ಶಿವತತ್ತ್ವಸುಧಾನಿಧಿಃ – ಭಾಗ – ೧
ವಿಷಯಾನುಕ್ರಮಣಿಕೆ
ಅವತರಣಿಕಾ
ಶಿವತತ್ತ್ವಸುಧಾನಿಧಿಯನ್ನು ವ್ಯಾಖ್ಯಾನಮಾಡಲು ಶ್ರೀನಿವಾಸ ದೀಕ್ಷಿತನು ತನ್ನ ಗುರುವಿನ ಅನುಗ್ರಹದಿಂದ ಶಾಸ್ತ್ರಗಳ ರಹಸ್ಯಗಳೆಲ್ಲವನ್ನೂ ತಿಳಿದುಕೊಂಡು ಇರುವುದರಿಂದ ಗ್ರಂಥ ರಚನೆಗಾಗಿ ಪ್ರತಿಜ್ಞೆಯನ್ನು ಮಾಡಿರುವುದು ಮತ್ತು ಈ ಗ್ರಂಥಕಾರನಿಗೆ ಜ್ಞಾನಾಭಿವೃದ್ಧಿಯು ಒಂದೇ ಸಮನಾಗಿ ಇರುವುದಕ್ಕಾಗಿಯೂ, ಗ್ರಂಥವು ಯಾವ ವಿಧವಾದ ವಿಘ್ನವೂ ಇಲ್ಲದ ಹಾಗೆ ಪೂರ್ತಿಯಾಗುವುದಕ್ಕಾಗಿಯೂ ಕೂಡ, ಗ್ರಂಥಕಾರನು ಆಚರಿಸಿರುವ ಇಷ್ಟದೇವತಾ ನಮಸ್ಕಾರರೂಪವಾದ ಮಂಗಳಾಚರಣೆಯ ಕ್ರಮವನ್ನು ವಿವರಿಸಿರುವುದು.
ವಿದ್ಯೆಗಳ ಹದಿನಾಲ್ಕು ಸ್ಥಾನವನ್ನು ನಿರೂಪಿಸಿರುವುದು. ಆ ವಿದ್ಯೆಗಳು ಧರ್ಮಾಚರಣೆಗೆ ಕಾರಣವೆಂದು ತಿಳಿಸಿರುವುದು. ಆತ್ಮಜ್ಞಾನವಿಚಾರದಿಂದ ಆತ್ಮಸ್ವರೂಪವನ್ನು ನಿಶ್ಚಯ ಮಾಡಿ ತಿಳಿಸುವ ವಿಷಯದಲ್ಲಿ ವೇದಗಳೇ ಮುಖ್ಯವಾಗಿರುವುವುಗಳು ಎಂದು ಸಿದ್ಧಾಂತ ಮಾಡಿರುವುದು. ಆತ್ಮಸ್ವರೂಪವನ್ನು ಬೋಢಿಸುವ ಶಾಸ್ತ್ರಗಳನ್ನೂ ಮತ್ತು ವೇದಗಳನ್ನೂ ಕೂಡ ಚೆನ್ನಾಗಿ ತಿಳಿದುಕೊಂಡು ಉಪದೇಶಮಾಡುವ ಸರ್ವಜ್ಞನಾಗಿರುವ ಗುರುವು ಪರಮೇಶ್ವರನೇ ಆಗಿರುವನು. ಇವನು ಲೋಕೋಪಕಾರಕ್ಕಾಗಿ ಪುರಾಣಸಂಹಿತೆಯನ್ನು ಹದಿನೆಂಟು ವಿಧವಾಗಿ ನಿರ್ಮಿಸಿರುವನು. ಈ ಪುರಾಣಗಳು ಕಾಲಾನುಗುಣವಾಗಿ ಸಂಕ್ಷೇಪವಾಗಿರುವಂತೆ ನಿರ್ಮಿಸಿರುವುದು ಈ ಪುರಾಣಗಳ ಒಟ್ಟು ಗ್ರಂಥ ಸಂಖ್ಯಾವಿಚಾರ, ಪ್ರತಿಪಾದ್ಯ ವಿಚಾರ ಮತ್ತು ಸ್ಕಾಂದಪುರಾಣವೆಂದು ಹೆಸರು ಉಂಟಗಲು ಕಾರಣವೂ ಇಲ್ಲಿ ಹೇಳಿರುತ್ತದೆ.
ಮಲಯಾಚಲಖಂಡ, ಸನತ್ಕುಮಾರ ಸಂಹಿತಾ, ಶಿವತತ್ತ್ವ ಸುಧಾನಿಧಿ ಎಂದು ಹೆಸರು ಪ್ರಸಿದ್ಧವಾಗಲು ಕಾರಣವನ್ನು ನಿರೂಪಿಸಿರುವುದು. ಪುರಾಣ ಮತ್ತು ಧರ್ಮಶಾಸ್ತ್ರಗಳಿಗೆ ಪ್ರತಿಪಾದ್ಯ ವಿಷಯದಲ್ಲಿ ಇರುವ ತಾರತಮ್ಯವನ್ನು ನಿರೂಪಿಸಿರುವುದು. ಈ ಗ್ರಂಥಕಾರನ ಮಾತಾಪಿತೃಗಳ ನಾಮ ನಿರ್ದೇಶಪೂರ್ವಕವಾಗಿ ಇವನು ರಚಿಸಿರುವ ಇತರ ಗ್ರಂಥಗಳ ನಾಮನಿರ್ದೇಶವೂ ಕೂಡ ಹೇಳಲ್ಪಟ್ಟಿರುತ್ತದೆ. ಉಪೋದ್ಘಾತಾಧ್ಯಾಯ (೧)
ವಿಘ್ನನಿರಾಕರಣ ಮಾಡುವುದಕ್ಕಾಗಿಯೂ, ಗ್ರಂಥವು ಯಾವ ವಿಘ್ನವೂ ಇಲ್ಲದಂತೆ ಪೂರ್ಣವಾಗುವುದಕ್ಕಾಗಿಯೂ ಕೂಡ, ಗಣಪತಿ ನಮಸ್ಕಾರಾಚರಣೆಯು. ಗಣೃಪತಿ ನಮಸ್ಕಾರವು ಗ್ರಂಥಾರಂಭದಲ್ಲಿ ಮಂಗಳಾರ್ಥವಾಗಿರುವಂತೆ, ಇತರ ದೇವತೆಗಳ ನಮಸ್ಕಾರವೂ, ಆಯಾಯ ಪದಗಳ ಅನೇಕ ವಿಧವಾದ ಅರ್ಥವಿವರಣೆಯೊಡನೆ ನಿರೂಪಿಸಲ್ಪಟ್ಟಿರುತ್ತದೆ. ಗುರು, ಶಿವ, ರುದ್ರ, ರುದ್ರಾಣೀ, ಉಮಾ, ಶಬ್ದಗಳ ಅರ್ಥವಿಚಾರವು ಉಕ್ತವಾಗಿರುತ್ತದೆ.
ಮಲಯಾಚಲವಾಸಿನೀದೇವಿಯು ಪರಶಿವನಿಂದ ಬ್ರಹ್ಮವಿದ್ಯೆಯ ಉಪದೇಶವನ್ನು ಹೊಂದಿಗಾಗ ಕುಮಾರಸ್ವಾಮಿಯು ಅದನ್ನು ಕೇಳಿಸನತ್ಕುಮಾರನಿಗೆ ಉಪದೇಶಮಾಡಿರುವ ಕಾರಣ ಸನತ್ಕುಮಾರ ಸಂಹಿತೆಯೆಂದು ಪ್ರಸಿದ್ಧವಾದ ಈಗ್ರಂಥದ ಒಂದು ಭಾಗದಲ್ಲಿ ವೇದಾಂತ ವಿಚಾರದ ಅನುಬಂಧಚತುಷ್ಟಯ ನಿರೂಪಣೆಯು ಉಕ್ತವಾಗಿರುತ್ತದೆ.
ಗುರುಪದಾರ್ಥವಿವರಣೆ, ಸರ್ವಜ್ಞಪದದ ಅರ್ಥವಿಚಾರ, ಸೂತಪುರಾಣೀಕನ ಗುಣವಿಮರ್ಶೆ, ವ್ಯಾಸಶಬ್ದ, ವೇದವ್ಯಾಸ ಶಬ್ದ ಇವುಗಳ ಅರ್ಥವಿವರಣೆ, ತತ್ತ್ವಸಾರ ಶಬ್ದಾರ್ಥ ವಿಚಾರ, ಇತಿಹಾಸ ಪುರಾಣ ಎಂಬ ಪದಗಳ ಅರ್ಥವಿಮರ್ಶೆ ಅವುಗಳ ತಾರತಮ್ಯ ಇವುಗಳು ನಿರೂಪಿಸಲ್ಪಟ್ಟಿರುವುದು.
ಸೂತಪುರಾಣೀಕನನ್ನು ಕುರಿತು ರುಷಿಗಳು ಮುಕ್ತಿಯು ಉಂಟಾಗುವ ಉಪಾಯವನ್ನು ತಿಳಿಯಲು ಪ್ರಶ್ನೆಯು. ಆ ಪ್ರಶ್ನೆಗೆ ಉತ್ತರವನ್ನು ಹೇಳುವ ವಿಷಯದಲ್ಲಿ ಇರುವ ಮತಭೇದವನ್ನು ವಿವರಿಸುವುದು. ಜ್ಞಾನವನ್ನು ಉಪದೇಶಮಾಡುವ ವಿಷಯದಲ್ಲಿ ಗುರುಗಳಾಗತಕ್ಕವರನ್ನು ನಿರ್ದೇಶಮಾಡಿರುವುದು. ಮಲಯಪರ್ವತವರ್ಣನೆ ಸ್ಕಂದನನ್ನು ಕುರಿತು ಸನತ್ಕುಮಾರನು ಕೇಳಿರುವ ಪ್ರಶ್ನೆಗಳು. ಸನತ್ಕುಮಾರನಿಗೆ ಸ್ಕಂದನು ಜ್ಞಾನವನ್ನು ಉಪದೇಶಮಾಡಲು ಪ್ರತಿಜ್ಞೆಯು.
ಉತ್ತಮವಾದ ಶ್ರೇಯಸ್ಸನ್ನು ಉಂಟುಮಾಡುವ ವಿಷಯದಲ್ಲಿ ಭಕ್ತಿಯು ಸಾಧನವೆಂದು ನಿರೂಪಿಸಿರುವುದು ಮತ್ತು ವೇದಾಂತವಿಚಾರಜ್ಞಾನವೇ ಮುಕ್ತಿಸಾಧಕವೆಂದು ನಿರೂಪಿಸಿರುವುದು.
ಪ್ರಶ್ನಾಧ್ಯಾಯ (೨)
ಸರ್ವಾತ್ಮತ್ವಪ್ರತಿಪಾದನಾಧ್ಯಾಯ (೩)
ತತ್ತ್ವವನ್ನು ಉಪದೇಶಮಾಡುವುದಕ್ಕಾಗಿ ಪ್ರಾರಂಭಿಸಿ ಸ್ಕಂದನು ತನ್ನ ಗುರುವಿಗೆ ನಮಸ್ಕರಿಸಿ, ತತ್ ಎಂಬ ಪದದ ಅರ್ಥವನ್ನು ವಿವರಿಸಿರುವನು.
ತತ್ತ್ವವನ್ನು ಉಪದೇಮಾಡುವಾಗ, ತತ್ತ್ವಗಳಂತೆ ತೋರುತ್ತಿರುವ ಇತರ ಮತಗಳ ಸಿದ್ಧಾಂತಗಳನ್ನು ನಿರಾಕರಿಸುವ ಯುಕ್ತಿಗಳು ಅಲ್ಲಲ್ಲಿ ಉಕ್ತವಾಗಿರುತ್ತವೆ.
ಗುರುವಿನಿಂದ ಉಪದಿಷ್ಟವಾದ ತತ್ತ್ವವನ್ನು ಶಿಷ್ಯನು ತನ್ನ ಬುದ್ಧಿಯಿಂದ ದೃಢವಾಗಿ ಗ್ರಹಿಸುವಂತೆ ಅಭ್ಯಾಸಮಾಡಲು ಕ್ರಮವು ನಿರೂಪಿಸಲ್ಪಟ್ಟಿರುವುದು ಮತ್ತು ಶ್ರುತಿವಾಕ್ಯಗಳಿಗೆ ಅರ್ಥವನ್ನು ವಿವರಿಸಿ ಶಿವನಿಗೆ ಸರ್ವೋತ್ತಮತ್ವವನ್ನು ನಿರೂಪಿಸಿರುವುದು.
ಶಿವನ ಸರ್ವಾತ್ಮಭಾವವನ್ನು ನಿರೂಪಿಸಿರುವ ಕ್ರಮವಿವರಣೆಯು.
ರುದ್ರರು ಅನೇಕರೆಂಬ ಸಿದ್ಧಾಂತವನ್ನು ನಿರಾಸಮಾಡಿರುವುದು. ರುದ್ರನು ಒಬ್ಬನೇ ಆಗಿರುವನು ಎಂದು ಸಿದ್ಧಾಂತಮಾಡಿ, ರುದ್ರನಿಗೆ ಸರ್ವಾತ್ಮಭಾವವನ್ನು ವಿವರಿಸಿರುವುದು.
ಮಹಾದೇವ ಶಬ್ದದ ಅರ್ಥವನ್ನು ವಿವರಿಸಿರುವುದು. ರುದ್ರ, ಮಹಾದೇವ ಎಂಬ ಶ್ಬಗಳಿಂದ ಶಿವನೇ ಪ್ರತಿಪಾದ್ಯನಾಗಿರುವನೆಂದು ವಿವರಿಸಿರುವುದು ಇತರ ಎಲ್ಲಾ ದೇವತೆಗಳಿಗಿಂತ ಶಿವನು ಅಧಿಕನೆಂದು ಶಿವಧಿಕ್ಯವನ್ನು ನಿರೂಪಿಸಿರುವುದು.
ಮಾಯಾನಿರೂಪಣಾಧ್ಯಾಯ (೪)
ಮಹಾದೇವನು ಒಬ್ಬನೇ ಆಗಿರುವನು. ಇವನು ಸರ್ವಾತ್ಮಭಾವದಿಂದ ಇರುವನು ಎಂಬ ವಿಷಯದಲ್ಲಿ ಸಂದೇಹವು ಉಂಟಗಿರುವ ಕಾರಣ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಪ್ರಶ್ನಸಮಾಧಾನಗಳು ಉಕ್ತವಾಘಿರುತ್ತವೆ.
ಗುಣಗಳ ಸಂಬಂಧವಿರುವಾಗ ಗುಣಗಳು ಬೇರೆಯಾಗಿರುತ್ತವೆಯೆ? ಎಂದು ಪ್ರಶ್ನೆಯೂ ಮತ್ತು ಅದಕ್ಕೆ ಸಮಾಧಾನವೂ ಉಕ್ತವಾಗಿರುತ್ತದೆ. ಅವಿದ್ಯಾ, ಮಾಯಾ, ಎಂಬ ಹೆಸರಿನಿಂದ ಶಕ್ತಿಯಲ್ಲಿ ಎರಡು ವಿಧಗಳನ್ನು ಹೇಳಿ, ಶಕ್ತಿಯ ಗುಣಗಳ ಸಂಬಂಧದಿಂದ ಶಿವನಸ್ವರೂಪದಲ್ಲಿ ಅನೇಕ ವಿಧವು ಉಂಟಗಿರುವ ಕ್ರಮವು ನಿರೂಪಿತವಾಗಿರುವುದು.
ಕಾಲತತ್ತ್ವದನಿರೂಪಣೆಯು ಮತ್ತು ಕಾಲ, ದೇಶ ವಸ್ತುಗಳೆಂಬ ಉಪಾಧಿಯಿಂದ ವಿದ್ಯಾ ಮಾಯಾ ಎಂಬ ಭೇದವು ಉಂಟಾಗಿರುವುದು ಎಂದು ನಿರೂಪಿಸಿರುವುದು. ಮಾಯೆಯ, ಮತ್ತು ಅವಿದ್ಯೆಯ ಸ್ವರೂಪವನ್ನೂ, ಕಾರ್ಯಗಳನ್ನೂ ವಿವರವಾಗಿ ತಿಳಿಸಿರುವುದು. ತ್ರಿಗುಣಾತ್ಮಿಕೆಯಾಗಿರುವ ಮಾಯೆಯ ಮಹಿಮೆಯಿಂದ ಬ್ರಹ್ಮವಿಷ್ಣುರುದ್ರರು ಸಮಸ್ತವಾದ ಚರಾಚರಾತ್ಮಕವಾದ ಪ್ರಪಂಚದ ಸೃಷ್ಟಿಸ್ಥಿತಿಲಯ ರೂಪವಾದ ಕಾರ್ಯಗಳನ್ನು ನಿರ್ವಹಿಸುವ ಕ್ರಮವು ನಿರೂಪಿತವಾಗಿರುವುದು ಮತ್ತು “ತತ್ ಸೃಷ್ಟ್ವಾತದೇವಾನು ಪ್ರಾವಿಶತ್” ಎಂಬ ಶ್ರುತಿಯ ಅರ್ಥವೂ ಕೂಡ ವಿವರಿಸಿರುವುದು.
ಜಗಚ್ಚೈತನ್ಯನಿರೂಪಣಾಧ್ಯಾಯ (೫)
ದೃಕ್, ದೃಶ್ಯ ಎಂಬುದಾಗಿ ಎರಡು ಭೇದಗಳನ್ನು ನಿರೂಪಿಸಿರುವುದು. ಅವುಗಳಲ್ಲಿ ದ್ರಷ್ಟೃವಿನಸ್ವರೂಪವನ್ನು ವಿವರಿಸಿ (ಪಂಚವಿಂಶತಿ) ಇಪ್ಪತ್ತೈದು ತತ್ತ್ವಗಳನ್ನು ನಿರ್ದೇಶ ಮಾಡಿರುವುದು. ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ವಿವರಿಸಿ, ಆ ಶರೀರಗಳಿಗೆ ಅಭಿಮಾನಿಗಳಾದ ವಿಶ್ವತೈಜಸ ಪ್ರಾಜ್ಞರ ಸ್ವರೂಪವನ್ನು ವಿಮರ್ಶೆಮಾಡಿ ತಿಳಿಸಿರುವುದು. ಇದರಂತೆಯೇ ವಿರಾಟ್, ಹಿರಣ್ಯಗರ್ಭ, ಕೂಟಸ್ಥ ಇವರುಗಳ ಸ್ವರೂಪವನ್ನು ನಿರ್ದೇಶ ಮಾಡಿ, ಅವರವರ ಉಪಾಧಿಗಳನ್ನು ವಿವರಿಸಿರುವುದು
ಪಂಚಕೋಶಗಳನ್ನು ವಿವೇಚನೆ ಮಾಡಿ, ವಾಸನಾ ಪದಾರ್ಥವನ್ನು ವಿವರಿಸಿರುವುದು. ಪಂಚಕೋಶಗಳ ವಿವೇಕದಿಂದ, ವಾಸನಾಕ್ಷಯವನ್ನು ಹೊಂದಿದವನಿಗೆ ಪರಿಶುದ್ಧವಾದ ಮನಸ್ಸಿನ ಸ್ಥಿತಿಯು ಉಂಟಾಗುವ ಕಾರಣ ಶಿವತ್ವಪ್ರಾಪ್ತಿಯು ಉಂಟಾಗುವುದೆಂದು ಉಪದೇಶವು ಉಕ್ತವಾಗಿರುತ್ತದೆ.
ದುರ್ಗತರಓಪಾಯನಿರೂಪಣಾಧ್ಯಾಯ (೬)
ಜೀವನ್ಮುಕ್ತಿನಿರೂಪಣಾಧ್ಯಾಯ (೭)
ವಿದೇಹಮುಕ್ತಿ ನಿರೂಪಣಾಧ್ಯಾಯ (೮)
ಮಹಾವಾಕ್ಯಾರ್ಥನಿರೂಪಣಾಧ್ಯಾಯ (೯)
ಮಹಾವಾಕ್ಯಗಳ ಅರ್ಥವಿಚಾರವು ಅವಶ್ಯಕವಾಗಿ ತಿಳಿಯಬೇಕಾಗಿರುವ ಕಾರಣ ಈ ವಾಕ್ಯಗಳಿಗೆ ಮಹಾ ವಾಕ್ಯಗಳೆಂದು ಹೆಸರು ಉಂಟಗಲು ಕಾರಣವನ್ನು ನಿರ್ದೆಶ ಮಾಡಿರುವುದು. ಈ ವಾಕ್ಯಗಳಿಂದ ಪ್ರತಿಪಾದ್ಯವಾದ ಅರ್ಥದ ಮಹತ್ತ್ವವು ಉಂಟಾಗಿರುವ ಕ್ರಮವು ಉಕ್ತವಾಗಿರುವುದು. ಈ ವಾಕ್ಯಗಳ ಅರ್ಥವನ್ನು ಕೇಳಿ ತಿಳಿಯಲು ತಕ್ಕ ಅರ್ಹತೆಯುಳ್ಳವರು, ಅರ್ಥತೆ ಇಲ್ಲದವರು ಎಂದು ವಿಮರ್ಶೆಯಿಲ್ಲದೆ ಈ ವಾಕ್ಯಗಳ ಅರ್ಥವನ್ನು ಉಪದೇಶಮಾಡಿದ್ದರಿಂದ ಉಂಟಾಗುವ ಫಲ ತಾರತಮ್ಯನಿಶ್ಚಯವು ಹೇಳಲ್ಪಟ್ಟಿರುತ್ತದೆ. ನಾಲ್ಕು ವೇದಗಳಲ್ಲಿಯೂ ಇರುವ ಇತರ ವಾಕ್ಯಗಳನ್ನು ಬಿಟ್ಟು ಈ ವಾಕ್ಯಗಳನ್ನು ಮಾತ್ರವೇ ಮಹಾವಾಕ್ಯವೆಂದು ಪರಿಗಣನೆ ಮಾಡಿ, ಇವುಗಳಲ್ಲಿ ಉಪದೇಶವಾಕ್ಯ, ಅನುಭವ ವಾಕ್ಯ, ಅಭ್ಯಾಸವಾಕ್ಯವೆಂದು ವಿಭಾಗ ಕ್ರಮವನ್ನು ತಿಳಿಸಿರುವುದು.
ಈ ವಾಕ್ಯಗಳಿಂದ ಅಖಂಡಾರ್ಥವನ್ನು ಹೇಳುವ ಕ್ರಮ ವಿವರಣೆಯೂ ಮತ್ತು ಪುರಾಣಸಂಹಿತೋಪದೇಶ ಕ್ರಮದಿಂದ ಈ ವಾಕ್ಯಗಳಲ್ಲಿ ಉಪದೇಶವಾಕ್ಯದ ಅರ್ಥವಿವರಣೆಯೂ, ಮತ್ತು ಫಲವೂ ನಿರ್ದಿಷ್ಟವಾಗಿರುತ್ತದೆ.
ಎರಡನೆಯ ಮಹಾವಾಕ್ಯದ ಅರ್ಥವಿವರಣೆಯು
ಮೂರನೆಯ ಮಹಾವಾಕ್ಯದ ಅರ್ಥವಿವರಣೆಯು
ಸಚ್ಛಿಷ್ಯಸದ್ಗುರು ಇವರುಗಳ ಲಕ್ಷಣ ನಿರೂಪಣವೂ ಮತ್ತು ಶ್ರವಣ ಮನನ ನಿದಿಧ್ಯಾಸನ ಎಂಬ ಪದಗಳ ಅರ್ಥನಿರ್ಣಯವೂ ಹೇಳಲ್ಪಟ್ಟಿರುವುದು.
ನಾಲ್ಕನೆಯ ಮಹಾವಾಕ್ಯದ ಅರ್ಥವಿವರಣೆಯು
ಈ ನಾಲ್ಕು ಮಹಾವಾಕ್ಯಗಳಿಂದಲೂ ಅಖಂಏಕರಸರೂಪವಾದ ಅರ್ಥವು ಉಪಸ್ಥಿತವಾಗುವ ಪ್ರಕಾರವನ್ನು ತಿಳಿದನಂತರ, ಆ ಅರ್ಥವನ್ನು ಅನುಸಂಧಾನ ಮಾಡುವ ಕ್ರಮವೂ, ಮತ್ತು ಅನುಸಂಧಾನದಿಂದ ಉಂಟಾಗುವ ಫಲವೂ ಉಕ್ತವಾಗಿರುತ್ತದೆ.
ಶಿವನಂದನಿರೂಪಣಾಧ್ಯಾಯ (೧೦)