ಭವಿಷ್ಯಮಹಾಪುರಾಣಂ – ಭಾಗ – ೬: ಮಧ್ಯಮಪರ್ವ – ದ್ವಿತೀಯ ಸಂಪುಟ
ಆರಂಭಿಕ ಪುಟ
ಅನುವಾದಕರು: ಶ್ರೀ ಚನ್ನಕೇಶವಯ್ಯ ಬಿ.
ವಿಷಯಾನುಕ್ರಮಣಿಕೆ
೧೧ — ೧೨ನೇ ಅಧ್ಯಾಯ — ವಾಸ್ತುದೇವತಾ ಪೂಜಾಕ್ರಮ, ಪ್ರತಿದೇವತಾಕವಾದ ಮಂತ್ರಗಳ ಋಷಿ ಛಂದಸ್ಸು ಮುಂತಾದುವು.
ವಾಸ್ತುಮಂಡಲರಚನೆಗೆ ಅರ್ಹವಾದ ಸ್ಥಾನಗಳು, ಕ್ಷೇತ್ರವಿಭಾಗ ಕ್ರಮ, ವೇದೀ, ಕುಂಡ ಇವುಗಳ ರಚನೆ, ವಾಸ್ತುಮೂರ್ತಿರಚನೆ, ಮೂರ್ತ್ಯವಯವಗಳಲ್ಲಿ ಆವಾಹಿಸಬೇಕಾದ ದೇವತೆಗಳು, ನ್ಯಾಸಕ್ರಮ. ಪೂಜಾವಿಧಾನ, ವಾಸ್ತುಗಾಯತ್ರೀ ಮಂತ್ರ, ವಾಸ್ತುಪೀಠದಲ್ಲಿ ಯಥೋಕ್ತದೇವತೆಗಳ ಆವಾಹನ, ವಾಸ್ತುಪುರುಷಪೂಜೆ, ಪ್ರಧಾನದೇವತಾ ಅಂಗದೇವತಾ ಮಂತ್ರದ ಋಷಿ ಛಂಧೋದೇವಾದಿಗಳು, ವೇದಿಕಾರಚನೆಗೆ ಮೃತ್ತಿಕೆಗಳು, ವಾಸ್ತುದೇವತಾಕವಾದ ಮಂತ್ರತ್ರಯ, ಬಲಿಪ್ರದಾನಕ್ರಮ, ಬಲಿದ್ರವ್ಯವಿಚಾರ, ಮಹಾದೇವೋಕ್ತ ವಾಸ್ತುರೂಪ ವಿಷ್ಣುಸ್ತುತಿ.
೧೩ನೇ ಅಧ್ಯಾಯ — ದೇವತಾರ್ಘ್ಯಪ್ರದಾನವಿಧಿ ವರ್ಣನೆ.
ವಾಸ್ತುಪೂಜೆಗೆ ಕುಳಿತುಕೊಳ್ಳುವ ದಿಕ್ಕು, ಪೃಥ್ವಿ, ಮೇರು, ಬ್ರಹ್ಮ ಇವರ ಪ್ರಾರ್ಥನೆ, ಅಷ್ಟದಳಪದ್ಮ ರಚನೆ, ವಾಸ್ತುಕಲಶಸ್ಥಾಪನೆ, ಕಲಶದಲ್ಲಿ ಸೇರಿಸಬೇಕಾದ ವಸ್ತುಗಳು, ವರುಣಾವಾಹನೆ, ಅರ್ಘ್ಯಪ್ರದಾನಕ್ರಮ, ಅರ್ಘ್ಯಮಂತ್ರ ಮತ್ತು ಅದರ ಛಂದಸ್ಸು, ಋಷಿ ದೇವತೆಗಳು, ವರುಣಪ್ರೀತ್ಯರ್ಥವಾಗಿ ಪ್ರಾಣಿಬಂಧವಿಮೋಚನ, ಬಲಿಪ್ರದಾನಮಂತ್ರ, ಪ್ರಾಜಾಪತ್ಯಾದಿ ಹೋಮಕಾರ್ಯ, ಪೂರ್ಣಾಹುತಿಹೋಮ, ಆಚಾರ್ಯಪೂಜೆ, ವಿಪ್ರಸತ್ಕಾರ, ದೀನರಿಗೆ, ದಾನ ಈ ಕರ್ಮಾಂಗವಾಗಿ ಆಚರಿಸಬೇಕಾದ ಆಹಾರನಿಯಮ, ಅನಂತರ ಮಾಡಬೇಕಾದ ಕಾರ್ಯಕ್ರಮವಿಚಾರ.
೧೪ನೇ ಅಧ್ಯಾಯ — ಸ್ವಗೃಹ್ಯೋಕ್ತವಾದ ಅಗ್ನಿಕಾರ್ಯ ವಿಧಿವರ್ಣನೆ.
ಗೃಹ್ಯ, ಚಕ್ಷ ಇವುಗಳ ಅರ್ಥವಿವರಣೆ, ಸ್ವಶಾಖೆಯಲ್ಲಿ ಕರ್ಮ ನಡೆಯಿಸದಿದ್ದರೆ ಆಗುವ ಹಾನಿ, ಪ್ರಾರಂಭದಲ್ಲಿ ಪೃಥ್ವೀಶೋಧನ, ಅಗ್ನಿ ಪ್ರತಿಷ್ಠಾಪನಾದಿ ಕರ್ಮದಲ್ಲಿ ಪರಿಸಮೂಹನಾದಿ ವಿಧಾನ, ಮತ್ತು ಮಂತ್ರಸೂಚನೆ, ಚತುರಸ್ರದಲ್ಲಿ ರೇಖಾರಚನಾ ವಿಧಾನ, ಅಗ್ನ್ಯಾನಯನ, ಅಗ್ನಿಸ್ಥಾಪನ, ಅಗ್ನಿಮೂರ್ತಿ ಧ್ಯಾನ, ಪಾತ್ರಾಸಾದನಾದಿ ವಿಧಾನ, ಸ್ರುವಸ್ವರೂಪ, ಪರಿಸ್ತರಣವಿಧಿ, ಪ್ರತಿಷ್ಠಾಂಗಹೋಮದಲ್ಲಿ ವಿಶೇಷ ಸಾಮಗ್ರಿಗಳ ಅಸಾದನ, ಪ್ರೋಕ್ಷಣವಿಧಾನ, ಆಜ್ಯಸಂಸ್ಕಾರ ವಿಧಿ, ಸ್ರುವಸಮ್ಮಾರ್ಜನ, ವಿಧಾನ, ಪಾಯಸ, ಮುಂತಾದುವುಗಳ ಆಹುತಿಪ್ರದಾನ ಕ್ರಮ, ಆಜ್ಯ ಭಾಗಹೋಮ ಇತ್ಯಾದಿ ವಿಚಾರಗಳು.
೧೫ನೇ ಅಧ್ಯಾಯ — ಕುತಕಂಡಿಕಾ, ಸ್ಥಾಲೀಪಾಕ ಇವುಗಳ ವಿಧಾನವರ್ಣನೆ.
೧೬ನೇ ಅಧ್ಯಾಯ — ಅಗ್ನಿಜಿಹ್ವಾ ಧ್ಯಾನ.
೧೭ನೇ ಅಧ್ಯಾಯ — ಪ್ರತಿಷ್ಠೆಗೆ ಪೂರ್ವದಿನದಲ್ಲಿ ಮಾಡತಕ್ಕ ಕಾರ್ಯವಿವರಣೆ.
ಪ್ರತಿಮಾ ಅಧಿವಾಸವಿಧಾನ, ಧಾನ್ಯಾಧಿವಾಸ, ಯೂಪದಅಧಿವಾಸ, ತಟಾಕಾದಿಗಳ ಪ್ರತಿಷ್ಠೆಯಲ್ಲಿ ಪ್ರತಿಕೃತಿಗಳ ಅಧಿವಾಸಕ್ರಮ, ಅಧಿವಾಸಕ್ಕೆ ಅಂಗವಾಗಿ ಮಾಡಬೇಕಾದ ನಾನಾವಿಧ ಸ್ನಪನಗಳು, ತತ್ಕಾಲಕ್ಕೆ ಉಕ್ತವಾದ ಮಂತ್ರಸೂಚನೆ, ಯೂಪವಿಡುವ ವಿಧಾನ, ದೇವಮೂರ್ತಿಗೆ ಉಪಚಾರಪೂಜೆ, ಅಧಿವಾಸಕಾಲ ಪರಿಮಿತಿ, ಆಗಿನ ಸುರಕ್ಷಿತತೆ, ಅಧಿವಾಸವಿಧಾನ, ಅಧಿವಾಸಮಾಡದೆ ಪ್ರತಿಷ್ಠೆ ಮಾಡಬಾರದೆಂಬ ವಿಚಾರ. ಪ್ರತಿಷ್ಠಾಹೋಮದ ದಶಾಂಗಹೋಮದ್ರವ್ಯಗಳು, ಪ್ರತಿಷ್ಠಾಮೂರ್ತಿವೈವಿಧ್ಯಾನುಸಾರ ಆ ದ್ರವ್ಯಗಳ ಅನುಕ್ರಮದ ಪ್ರಾರಂಭದಲ್ಲಿ ವ್ಯತ್ಯಾಸ, ಮುಂತಾದ ವಿಚಾರಗಳು.
೧೮ನೇ ಅಧ್ಯಾಯ — ಯಜ್ಞಕರ್ಮಕ್ಕೆ ನಿಯಮಿಸುವ ಬ್ರಾಹ್ಮಣರ ಅರ್ಹತೆ, ಸಂಖ್ಯೆ, ಮುಂತಾದ ವಿಚಾರ.
ಹೋತೃಗಳು, ದ್ವಾರಪಾಲಕರು, ಯಾಜಕರು ಇವರ ಸಂಖ್ಯಾನಿರ್ಣಯ, ಇವರಿಗೆ ಯಥೋಕ್ತ ಸತ್ಕಾರದ ಆವಶ್ಯಕತೆ, ಅನರ್ಹರನ್ನು ನೇಮಿಸುವುದರಲ್ಲಿ ಕರ್ಮದ ನಿಷ್ಫಲತೆ, ನಿಯುಜ್ಯಮಾನವಿಪ್ರರಿಗಿರಬೇಕಾದ ಅರ್ಹತೆ, ಶಿಷ್ಟರಾದವರು ತಕ್ಕಷ್ಟು ಜನ ದೊರೆಯದಿದ್ದಾಗ ಅನುಸರಿಸಬೇಕಾದ ಮಾರ್ಗ, ಈ ಕಾರ್ಯಕ್ಕೆ ಯಾರುಯಾರು ಅನರ್ಹರೆಂಬ ವಿಚಾರ, ಬ್ರಹ್ಮತ್ವದ ವಿಪ್ರ ಮತ್ತು ಋತ್ವಿಜರು ಇವರ ಸತ್ಕಾರಾಂಗವಾದ ಮಂತ್ರಗಳು, ಆಚಾರ್ಯರು, ಋತ್ವಿಜರು, ದ್ವಾರಪಾಲರು ಇವರನ್ನು ಕೂರಿಸುವ ಸ್ಥಾನನಿರ್ದೇಶ, ಅವರ ಸತ್ಕಾರಮಂತ್ರ, ಜಲಾಶಯಾದಿ ಪ್ರತಿಷ್ಠಾಕಾಲದಲ್ಲಿ ಉಕ್ತವಾದ ದಿಕ್ಕು, ತದಂಗವಾಗಿ ಉಪಯೋಗಿಸುವ ಪಾತ್ರೆ, ಕರ್ಮಕ್ಕೆ ಸಾಕ್ಷಿಗಳ ವಿವರ, ಧರ್ಮ ದೇವತಾಧ್ಯಾನ, ಪ್ರಾರ್ಥನೆ ಮುಂತಾದ ವಿಚಾರಗಳು.
೧೯ನೇ ಅಧ್ಯಾಯ — ಪ್ರತಿಷ್ಠಾಯಾಗಕಾಲ ನಿರ್ಣಯಪೂರ್ವಕ ಪ್ರತಿಷ್ಠಾವಿಧಿವರ್ಣನೆ.
೨೦ನೇ ಅಧ್ಯಾಯ — ಗೃಹ ಮುಂತಾದ್ದರ ವಾಸ್ತುಪ್ರತಿಷ್ಠೆಯ ಉತ್ತಮವಿಧಿಯಲ್ಲಿ ದೇವತೆಗಳ ಪೂಜಾಕ್ರಮ.
ಜಲಾಶಯಪ್ರತಿಷ್ಠೆಯ ಸಂಕಲ್ಪಕ್ರಮ, ವೃದ್ಧಿಶ್ರಾದ್ಧಾಚರಣ, ಋತ್ವಿಜರು, ಆಚಾರ್ಯರು ಇವರ ನೇಮಕ, ಯಜಮಾನನಿಗೆ ಔಷಧಿ ರಸಸ್ನಾನ, ಯಾಗಾಶಾಲಾಪ್ರವೇಶ, ಗಣಪತಿ ಯಮುನೆ ಇವರ ಧ್ಯಾನ, ವೇದೀಪ್ರದಕ್ಷಿಣ, ಭೂತಬಲಿ, ವಿಕಿರಣಪೂರ್ವಕ ಭೂಪ್ರಾರ್ಥನಾಕ್ರಮ, ಆಸನಪರಿಗ್ರಹ, ಗಣಪತಿಪೂಜೆ, ವೇದಿಯಲ್ಲಿ ದೇವತಾಆವಾಹನ, ಕಲಶದಲ್ಲಿ ವರುಣಾವಾಹನ, ಕಲಶೋದಕದಿಂದ ಪ್ರೋಕ್ಷಣ, ದ್ವಾರಪಾಲ ಪೀಠಪೂಜೆ, ದೇವತಾ ಆವಾಹನಮಂತ್ರ, ಮುದ್ರಾದರ್ಶನ, ಪದ್ಮದ ಅಷ್ಟದಳಗಳಲ್ಲೂ ಕರ್ಣಿಕೆಯಲ್ಲೂ ಎಂಟು ದಿಕ್ಕುಗಳಲ್ಲಿ ಆವಾಹಿಸುವ ದೇವತೆಗಳು, ಮರುತ್ತು, ರಕ್ಷಸ್ಸು, ಭೂತವೇತಾಲ, ಈ ಗಣಗಳ ಹೆಸರುಗಳು, ವಿಜಯಸ್ತವ ಶ್ಲೋಕಗಳು, ಆದಿತ್ಯಾದಿ ಗ್ರಹಗಳು, ಇಂದ್ರಾದಿದಿಕ್ಪಾಲಕರು ಇವರನ್ನು ಆವಾಹಿಸುವ ದಿಕ್ಕು ಮತ್ತು ಬಲಿ ಪ್ರದಾನಕ್ರಮ, ಬ್ರಹ್ಮ, ಅನಂತ, ವಿಷ್ಣು, ದುರ್ಗಾ, ಗಣಪತಿ, ಶ್ರೀ, ಪೃಥ್ವಿ, ವಿಶ್ವಕರ್ಮ, ಸರಸ್ವತಿ ಇವರುಗಳ ಸ್ಥಾನ, ಆರಾಧನ, ಬಲಿದ್ರವ್ಯಾದಿಗಳು, ಕಲಶದಲ್ಲಿ ಹಾಕುವ ಸ್ವರ್ಣಾದಿಲೋಹ ಪ್ರತಿಮಾಪ್ರಮಾಣ, ಋತ್ಗಿಜರ ಬೇಕಾದ ದಿಕ್ಕಿನ ಕ್ಲುಪ್ತತೆ, ಅವರು ಪಠಿಸುವ ಸೂಕ್ತ, ಸಪ್ತಾಂಗರುದ್ರಮಂತ್ರದ ಅಂಗನ್ಯಾಸ, ಬಹುದಿನದ ಮತ್ತು ಬಹುಕುಂಡಪಕ್ಷದಲ್ಲಿ ವಿಧಾನ ವಿಸ್ತಾರ, ಯೂಪಸ್ಥಾಪನದ ದಿನ ಅಭಿಷೇಕ, ಗೋದಾನ, ಋತ್ವಿಗ್ದಕ್ಷಿಣೆ, ಉತ್ಸರ್ಜನಮಂತ್ರ, ಯೂಪಾಶಂಸನ, ದಿಗ್ಬಲಿದ್ರವ್ಯ ಮತ್ತು ಮಂತ್ರ, ನೌಕೆಯಲ್ಲಿ ಪುಷ್ಕರಿರ್ಣಿ ಮಧ್ಯಕ್ಕೆ ಗಮನ, ಶಿಲೆಯಲ್ಲಿ ಹೋಮ, ನಾಗಯಷ್ಟಿಕ್ಷೇಪಣ, ನಾಗರಾಜಪ್ರಾರ್ಥನೆ, ವೇದಘೋಷಪೂರ್ವಕ ತಟಾಕಪ್ರದಕ್ಷಿಣೆ, ಆಚಾರ್ಯಪೂಜೆ, ಇತ್ಯಾದಿ ವಿಚಾರಗಳು.
೨೧ನೇ ಅಧ್ಯಾಯ — ಮಧ್ಯಮ ವಿಧಿಪ್ರಕಾರ ಪ್ರತಿಷ್ಠಾಕರ್ಮದಲ್ಲಿ ಆವಾಹಿಸುವ ದೇವತೆಗಳು ಮತ್ತು ಅವರ ಅರ್ಚನೆ.
ಯೂಪಕ್ಕೆ ಮಾಡಬೇಕಾದ ಸದ್ಯೋಧಿವಾಸವಿಧಾನ, ಪ್ರತಿಷ್ಠೆಗೆ ಪೂರ್ವದಿನದಲ್ಲಿ ಕಲಶಸ್ಠಾಪನ, ಋತ್ವಿಗ್ವರಣ, ಯಥೋಕ್ತಸಂಖ್ಯೆಯ ದ್ವಿಜರ ಅಭಾವಪಕ್ಷದಲ್ಲಿ ಅನುಸರಣವಿಧಾನ, ಬ್ರಹ್ಮಪ್ರಾರ್ಥನೆ, ಋತ್ವಿಜಪ್ರಾರ್ಥನೆ, ವೇದೀನಮಸ್ಕಾರ, ಪೂಜಾಮಂತ್ರದ ಋಷಿ, ಛಂದಸ್ಸು ದೇವತಾದಿಗಳು; ಆಯಾ ದೇವತೆಗಳಿಗೆ ಉಕ್ತವಾದ ರಾಗಗಳು, ಮಹಾದೇವನನ್ನು ದಿಕ್ಪಾಲಕರನ್ನು ಪೂಜಿಸುವ ದಿಕ್ಕು, ಅಷ್ಟನಾಗರ ವಿನ್ಯಾಸ, ನಾಗಪರಿಮಾಣ ಮತ್ತು ಸ್ವರೂಪ, ಬಲಿಪ್ರದಾನವಿಧಿ, ದೇವತೆಗಳಿಗೆ ಕೊಡುವ ಆಹುತಿಗಳ ವಿವರ, ಹೋಮದ್ರವ್ಯಗಳು, ಸ್ನಪನಮಂತ್ರ, ಸ್ನಪನ ದ್ರವ್ಯಗಳು ವಸ್ತ್ರಗಂಧಾದಿಗಳ ಸಮರ್ಪಣೆ, ಅಧಿವಾಸದ ಶಯ್ಯಾ, ವರುಣ ಮತ್ತು ಪುಷ್ಕರಿಣಿ ಪ್ರತಿಕೃತಿ ಅಧಿವಾಸ, ಕುಜಪ್ರೀತ್ಯರ್ಥವಾಗಿ ಪ್ರತಿಷ್ಠಾಹೋಮ, ಪರಿಜನಸಹಾಯದಿಂದ ನಾಗಯಷ್ಟಿಸ್ಥಾಪನೆ, ವೇದಿಯಲ್ಲಿನ ವರುಣ ಪ್ರತಿಮಾಪ್ರೋಕ್ಷಣೆ, ಲಾಜಾಕ್ಷೇಪಣದ ಮಂತ್ರ, ಅಗ್ನಿಯಲ್ಲಿ ಅಷ್ಟಾದಶಾಹುತಿಗಳು, ಉತ್ಸರ್ಜನಮಂತ್ರ, ಪುಷ್ಕರಿಣಿಯಲ್ಲಿ ಬಿಡುವುದು, ಶೈವಾಲವನ್ನು ತಂದುಹಾಕುವುದು, ಋತ್ವಿಗ್ದಕ್ಷಿಣೆ, ಜಲಧಾರಾಪೂರ್ವಕ ಪ್ರದಕ್ಷಿಣೆ, ದೀನಾನಾಥ ಸತ್ಕಾರ ಮುಂತಾದ ವಿಚಾರಗಳು.
ತೃತೀಯ ಭಾಗ:೧ನೇ ಅಧ್ಯಾಯ — ಆರಾಮ ಮುಂತಾದುವುಗಳ ಪ್ರತಿಷ್ಠೆಯ ವಿಶೇಷವಿಧಿ.
ಮಂಡಲರಚನೆ, ಮಧ್ಯಕಲಶದಲ್ಲೂ ಮತ್ತು ಪಕ್ಕಗಳಲ್ಲಿಯೂ ಕಣ್ರಿಕೆಗಳಲ್ಲಿಯೂ ಆವಾಹಿಸುವ ದೇವತೆಗಳು, ಸ್ಥಾಲೀಪಾಕವಿಧಾನದಲ್ಲಿ ಈ ದೇವತೆಗಳಿಗೆ ಆಹುತಿಗಳು, ಜಾಪಕನಿಂದ ಜಪಮಾಡಿಸುವುದು, ಯೂಪಪ್ರತಿಷ್ಠೆ, ಧ್ವಜಾರೋಹಣ, ಕರ್ಣವೇಧನ, ಬಾಲಕಬಾಲಕಿಯರಿಗೆ ಲಡ್ಡುಕಾದಾನ, ಸೂತ್ರವೇಷ್ಟನ, ದೋಹದಜಲಸೇಚನ, ಉತ್ಸರ್ಜನಮಂತ್ರ, ಸದಸ್ಯವಿಪ್ರಸತ್ಕಾರ, ಪೂರ್ಣಾಹುತಿ, ಕ್ಷೀರಾಧಾರಾಪೂರ್ವಕ ವೃಕ್ಷಪ್ರದಕ್ಷಿಣೆ, ಸೇತು ಪ್ರತಿಷ್ಠೆಯಲ್ಲಿ ವಿಶ್ವಕರ್ಮ ಮುಂತಾದ ವಿಶೇಷ ದೇವತೆಗಳ ಆವಾಹನೆ, ಬಲಿಪ್ರದಾನ ಸೂಕ್ತಪಠನ, ಸೇತೂತ್ಸರ್ಜನಮಂತ್ರ, ಯೂಪಸ್ಥಾಪನ, ಯೂಪಜೂಜೆ, ಕದಳೀರೋಪಣಾದಿವಿಚಾರ.
೨ನೇ ಅಧ್ಯಾಯ — ಗೋಪ್ರಚಾರೋತ್ಸರ್ಗ ಪ್ರತಿಷ್ಠಾವಿಧಿ
ಕರ್ಮಾಂಗವಾಗಿ ಕಲಶದಲ್ಲಿ ಆವಾಹಿಸುವ ದೇವತೆಗಳು, ಅವರಿಗೆ ಕೊಡುವ ಹೋಮಾಹುತಿ ಸಂಖ್ಯೆ, ಯೂಪದಲ್ಲಿ ಭೂಮಿಯೊಳಗೆ ಹೂಳುವ ಪ್ರಮಾಣ, ಪಂಚರತ್ನಕ್ಷೇಪಣ, ಉತ್ಸರ್ಜನಮಂತ್ರ, ಅದರ ನಾಲ್ಕು ದಿಕ್ಕುಗಳಲ್ಲಿರಬೇಕಾದ ಸ್ಥಿತಿ, ಸುತ್ತಲೂ ಧಾರಾಪಾತ್ರೆಯಿಂದ ಪರಿಷೇಚನ, ದ್ವಿಜಸಂತರ್ಪಣೆ, ಗೋಪ್ರಚಾರ ಕಾರ್ಯಕ್ಕೆ ಅನರ್ಹದಿಗ್ವಿಚಾರ ವೃಷೋತ್ಸರ್ಗಾಂಗವಾಗಿ ಈ ಪ್ರಚಾರೋತ್ಸರ್ಗದ ಆವಶ್ಯಕತೆ, ಗೋಚರ್ಮವೆಂಬುದರ ಸಂಕೇತ ವಿವರಣೆ, ಈ ಪ್ರತಿಷ್ಠಾರ್ಥವಾಗಿ ಮಂಟಪರಚನೆ, ಅಲ್ಲಿ ಆವಾಹಿಸಬೇಕಾದ ದೇವತೆಗಳು, ಅವರ ಪ್ರಾರ್ಥನಾಮಂತ್ರ, ಉರ್ಸರ್ಜನಮಂತ್ರ, ಸೂತ್ರವೇಷ್ಟನೆ, ವರುಣಪ್ರೀತಿಗಾಗಿ ಕದಳೀರೋಪಣ, ಕರ್ಣವೇಧನ, ಉತ್ಸರ್ಜನಮಂತ್ರ, ಯೂಪಸ್ಥಾಪನೆ, ಕ್ಷೀರಸೇಚನೆ ಮುಂತಾದ ವಿಚಾರಗಳು.
೩ಕ್ಷುದ್ರಾರಾಮ ವೃಕ್ಷಪ್ರತಿಷ್ಠಾವಿಧಿ.
೪ನೇ ಅಧ್ಯಾಯ — ಅಶ್ವತ್ಥ, ಪುಷ್ಕರಣಿ, ಜಲಾಶಯ, ಇವುಗಳ ಪ್ರತಿಷ್ಠಾವಿಧಿ
ಅಶ್ವತ್ಥಮೂಲದ ಸ್ಥಂಡಿಲದಲ್ಲಿ ಪದ್ಮರಚನೆ, ಕಲಶಸ್ಥಾಪನೆ, ಕಲಶಕ್ಕೆ ಹಾಕುವ ದ್ರವ್ಯಗಳು, ನವಗ್ರಹಾವಾಹನೆ, ವಿಪ್ರತ್ರಯ ಭೋಜನ, ಮಂಡಲದಲ್ಲಿ ಈಶ್ವರಾವಾಹನೆ, ಪುಷ್ಕರಿಣೀ ಪೀಠದಲ್ಲಿನ ದೇವತೆಗಳು, ಪದ್ಮಪತ್ರದಲ್ಲೂ ಎಂಟುದಿಕ್ಕಿನಲ್ಲೂ ಆವಾಹಿಸುವ ದೇವತೆಗಳು, ಉತ್ತರದಲ್ಲಿ ಅನಂತ, ಪುಷ್ಕರಿಣೀಮಧ್ಯೆ ವರುಣ, ಇವರ ಧ್ಯಾನ, ಮುದ್ರಾದರ್ಶನ, ಪುಷ್ಕರಿಣೀ ಪ್ರತಿಕೃತಿಪೂಜಾ, ಉತ್ಸರ್ಜನಮಂತ್ರ, ನೌಕೆಯಿಂದ ಜಲಮಧ್ಯಗಮನ, ಹೋಮ, ವರುಣಪ್ರತಿಮಾಕ್ಷೇಪಣ, ಪ್ರಾರ್ಥನಾಮಂತ್ರ ಸಜೀವ ಜಲಚರ ಕಮಲಶೈವಾಲಾದಿಕ್ಷೇಪಣ, ಕ್ಷೀರಧಾರಾಪೂರ್ವಕ ಪ್ರದಕ್ಷಿಣಾದಿ ವಿಚಾರಗಳು.
೫ನೇ ಅಧ್ಯಾಯ — ನಲಿನೀ ವಾಪೀ ಹ್ರದಾದಿಗಳ ಪ್ರತಿಷ್ಠೆ
೬ನೇ ಅಧ್ಯಾಯ — ಕ್ಷುದ್ರಾರಾಮವೃಕ್ಷಪ್ರತಿಷ್ಠಾವಿಧಿ.
ಇದಕ್ಕೆ ಮಂಡಲದ ರಹಿತತೆ, ಕಲಶಸ್ಥಾಪನೆ, ಅದರಲ್ಲಿ ಆವಾಹಿಸುವ ದೇವತೆಗಳು, ಸೂತ್ರವೇಷ್ಟನ, ವೃಕ್ಷಾಲಂಕಾರ, ದೋಹದಜಲಸೇಚನ, ಶತಧಾರಾಪಾತ್ರೆಯಿಂದ ಪರಿಷೇಚನ, ಕರ್ಣವೇಧನ, ಯೂಪಪ್ರತಿಷ್ಠೆ, ಕದಳೀರೋಪಣ, ಸ್ಥಾಲೀಪಾಕಹೋಮಾಹುತಿ, ಪೂರ್ಣಾಹುತಿ, ಪಂಚವಿಪ್ರಭೋಜನ, ಸದಸ್ಯರಿಗೆ ದಕ್ಷಿಣೆ ಇತ್ಯದಿ ವಿಚಾರ.
೭ನೇ ಅಧ್ಯಾಯ — ಏಕವೃಕ್ಷ ಪ್ರತಿಷ್ಠಾವಿಧಿ.
ವೃಕ್ಷದ ಪಶ್ಚಿಮದಲ್ಲಿ, ಕಲಶಸ್ಥಾಪನೆ, ಕಲಶದಲ್ಲಿ ಆವಾಹಿಸುವ ದೇವತೆ, ವೃಕ್ಷಮೂಲದಲ್ಲಿ ಧರ್ಮದೇವತೆ, ದಿಕ್ಕುಗಳಲ್ಲಿ ದಿಕ್ಪಾಲಾವಾಹನೆ, ಸೂತ್ರವೇಷ್ಟನ, ವೃಕ್ಷಪೂಜೆ, ಅಗ್ನಿಪ್ರತಿಷ್ಠೆ, ಅಷ್ಟಾಹುತಿ, ಯೂಪಪ್ರತಿಷ್ಠೆ, ಕದಳೀರೋಪಣ ಆಚಾರ್ಯಪೂಜೆ ಮೊದಲಾದುವು.
೮ನೇ ಅಧ್ಯಾಯ — ಅಶ್ವತ್ಥಪ್ರತಿಷ್ಠಾ ವಿಶೇಷವಿದಿ.
ಹಿಂದಿನರಾತ್ರಿ ಕಲಶಸ್ಥಾಪನೆ, ಅದರಲ್ಲಿ ಆವಾಹಿಸುವ ದೇವತೆಗಳು, ಕಲಶಕ್ಕೆ ಹಾಕುವ ದ್ರವ್ಯಗಳು, ವೃಕ್ಷಕ್ಕೆ ಸೂತ್ರವೇಷ್ಟನ, ಮೂಲದಲ್ಲಿ ನವಗ್ರಹಪೂಜೆ, ಮಂಡಲದಲಿ ಆವಾಹಿಸುವ ದೇವತೆ, ಧ್ಯಾನಶ್ಲೋಕ, ಬಲಿಪ್ರದಾನವಿಧಿ, ಬಲಿದ್ರವ್ಯಗಳು, ಚರುಹೋಮ, ಪೂರ್ಣಾಹುತಿ, ಕದಳೀರೋಪಣ, ಆಚಾರ್ಯಪೂಜೆ ವಿಚಾರಗಳು.
೯ನೇ ಅಧ್ಯಾಯ — ವಟವೃಕ್ಷ ಪ್ರತಿಷ್ಠಾವಿಧಿ.
೧೦ನೇ ಅಧ್ಯಾಯ — ಬಿಲ್ವವೃಕ್ಷ ಪ್ರತಿಷ್ಠಾವಿಧಿ.
ದೇವಪ್ರತಿಮಾ ಅಧಿವಾಸ, ರುದ್ರ, ದುರ್ಗಾ, ಗಣೇಶಾದಿ ದೇವಾವಾಹನ, ಜ್ವರ ಏಳು ದಂಪತಿಗಳಿಗೆ ಪೂಜೆ, ವರ್ತುಳಾಕಾರವೇದೀರಚನೆ, ಅಷ್ಟದಳಗಳಲ್ಲಿ ಆದಿತ್ಯಾದಿಗಳ ಆವಾಹನೆ, ರಾತ್ರಿಪ್ರತಿಷ್ಠಾ ವಿಧಿಯಲ್ಲಿ ಐದು ಅಥವಾ ಏಳುಕಲಶಸ್ಥಾಪನ, ಮಧ್ಯೆತ್ರಿಮೂರ್ತಿಗಳು, ವೃಕ್ಷಮೂಲ ಮಧ್ಯಾಂತಗಳಲ್ಲಿ ಅನಂತ, ಶೇಷ, ವನಸ್ಪತಿ, ಸೋಮ, ಪೃಥ್ವೀ, ಈ ದೇವತಾ ಆವಾಹನ, ಹೋಮದ್ರವ್ಯಗಳು ಪಾಯಸದಾನ, ಯೂಪಸ್ಥಾಪನ, ಕರ್ಣವೇಧನ, ಅಗ್ನಿಕಾರ್ಯದಲ್ಲಿ ಐದು ಪ್ರಧಾನಾಹುತಿ, ವೃಕ್ಷದಸುತ್ತ ಕ್ಷೀರಧಾರೆ, ಆಚಾರ್ಯಪೂಜೆ ಮುಂತಾದ ವಿಚಾರ.
೧೧ನೇ ಅಧ್ಯಾಯ — ಪೂಗಾಮ್ರಾದಿ ಫಲಾರಾಮಪ್ರತಿಷ್ಠಾ.
೧೨ನೇ ಅಧ್ಯಾಯ — ಮಂಟಪ ಪ್ರತಿಷ್ಠಾವಿಧಿ.
ಪ್ರತಿಷ್ಠೆಯ ಪೂರ್ವದಿನ ಕಲಶಸ್ಥಾಪನ, ಅದರಲ್ಲಿ ಆವಾಹಿಸುವ ದೇವತೆಗಳು, ಕಲಶಕ್ಕೆ ಹಾಕುವ ದ್ರವ್ಯ, ವೃದ್ಧಿಶ್ರಾದ್ಧ, ಮಂಟಪದ ದಿಕ್ಕುಗಳಲ್ಲಿ ದಿಕ್ಪಾಲಕಪೂಜೆ, ಮಧ್ಯಮಂಡಲದಲ್ಲಿ ಸೋಮ, ವಿಷ್ಣು ಗ್ರಹಾದಿಗಳ ಪ್ರಧಾನದೇವತೆ ಅಂಗದೇವತೆಗಳಿಗೆ ಹೋಮದಲ್ಲಿ ಕೊಡುವ ಆಹುತಿಸಂಖ್ಯೆ, ಉತ್ಸರ್ಜನವಕ್ಯ, ವಾಸ್ತುಪೂಜೆ, ಬಲಿಪ್ರದಾನಪೂರ್ವಕ ರಕ್ಷಣಾರ್ಥವಾಗಿ ಪ್ರಾರ್ಥನೆ, ಸಂಕ್ಷೇಪವಿಧಿಕ್ರಮ, ಮಂಡಪದ ಮೇಲೆ ಬಿಳಿಯಕಲಶಕ್ಕೆ ದಾರಸ್ತುರಿ ಸ್ಥಾಪನೆ, ಆವಾಹನೆ, ಈಶಾನ್ಯದಲ್ಲಿ ಯೂಪಸ್ಥಾಪನೆ, ಧ್ವಜಾರೋಪಣೆ, ಪ್ರಪಾಪ್ರತಿಷ್ಠೆಯಲ್ಲಿ ಆವಾಹಿಸುವ ವಿಶೇಷ ದೇವತೆ, ಧ್ವಜಾರೋಪಣ, ಉತ್ಸರ್ಜನಾದಿ ವಿಚಾರಗಳು.
೧೩ನೇ ಅಧ್ಯಾಯ — ಮಹಾಕೂಪ ಪ್ರತಿಷ್ಠಾವಿಧಿ.
ಮೂರುದಿನದಲ್ಲಿ ಆಚರಿಸುವಾಗಿನವಿಧಿ, ಪಶ್ಚಿಮದಲ್ಲಿ ಶ್ವೇತಕಲಶದಲ್ಲಿ ವರುಣಾವಾಹನ, ಕಲಶಕ್ಕೆ ಸಮರ್ಪಿಸುವ ದ್ರವ್ಯ, ಮತ್ತು ಮುದ್ರಾದರ್ಶನ, ದಂಪತಿಭೋಜನ, ಸಹಾಯಾರ್ಥವಾಗಿ ಒಬ್ಬ ವಿಪ್ರನ ನೇಮಕ, ಅಷ್ಟಹಸ್ತ ಪ್ರಮಾಣದ ಮಂಟಪರಚನೆ, ಕಲಶಸ್ಥಾಪನೆ, ಆವಾಹಿಸುವ ದೇವತೆಗಳು, ಅಗ್ನಿಸ್ಥಾಪನ, ಸ್ಥಾಲೀಪಾಕ, ವರುಣನಿಗೆ ದಶಾಹುತಿಮಂತ್ರ, ಆಹುತಿಪ್ರದಾನ ನಾಮ, ಉತ್ಸರ್ಜನಮಂತ್ರ, ಗೋದಾನ, ಕ್ಷುದ್ರಕುಪಪ್ರತಿಷ್ಠೆಯ ಸಂಕ್ಷೇಪವಿಧಿ ಈ ವಿಚಾರಗಳು.
೧೪ನೇ ಅಧ್ಯಾಯ — ಪುಷ್ಪಾರಾಮ ಪ್ರತಿಷ್ಠಾವಿಧಿ.
೧೫ತುಲಸೀ ಮುಂತಾದುವುಗಳ ಪ್ರತಿಷ್ಠಾವಿಧಿ.
ಪ್ರತಿಷ್ಠೆಗೆ ಅರ್ಹವಾದದಿನ, ರಾತ್ರಿಕಲಶಸ್ಥಾಪನೆ, ಕಲಶಕ್ಕೆ ದ್ರವ್ಯ ಸಮರ್ಪಣಮಂತ್ರ, ಸೂತ್ರವೇಷ್ಟನ, ಕ್ಷೀರಧಾರಾಸೇಚನೆ, ಶತಧಾರಾಸೇಚನ, ವಸ್ತ್ರವೇಷ್ಟನ, ಸುವಾಸಿನಿಯರಿಂದ ಅರ್ಚನೆ, ಅಗ್ನಿಸ್ಥಾಪನೆ, ಆಚಾರ್ಯರ ಸದಸ್ಯರ ಸತ್ಕಾರ ದಶಹಸ್ತಮಂಡಪರಚನೆ, ವೃತ್ತದಲ್ಲಿ ಸಹಸ್ತ್ರಾರರಚನೆ, ವಿಷ್ಣುಆವಾಹನೆ, ಆವಾಹಿಸುವ ಇತರ ದೇವತೆಗಳು, ಹೋಮದ್ರವ್ಯಗಳು, ಮತ್ತು ಆಹುತಿಸಂಖ್ಯೆ, ಉತ್ಸರ್ಜನಮಂತ್ರ, ಯೂಪಸ್ಥಾಪನೆ, ಚರುಪಾತ್ರೆಯಲ್ಲಿ ಬಲಿಪ್ರದಾನ, ಧ್ವಜಾರೋಹಣ, ತಿಲದಾನ, ಗೋದಾನ, ಕ್ಷೀರಸೇಚನ ಪ್ರತಿಷ್ಠಾಕರ್ಮಕ್ಕೆ ಅನರ್ಹಅಕ್ಷಗಳು ಇತ್ಯಾದಿ ವಿಚಾರ.
೧೬ನೇ ಅಧ್ಯಾಯ — ಸೇತು ಪ್ರತಿಷ್ಠಾವಿಧಿ.
ಉತ್ತಮಮಧ್ಯಮಾದಿ ಪ್ರತಿಷ್ಠಾವಿಧಿಗೆ ಅನುಗುಣವಾಗಿ ಫಲಪ್ರಾಪ್ತಿಯಲ್ಲಿ ತಾರತಮ್ಯ, ವರ್ತುಲಾಕೃತಿಮಂಟಪರಚನೆ, ವೇದೀರಚನಾಸ್ಥಾನ, ಹಿಂದಿನರಾತ್ರಿ ಕಲಶಸ್ಥಾಪನೆ, ಆವಾಹಿಸುವ ದೇವತೆ, ಪ್ರತಿಷ್ಠಾದಿನಕರ್ತವ್ಯ, ನಾಂದೀಹಿರಣ್ಯಶ್ರಾದ್ಧ, ಆಚಾರ್ಯವರಣ, ಸದಸ್ಯವರಣ, ಇತರ ಯಾಗದಲ್ಲಿ ನೇಮಿಸುವ ವಿಪ್ರಸಂಖ್ಯೆ, ವೇದೀಪೂಜೆ, ಮಂಟಪಪೂಜೆ, ಅಗ್ನಿಪ್ರತಿಷ್ಠೆ, ಸ್ಥಾಲೀಪಾಕ, ಆಹುತಿ ಪ್ರದಾನಸಂಖ್ಯಾನಿಯಮ, ವಿಸ್ತಾರವಿಧಿಯಲ್ಲಿ ವಿವಿಧ ದೇವತೆಗಳಿಗೆ ಕೊಡುವ ಆಹುತಿಸಂಖ್ಯೆ, ಉತ್ಸರ್ಜನಮಂತ್ರ, ಯೂಪಪ್ರತಿಷ್ಠೆ, ಧ್ವಜಾರೋಪಣೆ, ಇತರ ಹೋಮದ್ರವ್ಯಗಳು, ಪೂರ್ಣಾಹುತಿ, ಸೇತುವೆಯ ಮಧ್ಯಭಾಗಗಮನ, ವಾಸ್ತುಪೂಜೆ ಈ ವಿಚಾರಗಳು.
೧೭ನೇ ಅಧ್ಯಾಯ — ಗೋಪ್ರಚಾರ(ಗೋಮಾಳ) ಪ್ರತಿಷ್ಠಾವಿಧಿ.
ಗೋಮಾಳದ ಭೂಮಿಯಿರಬೇಕಾದ ವಿವಿಧಪರಿಮಾಣ, ಈ ಧರ್ಮಕಾರ್ಯದ ಅನಂತಫಲ, ಇದಕ್ಕಾಗಿ ಆರಿಸಬೇಕಾದ ಭೂಮಿಯ ಲಕ್ಷಣ, ಅಲ್ಲಿ ವೇದೀರಚನೆ, ಪ್ರತಿಷ್ಠೆಗೆ ಹಿಂದಿನದಿನ ಅಧಿವಾಸ, ನಾಂದಿಯ ಅನಾವಶ್ಯಕತೆ, ಕಲಶಸ್ಥಾಪನೆ, ಅದರಲ್ಲಿ ಆವಾಹಿಸಬೇಕಾದ ದೇವತೆಗಳು, ಪೂಜಾಮಂತ್ರ, ನೈವೇದ್ಯಾದಿಗಳು, ಅಗ್ನಿಪ್ರತಿಷ್ಠೆ, ಸ್ಥಾಲೀಪಾಕ, ರುದ್ರೋದ್ದೇಶವಾದ ಹೋಮ, ಇತರ ದೇವತೆಗಳಿಗೆ ಆಹುತಿಸಂಖ್ಯೆ, ಹೋಮದ್ರವ್ಯಗಳು, ಯೂಪಸ್ಥಾಪನೆ, ದೀಪಾರೋಪಣೆ, ಉತ್ಸರ್ಜನಮಂತ್ರ, ಗೋಪ್ರಾರ್ಥನಾಮಂತ್ರ ಈ ವಿಚಾರಗಳು.
೧೮ನೇ ಅಧ್ಯಾಯ — ಒಂದೇ ದಿವಸದಲ್ಲಿ ಪ್ರತಿಷ್ಠಾಕರ್ಮ ನಡೆಯಿಸುವ ವಿಧಿ.
ಅಷ್ಟು ಧನಿಕರಲ್ಲದವರು ಒಂದೇದಿನದ ಪ್ರತಿಷ್ಠಾವಿಧಿ ಅನುಸರಿಸಬಹುದೆಂಬ ವಿಚಾರ, ಇದಕ್ಕೆ ಅರ್ಹಕಾಲ, ಪ್ರತಿಮೆಗೆ ಆಜ್ಯದಲ್ಲಿ ಸದ್ಯೋಧಿವಾಸ, ಯಾಗಾಶಾಲಾ ಪ್ರವೇಶ, ಕಲಶಸ್ಥಾಪನೆ, ದೇವತಾವಾಹನ, ನಾಂದೀಪೂಜಾ, ಬ್ರಾಹ್ಮಣಭೋಜನ, ಸ್ಥಂಡಿಲದಲ್ಲಿ ವಿಷ್ಣುಪೂಜೆ, ದೇವಮೂರ್ತಿಗೆ ಯಥೋಕ್ತದ್ರವ್ಯಗಳಿಂದ ಅಭಿಷೇಕ, ತ್ರಿಪತ್ರ, ಪಂಚಪುಷ್ಪ, ಪಂಚಮೃತ್ತಿಕಾ ಪಂಚಗವ್ಯಾದಿ ಅಭಿಷೇಕ ದ್ರವ್ಯವಿವರ, ಪ್ರಾಣಪ್ರತಿಷ್ಠೆ, ಹೋಮಾದಿಗಳು, ಪೂರ್ಣಾಹುತಿ, ದಾನದಕ್ಷಿಣಾದಿವಿಚಾರಗಳು.
೧೯ನೇ ಅಧ್ಯಾಯ — ಕಾಳೀ ಮುಂತಾದ ದೇವತೆಗಳ ಪ್ರತಿಷ್ಠಾವಿಧಿ.
ಪ್ರತಿಷ್ಠೆಗೆ ಹಿಂದಿನದಿನ ಪ್ರತಿಮಾಅಧಿವಾಸ, ನಾಂದೀಪೂಜಾ, ಮೂರ್ತಿಗೆ ಜಲಜ ಪಂಚಗವ್ಯಾದಿಗಳಿಂದ ಅಭಿಷೇಕ, ಪ್ರಾಣಪ್ರತಿಷ್ಠಾ, ಕಲಶಸ್ಥಾಪನ, ಕಲಶದಲ್ಲಿ ದೇವೀಆವಾಹನ, ಕನ್ಯೆಯರಿಂದ ದೇವೀಮೂರ್ತಿಗೆ ಗಂಧೋದಕದ ಅಭಿಷೇಕ, ೩ ದಿನ ಪೆಟ್ಟಿಗೆಯಲ್ಲಿರಿಸುವುದು, ಎಂಟನೆದಿನ ರಾತ್ರಿ ಸಹ ಪೂಜೆ, ಅಗ್ನಿಸ್ಥಾಪನ, ಬಿಲ್ವಪತ್ರೆ ಫಲಗಳ ಶತಾಹುತಿಪ್ರದಾನ, ವಿಪ್ರಭೋಜನ ಶಿವಪ್ರತಿಷ್ಠೆಯಲ್ಲಿ ಅನುಸರಿಸಬೇಕಾದ ವಿಧಾನ, ಅಧಿವಾಸ, ನಾಂದೀಪೂಜೆ, ತ್ರಿವಿಪ್ರಭೋಜನ, ಆಚಾರ್ಯವರಣ, ಮೂರ್ತಿ ಪ್ರಾಣಪ್ರತಿಷ್ಠಾ ಅಗ್ನಿಯಲ್ಲಿ ತಿಲಹೋಮ, ಸಾಲಗ್ರಾಮದಲ್ಲಿ ಮೂರ್ತಿಪ್ರತಿಷ್ಠೆಯನ್ನು ವಿಧಿವತ್ತಾಗಿ ಮಾಡುವ ಆವಶ್ಯಕತೆ, ಸೂರ್ಯ, ಗಣೇಶ, ಬ್ರಹ್ಮಾದಿ ಮೂರ್ತಿಪ್ರತಿಷ್ಠೆಯ ವಿಶೇಷಕ್ರಮ, ಅಧಿವಾಸದ ದಿನಸಂಖ್ಯೆ ವಟವೃಕ್ಷಸಾನ್ನಿಧ್ಯದಲ್ಲಿ ಕಲಶಸ್ಥಾಪನ, ಆವಾಹಿಸುವ ದೇವತೆಗಳು, ಸೂರ್ಯಾವಾಹನದಲ್ಲಿ ಚಕ್ರದ ಆವಶ್ಯಕತೆ ಕೆಂಪುಕಮಲಪುಷ್ಪದಿಂದ ೨೮ ಆಹುತಿ, ವಾರಾಹೀ, ತ್ರಿಪುರಾ ಮುಂತಾದ ದೇವೀಪ್ರತಿಮೆಗೆ ನಾರಿಕೇಳೋದಕದ ಅಧಿವಾಸ, ಪ್ರಾಣಪ್ರತಿಷ್ಠೆ, ಸಿಂಧೂರಲೇಪನ, ನೈವೇದ್ಯ ವಸ್ತುಗಳು, ಕುಮಾರಿಭೋಜನ, ಹೋಮ, ರಾತ್ರಿಜಾಗರಣ, ಮುಂತಾದ ವಿಚಾರಗಳು.
೨೦ನೇ ಅಧ್ಯಾಯ — ದುರ್ನಿಮಿತ್ತದಿಂದಾಗುವ ಅರಿಷ್ಟಗಳು ಅವುಗಳಿಗೆ ಶಾಂತಿ ವಿಧಾನ
ದುರ್ನಿಮಿತ್ತದಲ್ಲಿರುವ ದಿವ್ಯ ಅಂತರಿಕ್ಷಭೌಮ ಎಂಬ ಮೂರುವಿಧ, ಅವುಗಳ ಸ್ವರೂಪ, ಸೂರ್ಯಗ್ರಹಾರಿಷ್ಟಕಾಲದಲ್ಲಿ ಉಂಟಾಗುವ ದುರ್ನಿಮಿತ್ತ, ಅದಕ್ಕೆ ಶಾಂತಿವಿಧಾನ, ಸೋಮಗ್ರಹಾರಿಷ್ಟಸೂಚನೆ, ಅದಕ್ಕೆ ಮಾಡಬೇಕಾದ ಶಾಂತಿಕರ್ಮ ವಿಧಾನ, ಅಂಗಾರಕ ಗ್ರಹದ ಅರಿಷ್ಟಕಾಲದಲ್ಲಿ ತೋರುವ ದುರ್ನಿಮಿತ್ತ, ಅದರ ಶಾಂತಿ ವಿಧಿ, ಬಲಿಪ್ರದಾನ; ಬುಧಗ್ರಹಾರಿಷ್ಟಕಾಲದಲ್ಲಿ ಕಾಣುವ ಉತ್ಪಾತಗಳು, ಆಗ ನಡೆಯಿಸಬೇಕಾದ ಶಾಂತಿ, ಬೃಹಸ್ಪತಿ ಗ್ರಹ ಸಂತುಷ್ಟನಾದನೆಂಬುದಕ್ಕೆ ಕಾಣೂವ ನಿದರ್ಶನ, ಶುಕ್ರಗ್ರಹಾರಿಷ್ಟವೊದಗಿದಾಗ ಸಂಭವಿಸುವ ದುರ್ನಿಮಿತ್ತ ಅದರ ಶಾಂತಿವಿಧಾನ, ಶನಿಗ್ರಹಾರಿಷ್ಟವುಂಟಾದಾಗ ಕಾಣುವ ಉತ್ಪಾತಗಳು, ಅದರ ಶಾಂತ್ಯರ್ಥವಾದ ಹೋಮ, ದಾನಾದಿಗಳು, ರಾಹು ಅರಿಷ್ಟಕಾಲದಲ್ಲಿ ತೋರುವ ವಿವಿಧ ದುಷ್ಟ ಉಪದ್ರವಾದಿಗಳು, ಅದರ ಶಾಂತಿವಿಧಾನ, ಕೇತುಗ್ರಹಾರಿಷ್ಟಸೂಚನೆ, ಅದಕ್ಕೆ ಶಾಂತಿಪ್ರಕ್ರಿಯೆ, ಅಕ್ಷಿಸ್ಪಂದನಾದಿ ಶಕುನಗಳ ಸತ್ಫಲ ದುಷ್ಫಲ ವಿಚಾರ, ಶಾಂತಿಕರ್ಮಕ್ಕೆ ರಚಿಸಬೇಕಾದ ಕುಂಡಗಳ ವಿವರ, ಅಧಿದೇವತೆ ಪ್ರತ್ಯಧಿ ದೇವತೆಗಳಿಗೆ ಆಹುತಿಪ್ರದಾನ ಸಂಖ್ಯಾನಿರ್ಣಯ, ಮೂರಿದಿನ ನಡೆಯಿಸುವ ಮಹಾಹೋಮಗಳಲ್ಲಿ ಪ್ರತಿದಿನದಲ್ಲಿ ಮಾಡಬೇಕಾದ ಹೋಮಪರಿಮಾಣವಿಚಾರ ಇವು ಉಕ್ತವಾಗಿವೆ.