ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶಿವತತ್ತ್ವಸುಧಾನಿಧಿಃ – ಭಾಗ – ೩
ಆರಂಭಿಕ ಪುಟ
ಅನುವಾದಕರು: ಶ್ರೀ ಸೀತಾರಾಮಶಾಸ್ತ್ರೀ ಎಸ್.
ವಿಷಯಾನುಕ್ರಮಣಿಕೆ
ಶಿವಭಿಕ್ಷಾಟನನಾಧ್ಯಾಯಃ ಅಧ್ಯಾಯ ೧೬
ಶಿವನು ಭಿಕ್ಷಟನೆಯನ್ನು ಮಾಡಿರುವ ಕ್ರಮವನ್ನು ತಿಳಿಸು ಎಂದು ಸನತ್ಕುಮಾರನ ಪ್ರಶ್ನೆಯು. ದೇವದಾರುವನ ವರ್ಣನೆಯು. ಆ ವನದಲ್ಲಿದ್ದ ಋಷಿಗಳ ಸಂಖ್ಯೆಯು ಮತ್ತು ಹೆಸರು ಕೂಡ ನಿರ್ದಿಷ್ಟವಾಗಿರುತ್ತದೆ. ಶಿವನು ಅವಧೂತವೇಷದಿಂದ ಇರುತ್ತಾ, ತನ್ನ ಜೊತೆಯಲ್ಲಿ ಮೋಹಿನೀ ರೂಪದಿಂದ ಇರುತ್ತಾ, ತನ್ನ ಜೊತೆಯಲ್ಲಿ ಮೋಹಿನೀ ರೂಪದಿಂದ ಇರುವ ವಿಷ್ಣುವನ್ನು ಕರೆದುಕೊಂಡು, ಆಯಾಯ ಋಷಿಗಳ ಆಶ್ರಮದಲ್ಲಿ ಭಿಕ್ಷೆಯನ್ನು ಮಾಡುವುದು. ಸ್ರ್ರೀ ಸಹಿತವಾಗಿ ಇರುವ ಈ ದಿಗಂಬರನಾದ ಭಿಕ್ಷುಕನನ್ನು ನೋಡಿದ್ದರಿಂದ ಆಶ್ರಮದಲ್ಲಿ ಆಕಾಲದಲ್ಲಿ ಉಂಟಾದ ಅವ್ಯವಸ್ಥಾ ವರ್ಣನೆಯೂ ಉಕ್ತವಾಗಿರುತ್ತದೆ. ಋಷಿಗಳೂ ಕೂಡ ಹೀಗೆ ಇರುವ ಭಿಕ್ಷುಕನಿಗೆ ಬಹಳ ವಿಧವಾದ ಶಾಪಗಳನ್ನು ಕೊಟ್ಟಿದ್ದಲ್ಲದೆ ಬಹಳ ನಿಂದೆಮಾಡಿದರು ಮತ್ತು ಇವನನ್ನು ಅನೇಕ ವಿಧವಾಗಿ ದಂಡಿಸಿದರು. ಈ ಋಷಿಗಳು ಮಾಡಿರುವ ಶಿಕ್ಷೆಯು ಯಾವುದೂ ಭಿಕ್ಷುಕನಾದ ಈಶ್ವರನಿಗೆ ಫಲಕಾರಿಯಾಗದಿರುವಾಗ ಈ ಭಿಕ್ಷುಕನು ವಸಿಷ್ಠ ಪತ್ನಿಯಾದ ಅರುಂಧತೀ ದೇವಿಗೆ ತತ್ತ್ವವನ್ನು ಉಪದೇಶಮಾಡಿ, ಅವಳಿಂದ ಭಿಕ್ಷೆಯನ್ನು ಸ್ವೀಕರಿಸಿ ಈ ತತ್ತ್ವವನ್ನು ನಿಂದಿಸಿದ ಆ ಋಷಿಗಳ ಶಾಪಗಳನ್ನು ಅಂಗಿಕರಿಸಿ ತನ್ನ ಲಿಂಗವನ್ನು ಕಿತ್ತು ಪ್ರಯಾಣಮಾಡಿದನು. ಆನಂತರದಲ್ಲಿ ದೇವದಾರುವನದಲ್ಲಿ ಉತ್ಪಾತಗಳುಂಟಾಗಲು ಋಷಿಗಳು ಹೆದರಿಕೊಂಡು ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮನ ಸಂಗಡ ಈ ವೃತ್ತಾಂತವನ್ನು ತಿಳಿಸಿದರು. ಆಗ ಬ್ರಹ್ಮನು ಧ್ಯಾನದಿಂದ ಅಲ್ಲಿ ನಡೆದಿರುವ ವರ್ತಮಾನವೆಲ್ಲವನ್ನು ತಿಳಿದುಕೊಂಡು ಆ ಋಷಿಗಳಿಗೆ ಇನ್ನು ಮುಂದೆಯಾದರು ಸರಿಯಾಗಿ ತಿಳಿದುಕೊಂಡು ನಡೆದುಕೊಳ್ಳುವಂತೆ ಬುದ್ಧಿಯನ್ನು ಹೇಳಿ ಕಳುಹಿಸಿದನು. ಆಗ ಋಷಿಗಳು ಬ್ರಹ್ಮನ ಮಾತಿನಂತೆ ನಡೆದುಕೊಂಡರು. ಪುನಃ ಈಶ್ವರನು ಅವರಿಗೆ ಪ್ರತ್ಯಕ್ಷನಾಗಿ ಉಪದೇಶ ಮಾಡಿರುವುದು ಈ ಋಷಿಗಳಿಗೆ ಸರಿಯಾಗಿ ಧ್ಯಾನವನ್ನೂ ಆಚರಿಸುವಂತೆ ಉಪದೇಶಮಾಡಿ ಸ್ವಸ್ಥಾನಕ್ಕೆ ಈಶ್ವರನು ಪ್ರಯಾಣ ಮಾಡಿದನು.
ಮಹಾಲಿಂಗೋದ್ಭವ ಪ್ರತಿಪಾದನಾಧ್ಯಾಯಃ ಅಧ್ಯಾಯ ೧೭
ಚತುರ್ಮುಖಬ್ರಹ್ಮ ಮತ್ತು ವಿಷ್ಣು ಇಬರಿಬ್ಬರಿಗೆ ತಮ್ಮ ತಮ್ಮ ಅಧಿಕಾರ ವಿಚಾರದಲ್ಲಿ ಉಂಟಾದ ಪರಸ್ಪರ ಕಲಹವನ್ನು ನಾಶಗೊಳಿಸುವುದಕ್ಕಾಗಿ ಈಶ್ವರನು ಜ್ಯೋತಿರ್ಲಿಂಗ ಸ್ವರೂಪದಿಂದ, ಜಗಳವಾಡುತ್ತಿರುವ ಇಬರಿಬ್ಬರ ಮಧ್ಯದಲ್ಲಿ ಪ್ರತ್ಯಕ್ಷವಾಗುವುದು. ಆ ಆಶ್ಚರ್ಯವನ್ನು ನೋಡಿದ ಇವರಿಬ್ಬರು ತಮ್ಮ ತಮ್ಮ ವಿವಾದವನ್ನು ಮರೆತು, ಆ ಲಿಂಗದ ಮೂಲವನ್ನು, ತುದಿಯನ್ನು, ಕಂಡುಹಿಡಿಯುವುದಕ್ಕಾಗಿ ಹೊರಡುವುದು. ಬ್ರಹ್ಮನ ಅವಿವೇಕದಿಂದ ಅವನಿಗೆ ಶಿವಕೃತವಾದ ಶಾಪ ಪ್ರಾಪ್ತಿಯೂ, ಅನಂತರದಲ್ಲಿ ಅನುಗ್ರಹವೂ ಕೂಡ ವರ್ಣಿತವಾಗಿರುತ್ತದೆ ಮತ್ತು ಬ್ರಹ್ಮ ವುಷ್ಣು ಇವರಿಬ್ಬರಿಗೂ ಶಿವನು ತತ್ತ್ವವನ್ನು ಉಪದೇಶಮಾಡಿರುವುದು ವರ್ಣಿತವಾಗಿರುತ್ತದೆ.
ಶಿವನಾಮೋಚ್ಚಾರಣ ಮಹಿಮಾವರ್ಣನಾಧ್ಯಾಯಃ ಅಧ್ಯಾಯ ೧೮
ಕಾಮನೆಯಿಂದಾಗಲಿ, ಕಾಮನೆಯಿಲ್ಲದ ರೀತಿಯಿಂದಾಗಲೀ ಉಚ್ಚಾರಣೆ ಮಾಡಿದ ಶಿವನ ನಾಮದ ಮಹಿಮೆಯು ವರ್ಣಿತವಾಗಿರುವುದು. ಪಂಚಾಕ್ಷರ ಮಂತ್ರದಂತೆ ನೀಲಕಂಠಮಂತ್ರ ಅಪದುದ್ಧಾರಕ, ಶಿವಮಂತ್ರ, ಮೃತ್ಯುಂಜಯಮಂಟ್ರ ಇವೇ ಮೊದಲಾದ ಶಿವಸಂಭಂಧವಾದ ಮಂತ್ರಗಳು ನಿರ್ದಿಷ್ಟವಗಿರುತ್ತವೆ ಮತ್ತು ಇವುಗಳ ಪುರಶ್ಚರ್ಯಾಕ್ರಮ, ಹೋಮ, ತರ್ಪಣಾದಿಗಳನ್ನು ಆಚರಿಸುವ ಕ್ರಮವು ವಿವರವಾಗಿ ಇಲ್ಲಿ ಹೇಳಲ್ಪಟ್ಟಿರುತ್ತದೆ. ಪ್ರಾತಃ ಕಾಲ, ಮಧ್ಯಾಹ್ನ ಕಾಲ, ಸಾಯಂಕಾಲಗಳಲ್ಲಿ ಆಚರಿಸಿದ ಶಿವಲಿಂಗದರ್ಶನದ ಫಲವು ವಿಸ್ತಾರವಾಗಿ ಉಕ್ತವಾಗಿರುವುದು.
ಅಧ್ಯಾಯ ೧೯
ಶಿವಪೂಜೆಯನ್ನು ಮಾಡುವುದರಲ್ಲಿ ಅವಶ್ಯಕವಾಗಿ ಪೂಜೆಗೆ ಉಪಯೋಗಿಸಬಹುದಾದ ಪುಷ್ಪಗಳು ಉಕ್ತವಾಗಿರುತ್ತವೆ. ಕಾಮಾದಿಗಳಿಂದಾಗಲೀ ಅಥವಾ ನಿಷ್ಕಾಮದಿಂದಾಗಲೀ ಶಿವನಪೂಜೆಯನ್ನು ಆಚರಿಸುವುದರಿಂದ ಉಂಟಾಗುವ ಫಲವು ವಿಶದವಾಗಿ ವಿವರಿಸಲ್ಪಟ್ಟಿರುತ್ತದೆ ಮತ್ತು ಶಿವಪೂಜಾ ವಿಷಯದಲ್ಲಿ ಜಾತಿಭೇದವೂ ಕಾಲನಿಯಮವೂ, ಇಲ್ಲದಿರುವುದರಿಂದ ತನಗೆ ದೊರೆತಷ್ಟು ಮಟ್ಟಿನ ವೈಭವದಿಂದ ಶಿವಲಿಂಗಪೂಜೆಯನ್ನು ಆಚರಿಸಿ ಸಿದ್ಧಿಯನ್ನು ಹೊಂದತಕ್ಕದ್ದು ಎಂದು ಶಿವಲಿಂಗಾರ್ಚನೆಯನ್ನು ಆಚರಿಸುವ ವಿಷಯದಲ್ಲಿ ವಿಧಿಯು ಉಕ್ತವಾಗಿರುವುದು ಮತ್ತು ಶಿವಲಿಂಗಾರ್ಚನೆಯನ್ನು ಮಾಡದೆ ಇರುವವರ ವಿಷಯದಲ್ಲಿ ನಿಂದೆಯು ಉಕ್ತವಾಗಿರುವುದು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ದಿಧವಾದ ಪುರುಷಾರ್ಥಗಳನ್ನು ಅನುಗ್ರಹಿಸುವ ಶಿವನ ಅರ್ಚನೆಯನ್ನು ನಿತ್ಯವಾಗಿ ಆಚರಿಸಬೇಕೆಂದು ವಿಧಿಯು ಈ ಅಧ್ಯಾಯದಲ್ಲಿ ಉಕ್ತವಾಗಿರುತ್ತದೆ.
ಸಕಲಾನುವರ್ಣನಾಧ್ಯಾಯಃ ಅಧ್ಯಾಯ ೨೦
ಶಿವತತ್ತ್ವಸುಧಾನಿಧಿ ಎಂಬ ಈ ಗ್ರಂಥವನ್ನು ಅಭ್ಯಸಮಾದುವ ವಿಷಯದಲ್ಲಿ ಗುರುಪರಂಪರೆಯನ್ನು ಇಲ್ಲಿ ಹೇಳಿರುವುದು ಮತ್ತು ಈ ಗ್ರಂಥದ ಮಹಿಮೆಯನ್ನು ನಿರೂಪಿಸಿರುವುದಲ್ಲದೆ, ಈ ಗ್ರಂಥದ ಪಠನ ಪಾಠನಗಳನ್ನು ಅವಶ್ಯವಾಗಿ ಅಚರಿಸಬೇಕೆಂದು ಹೇಳಿರುತ್ತದೆ ಮತ್ತು ಇದರ ಅರ್ಥವನ್ನು ಸರ್ವದಾಶ್ರವಣ ಮನನದ ಆಚರಣೆಯಿಂದ ಅನುಭವಕೆಕಿ ತಂದುಕೊಂಡು ಸಿದ್ಧನಾಗಬೇಕೆಂದು ಫಲವು ನಿರೂಪಿಸಲ್ಪಟ್ಟಿರುತ್ತದೆ.