ಭವಿಷ್ಯಮಹಾಪುರಾಣಂ – ಭಾಗ – ೧೨: ಉತ್ತರಪರ್ವ – ತೃತೀಯ ಸಂಪುಟ
ಆರಂಭಿಕ ಪುಟ
ಅನುವಾದಕರು: ಶ್ರೀ ಚನ್ನಕೇಶವಯ್ಯ ಬಿ.
ವಿಷಯಾನುಕ್ರಮಣಿಕೆ
೧೦೧ನೇ ಅಧ್ಯಾಯ — ಯುಗಾದಿತಿಥಿ ವ್ರತಮಾಹಾತ್ಮ್ಯ.
ವೈಶಾಖ ಶುಕ್ಲ ತೃತೀಯಾ ಕೃತಯುಗಾದಿ ತಿಥಿ, ಆ ದಿನ ವಿಷ್ಣು ಪೂಜೆ, ಲವಣಧೇನು ದಾನ, ಕಾರ್ತಿಕ ಶುಕ್ಲ ನವಮಿ ತ್ರೇತಾಯುಗಾದಿ ತಿಥಿ, ಆ ದಿನ ಉಮಾಮಹೇಶ್ವರ ಪೂಜೆ, ತಿಲಧೇನು ದಾನ, ಭಾದ್ರಪದ ಕೃಷ್ಣ ತ್ರಯೋದಶೀ ದ್ವಾಪರ ಯುಗಾದಿ, ಕೃಷ್ಣ ಪೂಜೆ, ಗೋದಾನ, ಮಾಘ ಶುಕ್ಲ ಪೂರ್ಣಿಮಾ ಕಲಿಯುಗಾದಿ, ಗಾಯತ್ರೀ ಸಮೇತ ಬ್ರಹ್ಮ ಪೂಜೆ, ನವನೀತಧೇನು ದಾನ. ಈ ಎಲ್ಲ ಯುಗಾದಿಗಳಲ್ಲೂ ವಿಪ್ರಭೋಜನ.
೧೦೨ನೇ ಅಧ್ಯಾಯ — ವಟಸಾವಿತ್ರೀ ವ್ರತ.
ಅಶ್ವಪತಿ ರಾಜನಿಗೆ ಈ ವ್ರತಾಚರಣೆಯಿಂದ ಪುತ್ರೀ ಜನನ, ಪುತ್ರಿಗೆ ವ್ರತೋಪದೇಶ, ಪುತ್ರಿಯು ತಿಳಿಯದೆ ಅಲ್ಪಾಯು ವರನನ್ನು ವರಿಸಲು ನಿಶ್ಚಯಿಸಿದ್ದು, ನಾರದರು ಸೂಚಿಸಿದರೂ ಸಾವಿತ್ರಿಯ ದೃಢನಿಶ್ಚಯ, ವಿವಾಹಾನಂತರ ಪತಿಯಜತೆ ಆಶ್ರಮವಾಸ, ಪತಿಯ ಕೊನೆಗಾಲ, ಯಮದರ್ಶನ, ಸಂವಾದ, ಪತಿಪ್ರಾಪ್ತಿ, ಭಾದ್ರಪದ ಪೂರ್ಣಿಮಾ ದಿನ ಈ ವ್ರತವಿಧಾನ, ಜಾಗರಣೆ, ದಾನ, (ಪಕ್ಷಂತರ) ಜ್ಯೇಷ್ಠ ಪೂರ್ಣಿಮಾದಲ್ಲಿ ವಟವೃಕ್ಷ ಮೂಲದಲ್ಲಿ ಪೂಜೆ, ದಾನಾದಿಗಳು.
೧೦೩ನೇ ಅಧ್ಯಾಯ — ಕೃತ್ತಿಕಾವ್ರತ ಮಾಹಾತ್ಮ್ಯ.
೧೦೪ನೇ ಅಧ್ಯಾಯ — ಪೂರ್ಣಮನೋರಥ ವ್ರತ.
೧೦೫ನೇ ಅಧ್ಯಾಯ — ವಿಶೋಕಪೂರ್ಣಿಮಾ ವ್ರತ.
೧೦೬ನೇ ಅಧ್ಯಾಯ — ಅನಂತವ್ರತ.
ಮೈತ್ರೇಯಿಯು ಶಿಆಲಧನಳಿಗೆ ಸುಪುತ್ರಾಪ್ರಾಪ್ತಿಗಾಗಿ ಉಪದೇಶಿಸಿದ ವ್ರತವಿದು, ಮಾರ್ಗಶಿರದ ಮೃಗಶಿರಾ ನಕ್ಷತ್ರದ ದಿನ ಅನಂತನ ವಾಮಪಾದ ಪೂಜೆ, ಪ್ರಾರ್ಥನಾ ಮಂತ್ರ, ಬಳಿಕ ಹೀಗೆಯೇ ಪುಷ್ಯಾದಿ ಮಾಸಗಳಲ್ಲಿ ಮಾಸನಾಮಕ ನಕ್ಷತ್ರ ಯುಕ್ತವಾದ, ದಿನ ಕಟಿ ಬಾಹು ಮುಂತಾದ ಅವಯವ ಪೂಜಾ, ದಾನಾದಿಗಳು, ಮಧ್ಯೆ ಸಂಭಾವಿತ ಕ್ಷುತಾದಿ ದೋಷ ಪರಿಹಾರ ಕ್ರಮ, ಹೋಮಾದಿಗಳು, ಪಾರಣೆಯ ಕೊನೆಯಲ್ಲಿ ಆಚರಣ ವಿಧಾನ, ಅಂಗಪೂಜಾ ಮಂತ್ರ, ಚಂದ್ರ, ನಕ್ಷತ್ರ ಪೂಜೆ, ದ್ವಾದಶಕಲಶ ಪೂಜೆ, ದಾನಾದಿಗಳು, ಕೃತವೀರ್ಯನು ಇದನ್ನು ಆಚರಿಸಿ ಸುಪುತ್ರನನ್ನು ಪಡೆದುದು.
೧೦೭ನೇ ಅಧ್ಯಾಯ — ಸಾಂಭರಾಯಿಣೀ ವ್ರತ.
೧೦೮ನೇ ಅಧ್ಯಾಯ — ನಕ್ಷತ್ರಪುರುಷ ವ್ರತ.
೧೦೯ನೇ ಅಧ್ಯಾಯ — ಶಿವನಕ್ಷತ್ರಪುರುಷವ್ರತ.
೧೧೦ನೇ ಅಧ್ಯಾಯ — ಸಂಪೂರ್ಣವ್ರತ.
೧೧೧ನೇ ಅಧ್ಯಾಯ — ಕಾಮದಾನ ವೇಶ್ಯಾವ್ರತ.
ವೇಶ್ಯೆಗೆ ಸ್ವರ್ಗಪ್ರಾಪ್ತ್ಯುಪಾಯ ವ್ರತವಿದು, ಕೃಷ್ಣಪತ್ನಿಯರ ವನವಿಹಾರ, ಸಾಂಬದರ್ಶನ, ಅವರು ಮೋಹಕ್ಕೊಳಗಾದಾಗ ಅವರಿಗೆ ಕೃಷ್ಣನ ಶಾಪ, ಹಿಂದೆ ಅವರು ಅಪ್ಸರೆಯರಾಗಿದ್ದಾಗ ನಾರದರಿಂದ ಂದಿದ್ದ ಶಾಪವನ್ನು ಜ್ಞಾಪಿಸಿ ಈ ಜನ್ಮದಲ್ಲಿ ಅವರ ಕರ್ತವ್ಯ ನಿರೂಪಣೆ, ಭಾನುವಾರ ಪುಷ್ಯ ನಕ್ಷತ್ರ ಸೇರಿದ ದಿನ ವಿಷ್ಣುಪೂಜಾ ವಿಧಾನ, ಸದ್ವಿಪ್ರಪೂಜೆ, ದಾನ, ಆತ್ಮಸಮರ್ಪಣೆ, ಹನ್ನೆರಡುಮಾಸದಲ್ಲೂ ಇದೇ ಕ್ರಮಾಚರಣೆ, ವರ್ಷಾಂತ್ಯದಲ್ಲಿ ಮನ್ಮಥ ಪೂಜೆ, ಶಯ್ಯಾದಾನ, ಅನಂತರ ಸಾಮಾನ್ಯರ ಸಮಾಗಮ.
೧೧೨ನೇ ಅಧ್ಯಾಯ — ವೃತಾಂಕವ್ರತ.
೧೧೩ನೇ ಅಧ್ಯಾಯ — ಗ್ರಹನಕ್ಷತ್ರ ವ್ರತ.
ಹಸ್ತ ನಕ್ಷತ್ರ ಸೇರಿದ ಭಾನುವಾರ ಸೂರ್ಯಾರಾಧನೆ, ನಕ್ತವಿಧಾನ, ಹೀಗೆ ಏಳುಸಾರಿ ಆಚರಣೆ, ಕೊನೆಯಲ್ಲಿ ತಾಮ್ರಕಲಶ, ರಕ್ತ ವಸ್ತ್ರ, ಸ್ವರ್ಣ ಪ್ರತಿಮಾಪೂಜೆ, ನೈವೇದ್ಯ ವಸ್ತು, ಪ್ರಾರ್ಥನಾಮಂತ್ರ, ದಾನಾದಿಗಳು; ಚಿತ್ತಾ ಸೋಮವಾರದ ಚಂದ್ರ, ಸ್ವಾತಿ ಮಂಗಳವಾರ ಕುಜ, ವಿಶಾಖಾ ಬುಧವಾರ ಬುಧ, ಅನೂರಾಧಾ ಗುರುವಾರ ಬೃಹಸ್ಪತಿ, ಜ್ಯೇಷ್ಠಾ ಶುಕ್ರವಾರ ಶುಕ್ರ, ಮೂಲಾ ಶನಿವಾರ ಶನಿ, ರಾಹು, ಕೇತು ಈ ಗ್ರಹಗಳ ಪ್ರತಿಮಾ ಕಲಶಾದಿ ಪೂಜೆ, ಹಿಂದಿನಂತೆ ಏಳುದಿನ ನಕ ಆಚರಣೆ, ಕೊನೆಯಲ್ಲಿ ಹೋಮ, ಪ್ರತಿಗ್ರಹಕ್ಕೂ ಉಕ್ತವಾದ ಸಮಿತ್ತಿನ ಜಾತಿ, ಪ್ರತಿಮಾ ದಾನ.
೧೧೪ನೇ ಅಧ್ಯಾಯ — ಶನೈಶ್ವರ ವ್ರತ.
ತ್ರೇತಾಯುಗದಲ್ಲಿ ಕ್ಷಾಮಬಾಧೆಯಿಂದ ಮಾತಾಪಿತೃ ಪರಿತ್ಯಕ್ತ ಬಾಲನು ಪಿಪ್ಪಲಾದನೆನಿಸಿ ನಾರದರಿಂದ ಬ್ರಹ್ಮೋಪದೇಶ ಪಡೆದು ವಿಷ್ಣುವನ್ನು ಸಂದರ್ಶಿಸಿದ್ದು, ತನ್ನ ದುಃಸ್ಥಿತಿಗೆ ಶನಿಯು ಕಾರಣನೆಂದರಿತು ಕ್ರೂರದೃಷ್ಟಿ ವೀಕ್ಷಣೆಯಿಂದ ಅವನನ್ನುರುಳಿಸಿದ್ದು, ದೇವತೆಗಳ ಪ್ರಾರ್ಥನೆಯಂತೆ ಶನಿಗೆ ಪೂರ್ವಸ್ಥಿತಿ ಪ್ರಾಪ್ತಿ, ಶನಿ ವ್ರತಾಚರಣಕ್ರಮ, ವಿಪ್ರರಿಗೆ ಅಭ್ಯಾಂಗಕ್ಕೆ ತೈಲದಾನ, ಸ್ವಯಂ ಅಭ್ಯಂಗ, ವ್ರತಾಚರಣ, ವರ್ಷಾಂತ್ಯದ ಅಚರಣ ವಿಧಾನ, ದಾನಾದಿಗಳು, ದಾನಮಂತ್ರ, ಶನಿಸ್ತೋತ್ರ, ಫಲಶ್ರುತಿ.
೧೧೫ನೇ ಅಧ್ಯಾಯ — ಆದಿತ್ಯವಾರ ನಕ್ತವಿಧಿ.
೧೧೬ನೇ ಅಧ್ಯಾಯ — ಸಂಕ್ರಾಂತ್ಯುದ್ಯಾಪನ.
ವ್ರತಾರಂಭಕ್ಕೆ ಅರ್ಹಕಾಲ, ವ್ರತದ ಪೂರ್ವದಿನ ಏಕಭುಕ್ತಿ, ವ್ರತದ ದಿನ ತಿಲಸ್ನಾನ, ಚಂದನದಲ್ಲಿ ಅಷ್ಟದಳ ಪದ್ಮರಚನೆ, ದಳದಲ್ಲಿ ನ್ಯಾಸಮಾಡುವ ನಾಮ, ಉಪಚಾರ ಪೂಜೆ, ಅರ್ಘ್ಯಮಂತ್ರ, ಪ್ರತಿ ಸಂಕ್ರಮಣದ ದಾನವಸ್ತು, ವರ್ಷಾಂತ್ಯದ ಸ್ವರ್ಣಪ್ರತಿಮಾ ಪೂಜೆ, ಹೋಮಾದಿಗಳು, ದಾನ.
೧೧೭ನೇ ಅಧ್ಯಾಯ — ವಿಷ್ಟಿವ್ರತ.
ಸೂರ್ಯಪುತ್ರಿಯಾದ ವಿಷ್ಟಿಯ ಕ್ರೌರ್ಯಾದಿಗಳು, ಇದರಿಂದಾದ ಲೋಕಕಂಟಕವನ್ನು ಬ್ರಹ್ಮನು ಸೂರ್ಯನಿಗೆ ತಿಳಿಸಿ ಆಕೆಗೆ ಒಂದು ವ್ಯವಸ್ಥಾಕ್ರಮವನ್ನು ನಿರ್ದೇಶಿಸಿದ್ದು, ಈ ವಿಷ್ಟಿಯು ನೆಲಸಿರುವ ಅವಯವಸ್ಥಾನ, ಘಟಿಕಾಪ್ರಮಾಣ, ಆ ಕಾಲದಲ್ಲಿ ಆರಂಭಿಸಿದ ಕಾರ್ಯಗಳ ಫಲ, ವಿಷ್ಟಿ ದ್ವಾದಶ ನಾಮಸ್ಮರಣ, ಮಹಿಮೆ, ವಿಷ್ಟಿ ವ್ಯಾಪ್ತ್ಯನುಸಾರ ನಕ್ತನಿರ್ಣಯ, ವ್ರತವಿಧಾನ, ಹೋಮದಾನಾದಿಗಳು, ವ್ರತಮಹಿಮೆ.
೧೧೮ನೇ ಅಧ್ಯಾಯ — ಅಗಸ್ತ್ಯಾರ್ಘ್ಯವಿಧಿ ವ್ರತ.
ಮಿತ್ರಾವರುಣರ ತಪೋಭಂಗಕ್ಕಾಗಿ ಊರ್ವಶಿಯ ಆಗಮನ, ಅವರು ಕುಂಭದಲ್ಲಿ ವೀರ್ಯವನ್ನು ವಿಸರ್ಜಿಸಿದ್ದು, ಅದರಿಂದ ವಸಿಷ್ಠ, ಅಗಸ್ತ್ಯ ಇವರ ಜನನ, ಅಗಸ್ತ್ಯನ ತಪೋಮಹಿಮೆ, ಲೋಕಕಂಟಕರಾದ ಇಲ್ವಲ ವಾತಾಪಿಗಳನ್ನು ಅವರು ನಾಶಪಡಿಸಿದ ರೀತಿ, ಸಮುದ್ರಮಥನ ಕಾಲದಲ್ಲಿ ವಿಷಭೀತಿಯಲ್ಲಿ ಅಗಸ್ತ್ಯರ ಪಾತ್ರ, ಮೃತ್ಯುವನ್ನು ತನ್ನ ದೃಷ್ಟಿಯಿಂದ ದಹಿಸಿದ್ದು, ಶ್ವೇತರಾಜನಿಗೆ ಸದ್ಗತಿ ಪ್ರದಾನ, ವಿಂಧ್ಯನ ಔನ್ನತ್ಯವನ್ನು ಮುರಿದುದು, ಲೋಪಾಮುದ್ರೆಯ ಇಷ್ಟದಂತೆ ಭೋಗಭಾಗ್ಯ ಸಂಪಾದನಾ ಮಹಿಮೆ, ಅಗಸ್ತ್ಯೋದಯ ಕಾಲ, ಅರ್ಘ್ಯಪ್ರದಾನ ಕ್ರಮ, ಏಳುವರ್ಷ ಆಚರಣೆ.
೧೧೯ನೇ ಅಧ್ಯಾಯ — ಅಭಿನವ ಚಂದ್ರಾರ್ಘ್ಯವ್ರತ.
೧೨೦ನೇ ಅಧ್ಯಾಯ — ಶುಕ್ರ ಬೃಹಸ್ಪತ್ಯರ್ಘ ಪೂಜಾವಿದಿ.
ಯಾತ್ರಾರಂಭ, ಶುಕ್ರೋದಯ ಈ ಕಾಲಗಳಲ್ಲಿ ಶುಕ್ರಪೂಜೆಗೆ ಕಲಶಾದಿ ಸಿದ್ಧಎ, ಪೂಜೆ, ಪ್ರತಿಮಾಸಮೇತ ಗೋದಾನ, ಅರ್ಘ್ಯಪ್ರದಾನ, ಫಲ, ಗುರುಗ್ರಹ ಸ್ವರ್ಣಪ್ರತಿಮಾ, ಕಲಶ, ಪೀತವಸ್ತ್ರಗಳ ಸಿದ್ಧತೆ, ಪ್ರತಿಮೆಗೆ ಅಶ್ವತ್ಥಪಾಲಾಶಗಳ ರಸಾಭಿಷೇಕ, ಹೋಮ, ಪೂಜೆ, ಪ್ರತಿಮಾಸಹಿತ ಗೋದಾನ, ಸಂಕ್ರಮಣ, ಗುರೂದಯ, ಗುರ್ವಸ್ತ ಕಾಲಗಳಲ್ಲಿ ಪೂಜೆಮಾಡಿ ಸ್ವರ್ಣಪ್ರತಿಮಾ ದಾನ, ಅಶಕ್ತಿಪಕ್ಷೆ, ಮುಕ್ತಾದಾನ, ಫಲಶ್ರುತಿ.
೧೨೧ನೇ ಅಧ್ಯಾಯ — ವ್ರತಪಂಚಾಶೀತಿ.
ಭವಿಷ್ಯ, ಮತ್ಸ್ಯ, ಮಾರ್ಕಂಡೇಯ, ವರಾಹ ಪುರಾಣಗಳಲ್ಲಿ ಉಕ್ತವಾದ ಪಂಚಾಶೀತಿ ವ್ರತಗಳು – ೧. ಪಾತ್ರವ್ರತ, ೨. ವಾಚಸ್ಪತಿವ್ರತ, ೩. ಶಿಲಾವ್ರತ, ೪. ದೇವವ್ರತ, ೫. ರುದ್ರವ್ರತ, ೬. ಗ್ರಹವ್ರತ, ೭. ಲೀಲಾವ್ರತ, ೮. ಪ್ರೀತಿವ್ರತ, ೯. ಗೌರೀವ್ರತ, ೧೦. ಕಾಮವ್ರತ, ೧೧. ಶಿವವ್ರತ, ೧೨. ಪಂಚಘಟವ್ರತ, ೧೩. ಸೌಗಂಧ್ಯವ್ರತ, ೧೪. ಸೌಭಾಗ್ಯವ್ರತ, ೧೫. ಸಾರಸ್ವತವ್ರತ, ೧೬. ಲಕ್ಷ್ಮೀವ್ರತ, ೧೭. ಧಾರಾವ್ರತ, ೧೮. ದೇಹವ್ರತ, ೧೯. ಶುಭವ್ರತ, ೨೦. ಕೀರ್ತಿವ್ರತ, ೨೧. ಸಾಮವ್ರತ, ೨೨. ವೀರವ್ರತ, ೨೩. ಪಿತೃವ್ರತ, ೨೪. ಪತ್ರವ್ರತ, ೨೫. ವಾರಿವ್ರತ, ೨೬. ವೃತ್ತಿವತ, ೨೭. ಅಹಿಂಸಾವ್ರತ, ೨೮. ಸುರ್ಯವ್ರತ, ೨೯. ವೈಷ್ಣವವ್ರತ, ೩೦. ಶೀಲವ್ರತ, ೩೧. ದೀಪವ್ರತ, ೩೨. ಸಪ್ತಸುಂದರಕವ್ರತ, ೩೩. ವರುಣವ್ರತ, ೩೪. ಕಾಂತಿವ್ರತ, ೩೫. ಬ್ರಹ್ಮವ್ರತ, ೩೬. ಕಲ್ಪವ್ರತ, ೩೭. ದ್ವಾರವ್ರತ, ೩೮. ಸುಗತಿವ್ರತ, ೩೯. ವೈಶ್ವಾನರವ್ರತ, ೪೦. ರಾಜ್ಯಲಾಭ ವಿಷ್ಣುವ್ರತ, ೪೧. ದೈವೀವ್ರತ, ೪೨. ಭಾನುವ್ರತ, ೪೩. ವೈನಾಯಕವ್ರತ, ೪೪. ಫಲವ್ರತ, ೪೫. ಸೌರವ್ರತ, ೪೬. ಗೋವಿಂದವ್ರತ, ೪೭. ವೃಷವ್ರತ, ೪೮. ಪ್ರಾಜಾಪತ್ಯವ್ರತ, ೪೯. ತ್ರ್ಯಂಬಕವ್ರತ, ೫೦. ಬ್ರಹ್ಮವ್ರತ, ೫೧. ಶಕ್ರವ್ರತ, ೫೨. ಬ್ರಹ್ಮಕೂರ್ಚವ್ರತ, ೫೩. ಋಷಿವ್ರತ, ೫೪. ಕರಿವ್ರತ, ೫೬. ಸುಮುಖವ್ರತ, ೫೭. ವರುಣವ್ರತ, ೫೮. ಚಂದ್ರವ್ರತ, ೫೯. ರುದ್ರವ್ರತ, ೬೦. ಭವಾನೀವ್ರತ, ೬೧. ತಾಪಸವ್ರತ, ೬೨. ಅಶ್ವವ್ರತ, ೬೩. ಧಾಮವ್ರತ, ೬೪. ಇಂದುವ್ರತ, ೬೫. ಸೋಮವ್ರತ, ೬೬. ಆಗ್ನೇಯವ್ರತ, ೬೭. ಸೌಖ್ಯವ್ರತ, ೬೮. ವಿಶ್ವವ್ರತ, ೬೯. ಧಾನ್ಯವ್ರತ, ೭೦. ಭೀಮವ್ರತ, ೭೧. ಮಹೀವ್ರತ, ೭೨. ಉಮಾವ್ರತ, ೭೩. ಪ್ರಾಪ್ತಿವ್ರತ, ೭೪. ರುದ್ರವ್ರತ, ೭೫. ಬಸ್ತವ್ರತ, ೭೬. ಕನ್ಯಾದಾನವ್ರತ, ೭೭. ಕಾಂತಾರಕರಿಣೀವ್ರತ, ೭೮. ಪೌರಂದರವ್ರತ, ೭೯. ನಾಗವ್ರತ, ೮೦. ವೃಷವ್ರತ, ೮೧. ರಾಜ್ಞೀವ್ರತ, ೮೨. ಆಗ್ನೇಯವ್ರತ, ೮೩. ಹರಿವ್ರತ, ೮೪. ಯೋಗವ್ರತ, ೮೫. ರಾಶಿವ್ರತ ನಿರೂಪಣ, (೫, ೫೯, ೭೪) ಇವು ಒಂದೇ ಹೆಸರಿನವುಗಳಾಗಿ ಕಂಡರೂ ಕ್ರಮದಲ್ಲಿ ವ್ಯತ್ಯಾಸವಿದೆ. ೩೩, ೫೭ ಇವು ಒಂದೇ ಹೆಸರಿದ್ದರೂ ವ್ಯತ್ಯಾಸವಿದೆ.)
೧೨೨ನೇ ಅಧ್ಯಾಯ — ಮಾಘಸ್ನಾನವಿಧಿ.
ಯುಗಗಳ ಚಾತುರ್ವರ್ಣ್ಯ, ತೀರ್ಥಯಾತ್ರೆಗೆ ಅಧಿಕಾರಿ ಅನಧಿಕಾರಿಗಳು, ಸ್ನಾನಪ್ರಾಶಸ್ತ್ಯ ಕ್ಷೇತ್ರಗಳು, ಮಾಘಸ್ನಾನಕ್ಕೆ ಉಕ್ತಕಾಲ ಮತ್ತು ಫಲ, ಸ್ನಾನದ ವಿಧಗಳು, ವಿಧ್ಯುಕ್ತ ಸ್ನಾನಕ್ರಮ, ತತ್ಫಲ, ಮಕರಮಾಸಸ್ನಾನದ ವೈಶಿಷ್ಟ್ಯ, ಸ್ನಾನಾಂಗ ತಪಣಾದಿಗಳು, ತಿಲಸ್ನಾನ, ತಿಲತೈಲ ದಾನಾದಿಗಳು, ಅಶಕ್ತರಿಗೆ ಶಾಖಾರ್ಥವಾಗಿ ಅಗ್ನಿಪ್ರಜ್ವಲನಾದಿ ಆನುಕೂಲ್ಯ ಕಲ್ಪನೆ, ವಿಪ್ರದಂಪತಿ ಸತ್ಕಾರ, ದಾನ, ಮಾಘಸ್ನಾನದ ಪರಮಫಲ.
೧೨೩ನೇ ಅಧ್ಯಾಯ — ನಿತ್ಯಸ್ನಾನಧಿ.
೧೨೪ನೇ ಅಧ್ಯಾಯ — ರುದ್ರಸ್ನಾನವಿಧಿ.
ಅಗಸ್ತ್ಯರಿಗೆ ಷಣ್ಮುಖನು ನಿರೂಪಿಸಿದ್ದನ್ನೇ ಕೃಷ್ಣನು ಹೇಳುವನು, ಯಾವ ಕ್ಲೇಶಭಾಗಿಗಳು ಇದನ್ನಾಚರಿಸಬೇಕೆಂಬ ವಿಚಾರ, ಈ ಸ್ನಾನಕ್ಕೆ ಅನುಜ್ಞಾ ಪ್ರಾರ್ಥನೆಯ ಸ್ಥಳ ಮತ್ತು ಕ್ರಮ, ಮಂಟಪರಚನೆ, ಪದ್ಮರಚನೆ, ರುದ್ರಾವಾಹನೆ, ದಳದಲ್ಲಿ ತ್ರಿಶಕ್ರ್ಯಾವಾಹನೆ, ಲೋಕಪಾಲಾವಾಹನೆ, ದುರ್ಗಾಗಣಪತ್ಯಾವಾಹನೆ ಪೂಜೆ, ಕೋಣಗಳ ಕಲಶದಲ್ಲಿ ಔಷಧಿ ರಸಕ್ಷೇಪಣೆ, ಅಗ್ನಿ ಕುಂಡದಲ್ಲಿ ಹೋಮ, ಹವಿರ್ದ್ರವ್ಯ, ಯಜಮಾನನ ಜಪತತ್ಪರತೆ, ಇನ್ನೊಂದು ಮಂಡಲದಲ್ಲಿ ಸ್ನಾನಕತಿಯನ್ನು ಕೂರಿಸುವುದು, ಅರ್ಕಪತ್ರ ಧಾರಣೆ, ಯಥೋಕ್ತ ಮೃತ್ತಿಗೆಗಳನ್ನು ಹಾಕಿದ ಕಲಶಜಲದಿಂದ ಸುವಾಸಿನಿಯ ಮೂಲಕ ಶಿರೋಲೋಪನ, ಅಷ್ಟಕಲಶ ಜಲಸ್ನಾನ, ಆಚಾರ್ಯಪೂಜೆ, ದಾನಾದಿಗಳು.
೧೨೫ನೇ ಅಧ್ಯಾಯ — ಚಂದ್ರಾದಿತ್ಯಗ್ರಹಣ ಸ್ನಾನವಿಧಿ.
೧೨೬ನೇ ಅಧ್ಯಾಯ — ಅಪರಸಾಂಭರಾಯಿಣೀ ವ್ರತ.
ಪ್ರಾಣೋತ್ಕ್ರಮಣ ಕಾಲದಲ್ಲಿ ಆಚರಿಸಬೇಕಾದ ಸ್ನಾನ, ದಾನ, ಮಮತಾಶೂನ್ಯತೆ, ಮಧ್ಯಸ್ಥ ದ್ವೇಷ್ಯ ಬಂಧುವಾದ ವರ್ಜನೆ, ಆಗ ಹೇಳುವ ಮಂತ್ರ, ಉಪಯೋಗಿಸುವ ಆಸನ ಶಯ್ಯಾದಿಗಳು, ಸ್ಮರಿಸುವ ನಾಮ, ಆದ್ಯಧ್ಯಾನ, ರೌದ್ರಧ್ಯಾನ, ಧರ್ಮಧ್ಯಾನ, ಶುಕ್ಲಧ್ಯಾನ ಇದರ ಸ್ವರೂಪ, ಆಯಾ ಧ್ಯಾನದ ಫಲಾಫಲ, ಸುಜ್ಞಾನಿಗಳಿಗಿರಬೇಕಾದ ಆವಶ್ಯಕತೆ.
೧೨೭ನೇ ಅಧ್ಯಾಯ — ವಾಪೀಕೂಪತಡಾಗೋತ್ಸರ್ಗ ವಿಧಿ.
ತಟಾಕದ ಏರಿಯ ರಚನೆಯಲ್ಲಿ ಸೋಪಾನ ನಿರ್ಮಾಣ, ಉತ್ಸರ್ಜನ ಕಾಲನಿರೂಪಣೆ, ಏರಿಯ ಮೇಲೆ ಮಂಟಪ, ವೇದಿಕೆ, ಯೂಪಸ್ತಂಭ, ಮೇಖಲಾ ಸಹಿತವಾದ ಕುಂಡ ಇವುಗಳ ರಚನಾವಿಧಾನ, ದಿಕ್ಪಾಲಪೂಜೆ, ಚರ್ತುರ್ದ್ವಾರಗಳಲ್ಲೂ ಕಲಶಸ್ಥಾಪನೆ, ವಸ್ತ್ರ, ಜಲಚರಪ್ರತಿಮಾದಿ ಪ್ರತಿಷ್ಠಾಮಂತ್ರ, ಯೂಪಾರ್ಚನೆ, ಹೋಮ, ತಟಾಕದಲ್ಲಿ ಕಲಶಜಲ ನಿಕ್ಷೇಪ ಕಾಲದಲ್ಲಿ ಕರ್ತೃದಂಪತಿಗಳ ಗೋಪುಚ್ಛಾನುಗಮನ, ಜಲಮಾತೃಪೂಜೆ, ಆಯುಧಪೂಜೆ, ಕಾರ್ಮಿಕ ಸತ್ಕಾರ, ವಾಪೀಕೂಪ ಉತ್ಸರ್ಗಗಳಲ್ಲೂ ಇದೇ ಕ್ರಮ, ವರುಣ ಸೂಕ್ತಪಠನ ಪೂರ್ವಕ ಬಲಿಸಮರ್ಪಣ, ವೇದೀಪದ್ಮದಲ್ಲಿ ಆವಾಹಿಸುವ ದೇವಎ ಪ್ರತಿಮಾಧಿವಾಸ, ಕಲಶೋದಕ ಸಮರ್ಪಣಮಂತ್ರ, ಸಂಸ್ಕಾರ ವಿಹೀನವಾದ ಕೂಪದ ಅಶುದ್ಧತೆ, ಸಮುದ್ರಸ್ನಾನ ಕಾಲದಲ್ಲಿ ಹೇಳಬೇಕಾದ ಮಂತ್ರ, ಅದಕ್ಕೆ ಶ್ರೇಷ್ಠದಿನ, ತಟಾಕಾದಿಗಳನ್ನು ನಿರ್ಮಿಸಿ, ಉತ್ಸರ್ಜನಮಾಡದಿದ್ದರೆ ಆಗುವ ಪುಣ್ಯಹಾನಿ, ವಿಧಾನ ತಿಳಿಯದೆ ಕಾರ್ಯನಡೆಸುವ ಪುರೋಹಿತನಿಗೆ ಆಗುವ ದುಷ್ಫಲ, ಋತ್ವಿಕ್ಕುಗಳಿಗೆ ಬರುವ ಪುಣ್ಯ, ಕಾರ್ಮಿಕರಿಗೆ ಬರುವ ಪುಣ್ಯ, ಪುಣ್ಯಲಾಭಕರವಾದ ನಾಲ್ಕು ಕಾರ್ಯಗಳು, ಅದರಲ್ಲಿ ದೇವಾಲಯ ನಿರ್ಮಾಣದ ಪರಮಫಲ.
೧೨೮ನೇ ಅಧ್ಯಾಯ — ವೃಕ್ಷೋದ್ಯಾಷನ ವಿಧಿ.
ದುಷ್ಪುತ್ರ ಸಂತತಿಗಿಂತ ವೃಕ್ಷರೋಪಣದ ಶ್ರೇಷ್ಠತೆ, ಪಿತೃತೃಪ್ತಿ, ಭೂತತೃಪ್ತಿ, ನರಕ ದರ್ಶನವಿಲ್ಲ, ಪುಣ್ಯಕರವಾದ ರೋಪಣ ವೃಕ್ಷಗಳು, ಸಂಸ್ಕಾರಾರ್ಹವಾಗಬೇಕಾದರೆ ವೃಕ್ಷದ ಸ್ವರೂಪ, ಸ್ತ್ರೀವೃಕ್ಷ ಲಕ್ಷಣ, ಅದರ ಸಂಸ್ಕಾರಾನರ್ಹತೆ, ಸಂಸ್ಕಾರ, ವೃಕ್ಷಮೂಲದಲ್ಲಿ ಕಲಶಸ್ಥಾಪನೆ, ವಿವಿಧವರ್ಣದ ವಸ್ತ್ರ, ಸ್ವರ್ಣಫಲರಚನೆ, ಹೋಮಾದಿ ಸಪ್ತಮಾತೃಸ್ಥಾಪನೆ, ಜಾತಕರ್ಮದಿ ಸಂಸ್ಕಾರ, ವೃಕ್ಷಲಾಲನ ಮಂತ್ರ, ಆಲಿಂಗನ ಮಂತ್ರ, ಬಳಿಕ ದೀನಾನಾಥ ಸತ್ಕಾರ, ಫಲಶ್ರುತಿ.
೧೨೯ನೇ ಅಧ್ಯಾಯ — ದೇವಪೂಜಾ ಫಲವ್ರತ.
೧೩೦ನೇ ಅಧ್ಯಾಯ — ದೀಪದಾನವಿಧಿ.
ರೂಪಲಾವಣ್ಯಕಾಂಕ್ಷಿಗಳು ಮಾಡುವ ವ್ರತವಿದು, ಅಗಸ್ತ್ಯೋಕ್ತಿಯಿಂದ ಇದನ್ನರಿತ ಜಾಂಬವತಿ ಕೃಷ್ಣನಿಗೆ ತಿಳಿಸಿದ್ದು. ವಿಶ್ವಾಮಿತ್ರ ಸೃಷ್ಟಿಯಲ್ಲಾದ ದೇವತೆಗಳು, ಇಂದ್ರನು ಅವರಿಗೆ ಭೂಲೋಕದ ಶಿಲಾಮೂರ್ತಿಗಳಲ್ಲಿ ನೆಲಸಿ ಭೋಗಪಡುವಂತೆ ವಿಧಿಸಿದ್ದು, ಆದ್ದರಿಂ ದೇವಮೂರ್ತಿ ಸಾನ್ನಿಧ್ಯದಲ್ಲಿ ದೀಪಾರಾಧನಾದಿ ಸೇವೆಯಫಲ, ನಿದರ್ಶನಕ್ಕಾಗಿ ವಿದರ್ಭರಾಜಪುತ್ರಿ ಲಲಿತೆಯು ಹಿಂದಿನ ಜನ್ಮದಲ್ಲಿ ಇಲಿಯಾಗಿದ್ದು ನಂದಾದೀಪದ ಬತ್ತಿಯನ್ನು ಅಪಹರಿಸುವ ಸನ್ನಿವೇಶದಲ್ಲಿ ಅದು ಸಾಗದೆ ದೀಪವನ್ನು ಮೀಟಿದಂತಾಗಿ ಪ್ರಜ್ವಲಿಸಿದ್ದು, ಅದರಿಂದ ಈ ಉತ್ತಮ ಜನ್ಮಪ್ರಾಪ್ತಿ, ಆಗಲೂ ನಿತ್ಯವೂ ವಿಷ್ಣು ದೇವಾಲಯದ ದೀಪಾರಾಧನೆಯಲ್ಲಿ ನಿರತೆಯಾದ್ದು, ಸವತಿಯರು ಪ್ರಶ್ನಿಸಲಾಗಿ ತನ್ನ ವೃತ್ತಾಂತವನ್ನೂ, ಈ ವ್ರತ ಮಹಿಮೆಯನ್ನೂ ನಿರೂಪಿಸಿದ್ದು, ಆಶ್ವೀಜ ಬಹುಳ, ಕಾರ್ತಿಕ ಶುದ್ಧ ಈ ಮಾಸದಲ್ಲಿ ದೀಪಾರಾಧನೆಯ ಮಹಾಫಲ, ಉಮೆಯು ದೇವಿಕಾ (ಪಾಪನಾಶಿಸಿ) ನದಿಯ ರೂಪವಾಗಿರುವುದು, ಅದರ ಸ್ನಾನಮಹಿಮೆ, ಪುಣ್ಯಸಂಪಾದನೆಗಾಗಿ ದೀಪಹತ್ತಿಸಬೇಕಾದ ಸ್ಥಳಗಳು.
೧೩೧ನೇ ಅಧ್ಯಾಯ — ವೃಷೋತ್ಸರ್ಗವಿಧಿ.
ಇದು ಗರ್ಗಪ್ರಚೋದಿತವಾದ್ದು, ಈ ವಿಧಿಗೆ ಅರ್ಹವಾದ ಕಾಲ, ಉತ್ಸರ್ಜನ ವೃಷಭದ ಲಕ್ಷಣ, ಅಭ್ಯುದಯ ಕರ್ಮಪೂಜಾ, ಕಲಶಸ್ಥಾಪನೆ, ಅದರಲ್ಲಿ ರುದ್ರಾವಾಹನೆ ಪೂಜೆ, ಅಗ್ನಿ ಪ್ರತಿಷ್ಠಾಪನೆ, ಹೋಮ, ವತ್ಸೀವತ್ಸಪೂಜೆ, ವತ್ಸನ ಕರ್ಣದಲ್ಲಿ ಹೇಳುವ ಮಂತ್ರ, ಪುಷ್ಪದಲ್ಲಿ ಶೂಲ, ಚಿತ್ರಾಕೃತಿ ರಚನೆ, ವತ್ಸಕ್ಕೆ ವಸ್ತ್ರ, ಮಾಲ್ಯಧಾರಣ, ಉತ್ಸರ್ಜನ ಸ್ಥಳ, ಫಲಶ್ರುತಿ, ಅಶ್ವಮೇಧಕ್ಕಿಂತ ಅತಿಶಯ ಫಲಪ್ರಾಪ್ತಿ ವಿಚಾರ.
೧೩೨ನೇ ಅಧ್ಯಾಯ — ಫಾಲ್ಗುಣ ಪೂರ್ಣಿಮೋತ್ಸವ.
ರಘುವಿನ ಪ್ರಾರ್ಥನೆಯಿಂದ ವಸಿಷ್ಠನು ಡೌಂಡಾ ರಾಕ್ಷಸಿಯ ಜನನಾದಿ ವೃತ್ತಾಂತವನ್ನೂ ಆಕೆ ಬಾಲಕರನ್ನು ಪೀಡಿಸುವ ಕಾರಣವನ್ನೂ ಅದರ ಪರಿಹಾರೋಪಾಯವಾದ ಹೋಮವನ್ನೂ ತಿಳಿಸಿದ್ದು, ಈ ಹೋಮಕ್ಕೆ ಹೋಲಿಕಾನಾಮವು ರೂಢಿಗೆ ಬಂದುದು, ಸಾರಭೂತವಾದ್ದರಿಂದ ಆ ಮಾಸಕ್ಕೆ ಫಾಲ್ಗುಣ ಎಂಬ ಹೆಸರು ಬಂದುದು, ಫಾಲ್ಗುಣ ಪೂರ್ಣಿಮಾ ರಾತ್ರಿ ಮಕ್ಕಳ ರಕ್ಷಣಾಕ್ರಮ, ಗುಡಾನ್ನದಾನ, ಚೈತ್ರ ಪ್ರತಿಪತ್ ದಿನ ಹೋಲಿಕಾ ಭಸ್ಮಧಾರಣ, ಅಂಗಳದಲ್ಲಿ ಕಲಶಸ್ಥಾಪನ, ಪೂಜೆ, ಮುತ್ತೈದೆಯರಿಂದ ಯಜಮಾನನಿಗೆ ನಡೆಯಬೇಕಾದ ಸಂಸ್ಕಾರ, ಚಂದನಸಮೇತ ಮಾವಿನ ಹೂವಿನ ಭಕ್ಷಣೆ, ದಾನದಕ್ಷಿಣೆ, ಭೋಜನ, ಫಲಶ್ರುತಿ.
೧೩೩ನೇ ಅಧ್ಯಾಯ — ಆಂದೋಲಕ ವಿಧಿ.
೧೩೪ನೇ ಅಧ್ಯಾಯ — ದಮನಕಾಂದೋಳಕ ರಥಯಾತ್ರಾಮಹೋತ್ಸವ.
ನಾರದರು ಶಿವಲೋಕಕ್ಕೆ ಹೋಗಿ ಮನ್ಮಥನ ವೈಭವಾದಿಗಳನ್ನು ವರ್ಣಿಸಿದ್ದು, ತ್ರಿಮೂರ್ತಿಗಳು ತಮ್ಮ ರಥವೇರಿದ್ದು, ದೇವಿಯರೂ ಹೊರಟದ್ದು, ಎಲ್ಲರಿಗೂ ಮನಃಕ್ಷೋಭೆಯಾದ್ದು, ಆಗ ವಸಂತನಿಗೆ ಮಾಡಿದ ಆಜ್ಞೆ, ಈಗಿನಂತೆ ರಥಯಾತ್ರೆ ನಡೆಸಿದವರಿಗೆ ಫಲನಿರೂಪಣೆ, ರಥನಿರ್ಮಾಣ, ಅಲಂಕಾರ ಕ್ರಮ, ರಥಾಸಪ್ತಮೀ ರಥಾರೋಹಣ, ಗ್ರಾಮಪ್ರದಕ್ಷಿಣ, ರಥಭಂಗಾದಿ ಅರಿಷ್ಠದಲ್ಲಿ ಕರ್ತವ್ಯಶಾಂತಿವಿಧಾನ, ಯಾವ ದೇವರ ರಥೋತ್ಸವಕ್ಕೆ ಯಾವ ತಿಥಿ ಶ್ರೇಷ್ಠವೆಂಬ ವಿಚಾರ.
೧೩೫ನೇ ಅಧ್ಯಾಯ — ಮದನಮಹೋತ್ಸವ.
ಶಿವನ ತಪಸ್ಸು, ಬ್ರಹ್ಮಾದಿಗಳು ಶಿವನನ್ನು ಎಚ್ಚರಗೊಳಿಸಲು ಮನ್ಮಥನನ್ನು ಪ್ರೋತ್ಸಾಹಿಸಿದ್ದು, ಮದನನು ಶಿವನಿಗೆ ಬಾಣಪ್ರಯೋಗ ಮಾಡಿದ್ದು, ಕಾಮದಹನ, ರತಿಯ ಪ್ರಲಾಪ, ಗೌರಿಯು ಶಿವನನ್ನು ಪ್ರಾರ್ಥಿಸಿದ್ದು, ವಸಂತ ಶುಕ್ಲತ್ರಯೋದಶಿಯಲ್ಲಿ ಅಶೋಕ ಸನ್ನಿಧಿಯಲ್ಲಿ ಮದನ ಪೂಜಾವಿಧಾನ, ಪಾಯಸದಾನ, ಭೋಜನ, ಜಾಗರಣ, ದೀಪೋತ್ಸವ, ಈ ವ್ರತದ ಫಲ.
೧೩೬ನೇ ಅಧ್ಯಾಯ — ಭೂತಮಾತೃತ್ಸವ.
ಇದು ಶಾಸ್ತ್ರೋಕ್ತವೇ ಎಂಬ ಸಂಶಯಕ್ಕೆ ಕಾರಣ, ಅದರ ಪೂರ್ವವೃತ್ತಾಂತ ತಿಳಿಸಿದ್ದು, ಶಿವನ ಕಾಮೋದ್ದೀಪನೆ, ಬಲಾತ್ಕಾರದಿಂದ ಭೋಗಿಸಿದ್ದು, ಆಗ ಪಾರ್ವತಿಯಿಂದ ಉತ್ಪತ್ತಿಯಾದ ಸ್ತ್ರೀಯ ಸ್ವರೂಪ, ಶಿವನಿಂದ ಉತ್ಪನ್ನರಾದ ಪುರುಷವ್ಯಕ್ತಿ ರೂಪ, ಅವರನ್ನು ಭೂತಮಾತೃ ಪಂಗಡವಾಗಿ ವಿಂಗಡಿಸಿದ್ದು, ಇವರ ಪೂಜೆಯ ಕಾಲದ ಹಬ್ಬ, ಬೂರಗದ ಮರದ ಬಳಿಗೆ ಉತ್ಸವ, ಬೂರಗದಮರದ ಬುಡದಲ್ಲಿ ಬಲಿ ಸಮರ್ಪಣೆ, ಜ್ಯೇಷ್ಠಶುಕ್ಲದಲ್ಲಿ ರಂಗಸ್ಥಲದಲ್ಲಿ ಕೌಶಲ.
೧೩೭ನೇ ಅಧ್ಯಾಯ — ಶ್ರಾವಣಪೂರ್ಣಿಮಾ ರಕ್ಷಾಬಂಧನವಿಧಿ.
೧೩೮ನೇ ಅಧ್ಯಾಯ — ಮಹಾನವಮೀವ್ರತ.
ಈ ಹೆಸರಿಗೆ ಕಾರಣ, ಆಶ್ವಯುಜನವಮಿಯಲ್ಲಿ ದೇವೀ ಆರಾಧನೆ, ಪ್ರಾಣಿಬಲಿ ಸಂಪ್ರದಾಯ, ಬಲಿ ಪ್ರಾಣಿಗಳಿಗೆ ಸದ್ಗತಿ, ದೇವಿಯ ಪ್ರತಿವರ್ಷ ಮಾಡುವ ದುಷ್ಟದಮನಕ್ರಿಯೆ, ಸಮಸ್ತಗ್ರಾಮ ನಗರಗಳೆಲ್ಲೂ ನವರಾತ್ರಿಪೂಜಾವಿಧಾನ, ಲೋಹಾಭಿಹಾರಿಕ ಕರ್ಮವಿಧಾನ, ಹೋಮ, ಆಯುಧ ಮಂತ್ರಗಳಿಂದ ಪಾಯಸದ ಆಹುತಿಪ್ರದಾನ, ಗಜಾಶ್ವಗಳಿಗೆ ಹೋಮಶೇಷ ವಿನಿಯೋಗ, ನಗರದಲ್ಲಿ ಆಯುಧಗಳ ಮೆರವಣಿಗೆ, ರಾಜಚಿಹ್ನೆಗಳಿಗೆ ಪೂಜೆ, ಬ್ರಹ್ಮಚಾರಿ ಪೂಜೆ, ಪ್ರಾರ್ಥನಾಮಂತ್ರ, ರಾತ್ರಿ ಜಾಗರಣೆ, ಉಷಃಕಾಲದಲ್ಲಿ ಬಲಿಸಮರ್ಪಣೆ, ಮಧ್ಯಾಹ್ನ ಉತ್ಸವ, ಭೂತಬಲಿಯ ಮಂತ್ರ, ಫಲಶ್ರುತಿ.
೧೩೯ನೇ ಅಧ್ಯಾಯ — ಮಹೇಂದ್ರಧ್ವಜ ಮಹೋತ್ಸವ.
ವಸುರಾಜನ ಸ್ವರ್ಗಲೋಕ ಗಮನ, ಇಂದ್ರಜಯಕ್ಕಾಗಿ ಧ್ವಜಸ್ತಂಭ ಸ್ಥಾಪಿಸಿದ್ದನ್ನು ಕಂಡುದು, ಇಂದ್ರನು ಧ್ವಜಪೂಜೆಯನ್ನು ವಿಧಿಸಿದ್ದು, ಧ್ವಜಲಕ್ಷಣ, ಧ್ವಜಸ್ತಂಭದಲ್ಲಿ ಹನ್ನೆರಡು ಪಿಟಿಕಗಳ ರಚನಾವಿಧಿ, ಸ್ತಂಭಸ್ಥಾಪನೆ, ಹೋಮ, ಸಪ್ತಾಹ ಮಹೋತ್ಸವ, ಧ್ವಜವನ್ನು ಸೋಕಬಾರದ ಜಂತುಗಳು, ಸೋಕಿದುದರ ದುಷ್ಫಲ, ಸ್ತಂಭ ಉರುಳಿದ ಫಲ, ಮಧ್ಯೆ ವಿಘ್ನ ಸಂಭವಿಸಿದರೆ ಬಿಡಬೇಕಾದ ಕಾಲ, ಸ್ತಂಭಭಂಗ ಪ್ರಾಯಶ್ಚಿತ್ತ ವಿಧಿ, ವಿಸರ್ಜನಕಾಲ, ಈ ಉತ್ಸವಮಾಡಿದರೆ ಫಲ.
೧೪೦ನೇ ಅಧ್ಯಾಯ — ದೀಪಾಲಿಕೋತ್ಸವ.
ಬಲಿಯ ಪಾತಾಳವಾಸಕ್ಕೆ ಕಾರಣ, ಕಾರ್ತಿಕ ಅಮಾವಾಸ್ಯೆಯಲ್ಲಿ ಬಲಿಯ ಭೂಲೋಕಾಗಮನ, ಚತುರ್ದಶಿಯ ಪ್ರಾತಃ ಕಾಲ ಅಪಾಮಾರ್ಗ ಭ್ರಮಣಮಂತ್ರ, ಯಮತರ್ಪಣ, ದೀಪದಾನ, ದೀಪೋತ್ಸವ ಸ್ಥಳ, ಅಮಾವಾಸ್ಯಾ ಬಲಿರಾಜ್ಯ ಘೋಷಣೆ, ಪ್ರಭುವಿನ ಮೆರವಣಿಗೆ, ನೀರಾಜನ, ಅರ್ಧರಾತ್ರಿಯಲ್ಲಿ ವಾರನಾರಿಯರ ಕಾರ್ಯಕ್ರಮ, ಬ್ರಾಹ್ಮಣ ಸುವಾಸಿನೀ ಪೂಜೆ, ಸಾಮಂತ ಸನ್ಮಾನ, ಮಲ್ಲಯುದ್ಧ ದರ್ಶನ, ಸೇನಾಕೌಶಲ ವೀಕ್ಷಣ, ಮಾರ್ಗಪಾಲೀ ಕಲಶನಿಕ್ಷೇಪ, ಸೇನಾವಾಹನಾದಿ ಪೂಜೆ, ಮಾರ್ಗಪಾಲಿಯ ಕೆಳಗೆ ಗಮಿಸುವುದು, ರಾತ್ರಿ ಬಲೀಂದ್ರಪೂಜೆ, ಬಲೀಂದ್ರಾಕೃತಿರಚನೆ, ಪ್ರಾರ್ಥನಾಮಂತ್ರ, ಸಾಮಾನ್ಯರ ಮನೆಯ ಬಲಿಂದ್ರಪೂಜೆ, ಕೌಮುದೀ ಜಾಗರವೆಂಬ ಹೆಸರಿಗೆ ಕಾರಣ.
೧೪೧ನೇ ಅಧ್ಯಾಯ — ನವಗ್ರಹ ಲಕ್ಷಹೋಮವಿಧಿ.
ಹೋಮಾಂಗವಾಗಿ ವೇದಿಕೆಯಲ್ಲಿ ಗ್ರಹಾರಾಧನೆ, ಲಕ್ಷಹೋಮಕ್ಕೆ ಕುಂಡದ ಪರಿಮಾಣ, ಗ್ರಹಗಳ ಪ್ರತಿಮೆಯ ನಿರ್ಮಾಣಾರ್ಹ ವಸ್ತು, ಪ್ರತಿಯೊಂದು ಗ್ರಹಕ್ಕೂ ನಿರ್ದಿಷ್ಟ ದಿಕ್ಕು, ಗ್ರಹಗಳ ವರ್ಣ, ಅವರಿಗೆ ಪ್ರಿಯವಾದ ವಸ್ತು, ಪುಷ್ಪ, ಸಮಿತ್ತು, ಬಲಿ ದ್ರವ್ಯಾದಿಗಳು, ಯಜಮಾನನ ಶುದ್ಧತೆಗಾಗಿ ಕಲಶ, ಅದಕ್ಕೆ ಹಾಕುವ ವಸ್ತು, ಮಾರ್ಜನಮಂತ್ರ, ಗ್ರಹಾವಾಹನ ಮಂತ್ರ, ಆಹುತಿ ಸಂಖ್ಯೆ, ಗ್ರಹಪ್ರೀತ್ಯರ್ಥವಾದ ದಾನವಸ್ತುಗಳು, ಪ್ರಾರ್ಥನಾಮಂತ್ರ, ಅಯುತಹೋಮಾರ್ಹವಾದ ಸಂದರ್ಭ, ಲಕ್ಷಹೋಮಾರ್ಹ ಸಂದರ್ಭ, ಆಹುತಿ ಪ್ರದಾನ ಕ್ರಮ, ಋತ್ವಿಜರ ಸಂಖ್ಯೆ ದಕ್ಷಿಣಾದಿಗಳು, ಲೋಪಸಂಭವಿಸುವುದರಲ್ಲಿ ಹಾನಿ, ಸಾಂಗವಾಗಿ ನೆರವೇರಿದರೆ ಫಲಪ್ರಾಪ್ತಿ ವಿಚಾರ.
೧೪೨ನೇ ಅಧ್ಯಾಯ — ಕೋಟಿಹೋಮವಿಧಿ
ಸಂವರಣ ರಾಜನಿಗೆ ಸನತ್ಕುಮಾರನು ಈ ವಿಧಿಯನ್ನು ತಿಳಿಸುವುದು, ಈ ಕರ್ಮಕ್ಕೆ ಅರ್ಹವಾದ ಸ್ಥಳ, ಋತಿಗ್ವರಣ, ಯಾಗಶಾಳಾ ಪ್ರವೇಶ, ಮಂಟಪ ಪ್ರಮಾಣ, ಕುಂಡ ವೇದಿ ಇವುಗಳ ಪ್ರಮಾಣ, ಪುಣ್ಯಾಹ, ದೇವತಾವಾಹನ ದಿಕ್ಕುಗಳು, ಅಗ್ನಿ ಪ್ರತಿಷ್ಠೆ, ಧ್ಯಾನಶ್ಲೋಕ, ನಾಲ್ಕು ವೇದಮಂತ್ರ ಹೋಮಕ್ಕೆ ನಿರ್ದಿಷ್ಟ ದಿಕ್ಕು, ಬ್ರಹ್ಮನ ನೇಮಕ, ಸಹಸ್ರಾಹುತಿಗೊಂದು ಪೂರ್ಣಾಹುತಿ, ಇದರಲ್ಲಿ ಸುಲಭಸಾಧ್ಯ ಕ್ರಮ, ಹಲವು ಕುಂಡ, ಹಲವರು ಋತ್ವಿಜರು ಇದ್ದರೂ ಕರ್ಮ ಒಂದೇ ಎಂಬ ನಿರ್ಣಯ, ಬೇಗ ಮುಗಿಸುವುದರ ಆನುಕೂಲ್ಯ, ಋತ್ವಿಕ್ ಪುರೋಹಿತರಿಗೆ ಧಾರಾಳವಾಗಿ ಸಂಭಾವನೆ, ಅವಭೃಥಸ್ನಾನ, ಫಲಶ್ರುತಿ.
೧೪೩ನೇ ಅಧ್ಯಾಯ — ಮಹಾಶಾಂತಿವಿಧಿ.
ಇದನ್ನು ನಡೆಸಬೇಕಾಗುವ ಸಂದರ್ಭಗಳು, ಇದಕ್ಕೆ ಅರ್ಹರಾದ ಮಂತ್ರವೇತ್ತರು, ಈ ಕಾರ್ಯಕ್ಕೆ ಮಂಟಪ ವೇದೀ ಕುಂಡ ಇತ್ಯಾದಿ ರಚನೆ, ಕೋಣಗಳಲ್ಲಿ ಕಲಶಸ್ಥಾಪನೆ, ಈ ಕಲಶಕ್ಕೆ ದ್ರವ್ಯಗಳು, ಆವಾಹನಮಂತ್ರ, ಹೋಮಸಾಮಗ್ರಿಗಳು, ಹವಿರ್ದ್ರವ್ಯಗಳು, ದೇವತೆಗಳಿಗೆ ಆಹುತಿಗಳು, ಬಳಿಕ ಕಲಶೋದಕಾಭಿಷೇಕ, ಬಲಿಪ್ರದಾನ, ಸಾದ್ಗುಣ್ಯಕ್ಕಾಗಿ ದಾನಗಳು, ಫಲಶ್ರುತಿ.
೧೪೪ನೇ ಅಧ್ಯಾಯ — ಗಣನಾಥಶಾಂತಿವಿಧಿ.
೧೪೫ನೇ ಅಧ್ಯಾಯ — ನಕ್ಷತ್ರಹೋಮವಿಧಿ.
೧೪೬ನೇ ಅಧ್ಯಾಯ — ಅಪರಾಧಶತವ್ರತ.
ಶತಾಪರಾಧಗಳ ನಿರೂಪಣ, ಇವು ಸರ್ವರಿಗೂ ಸಂಭವಿಸಲು ಅವಕಾಶವಿರುವಿಕೆ, ಅದರ ಪರಿಹಾರಕ್ಕಾಗಿ ಈ ವ್ರತಾಚರಣೆ, ಈ ವ್ರತದಲ್ಲಿ ಅಪರಾಜಿತ ಧ್ವಜಪೂಜೆ, ಅದರ ಸುತ್ತಲೂ ಬ್ರಹ್ಮಪಂಚಕಸ್ಥಾಪನೆ, ಸತ್ಯೇಶರೂಪವರ್ಣನೆ, ಅಷಟಶಕ್ತಿ ಸಮೇತಾವಾಹನೆ, ಮಾರ್ಗಶಿರದಲ್ಲಿ ಎರಡು ಪಕ್ಷದ ಅಷ್ಟಮಿಯಲ್ಲೂ ವ್ರತಾರಂಭ, ಸ್ವರ್ಣಪ್ರತಿಮಾಸ್ಥಾಪನೆ, ಪೂಜಾವಿಧಾನ, ಫಲಶ್ರುತಿ.
೧೪೭ನೇ ಅಧ್ಯಾಯ — ಕಾಂಚನಪುರೀವ್ರತ.
ಮಹಾಪಾಪಪರಿಹಾರಾರ್ಥವಾದ ಈ ವ್ರತಕ್ಕೆ ಅರ್ಹವಾದ ದಿನಗಳು, ವ್ರತಿಗೆ ವಿಧ್ಯುಕ್ತರೀತಿ ಸ್ನಾನಾರ್ಥವಾಗಿ ಜಲಪ್ರಾರ್ಥನಾಮಂತ್ರ, ಶಂಖದಲ್ಲಿ ಜಲಪ್ರಾಶನ, ವೇದೀರಚನೆ, ಗಣಪರಿಪೂಜೆ, ಪ್ರತಿಮಾಸ್ಥಾಪನೆ, ಕ್ಷೀರೋದಧಿರೂಪ ಕಲಶಸ್ಥಾಪನ, ಕಲಶದ ಮೇಲೆ ಕಾಂಚನಪುರೀಸ್ಥಾಪನ, ಅಭಿಷೇಕ, ಅಂಗಪೂಜಾನಾಮ, ಅಂಗದೇವತಾಪೂಜಾ, ಷೋಡಶ ದಂಪತಿಪೂಜೆ, ಯಜಮಾನನ ನೇತ್ರಕ್ಕೆ ವಸ್ತ್ರಾವರಣ, ಮಂತ್ರಪೂರ್ವಕವಾಗಿ ಬಿಚ್ಚಿ ಕಾಂಚನಪುರೀವೀಕ್ಷಣ, ಅರ್ಘ್ಯಪ್ರದಾನ, ಜಾಗರಣ.
೧೪೮ನೇ ಅಧ್ಯಾಯ — ಕನ್ಯಾಪ್ರದಾನ.
೧೪೯ನೇ ಅಧ್ಯಾಯ — ಬ್ರಾಹ್ಮಣಶುಶ್ರೂಷಾವಿಧಿ.
೧೫೦ನೇ ಅಧ್ಯಾಯ — ವೃಷದಾನವಿಧಿ.
೧೫೧ನೇ ಅಧ್ಯಾಯ — ಪ್ರತ್ಯಕ್ಷಧೇನುದಾನವ್ರತ ವಿಧಿವರ್ಣನಂ.
ದಾನದ ಮಹಿಮೆಯನ್ನು ತಿಳಿಸು ಎಂದು ಪ್ರಶ್ನಿಸಿದ ಯುಧಿಷ್ಠಿರನಿಗೆ ಕೃಷ್ಣನು ಉತ್ತರ ಕೊಡುವನಾಗಿ ಸಂಪಾದಿಸಿದ ದ್ರವ್ಯದ ಸದ್ವಿನಿಯೋಗ ಕ್ರಮದಲ್ಲಿ ವ್ಯಾಸ ಮನು ಮುಂತಾದವರಿಂದ ಉಕ್ತವಾದ್ದನ್ನು ತಿಳಿಸುವುದು, ವ್ರತಾಂಗವಾಗಿ ಈಶ್ವರ ಪ್ರೀತ್ಯರ್ಥವೆನಿಸಿ ದಾನಕೊಡುವ ರೂಢಿ, ಗೋದಾನ, ಭೂದಾನ, ವಿದ್ಯಾದಾನ ಇವು ಮೂರಕ್ಕೂ ಅತಿದಾನವೆಂದು ವ್ಯವಹರಿಸುವಿಕೆ, ದಾನಮಾಡಬೇಕಾದ ಗೋವಿನ ಲಕ್ಷಣ, ಪ್ರತೀಗೃಹೀತೃವಿಗಿರಬೇಕಾದ ಗುಣ, ದಾನಕೊಡುವ ಗೋವಿಗೆ ಮಾಡಬೇಕಾದ ಅಲಂಕಾರ, ದಕ್ಷಿಣಾದ್ರವ್ಯಸಮೇತ ಪುಚ್ಛವನ್ನು ಹಿಡಿದು ದಾನಕೊಡುವಿಕೆ, ಗಜಾದಿಗಳ ದಾನಮಾಡುವಾಗ ಉಕ್ತವಾದ ಸ್ಪರ್ಶಾಂಗಳು, ಪ್ರಾರ್ಥನಾ ಮಂತ್ರ, ಗೋದಾನದ ಮಹಿಮೆ, ದಾತೃವಿಗೆ ಉಂಟಾಗುವ ಫಲ.
೧೫೨ನೇ ಅಧ್ಯಾಯ — ತಿಲಧೇನುದಾನ ವ್ರತ.