ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಬ್ರಹ್ಮವೈವರ್ತಮಹಾಪುರಾಣಂ – ಸಂಚಿಕೆ ೭
ಆರಂಭಿಕ ಪುಟ
ಅನುವಾದಕರು: ಶ್ರೀ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ —
ಶ್ರೀಕೃಷ್ಣಜನ್ಮಖಂಡದ ಕಥೆಯನ್ನು ಹೇಳಬೇಕೆಂದು ನಾರದನು ನಾರಾಯಣಮಹರ್ಷಿಯನ್ನು ಕೇಳುವಿಕೆ – ನಾರಾಯಣ ಮಹರ್ಷಿಯು ಅದಕ್ಕೆ ಒಪ್ಪಿ ಪ್ರಾಸ್ತಾವಿಕವಾಗಿ ವಿಷ್ಣು ಮತ್ತು ವೈಷ್ಣವರ ಗುಣಪ್ರಶಂಸೆ ಮಾಡುವಿಕೆ.
೨ನೇ ಅಧ್ಯಾಯ —
ಶ್ರೀಹರಿಯು ಗೋಕುಲದಲ್ಲಿ ಗೋಪಬಾಲನಾಗಿ ಅವತರಿಸುವುದಕ್ಕೂ, ರಾಧಾದೇವಿಯು ಗೋಪಕನ್ನಿಕೆಯಾಗಿ ಅವತರಿಸುವುದಕ್ಕೂ ಕಾರಣವನ್ನು ನಿರೂಪಿಸುವಾಗ ಗೋಲೋಕದಲ್ಲಿ ಶ್ರೀದಾಮನಿಗೂ, ರಾಧಾದೇವಿಗೂ ಉಂಟಾದ ಕಲಹವನ್ನೂ, ಶ್ರೀಹರಿಯು ವಿರಜೆಯಲ್ಲಿ ಆಸಕ್ತನಾಗಿರುವುದನ್ನು ಗೆಳತಿಯರ ಬಾಯಿಂದ ಕೇಳಿ, ಕುಪಿತಳಾದ ರಾಧೆಯು ರತ್ನಮಂಡಪದಲ್ಲಿ ಶ್ರೀಹರಿಯನ್ನು ನೋಡಲು ಹೋದಾದ ಶ್ರೀಹರಿಯು ಅಂತರ್ಧಾನನಾದುದನ್ನೂ, ವಿರಜೆಯು ಪ್ರಾಣತ್ಯಾಗಮಾಡಿ ನದೀರೂಪಳಾದುದನ್ನೂ ವಿವರಿಸುವಿಕೆ.
೩ನೇ ಅಧ್ಯಾಯ —
ಸಪ್ತಸಮುದ್ರಗಳ ಉತ್ಪತ್ತಿ ನಿರೂಪಣೆ – ಕ್ರೋಧಾಗಾರದಲ್ಲಿ ರಾಧೆಯು ಮಲಗಿದ್ದಾಗ ಶ್ರೀದಾಮನೊಡನೆ ಶ್ರೀಹರಿಯು ಬಂದುದನ್ನು ಕಂಡು ರಾಧೆಯು ಕಟುನುಡಿಗಳನ್ನಾಡಿ ಅವನನ್ನು ಹೊರಕ್ಕೆ ಕಳುಹಿಸಬೇಕೆಂದು ಸಖಿಯರಿಗೆ ಆಜ್ಞೆಮಾಡುವಿಕೆ – ಆಗ ಶ್ರೀದಾಮನು ರಾಧೆಗೆ ಶ್ರೀಹರಿಯ ಮಾಹಾತ್ಮ್ಯವನ್ನು ಬಣ್ಣಿಸುವಿಕೆ – ರಾಧಾ ಶ್ರೀದಾಮರಿಗೆ ಪರಸ್ಪರ ಶಾಪಬರುವಿಕೆ – ಅವರಿಬ್ಬರನ್ನು ಕುರಿತು ಶ್ರೀಹರಿಯ ಸಮಾಧಾನ ವಚನ.
೪ನೇ ಅಧ್ಯಾಯ —
ದೇವತೆಗಳೊಡನೆ ಬಂದು ಶರಣಾಗತಳಾದ ಭೂದೇವಿಯನ್ನು ಕುರಿತು ಬ್ರಹ್ಮನ ಪ್ರಶ್ನೆಗಳು – ಭೂದೇವಿಯು ತನಗೆ ಯಾರಿಂದ ಭಾರವುಂಟಾಗಿದೆ ಎಂಬುದನ್ನು ಭಿನ್ನವಿಸುವಿಕೆ – ದೇವತೆಗಳೊಡನೆಯೂ, ಭೂದೇವಿಯೊಡನೆಯೂ ಬ್ರಹ್ಮನು ಶಿವಲೋಕಕ್ಕೆ ಹೋಗಿ ಶಿವನಿಗೆ ಭೂದೇವಿಯ ವೃತ್ತಾಂತವನ್ನು ನಿರೂಪಿಸುವಿಕೆ – ಅವರೆಲ್ಲರೂ ವೈಕುಂಠಕ್ಕೆ ಹೋಗಿ ಶ್ರೀಹರಿಯನ್ನು ಸ್ತುತಿಸುವಿಕೆ – ಶ್ರೀಹರಿಯ ಆಜ್ಞೆಯಂತೆ ಎಲ್ಲರೂ ಗೋಲೋಕಕ್ಕೆ ತೆರಳುವಿಕೆ – ಗೋಲೋಕದ ವರ್ಣನೆ.
೫ನೇ ಅಧ್ಯಾಯ —
ರಾಧಾಮಂದಿರದ ಹದಿನಾರು ದ್ವಾರಗಳ ವರ್ಣನೆ – ಹದಿನಾರು ಬಾಗಿಲುಗಳನ್ನೂ ದಾಟಿಕೊಂಡು ದೇವತೆಗಳು ಅಂತರ್ಗೃಹಕ್ಕೆ ಪ್ರವೇಶಿಸುವಿಕೆ – ರಾಧಾಮಂದಿರದ ವರ್ಣನೆ – ದೇವತೆಗಳು ರಾಧಾಮಂದಿರದಲ್ಲಿ ಶ್ರೀಕೃಷ್ಣನ ದಿವ್ಯತೇಜಸ್ಸನ್ನು ನೋಡುವಿಕೆ ಬ್ರಹ್ಮಾದಿಕೃತವಾದ ಶ್ರೀಕೃಷ್ಣಸ್ತೋತ್ರ ನಿರೂಪಣೆ – ಆ ಸ್ತೋತ್ರಪಾಠದ ಫಲನಿರೂಪಣೆ.
೬ನೇ ಅಧ್ಯಾಯ —
ಆ ತೇಜೋಮಂಡಲದ ಮಧ್ಯದಲ್ಲಿ ದೇವತೆಗಳು ನೋಡಿದ ಶ್ರೀಕೃಷ್ಣನ ದಿವ್ಯಮೂರ್ತಿಯ ವರ್ಣನೆ – ದೇವತೆಗಳ ಸ್ತೋತ್ರದಿಂದ ಪ್ರಸನ್ನನಾದ ಶ್ರೀಕೃಷ್ಣನು ದೇವತೆಗಳಿಗೆ ಅಭಯ ಪ್ರದಾನಮಾಡುವಿಕೆ. ಭೂಮಿಯಲ್ಲಿ ಅವತಾರ ಮಾಡಲು ರಾಧೆಯೇ ಮುಂತಾದವರಿಗೆ ಶ್ರೀಕೃಷ್ಣನು ಆಜ್ಞೆಮಾಡುವಿಕೆ. ಗೋಲೋಕಕ್ಕೆ ಬಂದಿದ್ದ ನಾರಾಯಣ ವಿಷ್ಣು ಮತ್ತು ಸಂರ್ಷಣರು ಶ್ರೀಕೃಷ್ಣನ ಶರೀರದಲ್ಲೇ ಐಕ್ಯವಾಗುವಿಕೆ. ‘ಪೃಥಿವಿಯಲ್ಲಿ ನಿಮ್ಮ ನಿಮ್ಮ ಅಂಶದಿಂದ ಅವತಾರಮಾಡಿರಿ’ ಎಂದು ದೇವತೆಗಳಿಗೆ ಶ್ರೀಕೃಷ್ಣನು ಆಜ್ಞೆಮಾಡುವಿಕೆ. ಯಾರ್ಯಾರು ಯಾವ ಯಾವ ಹೆಸರಿನಲ್ಲಿ ಎಲ್ಲೆಲ್ಲಿ ಅವತಾರ ಮಾಡಬೇಕೆಂದು ಕೇಳಿದ ಬ್ರಹ್ಮನ ಪ್ರಶ್ನೆಗೆ ಶ್ರೀಕೃಷ್ಣನ ಉತ್ತರ – ಮುಂದೆ ಉಂಟಾಗುವ ವಿರಹವನ್ನು ನೆನೆಸಿಕೊಂಡು ಅಳುತ್ತಿದ್ದ ರಾಧೆಯನ್ನು ಕುರಿತು ಶ್ರೀಕೃಷ್ಣನ ಸಮಾಧಾನ ವಚನ – ಶ್ರೀಕೃಷ್ಣನ ಆಜ್ಞೆಯಂತೆ ಎಲ್ಲ ದೇವತೆಗಳೂ ತಮ್ಮ ತಮ್ಮ ಸ್ಥಾನಕ್ಕೆ ಹಿಂತಿರುಗುವಿಕೆ – ರಾಧಾದೇವಿಯೂ ಕೂಡ ಗೋಪಗೋಪಿಯರೊಡನೆ ಗೋಕುಲಕ್ಕೆ ಹೋಗುವಿಕೆ. ಶ್ರೀಕೃಷ್ಣನೂ ಕೂಡ ಮಧುರೆಗೆ ತೆರಳುವಿಕೆ.
೭ನೇ ಅಧ್ಯಾಯ —
ಶ್ರೀಕೃಷ್ಣಾವತಾರ ನಿರೂಪಣೆ.
೮ನೇ ಅಧ್ಯಾಯ —
ಶ್ರೀಕೃಷ್ಣಜನ್ಮಾಷ್ಟಮಿಯ ವ್ರತೋಪವಾಸಾದಿ ವಿಧಾನಗಳ ನಿರೂಪಣೆ.
೯ನೇ ಅಧ್ಯಾಯ —
ನಂದ, ಯಶೋದೆ ಮತ್ತು ರೋಹಿಣಿಯರ ಜನ್ಮಾಂತರ ವೃತ್ತಾಂತ ನಿರೂಪಣೆ – ಬಲದೇವಜನ್ಮವೃತ್ತಾಂತ ಕಥನ – ನಂದಪುತ್ರೋತ್ಸವ ವರ್ಣನೆ.
೧೦ನೇ ಅಧ್ಯಾಯ —
ಪೂತನಿಯ ಸಂಹಾರ ಮತ್ತು ಅವಳ ಜನ್ಮಾಂತರ ವೃತ್ತಾಂತ ಕಥನ
೧೧ನೇ ಅಧ್ಯಾಯ —
ತೃಣಾವರ್ತನೆಂಬ ರಾಕ್ಷಸನ ವಧ ಮತ್ತು ಅವನ ಜನ್ಮಾಂತರ ವೃತ್ತಾಂತ ಕಥನ.
೧೨ನೇ ಅಧ್ಯಾಯ —
ಶಕಟಾಸುರ, ಭಂಜನ ಮತ್ತು ಯೋಗನಿದ್ರೆಯು ಉಪದೇಶಿಸಿದ ಕವಚನ್ಯಾಸ ವಿಧಿ.
೧೩ನೇ ಅಧ್ಯಾಯ —
ವಸುದೇವನ ಪ್ರಾರ್ಥನೆಯಂತೆ ಗರ್ಗಮಹರ್ಷಿಯು ಶಿಶುವಾದ ಶ್ರೀಕೃಷ್ಣನಿಗೆ ನಾಮಕರಣಾದಿ ಸಂಸ್ಕಾರವನ್ನು ಮಾಡಿಸಲು ನಂದನ ಮಂದಿರಕ್ಕೆ ಬರುವಿಕೆ – ನಂದಯಶೋದೆಯರಿಗೆ ತಾನು ಬಂದಿರುವ ಸಮಾಚಾರವನ್ನೂ ಶ್ರೀಕೃಷ್ಣನ ಅವತಾರ ವೃತ್ತಾಂತವನ್ನೂ ಗರ್ಗಮಹರ್ಷಿಯು ತಿಳಿಸುವಿಕೆ – ಗರ್ಗಮಹರ್ಷಿಯ ಅಪ್ಪಣೆಯಂತೆ ನಂದನು ಶ್ರೀಕೃಷ್ಣನಿಗೆ ನಾಮಕರಣಾದಿ ಸಂಸ್ಕಾರಗಳನ್ನು ಮಾಡುವಿಕೆ. ಗರ್ಗಮಹರ್ಷಿಯು ಶ್ರೀಕೃಷ್ಣನನ್ನು ಸ್ತುತಿಸಿ ತನ್ನ ಮಂದಿರಕ್ಕೆ ಹಿಂತಿರುಗುವಿಕೆ.
೧೪ನೇ ಅಧ್ಯಾಯ —
ಯಮಳಾರ್ಜುನ, ಭಂಜನ ಮತ್ತು ನಲಕೂಬರ ಮೋಕ್ಷ ನಿರೂಪಣೆ.
೧೫ನೇ ಅಧ್ಯಾಯ —
ಭಾಂಡೀರವನದಲ್ಲಿ ರಾಧಾಕೃಷ್ಣರ ವಿವಾಹವಾಗುವಿಕೆ.
೧೬ನೇ ಅಧ್ಯಾಯ —
ಬಕಾಸುರ, ಪ್ರಲಂಬಾಸುರ ಮತ್ತು ಕೇಶಿ ದೈತ್ಯನ ವಧ ನಿರೂಪಣೆ, ಈ ಮೂವರ ಜನ್ಮಾಂತರ ವೃತ್ತಾಂತ ನಿರೂಪಣ – ಪಾರ್ವತಿಯು ಮಾಡಿದ ತ್ರೈಮಾಸಿಕ ವ್ರತವಿಧಿ – ನಂದನ ಆಜ್ಞೆಯಂತೆ ಗೋಕುಲದವರೆಲ್ಲರೂ ಬೃಂದಾವನಕ್ಕೆ ಹೋಗುವಿಕೆ.