ನರಸಿಂಹ ಪುರಾಣಮ್ – ಸಂಪುಟ ೨
ಆರಂಭಿಕ ಪುಟ
ಅನುವಾದಕರು: ಶ್ರೀ ಪದ್ಮನಾಭಾಚಾರ್ಯರು ನಾ. ವಾ.
ವಿಷಯಾನುಕ್ರಮಣಿಕೆ
೪. ಹರ್ಯವತಾರಾದಿ ನಿರೂಪಣಮ್: ಸಹಸ್ರಾನೀಕ ಚರಿತೆಯಲ್ಲಿ ಶ್ರೀ ನರಸಿಂಹ ಪ್ರತಿಷ್ಠ ವಿಧಾನವು
ಸಹಸ್ರಾನೀಕ ಚರಿತೆಯಲ್ಲಿ ಮಾರ್ಕಂಡೇಯೋಪದಿಷ್ಟವಾದ ಸಂಮಾರ್ಜನೋಪಫಲ
ಸಹಸ್ರಾನೀಕ ಚರಿತದಲ್ಲಿ ಶ್ರೀ ವಿಷ್ಣುವಿನ ಪೂಜಾ ವಿಧಿಯು
ಲಕ್ಷಹೋಮವಿಧಿ
ಶ್ರೀ ಹರಿಯ ಪ್ರಾದುರ್ಭಾವಾನುಕ್ರಮಣವು
ಮತ್ಸ್ಯಾವತಾರವು
ಕೂರ್ಮಾವತಾರವು
ವರಾಹಾವತಾರವು
ನರಸಿಂಹಾವತಾರ ಚರಿತೆಯು; ಶ್ರೀವಿಷ್ಣುವಿನ ನಾಮಸ್ತೋತ್ರವು
ನರಸಿಂಹಾವತಾರ ಚರಿತ್ರೆಯು (ಮುಂದುವರಿದುದು)
ಶ್ರೀನರಸಿಂಹಾವತಾರಚರಿತ್ರೆಯು (ಮುಂದುವರಿದುದು)
ಶ್ರೀನರಸಿಂಹಾವತಾರಚರಿತ್ರೆಯು (ಮುಂದುವರಿದುದು)
ಪ್ರಹ್ಲಾದನು ಸದಾ ಹರಿದ್ಯಾನಾಸಕ್ತನಾಗಿ ಬಾಹ್ಯ ವ್ಯಾಪಾರಗಳಲ್ಲಿ ಜಡನಂತಿದ್ದು ಹರ್ಷಿಸುತ್ತಿದುದು. ಮಂತ್ರಿಕುಮಾರರು ಇದನ್ನು ಕಂಡು, ಅವನ ನಡತೆಯ ತತ್ತ್ವವನ್ನು ಕೇಳಿದುದು ಅವನೂ ಅದೆಲ್ಲವನ್ನೂ ವಿವರಿಸಿ ಹೇಳಿದುದು — ಹಿರಣ್ಯಕಶಿಪುವು ರಾತ್ರಿ ನಗರ ಸಂಚಾರದಲ್ಲಿ ಪುರದಲ್ಲೆಲ್ಲಾ ಶ್ರೀರಾಮಕೀರ್ತನವನ್ನೇ ಕೇಳಿದುದು — ಅದು ತನ್ನ ಮಗನ ಕಾರ್ಯವೆಂದರಿತು, ತಾನೇ ಭಟರನ್ನು ಕರೆದು, ದೂಢವಾಗಿ ಅವನನ್ನು ನಾಗಪಾಶಗಳಿಂದ ಬಂಧಿಸಿ, ಸಮುದ್ರದಲ್ಲಿ ಹಾಕಿಸಿದುದು. ಸಮುದ್ರವು ಉಲ್ಲೊಲಕಲ್ಲೊಲವಾಗಿ, ಆ ಬಾಲಕನಿಗೆ ಯಾವ ಬಾಧೆಯೂ ಆಗದಂತೆ ಸಮುದ್ರರಾಜನು ಅವನನ್ನು ತನ್ನ ತೆರೆಗೈಗಳಿಂದ ತಡಿಗೆ ತಂದಿರಿಸಿದುದು — ಅಲ್ಲಿ ಭಗವದಾಜ್ಞಾಪ್ರಕಾರ ಗರುಡನು ಬಂದು, ಆ ಸರ್ಪಬಂಧನವನ್ನು ಕತ್ತರಿಸಿ ಹೋದುದು — ಸಮುದ್ರರಾಜನು ಪ್ರಹ್ಲಾದನನ್ನು ಸ್ತುತಿಸಿ ರನ್ನವನ್ನರ್ಪಿಸಿದುದು — ಪ್ರಹ್ಲಾದನು ಎಚ್ಚತ್ತವನು ಸಮುದ್ರನನ್ನಾಲಿಂಗಿಸಿ, ಅದನ್ನು ಸ್ವೀಕರಿಸಿ, ಅವನನ್ನು ಸದಾ ಶ್ರೀಹರಿ ದರ್ಶನವನ್ನು ಮಾಡುತ್ತಿರುವವನನ್ನಾಗಿ ಕೊಂಡಾಡಿ, ತಾನು ಶ್ರೀಹರಿಯನ್ನು ಕಾಣುವ ಉಪಾಯವನ್ನು ಬೇಡುವುದು — ಅವನು ಶ್ರೀಹರಿಯನ್ನು ಧ್ಯಾನಮಾಡುವಂತೆ ಹೇಳಿ, ಅದೃಶ್ಯನಾದುದು. ಪ್ರಹ್ಲಾದನ ಶ್ರೀಹರಿಧ್ಯಾನ, ಭಗವಂತನ ಸಾಕ್ಷಾತ್ಕಾರ, ಅನುಗ್ರಹ. ಶ್ರೀಹರಿಯು ನರಹರಿ ರೂಪದಿಂದ ಮೂರುದಿನಗಳಲಿ ದರ್ಶನ ಕೊಡುವುದಾಗಿ ಹೇಳಿ, ಅಂತರ್ಧಾನವಾದುದು — ಬೆಳಿಗ್ಗೆ ಪ್ರಹ್ಲಾದನು ನಗರಕ್ಕೆ ಹಿಂದಿರುಗಿ ಬಂದು, ಗುರು ಗೃಹದಲ್ಲಿ ಬಾಲಕರಿಗೆ ಶ್ರೀಹರಿಯೇ ಸರ್ವಥಾ ಸೇವ್ಯನೆಂದುಪದೇಶಿಸಿಕೊಂಡು ಶ್ರೀಹರಿಧ್ಯಾನದಲ್ಲಿರುವುದು.
ಶ್ರೀನರಸಿಂಹಾವತಾರಚರಿತ್ರೆಯು (ಮುಂದುವರಿದುದು)
ಶ್ರೀ ವಾಮನಾವತಾರವು
ಶ್ರೀಪರಶುರಾಮಾವತಾರವು
ಶ್ರೀ ರಾಮಚರಿತೆಯಲ್ಲಿ ಬಾಲಕಾಣ್ದ ಕಥೆಯು
ಪುಲಸ್ತ್ಯಮುನಿಯಿಂದ ರಾವಣನ ಜನ್ಮ; ಅವನು ವರದ ದರ್ಪಿತನಾಗಿ ಕುಬೇರನನ್ನು ಜಯಿಸಿ ಲಂಕಾಧಿಪತಿಯಾಗಿ, ತ್ರಿಲೋಕವನ್ನು ವಶಪಡಿಸಿಕೊಂಡುದು ಅವನು ಕೊಡುತ್ತಲಿದ್ದ ಮೂರು ಲೋಕದ ಬಾಧೆ. ಚತುರ್ಮುಖನು ದೇವತೆಗಳಿಂದ ಕೂಡಿಕೊಂಡು ಕ್ಷೀರಸಾಗರಶಾಯಿಯನ್ನು ಸ್ತುತಿಸಿ, ಪ್ರಸನ್ನೀಕರಿಸಿಕೊಂಡು ರಾವಣನ ಬಾಧೆಯನ್ನು ಬಿನ್ನವಿಸುವುದು. ಭಗವಂತನು ತಾನು ಸೂರ್ಯವಂಶದಲ್ಲಿ ದಶರಥತನಯನಾಗಿ ಮೂಲಾಂಶದಿಂದಲೂ, ಆವಿಷ್ಟಾಂಶಗಳಿಂದಲೂ ಅವತರಿಸುವುದಾಗಿಯೂ, ದೇವತೆಗಳೂ ವಾನರಾದಿಯಾಗಿ ಅವತರಿಸಲಿ; ಆಗ ಈ ದುಷ್ಟರಾವಣನ ವಧೆಯಾಗುವುದೆಂದಭಯವಿತ್ತುದು. ಇತ್ತ ಭೂಲೋಕದಲ್ಲಿ ದಶರಥನು ಸಂತಾನಾರ್ಥಿಯಾಗಿ ಪುತ್ರಕಾಮೇಷ್ಟಿಯನ್ನಾಚರಿಸಿದುದು. ಅವನ ಮೂವರು ಮಡದಿಯರಲ್ಲಿ ಭಗವಂತನು ಸ್ವರೂಪಾವಿಷ್ಟಂಶಗಳಿಂದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರಾಗಿ ಅವತರಿಸಿದುದು. ಇವರ ಬಾಲ್ಯ, ವಿದ್ಯಾಭ್ಯಾಸ, ವಿಶ್ವಾಮಿತ್ರಮಖ ಸಂರಕ್ಷಣ, ಕಾಟಕಾದಿವಧ, ಅಹಲ್ಯಾಶಾಪವಿಮೋಚನ, ಮಿಥಿಲಾಪ್ರಸ್ಥಾನ, ಶಿವಧನುರ್ಭಂಗ, ಸೀತಾಕಲ್ಯಾಣ, ಲಕ್ಷ್ಮಣಾದಿಗಳ ವಿವಾಹ, ಭಾರ್ಗವರಾಮಗರ್ವಭಂಗ, ಅಯೋಧ್ಯಾನಗರಿಯಲ್ಲಿ ಸುಖದಿಂದಿದ್ದುದು.
ಶ್ರೀ ರಾಮಾವತಾರ ಚರಿತ್ರೆಯಲ್ಲಿ ಅಯೋಧ್ಯಾಕಾಂಡ ಕಥಾನಿರೂಪಣೆಯು
ಲಕ್ಷ್ಮಣ ಸಹಿತನಾದ ಶ್ರೀ ರಾಮನು ತನ್ನ ಮಡದಿ ಮಾತಾಪಿತೃಗಳೊಡನೆ ಅಯೋಧ್ಯೆಯಲ್ಲಿ ಸುಖದಿಂದಿರುವುದು. ಭರತನು ಶತ್ರುಘ್ನನೊಡನೆ ತನ್ನ ಸೋದರಮಾವನ ಮನೆಗೆ ಹೋಗಿರುವುದು. ಪಾಪ್ತವಯಸ್ಕನಾದ ರಾಮನಲ್ಲಿ ರಾಜ್ಯಭಾರವಹಿಸಲು ದಶರಥನು ಚಿಂತಿಸಿದುದು. ಪೌರಜಾನಪರರ ಅನುಮತಿ ಪಡೆದು ಯೌವರಾಜ್ಯಾಭಿಷೇಕವನ್ನು ವ್ಯವಸ್ಥಿಸಿದುದು. ನಾಳೆ ಪಟ್ಟಭಿಷೇಕವಿರುವಾಗ ಕುಬ್ಜೆಯಾದ ಮಂಥರೆ ಕೈಕೆಗೆ ದುರುಪದೇಶ ಮಾಡಿದುದು. ಕೈಕೆಯು ಪಟ್ಟಾಭಿಷೇಕಕ್ಕೆ ಭಂಗಪಡಿಸಿ ತನಗೆ ರಾಜನು ಕೊಡತಕ್ಕ ವರಗಳಲ್ಲಿ ಒಂದಕ್ಕೆ ಶ್ರೀರಾಮನು ಕಾಡಿನಲ್ಲಿ ಹನ್ನೆರಡು ವರ್ಷ ತಪಸ್ಸು ಮಾಡಿಕೊಂಡಿರುವುದು, ಮತ್ತೊಂದಕ್ಕೆ ಭರತನಿಗೆ ರಾಜ್ಯವೀವುದು ಎಂದು ಹೇಳಲು, ದಶರಥನು ಮೂರ್ಛಾಕ್ರಾಂಟನಾದುದು. ಬೆಳಗ್ಗೆ ಯಾಗಮಂಟಪದಲ್ಲಿದ್ದ ಶ್ರೀರಾಮನನ್ನು ಬರಮಾಡಿಕೊಂಡು ಕೈಕೆ ಅವನಿಗೆ ಈ ಸಂಗತಿಯನ್ನು ಹೇಳುವಳು. ರಾಮನು ವನಕ್ಕೆ ತೆರಳಲು ಸಿದ್ಧನಾಗುವನು. ಆಗ ಲಕ್ಷ್ಮಣನೂ ಸೀತೆಯೂ ಹಿಂಬಾಲಿಸುವರು. ರಾಮನ ವನಪ್ರಸ್ಥಾನ. ಪರಿಜನ ಪುರಜನರ ಪ್ರಲಾಪ. ಶ್ರೀರಾಮನು ಅವರನ್ನು ಸಮಾಧಾನಗೊಳಿಸಿ ಹೊರಟುದು. ಶೃಂಗಿಬೇರಪುರಕ್ಕೆ ಬಂದು, ಅಲ್ಲಿಗುಹನೆಂಭ ಅಂಬಿಗನ ಸಹಾಯದಿಂದ ಗಂಗೆಯನ್ನು ದಾಟಿ ಚಿತ್ರಕೂಟವನ್ನು ಸೇರಿ, ಪರ್ಣಶಾಲೆಯನ್ನು ಮಾಡಿಕೊಂಡು ವಾಸ ಮಾಡಿದುದು. ಇತ್ತ ಅಯೋಧ್ಯೆಯಲ್ಲಿ ದಶರಥನ ಮರಣ. ಭರತನನ್ನು ವಸಿಷ್ಠರು ಕರೆಯಿಸಿ, ದಶರಥನ ಔರ್ಧ್ವದೇಹಿಕ ಕರ್ಮವನ್ನು ಮಾಡಿಸಿ ರಾಜ್ಯವನ್ನು ಸ್ವೀಕರಿಸು ಎನಲು, ಅವನು ಶ್ರೀರಾಮನನ್ನು ಕರೆತರಲು ಮಾತೆಯರು, ಪರಿಜನರು, ಪುರಜನರು — ಇವರೊಡನೆ ಚಿತ್ರಕೂಟಕ್ಕೆ ಬಂದು, ಶ್ರೀರಾಮನನ್ನು ಪ್ರಾರ್ಥಿಸುವುದು. ಶ್ರೀರಾಮನು ಪಿತೃಮರಣದಿಂದ ದುಃಖಗೊಂಡು, ಮಲಾಪಹಾರಿಣಿಯಲ್ಲಿ ಮುಂದು ತರ್ಪಣಾದಿಗಳನ್ನಿತ್ತು, ಭರತನಿಗೆ ಅಯೋಧ್ಯೆಗೆ ಹಿಂದಿರುಗಿ, ಪ್ರಜೆಗಳನ್ನು ರಕ್ಷಿಸುವುದು ಕರ್ತವ್ಯವು, ತನ್ನ ಮಾತು ಅವನಿಗೆ ಪಿತೃವಾಕ್ಯಸಮವೆನಲು, ಅವನು ಶ್ರೀರಾಮಪಾದುಕೆಯನ್ನು ಬೇಡಿತಂದು, ತದಾಜ್ಞಾಕರನಾಗಿ ತಾನೂ ಜಟಾಧಾರಣ ಮಾಡಿ, ನಂದಿಗ್ರಾಮದಲ್ಲಿದ್ದು ಪ್ರಜೆಗಳನ್ನು ರಕ್ಷಿಸುವುದು.
ಶ್ರೀ ರಾಮಾವತಾರ ಚರಿತೆಯಲ್ಲಿ ಅರಣ್ಯಕಾಣ್ದ ಕಥಾ ನಿರೂಪಣೆಯು
ಭರತನು ನಂದಿಗ್ರಾಮದಲ್ಲಿ ಶ್ರೀರಾಮಪಾದುಕಾ ಪಟ್ಟಭಿಷೇಕ ಮಾಡಿ, ರಾಜ್ಯಾಧಿಪತ್ಯವನ್ನು ಮಾಡುವುದು. ಅತ್ತ ವನದಲ್ಲಿ ಶ್ರೀರಾಮ ನಿದ್ರಿಸುತ್ತಿದ್ದಾಗ ಕಾಕಾಸುರನು ಬಂದು ಸೀತೆಗೆ ಬಾಧೆಯನ್ನಿತ್ತುದು. ಶ್ರೀರಾಮನು ಕಾಕನ ಮೇಲೆ ಇಷೀಕಾಸ್ತ್ರ ಪ್ರಯೋಗಿಸಿ, ಶರಣಾಗತನಾದ ಅವನನ್ನು ಒಂದು ಕಣ್ಣು ಕುರುಡುಮಾಡಿರಕ್ಷಿಸಿದುದು. ದಂಡಕಾರಣ್ಯ ಪ್ರವೇಶ. ಅನೇಕ ಮುನಿದರ್ಶನ ವಿರಾಧವಧೆ ಶರಭಂಗ ಮುನಿ ದರ್ಶನ ಅಗಸ್ತ್ಯಾನುಗ್ರಹ ಅಕ್ಷಯತೂಣೀರ ಮತ್ತು ಖಡ್ಗ — ಇವುಗಳ ಪ್ರಾಪ್ತಿ; ಗೋದಾವರೀತೀರದ ಪಂಚವಟಿಯಲ್ಲಿ ವಾಸ; ಜಟಾಯು ದರ್ಶನಾದಿಗಳು; ಶೂರ್ಪಣಖಾಗಮನ; ಕ್ಷ್ಮಣನು ಶ್ರೀರಾಮಾಜ್ಞಾ ಪ್ರಕಾರ ಅವಳ ಕರ್ಣನಾಸಿಕೆಗಳನ್ನು ಛೇದಿಸಿದುದು. ಖರಾದಿಗಳೊಡನೆ ಯುದ್ಧ; ಅವರ ಸಂಹಾರ, ಶೂರ್ಪಣಖೆ ತನ್ನ ಬನ್ನವನ್ನು ಅಣ್ಣನಾದ ರಾವಣನಿಗೆ ಹೇಳಿಕೊಂಡುದು; ಅವನು ಮಾರೀಚನೊಡನೆ ಬಂದುದು. ಸುವರ್ಣಮೃಗದ ಆಸೆಯಿಂದ ಶ್ರೀರಾಮನು ದೂರವಿರುವಾಗ, ಮಾರೀಚನು ರಾಮಬಾಣ ಹತನಾಗಿ, ‘ಲಕ್ಷ್ಮಣಾ!’ ಎಂದು ಕೂಗಲು, ಲಕ್ಷ್ಮಣನೂ ಸೀತಾಜ್ಞಾಪ್ರಕಾರ ಹೋಗಿರಲು, ರಾವಣನು ಮೋಸದಿಂಡ ಸೀತಾದೇವಿಯನ್ನು ಅಪಹರಿಸುವುದು. ಸೀತಾದೇವಿಯ ಆರ್ತನಾದವನ್ನು ಕೇಳಿ, ಜಟಾಯುವು ರಾವಣನೊಡನೆ ಹೋರಾಡಿ, ಛಿನ್ನಪಕ್ಷನಾಗಿ ಬೀಳುವುದು. ಮಾರ್ಗದಲ್ಲಿ ಸೀತಾದೇವಿಯು ಋಷ್ಯಮೂಕ ಪ್ರಾಂತದಲ್ಲಿ ತನ್ನ ಆಭರಣವನ್ನು ಕೆಡಹುವಳು. ರಾವಣನು ಸೀತಾದೇವಿಯನ್ನು ಸ್ಪರ್ಶಮಾಡದೆ ಕರೆತಂದು, ತನಗೆ ಅನುಕೂಲೆಯಾಗೆಂದು ಹೇಳಿ, ಅಶೋಕವನದಲ್ಲಿ ರಕ್ಕಸಿಯರ ನಡುವೆ ಇರಿಸುವನು. ಇತ್ತ ರಾಮನು ಆಶ್ರಮಕ್ಕೆ ಬಂದು, ಸೀತಾದೇವಿಯನ್ನು ಕಾಣದೆ, ಹಂಬಲಿಸುತ್ತಾ ಲಕ್ಷ್ಮಣನೊಡನೆ ಬಂದು, ಜಟಯುವಿನಿಂದ ಸೀತಾಪಹಾರ ವೃತ್ತಾಂತವನ್ನು ತಿಳಿದು, ಅವನು ಮೃತನಾಗಲು ಅವನಿಗೆ ಅಂತ್ಯೇಷ್ಟಿಯನ್ನೆಸಗುವನು. ಶಬರ್ಯಾಶ್ರಮದಿಂದ ಮುಂದೆ ಬಂದು ಕಬಂಧನನ್ನು ಸಂಹರಿಸಿ, ಅಲ್ಲಿಂದ ಸೀತಾನ್ವೇಷಣಾರ್ಥವಾಗಿ ದಕ್ಷಿಣದಿಕ್ಕಿಗೆ ರಾಮ ಲಕ್ಷ್ಮಣರು ಪ್ರಯಾಣ ಮಾಡಿದುದು.