ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಕೂರ್ಮ ಪುರಾಣಂ ಸಂಚಿಕೆ ೧
ಆರಂಭಿಕ ಪುಟ
ಅನುವಾದಕರು: ಶ್ರೀ ಪಾಟಣಕರ ಚಂದ್ರಶೇಖರ ಭಟ್ಟ
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ —
ಶೌನಕಾದಿಮುನಿಗಳು ಮಾಡಿದ ಪುರಾಣ ಕಥೆಗಳ ಪ್ರಶ್ನೆ, ಸೂತಮುನಿಯು ಉತ್ತರವಾಗಿ ಕಥೆಯನ್ನು ಪ್ರಾರಂಭಿಸಿದುದು, ಸಮುದ್ರ ಮಥನದಿಂದ ಲಕ್ಷ್ಮಿದೇವಿಯ ಉತ್ಪತ್ತಿ ಮತ್ತು ಲಕ್ಷ್ಮಿಯ ಮಹಿಮೆಯ ವರ್ಣನೆ, ಹಾಗು ಇಂದ್ರದ್ಯುಮ್ನನ ಮೋಕ್ಷಪ್ರಾಪ್ತಿ
೨ನೇ ಅಧ್ಯಾಯ —
ಕೂರ್ಮರೂಪಿಯಾದ ಭಗವಂತನು ನಾರದಾದಿ ಮುನಿಗಳಿಗೆ ತನ್ನ ಪ್ರಸಾದದಿಂದ ಬ್ರಹ್ಮನು ಮತ್ತು ಕೋಪದಿಂದ ಶಿವನು ಉತ್ಪತ್ತಿ ಹೊಂದಿರುವರೆಂದು ತಿಳಿಸಿದುದು, ಲಕ್ಷ್ಮಿಯು ಸೃಷ್ಟಿವರ್ಗದಲ್ಲಿ ಮೋಹವನ್ನು ಉಂಟುಡಾಬೇಕೆಂಬ ಬ್ರಹ್ಮದೇವನು ವಿಷ್ಣುವಿನಲ್ಲಿ ಪ್ರಾರ್ಥಿಸಿಕೊಂಡಿರುವುದು, ದುರ್ಮಾರ್ಗಪ್ರವೃತ್ತರಿಗೆ ಮಾತ್ರ ಮೋಹವನ್ನುಂಟುಮಾಡಬೇಕೆಂದು ವಿಷ್ಣುವಿನ ನಿಯೋಗ, ಮತ್ತು ಸೃಷ್ಟಿ, ವರ್ಣಾಶ್ರಮಧರ್ಮಗಳ ವರ್ಣನೆಯು.
೩ನೇ ಅಧ್ಯಾಯ —
ಆಶ್ರಮಗಳ ವಿಸಯದಲ್ಲಿ ನಾರದ ಮುನಿಯ ಪ್ರಶ್ನೆ, ಮತ್ತು ಭಗವಂತನ ಉತ್ತರ
೪ನೇ ಅಧ್ಯಾಯ —
ಪ್ರಾಕೃತ ಸೃಷ್ಟಿಯ ವರ್ಣನೆ
೫ನೇ ಅಧ್ಯಾಯ —
ನಿಮೇಷ, ಕ್ಷಣ, ಮೊದಲಾಗಿ ಪರಾರ್ಧದವರೆಗಿನ ಕಾಲದ ಸಂಖ್ಯೆ, ಕಾಲವು ಅನಾದಿ ಮತ್ತು ಈಶ್ವರಸ್ವರೂಪವಾದುದೆಂದು ಬೋಧನೆಯು
೬ನೇ ಅಧ್ಯಾಯ —
ಪ್ರಲಯ ಕಾಲದಲ್ಲಿ ಸ್ಥಾವರ – ಜಂಗಮ ಪ್ರಾಣಿಗಳ ನಾಶದಿಂದ ಪ್ರಪಂಚವು ಜಲಮಯವಾಗಲು ಅಪಾರ ಸಮುದ್ರದಲ್ಲಿ ಮುಳುಗಿದ ಭೂಮಿಯನ್ನು ಮತ್ತೆ ವರಾಹಸ್ವಾಮಿಯು ಉದ್ಧರಿಸಿದುದು ಮತ್ತು ಸನಕಾದಿ ಮಹರ್ಷಿಗಳು ಮಾಡಿದ ಆದಿವರಾಹ ಮೂರ್ತಿಯ ಸ್ತುತಿ
೭ನೇ ಅಧ್ಯಾಯ —
ಪ್ರಪಂಚ ಸೃಷ್ಟಿ ವರ್ಣನೆ
೮ನೇ ಅಧ್ಯಾಯ —
ಸ್ವಾಯಂಭುವ ಮನು – ಶತರೂಪಾದೇವಿಯರಿಂದ ಆದ ಸೃಷ್ಟಿಪ್ರಸಾರ ವರ್ಣನೆ.
೯ನೇ ಅಧ್ಯಾಯ —
ಬ್ರಹ್ಮನು ಶೇಷಶಾಯಿಯಾದ ಶ್ರೀಮನ್ನಾರಾಯಣನ ಸನ್ನಿಧಿಗೆ ಹೋದುದು, ಅಲ್ಲಿ ಮಹಾವಿಷ್ಣು – ಬ್ರಹ್ಮದೇವರಿಗೆ ನದೆದ ಪ್ರಪಂಚವು ತನ್ನ ಉದರದಲ್ಲಿರುವುದೆಂಬ ಪರಸ್ಪರವಾದ, ಅದರ ಪರೀಕ್ಷಾ ಪ್ರಸಂಗದಲ್ಲಿ ಬ್ರಹ್ಮನು ವಿಷ್ಣುವಿನ ಉದರದಲ್ಲಿ ಪ್ರವೇಶಮಾಡಿ ನಾಭಿಕಮಲದ ನಾಳದಿಂದ ಹುಟ್ಟಿ ಬಂದುದು. ಆಗ ಅಲ್ಲಿಗೆ ಮಹೇಶ್ವರನು ಬರಲು ವಿಷ್ಣುವು ಅವನ ಸನ್ನಿಧಿಯಲ್ಲಿ ಬ್ರಹ್ಮದೇವನನ್ನು ನೋಡಿ “ನಿನ್ನ ಜನಕನಾದ ನಾನು ಈ ಮಹೇಶ್ವರನ ಒಂದು ಮೂರ್ತಿ” ಎಂದು ತಿಳಿಸುವುದು. ಸ್ತುತಿಯಿಂದ ಪ್ರಸನ್ನನಾದ ಶಂಕರನು ಬ್ರಹ್ಮದೇವನಿಗೆ ಮಾಡಿದ ವರಪ್ರದಾನ
೧೦ನೇ ಅಧ್ಯಾಯ —
ಮುಧು – ಕೈಟಭ ದಾನವರ ಪರಾಜಯ, ರುದ್ರನಿಂದ ಜರಾ – ಮರಣ ಶೂನ್ಯರಾದ ಪ್ರಜಾಸೃಷ್ಟಿಯು ಪ್ರಸರಿಸುವುದನ್ನು ನೋಡಿ ಬ್ರಹ್ಮನು ರುದ್ರನಿಗೆ ಬೇರೆ ವಿಧದ ಪ್ರಜೆಗಳನ್ನು ಸೃಷ್ಟಿಸಬೇಕೆಂದು ಆಜ್ಞೆಯಿತ್ತಿರುವುದು. ಅದನ್ನು ಅಂಗೀಕರಿಸದೆ ತನ್ನ ಪರಿವಾರ ಸಮೇತವಾಗಿ ಶಿವನು ಅದೃಶ್ಯನಾದುದು
೧೧ನೇ ಅಧ್ಯಾಯ —
ಬ್ರಹ್ಮನ ನಿಯೋಗದಿಂದ ಪಾರ್ವತಿಯು ದಕ್ಷ ಕನ್ಯಾರೂಪದಿಂದ ಜನಿಸಿದುದು. ಮತ್ತೆ ಹಿಮವಂತನಲ್ಲಿ ಜನ್ಮವೆತ್ತಿರುವುದು
೧೨ನೇ ಅಧ್ಯಾಯ —
ಕೂರ್ಮಮೂರ್ತಿಯು ಮಾಡಿದ ದೇವೀ ಮಾಹಾತ್ಮ್ಯವು. ಹಿಮವಂತನೂ ಮೇನಾದೇವಿಯೂ ದೇವಿಯ ಪರಮರೂಪವನ್ನು ಸಾಕ್ಷಾತ್ಕರಿಸಿ ಸ್ತುತಿಮಾಡಿದುದು. ಹಾಗೂ ಪಾರ್ವತಿಯನ್ನು ಶಂಕರನಿಗೆ ದಾನಮಾಡಿದ ತರುವಾಯ ಪಾರ್ವತೀದೇವಿಯು ಶಂಕರನನ್ನು ಹೊಂದಿದುದು
೧೩ನೇ ಅಧ್ಯಾಯ —
ದಕ್ಷಪ್ರಜಾಪತಿಯ ಕನ್ಯೆಯಾದ ಖ್ಯಾತಿದೇವಿಯ ಸಂತತಿಯ ಪ್ರಸಾರ ವರ್ಣನೆ
೧೪ನೇ ಅಧ್ಯಾಯ —
ಸ್ವಾಯಂಭುವ ಮನುರಾಜನ ವಂಶವರ್ಣನೆ. ದಕ್ಷಬ್ರಹ್ಮನಿಗೆ ಶಿವನಿಂದ ಶಾಪಪ್ರಾಪ್ತಿ
೧೫ನೇ ಅಧ್ಯಾಯ —
ಶಿವನಿಗೆ ಹವಿರ್ಭಾಗಾಂಶದಲ್ಲದೆ ದಕ್ಷಪ್ರಜಾಪತಿಯ ಯಜ್ಞಮಾಡಿದುದು. ಹೀಗೆ ಶಿವನಲ್ಲಿ ದ್ರೋಹಭಾವನೆಯನ್ನು ತೋರಿಸಿದ ಮಹರ್ಷಿಗಳಿಗೆ ದಧೀಚಮುನಿಯು ಶಾಪವನ್ನು ಕೊಡುವುದು. ವೀರಭದ್ರನು ಮಾಡಿದ ದಕ್ಷಯಜ್ಞಧ್ವಂಸ, ತರುವಯ ಪಾರ್ವತೀದೇವಿಯ ಪ್ರಾರ್ಥನೆಯಂತೆ ದಕ್ಷಬ್ರಹ್ಮ – ಮಹರ್ಷಿಗಳಲ್ಲಿ ಶಿವನು ತೋರಿದ ಅನುಗ್ರಹ
೧೬ನೇ ಅಧ್ಯಾಯ —
ದಕ್ಷಕನ್ಯೆಯರ ವಂಶಾವಳಿ, ಹಿರಣ್ಯಕಶಿಪು ರಾಕ್ಷಸನ ಸಂಹಾರ, ಶಿವನಿಂದ ಅಂಧಕಾಸುರನ ನಿಗ್ರಹ
೧೭ನೇ ಅಧ್ಯಾಯ —
ವಾಮನಮೂರ್ತಿಯು ಬಲಿಮಹಾಸುರನನ್ನು ನಿಗ್ರಹಿಸಿದುದು. ಮತ್ತು ಇಂದ್ರನಿಗೆ ತ್ರೈಲೋಕ್ಯರಾಜ್ಯವನ್ನು ಒಪ್ಪಿಸಿದುದು.
೧೮ನೇ ಅಧ್ಯಾಯ —
ಕಶ್ಯಪಮುನಿಯ ವಂಶವರ್ಣನೆ
೧೯ನೇ ಅಧ್ಯಾಯ —
ಅನೇಕ ಋಷಿ ವಂಶಗಳ ವರ್ಣನೆ.
೨೦ನೇ ಅಧ್ಯಾಯ —
ಅನೇಕ ರಾಜವಂಶವರ್ಣನೆ, ವಸುವನಾ ಎಂಬ ರಾಜನ ಚರಿತ್ರೆ