ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ನಾರದೀಯಮಹಾಪುರಾಣ – ಭಾಗ – ೧
ಆರಂಭಿಕ ಪುಟ
ಅನುವಾದಕರು: ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ
ವಿಷಯಾನುಕ್ರಮಣಿಕೆ
ಒಂದನೆಯ ಅಧ್ಯಾಯ
ಮಂಗಳಾಚರಣೆ. ಋಷಿಗಳು ಶೌನಕರನ್ನು ಪ್ರಶ್ನಿಸಿದುದು. ಋಷಿಗಳ ಸಹಿತರಾಗಿ ಶೌನಕರು ಸಿದ್ಧಾಶ್ರಮಕ್ಕೆ ಹೋಗಿ ಸೂತರನ್ನು ಕೇಳಿದ ಪ್ರಶ್ನೆಗಳ ವಿವರ. ಸೂತರು ಈ ಪ್ರಶ್ನೆಗಳಿಗೆ ನಾರದೀಯಪುರಾಣವೇ ಉತ್ತರವೆಂದು ಹೇಳಿ ಅದರ ಪ್ರಶಂಸೆ, ಶ್ರವಣ ಅಧ್ಯಯನಗಳ ಫಲ ಮುಂತಾದುವುಗಳನ್ನು ನಿರೂಪಿಸಿದುದು
ಎರಡನೆಯ ಅಧ್ಯಾಯ
ಸನತ್ಕುಮಾರ ಮತ್ತು ನಾರದರ ಸಮಾಗಮ, ಅವರ ತತ್ತ್ವವಿಚಾರ ವಿಷಯದಲ್ಲಿ ಶೌನಕಾದಿಗಳ ಪ್ರಶ್ನೆ. ಬ್ರಹ್ಮಸದನಕ್ಕೆ ಹೊರಟ್ಟಿದ ಸನಕಾದಿ ನಾಲ್ವರು ಮುನಿಗಳು ದಾರಿಯಲ್ಲಿ ಸಿಕ್ಕಿದ ಗಂಗಾನದಿಯಲ್ಲಿ ಸ್ನಾನಮಾಡುತ್ತಿದ್ದಾಗ ನರದರಸಮಾಗಮವಾದುದು. ತತ್ತ್ವ ವಿಚಾರದಲ್ಲಿ ಸನಕಾದಿಗಳನ್ನು ಕುರಿತು ನಾರದರು ಮಾಡಿದ ಪ್ರಶ್ನೆಗಳು ಭಗವಂತನ ಅವತಾರವರ್ಣನೆ
ಮೂರನೆಯ ಅಧ್ಯಾಯ
ನಾರಾಯಣನ ಮಹಿಮೆ. ಅವನ ಶಕ್ತಿಯ ನಾಮಾಂತರಾದಿಗಳು. ಪ್ರಪಂಚ ಸೃಷ್ಟಿಕ್ರಮ. ಭೂಗೋಳಸಂಗ್ರಹ. ಭರತಖಂಡಪರಿಚಯ ಮತ್ತು ಮಹಿಮೆ. ಸತ್ಕರ್ಮಪ್ರಶಂಸೆ
ನಾಲ್ಕನೆಯ ಅಧ್ಯಾಯ
ಭಕ್ತಿಪ್ರಶಂಸೆ. ಸನತ್ಕುಮಾರರು ನಾರದರನ್ನು ಕೇಳಿದ ಭಗವದ್ಭಕ್ತರ ಲಕ್ಷಣ ಮತ್ತು ಅವರ ವ್ಯಾಪಾರ ಮುಂತಾದುವುಗಳ ಪ್ರಶ್ನೆ. ಮಾರ್ಕಂಡೇಯ ಚರಿತ್ರೆ
ಐದನೆಯ ಅಧ್ಯಾಯ
ಮಾರ್ಕಂಡೇಯಮುನಿಯ ತಪಸ್ಸು. ಅವರಿಗಾದ ಪ್ರಳಯದರ್ಶನಪ್ರಕಾರ, ಕಾಲವಿಭಾಗ. ಪ್ರಳಯಾನಂತರ ಸೃಷ್ಟಿ. ಮಾರ್ಕಂಡೇಯಕೃತ ಹರಿಸ್ತುತಿ. ಭಗವದ್ಭಕ್ತರ ಸ್ವರೂಪ ವಿವರಣೆ. ಮಾರ್ಕಂಡೇಯನಿಗೆ ಹರಿಯು ವರವನ್ನು ಕೊಟ್ಟುದು
ಆರನೆಯ ಅಧ್ಯಾಯ
ನಾರದರು ಸನಕರನ್ನು ಕುರಿತು ಮಾಡಿದ ಉತ್ತಮ ತೀರ್ಥಕ್ಷೇತ್ರವಾವುದೆಂಬ ಪ್ರಶ್ನೆಯು. ಪ್ರಯಾಗಕ್ಷೇತ್ರ ಮತ್ತು ಗಂಗೆಯ ಮಹಿಮೆಗಳನ್ನು ಸನಕರು ಹೇಳಿದುದು
ಏಳನೆಯ ಅಧ್ಯಾಯ
ಸೂರ್ಯವಂಶೋತ್ಪನ್ನನಾದ ಬಾಹುರಾಜನ ಚರಿತ್ರೆ
ಎಂಟನೆಯ ಅಧ್ಯಾಯ
ಔರ್ವಮುನಿಯಾಶ್ರಮದಲ್ಲಿ ಸೇವೆಮಾಡಿಕೊಂಡಿದ್ದ ಬಾಹುರಾಜನ ಎರಡನೆಯ ಹೆಂಡತಿಯಲ್ಲಿ ಸಗರನ ಉತ್ಪತ್ತಿ. ಅವನ ಉಪನಯನ ಮತ್ತು ವಿದ್ಯಾಭ್ಯಾಸ. ಸಗರನು ತಾಯಿಯಿಂದ ತನ್ನ ವಂಶವೃತ್ತಾಂತವನ್ನು ತಿಳಿದು ಶತ್ರುದಿಗ್ವಿಜಯಕ್ಕಾಗಿ ಹೊರಟು ಕುಲಗುರುಗಳಾದ ವಸಿಷ್ಠರಾಶ್ರಮಕ್ಕೆ ಹೋಗಿ ಅವರ ಅನುಗ್ರಹದಿಂದ ಶತ್ರುಗಳನ್ನು ಜಯಿಸಿದುದು. ಸಗರನ ಪಟ್ಟಾಭಿಷೇಕೆ, ಅವನ ಅಶ್ವಮೇಧಯಾಗ. ಸಗರನವಂಶದಲ್ಲಿ ಹುಟ್ಟಿದ ಮಿತ್ರಸಹರಾಜನ ಚರಿತ್ರೆಯು
ಒಂಭತ್ತನೆಯ ಅಧ್ಯಾಯ
ಮಿತ್ರಸಹನ ಚರಿತ್ರೆಯು ಮುಂದುವರಿದುದು. ಅವನು ವಸಿಷ್ಠರ ಶಾಪದಿಂದ ರಾಕ್ಷಸನಾದುದು. ಗಂಗೋದಕಸೇಚನೆಯಿಂದ ರಾಕ್ಷಸಜನ್ಮವು ಹೋಗಿ ಪುನಃ ರಾಜನಾದುದು
ಹತ್ತನೆಯ ಅಧ್ಯಾಯ
ಗಂಗಾವತರಣ ಪ್ರಶ್ನೆ ಬಲಿಯು ದೇವಲೋಕವನ್ನು ಆಕ್ರಮಿಸಿದುದು. ಅದಿತಿಯು ತನ್ನ ಮಕ್ಕಳ ಶ್ರೇಯಸ್ಸಿಗಾಗಿ ತಪಸ್ಸುಮಾಡಿದುದು. ರಾಕ್ಷಸರು ಅವಳ ತಪಸ್ಸಿಗೆ ವಿಘ್ನ ಮಾಡಲು ಹೋಗಿ ಕಾಡುಗಿಚ್ಚಿನಿಂದ ಬೆಂದು ಹೋದುದು. ಅದಿತಿಯು ಸುರಕ್ಷಿತವಾಗಿದ್ದುದು
ಹನ್ನೊಂದನೆಯ ಅಧ್ಯಾಯ
ಅದಿತಿಯ ತಪಸ್ಸಿಗೆ ಮೆಚ್ಚಿದ ಹರಿಯು ಅವಳ ಮಗನಾಗುವೆನೆಂದು ವರವನ್ನು ಕೊಟ್ಟು ವಾಮನನಾಗಿ ಅವತರಿಸಿದುದು. ಬಲಿಯು ಮೂರು ಪಾದ ಭೂಮಿಯನ್ನು ವಾಮನನಿಗೆ ಕೊಟ್ಟುದು. ವಾಮನನು ತ್ರಿವಿಕ್ರಮರೂಪವನ್ನು ತಾಳಿ ಲೋಕಗಳೆಲ್ಲವನ್ನೂ ಎರಡು ಪಾದಗಳಿಂದಲೇ ಅಳೆದುದು. ಪಾದಾಂಗುಷ್ಠಾಗ್ರದಿಂದ ಒಡೆದ ಬ್ರಹ್ಮಾಂಡದಿಂದ ಗಂಗೆಯು ಬಂದುದು. ವಾಮನನು ಬಲಿಯನ್ನು ಪಾತಾಳಕ್ಕೆ ಮೆಟ್ಟಿ ಅವನ ಭಕ್ತಿಗೆ ಮೆಚ್ಚಿ ರಸಾತಳದಲ್ಲಿ ಅವನಿಗೆ ಸ್ಥಾನವನ್ನು ಕೊಟ್ಟು ನಾನಾವಿಧ ಭೋಗಗಳನ್ನು ಏರ್ಪಡಿಸಿ ವಾಮನರೂಪದಿಂದ ಅವನಿಗೆ ರಕ್ಷಕನಾಗಿದ್ದುದು
ಹನ್ನೆರಡನೆಯ ಅಧ್ಯಾಯ
ದಾನ ಮತ್ತು ಅದರ ಪ್ರಭೇದ. ಪಾತ್ರಾಪಾತ್ರಗಳ ವಿವೇಚನೆ. ಭಗೀರಥ ಧರ್ಮರಾಜರ ಸಂವಾದ. ವೀರಭದ್ರರಾಜನ ಚರಿತ್ರೆ
ಹದಿಮೂರನೆಯ ಅಧ್ಯಾಯ
ದೇವಾಲಯ, ಕೆರೆ, ತುಳಸೀವನ ಮುಂತಾದುವುಗಳ ನಿರ್ಮಾಣದಿಂದ ಬರುವ ಫಲಗಳ ವಿವರಣೆ. ಪುಂಡ್ರಧಾರಣೆ, ಕ್ಷೀರಾಭಿಷೇಕ, ಗೋದಾನ, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ವಿದ್ಯಾದಾನ ಮುಂತಾದುವುಗಳ ಮಹಿಮೆ. ವಿಷ್ಣುಭಕ್ತಿಯ ಆವಶ್ಯಕತೆ. ನಿವೃತ್ತಧರ್ಮಾನುಷ್ಠಾನ ವಿಧಾನ
ಹದಿನಾಲ್ಕನೆಯ ಅಧ್ಯಾಯ
ನಾನಾವಿಧಪಾಪಗಳು, ಪ್ರಾಯಶ್ಚಿತ್ತ, ವಿವಿಧಶ್ರಾದ್ಧಗಳು. ಮರಣಾನಂತರ ಕರ್ತವ್ಯಕ್ರಿಯಾಕಲಾಪ
ಹದಿನೈದನೆಯ ಅಧ್ಯಾಯ
ನರಕ, ಅಲ್ಲಾಗುವ ದುಃಖಾನುಭವರೀತಿ, ಸಾಮಾನ್ಯಪ್ರಾಯಶ್ಚಿತ್ತವಿಧಾನ. ಹತ್ತುವಿಧ ಭಕ್ತಿಗಳ ನಿರೂಪಣೆ. ಸದಾಚಾರದ ಆವಶ್ಯಕತೆ. ಭಗೀರಥನು ಗಂಗೆಯನ್ನು ಭೂಲೋಕಕ್ಕೆ ತಂದುದು
ಹದಿನಾರನೆಯ ಅಧ್ಯಾಯ
ಭಗೀರಥಮಹಾರಾಜನು ಹಿಮಾಚಲಕ್ಕೆ ತಪಸ್ಸಿಗಾಗಿ ಹೊರಟು ದಾರಿಯಲ್ಲಿ ಭೃಗುಮುನಿಯ ಉಪದೇಶವನ್ನು ಪಡೆದುದು. ಸತ್ಯ, ಅಹಿಂಸೆ, ದುರ್ಜನ, ಸಾಧುಮುಂತಾದುವುಗಳ ವಿವರಣೆ. ಹಿಮಾಚಲದಲ್ಲಿ ಭಗೀರಥನು ತಪಸ್ಸುಮಾಡಿ ಗಂಗೆಯನ್ನು ಭೂಲೋಕಕ್ಕೆ ತಂದುದು. ಗಂಗೋದಕದಿಂದ ಸಗರಪುತ್ರರು ಮುಕ್ತಿಯನ್ನು ಪಡೆದುದು