ಆದಿಪುರಾಣಂ
ವಿಷಯಾನುಕ್ರಮಣಿಕೆ
ನೈಮಿಷಾರಣ್ಯಕ್ಷೇತ್ರವು ತುಂಬ ಮಹಿಮೆಯುಳ್ಳದ್ದು; ಅಲ್ಲಿ ಶೌನಕನೇ ಮೊದಲಾದ ಋಷಿಗಳು ಹನ್ನೆರಡು ವರ್ಷಗಳವರೆಗೆ ನೆರವೇರಿಸಬೇಕಾಗಿರುವ ಸತ್ರಯಾಗವನ್ನು ಆಚರಿಸಿದುದು; ಆ ಸಂದರ್ಭದಲ್ಲಿ ಸೂತಮಹರ್ಷಿಯ ಆಗಮನ; ಆದಿಪುರಾಣದ ಪ್ರಸಂಗ
ಸತ್ಸಂಗ, ಸತ್ಕಥಾಶ್ರವಣ, ಧಾರ್ಮಿಕವಿಚಾರಗಳು ಇವುಗಳಿಂದ ಆಗುವ ಪ್ರಯೋಜನ; ಸಧ್ಯಾವರ್ಣನವನ್ನೂ ಆಗ ಮಾಡಬೇಕಾದ ಕರ್ಮಗಳನ್ನೂ ತಿಳಿಯಹೇಳಿದುದು; ಶೌನಕ ಸೂತರ ಸಮಾಗಮ.
ಶೌನಕಮಹರ್ಷಿಯು ಕಲಿಯುಗದ ದೋಷಗಳನ್ನು ವಿವರಿಸಿ, ಅವುಗಳ ಪರಿಹಾರಕ್ಕಾಗಿ ಹರಿಲೀಲಾವಿಲಾಸವಿನೋದಗಳ ಕಥೆಯನ್ನು ಕೇಳುತ್ತಾ, ಸತ್ಕಾಲಕ್ಷೇಪವನ್ನು ಮಾಡಬೇಕೆಂದು ಹೇಳಿ, ಅದನ್ನು ವಿಸ್ತಾರವಾಗಿ ತಿಳಿಯಹೇಳಬೇಕೆಂದು ಸೂತಮಹರ್ಷಿಯನ್ನು ಕೇಳಿದುದು.
ಆಗ ದಾಲ್ಭ್ಯ, ಗೃತ್ಸಪಾ(ಮ)ದ, ವಾತ್ಸ್ತಾತನ, ಶತತಪ, ಸ್ಥೂಲಶಿರ, ಗೌತಮ, ಜಾಬಾಲಿ, ಜಾತೂಕರ್ಣಿ, ಊಷ್ಮದ ಮುಂತಾದ ಋಷಿಗಳು ಸತ್ಕಥಾ ಹರಿಭಕ್ತಿಗಳ ಸ್ವರೂಪಮಹಿಮೆಗಳನ್ನು ವರ್ಣಿಸಿದುದು; ವ್ಯಾಸರಚಿತವಾದ ಆದಿಪುರಾಣದ ಪ್ರಸಂಗ, ಶ್ರವಣ ಪ್ರಶ್ನೆ.
ಸನತ್ಕುಮಾರನು ವ್ಯಾಸಮಹರ್ಷಿಗೆ ಆದಿಪುರಾಣವನ್ನು ಹೇಳಿದ್ದುದು; ಸಂಸಾರದುಃಖಕ್ಕೆ ಕಾರಣವಾದ ಮಾಯೆಯೆನ್ನು ಹೇಗೆ ದಾಟಬೇಕೆಂದು ಪ್ರಶ್ನಿಸಿದ ಋಷಿಗಳಿಗೆ ಸ್ತ್ರೀಪರಿಗ್ರಹವನ್ನು ಬಿಟ್ಟು, ಹರಿನಾಮಸ್ಮರಣೆಯಿಂದ ಮಾಯಾ ಜಯಲಾಭವೆಂದು ಹೇಳಿ, ಹರಿಕಥೆಯ ಮಹಿಮೆಯನ್ನೂ ಹರಿಭಕ್ತಿಯ ಫಲವನ್ನೂ ವಿವರಿಸಿದುದು; ವಿಷ್ಣುವಿನ ಆರಾಧನೆ, ವಿರೋಧ ಇವೆರಡೂ ವಿಪರೀತ ಫಲಗಳನ್ನು ಕೊಡುತ್ತವೆಂಬ ವಿಚಾರ; ಆದಿಪುರಾಣ ಕಥೆಯ ಪ್ರಾರಂಭ.
ಉಗ್ರಸೇನನ ಮಗಳಾದ ದೇವಕಿಯನ್ನು ಯಾದವವಂಶದ ವಸುದೇವನು ಮದುವೆಮಾಡಿಕೊಂಡು ಊರಿಗೆ ಹೊರಡಲು, ಭಾವಮೈದುನನಾದ ಕಂಸನು, ಅಶರೀರವಾಣಿಯಿಂದ ದೇವಕಿಯ ಎಂಟನೆಯ ಮಗನಿಂದ ತನ್ನ ವಧೆಯಾವುದೆಂಬುದನ್ನು ಕೇಳಿ, ಅವರಿಬ್ಬರನ್ನೂ ಸೆರೆಮನೆಯಲ್ಲಿಟ್ಟು, ಅವಳ ಮಕ್ಕಳನ್ನು ಹುಟ್ಟಿದ ಕೂಡಲೆ ಕೊಲ್ಲುತ್ತಾ ಬಂದನು; ಏಳನೆಯ ಗರ್ಭದಲ್ಲಿದ್ದ ಸಂಕರ್ಷಣನೆಂಬ ಮಗುವನ್ನು ರೋಹಿಣೀಗರ್ಭದಲ್ಲಿ ಇಟ್ಟು ಉಳಿಸಿದ್ದಾಯಿತು; ಎಂಟನೆಯ ಶಿಶುವಾದ ಕೃಷ್ಣನನ್ನು ಗೋಕುಲದಲ್ಲಿ ನಂದನಮನೆಯಲ್ಲಿಟ್ಟು, ಅಲ್ಲಿದ್ದ ಯಶೋದೆಯ ಹೆಣ್ಣು ಮಗುವನ್ನು ತಂದು ಕಂಸನಿಗೆ ಕೊಡಲು, ಅದು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಾ, ಕಂಸ ಶತ್ರುವು ಗೋಕುಲದಲ್ಲಿರುವುದಾಗಿ ಹೇಳಿದುದು; ಈ ಪುರಾಣಕಥಾಸಂಗ್ರಹ ವರ್ಣನೆ.
ಮಾಯೆಯ ಪಾಶಕ್ಕೆ ಸಿಕ್ಕಿ ಜೀವನು ಗರ್ಭಗತನಾಗಿದ್ದು ಬೆಳೆದು ಜನಿಸುವ ಬಗೆ; ಸ್ತ್ರೀಪುತ್ರಾದಿಗಳಲ್ಲಿ ಮಾಯಾಮೋಹ, ಈಶಸ್ಸರ್ವತ್ರರಕ್ಷಕಃ ಎಂಬ ತತ್ವದ ವಿವರಣೆ.
ವಿಷ್ಣುಭಕ್ತರು ಮಾಯೆಯಿಂದ ಬಿಡುಗಡೆಯನ್ನು ಹೊಂದುತ್ತಾರೆ; ವಿಷ್ಣುಭಕ್ತಿಯ ಲಕ್ಷಣಗಳ ವಿವರಣೆ; ಕರ್ಮದ ಮಹಿಮೆ; ಭಕ್ತಿಯಿಂದಾಗುವ ಫಲದ ವರ್ಣನೆ; ಶ್ರೀಕೃಷ್ಣನು ಮಹಾವಿಷ್ಣುವಿನ ಅವತಾರ.
ಶ್ರೀಕೃಷ್ಣನ ಅವತಾರ, ಬಾಲಲೀಲೆಗಳನ್ನು ತಿಳಿಯಹೇಳಬೇಕೆಂದು ಋಷಿಗಳ ಪ್ರಶ್ನೆ; ಮಧುರಾಮಂಡಲದ ವರ್ಣನೆ; ವೃಂದಾವನ ಮುಂತಾದ ದ್ವಾದಶವನೋಪವನಗಳ ವರ್ಣನೆ; ನಾರದನು ಕೃಷ್ಣದರ್ಶನಕ್ಕೆ ಹೊರಟು, ಮಾನಸರೋವರದಲ್ಲಿ ಸ್ನಾನಮಾಡಿ ಕನೆಯಾದುದು; ಬೃಂದಾವನದ ಕನ್ಯೆಯೊಬ್ಬಳು ಬಂದು ನಾರದನಕನ್ಯೆಯನ್ನು ಶ್ರೀಕೃಷ್ಣನ ದರ್ಶನಕ್ಕೆ ಕರೆದುಕೊಂಡು ಹೋದುದು; ರಾಸಕ್ರೀಡೆಯ ವಿವರಣೆಗಾಗಿ ಪ್ರಶ್ನೆ.
ನಾರದನು ಸತ್ಯಲೋಕಕ್ಕೆ ಹೋಗಿ ಬ್ರಹ್ಮನನ್ನು ಕುರಿತು ಪ್ರಶ್ನಿಸಲು ಬ್ರಹ್ಮನು ತನ್ನ ಉತ್ಪತ್ತಿಕ್ರಮವನ್ನು ಹೇಳಿದನು; ಜಗತ್ಸಂಹಾರಾನಂತರದಲ್ಲಿ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನ ಆವಿರ್ಭಾವ; ಅಸಹಾಯನಾಗಿ ದುಃಖಗೊಂಡಿದ್ದ ಅವನನ್ನು ಕುರಿತು ವಿಷ್ಣುರೂಪಿಯಾದ ಭೃಂಗಾಧಿಪನು ವಿಷ್ಣುವಿಗೆ ಸೃಷ್ಟಿ, ವಿಹಾರಗಳ ಪ್ರವರ್ತಕವಾದ ಎರಡು ರೂಪಗಳುಂಟೆಂದು ಹೇಳಿದುದು; ಈ ವಿಹಾರರೂಪವನ್ನು ಹಿಂದೆ ಮುನಿರೂಪನಾದ ಕೀರವರನಿಗೆ ಹೇಳಿದ್ದುದನ್ನು ತಿಳಿಯಹೇಳಿದುದು;
ಬೃಂದಾವನದಲ್ಲಿ ಶ್ರೀಕೃಷ್ಣನ (ವಿಹಾರಪ್ರವರ್ತಕವಾದ ಶ್ರೀವಿಷ್ಣುವಿನ) ರೂಪವನ್ನೂ, ಅವನ ಹೆಂಡಿತಿಯರ ಮತ್ತು ಸಖಿಯರ ನಾಮಗಳನ್ನೂ, ರಾಧಿಕೆಯ ಎಂಟುಜನ ಸಖಿಯರ ಹೆಸರು ಕಾರ್ಯಗಳನ್ನೂ ವಿವರಿಸಿದುದು;
ಶ್ರಿಕೃಷ್ಣ, ರಾಧಾ ಇವರ ತಂದೆ, ತಾಯಿ, ಸಖಿಯರು, ಪರಿವಾರ ಇವರೆಲ್ಲರ ನಾಮಾದಿಗಳನ್ನು ಭೃಂಗರಾಜನು ಕೀರವರನಿಗೆ ಹೇಳಿದ್ದುದನ್ನು ಬ್ರಹ್ಮನು ನಾರದನಿಗೆ ವಿವರಿಸಿದನು;
ಕನ್ಯಾರೂಪಿಯಾಗಿದ್ದ ನಾರದನು ಬೃಂದಾವನ ಕನ್ಯೆಯಿಂದ ಶ್ರೀಕೃಷ್ಣನ ದರ್ಶನವನ್ನು ಪಡೆದುದು; ತನ್ನ ವಿಲಾಸ ಮಹಿಮೆಯನ್ನು ತೋರಿಸಲು ಶ್ರೀಕೃಷ್ಣನು ನಂದಿನೀ ಎಂಬ ದೂತಿಯಾದ ಸಖಿಯನ್ನು ನಾರದನ ಬಳಿಯಲ್ಲಿಟ್ಟು ಅಂತರ್ಧಾನವಾದುದು; ದೂತೀಲಕ್ಷಣವಿವರಣೆ; ರಾಧೆಯ ಪ್ರಣಯಕೋಪವರ್ಣನೆ; ನಂದಿನಿಯು ರಾಧಾಮಾಧವರನ್ನು ಸೇರಿಸಲು ಯತ್ನಿಸಿದುದು;
ರಾಧಾಮಾಧವರ ರೂಪಗುಣಗಳನ್ನು ವರ್ಣಿಸಿ ನಂದಿನಿಯು ಮುನಿಸನ್ನು ನಿವರಿಸಿದುದು; ಶ್ರೀಕೃಷ್ಣದರ್ಶನವನ್ನು ಪಡೆದು ಅವನಿಂದ ತನ್ನ ಸ್ತ್ರೀಪೂಪನಿವಾರಣೆಯಾಗಿ ನಾರದ ರೂಪವನ್ನು ಕೃಷ್ಣಾನದಿಯಲ್ಲಿ ಸ್ನಾನಮಾಡಿ ಪಡೆಯಬಹುದೆಂದು ತಿಳಿದು, ಹಾಗೆ ಮಾಡಿ ಬಂದು ಶ್ರೀಕೃಷ್ಣನನ್ನು ಸ್ತುತಿಸಿದುದು; ಬಹುಮಾನಪ್ರಾಪ್ತಿ; ಪರಮಾತ್ಮನಿಗೆ ಸಗುಣನಿರ್ಗುಣ ಎಂದು ರೂಪದ್ವಯ; ಜಗದ್ವ್ಯವಹಾರಕ್ಕಾಗಿ ಸಗುಣರೂಪ, ವಾಸ್ತವರೂಪವು ನಿರ್ಗುಣವಾದುದು; ಶ್ರೀಕೃಷ್ಣನು ಆ ಪರಮಾತ್ಮನ ಸಗುಣರೂಪನು; ಪ್ರಸಂಗದಿಂದ ಕಲಿಯುಗದ ದೋಷಪ್ರಭಾವವರ್ಣನೆ;
ಬ್ರಹ್ಮನು ಕ್ಷೀರಸಾಗರದ ಸಮೀಪದಲ್ಲಿ ತಪಸ್ಸುಮಾಡಿ ಸ್ತುತಿಸಲು, ವಿಷ್ಣುವು ಅದ್ವೈತಪರತತ್ವವನ್ನು ತಿಳಿಯಹೇಳಿದುದಲ್ಲದೆ, ಭೂಭಾರನಿವಾರಣೆಗಾಗಿ ದೇವಕೀ ವಸುದೇವರಿಂದ ಶ್ರೀಕೃಷ್ಣನಾಗಿ ಅವತರಿಸುವೆನೆಂದು ಹೇಳಿ ಸಮಾಧಾನಪಡಿಸಿದುದು; ಶ್ರೀಕೃಷ್ಣನ ಜನ್ಮ; ವಸುದೇವನ ಸ್ತೋತ್ರ; ಅವನ ಅಪ್ಪಣೆಯಂತೆ ನಂದನ ಗೃಹದಲ್ಲಿ ಕೃಷ್ಣನನ್ನು ಇಟ್ಟು ಅಲ್ಲಿ ಹುಟ್ಟಿದ್ದ ಮಾಯಾಶಕ್ತಿಯನ್ನು ತಂದುದು;
ನಂದನ ಮನೆಯಲ್ಲಿ ವೈಭವದಿಂದ ಪುತ್ರೋತ್ಸವವನ್ನು ನೆರವೇರಿಸಿದುದು; ದಾನ, ಪೂಜೆ, ಭಜನೆ, ಜಾಗರಣೆ; ಸ್ವಪ್ನದಲ್ಲಿ ವಸುದೇವನು ಭಗವಂತನಿಂದ ಸೂರ್ಯವಂಶವನ್ನೂ, ರಾಮನಾಗಿ ಹುಟ್ಟಿ ಭೂಭಾರನಿವಾರಣೆ ಮಾಡಿದುದನ್ನೂ ಕೇಳಿದುದು; ರಾಮಕಥಾಸಂಗ್ರಹವರ್ಣನೆ;
ಇತ್ತಲಾಗಿ ಕಂಸನು ಸ್ವಪ್ನದಲ್ಲಿ ಯಮಬಾಲಕನನ್ನು ನೋಡಿ ಅವನಿಂದ ಗೋಕುಲದಲ್ಲಿರುವ ಬಾಲಕನ ಹನ್ನೊಂದನೆಯ ವಯಸ್ಸಿನಲ್ಲಿ ತನ್ನ ಮರಣವೆಂದು ಕೇಳಿ, ಅವನ ಸಂಹಾರಕ್ಕಾಗಿ ಪೂತನಿಯನ್ನು ಕಳುಹಿಸಿದುದು; ಶ್ರೀಕೃಷ್ಣನು ಅವಳನ್ನು ಸಂಹರಿಸಿದುದು; ಅವಳಿಗೆ ಸದ್ಗತಿ ಪ್ರಾಪ್ತಿಯಾದುದು; ಅದು ಹೇಗೆಂದು ಕೇಳಲು ಹಿಂದಿನ ಕಥೆಯ ವಿವರಣೆ;
ಕಕ್ಷೀವಂತನೆಂಬ ಋಷಿಯು ಸಂತಾನಾರ್ಥವಾಗಿ ತಪಸ್ಸಿಗೆ ಹೋಗಿರಲು, ಅವನ ಹೆಂಡಿತಿ ಚಾರುಮತಿಯು ಶೂದ್ರಾಕೃಷ್ಣಳಾಗಿದ್ದುದನ್ನು ಹಿಂತಿರುಗಿ ಬಂದ ಗಂಡನು ತಿಳಿದು, ರಾಕ್ಷಸಿಯಾಗೆಂದು ಶಪಿಸಲು ಅವಳು ಪೂತನಿಯಾದುದು; ಚ್ಯವನನ ತಪೋಭಂಗವನ್ನು ಮಾಡಿದ ರಾಕ್ಷಸರನ್ನು ಆ ಋಷಿಯ ಮೈಯಿಂದುಂಟಾದ ದೇವತೆಗಳು ಸಂಹರಿಸಿದುದು; ಅವನ ಅಪ್ಪಣೆಯಂತೆ ಅವರು ರುದ್ರನಲ್ಲಿಗೆ ಹೋದಾಗ ಅವನು ಧ್ಯಾನಾಸಕ್ತನಾಗಿರಲು, ಪಾರ್ಥತಿಯಿಂದ ಮೋಹಗೊಂಡು, ಪಶ್ಚಾತ್ತಪ್ತರಾಗಿ, ಬಹಿರ್ಮುಖನಾದ ಶಿವನ ಬುದ್ಧಿವಾದದಂತೆ ಕೃಶಾನುಪುತ್ರರಾಗಿ ಗೋಕುಲದಲ್ಲಿ ಜನಿಸಿ, ಪೂತನಾ ವಿಷಸ್ತನ್ಯವನ್ನು ಮೊದಲು ಪಾನ ಮಾಡಿ, ಕೃಷ್ಣನು ಪಾನಮಾಡಿದಮೇಲೆ ಶುದ್ಧರಾಗಿ ಮುಕ್ತರಾದುದು; ಪೂತನಾಸಂಹಾರವಾದಾಗ ನಂದನು ಭೋಜರಾಜನಿಗೆ ಕಪ್ಪವನ್ನು ಕೊಡಲು ಆ ಪಟ್ಟಣಕ್ಕೆ ಹೋಗಿದ್ದುದು; ನಂದ ವಸುದೇವರ ಮೈತ್ರೀ ಸಲ್ಲಾಪ ಸಮಾಧಾನಗಳು; ಇತ್ತಲಾಗಿ ಪೂತನಿಯ ಸಹೋದರಿಯು ಕಂಸನನ್ನು ದೂಷಿಸಿದುದು; ಕಂಸನು ತೃಣಾವರ್ತ, ಆಘಾಸುರ, ಬಕಾಸುರರನ್ನು ಕಳುಹಿಸಲು ನಿಶ್ಚಯಿಸಿದುದು;
ಭೂಭಾರವನ್ನು ನಿವಾರಿಸಲು ಕೃಷ್ಣಾವತಾರವಾಗಿರುವುದನ್ನು ತಿಳಿದು ಮಹಾದೇವನೂ, ಬ್ರಹ್ಮನೂ, ಬಂದುನೋಡಿ ಯಶೋದಾ, ನಂದ ಮುಂತಾದವರ ಭಾಗ್ಯವನ್ನು ಶ್ಲಾಘಿಸಿದುದು; ಕಂಸನು ಕಳುಹಿಸಿದ್ದ ಶಕಟಾಸುರನು ಕೃಷ್ಣನ ಒದೆತದಿಂದ ಸತ್ತುದು; ಈ ಕೃಷ್ಣನ ಬಾಲ್ಯಚರಿತ್ರವನ್ನು ಕೇಳಲು ಪ್ರಾರ್ಥಿಸಿದ ನಾರದನಿಗೆ ಶ್ರೀಕೃಷ್ಣನೇ ಹೇಳಿದುದು; ಅತ್ತಲಾಗಿ ಕಂಸನ ಅಘಾಸುರ ಬಕಾಸುರ ತೃಣಾವರ್ತರೊಡನೆ ಸಮಾಲೋಚನೆ.
ಪೂತನಿಯ ಗಂಡ ಘಟೋದರನನ್ನೂ, ಅವಳ ಚಿಕ್ಕಪ್ಪನ ಮಕ್ಕಳಾದ ಅಘಾಸುರ ಬಕಾಸುರರನ್ನೂ, ನಿರಪರಾಧಿ ಪ್ರಜಾನಾಶಭಯದಿಂದ ಹೆದರಿದ ಕಂಸನು ತಡೆದು,ಕೃಷ್ಣನನ್ನು ಮಾತ್ರ ಹಾರಿಸಿಕೊಂಡು ತರಲು ತೃಣಾವರ್ತನನ್ನು ಬಿರುಗಾಳಿಯ ರೂಪದಲ್ಲಿ ಕಳುಹಿಸಿದುದು; ತೃಣಾವರ್ತನನ್ನು ಶ್ರೀಕೃಷ್ಣನು ಕತ್ತುಹಿಡಿದು ಹಿಸುಕಿ ಕೊಂದುದು; ಗೋಪರು ನಂದನನ್ನು ಅಭಿನಂದಿಸಿದುದು; ತೃಣಾವರ್ತನು ಶ್ರೀಕೃಷ್ಣ ಸ್ಪರ್ಶವನ್ನು ಪಡೆದುದರಿಂದ ಅವನ ಜ್ಯೋತಿಯು ಶ್ರೀಕೃಷ್ಣನಲ್ಲಿ ಸೇರಿದುದು; ಅವನ ಪೂರ್ವಜನ್ಮ ಕಥೆ; ದ್ರಾವಿಡದೇಶದಲ್ಲಿ ವಿಶ್ವರಥ ರಾಜನಾಗಿದ್ದುದು; ತಿಳಿಯದೆ ಹರಿಭಕ್ತನಾದವನನ್ನು ಕಳ್ಳನೆಂದು ಸೆರೆ ಹಾಕಿದ್ದುದು; ಆ ರಾಜನೇ ತೃಣಾವರ್ತನಾಗಿದ್ದು ಈಗ ಸದ್ಗತಿಯನ್ನು ಪಡೆದುದು;
ಕಂಸನು ತೃಣಾವರ್ತನ ಸಂಹಾರದ ವಿವರವನ್ನು ದೂತರಿಂದ ಕೇಳಿ, ಪುರುಷಯತ್ನಕ್ಕಿಂತ ದೈವಪ್ರಾಬಲ್ಯವು ಮಿಗಿಲೆಂದು ತಿಳಿದು, ಚಿಂತಾಕ್ರಾಂತನಾಗಿರುವಾಗ ಸ್ವಪ್ನದಲ್ಲಿ ದೇವಕಿಯ ಎಂಟನೆಯ ಮಗುವನ್ನೂ ಕೊಲ್ಲಹೋದಾಗ ಆದಿಶಕ್ತಿ ಅಥವಾ ಮಹಾಮಾಯಾರೂಪಿಣಿಯಾದ ಆ ಶಿವು ಹಾಗಿ ತಪ್ಪಿಸಿಕೊಂಡು, ಕಂಸನ ಶತ್ರುವು ಗೋಕುಲದಲ್ಲಿ ಬೆಳೆಯುತ್ತಿರುವುದಾಗಿ ಹೇಳಿ ಹೋದಮೇಲೆ, ಪಶ್ಚಾತ್ತಪ್ತನಾದ ಕಂಸನು ವಸುದೇವ ದೇವಕಿಯರಲ್ಲಿ ಕ್ಷಮಾ ಪ್ರಾರ್ಥನೆಯನ್ನು ಮಾಡಲು, ಅವರು ಅವನನ್ನು ಸಮಾಧಾನಪಡಿಸಿದುದು, ಇದೆಲ್ಲವನ್ನೂ ಕಂಡನು. ಕಂಸನು ಹೀಗೆ ಆಗಾಗ್ಗೆ ಪುರುಷಕಾರಕ್ಕಿಂತ ದೈವ ಪ್ರಾಬಲ್ಯವು ಮಿಗಿಲಾದುದೆಂಬುದನ್ನು ಮನಗಂಡರೂ, ಪುನಃ ರಾಜ್ಯಲೋಭದಿಂದ ಶತ್ರುನಾಶಕ್ಕಾಗಿ ಅಘಾಸುರನನ್ನೂ ಬಕಾಸುರನನ್ನೂ ಕಳುಹಿಸಿದನು; ಇತ್ತಲಾಗಿ ನಂದನ ಮನೆಯಲ್ಲಿ ಶ್ರೀಕೃಷ್ಣನ ಬಾಲಲೀಲೆಯ ವರ್ಣನೆ; ಒಂದು ದಿನ ವಸುದೇವನು ಗರ್ಗಮಹರ್ಷಿಯನ್ನು ಕಂಡು ಶ್ರೀಕೃಷ್ಣ ಬಲರಾಮರಿಗೆ ನಾಮಕರಣವನ್ನು ಗುಟ್ಟಾಗಿ ಮಾಡಲು ಕಳುಹಿಸಿದನು; ಗರ್ಗನು ನಂನನಿಂದ ಗೌರವಿಸಲ್ಪಟ್ಟು, ಆ ಬಾಲಕರಿಗೆ ನಾಮಕರಣ ಸಂಸ್ಕಾರ ಮಹೋತ್ಸವವನ್ನು ಗುಟ್ಟಾಗಿ ನೆರವೇರಿಸಿಲು ಅವನನ್ನು ಒಪ್ಪಿಸಿದುದು;
ನಾಮಕರಣ ಸಂಸ್ಕಾರವನ್ನು ಹಾಗೆ ನೆರವೇರಿಸಿದ ಮೇಲೆ, ಗರ್ಗನು ರಾಮಕೃಷ್ಣರ ಭವಿಷ್ಯವನ್ನು ಅವರ ಜಾತಕ ಯೋಗದಿಂದ ತಿಳಿದು ಯಶೋಧಾ ನಂದರಿಗೆ ವಿವರಿಸಿದುದು; ಶ್ರೀಕೃಷ್ಣನು ಮಹಾವಿಷ್ಣುವಿನ ಅವತಾರವೆಂಬುದನ್ನೂ ತಿಳಿಸಿ, ಧರ್ಮಾಚರಣೆಯ ಬುದ್ಧಿವಾದವನ್ನೂ ಹೇಳಿ ಹಿಂತಿರುಗಿದುದು; ಮುಂದಿನ ಕೃಷ್ಣಲೀಲೆಯನ್ನೂ ಶ್ರೀಕೃಷ್ಣನೇ ನಾರದನಿಗೆ ವಿವರಿಸುವುದನ್ನು ಮುಂದುವರಿಯಿಸಿದುದು; ಬಾಲಕೃಷ್ಣನು ಗೋಪಿಯರ ಮನೆಗಳಲ್ಲಿ ಹಾಲು ಮೊಸರು ತುಪ್ಪಗಳನ್ನು ಕುಡಿದು, ತಿಂದು ಚಲ್ಲಿ, ಸ್ನೇಹಿತರಿಗೂ ಕಪಿಗಳಿಗೂ ಕೊಡುವುದು; ಅವುಗಳ ಪಾತ್ರೆಗಳನ್ನು ಒಡೆಯುವುದು; ಗೋಪಿಯರನ್ನು ನಯಭಯ ವಂಚನೆಗಳಿಂದ ಬೆರಗುಗೊಳಿಸುದು; ಅವರು ಯಶೋದೆಯಲ್ಲಿ ಬಂದು ದೂರಿದರೆ, ಸಮಯಕ್ಕೆ ತಕ್ಕಂತೆ ಮಾತನ್ನಾಡಿ ಎಲ್ಲರನ್ನೂ ಮರುಳುಗೊಳಿಸುವುದು; ಯಶೋದೆಯು ಅವರ ಸಾಮವಾಕ್ಯಗಳಿಂದ ಸಮಾಧಾನಗೊಳಿಸುವುದು; ಗೋಪಿಯರೆಲ್ಲರಿಗೂ ಅಪರಾಧಕ್ಕಿಂತ ಹೆಚ್ಚಾಗಿ ಆನಂದವನ್ನುಂಟುಮಾಡುವುದು;
ಗೋಪಿಯರು ದೂರುವುದನ್ನು ಕೇಳಿ ಯಶೋದೆಗೂ ಕಡೆಗೆ ಸಂಶಯವುಂಟಾಯಿತು; ಗೋಪಿಯರು ಒಟ್ಟಾಗಿ ಕೃಷ್ಣನನ್ನು ಹಿಡಿಯಲು ಅವನು ತುಂಟತನದಿಂದ ತಪ್ಪಿಸಿಕೊಂಡುದು; ಹಾಲು ಮೊಸರು ಬೆಣ್ಣೆಗಳನ್ನು ತಾವಾಗಿಯೇ ಕೊಟ್ಟು ಉಪಚರಿಸಿದ ಗೋಪಿಯರನ್ನು ಅನುಗ್ರಹಿಸಿದುದು;
ಗೋಪಸ್ತ್ರೀಯರು ಕೃಷ್ಣನನ್ನು ಹಿಡಿದು ಶಿಕ್ಷಿಸಲು ಪ್ರಯತ್ನ ಪಟ್ಟರೆ ಅವನು ಅವರನ್ನು ಹೊಸಹೊಸ ಯುಕ್ತಿ, ಚಮತ್ಕಾರ, ಅದ್ಭುತಗಳಿಂದ ಮೋಹಗೊಳಿಸುವುದು;
ಗೋಪಿಯರ ದೂರನ್ನು ಕೇಳಿ ಯಶೋದೆಯು ಕೃಷ್ಣನಿಗೆ ಬುದ್ಧಿವಾದವನ್ನು ಹೇಳಲು, ಅವನ ಸಮಾಧಾನೋಕ್ತಿಯು; ಕೃಷ್ಣನೂ ಪ್ರತಿಯಾಗಿ ಗೋಪಿಯರನ್ನು ದೂರುವುದು; ಯಶೋದೆಯು ಸಮಾಧಾನಪಡಿಸುವುದು;
ಯಶೋದೆಯೇ ಒಂದು ದಿನ ದೇವರ ಪೂಜೆಗೆಂದು ಸಿದ್ಧತೆಗಳನ್ನು ಮಾಡಿ ಗೋಪಿಯರನ್ನೂ ಕರೆಯಹೋದಾಗ, ಕೃಷ್ಣನು ಅವನ್ನೂ ತಿಂದು ಕುಡಿದು ಸ್ನೇಹಿತರಿಗೂ, ಕೃಷ್ಣನು ಅವನ್ನೂ ತಿಂದು ಕುಡಿದು ಸ್ನೇಹಿತರಿಗೂ, ಕಪಿಗಳಿಗೂ ಕೊಟ್ಟು ತಪ್ಪಿಸಿಕೊಂಡುಹೋದುದು; ಅನ್ಯ ದೇವತಾಭಕ್ತರಲ್ಲಿ ಕೃಷ್ಣನು ಮಾಡುತ್ತಿದ್ದ ತುಂಟತನದ ಗೂಢಾಭಿಪ್ರಾಯದ ವಿವರಣೆ; ತಾಯಿಯನ್ನು ಕುರಿತು ಕೃಷ್ಣನು ಸಮಯಬಂದಾಗ ತನ್ನ ಐಶ್ವರ್ಯಮಹಿಮೆಗಳನ್ನು ತೋರಿಸುವೆನೆಂದುದು;
ಶ್ರೀಕೃಷ್ಣನೊಡನೆ ಬಲರಾಮನು ಮಲ್ಲಯುದ್ಧವನ್ನು ಮಾಡುತ್ತೇನೆಂದು; ತಾಯಿಯಲ್ಲಿ ಕೃಷ್ಣನು ಮಣ್ಣನ್ನು ತಿಂದನೆಂದು ದೂರಿದುದು; ಅವಳು ಅವನ ಮುಖದಲ್ಲಿ ಇಡಿ ಪ್ರಪಂಚವನ್ನೇ ನೋಡಿದುದು; ಅವಳಿಗೆ ದಿವ್ಯಜ್ಞಾನದ ಬೆಳಕು ತೋರಿ ಮರೆಯಾದುದು; ಅವಳ ಪುತ್ರಾನಂದ ವಿಶೇಷವು;
ಯಶೋದೆಯು ನಂಬಿಸುತ್ತಿದ್ದ ಕೃಷ್ಣನನ್ನು ಬಿಟ್ಟುಹೋಗಿ, ಉಕ್ಕುತ್ತಿದ್ದ ಹಾಲನ್ನು ಕಾಪಾಡಲು ಯತ್ನಿಸಿದುದು; ಕೃಷ್ಣನು ಹಾಲು ಮೊಸರು ತುಪ್ಪಗಳನ್ನು ತಿಂದು ಭಾಂಡಗಳನ್ನು ಒಡೆದುಹೋದುದು; ಕೃಷ್ಣನನ್ನು ಬಿಟ್ಟು ಅನ್ಯ ಭಜನದ ಫಲವು; ಶ್ರೀಕೃಷ್ಣನನ್ನು ತಿರುವುವ ಕಲ್ಲಿಗೆ ಕಟ್ಟಲು ಹೋದಾಗ ಹಗ್ಗಗಳು ಸಾಲದೆಬರಲು, ದುಃಖಪಟ್ಟು, ಕಡೆಗೆ ಕಟ್ಟಿದುದು; ನಾರದನು ಯಮಳಾರ್ಜುನರ ಪೂರ್ವಕಥೆಯನ್ನು ಕೇಳಲು ಕೃಷ್ಣನು ಭಕ್ತಿಯ ಫಲವನ್ನು ಹೇಳಿದುದು; ವಿಷ್ಣುಭಕ್ತಿಗೆ ಎಲ್ಲರೂ ಅಧಿಕಾರಿಗಳು;
ಕುಬೇರನ ಅಪ್ಪಣೆಯಂತೆ ನಳ ಕೂಬರರು ವಿಷ್ಣುಪೂಜಾಸಕ್ತರಾಗಿದ್ದುದು; ನಂದಿಕೇಶ್ವರನು ಬರಲು ಅವನಿಂದ ಅವರು ಶಿವಭಕ್ತಿಯ ಫಲವನ್ನು ಕೇಳಿ, ವಿಷ್ಣುಭಕ್ತಿಯನ್ನು ಬಿಟ್ಟು ಶಿವಭಕ್ತರಾದುದು; ಶ್ರೀಮದದಿಂದ ಅವರು ಸ್ವರ್ಗೀಯ ವಿಷಯ ಸ್ತ್ರೀ ಲಂಪಟರಾದುದು; ನಾರದನ ಶಾಪದಿಂದ ಅವರು ಯಮಳಾರ್ಜುನರಾದುದು; ಕರ್ಮ ಭೋಗಾಂತದಲ್ಲಿ ಭಗವಂತನ ದರ್ಶನ; ತಿರುವುವ ಕಲ್ಲಿಗೆ ಶಿಕ್ಕಿದ ಆ ಜೋಡಿಮರಗಳು ಶ್ರೀಕೃಷ್ಣನು ಎಳೆಯಲು ಬಿದ್ದವು; ಅದರಿಂದ ಯಕ್ಷಕುಮಾರರ ಶಾಪವು ಕಳೆಯಲು, ಪೂರ್ವರೂಪವನ್ನು ಹೊಂದಿ ವಿಷ್ಣುಭಕ್ತಿಗೆ ಹಿಂತಿರುಗಿ, ಶ್ರೀಕೃಷ್ಣನನ್ನು ಸ್ತುತಿಸಿ ಸ್ವರ್ಗಕ್ಕೆ ಹೋದುದು; ನಂದನು ಕೃಷ್ಣನ ಕ್ಷೇಮಕ್ಕಾಗಿ ಶಾಂತಿಕರ್ಮ ದಾನಗಳನ್ನು ನೆರವೇರಿಸಿದುದು; ಪುರಾಣ ಶ್ರವಣ ಫಲಶ್ರುತಿ;