ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಕೂರ್ಮ ಪುರಾಣಂ ಸಂಚಿಕೆ ೪
ಆರಂಭಿಕ ಪುಟ
ಅನುವಾದಕರು: ಶ್ರೀ ಪಾಟಣಕರ ಚಂದ್ರಶೇಖರ ಭಟ್ಟ
ವಿಷಯಾನುಕ್ರಮಣಿಕೆ
೮೩ನೇ ಅಧ್ಯಾಯ —
ಮಹಾಪಾತಕಿಗಳು, ಬ್ರಹ್ಮಹತ್ಯಾ ಮಹಾಪಾತಕದ ಪ್ರಾಶ್ಚಿತ್ತ, ಮತ್ತು ಪ್ರಾಯಶ್ಚಿತ್ತವನ್ನು ವಿಧಿಸುವ ಸಭ್ಯರ ಸಂಖ್ಯಾ ಸ್ವರೂಪಗಳು
೮೪ನೇ ಅಧ್ಯಾಯ —
ಶಿವನು ಬ್ರಹ್ಮಕಪಾಲವನ್ನು ಸ್ಥಾಪಿಸಿದ ಪ್ರಸಂಗ, ತಾನು ಸರ್ವೋತ್ತಮನೆಂದು ಬ್ರಹ್ಮದೇವನು ಅಹಂಕಾರವನ್ನು ತೋರಿಸುವುದು. ಶಿವನ ಪರಿವಾರದ ಕಾಲಭೈರವ ಮೂರ್ತಿಯಿಂದ ಬ್ರಹ್ಮನ ಶಿರವನ್ನು ಕತ್ತರಿಸುವುದು. ಆಗ ಬ್ರಹ್ಮಹತ್ಯಪಾಪವನ್ನು ನಿವಾರಿಸಿದ ಕಪಾಲಮೋಚನ ತೀರ್ಥದ ಉತ್ಪತ್ತಿ
೮೫ನೇ ಅಧ್ಯಾಯ —
ಬ್ರಹ್ಮಹತ್ಯಾ, ಸುರಾಪಾನ, ಸುವರ್ಣಸ್ತೇಯ, ಗುರುಪತ್ನಿ ಸಂಗ ಮತ್ತು ಮಹಾಪಾತಕಿ ಸಂಸರ್ಗಗಳೆಂಬ ಮಹಾಪಾತಕಗಳ ಪ್ರಾಯಶ್ಚಿತ್ತ ಸಂಗ್ರಹ
೮೬ನೇ ಅಧ್ಯಾಯ —
ಅಗಮ್ಯ ಸ್ತ್ರೀಯರ ಸಂಗ, ಅವಧ್ಯವಧ ಮುಂತಾದ ಪಾತಕಗಳ ಪರಿಹಾರ ವಿಧಿ
೮೭ನೇ ಅಧ್ಯಾಯ —
ಸ್ತೇಯ, ಅಭಕ್ಷ್ಯಭಕ್ಷಣ, ನಿತ್ಯಕರ್ಮಲೋಪ ಮುಂತಾದ ಪಾತಕಗಳ ಪ್ರಾಯಶ್ಚಿತ್ತ ವಿಧಾನ, ಪ್ರಾಸಂಗಿಕವಾಗಿ ಸೀತಾದೇವಿಯ ಪಾತಿವ್ರತ್ಯ ಮಹಿಮೆ
೮೮ನೇ ಅಧ್ಯಾಯ —
ಪ್ರಯಾಗ ತೀರ್ಥವರ್ಣನೆ, ಬಹುಮಂದಿ ಪುತ್ರರಲ್ಲಿ ಒಬ್ಬನಾದರೂ ಗಯಾ ತೀರ್ಥಯಾತ್ರೆಯನ್ನು ನೆರವೇರಿಸುವನೆಂದು ಪಿತೃಗಳ ಆಶಂಸೆ, ಗಯಾಕ್ಷೇತ್ರ ಮಹಿಮೆ
೮೯ನೇ ಅಧ್ಯಾಯ —
ರುದ್ರಕೋಟಿ ತೀರ್ಥದ ವರ್ಣನೆ. ಆ ತೀರ್ಥದಲ್ಲಿ ಕೋಟಿಸಂಖ್ಯೆಯ ರುದ್ರಮೂರ್ತಿಗಳ ಪ್ರಾದುರ್ಭಾವ, ಕಾಲಂಜರ ತೀರ್ಥದಲ್ಲಿ ಮೃತ್ಯುನಿಗ್ರಹ ಮತ್ತು ಆ ತೀರ್ಥದ ಮಹಿಮೆ
೯೦ನೇ ಅಧ್ಯಾಯ —
ಮಹಾಲಯ, ಕೇದಾರ ಮುಂತಾದ ಕ್ಷೇತ್ರ, ಗೃಧ್ರವನ ಮುಂತಾದ ಪುಣ್ಯಾರಣ್ಯ, ಕನಕನಂದಾ ಮುಂತಾದ ಪಾವನ ತೀರ್ಥಗಳ ವರ್ಣನೆ
೯೧ನೇ ಅಧ್ಯಾಯ —
ಜ್ಞಾನ ಮಾರ್ಗವನ್ನು ತ್ಯಜಿಸಿದ ಮಹಾಮುನಿಗಳಿಗೆ ತತ್ವಬೋಧೆಯನ್ನು ಉಂಟುಮಾಡಲು ನಾರೀರೂಪವನ್ನು ಧರಿಸಿದ ವಿಷ್ಣುವಿನ ಸಂಗಡ ಶಿವನು ದೇವದಾರು ವನಕ್ಕೆ ಪ್ರವೇಶಿಸಿದುದು
೯೨ನೇ ಅಧ್ಯಾಯ —
ಮುನಿಗಳು ವಿಷ್ಣುವಿನ ಮೋಹಿನೀ ರೂಪವನ್ನು ನೋಡಿ ಮೋಹಕಳೂ, ಕುಲಟೆಯೂ ಆದ ಭಾರ್ಯೆಯೊಡನೆ ಬಂದವನೆಂದು ಶಿವನನ್ನು ನಿಂದಿಸಿದುದು. ಶಿವನ ಲಿಂಗ ಪತನ ಮತ್ತು ಮುನಿಜನರ ತೀವ್ರತಪಶ್ಚರ್ಯೆ
೯೩ನೇ ಅಧ್ಯಾಯ —
ನರ್ಮದಾ ನದಿಯ ಮಹಿಮೆ. ನರ್ಮದಾ ನದಿಯ ತೀರದಲ್ಲಿ ಬೆಳೆದ ವೃಕ್ಷಗಳಿಗೆ ಕೂಡ ನಾಶಸಮಯದಲ್ಲಿ ನರ್ಮದಾ ನದಿಯ ಪವಿತ್ರ ತೀರ್ಥಸಂಗದಿಂದ ಉತ್ತಮಗತಿ ಪ್ರಾಪ್ತಿ
೯೪ನೇ ಅಧ್ಯಾಯ —
ನರ್ಮದಾ ನದೀತೀರದಲ್ಲಿರುವ ಋಷಿತೀರ್ಥ, ಋಣತೀರ್ಥ ಮುಂತಾದ ತೀರ್ಥಗಳ ಮತ್ತು ದೀಪೇಶ್ವರ ಮುಂತಾದ ಪುಣ್ಯಾಲಯಗಳ ವರ್ಣನೆ. ಅವುಗ ಉಪಾಖ್ಯಾನಗಳು
೯೫ನೇ ಅಧ್ಯಾಯ —
ನರ್ಮದಾ ಮಾಹಾತ್ಮ್ಯಕ್ಕೆ ಸೇರಿದಂತೆ ಭಾಗುತೀರ್ಥದ ವರ್ಣನೆ, ಮತ್ತು ಗೌತಮೇಶ್ವರ, ಧೌತಪಾಪ ಮುಂತಾದ ಕ್ಷೇತ್ರಯಾತ್ರಾ ವಿಧಾನ
೯೬ನೇ ಅಧ್ಯಾಯ —
ಮುನಿಗಳು ಬ್ರಹ್ಮದೇವನಲ್ಲಿ ತತ್ತವಾಜ್ಞಾನ ಸಾಧನೋಪದೇಶವನ್ನು ಪ್ರಾರ್ಥಿಸುವುದು. ಬ್ರಹ್ಮದೇವನು ಮನೋಮಯ ಚಕ್ರವನ್ನು ಉರುಳಿಸಿ ಚಕ್ರದ ಪಟ್ಟೆಯ ಮುರಿದು ಚಕ್ರವು ಬೀಳುವ ಪುಣ್ಯ ಭೂಮಿಯಲ್ಲಿ ಸಹಸ್ರಾರು ಸಂವತ್ಸರಗಳವರೆಗೆ ಪುಣ್ಯಕರ್ಮಾಚರಣೆಯನ್ನು ಮಾಡುವಂತೆ ಮುನಿಗಳಿಗೆ ಭೋಧಿಸುವುದು. ಆ ಪುಣ್ಯಭೂಮಿಯು ನೈಮಿಷಾರಣ್ಯವಾದುದು
೯೭ನೇ ಅಧ್ಯಾಯ —
ಜಪ್ಯೇಶ್ವರವೆಂಬ ತೀರ್ಥದ ಸನ್ನಿಧಿಯಲ್ಲಿರುವ ಪಂಚನದ ಮುಂತಾದ ಇತರ ತೀರ್ಥಗಳ ವರ್ಣನೆ
೯೮ನೇ ಅಧ್ಯಾಯ —
ಕೂರ್ಮರೂಪದಿಂದಿರುವ ವಿಷ್ಣುಪರಮಾತ್ಮನು ಜಗತ್ತಿನ ಪ್ರಲಯಾವಸ್ಥೆಯನ್ನು ಬೋಧಿಸಿದುದು
೯೯ನೇ ಅಧ್ಯಾಯ —
ಪ್ರಲಯಗಳಲ್ಲಿ ಒಂದಾದ ಪ್ರಾಕೃತ ಪ್ರಲಯವನ್ನು ವರ್ಣಿಸಿದುದು, ಸಂಕ್ಷೇಪವಾಗಿ ಕೂರ್ಮಪುರಾಣದಲ್ಲಿ ಅಡಗಿದ ವಿಷಯಗಳ ಟಿಪ್ಪಣಿ, ಮತ್ತು ಪುರಾಣಶ್ರವಣದ ಫಲಸ್ತುತಿ, ಉಪಸಂಹಾರ