ಭವಿಷ್ಯಮಹಾಪುರಾಣಂ – ಭಾಗ – ೫: ಮಧ್ಯಮಪರ್ವ – ಪ್ರಥಮ ಸಂಪುಟ
ಆರಂಭಿಕ ಪುಟ
ಅನುವಾದಕರು: ಶ್ರೀ ಚನ್ನಕೇಶವಯ್ಯ ಬಿ.
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ — ಮಂಗಲಾಚರಣೆ, ಭವಿಷ್ಯಪುರಾಣಪ್ರಶಂಸೆ, ಧರ್ಮಸ್ವರೂಪವರ್ಣನೆ.
೨ನೇ ಅಧ್ಯಾಯ — ವಿರಾಟ್ ಬ್ರಹ್ಮಾಂಡೋತ್ಪತ್ತಿ ವಿಸ್ತಾರವರ್ಣನೆ.
೩ನೇ ಅಧ್ಯಾಯ — ಸ್ವರ್ಗಪಾತಾಳಾದಿ ಊರ್ಧ್ವಾಧೋಲೋಕವರ್ಣನೆ.
೪ನೇ ಅಧ್ಯಾಯ — ಭೂಲೋಕವಿಸ್ತಾರ ಮತ್ತು ಜ್ಯೋತಿಶ್ಚಕ್ರವರ್ಣನೆ.
ಸಪ್ತದ್ವೀಪಗಳು, ಸಪ್ತಸಮುದ್ರಗಳು, ಮೇರು, ಮತ್ತು ಅದರ ಪರಿಸರದ ಪರ್ವತಗಳು. ಭರತವರ್ಷ ಮುಂತಾದ ನವವರ್ಷಗಳು, ಬ್ರಹ್ಮಾದಿಗಳ ಸ್ಥಾನ, ಇವುಗಳ ನಿರ್ಣಯ, ರಾಶಿಚಕ್ರದಲ್ಲಿ ಸೂರ್ಯನಸಂಚಾರ, ಅಹಸ್ಸಿನ ವೃದ್ಧಿಕ್ಷಯಗಳಿಗೆ ಕಾರಣ, ಮಲಮಾಸನಿರ್ಣಯ, ಗ್ರಹಗಳ ಉದಯಾಸ್ತವಿಚಾರ, ಸಪ್ತರ್ಷಿ ಮಂಡಲಸ್ಥಾನ.
೫ನೇ ಅಧ್ಯಾಯ — ವರ್ಣತ್ರಯಪ್ರಶಂಸೆ, ಬ್ರಾಹ್ಮಣಲಕ್ಷಣ ಮತ್ತು ಕರ್ತವ್ಯ.
೬ನೇ ಅಧ್ಯಾಯ — ಬ್ರಾಹ್ಮಣಮಾಹಾತ್ಮ್ಯ, ಗುರುಗುಣವರ್ಣನೆ.
೭ನೇ ಅಧ್ಯಾಯ — ಪುರಾಣಶ್ರವಣಮಾಹಾತ್ಮ್ಯ, ಮತ್ತು ಪುರಾಣಶ್ರವಣವಿಧಾನ.
೮ನೇ ಅಧ್ಯಾಯ — ಪುರಾಣೇತಿಹಾಸಾದಿ ವಿಭಾಗಪೂರ್ವಕ ಅಂಗಮಾಹಾತ್ಮ್ಯವರ್ಣನೆ.
೯ನೇ ಅಧ್ಯಾಯ — ಅಂತರ್ವೇದಿ ಬಹಿರ್ವೇದಿ ವರ್ಣನಪೂರ್ವಕ ‘ಪೂರ್ತ’ ಕರ್ಮನಿರೂಪಣೆ.
ಜ್ಞಾನಪ್ರಾಧಾನ್ಯವಾದ ನಿಷ್ಕಾಮಕರ್ಮ (ಅಂತರ್ವೇದಿ); ಕಾಮ್ಯ ಫಲಾಪೇಕ್ಷೆಯಿಂದ ಆಚರಿಸುವ ದೇವಾಲಯ, ತಟಾಕ ಆರಾಮ ಇವುಗಳ ಪ್ರತಿಷ್ಠಾದಿಗಳು (ಬಹಿರ್ವೇದಿ); ಬಹಿರ್ವೇದಿಯಲ್ಲಿ ಎಂಭತ್ತೇಳುವಿಧ, ಒಂದೊಂದರಲ್ಲೂ ಪ್ರತಿಷ್ಠಾವಿಧಿಯ ವಿಸ್ತಾರಾನುಗುಣವಾಗಿ ಉತ್ತಮಮಧ್ಯಮಾದಿ ಭೇದಗಳು; ಪೂರ್ತಕತ್ಮದ ವೈವಿಧ್ಯ, ಈ ಕಾರ್ಯಕ್ಕೆ ಅನರ್ಹವಾದ ದಿಕ್ಕು, ಜಲಾಶಯವನ್ನು ನಿರ್ಮಿಸಿ ಪ್ರತಿಷ್ಠೆ ಮಾಡದೆಹೋದರೆ ಆಗುವ ಪರಿಣಾಮ; ಈ ಕಾರ್ಯ ಸಾರ್ಥಕವಾಗಲು ಧರ್ಮಮಾರ್ಗಾರ್ಜಿತದ್ರವ್ಯ, ಮನಶ್ಯುದ್ಧಿ, ವಿಹಿತಕಾಲ, ವಿಧ್ಯುಕ್ತಕ್ರಮ ಇವುಗಳೇ ಸಾಧನವೆಂಬ ವಿಚಾರ; ಜಲಾಶಯ ಜೀರ್ಣೋದ್ಧಾರದಲ್ಲಿ ವೈಶಿಷ್ಟ್ಯ, ಈ ಕರ್ಮದ ಪರಮಫಲ, ನಳಿನಿ ಮುಂತಾದ ಪುಷ್ಕರಿಣೀಲಕ್ಷಣ, ಜಲಾಶಯದಲ್ಲಿ ಯೂಪಪ್ರತಿಷ್ಠೆ, ವಿವಿಧಜಲಾಶಯಗಳಿಗೆ ಬೇಕಾದ ಯೂಪಸ್ತಂಭಗಳ ಪ್ರಮಾಣ, ಯೂಪಾರ್ಹವೃಕ್ಷಗಳು.
೧೦ನೇ ಅಧ್ಯಾಯ — ಆರಾಮಪ್ರತಿಷ್ಠೆ, ವಿವಿಧವೃಕ್ಷಾರೋಪಣ ವಿಧಿವರ್ಣಣೆ.
ವೃಕ್ಷಸಂಖ್ಯಾನುಗುಣವಾಗಿ ಆರಾಮಗಳಲ್ಲಿನ ಉತ್ತಮಾದಿಭೇದಗಳು, ತದಂಗವಾಗಿ ಜಲಾಶಯ ನಿರ್ಮಾಣಕ್ಕೆ ಪ್ರದೇಶಪರೀಕ್ಷಾಕ್ರಮ, ಆ ಮೂಲಕ ಭವಿಷ್ಯಫಲನಿರ್ಣಯ, ಭೂಮಿಯ ಉಳಮೆ, ಈ ಕಾರ್ಯಕ್ಕೆ ಉಪಯೋಗಿಸುವ ವೃಷಭದ ವರ್ಣವಿಚಾರ, ಪಂಚವ್ರೀಹಿರೋಪಣೆ, ಖನಿತ್ರಪೂಜಾವಿಧಿ, ಇದಕ್ಕೆ ಉತ್ತಮವಾದ ಕಾಲ, ಆ ಸಂದರ್ಭದಲ್ಲಿ ರಚಿಸಬೇಕಾದ ಆಕೃತಿಗಳು, ರೋಪಣೆಯ ಬೀಜಸಂಸ್ಕಾರಕ್ರಮ, ಬೀಜವಾಪನಮಂತ್ರ, ತುಲಸೀ ರೋಪಣವಿಧಾನ, ಅದಕ್ಕೆ ಅನರ್ಹಪ್ರದೇಶ, ವಿವಿಧವೃಕ್ಷಪ್ರತಿಷ್ಠಾನುಗುಣವಾದ ಸತ್ಫಲದುಷ್ಫಲಗಳು, ವೃಕ್ಷಭೇದಾನುಗುಣವಾಗಿ ಲಭಿಸುವ ಪುಣ್ಯತಾರತಮ್ಯ; ತುಲಸೀರೋಪಣದಲ್ಲಿ ಮಾಸಾನುಗುಣಫಲ, ವೃಕ್ಷದೋಹದ ಕ್ರಿಯೆಗಳು, ಮೂಷಿಕ ಕೀಟಾದಿಗಳ ನಾಶನವಿಧಾನ, ವೃಕ್ಷಾನುಗುಣವಾದ ಗೊಬ್ಬರ, ಹೆಚ್ಚು ಬೆಳೆಯಾಗುವುದಕ್ಕಾಗಿ ಬೀಜಕ್ಕೆ ಹೊಗೆ ಕೊಡುವ ವಿಧಾನ, ವಿವಿಧ ವೃಕ್ಷರೋಪಣಗಳಲ್ಲಿ ಅಂತರ, ವೃಕ್ಷಪ್ರತಿಷ್ಠಾಂಗವಾಗಿ ಕಲಶಸ್ಥಾಪನ ವಿಧಾನ.
೧೧ನೇ ಅಧ್ಯಾಯ — ತಟಾಕಪ್ರತಿಷ್ಠೆ ಕೂಪಪ್ರತಿಷ್ಠೆಗಳ ವಿಶೇಷವಿಧಿ.
೧೨ನೇ ಅಧ್ಯಾಯ — ದೇವತಾಪ್ರತಿಮಾಲಕ್ಷಣ.
ಸಲಕ್ಷಣವಲ್ಲದ ಪ್ರತಿಮೆಯು ಪೂಜಾರ್ಹವಲ್ಲದ ವಿಚಾರ, ಗೃಹದಲ್ಲಿಡಬಹುದಾದ ಪ್ರತಿಮೆಯಪರಿಮಾಣ, ದೇವಾಲಯದಲ್ಲಿಡಬಹುದಾದ ಪ್ರತಿಮೆಯ ಪರಿಮಾಣ, ಪಿಂಡಿಕ, ವಿಗ್ರಹಶರೀರ, ಮುಖ, ಅವಯವಗಳು, ಇವುಗಳ ಪರಿಮಾಣ, ಕಿರೀಟ, ಅಂಗದ ಪ್ರಭಾವಲಯಾದಿಗಳ ವಿಚಾರ, ನಾನಾಪ್ರತಿಮೆಗೆ ಉಕ್ತವಾದ ಅಳತೆ, ಶಿವ, ವಿಷ್ಣು, ಶಕ್ತಿ ಈ ದೇವರ ಆಯುಧಾದಿಗಳು ಮತ್ತು ಅಂಗ ದೇವತೆಗಳು, ಸಲಕ್ಷಣವಾದ ಪ್ರತಿಮೆಯಪ್ರತಿಷ್ಠೆಗೆ ಅರ್ಹವಾದ ಸ್ಥಳವಿಶೇಷ, ಹಾಗೆ ಮಾಡಿದುದರ ಮಹತ್ಫಲ, ಪ್ರತಿಮಾರಚನಾರ್ಹ ವೃಕ್ಷಗಳು.
೧೩ನೇ ಅಧ್ಯಾಯ — ಕರ್ಮಾಂಗವಾದ ವಿವಿಧವಿಧಿ, ಕುಂಡನಿರ್ಣಯ.
ಕುಂಡಗಳ ವಿವಿಧಪ್ರಕಾರ, ಕುಂಡರಚನಾಸ್ಥಳದ ಭೂಶೋಧನೆ, ಅಂಕುರಾರ್ಪಣ, ಕೀಲಕಸೂತ್ರಸ್ಥಾಪನ, ವೃತ್ತಕುಂಡ ಪದ್ಮಕುಂಡಾದಿಗಳ ರಚನಾಕ್ರಮ. ಪುಷ್ಕರಣಿ, ಆರಾಮ ಇವುಗಳ ಪ್ರತಿಷ್ಠೆಗೆ ಉಕ್ತವಾದ ಕುಂಡಗಳು, ವಿವಿಧಯಜ್ಞಗಳಿಗೆ ಉಕ್ತವಾದ ಚತುರಸ್ರಾದಿ ಕುಂಡಗಳು, ಅಷ್ಟಾಸ್ರ, ಪಂಚಾಸ್ರ, ತ್ರ್ಯಸ್ರ, ಸಪ್ತಾಸ್ರಕುಂಡಗಳಲ್ಲಿ ಮಾಡಬೇಕಾದ ವಿಶೇಷಹೋಮಗಳು, ವಿವಿಧಕುಂಡಗಳ ಮೇಖಲಾಲಕ್ಷಣ, ಕುಂಡಪರಿಮಾಣಾನುಗುಣವಾದ ಮೇಖಲಾಸಂಖ್ಯೆ, ಯೋನಿ ನಾಭಿ ಇವುಗಳ ಆವಶ್ಯಕತೆಯಿಲ್ಲದ ಕುಂಡಗಳು, ಕುಂಡರಚನೆಗೆ ನದೀತೀರದಲ್ಲಿ ಬಿಡಬೇಕಾದ ಅಂತರ ಕುಂಡದಜತೆ ಮಂಡಲರಚನೆ ಮಾಡಬೇಕಾದ ದಿಕ್ಕಿನ ವಿಚಾರ.
೧೪ನೇ ಅಧ್ಯಾಯ — ಯಜ್ಞವಿಶೇಷಾನುಗುಣವಾಗಿ ಆಹುತಿ ಹೋಮಸಂಖ್ಯೆಯಪರಿಮಾಣ.
೧೫ನೇ ಅಧ್ಯಾಯ — ಕುಂಡಗಳಿಗೆ ಶಾಸ್ತ್ರೋಕ್ತವಾಗಿ ಆಗಬೇಕಾದ ಹದಿನೆಂಟು ಸಂಸ್ಕಾರಗಳು.
ಅವೇಕ್ಷಣ, ಪ್ರೋಕ್ಷಣ, ತ್ರಿಸೂತ್ರೀಕರಣಾದಿಗಳು, ಅಗ್ನಿಜಿಹ್ವಾಕ್ಲನ, ಅಗ್ನ್ಯಾಹರಣ, ಅಗ್ನಿಸಂರ್ಕರಣ, ಕುಂಡದಲ್ಲಿ ಈ ಮುಂಚೆ ವಾಗೀಶ್ವರಾವಾಹನ, ಅಗ್ನಿಪುರುಷಧ್ಯಾನ, ವಿವಿಧ ಆಹುತಿಗಳನ್ನು ಕೊಡಬೇಕಾದ ಅಗ್ನಿಜಿಹ್ವೆ, ಮತ್ತು ಅವಯವ ಸ್ಥಾನಗಳು, ಕ್ರೂರಕರ್ಮಗಳಲ್ಲಿ ವಿನಿಯೋಗಿಸುವ ಅಗಿಜಿಹ್ವೆಗಳು, ಉಕ್ತಸ್ಥಾನಕ್ಕೆ ವ್ಯತಿರಿಕ್ತವಾಗಿ ಹೋಮಮಾಡುವುದರ ದುಷ್ಫಲ, ಆಹುತಿಪ್ರದಾನಕಾಲದ ಜ್ವಾಲಾಲಕ್ಷಣದಿಂದ ಫಲ ನಿರ್ಣಯ, ಅಗ್ನಿನಸ್ಟ ಪ್ರಾಯಶ್ಚಿತ್ತವಿಚಾರ.
೧೬ನೇ ಅಧ್ಯಾಯ — ಹೋಮಾಂತದಲ್ಲಿ ಷೋಡಶೋಪಚಾರಪೂಜೆ.
೧೭ನೇ ಅಧ್ಯಾಯ — ಮೂರು ವಿಧ ಯಜ್ಞಗಳು, ಕರ್ಮವಿಶೇಷಾನುಗುಣವಾದ ವಹ್ನಿನಾಮಗಳು.
೧೮ನೇ ಅಧ್ಯಾಯ — ಹೋಮದ್ರವ್ಯಪ್ರಮಾಣವರ್ಣನೆ.
ಉಕ್ತಪ್ರಮಾಣಾತಿಕ್ರಮಣದದೋಷ, ಘೃತಕ್ಷೀರಾದಿಗಳ ಮತ್ತು ಅರಳು, ಅವಲಕ್ಕಿ, ಸಕ್ಕರೆ, ಪತ್ರೆ, ಕಬ್ಬು, ಪುಷ್ಪಗಳು ಇವುಗಳ ಆಹುತಿಪ್ರಮಾಣ; ಸಮಿಲ್ಲಕ್ಷಣ ಮತ್ತು ಪ್ರಮಾಣ; ವ್ರೀಹಿ, ಸರ್ಪಷ, ಮೆಣಸು, ಮೂಲಂಗಿ, ಚಂದನ ಇವುಗಳ ಆಹುತಿ ಪ್ರಮಾಣ; ಹೋಮದ್ರವ್ಯಗಳ ಪ್ಲಾವನವಿಧಾನ.
೧೯ನೇ ಅಧ್ಯಾಯ — ಸ್ರುವ ದರ್ವೀ ನಿರ್ಮಾಣ ನಿರ್ಣಯ.
೨೦ನೇ ಅಧ್ಯಾಯ — ಪೂರ್ಣಾಹುತಿಹೋಮ ಕರ್ಮಪರಬ್ರಾಹ್ಮಣಸಂಖ್ಯೆ.
೨೧ನೇ ಅಧ್ಯಾಯ — ದೇವತಾಪರವಾದ ಮತ್ತು ಕರ್ಮಪರವಾದ ಮಂಡಲ ನಿರ್ಮಾಣವಿಧಿ.
ಮಂಡಲರಹಿತವಾದ ಪೂಜೆಯನಿಷ್ಫಲ; ಯಂತ್ರ, ಸಾಲಗ್ರಾಮಾದಿ ಶಿಲಾ, ಮಣಿ, ಪ್ರತಿಮಾ ಮುಂತಾದ ಮೂರ್ತಿಸಾನ್ನಿಧ್ಯ ಸನ್ನಿವೇಶ, ವೈಷ್ಣವಯಾಗದ ಚತುರಸ್ರಪ್ರಭೇದಗಳು, ಕ್ರೌಂಚಘ್ರಾಣಮಂಡಲ ಪ್ರಭೇದ, ಸರ್ವತೋಭದ್ರ ಮುಂತಾದ ನಲವತ್ತು ಮಂಡಲಗಳ ನಾಮಗಳು, ವೇದಿಕೆಯ ಪ್ರಮಾಣ, ನವವ್ಯೂಹ, ಲವಲೀ ಭಿತ್ತಿವೇದಿಕಾ ಇವುಗಳ ವಿಚಾರ, ವಿವಿಧಯಾಗ ವೇದಿಯಲ್ಲಿ ಉಪಯೋಗಿಸುವ ವಿವಿಧ ಕೀಲಕಸೂತ್ರಗಳ ಲಕ್ಷಣ.
ದ್ವಿತೀಯ ಭಾಗ: ೧ನೇ ಅಧ್ಯಾಯ — ಕರ್ಮಗಳಿಗೆ ಅನುಗುಣಪಾದ ಮಂಡಲಗಳು.
೨ನೇ ಅಧ್ಯಾಯ — ಕ್ರೌಂಚಘ್ರಾಣ ಮುಂತಾದ ವಿವಿಧ ಮಂಡಲಗಳ ನಿರ್ಮಾಣಕ್ರಮ.
೩ನೇ ಅಧ್ಯಾಯ — ಅಳತೆಗೆ ಮೀರಿದ ಮಂಡಲ, ದಕ್ಷಿಣಾಹೀನವಾದ ಯಜ್ಞ ಇವುಗಳ ದೋಷ.
೪ನೇ ಅಧ್ಯಾಯ — ಪೂರ್ಣಪಾತ್ರಪರಿಮಾಣ, ಕರ್ಮಾನುಗುಣವೇತನಾದಿ ನಿರ್ಣಯ.
ಮಂಡಲರಚನೆಯ ವೇತನ, ಇಟ್ಟಿಗೆ ಕೆಲಸದಲ್ಲಿ ಪ್ರದೇಶಾನುಗುಣವಾಗಿ ದಿನವೇತನ, ನೆಯ್ಗೆಯವ, ಮೇದರವ, ನಾಪಿತ, ಅಗಸ, ಮುಂತಾದ ಕರ್ಮಕಾರರ ಕೂಲಿ, ಉಳುಮೆ, ವೃಕ್ಷರೋಪಣೆ ಇವಕ್ಕೆ ಗೊತ್ತಾದ ವೇತನ, ಸ್ತ್ರೀಯರಿಗೆ ವೇತನ, ಕಬ್ಬಿನಗಾಣ ಆಡಿಸುವುದು, ಪುಷ್ಪಮಾಲಾರಚನೆ ಇವುಗಳ ಕೂಲಿ, ದೀಪವರ್ತಿ ಪ್ರಮಾಣ, ದೀಪಸ್ತಂಭಲಕ್ಷಣ.
೫ನೇ ಅಧ್ಯಾಯ — ಕಲಶಸ್ಥಾಪನಪ್ರಕಾರ ಕಲಶನಿರ್ಮಾಣ.
ಕಲಶದ ಏಳುಅಂಗಗಳು, ಪಂಚಪಲ್ಲವಗಳು, ಕಲಶಕ್ಕೆ ಅರ್ಹವಾದ ಲೋಹ, ಮಂಡಲರಚನೆ, ಸ್ವಸ್ತಿಕರಚನೆ, ಭೂಪ್ರಾರ್ಥನೆ, ಧಾನ್ಯಸೂಕ್ತ, ಪಂಚವ್ರೀಹಿಸಮರ್ಪಣ, ಕಲಶಸ್ಥಾಪನ, ಗಂಗಾ ಜಲಕ್ಷೇಪಣ, ಪಂಚಫಲಸಮರ್ಪಣ, ಇದಕ್ಕೆ ಅನರ್ಹಫಲಗಳು, ಪಂಚರತ್ನಸಮರ್ಪಣ, ಅಮೃತೀಕರಣ, ಗಂಧಾದಿಸಮರ್ಪಣ.
೬ನೇ ಅಧ್ಯಾಯ — ಚತುರ್ವಿಧವಾದ ಮಾಸ, ಅವುಗಳ ಲಕ್ಷಣಗಳು, ಇದನ್ನು ಅನುಸರಣ ಮಾಡಬೇಕಾದವರು.
೭ನೇ ಅಧ್ಯಾಯ — ದೇವಕರ್ಮ ಪಿತೃಕರ್ಮಗಳಿಗೆ ಯುಕ್ತವಾದ ಕಾಲ, ಆ ಕರ್ಮಗಳಿಗೆ ತಿಥಿನಿರ್ಣಯ.
ಸಕಾಲದಲ್ಲಿ ಮಾಡಿದ ಕರ್ಮಕ್ಕೆ ಫಲಪ್ರಾಪ್ತಿ ವಿಚಾರ. ಕಾಲದ ಒಳಭೇದ, ಧರ್ಮಾಧರ್ಮವ್ಯವಹಾರಕ್ಕೆ ವಿಹಿತಕಾಲ ನಿಷಿದ್ಧ ಕಾಲಗಳು, ಪಿತೃಕಾರ್ಯಕ್ಕೆ ಇರಬೇಕಾದ ತಿಥಿವ್ಯಾಪನೆ, ದೇವಕಾರ್ಯಕ್ಕೆ ತಿಥಿವ್ಯಾಪನೆ, ವೃದ್ಧಿಶ್ರಾದ್ಧಕ್ಕೆ ವಿಹಿತಕಾಲ, ಈ ಶ್ರಾದ್ಧಾಚರಣಕ್ರಮ, ಈ ಶ್ರಾದ್ಧಕ್ಕೆ ಅನರ್ಹಕಾಲ, ವಿದ್ಧತಿಥಿಪಕ್ಷದಲ್ಲಿ ಅನುಸರಣಕ್ರಮ, ಏಕಾದಶ್ಯುಪವಾಸನಿರ್ಣಯ, ತಿಥಿವ್ಯಾಪನಾಂಗವಾಗಿ ಉಪವಾಸನಾನರ್ಹಸಂದರ್ಭ, ನಕ್ತಭೋಜನ ಪಾರಣಗಳಿಗೆ ತಿಥಿಪ್ರಮಾಣ, ಯಾನರೋಹಣಕಾಲ, ಮೃತ್ಪಾತ್ರಗ್ರಹಣ ವಿಸರ್ಜನವಿಧಾನ.
೮ನೇ ಅಧ್ಯಾಯ — ನಾನಾಮಾಸಗಳ ಪ್ರತಿಪತ್ತಿನಿಂದ ಅಮಾವಾಸ್ಯಾವರೆಗಿನ ತಿಥಿಗಳಲ್ಲಿ ಮಾಡುವ ಪೂಜಾದಿಕರ್ಮಗಳು.
ಆಶ್ವಯುಜ, ಕಾರ್ತಿಕ, ಮಾಘ, ಚೈತ್ರ, ಈ ಮಾಸಗಳ ಶ್ರೇಷ್ಠತೆ, ಪ್ರತಿಪತ್ತಿನ ಇಷ್ಟಿ, ವಿವಿಧ ದ್ವಿತೀಯಾವ್ರತಗಳು, ಶ್ರವಣಯುಕ್ತ ತೃತೀಯೆ, ಭರಣೀಯುಕ್ತ, ಚತುರ್ಥಿ ಇವುಗಳ ಶ್ರೇಷ್ಠತೆ, ಶಿವಾಶಾಂತಾ, ಸುಖಾ ಮುಂತಾದ ಚತುರ್ಥಿಗಳು, ಶ್ರಾವಣಪಂಚಮಿ ನಾಗಾರಾಧನ, ಸ್ನುಹಿಪೂಜೆ, ಷಷ್ಠಿಯಲ್ಲಿ ಸ್ಕಂದಪೂಜಾಶ್ರೇಷ್ಠತೆ, ಭಾನುಸಪ್ತಮೀಮಹಿಮಾ, ಕೃಷ್ಣಾಷ್ಟಮೀಮಾಹಾತ್ಮೆ, ದಶಮಿ ಪ್ರಭೇದಗಳು, ಏಕಾದಶೀವ್ರತಕ್ರಮ, ಶ್ರವಣದ್ವಾದಶೀ ವಿಚಾರ, ದ್ವಾದಶೀಕರ್ತವ್ಯ ಶತ್ರುಜಯಶಕ್ತಿಪೂಜಾ; ಧ್ವಜಾರೋಹಣ, ತತ್ಸೂಚನಾಂಗ ಗ್ರಹಾರಿಷ್ಟ; ಶಾಂತಿ, ಅನಂತಚತುರ್ದಶೀ ವಿಧಾನ, ಮಾಘಶುಕ್ಲ ತ್ರಯೋದಶೀ ವಟಪಾದಪೂಜಾ, ಮಾಘಕೃಷಷ್ಣ ಚತುರ್ದಶೀ ಶಿವರಾತ್ರಿಪೂಜಾ, ಮಹಾಚೈತ್ರೀ ಮುಂತಾದ ಪೂರ್ಣಿಮೆಗಳಲ್ಲಿ ವಾಸಿಸಬೇಕಾದ ಕ್ಷೇತ್ರ, ಆಶ್ವಯುಜ ಕೃಷ್ಣ ಚತುರ್ದಶಿ ಅಮಾವಾಸ್ಯಾಕರ್ತವ್ಯ ಲಕ್ಷ್ಮೀಪೂಜಾ; ದೀಪವೃಕ್ಷ ಸಮರ್ಪಣ.
೯ನೇ ಅಧ್ಯಾಯ — ಗೋತ್ರಪ್ರವರ ಸಂತಾನವರ್ಣನ.
೧೦ನೇ ಅಧ್ಯಾಯ — ಬಲಿಮಂಡಲಪೂರ್ವಕ ವಾಸ್ತುಯಾಗವಿಧಿ.