ಶಿವತತ್ತ್ವಸುಧಾನಿಧಿಃ – ಭಾಗ – ೨
ವಿಷಯಾನುಕ್ರಮಣಿಕೆ
ಸಂಸಾರದೂಷಣಂ ನಾಮಏಕಾದಶೋಧ್ಯಾಯ
ಹಿಂದಿನ ಅಧ್ಯಾಯದ ಅಭಿಪ್ರಾಯವನ್ನು ಸಂಕ್ಷೇಪವಾಗಿ ಹೇಳಿರುವುದು. ಮುಂದೆ ಹೇಳಬೇಕಾದುದನ್ನು ಹೇಳಲು ಪ್ರತಿಜ್ಞೆಯು. ಸಂಸಾರವು ನಿಂದ್ಯವೆಂಬ ವಿಷಯವನ್ನು ವಿವರಿಸಿರುವುದು ಶಿವಾನಂದದಲ್ಲಿ ಯಾವಾಗಲೂ ಆಸಕ್ತಿಯಿಂದ ಇರುವವನು ಸಂಸಾರದ ವಿಷಯದಲ್ಲಿ ನಡೆದುಕೊಳ್ಳುವ ಪ್ರಕಾರವೂ ಮತ್ತು ಅವನು ಸಂಸಾರದ ವಿಷಯದಲ್ಲಿ ದೃಢವಾಗಿ ತಿಳಿದುಕೊಂಡಿರುವ ಜ್ಞಾನವೂ ಕೂಡ ಉಕ್ತವಾಗಿರುತ್ತದೆ.
ಸಂಸಾರವನ್ನು ಸಮುದ್ರಕ್ಕೆ ಹೋಲಿಸಿ ಇರುವ ಕ್ರಮವು. ಸಂಸಾರದಲ್ಲಿ ಕೊಂಚ ಮಟ್ಟಿಗಾದರೂ ಸುಖವನ್ನು ಉಂಟುಮಾಡುವ ಸ್ವಭಾವವು ಇರುವುದಿಲ್ಲವೆಂದು ನಿರೂಪಿಸಲು ಪ್ರಾರಂಭಿಸಿ, ಬಾಲ್ಯದಲ್ಲಿ ಅನುಭವಿಸುವುದೆಲ್ಲವೂ ದುಃಖಕರವೇ ಆಗಿದ್ದರೂ, ಅದರಲ್ಲಿ ಸುಖವೆಂಬ ಭ್ರಮವು ಇರುವುದೆಂದು ಹೇಳಿರುತ್ತದೆ.
ಯೌವನದಲ್ಲಿ ಅನುಭವಿಸುವ ಭೋಗದ ವಿಷಯದಲ್ಲಿ ಉಂಟಗಿರುವ ಸುಖವೆಂಬ ಜ್ಞಾನವು ಭ್ರಮವೆಂಬದಾಗಿ ನಿರೂಪಿಸಿರುವುದು ಮತ್ತು ಮುಪ್ಪಿನ ಕಾಲದಲ್ಲಿ ಉಂಟಗಿರುವ ದುಃಕವನ್ನು ಅನುಭವಿಸುವ ಕ್ರಮವೂ ವರ್ಣಿಸಿರುತ್ತದೆ.
ಬಾಲ್ಯ ಮತ್ತು ವಾರ್ಧಕ್ಯಗಳಲ್ಲಿ ಶಕ್ತಿಯು ಇಲ್ಲದಿರುವ ಕಾರಣ ಯೌವನದಲ್ಲಿಯೇ ಶ್ರೇಯಸ್ಸು ಉಂಟಗುವ ಉಪಾಯವನ್ನು ಸಾಧಿಸಬೇಕೆಂದು ಹೇಳಿರುವುದು. ಶರೀರದ ತತ್ತ್ವವನ್ನು ನಿರೂಪಿಸಿ, ಅದರಲ್ಲಿ ಉಂಟಗಿರುವ ಅಭಿಮಾನವನ್ನು ತ್ಯಾಗಮಾಡಬೇಕೆಂಬ ನಿರೂಪಣೆಯು
ದೇಹದಲ್ಲಿ ರೋಗವೇ ಮೊದಲಾದ ಉಪದ್ರವಗಳಿಂದ ಮೃತ್ಯುವು ಉಂಟಗುವುದು ಎಂದು ವಿವರಿಸಿ, ಆ ಕಾಲಕ್ಕೆ ಸರಿಯಾಗಿ ಒದಗಿಬರುವ ಕಾಲಮೃತ್ಯು ಮತ್ತು ಅಪಮೃತ್ಯುಗಳಲ್ಲಿ ಕಾಲಮೃತ್ಯುವು ಪರಿಹಾರ್ಯವಲ್ಲವೆಂದು ನಿರೂಪಿಸಿರುತ್ತದೆ.
ಮನುಷ್ಯರಿಗೆ ನಿಯತವಾಗಿ ಕ್ಲಪ್ತವಾಗಿರುವ ಆಯಸ್ಸು ಪೂರ್ತಿಯಾಗುವವರಿಗೂ ಜೀವಿಸಿರುವ ವಿಷಯ್ವನ್ನು ವಿವರಿಸಿ, ಆಸನ್ನಮೃತ್ಯುವಾದವನು ಮರಣ ಕಾಲದಲ್ಲಿ ಅನುಭವಿಸುವ ದುಃಖವನ್ನು ವಿವರಿಸಿರುವುದು.
ಹಣಗಾರನಾದವನು, ತನ್ನ ಮರಣಕಾಲದಲ್ಲಿ ತಾನು ಸಂಪಾದಿಸಿರುವ ದ್ರವ್ಯದ ವಿನಿಯೋಗದ ವಿಚಾರದಲ್ಲಿ ಅವನು ಯೋಚನೆ ಮಾಡುವ ಕ್ರಮವು ವಿವರಿಸಲ್ಪಟ್ಟಿರುವುದು ಮತ್ತು ಈ ಲೋಕದಲ್ಲಿ ಪ್ರಾಣಿಯಾದವನು ತನ್ನ ಜೀವನಕಾಲದಲ್ಲಿ ಅನುಭವಿಸಬೇಕಾಗಿರುವ ಜೀವಿಕಾ ಸಂಬಂಧವಾದ ಕೃಷಿ ವಾಣಿಜ್ಯವೇ ಮೊದಲಾದವುಗಳ ಆಚರಣೆಯಲ್ಲಿ ಉಂಟಗುವ ದುಃಖವನ್ನು ವಿವರಿಸಿರುವುದು.
ದ್ರವ್ಯದ ವಿಷಯದಲ್ಲಿ ವಹಳವಾದ ಆಸೆಯುಳ್ಳವನು ತನ್ನ ಧನವು ಎಲ್ಲವೂ ವ್ಯಯವಾದಾಗ ಅನುಭವಿಸುವ ದುಃಖವನ್ನು ವಿವರಿಸಿ, ಆಸೆಯುಳ್ಳವನು, ಮತ್ತು ಆಸೆಯಿಲ್ಲದವನು ಇವರಿಬ್ಬರಿಗೂ ಇರುವ ತಾರತಮ್ಯವನ್ನು ವಿವರಿಸಿರುವುದು ಮತ್ತು ಸಂಸಾರವಂದಿಗನಾದ ಗೃಹಸ್ಥನಿಗೆ ತನ್ನ ಮಕ್ಕಳ ವಿಷಯದಲ್ಲಿ ಉಂಟಾಗುವ ಸುಖದುಃಖಗಳನ್ನು ವಿವರಿಸಿರುವುದು.
ರಾಜ್ಯ ಪರಿಪಾಲನೆಯನ್ನು ಮಾಡಿರುವ ರಾಜರುಗಳು ಅನುಭವಿಸಿರುವ ಕ್ಲೇಶಗಳನ್ನು ವಿವರಿಸಿ, ರಾಜರಿಗೂ ಉಂಟಾಗಬಹುದಾದ ದುಃಖ ಮತ್ತು ಕ್ಲೇಶಗಳ ಅನುಭವಪ್ರಕಾರವನ್ನು ವರ್ಣಿಸಿರುವುದು. ಭೂಲೋಕದಲ್ಲಿ ಉಂಟಾಗುವ ದುಃಖಗಳನ್ನು ವಿವರಿಸಿ ಸ್ವರ್ಗದಲ್ಲಿ ದೇವತೆಗಳೇ ಮೊದಲಾದವರು ಅನುಭವಿಸುತ್ತಿರುವ ದುಃಖಾನುಭವ ಕ್ರಮದ ವಿವರಣೆಯು.
ವೃಕ್ಷ, ಲತಾ, (ಮರ ಮತ್ತು ಬಳ್ಳಿ) ಇವೇ ಮೊದಲಾದವುಗಳು ಮತ್ತು ಮೃಗಗಳು, ಸರ್ಪಗಳು, ಮೊದಲಾದ ಕ್ರಿಮಿಕೀಟಗಳೂ ಅನುಭವಿಸುತ್ತಿರುವ ದುಃಖಾನುಭವ ಪ್ರಕಾರವನ್ನು ವಿವರಿಸಿರುವುದಲ್ಲದೆ, ಸಂಕ್ಷೇಪವಾಗಿ ಆಯಾಯಾ ಪ್ರಾಣಿಗಳಿಗೆ ಉಂಟಗುವ ಕ್ಲೇಶಾನುಭವ ಪ್ರಕಾರವನ್ನು ವರ್ಣಿಸಿರುವುದು.
ಎಲ್ಲಾ ವಿಷಯದಲ್ಲಿಯೂ ದುಃಖ ಮತ್ತು ಕ್ಲೇಶಗಳು ಸಂಭವಿಸುವ ಕ್ರಮವನ್ನು ನಿರೂಪಿಸಿ, ವೈರಾಗ್ಯವು ಉಂಟಾಗುವ ಕಾರಣವನ್ನು ಹೇಳಿದ ನಂತರ ತತ್ತ್ವವನ್ನು ಉಪದೇಶಮಾಡಿರುವ ಕ್ರಮವು.
ಧ್ಯಾನನಿರೂಪಣವೆಂಬ ಹನ್ನೆರಡನೆಯ ಅಧ್ಯಾಯವು.
ಪರಮೇಶ್ವರನು ಅಪರಿಚ್ಛಿನ್ನನಾಗಿ ಯಾವಾಗಲೂ ಇರುವವನಾದರೂ, ಪರಿಚ್ಛಿನ್ನಭಾವವನ್ನು ಯಾತಕ್ಕಾಗಿ ಹೊಂದಿರುವನು. ಇದರಂತೆಯೇ ಈ ದೇವನ ಶಕ್ತಿದೇವಿಯೂ ಕೂಡ ತನ್ನ ಲೀಲೆಯಿಂದ ಅನೇಕವಾದ ಆಕಾರಗಳನ್ನು ಧರಿಸಿಕೊಂಡು ಅನೇಕವಾದ ಹೆಸರುಗಳಿಂದ ಯಾತಕ್ಕಾಗಿ ಪ್ರಸಿದ್ಧಳಾಗಿರುವಳು ಎಂಬ ಸಂಶಯವನ್ನು ಹೋಗಲಾಡಿಸಿಕೊಳ್ಳಲು ಸನತ್ಕುಮಾರನ ಪ್ರಶ್ನೆಯು ಮತ್ತು ಇದರ ವಿವರಣವು. ಈ ಸಂಶಯವನ್ನು ಪರಿಹರಿಸಲು ಕುಮಾರಸ್ವಾಮಿಯು ತ್ತರವನ್ನು ಹೇಳಲು ಉಪಕ್ರಮವು.
ಧ್ಯಾನ, ಪೂಜಾ, ಸ್ತುತಿ, ಕರ್ಮಾಚರಣೆಗಳು ಎಂಬ ಇವೇ ಮೊದಲಾದವುಗಳು ದೇವನ ಅನುಗ್ರಹವನ್ನು ಉಂಟುಮಾಡುವ ಉಪಾಯಗಳು. ಆದ್ದರಿಂದ, ಇವುಗಳಿಂದ ಮನಸ್ಸಿನ ಚಂಚಲತ್ವವು ಹೋಗಿ, ಸ್ಥೈರ್ಯವು ಉಂಟಾಗಿ ಚಿತ್ತಶುದ್ಧಿಯು ಉಂಟಾಗುವುದೆಂದು ಆಯಾಯ ಕರ್ಮಗಳನ್ನು ಆಚರಿಸಬಲ್ಲ ಅಧಿಕಾರಿಗಳನ್ನು ನಿರೂಪಿಸಿರುವುದು ಮತ್ತು ಮುಕ್ತಿಯು ಉಂಟಾಗಲು, ಜ್ಞಾನವೂ, ಜ್ಞಾನವು ಉಂಟಾಗಲು ಧ್ಯಾನವೂ, ಧ್ಯಾನವನ್ನು ಆಚರಿಸಲು ಚಿತ್ತಶುದ್ಧಿಯೂ, ಚಿತ್ತಶುದ್ಧಿಯು ಉಂಟಾಗಲು ಯೋಗಾಭ್ಯಾಸವೂ ಕಾರಣವೆಂದು ಉಪದೇಶವಿವರಣವು
ಯೋಗಾಭ್ಯಾಸವನ್ನು ಮಾಡುವವರಿಗೆ, ಅನುಕೂಲಿಸುವಂತೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಇವುಗಳ ಸ್ವರೂಪವನ್ನು ವಿಮರ್ಶೆ ಮಾಡಿ, ಅವುಗಳನ್ನು ಆಚರಿಸಿದ್ದರಿಂದ ಉಂಟಾಗುವ ಫಲವನ್ನು ವಿವರಿಸಿರುವುದು.
ಧಾರಣಾ ಎಂಬ ಯೋಗಾಂಗವನ್ನು ವಿವರಿಸಿ, ಧ್ಯಾನಪದಾರ್ಥವನ್ನೂ ಹೇಳಿ ಸಮಾಧಿಯನ್ನು ಆಚರಿಸುವ ಆವಶ್ಯಕತೆಯನ್ನೂ ಫಲವನ್ನೂ ನಿರೂಪಿಸಿರುವುದು. ನಿರ್ಗುಣಸಗುಣಧ್ಯಾನಗಳೆಂಬ ಎರಡರಲ್ಲಿ ಸಗುಣಧ್ಯಾನವನ್ನು ಆಚರಿಸಿದನಂತರ ನಿರ್ಗುಣಧ್ಯಾನವು ಆಚರಿಸತಕ್ಕದ್ದಾಗಿರುವುದರಿಂದ ಸಗುಣಾಧ್ಯಾನಾಚರಣೆಯ ಕ್ರಮವನ್ನು ವಿಸ್ತಾರವಾಗಿ ಹೇಳಿರುವುದು.
ಪ್ರಾಣಾಯಾಮ ಕ್ರಮದಿಂದ ಕುಂಡಲಿನಿಯನ್ನು ಉದ್ಬೋಧನೆ ಮಾಡಿ ಹೃದಯಾದಿ ಪ್ರದೇಶಗಳಲ್ಲಿ ದೇವದೇವನಾದ ಪರಮೇಶ್ವರನ ದಿವ್ಯಮಂಗಳವಾದ ಆಕಾರವನ್ನು ಧ್ಯಾನಮಾಡಲು ಅನುಕೂಲಿಸುವಂತೆ, ದೇವದೇವನ ಸ್ವರೂಪವನ್ನು ವಿವರಿಸಿರುವುದು.
ಇದರಂತೆಯೇ ದೇವಿಯ ಪರಮಮಂಗಳಕರವಾದ ಆಕಾರದ ವರ್ಣನೆಯು ಉಪದಿಷ್ಟವಾಗಿ ಇರುವುದು.
ನಿರ್ಗುಣಧ್ಯಾನ ಷಡಕ್ಷರಮಹಿಮಾನುವರ್ಣನವೆಂಬ ಹದಿಮೂರನೆಯ ಅಧ್ಯಾಯವು
ದೇವದೇವನಾದ ಪರಮೇಶ್ವರನ ದಿವ್ಯಮಂಗಳರೂಪವನ್ನು ಸಗುಣಬ್ರಹ್ಮಸ್ವರೂಪವೆಂದು ತಿಳಿದು, ಅದನ್ನು ಸರಿಯಾದ ಭಾವನೆಯಿಂದ ಧ್ಯಾನಮಾಡುತ್ತಿರುವವನು ಜಾಗ್ರತೆಯಾಗಿ ಸಿದ್ಧಿಯನ್ನು ಹೊಂದಿ ನಿರ್ಗುಣಧ್ಯಾನವನ್ನು ಆಚರಿಸುವ ಅರ್ಹತೆಯನ್ನು ಹೊಂದುವನು. ದೃಢವಾದ ಸಗುಣಧ್ಯಾನವು ನಿರ್ಗುಣಧ್ಯಾನದಲ್ಲಿ ಪರ್ಯವಸಿತವಾಗುವುದು. ಅದರಿಂದ ನಿರ್ಗುಣಧ್ಯಾನವನ್ನು ಆಚರಿಸಿ ಭುಕ್ತಿಮುಕ್ತಿಗಳನ್ನು ಹೊಂದಬೇಕೆಂದು ಉಪದೇಶವು ನಿರೂಪಿತವಾಗಿರುವುದು.
ಶಿವನು ಧ್ಯಾನವನ್ನು ಆಚರಿಸುವವರಲ್ಲಿ ತಾನಾಗಿ ಸುಲಭವಾದ ರೀತಿಯಿಂದ ಪ್ರತ್ಯಕ್ಷನಾಗುವ ಅಥವಾ ಅನುಗ್ರಹವನ್ನು ಮಾಡುವ ವಿಷಯದಲ್ಲಿ ತಕ್ಕ ಅಧಿಕಾರಿಗಳ ವಿವೇಚನೆಯು ಉಕ್ತವಾಗಿರುವುದು.
ನಿರ್ಗುಣಧ್ಯಾನವನ್ನು ಆಚರಿಸುವ ಯೋಗಿಗೆ ಇರಬೇಕಾದ ಗುಣಗಳನ್ನು ವಿವರಿಸಿರುವುದು ಮತ್ತು ನಿರ್ಗುಣಧ್ಯಾನರೂಪವಾದ ಯೋಗವನ್ನು ಅಭ್ಯಾಸ ಮಾಡುವವನು ಆಚರಿಸಬೇಕಾದ ಯೋಗಾಂಗಗಳಾದ ಯಮಾದಿಗಳ ವಿವರಣೆಯು ನಿರೂಪಿತವಾಗಿರುತ್ತದೆ.
ನಿರ್ಗುಣಧ್ಯಾನವನ್ನು ಆಚರಿಸುವ ಕ್ರಮವೂ, ನಿರ್ಗುಣಸ್ವರೂಪವೂ ಕೂಡ ವಿವರಿಸಲ್ಪಟ್ಟಿರುವುದು ಮತ್ತು ಫಲವೂ ಕೂಡ ವಿವರವಾಗಿ ಉಕ್ತವಾಗಿರುವುದು.
ಈ ಪ್ರಕಾರವಾಗಿರುವ ಯೋಗವನ್ನು ಕ್ರಮವಾಗಿ ಅಭ್ಯಾಸಮಾಡುವ ಯೋಗಿಯ ಮಹಾತ್ಮ್ಯವನ್ನು ವಿವರಿಸಿ ಹೇಳಿರುವುದು. ನಿರ್ಗುಣಧ್ಯಾನದಿಂದ ಜ್ಞಾನದ ಅಭಿವೃದ್ಧಿಯು ಉಂಟಗುವ ಕಾರಣ ಆ ಪ್ರಕಾರವಾದ ಆತ್ಮಜ್ಞಾನದ ಮಹಿಮೆಯು ವರ್ಣಿತವಾಗಿರುತ್ತದೆ. ಜ್ಞಾನಿ ಮತ್ತು ಅಜ್ಞಾನಿ ಇವರುಗಳ ತಾರತಮ್ಯವು ನಿರುಕ್ತವಾಗಿರುವುದು. ಜ್ಞಾನದ ಮಹಿಮೆಯನ್ನು ವಿವರಿಸಿರುವುದು. ಜ್ಞಾನದಿಂದ ಸಿದ್ಧಿಯನ್ನು ಹೊಂದಿರುವ ಸ್ತ್ರೀಯರು ಮತ್ತು ಹೀನಜಾತಿಯವರು ಇವರನ್ನು ನಿರ್ದೇಶಮಾಡಿರುವುದು. ಈ ಪ್ರಕಾರವಾದ ಜ್ಞಾನವು ಉಪದೇಶವಿಲ್ಲದೆ ಉಂಟಾಗುವುದಿಲ್ಲವಾದ ಕಾರಣ ಗುರುವಿನಿಂದ ಉಪದೇಶವು ಅವಶ್ಯಕವೆಂದು ನಿರೂಪಿಸಿರುವುದು.
ಗುರುವಿನ ಮತ್ತು ಶಿಷ್ಯನ ಲಕ್ಷಣವು ನಿರೂಪಿತವಾಗಿರುವುದು
ಶಾಸ್ತ್ರದಲ್ಲಿ ಉಕ್ತವಾಗಿರುವ ಗುರುವಿನಿಂದ ಮಂತ್ರೋಪದೇಶವನ್ನು ಹೊಂದಿ ಆ ಮಂತ್ರವನ್ನು ಸರಿಯಾದ ಕ್ರಮದಿಂದ ಜಪಮಾಡುವುದರ ಅವಶ್ಯಕತೆಯನ್ನು ನಿರೂಪಿಸಿರುವುದು ಮತ್ತು ಶಿವಪಂಚಾಕ್ಷರ ಮಂತ್ರದ ಮಹಿಮೆಯನ್ನು ವಿವರಿಸಿರುವುದು. ಸ್ತ್ರೀ, ಶೂದ್ರರು, ಇವರೇ ಮೊದಲಾದವರು ಈ ಮಂತ್ರವನ್ನು ಜಪಮಾಡುವ ಕ್ರಮವನ್ನು ವಿವರಿಸಿ ಋಷಿ, ದೇವತಾ ಛಂದಸ್ಸುಗಳನ್ನು ನಿರೂಪಿಸಿರುವುದು.
ಪಂಚಾಕ್ಷರಮಂತ್ರ ಅಥವಾ ಷಷಕ್ಷರಮಂತ್ರದ ಜಪಕ್ರಮವನ್ನು ಹೇಳಿ ಪುರಶ್ಚರಣ ಕ್ರಮವನ್ನು ನಿರೂಪಿಸಿರುವುದು. ಪುರಶ್ಚರಣ ಅಥವಾ ಜಪ ಮಾಡುವುದರ ಸಂಖ್ಯೆಯನ್ನು ನಿರ್ದೇಶಮಾಡಿರುವುದು ಮತ್ತು ತರ್ಪಣ, ಹೋಮ, ಭೋಜನವೇ ಮೊದಲಾದ ಕರ್ಮಗಳ ಕ್ರಮವನ್ನು ಹೇಳಿರುವುದು. ಈ ಪ್ರಕಾರವಾಗಿ ಆಚರಿಸಿದವನಿಗೆ ಉಂಟಾಗುವ ಫಲವನ್ನು ನಿರೂಪಿಸಿರುವುದು.
ಹೃದಯಾದಿ ಪ್ರದೇಶದಲ್ಲಿ ಆಚರಿಸತಕ್ಕ ಮಾನಸ ಪೂಜಾಕ್ರಮವೂ, ನಿರೂಪಿತವಾಗಿರುವುದು ಮತ್ತು ಫಲವೂ ವಿಶದವಾಗಿ ಉಕ್ತವಾಘಿರುತ್ತದೆ.
ಶಿವಾರ್ಚನ ಮಹಿಮಾನುವರ್ಣನವೆಂಬ ಹದಿನಾಲ್ಕನೆಯ ಅಧ್ಯಾಯವು
ಶಿವನನ್ನು ಪೂಜಿಸುವ ವಿಷಯದಲ್ಲಿ ಆಯಾಯ ಅರ್ಹತೆಯುಳ್ಳವರಿಗೆ ಅನುಸಾರವಾಗಿ ನಿಯತವಾಘಿರುವ ಕ್ರಮದ ವಿವರಣೆಯು. ಶಿವಪೂಜೆಯನ್ನು ಆಚರಿಸುವವನಿಗೆ ಪರಿಶುದ್ಧಿಯನ್ನು ಉಂಟುಮಾಡುವ ಪ್ರದೇಶವನ್ನು ವಿವರಿಸಿ, ಮಹೇಶ್ವರನ ಪೂಜೆಯ ಕ್ರಮವನ್ನು ನಿರೂಪಿಸಿರುವುದು.
ಗೃಹಸ್ಥ ಬ್ರಹ್ಮಚಾರಿ ವಾನಪ್ರಸ್ಥ, ಯತಿ, ಶೂದ್ರರು ಇವರುಗಳು ಆಚರಿಸಬೇಕಾದ ಪೂಜೆಯ ಕ್ರಮವನ್ನು ನಿರೂಪಿಸಿರುವುದು. ಶಿವಲಿಂಗಪೂಜೆಯ ಮಹಿಮೆಯನ್ನು ನಿರೂಪಿಸಿ ದೇವ ಮತ್ತು ದೇವಿ ಇವರಿಗೆ ಭೇದವನ್ನು ತಿಳಿಯುವವರು ದುರ್ಗತಿಯನ್ನು ಹೊಂದುವರೆಂದು ಹೇಳಿರುವುದು.
ಶಿವನಿರ್ಮಾಲ್ಯ ಸ್ವೀಕಾರ ಮತ್ತು ತ್ಯಾಗ ವಿಷಯವೂ, ಶಿವನಿರ್ಮಾಲ್ಯವನ್ನು ಸ್ವೀಕರಿಸುವ ಅಧಿಕಾರಿಗಳು, ಇವುಗಳನ್ನು ವಿಮರ್ಶೆಮಾಡಿ, ಶಿವಲಿಂಗಗಳ ಭೇದವನ್ನೂ ವಿವರಿಸಿ ಇರುತ್ತದೆ.
ಭಸ್ಮವನ್ನು ಧರಿಸುವುದರಲ್ಲಿ ಅವಶ್ಯಕತೆಯನ್ನು ಹೇಳಿರುವುದು ಭಸ್ಮಮಹಿಮ ವರ್ಣನೆಯು, ಭಸ್ಮಭೇದನಿರೂಪಣ, ಭಸ್ಮವನ್ನು ಧರಿಸುವ ಕ್ರಮವಿವರಣೆ, ಭಸ್ಮವನ್ನು ಧರಿಸುವ ಪ್ರದೇಶಗಳು, ಭಸ್ಮಧಾರಣ ಫಲಾನುವರ್ಣನೆಯು, ಭಸ್ಮಧಾರಣೆಗಿಂತ ಇತರವಾದ ತ್ರಿಪುಂಡ್ರಾದಿಗಳನ್ನು ಧರಿಸಬಾರದೆಂಬ ನಿಷೇಧವೂ ಕೂಡ ಸಕಾರಣವಾಗಿ ನಿರೂಪಿತವಾಗಿರುವುದು.
ಊರ್ಧೃ ತ್ರಿಪುಂಡ್ರಧಾರಣವನ್ನು ನಿಷೇಧಮಾಡಿ ಹೇಳಿರುವಂತೆ ಶರೀರದಲ್ಲಿ ಶಿವ ಮತ್ತು ವಿಷ್ಣುವೇ ಮೊದಲಾದ ದೇವತಾ ಸಂಬಂಧವಾದ ಚಿಹ್ನೆಗಳಿಂದ ಅಂಕನಮಾಡುವುದು ಎಂಬುವ ವಿಷಯವನ್ನು ವಿಮರ್ಶೆ ಮಾಡಿರುವುದು.
ಮೃತ್, ಭಸ್ಮ, ಚಂದನ, ಕುಂಕುಮ, ಇವುಗಳನ್ನು ಒಂದರಮೇಲೆ ಇನ್ನೊಂದನ್ನು ಧರಿಸುವ ವಿಚಾರವನ್ನು ವಿಮರ್ಶೆ ಮಾಡಿರುವುದು.
ಭಸ್ಮಭೇದವನ್ನು ಹೇಳಿರುವುದು. ಭಸ್ಮವನ್ನು ಧರಿಸುವ ಶರೀರ ಪ್ರದೇಶವನ್ನು ನಿರ್ದೇಶಮಾಡಿ ಭಸ್ಮಧಾರಣೆಯ ಕಾಲದಲ್ಲಿ ಹೇಳಬೇಕಾದ ಮಂತ್ರಗಳನ್ನು ವಿವರಿಸಿರುವುದು. ಆಯಾಯಾ ಆಶ್ರಮ ಧರ್ಮಕ್ಕನುಸಾರವಾಗಿ ಭಸ್ಮಧಾರಣೆಯ ಕ್ರಮವನ್ನು ವಿವರಿಸಿ, ಭಸ್ಮಧಾರಣೆಯ ವಿಷಯದಲ್ಲಿಯೂ, ಶಿವನನ್ನು ದ್ವೇಷಿಸುವುದೂ, ಭಕ್ತಿ ಇಲ್ಲದೆ ಇರುವುದೂ, ಶಿವಸಂಬಂಧವಾದ ಧರ್ಮಗಳನ್ನು ಆಚರಿಸುವುದರಲ್ಲಿ ದ್ವೇಷವು ಉಂಟಗುವುದರ ಕಾರಣವನ್ನು ನಿರ್ದೇಶ ಮಾಡಿರುವುದು.
ಭಾಸ್ಮಸ್ನಾನ, ಭಸ್ಮ ಉದ್ಧೂಳನ ಇವುಗಳ ಕ್ರಮವನ್ನು ವಿವರಿಸಿ, ಭಸ್ಮವನ್ನು ಧರಿಸದೆ ಆಚರಿಸಿದ ಕರ್ಮಗಳ ವಿಷಯವನ್ನು ಹೇಳಿರುವುದು ಮತ್ತು ಕಲಿಯುಗದಲ್ಲಿ ವರ್ಜ್ಯವಾದ ಕರ್ಮಗಳನ್ನು ನಿರ್ದೇಶಮಾಡಿರುವುದು.
ಶಿವಸಂಬಂಧವಾದ ಮಂತ್ರವನ್ನು ಜಪಮಾಡುವುದು, ಭಸ್ಮಸ್ನಾನವೇ ಮೊದಲಾದ ಶಿವಧರ್ಮಗಳನ್ನು ಅವಶ್ಯವಾಗಿ ಆಚರಿಸುವ ವಿಷಯವನ್ನು ವಿವರಿಸಿರುವುದು.
ರುದ್ರಾಕ್ಷಬಿಲ್ವ ರುದ್ರಾಧ್ಯಾಯ ಮಹಿಮಾನುವರ್ಣನ ಎಂಬ ಹದಿನೈದನೆಯ ಅಧ್ಯಾಯವು
ರುದ್ರಾಕ್ಷಗಳ ಉತ್ಪತ್ತಿಯ ಕ್ರಮವೂ ರುದ್ರಾಕ್ಷಗಳ ಭೇದವೂ ರುದ್ರಾಕ್ಷಗಳನ್ನು ಆಯಾಯ ಪ್ರದೇಶಗಳಲ್ಲಿ ಧರಿಸುವುದರಿಂದ ಉಂಟಾಗುವ ಫಲವೂ, ರುದ್ರಾಕ್ಷಗಳನ್ನು ಶರೀರದಲ್ಲಿ ಆಯಾಯ ಪ್ರದೇಶದಲ್ಲಿ ಧರಿಸಬೇಕಾದ ಸಂಖ್ಯೆಯನ್ನೂ ವಿವರಿಸಿ ಹೇಳಿರುವುದು.
ಬಿಲ್ವಪತ್ರೆಯ ಮಹಿಮೆಯನ್ನು ವರ್ಣಿಸಿರುವುದು. ಬಿಲ್ವಪತ್ರೆಯಿಂದ ಶಿವನನ್ನು ಅವಶ್ಯವಾಗಿ ಪೂಜಿಸುವ ನಿಯಮವನ್ನು ವಿವರಿಸಿರುವುದು. ಬಿಲ್ವಪತ್ರೆಯು ದೊರಕದೆ ಇರುವಾಗ ಅದಕ್ಕೆ ಬದಲಾಗಿರುವ ಬೇರೆಯದಾದ ಪೂಜಾದ್ರವ್ಯವನ್ನು ಹೇಳಿರುವುದು. ಬಿಲ್ವಕಾಷ್ಠ, ಬಿಲ್ವಗಂಧ ಇವುಗಳನ್ನು ಶಿವನಿಗೆ ಅರ್ಪಿಸುವ ವಿಚಾರ ಮತ್ತು ಶಿವಪೂಜೆಗೆ ಉಪಯುಕ್ತವಾಗುವ ದ್ರವ್ಯವನ್ನು ಹೇಳಿರುವುದು. ಶಿವಪೂಜೆಯನ್ನು ಮಾಡುವುದರ ಮತ್ತು ಮಾಡದಿರುವರ ಫಲಾಫಲಗಳನ್ನು ವಿವರಿಸಿರುವುದು.