ನರಸಿಂಹ ಪುರಾಣಮ್ – ಸಂಪುಟ ೩
ಆರಂಭಿಕ ಪುಟ
ಅನುವಾದಕರು: ಶ್ರೀ ಪದ್ಮನಾಭಾಚಾರ್ಯರು ನಾ. ವಾ.
ವಿಷಯಾನುಕ್ರಮಣಿಕೆ
೪. ಹರ್ಯವತಾರಾದಿನಿರೂಪಣಮ್. (ಮುಂದುವರಿದುದು): ಶ್ರಿರಾಮಾವತಾರ ಚರಿತ್ರೆಯಲ್ಲಿ ಕಿಷ್ಕಿಂಧಾಕಾಂಡ ಕಥಾನಿರೂಪಣೆಯು
ವಾಲಿಯಲ್ಲಿ ಹಗೆಗೊಂಡಿದ್ದ, ಕಿಷ್ಕಿಂಧೆಯಿಂದ ದೂರದ ದುರ್ಗದಲ್ಲಿದ್ದ ಸುಗ್ರೀವನು ತಾಪಸವೇಷದ ರಾಮಲಕ್ಷ್ಮಣರನ್ನು ನೋಡಿ, ವಾಲಿಯು ತನ್ನ ಕೊಲೆಗೆ ಕಳುಹಿಸಿದ ಬೇಹಿನವರೆಂದು ಭಾವಿಸಿ, ಹನೂಮಂತನನ್ನು ಅವರಾರೆಂದು ತಿಳಿಯಲು ಮರೆರೂಪಿನಿಂದ ಕಳುಹಿಸಿದುದು; ಹನೂಮಂತನು ಸಂನ್ಯಾಸಿ ವೇಷದಿಂದ ಅವರ ಬಳಿಗೆ ಹೋಗಿ, ಅವರ ವೃತ್ತಾಂತವನ್ನು ತಿಳಿದು, ಸುಗ್ರೀವನೊಡನೆ ಪರಸ್ಪರ ಪ್ರತಿಜ್ಞಾ ಪೂರ್ವಕವಾಗಿ ಸಖ್ಯವನ್ನುಂಟುಮಾಡಿದುದು; ಶ್ರೀ ರಾಮನು ವಾಲಿವಧ ಸಾಮರ್ಥ್ಯವನ್ನು ತೋರಿದುದು; ವಾಲಿ ಸುಗ್ರೀವ ಯುದ್ಧ; ವಾಲಿಯ ಸಂಹಾರ; ಸುಗ್ರೀವನಿಗೆ ಕಿಷ್ಕಿಂಧಾರಾಜ್ಯ ಪ್ರಧಾನ; ಶರತ್ಕಾಲವು ಬರಲು ಸೀತಾನ್ವೇಷಣೆಗಾಗಿ ಕಪಿಗಳನ್ನು ಚತುರ್ದಿಕ್ಕುಗಳಿಗೆ ಕಳುಹಿಸಿದುದು; ದಕಿಣಕ್ಕೆ ಹೋದವರು ಹೊರತು ಉಳಿದವರು ಸೀತಾದೇವಿಯನ್ನು ಕಾಣದೆ ಹಿಂತಿರುಗಿ ಬಂದುದು; ಶ್ರಾಂತರಾದ ಹನೂಮದಾದಿಗಳಿಗೆ ಸುಪ್ರಭೆಯ ಸತ್ಕಾರ ಮತ್ತು ಸಲಹೆ; ಮಹೇಂದ್ರಪರ್ವತದಲ್ಲಿ ಸಂಪಾತಿಯ ದರ್ಶನ; ಅವನು ಸೀತಾದೇವಿಯು ಲಂಕೆಯಲ್ಲಿರುವುದನ್ನು ತನ್ನ ದೂರ ದೃಷ್ಟಿಯಿಂದ ತಿಳಿದು ಹೇಳಿದುದು; ಅವನಿಗೆ ಜಟಯು ಮರಣವೃತ್ತಾಂತವನ್ನು ಕಪಿಗಳು ಹೇಳಲು, ಅವನೂ ಸ್ನಾನಾದಿಗಳನ್ನು ಮಾಡಿ, ತರ್ಪಣವಿತ್ತು, ದೇಹವನ್ನು ಬಿಟ್ಟುದು; ಜಾಂಬವಂತನ ಮಾತಿನಿಂದ ಲಂಕೆಗೆ ಸಮುದ್ರವನ್ನು ದಾಟಿಹೋಗಲು ಕಪಿಗಳು ಹನೂಮಂತನನ್ನು ಬೇಡಲು, ಅವನು ಅದಕ್ಕೆ ಸಮ್ಮತಿಸಿ, ಸೀತಾನ್ವೇಷಣ ಮಾಡಿಕೊಂಡು ಬರುವುದಾಗಿ ಹೇಳಿ, ಮನಸ್ಸು ಮಾಡಿದುದು.
ಶ್ರೀರಾಮಾವತಾರ ಚರಿತೆಯಲ್ಲಿ ಸುಂದರಕಾಂಡಕಥಾ ನಿರೂಪಣೆಯು
ಆಂಜನೇಯನು ಶ್ರೀರಾಮ ಲಕ್ಷ್ಮಣ ಸುಗ್ರೀವರಿಗೆ ಮನದಲ್ಲಿ ವಂಸಿ, ಕಪಿಗಳಿಂದ ಸನ್ಮಾನಿತನಾಗಿ, ಸೀತಾನ್ವೇಷಣಕ್ಕಾಗಿ ಲಂಕೆಗೆ ಆಕಾಶ ಮಾರ್ಗದಿಂದ ಹೋಗಲು ನಿಶ್ಚಯಿಸಿ, ಮಹೇಂದ್ರಪರ್ವತದ ಶಿಖರದಿಂದ ಹಾರಿದುದು; ಮಾರ್ಗ ಮಧ್ಯದಲ್ಲಿ ಮೈನಾಕನ ಉಪಾಚಾರ; ತರುವಾಯ ಆಂಜನೇಯನು ಹಾದಿಯಲ್ಲಿ ತನ್ನನ್ನು ತಿನ್ನಲು ಬಂದ ಸಿಂಹಿಕೆ ಸುರಸೆಯರನ್ನು ಜಯಿಸಿ, ಸಮುದ್ರವನ್ನು ದಾಟಿ, ತ್ರಿಕೂಟಪರ್ವತದ ಶಿಖರದಲ್ಲಿಳಿದುದು; ರಾತ್ರಿಯವರೆಗೂ ಅಲ್ಲಿದ್ದು, ಲಂಕಾದೇವತೆಯನ್ನು ಜಯಿಸಿ, ಅದ್ವಾರದಿಂದ ಪುರ ಪ್ರವೇಶ ಮಾಡಿ, ರಾವಣಾಂತಃಪುರದಲ್ಲೆಲ್ಲಾ ದೇವಿಯನ್ನು ಹುಡಿಕಿ ಕಾಣದೆ, ಸಂಪಾತಿಯ ನುಡಿಯನ್ನು ನೆನೆದು, ಅಶೋಕವನಕ್ಕೆ ಹೋಗಿ, ಅಲ್ಲಿ ಶಿಂಶುಪಾ ವೃಕ್ಷದಡಿಯಲ್ಲಿ ದೇವಿಯನ್ನು ನೋಡಿ, ಕಿರಿಯೊಡಲಿಂದ ಆ ಮರದ ಮೇಲೆ ಕುಳಿತುಕೊಂಡುದು; ರಾವಣನು ಅಲ್ಲಿಗೆ ಸ್ತ್ರೀಯರೊಡನೆ ಬಂದು, ದೇವಿಯಿಂದ ತಿರಸ್ಕೃತನಾಗಿ ಮರಳಿ ಅರಮನೆಗೆ ಹೋದುದು; ರಕ್ಕಸಿಯರ ಬಾಧೆ; ತ್ರಿಜಟಾ ಸ್ವಪ್ನ; ರಕ್ಕಸಿಯರು ರಾವಣನಿಗೆ ಆ ವೃತ್ತಾಂತವನ್ನೆಲ್ಲಾ ಹೇಳಲು ಹೋದುದು; ಹೋದುದು; ಆಂಜನೇಯನು ಅಮ್ಮನವರಿಗೆ ಕಾಣಿಸಿಕೊಂಡು ವಂದಿಸಿ, ಶ್ರೀ ರಾಮವೃತ್ತಾಂತವನ್ನರುಹಿ, ಮುದ್ರೆಯುಂಗರನ್ನಿತ್ತು, ದೇವಿಯಿಂದ ಅಭಿಜ್ಞಾನಾರ್ಥವಾಗಿ ಚೂಡಾಮಣಿಯನ್ನು ತೆಗೆದುಕೊಂಡು, ಕಾಕಾಸುರ ವೃತ್ತಾಂತವನ್ನು ಕೇಳಿ, ವಂದಿಸಿ, ಬೀಳ್ಕೊಂಡುದು; ಅಶೋಕವನ ನಾಶ; ಆಂಜನೇಯನು ಅನೇಕ ರಕ್ಕಸರನ್ನು ಸಂಹರಿಸಿ, ರಾವಣನನ್ನು ನೋಡಿ, ಅವನೊಡನೆ ಸಲ್ಲಾಪ ಮಾಡಿ, ಶ್ರೀರಾಮ ಲಕ್ಷಣ ಸುಗ್ರೀವಾದಿಗಳ ಪೌರುಷವನ್ನು ಕೊಂಡಾಡಿ, ವಾಲಾಗ್ನಿಯಿಂದ ಲಂಕೆಯನ್ನು ಸುಟ್ಟು, ಮರಳಿ ದೇವಿಯ ದರ್ಶನವನ್ನು ಮಾಡಿ, ಬೀಳ್ಕೊಂಡು, ಸಮುದ್ರವನ್ನು ದಾಟಿ, ಮಹೇಂದ್ರ ಪರ್ವತಕ್ಕೆ ಬಂದು ಕಪಿಗಳಿಗೆ ಆ ವೃತ್ತಾಂತವನ್ನು ಹೇಳಿ, ಸಂತೋಷಗೊಳಿಸಿದುದು; ಮಧುವನದಲ್ಲಿ ಕಪಿಗಳ ಮಧುಪಾನ; ಅನಂತರ ಅಲ್ಲಿಂದ ಶ್ರೀರಾಮನ ಸಮೀಪಕ್ಕೆ ಬಂದು, ನಮಸ್ಕರಿಸಿ, ಅಭಿಜ್ಞಾನವನ್ನು ಕೊಟ್ಟು, ದೇವಿಯ ಸಂದೇಶವಚನವನ್ನು ಹೇಳಲು, ಶ್ರೀರಾಮನೂ ಮರ್ತ್ಯರಂತೆ ದುಃಖಪ್ರದಶ್ರನ ಮಾಡಿ, ಆಂಜನೇಯನನ್ನು ಅಭಿನಂದಿಸಿ, ಅಪ್ಪಿದುದು. ಮುಂದಣ ಕಾರ್ಯೋದ್ಯೋಗ.
ಶ್ರೀರಾಮಾವತಾರ ಚರಿತೆಯಲ್ಲಿ ಯುದ್ಧಕಾಂಡಕಥಾ ನಿರೂಪಣೆಯು
ಶ್ರೀರಾಮ ಕೃಷ್ಣವತಾರಗಳ ಚರಿತೆ
ಭೂದೇವಿಯು ಚತುರ್ಮುಖನಲ್ಲಿ ಮೊರೆಯಿಟ್ಟುದು; ಚತುರ್ಮುಖನು ಭೂದೇವಿ ಮತ್ತು ದೇವತೆಗಳ ತಂಡ — ಇವುಗಳೊಡನೆ ಕ್ಷೀರಸಮುದ್ರದ ಉತ್ತರದ ತಡಿಗೆ ಹೋಗಿ, ಶ್ರೀಮಹಾವಿಷ್ಣುವನ್ನು ಸ್ತುತಿಸಲು, ಶ್ರೀವಿಷ್ಣುವು ಪ್ರತ್ಯಕ್ಷನಾಗಿ, ತಾನು ತನ್ನ ಶುಕ್ಲ ಕೃಷ್ಣಕೇಶಗಳೆಂಬ ಸ್ವರೂಪಾಂಶಗಳನ್ನು ಕಳುಹಿಸಿ, ವಸುದೇವ ರೋಹಿಣೀ ದೇವಕಿಯರಲ್ಲಿ ಅವತರಿಸಿ, ಭೂಭಾರ ಪರಿಹರಿಸುವುದಾಗಿ ಆಶ್ವಸನವಿತ್ತು ಅವರನ್ನು ಹಿಂದಕ್ಕೆ ಕಳುಹಿಸಿದುದು; ಶ್ರೀಬಲರಾಮ ಕೃಷ್ಣರ ಅವತಾರ; ಗೋಕುಲದಲ್ಲಿ ಬಾಲಕೇಳಿ; ವೂತನಾಕಂಸಾದಿ ದುಷ್ಟವಧೆ; ಗೋವರ್ಧನೋದ್ಧಾರ; ಬಲನು, ರೇವತಿಯನ್ನೂ, ಕೃಷ್ಣನು ರುಕ್ಮಿಣಿಯನ್ನೂ ವಿವಾಹ ಮಾಡಿಕೊಂಡು ಸಮುದ್ರದ ನಡುವೆ ದ್ವಾರಕೆಯನ್ನು ನಿರ್ಮಿಸಿ, ಸುಖದಿಂದಿದ್ದುದು; ಪ್ರೌಢರಾದ ರಾಮಕೃಷ್ಣರು ನರಕ ಶಿಶುಪಾಲ ಹಯಗ್ರೀವರನ್ನು ಸಂಹರಿಸಿದುದು; ಶ್ರೀಕೃಷ್ಣನು ಪಾಂಡವರಿಗೆ ಭಾರತಯುದ್ಧದಲ್ಲಿ ಸಹಾಯ ಮಾಡುವ ನೆಪದಿಂದ ಭೂಭಾರ ಭೂತರಾದ ದುಷ್ಟಕ್ಷತ್ರಿಯರನ್ನ ನಾಶಮಾಡಿದುದು; ಬಲರಾಮನು ದೇವವಿರೋಧಿ ದ್ವಿವಿದನೆಂಬ ಕೋಡಗನನ್ನು ಸಂಹರಿಸಿ, ಶ್ರೀಕೃಷ್ಣ ಕಾರ್ಯಕ್ಕೆ ಸಹಾಯಕನಾಗಿ ತೀರ್ಥಯಾತ್ರೆಯನ್ನೆಸಗಿದುದು; ಈ ಶುಕ್ಲ ಕೃಷ್ಣಕೇಶಗಳೆಂಬ ಸ್ವರೂಪಾಂಶಗಳು ಇಂತು ಭೂಭಾರವನ್ನು ಇಳುಹಿ, ಮರಳಿ ಶ್ರೀಮಹಾವಿಷ್ಣುವನ್ನು ಸೇರಿದುವು; ಫಲಶ್ರುತಿ.
ಶ್ರೀ ಕಲ್ಕ್ಯವತಾರ ಚರಿತೆಯು
ಶುಕ್ರವರ ಪ್ರಸಾದ
ಶ್ರೀನರಸಿಂಹಮೂರ್ತಿಯ ಪ್ರತಿಷ್ಠವಿಧಾನ ನಿರೂಪಣ
೫. ವರ್ಣಾಶ್ರಮ ಧರ್ಮಾದಿ ನಿರೂಪಣ: ಬ್ರಾಹ್ಮಣ ಧರ್ಮಕಥನ
ಕ್ಷತ್ರಿಯಾದಿ ಧರ್ಮಕಥನವು
ವಾನಪ್ರಸ್ಥಾಶ್ರಮ ಲಕ್ಷಣ ಕಥನವು
ಯತ್ಯಾಶ್ರಮ ಧರ್ಮಕಥನವು
ಯೋಗಶಾಸ್ತ್ರಸಾರ ನಿರೂಪಣವು
ಶ್ರೀ ಮಹಾವಿಷ್ಣುವಿನ ಆರ್ಚಾವಿಧಿ
೬.ಮಂತ್ರತೀರ್ಥಮಹಿಮಾದಿ ನಿರೂಪಣ: ಸಹಸ್ರಾನೀಕ ಚರಿತ್ರೆಯಲ್ಲಿ ಅಷ್ಟಕ್ಷರಮಂತ್ರ ಮಹಿಮಾ ಕಥನ
ಪುಂಡರೀಕ ನಾರದ ಸಂವಾದವು
ವೈಷ್ಣವಕ್ಷೇತ್ರ ನಿರೂಪಣೆಯು
ತೀರ್ಥಪ್ರಶಂಸೆಯು
ಮಾನಸ ತೀರ್ಥ ವ್ರತವು
ಸರ್ವದುಃಖೋತಪಮನವೆಂಬ ಉಪಸಂಹಾರವು