ಭವಿಷ್ಯಮಹಾಪುರಾಣಂ – ಭಾಗ – ೧೦: ಉತ್ತರಪರ್ವ – ಪ್ರಥಮ ಸಂಪುಟ
ಆರಂಭಿಕ ಪುಟ
ಅನುವಾದಕರು: ಶ್ರೀ ಚನ್ನಕೇಶವಯ್ಯ ಬಿ.
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ — ವ್ಯಾಸಮಹರ್ಷಿ, ಧರ್ಮರಾಜ ಇವರ ಸಂಭಾಷಣೆ
೨ನೇ ಅಧ್ಯಾಯ — ಕೃಷ್ಣ, ಯುಧಿಷ್ಠಿರ ಇವರ ಸಂವಾದ
೩ನೇ ಅಧ್ಯಾಯ — ಭಗವಂತನು ಮಾಯಾಸ್ವರೂಪವನ್ನು ತೋರಿಸಿದುದು
೪ನೇ ಅಧ್ಯಾಯ — ಜನನ, ಸಂಸಾರ ಇವುಗಳಿಂದ ಸಂಭವಿಸುವ ದೋಷಗಳ ವಿವರ
೫ನೇ ಅಧ್ಯಾಯ — ಅಧರ್ಮ, ಪಾಪಭೇದಗಳು ಇವರ ವಿವರಣೆ
೬ನೇ ಅಧ್ಯಾಯ — ಕರ್ಮಕ್ಕೆ ತಕ್ಕ ಫಲಪ್ರಾಪ್ತಿ ವಿಧಾಣ
೭ನೇ ಅಧ್ಯಾಯ — ಶಕಟ ವ್ರತಮಾಹಾತ್ಮ್ಯ ವರ್ಣನೆ
೮ನೇ ಅಧ್ಯಾಯ — ತಿಲಕ ವ್ರತಮಾಹಾತ್ಮ್ಯ ವರ್ಣನೆ
೯ನೇ ಅಧ್ಯಾಯ — ಅಶೋಕ ವ್ರತಮಾಹಾತ್ಮ್ಯ ವರ್ಣನೆ
೧೦ನೇ ಅಧ್ಯಾಯ — ಕರವೀರ ವ್ರತಮಾಹಾತ್ಮ್ಯವರ್ಣನೆ
೧೧ನೇ ಅಧ್ಯಾಯ — ಕೋಕಿಲಾ ವ್ರತಮಾಹಾತ್ಮ್ಯ ವರ್ಣನೆ
೧೨ನೇ ಅಧ್ಯಾಯ — ಬೃಹತ್ತಪೋ ವ್ರತಮಾಹಾತ್ಮ್ಯ ವರ್ಣನೆ
೧೩ನೇ ಅಧ್ಯಾಯ — ಭದ್ರೋಪವಾಸ ವ್ರತಮಾಹಾತ್ಮ್ಯ
ಭದ್ರದ ನಾಲ್ಕು ಪ್ರಭೇದಗಳು, ಅವುಗಳ ಹೆಸರು ಮತ್ತು ವರ್ಷದಲ್ಲಿ ಅವುಗಳ ಸ್ಥಾನ ಮತ್ತು ಕಾಲ, ಮಾರ್ಗಶಿರ ಮಾಸದಿಂದ ಆರಂಭ, ಪಾಡ್ಯಮಿ ಏಕಭುಕ್ತ, ಬ್ರಹ್ಮಚರ್ಯನಿಷ್ಠೆ, ದ್ವಿತೀಯೆ ಹುಲ್ಲಿ ದಂತಧಾವನ ಪೂರ್ವಕ ವಿಧ್ಯುಕ್ತಸ್ನಾನ, ನಿತ್ಯಕರ್ಮಾ ನಂತರ ಕೃಷ್ಣಪೂಜೆ, ಚಂದ್ರದರ್ಶನಾನಂತರಸ್ನಾನ, ಪೂಜೆ, ಚಂದ್ರಾರ್ಘ್ಯ, ಲವಣರಹಿತ ಆಹಾರ, ಭೂಶಯನ, ತೃತೀಯಾ ದಿವಸ ಇದೇ ಕ್ರಮದಪೂಜೆ, ಕಂದಮೂಲ ಫಲಾಹಾರ, ಚತುರ್ಥೀದಿನ ಕ್ಷೀರಾನ್ನಹಾರ, ಪಂಚಮಿಯದಿನ ಘೃತಗುಡಕೃಶರಾಹಾರ, ಈರೀತಿ ಸೇವಿಸಿ ಷಷ್ಠೀದಿನ ಸಂತರ್ಪಣೆ, ಈ ರೀತಿ ನಾಲ್ಕು ಭದ್ರಗಳಲ್ಲೂ ಆಚರಣೆ, ಈ ವ್ರತದ ವಿಶೇಷಫಲ, ಈ ವ್ರತಮಾಡಿದ ಸಂಜಯ ವೈಶ್ಯನಿಗೆ ನಾರದ ಪರ್ವತ ಇವರ ವರ್ತನೆಯಿಂದ ವರ, ಶಾಪಾದಿಗಳೊದಗಿ ಸ್ವರ್ಣಷ್ಠೀವೀ ಪುತ್ರಪ್ರಾಪ್ತಿ, ಪುತ್ರ ಮೃತಿ, ಪುನಃ ಪುತ್ರನು ಬದುಕಿದುದು ಮುಂತಾದ ನಿದರ್ಶನ ವಿಚಾರಗಳು.
೧೪ನೇ ಅಧ್ಯಾಯ — ಯಮದ್ವಿತೀಯಾ ವ್ರತಮಾಹಾತ್ಮ್ಯ
೧೫ನೇ ಅಧ್ಯಾಯ — ಅಶೂನ್ಯಶಯನ ವ್ರತಮಾಹಾತ್ಮ್ಯ ವಿಹಾರ
೧೬ನೇ ಅಧ್ಯಾಯ — ಮಧೂಕತೃತೀಯಾ ವ್ರತಮಾಹಾತ್ಮ್ಯ ವರ್ಣನೆ
೧೭ನೇ ಅಧ್ಯಾಯ — ಮೇಘಪಾಲೀ ತೃತೀಯಾ ವ್ರತಮಾಹಾತ್ಮ್ಯ ವರ್ಣನೆ
೧೮ನೇ ಅಧ್ಯಾಯ — ರಂಭಾ ತೃತೀಯಾ ವ್ರತಮಾಹಾತ್ಮ್ಯ
೧೯ನೇ ಅಧ್ಯಾಯ — ಗೋಷ್ಪದ ತೃತೀಯಾ ವ್ರತಮಾಹಾತ್ಮ್ಯ
ಭಾದ್ರಪದ ಶುಕ್ಲ ತೃತೀಯಾ ಚತುರ್ಥೀ ಉಪವಾಸ, ಗೋವಿಗೆ ಆಭರಣಗಳಿಂದ ಅಲಂಕರಿಸುವುದು, ಸಂಪೂರ್ಣ ಗೋಗ್ರಾಸ ಸಮರ್ಪಣೆ, ಗೋರಸಪೂಜೆ, ತಾನು ತೈಲ ಲವಣ ವರ್ಜಿತ ಅಪಕ್ವಾಹಾರ ಸೇವನೆ, ಗೋವುಗಳ ನಿರ್ಗಮನ ಆಗಮನ ಕಾಲಗಳಲ್ಲಿ ಪಾದದಲ್ಲಿ ಅರ್ಘ್ಯಪ್ರದಾನ, ಅರ್ಘ್ಯಮಂತ್ರ, ಪಂಚಮೀದಿನ ಭೋಜನ, ಭೂಶಯನ, ಮಾರನೆಯದಿನ ಸ್ವರ್ಣದಗೋಪಾದ ದಾನ, ಗೋವರ್ಧನ ಪೂಜೆ, ಫಲಶ್ರುತಿ
೨೦ನೇ ಅಧ್ಯಾಯ — ಹರಕಾಲೀ ತೃತೀಯಾ ವ್ರತಮಾಹಾತ್ಮ್ಯ
೨೧ನೇ ಅಧ್ಯಾಯ — ಲಲಿತಾ ತೃತೀಯಾ ವ್ರತಮಾಹಾತ್ಮ್ಯ
ತನ್ನ ಭಕ್ತೆಯಾದ ಸ್ತ್ರೀಗೆ ಸೌಭಾಗ್ಯಹೇತುವಾದ ವ್ರತವನ್ನು ತಿಳಿಸೆಂದು ಪಾರ್ವತಿಯು ಕೇಳಿದ್ದಕ್ಕೆ ಶಿವನು ನಿರೂಪಿಸಿದ ವ್ರತವಿಧಾನ, ಮಾಘಶುಕ್ಲ ತೃತೀಯಾದಿನ ದಂತಧಾವನ ಬಿಲ್ವಾಮಲಕಾದಿ ತೈಲಲೇಪನ, ಸ್ನಾನ, ಗೌರೀಪೂಜೆ, ತಾಮ್ರಪಾತ್ರಜಲದಲ್ಲಿ ಈಶಾನೀನಾಮ ಪೂರ್ವಕ ಆವಾಹನೆ, ಆ ಕಲಶೋದಕ ಸ್ನಾನ, ಪ್ರಾರ್ಥನಾಮಂತ್ರ, ಕುಶೋದಕಪ್ರಾಶನ, ಭೂಶಯನ, ಮಾರನೇದಿನ ಸ್ನಾನ, ಪೂಜೆ, ಇದೇ ರೀತಿ ಹನ್ನೆರಡು ತಿಂಗಳಲ್ಲೂ ಪೂಜೆಗೆ ಉಕ್ತವಾಗುವ ನಾಮಗಳು, ಪ್ರಾಶನ ದ್ರವ್ಯ, ದಾನಗಳು, ಕೊನೆಯಸಲ ದಂಪತಿಪೂಜೆ, ವಸ್ತ್ರಪ್ರದಾನ, ಫಲಶ್ರುತಿ.
೨೨ನೇ ಅಧ್ಯಾಯ — ಅವಿಯೋಗ ತೃತೀಯಾ ವ್ರತಮಾಹಾತ್ಮ್ಯ
ದಾಕ್ಷಾಯಿಣಿಯು ಪುನಃ ಉಮೆಯಾಗಿ ಜನಿಸಿ ಶಿವನನ್ನು ವರಿಸಿ ಅರುಂಧತಿ ವಸಿಷ್ಠರ ಮಾತಿನಂತೆ ಆಚರಿಸಿದವ್ರತವಿದು. ಮಾರ್ಗ ಶುಕ್ಲ ದ್ವಿತೀಯಾನಕ್ತ, ಪಾಯಸಾಹಾರ, ಮಾರನೆಯದಿನ ವಿಧಿಪೂರ್ವಕ ದಂತಧಾಅನ, ಅಕ್ಕಿಹಿಟ್ಟಿನಿಂದ ಗೌರೀಶಂಕರ ಪ್ರತಿಮಾ ರಚಿಸಿ ಪೂಜೆ, ಪಾತ್ರಸಹಿತ ದಾನ, ಭೋಜನ, ಈ ರೀತಿ ಪ್ರತಿ ಮಾಸದಲ್ಲಿ ಆಚರಣೆ, ಹನ್ನೆರಡು ತಿಂಗಳುಗಳಲ್ಲಿ ಉಕ್ತವಾಗುವ ನಾಮ, ಪ್ರಾಶನ ದ್ರವ್ಯ, ಉಕ್ತವಾದ ಪುಷ್ಪ, ಕೊನೆಯಲ್ಲಿ ಅಭಿಷೇಕ ನೈವೇದ್ಯ, ಗೃಹಮಧ್ಯೆ ಮಂಡಲ ಅಲ್ಲಿ ದಂಪತಿ ಭೋಜನ, ಫಲಶ್ರುತಿ.
೨೩ನೇ ಅಧ್ಯಾಯ — ಉಮಾಮಹೇಶ್ವರ ವ್ರತಮಾಹಾತ್ಮ್ಯ
ಮಾರ್ಗಶಿರ ಶುಕ್ಲ ತೃತೀಯಾದಿನ ಉಪವಾಸ, ದೇವೀಪೂಜೆ, ಮರುದಿನ ನದೀಸ್ನಾನ, ಪ್ರಾರ್ಥನಾಮಂತ್ರ, ಮನೆಗೆ ಬಂದು ದೇವೀಪೂಜೆ, ಘಾತಪಕ್ವನೈವೇದ್ಯ, ಪಂಚಗವ್ಯಪ್ರಾಶನ, ಇದೇ ರೀತಿ ಹನ್ನೆರಡು ತಿಂಗಳೂ ಮಾಡಿ ಕೊನೆಯಲ್ಲಿ ಬೆಳ್ಳಿ ಭಂಗಾರಗಳಿಂದ ಶಿವ ಗೌರೀ ಪ್ರತಿಮೆ, ಬೆಳ್ಳಿ ವೃಷಭ ಪ್ರತಿಮೆ ಮಾಡಿಸಿ ಪೂಜೆ, ಪ್ರಾರ್ಥನಾಮಂತ್ರ, ದಾನ, ಫಲಶ್ರುತಿ.
೨೪ನೇ ಅಧ್ಯಾಯ — ರಂಭಾ ವ್ರತಮಾಹಾತ್ಮ್ಯ
ಮಾರ್ಗಶಿರ ಶುಕ್ಲ ತೃತೀಯಾ ಉಪವಾಸ, ದೇವೀಪೂಜೆ, ದರ್ಭೋದಕ ಪ್ರಾಶನ, ಮಾರನೇದಿನ ಪಾರಣೆ, ಬ್ರಾಹ್ಮಣಭೋಜನ, ಸುವರ್ಣದಾನ, ಲವಣದಾನ, ಹೀಗೆಯೇ ಹನ್ನೆರಡು ತಿಂಗಳ ಆಚರಣೆ, ಆ ಮಾಸಗಳಿಗೆ ಉಕ್ತವಾದ ದೇವೀ ನಾಮ, ಪ್ರಾಶನ ದ್ರವ್ಯ, ಕೊನೆಯಸಲ ಭಂಗಾರದ ಪ್ರತಿಮಾ ರಚನೆ, ಪೂಜಾ ನೈವೇದ್ಯಾದಿಗಳು, ದಾನ, ರಂಭಾ ವ್ರತವೆಂದು ಹೆಸರು ಬರಲು ಕಾರಣ, ಫಲಶ್ರುತಿ.
೨೫ನೇ ಅಧ್ಯಾಯ — ಸೌಭಾಗ್ಯಾಷ್ಟಕ ತೃತೀಯಾ (ಸೌಭಾಗ್ಯಶಯನ) ವ್ರತಮಾಹಾತ್ಮ್ಯ
ಲೋಕದಹನಕಾಲದಲ್ಲಿ ಲೋಕಸೌಭಾಗ್ಯವು ವಿಷ್ಣು ವಕ್ಷಸ್ಥಳದಲ್ಲಿ ನೆಲಸಿದ್ದು, ವಿಷ್ಣು ಬ್ರಹ್ಮ ಇವರಿಗೆ ಸ್ವರ್ಧೆಹುಟ್ಟಿದಾಗ ಆ ಸೌಭಾಗ್ಯವು ಜಲರೂಪದಿಂದ ಹೊರಟದ್ದು, ದಕ್ಷನು ಅದನ್ನು ಪಾನಮಾಡಲು ಯತ್ನಿಸಿದ್ದು, ಅದು ಪೂರ್ಣವಾಗಿ ಅವನಿಗೆ ಸಿಕ್ಕದೆ ಕೆಳಗೆ ಬಿದ್ದು ಎಂಟು ಭಾಗವಾದ್ದು, ಆ ವಸ್ತುಗಳೇ ಸೌಭಾಗ್ಯಾಷ್ಟಕವಾದ್ದು, ದಕ್ಷನು ಪಾನಮಾಡಿದ ಅಂಶದಿಂದ ಸತಿಯ ಉತ್ಪತ್ತಿ, ಆಕೆಗೆ ಲಲಿತಾ ಎಂಬ ನಾಮಾಂತರವುಂಟಾದ್ದು, ಚೈತ್ರ ಶುಕ್ಲ ತೃತೀಯಾದಿನ ಶಿವ ಗೌರೀ ಪ್ರತಿಮೆಗೆ ಅಭ್ಯಂಗ, ಪಾಣಿಗ್ರಹಣ, ಪೂಜೆ, ಅಂಗಪೂಜೆಗೆ ನಾಮಗಳು, ಅಷ್ಟ ನೈವೇದ್ಯ, ಗೋಶೃಂಗಜಲ ಪ್ರಾಶನ, ಮಾರನೆ ದಿನ ದಂಪತಿ ಪೂಜೆ, ಇದೇ ರೀತಿ ಹನ್ನೆರಡು ತಿಂಗಳಲ್ಲೂ ಹೇಳಬೇಕಾದ ನಾಮಗಳು, ಪ್ರಾಶನದ್ರವ್ಯ, ಭಂಗಾರದ ಪಾದದಾನ, ವರ್ಷಾಂತ್ಯದಲ್ಲಿ ಸ್ವರ್ಣರಚಿತ ಮೂರ್ತಿ ಶಯ್ಯಾ ಸಮೇತ ಮಂಚ ಇವುಗಳ ದಾನ, ಇದನ್ನು ಆಚರಿಸಿದ ಮಹನೀಯರ ನಿದರ್ಶನ.
೨೬ನೇ ಅಧ್ಯಾಯ — ಅನಂತ ತೃತೀಯಾ ಮತ್ತು ರಸಕಲಾಣಿನೀ ವ್ರತಮಾಹಾತ್ಮ್ಯ
ಭಾದ್ರಪದ, ವೈಶಾಖ, ಮಾರ್ಗಶಿರ ಶುಕ್ಲ ತೃತೀಯೆಗಳಲ್ಲಿ ಸರ್ಷಪಸ್ನಾನ, ತಿಲಕಧಾರಣ, ಪೀತವಸ್ತ್ರಧಾರಣ, ದೇವೀಪೂಜಾ, ಅವಯವ ಪೂಜಾನಾಮಗಳು, ದ್ವಾದಶದಳ ಪದ್ಮರಚನೆ, ದಳದಲ್ಲಿ ಸ್ಥಾಪಿಸುವ ದೇವತೆಗಳು, ಕರ್ಣಿಕೆಯಲ್ಲಿ ದೇವೀ ಆವಾಹನ, ಪೂಜೆ, ಸುವಾಸಿನೀ ಪೂಜೆ, ಪ್ರತಿ ಮಾಸದಲ್ಲಿ ಪೂಜಿಸುವ ಪುಷ್ಪಗಳು, ಪ್ರಾಶನದ್ರವ್ಯ, ದಂಪತಿಪೂಜೆ, ವಸ್ತ್ರದಾನ, ಸುವಾಸಿನಿಗೆ ಸ್ವರ್ಣಕಮಲಸೌಭಾಗ್ಯಾಷ್ಟಕದದಾನ. ಮಾಘ ಶುಕ್ಲ ತೃತೀಯಾದಿನ ಕ್ಷೀರಮಿಶ್ರ ತೈಲಲೇಪನ, ಸ್ನಾನ, ದೇವೀಪೂಜೆ, ಅಭಿಷೇಕ, ಪಾದಾದಿ ಅವಯವ ಪೂಜಾ ನಾಮಗಳು, ವ್ರತಸಮರ್ಪಣನಾಮ, ಇದೇ ರೀತಿ ಪ್ರತಿ ಮಾಸದಲ್ಲಿ ಆಚರಣ, ಭಾಕ್ಷ್ಯಪಾತ್ರದಾನ, ವರ್ಜ್ಯಆಹಾರ, ಕೊನೆಯಸಲ ಸಕ್ಕರೆ ಕಮುಂಡಲುದಾನ, ಗೋಮಿಥುನದಾನ.
೨೭ನೇ ಅಧ್ಯಾಯ — ಆರ್ದ್ರಾನಂದಕರೀ ತೃತೀಯಾ ವ್ರತಮಾಹಾತ್ಮ್ಯ
ಶುಕ್ಲ ತೃತೀಯೆಯಲ್ಲಿ ಪೂರ್ವಾಷಾಢ, ರೋಹಿಣಿ, ಮೃಗಶಿರ, ಇವುಗಳಲ್ಲಿ ಯಾವ ಒಂದು ನಕ್ಷತ್ರಯುತವಾಗಿ ಬಂದಾಗ ವ್ರತ ಪ್ರಾರಂಭಿಸಬಹುದು, ಇಲ್ಲವೆ ಮಾರ್ಗಶಿರದಿಂದ ಆರಂಭಿಸಬಹುದು, ವ್ರತಿಯು ದರ್ಭೋದಕ ಗಂಧೋದಕದಿಂದ ಸ್ನಾನ, ತಿಲಕ ಗಂಧಾನುಲೇಪನ ಮಾಡಿಕೊಂಡು ಶಿವ ಭವಾನೀದೇವೀ ಪೂಜೆ, ಅಂಗಪೂಜೆಯಲ್ಲಿ ಹೇಳಬೇಕಾದ ನಾಮ, ಹೀಗೆಯೇ ಹನ್ನೆರಡು ತಿಂಗಳ ತೃತೀಯೆಯಲ್ಲೂ ಪೂಜೆ, ಪ್ರಾಶನದ್ರವ್ಯ, ವರ್ಷಾಂತ್ಯದಲ್ಲಿ ಮಾಡಬೇಕಾದ ದಾನ, ಫಲಶ್ರುತಿ.
೨೮ನೇ ಅಧ್ಯಾಯ — ಚೈತ್ರ ಭಾದ್ರಪದ ಮಾಘ ತೃತೀಯಾ ವ್ರತಮಾಹಾತ್ಮ್ಯ
ಪಾರ್ವತಿಯ ದಾಸಿಯಾದ ಜಯೆಯು ಋಷಿಕನ್ನಿಕೆಯರ ಪ್ರಶ್ನೆಗೆ ಉತ್ತರವಾಗಿ ನಿರೂಪಿಸಿದ ವ್ರತವಿದು, ಆ ದಿನ ಸ್ನಾನ ಸಿಂಧೂರ ತಿಲಕಧಾರಣ, ಮಂಟಪ ಮೇಲ್ಕಟ್ಟು ಮುಂತಾದ ಶೃಂಗಾರ, ಪೂರ್ಣಕಲಶ ಸ್ಥಾಪನೆ, ಸಮೀಪದಲ್ಲಿ ಪ್ರತಿಮಾ ಸ್ಥಾಪನ, ಅಗ್ನಿಕುಂಡ ರಚನೆ, ದೇವಿಗೆ ಅಷ್ಟಪುಷ್ಪಾರ್ಚನೆ, ಧೂಪ, ನಿವೇದನ, ದೇವಿಯಮುಂದೆ ರತ್ನದಪಾದಪೀಠ, ಶಾಕಾದಿಫಲವಸ್ತು, ಶೂರ್ಪಾದಿ ಉಪಕರಣ, ಅಂಜನ, ಶಲಾಕೆ, ಕನ್ನಡಿ ಇತ್ಯಾದಿ ಸಮರ್ಪಣೆ, ಪ್ರತಿಯಾಮದ ಪೂಜೆ, ಕನ್ನೆಯರು ಹೊಸ ಕುಂಭೋಧಕಸ್ನಾನಮಾಡಿ ಪೂಜೆ, ಪ್ರತಿಯಾಮದಲ್ಲೂ ಸ್ನಾನಮಾಡಿ ಒದ್ದೆಯಲ್ಲೇ ಕುಳಿತು ದೇವೀಧ್ಯಾನ, ಜಾಗರಣೆ, ಗಾಯನ ನರ್ತನಾದಿಗಳು ಸುವಾಸಿನೀ ಪೂಜೆ, ಮಾರನೆದಿನ ಪುನಃ ಪೂಜೆ, ಉಪ್ಪು ಬೆಲ್ಲದ ತುಲಾಭಾರ,ನಿವೇದನ ದ್ರವ್ಯಗಳ ದಾನ, ಗೋಮೂತ್ರ ಪ್ರಾಶನ, ಮಾಘದಲ್ಲಿ ಯವತೃಣ ಕುಂದಪುಷ್ಪಗಳ ತುಲಾಭಾರ, ಈ ವ್ರತ ಮಾಡಿ ಫಲಹೊಂದಿದ ಅವಂತಿಸುಂದರಿಯ ನಿದರ್ಶನ.
೨೯ನೇ ಅಧ್ಯಾಯ — ಅನಂತರ ತೃತೀಯಾ ವ್ರತಮಾಹಾತ್ಮ್ಯ
ಮಾರ್ಗಶಿರ ಶುಕ್ಲ ದ್ವಿತೀಯಾ ನಕ್ತಭೋಜನ, ತೃತೀಯಾದಿನ ಸ್ನಾನಮಾಡಿ ಉಮಾಪೂಜೆ, ಸಕ್ಕರೆ ಬೊಂಬೆಯ ಸಮರ್ಪಣೆ, ದಧಿಪ್ರಾಶನ, ಉಪವಾಸ, ಮಾರನೆದಿನ ದಂಪತಿ ಭೋಜನ, ಆ ಮಾಸದ ಕೃಷ್ಣಪಕ್ಷ ತೃತೀಯೆಯಲ್ಲೂ ಇದೇ ರೀತಿ ಕಾತ್ಯಾಯನಿ ನಾಮದಿಂದ ಪೂಜೆ, ನಾರಿಕೇಳ ನಿವೇದನ, ಹೀಗೆ ಪ್ರತಿಮಾಸದ ಉಭಯ ತೃತೀಯೆಗಳ ಪೂಜೆಗೆ ಉಕ್ತವಾದ ನಾಮ, ನಿವೇದನ ವಸ್ತು, ಪ್ರಾಶನ ದ್ರವ್ಯ, ಸಾಂಗ ಪೂಜಾಫಲ ನಿರೂಪಣೆ, ವರ್ಷಾಂತ್ಯದಲ್ಲಿ ಮಂಡಲ ರಚನೆ, ಸ್ವರ್ಣದಿಂದ ಪ್ರತಿಮಾ ನಿರ್ಮಾಣ, ಹವಳ ರತ್ನ ಮೆಟ್ಟಿಸುವುದು, ವಸ್ತ್ರಾಲಂಕಾರ, ಪೂಜೆ, ಹೋಮ, ಮೃತ್ತಿಕಾ ಪ್ರಾಶನ, ಶಯ್ಯಾ ಮಂಚಸಹಿತ ಪರಿಮಾದಾನ, ಗೋದಾನ, ವ್ರತ ಫಲಶ್ರುತಿ.
೩೦ನೇ ಅಧ್ಯಾಯ — ಅಕ್ಷಯ ತೃತೀಯಾ ವ್ರತಮಾಹಾತ್ಮ್ಯ
೩೧ನೇ ಅಧ್ಯಾಯ — ಅಂಗಾರಕ ಚತುರ್ಥೀ ವ್ರತಮಾಹಾತ್ಮ್ಯ
ಅಂಗಾರಕನ ಉತ್ಪತ್ತಿ ಕ್ರಮ, ಆ ಹೆಸರು ಬರಲು ಕಾರಣ, ಕುಜವಾರ ಯುಕ್ತಚತುರ್ಥೀದಿನ ವಿಧಿಪ್ರಕಾರ ಸ್ನಾನ, ದೂರ್ವಾದಿ ಸ್ಪರ್ಶನ, ಗೋಪ್ರದಕ್ಷಿಣ, ಗೃಹದಲ್ಲಿ ಹೋಮ, ಆಹುತಿ ದ್ರವ್ಯಗಳು, ಸಮಿತ್ತಿನ ಜಾತಿ, ಸ್ವರ್ಣದ ಪ್ರತಿಮೆಯನ್ನು ತಾಮ್ರ ಪಾತ್ರೆಯಲ್ಲಿಟ್ಟು ಪ್ರತಿಷ್ಠೆ, ಅಂಗಪೂಜೆಯ ನಾಮಗಳು, ಪ್ರತಿಮಾದಾನ, ನೆಲಸಾರಿಸಿಕೊಂಡು ಭೋಜನ, ಆಗ ಭೂಪ್ರಾರ್ಥನೆ, ಈ ವ್ರತ ಅನೇಕಾವೃತ್ತಿ ಮಾಡುವುದರ ವೈಶಿಷ್ಟ್ಯ ಅನುದಾನಾದಿಗಳು.
೩೨ನೇ ಅಧ್ಯಾಯ — ವಿನಾಯಕಸ್ನಪನ ಚತುರ್ಥೀ ವ್ರತಮಾಹಾತ್ಮ್ಯ
ವಿನಾಯಕನ ಕೋಪಕ್ಕೆ ಪಾತ್ರರಾದವರಿಗೆ ಉಂಟಾಗುವ ಸ್ವಪ್ನ ಸೂಚನೆ, ಪರಿಹಾರಕ್ಕಾಗಿ ಪುಣ್ಯದಿನದಲ್ಲಿ ಆ ಸ್ವಾಮಿಗೆ ಸರ್ಪಪಕಲ್ಪಸ್ನಪನ, ಶುಕ್ಲಚತುರ್ಥೀ ಅಥವಾ ಪುಷ್ಯಯುಕ್ತ ತಿಥಿಯ ಶ್ರೇಷ್ಠತೆ, ವಿನಾಯಕನ ಜತೆ ಆವಾಹಿಸಬೇಕಾದ ಗ್ರಹದೇವತಾದಿಗಳು, ಅಭಿಷೇಕ ಕಲಶಕ್ಕೆ ಹಾಕಬೇಕಾದ ವಸ್ತು, ಅಭಿಷೇಕಮಂತ್ರ, ಹೋಮ, ಬಲಿಪ್ರದಾನ ವಸ್ತು, ಅರ್ಘ್ಯ, ಪ್ರಾರ್ಥನಾ ಮಂತ್ರ, ದಾನಗಳು ವ್ರತ ಫಲಶ್ರುತಿ.
೩೩ನೇ ಅಧ್ಯಾಯ — ವಿನಾಯಕ ಚತುರ್ಥೀ ವ್ರತಮಾಹಾತ್ಮ್ಯ
೩೪ನೇ ಅಧ್ಯಾಯ — ಪಂಚಮೀವ್ರತೇ ಶಾಂತಿ ವ್ರತಮಾಹಾತ್ಮ್ಯ
ಕಾರ್ತಿಕ ಶುಕ್ಲ ತೃತೀಯಾದಿಂದ ಒಂದುವರ್ಷ ಆಹಾರದಲ್ಲಿ ಆಮ್ಲವರ್ಜ್ಯನಿಯಮ, ತೃತೀಯಾ ರಾತ್ರಿ ಮಹಾವಿಷ್ಣು ಪೂಜೆ, ವಿಷ್ಣುವಿನ ಅವಯವಗಳಲ್ಲಿ ಅನಂತಾದಿ ಮಹಾನಾಗಗಳ ನಾಮದಿಂದ ಅರ್ಚನೆ, ಮೌನದಿಂದ ಕ್ಷೀರಾಭಿಷೇಕ, ದೇವತಾ ಸಮ್ಮುಖದಲ್ಲಿ ಹೋಮ, ಈ ರೀತಿ ಒಂದು ವರ್ಷ ಆಚರಿಸಿ ಬಳಿಕ ಬ್ರಾಹ್ಮಣ ಭೋಜನ, ಸ್ವರ್ಣವಿಷ್ಣು ಪ್ರತಿಮಾದಾನ, ಗೋವು, ಪಾಯಸದ ಪಾತ್ರೆ, ವಸ್ತ್ರ, ಹಿರಣ್ಯ ಈ ದಾನಾದಿಗಳು ಇದರಿಂದ ಸರ್ಪಭೀತಿ ನಿವಾರಣ.
೩೫ನೇ ಅಧ್ಯಾಯ — ಸಾರಸ್ವತ ವ್ರತಮಾಹಾತ್ಮ್ಯ ವರ್ಣನೆ
ವರ್ಷಾರಂಭದ ದಿನ ಅಥವಾ ಅದಿತ್ಯವಾರ ವ್ರತವಾಚನಮಾಡಿಸಿ ವಾಚಕ ಸಂಭಾವನೆ, ಶುಕ್ಲಪಂಚಮಿಯಲ್ಲಿ ಗಾಯತ್ರೀ ದೇವೀ ಪೂಜೆ, ಪ್ರಾರ್ಥನಾಮಂತ್ರ, ಮೌನವ್ರತ ಭೋಜನ, ಪ್ರತಿಪಕ್ಷ ಪಂಚಮೀ ಪೂಜೆ, ವಸ್ತ್ರ, ದಧ್ಯನ್ನ ನಿವೇದನ, ಸಾಯಂಪ್ರಾತಃ ಸುವಾಸಿನೀ ಪೂಜೆ, ಉಪಾಯನದಾನ ದ್ರವ್ಯ, ಈ ಪ್ರಕಾರ ಒಂದು ವರ್ಷದವರೆಗೆ ಆದಿನ ಭೋಜನವಿಲ್ಲದಿರುವುದು ಗುರುಸಂಭಾವನೆ, ಫಲಶ್ರುತಿ.
೩೬ನೇ ಅಧ್ಯಾಯ — ನಾಗಪಂಚಮೀ ವ್ರತಮಾಹಾತ್ಮ್ಯ
ಕದ್ರುವಿನತೆಯರ ಪಂಥ, ಕದ್ರುವು ತನ್ನ ಪುತ್ರರಾದ ನಾಗರನ್ನು ಶಪಿಸಿದ್ದು, ನಾಗರಾಜನ ಚಿಂತೆ, ಬ್ರಹ್ಮನಿಂದ ಪರಿಹಾರರೂಪ ಅಭಯಪ್ರದಾನ, ಆದಿನ ಪಂಚಮಿಯಾದ್ದರಿಂದ ನಾಗಗಳಿಗೆ ಪಂಚಮೀಪ್ರಿಯತಿಥಿ; ಆದಿನ ನಾಗಪ್ರತಿಮೆಗಳಿಗೆ ಕ್ಷೀರಸ್ನಾನಾದಿ ಪೂಜೆ, ಅದರಿಂದ ಸರ್ಪಭಯರಾಹಿತ್ಯ, ಸರ್ಪದಷ್ಟನಿಗೆ ಬರುವ ಮುಂದಿನ ಜನ್ಮ, ವ್ರತಿಯು ಒಂದುವರ್ಷ ಪ್ರತಿ ಪಂಚಮೀ ಉಪವಾಸ, ಸರ್ಪದಷ್ಟರಿಗೆ ನಾರಾಯಣ ಬಲಿಉತ್ತರಕ್ರಿಯೆ, ವೃಷೋತ್ಸರ್ಗಕ್ಕೆ ಅವಧಿ; ಹನ್ನೆರಡು ತಿಂಗಳಿಗೆ ಹೇಳಬೇಕಾದ ನಾಮ, ಕೊನೆಯಲ್ಲಿ ನಾಗಪ್ರತಿಮಾದಾನ, ಗೋದಾನ, ಸರ್ಪದೋಷ ನಿವಾರಣ ಮಂತ್ರ, ನೂರು ಪಂಚಮೀ ಆಚರಿಸಿದವರಿಗೆ ಆಗುವ ಫಲ.
೩೭ನೇ ಅಧ್ಯಾಯ — ಶ್ರೀ ಪಂಚಮೀ ವ್ರತಮಾಹಾತ್ಮ್ಯ
ಭೃಗು ಖ್ಯಾತಿ ಇವರಲ್ಲಿ ಲಕ್ಷ್ಮಿಯ ಜನನ, ಅವಳ ಪ್ರಸನ್ನತೆಯಿಂದ ಜನರ ಉನ್ಮತ್ತತೆ, ಲಕ್ಷ್ಮಿಯ ಸಮುದ್ರಪ್ರವೇಶ. ಬೃಹಸ್ಪತಿಯು ಇಂದ್ರನಿಗೆ ಶ್ರೀ ಪಂಚಮೀ ವ್ರತವನ್ನು ತಿಳಿಸಿದ್ದು, ಸರ್ವರೂ ವ್ರತವನ್ನಾಚರಿಸಿದ್ದು, ಸಮುದ್ರಮಥನ, ಲಕ್ಷ್ಮಿಯ ಉತ್ಪತ್ತಿ, ಅವರವರ ಪೂಜಾನುಸಾರ ಪ್ರಸನ್ನಳಾದ್ದು. ಮಾರ್ಗಶಿರ ಶುಕ್ಲ ಪಂಚಮಿದಿನ ನದೀಸ್ನಾನ, ಪ್ರತಿಮೆಯಲ್ಲಿ ಆವಾಹನ, ಅಂಗಪೂಜಾ ನಾಮ, ನೈವೇದ್ಯ, ಸುವಾಸಿನೀ ಪೂಜಾ, ಹನ್ನೆರಡು ತಿಂಗಳಲ್ಲೂ ಉಚ್ಚರಿಸುವ ನಾಮಗಳು, ಕೊನೆಯಲ್ಲಿ ಮಾಡುವದಾನ, ಪ್ರಾರ್ಥನಾ ಮಂತ್ರ, ವಿಪ್ರಭೋಜನ, ಫಲಶ್ರುತಿ.
೩೮ನೇ ಅಧ್ಯಾಯ — ವಿಶೋಕ ಷಷ್ಠೀ ವ್ರತಮಾಹಾತ್ಮ್ಯ
ಮಾಘ ಶುಕ್ಲ ಪಂಚಮೀ ತೈಲಾಭ್ಯಂಗ, ಕೃಶರಪ್ರಾಶನ, ಷಷ್ಠಿ ಉಪವಾಸ, ಸ್ವರ್ಣಪದ್ಮದಲ್ಲಿ ಸೂರ್ಯಾವಾಹನ, ಬ್ರಾಹ್ಮಣ ಪೂಜೆ, ಗೋಮೂತ್ರ ಪ್ರಾಶನ, ಸಪ್ತಮೀದಿನ ವಿಪ್ರನಿಗೆ ಗುಡಸಹಿತ ಪಾತ್ರೆವಸ್ತ್ರದದಾನ, ತೈಲಲವಣವರ್ಜ್ಯ ಆಹಾರ, ಪುರಾಣ ಶ್ರವಣ, ಈ ರೀತಿ ಉಭಯ ಸಪ್ತಮಿಯಲ್ಲೂ ಒಂಬು ವರ್ಷ ಆಚರಣೆ, ಕೊನೆಯಲ್ಲಿ ಶಯ್ಯಾದಾನ, ಗೋದಾನ, ಫಲಶ್ರುತಿ.
೩೯ನೇ ಅಧ್ಯಾಯ — ಕಮಲ ಷಷ್ಠೀ ವ್ರತಮಾಹಾತ್ಮ್ಯ
೪೦ನೇ ಅಧ್ಯಾಯ — ಮಂದಾರ ಷಷ್ಠೀ ವ್ರತಮಾಹಾತ್ಮ್ಯ
ಮಾಘ ಶುಕ್ಲ ಪಂಚಮೀ ಲಘ್ವಾಹಾರ, ಷಷ್ಠಿಉಪವಾಸ, ಪೂಜೆ, ಮಂದಾರಪುಷ್ಪ ಪ್ರಾಶನೆ, ಸಪ್ತಮೀದಿನ ಸ್ವರ್ಣಪ್ರತಿಮಾ ಸ್ವರ್ಣಪುಷ್ಪಮಾಡಿಸಿ ತಾಮ್ರ ತಟ್ಟೆಯಲ್ಲಿ ಎಳ್ಳು ಹುಡಿಯಿಂದ ಅಷ್ಟದಳಪದ್ಮ ರಚಿಸಿ ಕರ್ಣಿಕೆಯಲ್ಲೂ ದಳದಲ್ಲೂ ಆವಾಹಿಸುವ ಸೂರ್ಯನಾಮಗಳು, ಸ್ವರ್ಣಪುಷ್ಪ ಪೂಜೆ, ಬ್ರಾಹ್ಮಣನಿಗೆ ದಾನ, ತೈಲಲವಣರಹಿತಾಹಾರ, ಒಂದು ವರ್ಷ ಪ್ರತಿ ತಿಂಗಳಲ್ಲೂ ಆಚರಣೆ, ಕೊನೆಯಲ್ಲಿ ಪ್ರತಿಮಾದಾನ, ಗೋದಾನ, ಫಲಶ್ರುತಿ.
೪೧ನೇ ಅಧ್ಯಾಯ — ಲಲಿತಾ ಷಷ್ಠೀ ವ್ರತಮಾಹಾತ್ಮ್ಯ
ವ್ರತಿಯಾದ ಸುಮಂಗಲಿ ಭಾದ್ರ ಶುಕ್ಲ ಷಷ್ಠಿ ನದೀಸ್ನಾನ, ನದಿಯ ಮರಳು ತರುವದು, ರಚಿಸಿದ ವಸ್ತ್ರಮಂಟಪದಲ್ಲಿ ಆ ಮರಳನ್ನಿಟ್ಟು ಗೌರೀ ಆವಾಹನೆ, ನೂರೆಂಟು ಅಥವಾ ಇಪ್ಪತ್ತೆಂಟು ಪುಷ್ಪಾರ್ಚನೆ, ಕನ್ಯೆಯರು ಮೊಗ್ಗುಗಳಿಂದ ಅರ್ಚನೆ, ಈ ವ್ರತಾಚರಣ ಮಾಡುವವರು ಮಾಡಬೇಕಾದ ಕ್ಷೇತ್ರಯಾತ್ರೆ, ಶಿವದರ್ಶನ, ಪ್ರಾರ್ಥನಾಮಂತ್ರ, ಧೂಪ ದೀಪಾದಿಗಳು, ನೈವೇದ್ಯಕ್ಕೆ ತರಕಾರಿಗಳು, ಮೋದಕ, ರಾತ್ರಿಜಾಗರಣೆ ಗೀತ ನೃತ್ಯಾದಿಗಳು, ಸಪ್ತಮಿದಿನ ದೇವೀಪೂಜೆ, ನದಿಯಲ್ಲಿ ವಿಸರ್ಜನ, ನೈವೇದ್ಯವಸ್ತು ದಾನ, ಹೋಮ, ಹದಿನೈದು ಕನ್ಯೆಯರಿಗೂ ವಿಪ್ರರಿಗೂ ಭೋಜನ, ಫಲಶ್ರುತಿ.
೪೨ನೇ ಅಧ್ಯಾಯ — ಕಾರ್ತಿಕೇಯ ಪೂಜಾ ಷಷ್ಠೀಮಾಹಾತ್ಮ್ಯ
ಷಣ್ಮುಖನು ತಾರಕಾಸುರ ಸಂಹರಮಾಡಿದ್ದು ಮಾರ್ಗಶಿರ ಶುಕ್ಲ ಷಷ್ಠಿ, ಇದಕ್ಕೆ ಸ್ಕಂದ ಷಷ್ಠಿ ಎಂದೂ ಹೆಸರು, ವ್ರತಿಯು ಭಂಗಾರದ ಅಥವಾ ಮಣ್ಣಿನಿಂದ ಷಣ್ಮುಖ ವಿಗ್ರಹಮಾಡಿಸಿ ಸ್ನಾನಾನಂತರ ಸ್ಕಂದಧ್ಯಾನ, ಹೊಸಕಮಂಡಲದಿಂದ ಅಭಿಷೇಕಮಾಡುವ ಮಂತ್ರ, ಪೂಜಾ ನಾಮಗಳು, ನೈವೇದ್ಯವಸ್ತು, ದೇವರ ಪಕ್ಕದಲ್ಲಿರಿಸುವ ಅವನ ವಾಹನಾದಿಗಳು, ಮತ್ತು ಸ್ಕಂದ ಮಾತೃವಿಗೆ ಪೂಜೆ, ಷಟ್ಕೃತ್ತಿಕೆಯರಿಗೆ ಪೂಜೆ, ಹೋಮ, ಫಲಾಹಾರ, ದರ್ಭೆಯಲ್ಲಿ ಶಯನ, ಹನ್ನೆರಡು ತಿಂಗಳ ಆಹಾರ ಫಲಗಳು, ಸ್ವರ್ಣರಚಿತ ವಾಹನ ಪ್ರತಿಮಾ ದಾನ, ಹನ್ನೆರಡು ತಿಂಗಳಲ್ಲೂ ಹೇಳುವ ನಾಮ, ಮೌನವ್ರತ ಕೊನೆಯಲ್ಲಿ ಪ್ರತಿಯಾದಾನ, ಸ್ಕಂದಪೂಜೆ ಕ್ಷತ್ರಿಯರಿಗೆ ಅವಶ್ಯಕವೆಂಬ ವಿಚಾರ.
೪೩ನೇ ಅಧ್ಯಾಯ — ವಿಜಯಸಪ್ತಮೀ ವ್ರತಮಾಹಾತ್ಮ್ಯ
ಭಾನುವಾರ ಯುತಸಪ್ತಮಿಗೆ ವಿಜಯ ಸಂಜ್ಞೆ, ಆದಿನ ಸೂರ್ಯಾರಾಧನೆ, ಈ ರೀತಿ ಏಳು ವಿಜಯಸಪ್ರಮಿ ಆಚರಿಸಬೇಕಾದ್ದು, ಒಂದೊಂದುಸಲ ಮಾಡುವ ನೂರೆಂಟು ಪ್ರದಕ್ಷಿಣೆಯಲ್ಲಿನ ಸಂಖ್ಯೆಗಾಗಿ ಹಾಕಬೇಕಾದ ವಸ್ತುಗಳು, ರತ್ನಾದಿಗಳು, ಹಣ್ಣುಗಳು, ಕಬ್ಬು, ಫಲ ಸಮರ್ಪಣವಿಲ್ಲದೆ ಪ್ರದಕ್ಷಿಣೆ ಕೂಡದು, ಆಗ ಮೌನ, ಘೃತಾಭಿಷೇಕ, ಛತ್ರಸಮರ್ಪಣ, ಪ್ರಾರ್ಥನಾಮಂತ್ರ, ಶುಕ್ಲ ಸಪ್ತಮಿ ಆರ್ದ್ರ ಮುದ್ಗಸೇವನ, ಪಲಾಶಪತ್ರ ಶಯನ, ಸ್ವರ್ಣ ಸೂರ್ಯಪ್ರತಿಮಾ ಸ್ವರ್ಣಮುದ್ಗದಾನ, ಷಡಕ್ಷರ ಮಂತ್ರಜಪ, ಗೃಹ ಶಯ್ಯಾದಿ ದಾನಮಂತ್ರ, ತೀರ್ಥಯಾತ್ರೆಗೆ ಈ ದಿನದ ಪ್ರಾಶಸ್ತ್ಯ, ಫಲಶ್ರುತಿ.
೪೪ನೇ ಅಧ್ಯಾಯ — ಆದಿತ್ಯಮಂಡಲ ದಾನವಿಧಿ
೪೫ನೇ ಅಧ್ಯಾಯ — ತ್ರಯೋದಶ ವರ್ಜ್ಯಸಪ್ತಮೀವ್ರತ
೪೬ನೇ ಅಧ್ಯಾಯ — ಕುಕ್ಕುಟೀ ಮರ್ಕಟೀ ವ್ರತಮಾಹಾತ್ಮ್ಯ
ಪೂರ್ವದಲ್ಲಿ ನಹುಷನ ಪತ್ನಿ ಚಂದ್ರಮುಖಿ ಮತ್ತು ಅವಳ ಸಖಿಮಾನಿ ಇವರು ಸಂಕಲ್ಪಸಿದ ವ್ರತ, ವ್ರತವಿಸ್ಮೃತಿಯಿಂದ ಅನಂತರ ಪಡೆದ ಕುಕ್ಕುಟೀ ಮರ್ಕಟೀಜನ್ಮ ಆ ಜನ್ಮದಲ್ಲೂ, ಪರಸ್ಪರ ಸ್ನೇಹ, ಅವು ಮೃತಿ ಹೊಂದಿ ಪುನಃ ಮಾನವ ಜನ್ಮವೆತ್ತಿದುದು, ಆ ಜನ್ಮದಲ್ಲಿ ಸ್ನೇಹಿತೆಯರಾದ ಅವರಿಗೆ ಒದಗಿದ ಸ್ಥಿತಿ, ಮಾತ್ಸರ್ಯದಿಂದ ಒಬ್ಬಳು ಮತ್ತೊಬ್ಬಳ ಪುತ್ರನನ್ನು ಕೊಲ್ಲಿಸಿದ್ದು, ಅ ಪುತ್ರನು ತಾಯಿಯ ವ್ರತಮಹಿಮೆಯಿಂದ ಪುನಃ ಜೀವಿಸಿದ್ದು, ಅದರ ಕಾರಣವನ್ನು ಅರಿತು ಆ ವ್ರಅ ವಿಧಾನವನ್ನು ತಿಳಿದುದು, ತಾನು ಹಿಂದೆ ಸಂಕಲ್ಪಮಾಡಿದ ವ್ರತವನ್ನು ಮರೆತೆನೆಂದು ನೆನಪಾದ್ದು, ಪುನಃ ವ್ರತಮಾಡಿದುದು, ಬಳಿಕ ಜೀವತ್ಪುತ್ರವತಿಯಾದ್ದು, ಈ ವ್ರತವನ್ನು ಲೋಮಶರು ದೇವಕೀದೇವಿಗೆ ತಿಳಿಸಿದ್ದು.
೪೭ನೇ ಅಧ್ಯಾಯ — ಉಭಯ ಸಪ್ತಮೀವ್ರತ
ಮಾಘ ಶುಕ್ಲ ಸಪ್ತಮೀ ವ್ರತಸಂಕಲ್ಪ, ಅಹೋರಾತ್ರಿ ವರುಣ ಎಂಬ ನಾಮಜಪ, ಸೂರ್ಯಾರ್ಚನೆ, ಬ್ರಹ್ಮಕೂರ್ಚ ಹೋಮ, ಅಷ್ಟಮಿ ವಿಪ್ರಭೋಜನ, ಹೀಗೆ ಹನ್ನೆರಡು ತಿಂಗಳಲ್ಲೂ ಎರಡು ಪಕ್ಷದ ಸಪ್ತಮಿಯಲ್ಲಿ ಅರ್ಚನ ನಾಮಗಳು, ಪೂಜೆ, ಉಪವಾಸ, ಕೊನೆಯ ತಿಂಗಳು ಭೂಮಿಯಲ್ಲಿ ಮಂಡಲ ರಚನೆ, ಕಲಶಸ್ಥಾಪನೆ, ಅಗ್ನಿಯಲ್ಲಿ ಹೋಮ, ಘಗುಡತಿಲದಿಂದ ಹನ್ನೆರಡು ವಿಪ್ರಭೋಜನ, ಕಲಶದಾನ, ಅನುದಾನಾದಿಗಳು ವ್ರತಫಲ.
೪೮ನೇ ಅಧ್ಯಾಯ — ಕಲ್ಯಾಣ ಸಪ್ತಮೀ ವ್ರತಮಾಹಾತ್ಮ್ಯ
ಭಾನುವರಯುತ ಶುಕ್ಲ ಸಪ್ರಮೀದಿನ ಹಾಲುತಿಕ್ಕಿಕೊಂಡು ಸ್ನಾನ, ನಿತ್ಯಕರ್ಮ, ಭೂಮಿಯಲ್ಲಿ ಅಷ್ಟದಳ ಪದ್ಮರಚನೆ, ಅರ್ಚಿಸುವ ಸೂರ್ಯನಾಮ, ಕ್ರಮವಾಗಿ ಪೂಜೆ, ವಿಪ್ರಸಂತರ್ಪಣೆ, ಗುರುಪೂಜೆ, ಮಾರನೆದಿನ ವಿಪ್ರರೊಡನೆ ಭೋಜನ, ವರ್ಷಾಂತ್ಯದಲ್ಲಿ ಘೃತಪಾತ್ರೆ ಕಮಂಡಲದಾನ, ಗೋದಾನ, ಫಲಶ್ರುತಿ.
೪೯ನೇ ಅಧ್ಯಾಯ — ತರ್ಕರಾ ಸಪ್ತಮೀ ವ್ರತಮಾಹಾತ್ಮ್ಯ
ವೈಶಾಖ ಶುಕ್ಲ ಸಪ್ತಮೀದಿನ ಭೂಮಿಯಲ್ಲಿ ಕುಂಕುಮದಿಂದ ಪದ್ಮರಚನೆ, ಅದರಲ್ಲಿ ಸಕ್ಕರೆಪಾತ್ರೆ, ತಿಲಪ್ರಾಗಳ ಸ್ಥಾಪನೆ, ಸ್ವರ್ಣಾಶ್ವಸಹಿತ ಸೂರ್ಯಪೂಜೆ, ಸೌರಸೂಕ್ತಪಾರಾಯಣ, ಮಾರನೆದಿನ ಆ ಕಲಶಾಶ್ವದಾನ, ವಿಪ್ರಭೋಜನ, ತೈಲಲವಣವರ್ಜ್ಯಾಹಾರಸೇವನೆ, ಹನ್ನೆರಡು ತಿಂಗಳ ವ್ರತ, ವರ್ಷಾಂತ್ಯದಲ್ಲಿನ ವಿಶೇಷದಾನಾದಿಗಳು, ಸಕ್ಕರೆಯು ಸೂರ್ಯ ಪ್ರಿಯವಾಗಲು ಕಾರಣ, ಫಲಶ್ರುತಿ.
೫೦ನೇ ಅಧ್ಯಾಯ — ಕಮಲ ಸಪ್ರಮೀ ವ್ರತಮಾಹಾತ್ಮ್ಯ