ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ನಾರದೀಯಮಹಾಪುರಾಣ – ಭಾಗ – ೪
ಆರಂಭಿಕ ಪುಟ
ಅನುವಾದಕರು: ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ
ವಿಷಯಾನುಕ್ರಮಣಿಕೆ
ಐವತ್ತುನಾಲ್ಕನೆಯ ಅಧ್ಯಾಯ
ಗ್ರಹಸ್ಫುಟ. ಮಧ್ಯಮಗತಿಗಳ ಆನಯನ. ಸೂರ್ಯಚಂದ್ರಗ್ರಹಣ ವಿವೇಚನೆ. ಉದಯಾಸ್ತಕಾಲನಿರ್ಣಯರೀತಿ. ಛಾಯೆಯಿಂದ ಕ್ರಾಂತ್ಯಾದಿಗಳನ್ನು ತಿಳಿದುಕೊಳ್ಳುವ ಬಗೆ. ಪಾತಾನಯನ ಇತ್ಯಾದಿ ಗ್ರಹಗಣಿತಗಳು
ಐವತ್ತೈದನೆಯ ಅಧ್ಯಾಯ
ದ್ವಾದಶರಾಶಿಭೇದ. ಗ್ರಹಯೋನಿಭೇದ. ವಿಯೋನಿಜನ್ಮ. ನಿಷೇಕಲಗ್ನ. ಬಾಲಾರಿಷ್ಟಾದಿ ಜಾತಕಾರಿಷ್ಟಗಳು. ಆಯುರ್ದಾಯನಿರ್ಣಯ. ಗ್ರಹದಶೆಗಳು. ಕರ್ಮಾಜೀವವನ್ನು ಸಾಧಿಸುವ ರೀತಿ. ಅಷ್ಟಕವರ್ಗದಿಂದ ಗೋಚರಫಲಗಳನ್ನು ಕಂಡುಹಿಡಿಯುವ ರೀತಿ. ರಾಜಯೋಗಾದಿಗಳಿಂದ ಜಾತಕಗಳ ಬಲಾಬಲಗಳನ್ನು ಕಂಡು ಹಿಡಿಯುವಿಕೆ. ನಕ್ಷತ್ರಮೂಲಕವಾದ ಯೋಗಗಳನ್ನು ಅರಿಯುವ ಬಗೆ. ಚಂದ್ರನಿಂದ ಬರುವ ಯೋಗಗಳು. ಸಂನ್ಯಾಸಯೋಗ. ರಾಶಿ ಶೀಲಗಳ ನಿರೂಪಣೆಯು. ಗೋಚರಫಲ ಮತ್ತು ಗ್ರಹ ಭಾವಫಲ. ಆಶ್ರಯಯೋಗ. ಮಿಶ್ರಯೋಗ. ಅನಿಷ್ಟಯೋಗ. ಸ್ತ್ರೀಜಾತಕನಿರೂಪಣೆ. ನಿರ್ಯಾಣಯೋಗ. ನಷ್ಟಜಾತಕ ನಿರ್ಮಾಣ. ದ್ರೇಕ್ಕಾಣದಿಂದ ಫಲಾಫಲಗಳನ್ನು ಅರಿಯುವರೀತಿ ಇತ್ಯಾದಿ ಜಾತಕಭಾಗ.
ಐವತ್ತಾರನೆಯ ಅಧ್ಯಾಯ
ವರ್ಷಲಕ್ಷಣ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳ ಉತ್ಪತ್ತಿ ಕ್ರಮ ಮೂಹೂರ್ತಲಕ್ಷಣ. ಉಪಗ್ರಹಗಳು. ಸೂರ್ಯಸಂಕ್ರಾಂತಿಪುರುಷಲಕ್ಷಣ. ಚಂದ್ರತಾರಾಬಲವಿವರಣೆ. ಷೋಡಶಸಂಸ್ಕಾರಗಳಿಗೆ ಬೇಕಾಗುವ ಮುಹೂರ್ತಗಳ ವಿವರಣೆ ವಿಗ್ರಹಪ್ರತಿಷ್ಠೆ, ಗೃಹಪ್ರವೇಶಾದಿಮುಹೂರ್ತಗಳು. ವೃಷ್ಟಿಚಿಹ್ನೆಗಳು. ಖನಿಜಲಕ್ಷಣ ಇತ್ಯಾದಿ ಸಂಹಿತಾಸ್ಕಂಧ
ಐವತ್ತೇಳನೆಯ ಅಧ್ಯಾಯ
ವೈದಿಕ ಲೌಕಿಕ ಛಂದೋ ವಿವರಣೆಯು. ಪ್ರಸ್ತಾರಕ್ರಮ ನಷ್ಟವೃತ್ತವನ್ನು ಕಂಡು ಹಿಡಿಯುವ ಕ್ರಮ ಉದ್ದಿಷ್ಟ ವಿವರಣೆ. ಲಗಕ್ರಿಯೆ ಇತ್ಯಾದಿ
ಐವತ್ತೆಂಟನೆಯ ಅಧ್ಯಾಯ
ಶುಕನು ಹುಟ್ಟಿದರೀತಿ ಶುಕನಿಗೆ ದೇವತೆಗಳು ಉಪನಯನಮಾಡಿದುದು. ವ್ಯಾಸಾಜ್ಞೆಯಿಂದ ಶುಕನು ತತ್ವವನ್ನು ತಿಳಿಯಲು ಜನಕ ರಾಜನಬಳಿಗೆ ಹೋದುದು. ಜನಕನು ಶುಕಮುನಿಯನ್ನು ಪರೀಕ್ಷಿಸಿದುದು
ಐವತ್ತೊಂಭತ್ತನೆಯ ಅಧ್ಯಾಯ
ಜನಕನು ಶುಕನನ್ನು ಸತ್ಕರಿಸಿ ತತ್ವೋಪದೇಶಮಾಡಿದುದು. ಶುಕನು ಹಿಮಾಚಲಕ್ಕೆ ಹಿಂತಿರುಗಿ ಬಂದು ತಂದೆಗೆ ನಡೆದ ವೃತ್ತಾಂತವನ್ನು ತಿಳಿಸಿದುದು
ಅರವತ್ತನೆಯ ಅಧ್ಯಾಯ
ಅಧ್ಯಯನಮಾಡೆಂಬುದಾಗಿ ನುಡಿದ ಅಶರೀರವಾಣಿಯನ್ನು ಕೇಳಿ ವ್ಯಾಸರು ಶುಕಸಹಿತರಾಗಿ ಅಧ್ಯಯನವನ್ನು ಆರಂಭಿಸಿದುದು. ಆಗ ಬಿರುಗಾಳಿ ಬೀಸಿದುದರಿಂದ ವ್ಯಾಸರು ಅಧ್ಯಯನವನ್ನು ನಿಲ್ಲಿಸಿದುದು. ಶುಕನಿಗೆ ಅನಧ್ಯಾಯಕಾರಣವನ್ನು ವ್ಯಾಸರು ವಿವರಿಸಿದುದು. ಸ್ನಾನಕ್ಕಾಗಿ ವ್ಯಾಸರು ಆಕಾಶಗಂಗೆಗೆ ತೆರಳಿದ ಬಳಿಕೆ ಅಲ್ಲಿಗೆ ಸನತ್ಕುಮಾರಮುನಿಯು ಬಂದು ಶುಕನಿಂದ ಸತ್ಕರಿಸಲ್ಪಟ್ಟು ಅವನಿಗೆ ಹಿತೋಪದೇಶವನ್ನು ಗೈದುದು
ಅರವತ್ತೊಂದನೆಯ ಅಧ್ಯಾಯ
ಕಾಮ್ಯಕರ್ಮದಿಂದಾಗಿವ ಸಂಸಾರದುಃಖ ವಿವರಣೆ. ನಿವೃತ್ತಧರ್ಮಸ್ವರೂಪ ಇತ್ಯಾದಿ ವಿವರಣೆ
ಅರವತ್ತೆರಡನೆಯ ಅಧ್ಯಾಯ
ಶುಕಮುನಿಯ ವೈಕುಂಠಗಮನ ವೃತ್ತಾಂತ. ಶುಕನು ಗಗನ ಮಾರ್ಗದಿಂದ ಊರ್ಧ್ವಲೋಕಪ್ರಯಾಣ ಮಾಡಿದುದು. ವ್ಯಾಸಮುನಿಯು ಶುಕಾ! ಎಂದು ಕೂಗುತ್ತಾ ಅವನನ್ನೇ ಹಿಂಬಾಲಿಸಿದುದು. ಶುಕನು ಪ್ರತಿಧ್ವನಿಮಾಡಿ ಶ್ವೇತದ್ವೀಪಕ್ಕೆ ಹೋಗಿ ಬಳಿಕ ವೈಕುಂಠಕ್ಕೆ ನಡೆದು ಅಲ್ಲಿದ್ದ ಭಗವಂತನನ್ನು ಸ್ತುತಿಸಿ ಅವನ ಅಪ್ಪಣೆಯಂತೆ ಗಂಧಮಾದನ ಪರ್ವತದಲ್ಲಿದ್ದ ತಂದೆಯ ಬಳಿಗೆ ಬಂದು ಅವರಿಅಂದ ಭಾಗವತ ಸಂಹಿತೆಯನ್ನು ಅಧ್ಯಯನ ಮಾಡಿದುದು