು ಹೋದನು. ಮುನಿಯು ಸ್ನಾನಕ್ಕೆ ತೆರಳಿದ ಸುಸಮಯವನ್ನು ಸಾಧಿಸಿ ಅವನ ಪತ್ನಿಯಾದ ‘ಸುಲಭೆ’ಯನ್ನು ಬಲಾತ್ಕಾರದಿಂದ ಭೋಗಿಸಿದನು. ಅವಳು ಇವನನ್ನು ‘ಕುಷ್ಠಿಯಾಗು’ ಎಂದು ಶಪಿಸಿದಳು. ತಾತ್ಕಾಲಿಕವಾಗಿ ಇವನಿಗೆ ಹೆದರಿಕೆಯುಂಟದಂತಾದರೂ, ಸುರಾಪಾನಾದಿಗಳಿಂದ ಎಲ್ಲವೂ ಮರೆತುಹೋಗಿ ಮೊದಲಿನಂತೆಯೇ ಇದ್ದು ಬಿಟ್ಟನು. ಕಾಲವಶಾತ್ ಇವನು ಮೆತಿಯನ್ನೈದಿ, ಎಲ್ಲ ಬಗೆಯ ನಾರಕ ಭೋಗಗಳ ರುಚಿಯನ್ನೂ ಸವಿದನು. ಈ ಜನ್ಮದಲ್ಲಿ ವೈಶ್ಯನಿಗೆ ಮಗನಾಗಿ ಹುಟ್ಟಿ, ಕುಷ್ಠರೋಗದಿಂದ ನರಳುತ್ತಿದ್ದಾನೆ. ಇವನು ಮಹಾಪಾತಕಿ ಎಂದು ಹೇಳಲು, ‘ಇವನೂ ಉದ್ಧಾರವಾಗಬೇಕು. ನಮ್ಮ ಕಾರ್ಯವೂ ಸಾಗಬೇಕು. ಅಂತಹ ಯುಕ್ತಿಯನ್ನು ತಿಳಿಸಿರಿ’ ಎಂದು ರಾಜನು ದೂತರನ್ನು ಬೇಡಿದುದು. ‘ಗಜಾನನ’ ಎಂಬ ನಾಮವನ್ನು ಇವನ ಕಿವಿಯಲ್ಲಿ ಗಟ್ಟಿಯಾಗಿ ಉಸಿರಿದರೆ, ಇಅವನು ನಿಷ್ಪಪನಾಗುವನು. ಎಂದು ದೂತರು ಹೇಳಲು, ರಾಜನು ದೇವನ ದಿವ್ಯನಾಮವನ್ನು ಮೂರಾವೃತ್ತಿ ಇವನ ಕಿವಿಯಲ್ಲಿ ಜಪಿಸಿದುದು. ಒಡನೆಯೇ ಇವನು ಪವಿತ್ರವಾಗಿ ದಿವ್ಯದೇಹಿಯಾದುದು. ವಿಮಾನವೂ ಒಡನೆಯೇ ಚಲಿಸಿದುದು. ಫಲಶ್ರುತಿ.
೭೭ನೆಯ ಅಧ್ಯಾಯ
೭೮ನೆಯ ಅಧ್ಯಾಯ
೭೯ನೆಯ ಅಧ್ಯಾಯ
೮೦ನೆಯ ಅಧ್ಯಾಯ
೮೧ನೆಯ ಅಧ್ಯಾಯ
೮೨ನೆಯ ಅಧ್ಯಾಯ
೮೩ನೆಯ ಅಧ್ಯಾಯ
೮೪ನೆಯ ಅಧ್ಯಾಯ
೮೫ನೆಯ ಅಧ್ಯಾಯ
೮೬ನೆಯ ಅಧ್ಯಾಯ
೮೭ನೆಯ ಅಧ್ಯಾಯ
೮೮ನೆಯ ಅಧ್ಯಾಯ
೮೯ನೆಯ ಅಧ್ಯಾಯ
೯೦ನೆಯ ಅಧ್ಯಾಯ
೯೧ನೆಯ ಅಧ್ಯಾಯ
೯೨ನೆಯ ಅಧ್ಯಾಯ
ಕಶ್ಯಪನ ಸಂತತಿಯವರು ದೇವನನ್ನು ಸ್ತುತಿಸಿದುದು. ದೇವನು ಇವರ ಭಕ್ರಿ — ಭಾಅವನ್ನು ಮೆಚ್ಚಿ, ಬೇಕಾದ ವರಗಳನ್ನು ಯಾಚಿಸುವಂತೆ ಸೂಚಿಸುವಂತೆ ಸೂಚಿಸಿದುದು. ಅವರು ತಮಗೆ ಬೇಕಾದ ವರಗಳಿಗಾಗಿ ಮಹಾಗಣಪತಿಯನ್ನು ಯಾಚಿಸಿದುದು. ದೇವನು ಅವೆಲ್ಲವನ್ನೂ ಅನುಗ್ರಹಿಸಿ, ಅವರು ರಚಿಸಿ ಪಠಿಸಿದ ಸ್ತೋತ್ರಕ್ಕೆ ಅನೇಕ ಮಹಿಮೆಯನ್ನನುಗ್ರಹಿಸಿದುದು. ದೇವನು ಅಂಟರ್ಹಿತನಾಗಲು, ಅವರವರು ತಮತಮಗೆ ‘ಸರಿ’ ಎನಿಸಿದರೀತಿಯಲ್ಲಿ ದೇವನ ಮೂರ್ತಿಗಳನ್ನು ನಿರ್ಮಿಸಿ ತಾವು ತಪಸ್ಸು ಮಾಡಿದ ಸ್ಥಳಗಳಲ್ಲಿ ಸ್ಥಾಪಿಸಿ, ಭಿನ್ನಭಿನ್ನ ಹೆಸರುಗಳನ್ನು ಆಯಾ ಮೂರ್ತಿಗಳಿಗೆ ಇರಿಸಿದರು. ದೇವನ ಅನಂತ ನಾಮಗಳನ್ನು ಹೇಳುವ ಶಕ್ತಿಯು ನನಗಿಲ್ಲ. ತಿಳಿದಷ್ಟನ್ನು ಯಥಾಮತಿ ಹೇಳಿದ್ದೇನೆ. ದೇವನ ಮಹಿಮೆಯನ್ನು ವರ್ಣಿಸಲಿಕ್ಕೆ ನನ್ನ ವಿಷಯವಂತೂ ಹಾಗಿರಲಿ, ಉತ್ತಮ ದೇವವರ್ಗದವರೆನಿಸಿದ ಹರಿಹರರಿಗೂ, ಆದಿಶೇಷನಿಗೂ ಶಕ್ತಿಯು ಸಾಲದು. ಆದುದರಿಂದ ಪ್ರತಿಯೊಂದು ಕಾರ್ಯಾರಂಭಾದಲ್ಲೂ ಮಹಾ ಗಣಪತಿಯನ್ನು ಪೂಜಿಸಲೇ ಬೇಕು. ಯಾವ ಮದಾಂಧನು ದೇವನನ್ನು ಗೌರವಿಸಿ ಪೂಜಿಸುವುದಿಲ್ಲವೋ, ಅವನನ್ನು ಚಂಡಾಲನಂಟೆ ದೂರೀಕರಿಸಬೇಕು. ಎಂದು ಚತುರ್ಮುಖನು ಹೇಳಿದುದು. ದೇವನ ೨೧ ನಾಮಗಳನ್ನಾದರೂ ವಿವರವಾಗಿ ಹೇಳಬೇಕೆಂದು ವ್ಯಾಸರು ಕೇಳಿದುದು. ಬ್ರಹ್ಮನು ಅವನ್ನು ಹೇಳಿದುದು. ಫಲಶ್ರುತಿ. ನಾಸ್ತಿಕರು ಸಹ ಗಮನವಿಡದೇ ದೇವನನ್ನು ಭಜಿಸಿಯೇ ಭಜಿಸುವರೆಂದ ಬಳಿಕ, ಆಸ್ತಿಕರೂ, ಶ್ರದ್ಧಾಳುಗಳೂ ದೇಅನನ್ನು ಭಜಿಸುವರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕೆ? ಎಂದು ಬ್ರಹ್ಮನು ಹೇಳಿ, ಈ ಉಪಾಸನಾ ಫಲದ ವಿಷಯವನ್ನು ಮಹಾವಿಷ್ಣು ನನಗೆ ಹೇಗೆ ಬೋಧಿಸಿದ್ದನೋ ಅದನ್ನೇ ನಿನಗೆ ಹೇಳಿರುವೆನೆಂದು ಕಥೆಯನ್ನು ಮುಗಿಸಿದುದು. ಎಂದು ಭೃಗು ಮಹರ್ಷಿಗಳು ಸೋಮಕಾಂತನಿಗೆ ತಿಳಿಸಿದುದು. ಸೂತರೂ ಸಹ ಶೌನಕಾದಿ ಮಹರ್ಷಿಗಳಿಗೆ ಇದನ್ನೇ ಅನುವದಿಸಿದುದು. ಉಪಾಸನಾಖಂಡದ ಫಲಶ್ರುತಿ; ೦೫೭೦ – ೦೫೮೮
ಪರಿಹಿಷ್ಟ
ಶಕ್ತಿತ್ರಯ ಷಡ್ಗುಣಗಳು
ಉಪಾಯಗಳು, ಚತುರಂಗಬಲ
ಚಂದ್ರೋದಯೇ ಅರ್ಘ್ಯದಾನವಿಧಿಃ
ಕೌಂಡಿನ್ಯರು
ಸ್ವಪ್ನ, ಅತ್ರಿ, ಸ್ಕಂದ
ಪಾರ್ವತೀ, ಅಗಸ್ತ್ಯ
ಪ್ರದ್ಯಮ್ನ, ಅನಿರುದ್ಧ ಮತ್ತು ಚಿತ್ರಲೇಖಾ
ರುಕ್ಮಿಣೀ
ಶಂಬರ, ಲೋಮಶ ಮತ್ತು ಬಾಣಾಸುರ
ಉದ್ಧವ, ವಸೋರ್ಧಾರಾ, ಸಮವರ್ತೀ, ಮತ್ತು ಚಂದ್ರಸೇನ.
ರಾವಣ, ಶ್ವೇತದೀಪ, ಮತ್ತು ಜಮದಗ್ನಿ
ರೇಣುಕಾದೇವೀ
ಪರಹುರಾಮ
ದತ್ತಾತ್ರೇಯರು
ಪಂಚಪಿತೃಗಳು ಮತ್ತು ಔರ್ಧದೆಹಿಕ ಕರ್ಮ.
ತಾರಕ
ಸ್ಕಂದ, ಅಷ್ಟದಳ ಪದ್ಮ ಮತ್ತು ಷಡ್ಭಾವವಿಕಾರಗಳು.
ಕಶ್ಯಪನ ಪತ್ನಿಯರ ಹೆಸರುಗಳು, ಮತ್ತು ಸಂತತಿಯವರು.