ಭವಿಷ್ಯಮಹಾಪುರಾಣಂ – ಭಾಗ – ೨: ಬ್ರಾಹ್ಮಪರ್ವ – ದ್ವಿತೀಯ ಸಂಪುಟ
ವಿಷಯಾನುಕ್ರಮಣಿಕೆ
ಪತಿಪತ್ಕಲ್ಪ ವಿಚಾರ – ಅಗ್ನಿ, ಗಾಯತ್ರಿ ಇವರ ಅನುಗ್ರಹದಿಂದ ಬ್ರಹ್ಮಲೋಕಪ್ರಾಪ್ತಿ ವಿಚಾರ – ಕಾರ್ತಿಕಶುದ್ಧ ಪೂರ್ಣಿಮಾದಿನ ಬ್ರಹ್ಮನ ರಥೋತ್ಸವಕ್ರಮ, ರಥಾರೋಹಣಕ್ಕೆ ಪೂರ್ವಶಾಂಡಿಲ್ಯ ಗೋತ್ರಜನಾದ ಅಗ್ನಿ ಪ್ರತಿಷ್ಠೆ, ಹೋಮಾದಿ ಕಾರ್ಯಗಳು, ರಥಾರೋಹಣ, ವೇದಘೋಷ, ಪ್ರೇಕ್ಷಣಕಾದಿಗಳಿಂದ ರಾತ್ರಿ ಜಾಗರಣ ಮಾಡುವುದು, ಮಾರನೆಯದಿನ ಬ್ರಾಹ್ಮಣಭೋಜನ ಸನ್ನಾಹ, ರಥಚಲನಮಾರ್ಗಕ್ಕೆ ಪುಣ್ಯಾಹಜಲ ಸಮಾರ್ಜನ, ರಥಚಲನ, ಯಾರು ಯಾರು ರಥಸ್ಪರ್ಶಮಾಡಬಾರದೆಂಬ ವಿಚಾರ, ಕಾರ್ತಿಕಬಹುಳ ಅಮಾವಾಸ್ಯೆಯದಿನ ದೀಪಾರಾಧನದಮಹಿಮೆ, ಕಾರ್ತಿಕ ಪ್ರತಿಪತ್ತಿನ ವೈಶಿಷ್ಟ್ಯ, ಬಲಿರಾಜ್ಯ ಪ್ರತಿಪದ್ವಿಚಾರ, ಭಕ್ತಸಮುದಾಯದಲ್ಲಿ ಸ್ಪರ್ಶದೋಷವಿಲ್ಲದ ವಿಚಾರ, ಗೋವುಗಳ ಶ್ರೇಯಸ್ಸಿಗಾಗಿ ಆ ದಿನ ಆಚರಿಸಬೇಕಾದ ಕಾರ್ಯ.
ದ್ವಿತೀಯಾ ಕಲ್ಪವಿಚಾರ, ಪುಷ್ಪದ್ವಿತೀಯಾ ಮಹಾತ್ಮ್ಯವರ್ಣನ ಗಂಗಾತೀರದಲ್ಲಿ ಚ್ಯವನಋಷಿಯ ಉಗ್ರತಪಸ್ಸು, ಶರ್ಯಾತಿ ರಾಜನು ಗಂಗಾಸ್ನಾನಾರ್ಥವಾಗಿ ಬಂದುದು. ರಾಜಪುತ್ರಿ ಸುಕನ್ಯೆಯು ವಲ್ಮೀಕಗತನಾಗಿದ್ದ ಮುನಿಯತೇಜೋಮಯ ದೃಷ್ಟಿಯನ್ನು ಚುಚ್ಚಿ ಅಕಾರ್ಯಮಾಡುವಿಕೆ, ಈ ವಿಚಾರ ತಿಳಿದು ರಾಜನು ಮುನಿಯ ಕ್ಷಮಾಪ್ರಾರ್ಥನೆಮಾಡುವಿಕೆ, ಮುನಿಯು ಸುಕನ್ಯೆಯನ್ನು ಕೊಡೆಂದು ಕೇಳಿ ಮದುವೆಯಾದ್ದು, ಅಶ್ವಿನೀ ದೇವತೆಗಳ ಆಗಮನ, ಅವರ ಕೃಪೆಯಿಂದ ಚ್ಯವನನಿಗೆ ಅವರಂತೆ ಸುರೂಪ ಪ್ರಾಪ್ತಿಯಾದುದು, ಸುಕನ್ಯೆಯು ಪತಿಯನ್ನು ಗುರುತಿಸುವುದು, ಚ್ಯವನನ ಕೃತಜ್ಞಎ; ಶರ್ಯಾತಿಯ ಯಾಗದಲ್ಲಿ ಅಶ್ವಿನಿ ದೇವತೆಗಳಿಗೆ ಯಜ್ಞಭಾಗವನ್ನು ಕೊಡಲು ಕರೆಸಿದ್ದು, ಇಂದ್ರನು ಆಗ್ರಹದಿಂದ ವಜ್ರಾಯುಧ ಪ್ರಯೋಗಿಸತೊಡಗಿದುದು, ಮುನಿಯ ಮಹಿಮೆಯಿಂದ ಇಂದ್ರನು ಸ್ತಂಭಿತನಾದ್ದು, ಬಳಿಕ ಸ್ತುತಿಸಿ ವಿಮೋಚನೆ ಹೊಂದಿದುದು, ಇಂದ್ರನು ಚ್ಯವನಾಶ್ರಮದಲ್ಲಿ ದಿವ್ಯ ಭವನವನ್ನು ನಿರ್ಮಿಸಿದ್ದು. ಈ ತಿಥಿ ಅಶ್ವಿನೀದೇವತೆಗಳಿಗೆ ಪ್ರಿಯವಾಗಲು ಕಾರಣ, ಪುಷ್ಪದ್ವಿತೀಯಯೆಲ್ಲಿ ಮಾಡಬೇಕಾದ ವ್ತತನಿಯಮ ಮತ್ತು ಫಲ.
ಅಶೂನ್ಯಶಯನ ದ್ವಿತೀಯಾ ಮಾಹಾತ್ಮ್ಯ – ಫಲದ್ವಿತೀಯಾವ್ರತಾಚರಣಮಾಡುವ ಮಾಸ ವಿಚಾರ, ಅಶೂನ್ಯಶಯನ ದ್ವಿತೀಯೆಯೆಂದು ಹೆಸರಾಗಲು ಕಾರಣ, ಫಲದ್ವಿತೀಯೆಯಲ್ಲಿ ನಿವೇದಿಸಲು ಅರ್ಹವಾದ ಫಲಗಳು, ವಿಷ್ಣುಶಯನೋತ್ಸವಾರ್ಹವಾದ ಆ ದಿನ ಶಯ್ಯೆಯ ಸಮೀಪದಲ್ಲಿ ಫಲವನ್ನಿಡುವ ವಿಧಾನ, ದಾನಮಾಡಬೇಕಾದ ಫಲಗಳು ಮತ್ತು ಇತರ ದಾನಗಳು, ಈ ವ್ರತವನ್ನು ಎಷ್ಟುಸಾರಿ ಮಾಡಬೇಕೆಂಬ ವಿಚಾರ, ವ್ರತಕರ್ತನಿಗೆ ದೊರೆಯುವ ಫಲ.
ತೃತೀಯಾ ಕಲ್ಪವಿಧಿ – ಶುಕ್ಲ ತೃತೀಯೆಯಲ್ಲಿ ಸುವಾಸಿನಿಯರಿಗೆ ಗೌರೀವ್ರತಾಚರಣದ ಮುಖ್ಯತೆ – ತದಂಗವಾದ ಉಪವಾಸ, ಲವಣವರ್ಜನ, ಮೌನಭೋಜನ, ದಾನ, ಈ ವ್ರತಾಚರಣ ಮಾಡಿ ಫಲ ಹೊಂದಿದ ನಿದರ್ಶನ, ಭಾದ್ರಪದಶುಕ್ಲ ತೃತೀಯೆಯಲ್ಲಿ ಮಾಡಬೇಕಾದ ಸ್ವರ್ಣಗೌರೀವ್ರತ, ದಾನಾದಿಗಳು, ಮಾಘಶುಕ್ಲ ತೃತೀಯಾ ಕರ್ತವ್ಯಮೌನಗೌರೀವ್ರತ, ಗುಡ ಲವಣ ಉದಕುಂಭದಾನ, ಉಪವಾಸ ನಿಯಮ, ವೈಶಾಕ ಶುಕ್ಲ ತತೀಯಾ ಕರ್ತವ್ಯ ಸೌಭಾಗ್ಯ ಗೌರೀವ್ರತ, ಗಂಧೋದಕಸ್ನಾನ, ಚಂದನಕಾಷ್ಠದಾನ, ಆಹಾರನಿಯಮ ವಿಚಾರ.
ಚತುರ್ಥೀಕಲ್ಪಾರಂಭ – ಶುಕ್ಲ ಚತುರ್ಥಿಯ ವಿಘ್ನೇಶಪೂಜಾ ವಿಚಾರ, ಆ ದಿನದ ನಿಯಮಗಳು ದಾನಾದಿಗಳು ಆಹಾರ ಸೇವನೆಯಲ್ಲಿ ಅನುಸರಿಸುವ ಕಾಲಪರಿಮಾಣ, ವ್ರತಾಚರಣಫಲ, ಷಣ್ಮುಖನು ರಚಿಸುತ್ತಿದ್ದ ಲಕ್ಷಣಸ್ತ್ರಕ್ಕೆ ವಿಘ್ನೇಶನು ತಂದ ಅಡ್ಡಿ, ಆಗ ಷಣ್ಮುಖನು ವಿನಾಯಕನ ಹಲ್ಲನ್ನು ಮುರಿದುದು, ಈಶ್ವರನು ಬಂದು ಸಂತೈಸಿ ಅವನ ನಿರೂಪಣ ಕ್ರಮವನ್ನು ಪರಿಶೀಲಿಸಿ ಒಪ್ಪದೆ ಅದನ್ನು ಸಮುದ್ರಕ್ಕೆ ಎಸೆದುದು, ಬ್ರಹ್ಮನು ಬಂದು ಗಣಪತಿಯನ್ನು ಸಂತೈಸಿ ಸಮುದ್ರನಿಂದ ಅದನ್ನು ಹೇಳಿಸಿದ್ದು, ಆ ಹಲ್ಲನ್ನು ಗಣಪತಿಗೆ ಕೊಡುವಂತೆ ಹೇಳಿದ್ದು, ಷಣ್ಮಖನು ಒಂದು ನಿಬಂಧನೆಯಮೇಲೆ ಅದನ್ನು ಕೊಟ್ಟದ್ದು, ಗಣೇಶನ ಕೈಯಲ್ಲಿ ಭಿನ್ನದಂತವಿರುವುದರ ತತ್ವ; ಈಶ್ವರನು ಷಣ್ಮುಖನ ನಿರೂಪಣ ಪರಿಶೀಲನೆಯಲ್ಲಿ ಷಣ್ಮುಖನು ಶಿವನನ್ನು ಕಪಾಲಿ ಎಂದು ಸ್ತುತಿಸಿದ್ದು, ಶಿವನ ಕೈಗೆ ಕಪಾಲ ಬಂದ ಕಥೆ.
ಈಶಪುತ್ರನಿಗೆ ವಿಘ್ನೇಶತ್ವ ಪ್ರಾಪ್ತಿಯಾದ ವಿಚಾರ. ಆತನ ಅರ್ಚನ ವಿಧಾನ, ಆದಿಸೃಷ್ಟಿಯಲ್ಲಿ ಜನತೆಗೆ ನಿರ್ವಿಘ್ನತೆಯಿಂದಾದ ಹೆಮ್ಮೆ. ತ್ರಿಮೂರ್ತಿಗಳು ಆಲೋಚಿಸಿ ಅವರನ್ನು ಸನ್ಮಾರ್ಗಗಾಮಿಗಳನ್ನಾಗಿಸಲು ಗಣಪತಿಯನ್ನು ನೇಮಿಸಿದ್ದು, ಅವನು ಜನರ ಅಹಂಕಾರ ನಾಶಕ್ಕಾಗಿ ಮನೋವಿಕಾರ ದುಃಸ್ವಪ್ನಾದಿಗಳ ಕಲ್ಪನೆ, ಈ ದೋಷ ಪರಿಹಾರಾರ್ಥವಾಗಿ ಗಣಪತಿಗೆ ಅಭಿಷೇಕ ಪೂಜಾದಿಗಳ ಸಿದ್ಧತೆ, ಗುಹ, ಪಾರ್ವತಿ, ಶಿವ, ಕೃಷ್ಣ, ನವಗ್ರಹ, ದಿಕ್ಪಾಲರು ಇವರ ಆರಾಧನಪೂರ್ವಕ ಗಣಪತಿಪೂಜೆ, ಅಭಿಷೇಕ, ಹೋಮಾದಿಗಳು, ಬಲಿ ಸಮರ್ಪಣ, ಬ್ರಾಹ್ಮಣಭೋಜನ, ಗುರುವಿಗೆ ವಸ್ತ್ರಸಮರ್ಪಣ.
ಬ್ರಹ್ಮನು ಷಣ್ಮುಖನಿಗೆ ಪುರುಷ ಲಕ್ಷಣವನ್ನು ವಿವರಿಸಿದ್ದು – ಪುರುಷ ಶರೀರದ ಔನ್ನತ್ಯದಿಂದ ಉತ್ತಮ ಮಧ್ಯಮ ನಿರ್ಣಯ, ಕಾಲಬೆರಳು, ಉಗುರು, ಹೆಬ್ಬೆರಳು, ರೋಮ, ಮೊಳಕಾಲು, ನಡಗೆ ಇವುಗಳ ಶುಭಾಶುಭ ಲಕ್ಷಣ, ತದನುಗುಣವಾದ ಫಲಪ್ರಾಪ್ತಿ.
ಲಿಂಗದಿಂದ ಆರಂಭಿಸಿ ಉದರದವರೆಗೆ ಪುರುಷಾವಯವವಾದ ಹೊಟ್ಟೆ ಎದೆ, ಹಸ್ತ, ಬೆರಳು, ಕೊಬ್ಬೊಟ್ಟೆ, ರುಂಡ, ಹಸ್ತರೇಖೆಗಳು, ಈ ಅವಯವದ ಶುಭಾಶುಭಲಕ್ಷಣ, ಶುಭಲಕ್ಷಣದ ಶುಭಫಲ, ದುರ್ಲಕ್ಷಣದ ದುಷ್ಫಲ.
ನಾಭಿಯಿಂದಾರಂಭಿಸಿ ಮೇಲಿನ ಪುರುಷಾವಯವಗಳ ಎಂದರೆ ಹೊಕ್ಕುಳು, ತ್ರಿವಳಿ, ಗಲ್ಲ, ಹೆಗಳು, ಕುತ್ತಿಗೆ, ಬೆನ್ನು, ಅಂಗೈ,ಮುಖ, ಕೆನ್ನೆ, ಹಲ್ಲು, ನಾಲಗೆ ದವಡೆ, ತಲೆಕೂದಲು ಈ ಅವಯವಗಳ ಶುಭಾಶುಭ ಲಕ್ಷಣ ವಿಚಾರ ನಿರೂಪಣ.
ನೃಪರ ಶುಭಾಶುಭ ಲಕ್ಷಣ – ಶರೀರದ ಬಣ್ಣದಿಂದ ರಾಜಲಕ್ಷಣ, ರಾಜರಿಗೆ ಒಟ್ಟಿನಲ್ಲಿ ದೀರ್ಘವಾಗಿರಬೇಕಾದ ಅವಯವ, ಹ್ರಸ್ವವಾಗಿರಬೇಕಾದ ಅವಯವ, ಕಣ್ಣಿನ ಬಣ್ಣದಮೇಲೆ ರಾಜಲಕ್ಷಣ, ಆಚಾರ್ಯನಲ್ಲಿರಬೇಕಾದ ವಿಶೇಷ ಲಕ್ಷಣ, ನಗುವಿನ ಸತ್ಕ್ಷಣ ದುರ್ಲಕ್ಷಣಗಳ ವಿಚಾರ.
ಸ್ತ್ರೀಯರ ಶುಭಾಶುಭಲಕ್ಷಣ ವಿಚಾರ – ಕಂಠ, ಹಣೆ, ಹೊಟ್ಟೆ, ಸೊಂಟ, ಕಿಬ್ಬೊಟ್ಟೆ, ಕೆನ್ನೆ, ಸ್ತನ, ಕಾಲಬೆರಳು, ಕೂದಲಸುಳಿ, ರೋಮಾವಳಿ, ಇವುಗಳ ಸಲ್ಲಕ್ಷಣ ದುರ್ಲಕ್ಷಣ ವಿಚಾರ – ಎಂತೆಂತಹ ಲಕ್ಷಣದ ಸ್ತ್ರೀಯನ್ನು ವರಿಸಿದರೆ ಏನೇನು ಫಲಾಫಲಗಳು ಎಂಬ ವಿಚಾರ; ಸ್ತ್ರೀಯರ ನಾಮಲಕ್ಷಣದಮೇಲೆ ಪರಿಗ್ರಹಾನರ್ಹತೆ, ವರ್ಜ್ಯಮಾಡಬೇಕಾದ ಸ್ತ್ರೀಲಕ್ಷಣ, ರೂಪದ ಮೇಲಿಂದ ಸ್ತ್ರೀಯರಲ್ಲಿ ಕಾಣುವ ಪಿಶಾಚ ವಿದ್ಯಾಧರಿ ಗಾಂಧರ್ವಿ ಕಪಿಜಾತಿ ಎಂಹ ಭೇದ ವಿಚಾರ.
ಗಣಪತಿ ಕಲ್ಪವರ್ಣನೆ – ಗಕಾರ ಗಣಪತಿಯ ಪೂಜಾ ವಿಚಾರ – ಅರ್ಕಗಣಪತಿಯ ನಿರ್ಮಾಣ, ಪೂಜಾ ವಿಧಾನ, ಹೋಮ, ಗಣಪತಿ ಗಾಯತ್ರಿ ಮಂತ್ರ, ಅದರ ಜಪ ಹೋಮಾದಿಗಳು ಅದರ ಫಲಶ್ರುತಿ, ರಾಜವಶ್ಯ, ಸ್ತ್ರೀವಶ್ಯ, ಶತ್ರುನಾಶ, ಚೋರಬಾಧಾ ನಿರ್ಹರಣ, ಗ್ರಾವದಿಗ್ಭಂಧನ, ಇವು ಆಗುವ ವಿಧಾನ.
ವಿನಾಯಕ ಪೂಜಾ ವಿಧಿವರ್ಣನೆ – ನಾನಾ ಮೂಲಿಕೆಗಳಿಂದ ಗಣಪತಿಯ ನಿರ್ಮಾಣ, ಪೂಜಾ ವಿಧಾನ – ಬಲಿಪ್ರದಾನ, ಹೋಮ ವಿಧಾನ, ಈ ಅರ್ಚನೆಯ ಫಲನಿರೂಪಣ, ರಾಜವಶ್ಯ, ಅಮಾತ್ಯವಶ್ಯ, ಮೂಲಿಕಾಗಣಪತಿ ಪ್ರಸನ್ನತೆಯಿಂದ ಸಮಸ್ತ ಕಾರ್ಯಕ್ಕೂ ಜಯಪ್ರಾಪ್ತಿ ವಿಚಾರ.
ಚತುರ್ಥಿಯಲ್ಲಿರುವ ಮೂರು ಭೇದಗಳು, ಭಾದ್ರಪದ ಶುಕ್ಲ ಚತುರ್ಥಿ ಶಿವಾ ಚತುರ್ಥಿ, ಅದರ ಫಲ, ಮಾಘ ಶುಕ್ಲ ಚತುರ್ಥಿಯು ಶಾಂತಾಚತುರ್ಥಿ, ಅದರ ಫಲ, ಭೌಮವಾರ ಯುಕ್ತವಾದ ಶುಕ್ಲ ಚತುರ್ಥಿಯು ಸುಖಾಚತುರ್ಥೀ; ಯಾವ ಮಾಸದಲ್ಲಿ ಈ ತಿಥಿ ವಾರ ಕೂಡಿದರೂ ಆ ದಿನ ಅಂಗಾರಕನೊಡನೆ ಗಣಪತಿ ಪೂಜೆಯನ್ನು ಮಾಡಬೇಕಾದ ವಿಧಾನ, ಪೂಜೆಗೆ ಮುಂಚೆ ಆಚರಿಸಬೇಕಾದ ವನಸ್ಪತಿಪ್ರಾರ್ಥನೆ, ಭೂಪ್ರಾರ್ಥನೆ, ಪ್ರತಿಮಾದಾನ ವಿಚಾರ, ಈರೀತಿ ಎಷ್ಟುಸಾರಿ ನಡೆಯಿಸಬೇಕೆಂಬ ವಿಚಾರ, ಅದರ ಫಲ.
ಪಂಚಮೀ ಕಲ್ಪಾರಂಭ – ಇಂದ್ರಾಶ್ವದ ಬಣ್ಣದ ವಿಚಾರದಲ್ಲಿ ಸವತಿಯರಾದ ಕದ್ರು ವಿನತೆಯರಿಗೆ ಹುಟ್ಟಿದ ಹಠ, ಅದ್ರುವು ಮಾಡಿದ ದ್ರೋಹ ಚಿಂತನೆಗೆ ಆಕೆಯ ಮಕ್ಕಳು ಒಪ್ಪದಿದ್ದುದು, ಆಕೆಯು ಮಕ್ಕಳನ್ನು ಶಪಿಸಿದುದು, ವಾಸುಕಿಯ ಚಿಂತೆ, ಆಸ್ತೀಕನೆಂಬವನಿಂದ ಅ ದುಃಖನಿವಾರಣೆಯಾಗುವುದೆಂದು ಬ್ರಹ್ಮನು ವಾಸುಕಿಯನ್ನು ಸಂತೈಸಿದ್ದು, ಈ ವಿಚಾರವೆಲ್ಲಾ ನಡೆದ ಪಂಚಮಿಯು ನಾಗಗಳಿಗೆ ಆನಂದಕರ, ನಾಗಪಂಚಮೀ ವ್ರತವರ್ಣನ ಪಂಚಮೀ ನಾಗಪೂಜಾ ವಿಧಾನ, ಫಲ.
ನಾಗಗಳ ಉತ್ಪತ್ತಿ, ದುಷ್ಟ್ರಾವರ್ಣನೆ, ಗೌತಮನು ಸರ್ಪಕುಲ ವಿಚಾರ ನಿರೂಪಣ ಮಾಡಿದುದು, ಸರ್ಪೋತ್ಪತ್ತಿಕ್ರಮ, ಸರ್ಪಜಾತಿಯ ಗರ್ಭಧಾರಣಕಾಲ, ಮೊಟ್ಟೆಯಿಡುವ ಮಾಸ, ಮರಿಯಾಗುವಕ್ಕೆ ಬೇಕಾಗುವಕಾಲ, ಪೂರ್ಣ ವಿಷವುಳ್ಳದ್ದಾಗುವ ವಯಸ್ಸು, ಅವುಗಳ ಆಯಸ್ಸು, ಕೋರೆ ಹಲ್ಲುಗಳ ಹೆಸರು, ವಿಷಗಳ ವಿವಿಧ ವರ್ಣಗಳು, ಸರ್ಪವು ಕಚ್ಚುವಕಾರಣ, ಗಾಯದ ಸ್ವರೂಪದಿಂದ ಕಾರಣದ ಊಹೆಯ ವಿಚಾರ.
ಕಾಲದಷ್ಟಸರ್ಪ ವಿಚಾರ, ಹಾವು ಕಡಿದವನಿಗೆ ದೇಹದ ಅವಯವಗಳಲ್ಲಿ ಆಗುವ ವ್ಯತ್ಯಾಸ, ಕಚ್ಚಿದ ತಿಥಿ ನಕ್ಷತ್ರಾದಿಗಳಮೇಲೆ ಫಲನಿರ್ಣಯ ವಿಚಾರ, ಯಾವ ಸ್ಥಳದಲ್ಲಿ ವಾಸಿಸುವ ಹಾವು ಕಚ್ಚಿತು ಎಂಬುದರಮೇಲೆ ಫಲನಿರ್ಣಯ, ಮರ್ಮಸ್ಥಾನದಲ್ಲಿ ಕಚ್ಚಿದಾಗಿನ ವಿಚಾರ, ವಾರ್ತಾಹರನ ಸ್ಥಿತಿಲಕ್ಷಣಗಳಿಂದ ಫಲಿತಾಂಶ ನಿರ್ಣಯ.
ವಿಷವ್ಯಾಪನ ವಿಧಾನ – ವಾತ, ಪಿತ್ತ, ಶ್ಲೇಷ್ಮ, ಮಜ್ಜಾ, ಮರ್ಮ ಎಂಬ ನಾನಾ ಸ್ಥಾನಗಳಿಗೆ ವಿಷ ವ್ಯಾಪನೆಯಾದಾಗಿನ ಲಕ್ಷಣ, ಆ ಕಾಲದಲ್ಲಿ ಮಾಡಬೇಕಾದ ಚಿಕಿತ್ಸೆಗಳು, ಸಮಸ್ತ ವಿಷ ಪರಿಹಾರಕ್ಕೆ ಗುಳಿಗೆಯ ನಿರ್ಮಾಣ, ಸರ್ಪದಷ್ಟರಿಗೆ ಪಾನ, ಅಂಜನ ನಸ್ಯ ಎಂಬ ಚಿಕಿತ್ಸಾತ್ರಯ ವಿಚಾರ.
ಸರ್ಪಗಳ ವರ್ಣರೂಪಾದಿಗಳ ವಿಚಾರ – ಪುಂ, ಸ್ತ್ರೀ, ನಪುಂಸಕ ಸರ್ಪಲಕ್ಷಣ, ದರ್ವೀಕರ, ಮಂಡಲ, ರಾಜಿಲ ವ್ಯಂತರ ಎಂಬ ನಾಲ್ಕು ಸರ್ಪಗಳ ವಿಚಾರ, ಪ್ರತಿಯೊಂದರ ಲಕ್ಷಣ, ಅವುಗಳ ವಾಸಸ್ಥಳ ವಿಚಾರ, ಸರ್ಪಗಳಲ್ಲಿ ಚಾತುರ್ವರ್ಣ್ಯಭೇಧ ವಿಚಾರ, ಬೇರೆ ಬೇರೆ ಜಾತಿಯ ಹಾವು ಕಚ್ಚಿದಾಗಿನ ಚಿಕಿತ್ಸಾಭೇದ, ದೃಶ್ಯಾದೃಶ್ಯಗಳಾದ ನೂರತ್ತೊಂಬತ್ತೆರಡು ಸರ್ಪಜಾತಿಯ ವಿಚಾರ, ನಾಗಪಂಚಮೀ ಸರ್ಪರಾಧನದಿಂದ ಸರ್ಪಭಯರಾಹಿತ್ಯ
ಕೆಲವರ ಮತಪ್ರಕಾರ ಭಾದ್ರಪದಮಾಸದ ನಾಗಪಂಚಮೀ ವ್ರತಾಚರಣವಿಧಿ, ಅದರ ಫಲ.
ಇನ್ನು ಕೆಲವರ ಮತದಂತೆ ಆಶ್ವಯುಜಶುಕ್ಲಪಂಚಮಿಯಲ್ಲಿಯೂ ನಾಗಪೂಜೆಯ ಆಚರಣೆ ಇದರ ಇಹಪರ ಶಾಂತಿ ವಿಚಾರ.
ಷಷ್ಠೀ ಕಲ್ಪಾರಂಭ – ಕಾರ್ತಿಕ ಶುಕ್ಲ ಷಷ್ಠಿಯಲ್ಲಿ ಸ್ಕಂದಪೂಜಾ, ಷಣ್ಮುಖನಿಗೆ ಪ್ರಿಯವಾದ ಮಹಾಷಷ್ಠಿಯ ವಿಚಾರ, ಆದಿನ ಷಣ್ಮುಖನು ದೇವಸೇನಾಪತಿಯಾದ ವಿಚಾರ, ಆ ದಿನದ ಪೂಜಾವಿಧಾನ, ಅರ್ಘ್ಯಮಂತ್ರ, ದಾನ, ಭೋಜನಾದಿ ವಿಧಾನ, ಪ್ರತಿ ಮಾಸದ ಶುಕ್ಲಷಷ್ಠೀ ವ್ರತಾಚರಣ ಫಲವಿಚಾರ.
ಷಣ್ಮುಖನ ಉತ್ಪತ್ತಿಕ್ರಮ, ಜನನಕ್ಕೆ ಅನೇಕರು ಕಾರಣರಾದುದು, ಇದರಿಂದ ಅವನ ಮಹಿಮಾವಿಶಿಷ್ಟತೆಗೆ ಆಸ್ಪದವಿಲ್ಲವೆಂಬ ಶಂಕೆ, ವಿಮರ್ಶಾಪೂರ್ವಕ ಇದರ ನಿರ್ಣಯ.
ಬ್ರಾಹ್ಮಣ್ಯ ವಿವೇಕವರ್ಣನ – ಬ್ರಾಹ್ಮಣ್ಯ ಶೂದ್ರತ್ವವ್ಯವಸ್ಥೆ, ಬ್ರಾಹ್ಮಣೀ ಗರ್ಭಸಂಭತತೆ, ಉಪವೀತಧಾರಣ, ಗಾಯತ್ರೀ ಜಪಾನುಷ್ಠಾನ, ಅಗ್ನಿಕಾರ್ಯ, ವೇದತ್ರಯಾಧ್ಯಯನ ಇವೆಲ್ಲ ಬ್ರಾಹ್ಮಣ್ಯಸಾಧನವೆಂಬ ವಿಚಾರ, ಗರ್ಭಸಂಭವತ್ವವಿಲ್ಲದೆ ಮಿಕ್ಕವುಗಳ ಅನುಕರಣದಿಂದ ಕೃತಕಬ್ರಾಹ್ಮಣ್ಯ ಪ್ರಾಪ್ತಿವಿಚಾರ, ಅವರಲ್ಲಿ ಶಾಪಾನುಗ್ರಹ ಸಾಮರ್ಥ್ಯಹೀನತೆಯ ವಿಚಾರ, ಬ್ರಹ್ಮನೆಂಬ ಒಬ್ಬ ತಂದೆಯಿಂದ ಸೃಷ್ಟಿಯಾದ ಎಲ್ಲರೂ ಭ್ರಾತೃಸಮ, ಜಾತಿಭೇದವು ಕೃತಕ ಕೇವಲ ವ್ಯಾವಹಾರಿಕ, ಪರಮಾರ್ಥವಲ್ಲ ಎಂದು ಕೆಲವರು ಮಾಡುವ ವಾದವಿಚಾರ.
ಬ್ರಾಹ್ಮಣ್ಯ ಸಂಸ್ಕಾರವಿವೇಕ – ಬ್ರಾಹ್ಮಣ್ಯವು ದೇಹಕ್ಕೋ ಆತ್ಮನಿಗೋ ಎಂಬ ವಿಚಾರ, ಶಾಸ್ತ್ರರೀತಿ ಆತ್ಮನಿಗೆ ಜಾತಿಯಿಲ್ಲ ದೇಹಕ್ಕೆ ಜಾತಿಯಿರುತ್ತಿದ್ದರೆ ಭಿನ್ನಜಾತಿಯವರ ದೇಹಕ್ಕೂ ಬ್ರಾಹ್ಮಣ್ಯ ಪ್ರಾಪ್ತಿಯಾಗಬೇಕಾದ ವಿಚಾರ, ಸಂಸ್ಕಾರ ಬಲದಿಂದ ವಿಪ್ರತ್ವ ಸಂಪಾದನೆ ಸಾಧ್ಯವೆಂಬ ಕೆಲವರಮತ, ಜನ್ಮತಃ ಉತ್ತಮ ಜಾತಿಯಾದರೂ ದುರಾಚಾರ ವಶದಿಂದ ಬ್ರಾಹ್ಮಣ್ಯ ಹಾನಿಯಾಗುವ ವಿಚಾರ, ದೇಹವು ಬ್ರಾಹ್ಮಣ್ಯಕಾರಣವಲ್ಲವೆಂಬ ನಿರ್ಣಯ.
ವರ್ಣವ್ಯವಸ್ಥಾ ವರ್ಣನ – ಸಂಸ್ಕಾರದಿಂದ ಪಾರಿಶುದ್ಧ್ಯವೂ, ದುರಾಚಾರದಿಂದ ಅಶುದ್ಧಿಯೂ, ದೇಹಕ್ಕೋ ದೇಹಿಗೋ ಎಂಬ ವಿಚಾರ, ಅನಿಷ್ಟವಸ್ತು ಎಲ್ಲ ವರ್ಣದವರಿಗೂ ಅನಿಷ್ಟವೇ ಎಂಬ ನಿರ್ಣಯ, ಮೃಗಾದಿಗಳಿಗಿಂತ ಮಾನವನಲ್ಲಿ ಕಾಣುವ ವಿಶೇಷ ವಿಚಾರ ಶಕ್ತಿ, ವಿಚಾರಶಕ್ತಿಹೀನನು ಮಾನವನಾದರೂ ಮೃಗ ಸದೃಶನಾಗುವ ನಿರ್ಧರ, ವರ್ಣಾಂತರದವರಿಗೆ ವಿಪ್ರರೊಡನೆ ದೇಹದ ಆಕಾರ, ಸ್ವಭಾವಗಳು ಸಾಮ್ಯವಿರುವುದಾದರೂ ಆಚಾರ, ಧಾರ್ಮಿಕ ಪ್ರವೃತ್ತಿ, ಶಾಂತಿ, ಮುಂತಾದ ವಿಶೇಷ ಧರ್ಮದಲ್ಲಿ ವೈಲಕ್ಷಣ್ಯವಿರುವಿಕೆ, ಅವಯವಸಾಮ್ಯವಿರುವಿಕೆ, ಜಾತ್ಯಂತರ ಸ್ತ್ರೀಪುರುಷರ ಸಂಗಮದಿಂದ ಗರ್ಭಧಾರಣ ಸಾಧ್ಯತೆ, ಪ್ರಾಣಿ ವರ್ಗದಲ್ಲಿ ಇದರ ಅಸಾಧ್ಯತೆ, ಆದ್ದರಿಂದ ವರ್ಣಭೇದ ಐಚ್ಛಿಕ ಮತ್ತು ಕೃತಕ ಎಂಬ ವಾದದಿಂದ ಸೀಮೋಲ್ಲಂಘನವು ಪಾಪ ಮತ್ತು ಹಾನಿ ಪ್ರಾಪ್ತಿ ವಿಚಾರ.
ವೇದಾಧ್ಯಯನಾದಿ ಪ್ರಾಮುಖ್ಯ ವಿಪ್ರಧರ್ಮ ವಿಚಾರ, ವಿಪ್ರರ ಧರ್ಮಾಚರಣೆಯ ಉತ್ತಮತೆ, ಇದಕ್ಕೆ ತಕ್ಕಂತೆ ಜಾತಿತತ್ವಗಳ ವ್ಯವಸ್ಥೆ, ಕಸುಬುಗಳ ಅವಲಂಬನದಿಂದ ಕೃತ್ರಿಮಜಾತಿ ವಿಭಾಗ ತಾನಾಗಿ ಆಗುವಿಕೆ, ಅನ್ಯಜಾತಿಯವರ ಅನುಕರಣದಿಂದ ಜಾತಿ ಸ್ವಭಾವ ವ್ಯತ್ಯಾಸವಾಗಬಹುದೇ ಎಂಬ ವಿಚಾರ.
ಉತ್ತಮಜಾತಿಯಲ್ಲಿ ಜನನ, ಮತ್ತು ಸಂಸ್ಕಾರಕರ್ಮ, ಇವು ಮಹಾತ್ಮೆಗೆ ಕಾರಣವಾಗುವ ಸಾಮಾನ್ಯರೂಢಿ, ಆದರೆ ದೇವರಹಸ್ಯಗಳ ದುರವಗಾಹತೆ, ಅಂಥ ರಹಸ್ಯಯುಕ್ತ ಕಾರ್ತಿಕೇಯನಿಗೆ ಸಂಸ್ಕಾರಗಳು, ಉತ್ಪತ್ತಿ, ಪೋಷಣ ಕ್ರಮ ಇವು ಗಣನೀಯವಲ್ಲವೆಂಬ ವಿಚಾರ.
ಭಾದ್ರಪದ ಶುದ್ಧ ಷಷ್ಠಿಗೆ ಕಾರ್ತಿಕೇಯಷಷ್ಠಿ ಎಂಬ ಹೆಸರಾಗುವಿಕೆ, ಅದರ ಶ್ರೇಷ್ಠತೆ, ಆದಿನ ವ್ರತಾಚರಣ, ದಾನಾದಿಗಳ ಶ್ರೇಷ್ಠತೆ, ಷಣ್ಮುಖದೇವಾಲಯ ನಿರ್ಮಾಣ ಕರ್ತನಿಗೆ ಫಲಪ್ರಾಪ್ತಿವಿಚಾರ ದೇವಾಲಯ ಸಮ್ಮಾರ್ಜನಾದಿಗಳನ್ನು ಮಾಡಿದವರಿಗೆ ಬರುವ ಫಲ, ಆ ಷಷ್ಠಿಯ ದಿನದ ಆಹಾರ ನಿಯಮ, ಈರೀತಿ ಎಷ್ಟು ಷಷ್ಠಿಗಳಲ್ಲಿ ಆಚರಿಸಬೇಕೆಂಬ ವಿಚಾರ.
ಸಪ್ತಮಿಯ ಶ್ರೇಷ್ಠತೆ ಸಪ್ತಮೀ ಕಲ್ಪಾಅಂಭ – ಆ ತಿಥಿಯು ಮಾರ್ತಂಡನಿಗೆ ಪ್ರಿಯವಾದ ಬಗೆ, ಆದಿಯಲ್ಲಿ ಮಾರ್ತಂಡನ ಸ್ಥಿತಿ, ದಕ್ಷನ ಮಗಳಾದ ರೂಪೆಯೊಡನೆ ವಿವಾಹ, ಯಮ ಯಮುನೆ ಇವರ ಉತ್ಪತ್ತಿ, ಮಾರ್ತಂಡನ ತಾಪದಿಂದ ಅವಳು ಕರ್ರಗಾಗಿ ತನ್ನ ಛಾಯೆಯನ್ನು ಅಲ್ಲಿಟ್ಟು ತಾನು ಉತ್ತರ ಕುರುವಿಗೆ ಹೋಗಿ ಹೆಣ್ಣುಕುದುರೆಯಾಗಿದ್ದುದು, ಛಾಯೆಯಲ್ಲಿ ತಪತಿ, ಶನಿ ಇವರ ಉತ್ಪತ್ತಿ, ಬಲಮಕ್ಕಳಿಗೆ ಪರಸ್ಪರ ಕಲಹವಾಗುವಿಕೆ, ಯಮನು ಬಲತಾಯಿಗೆ ಪಾದದಿಂದ ಪ್ರಹರಿಸಲು ಯತ್ನಿಸಿದ್ದು, ಆಕೆಯು ಅವನನ್ನು ಶಪಿಸಿದ್ದು, ಸೂರ್ಯನು ಬಂದು ಮಕ್ಕಳನ್ನು ಸಂತೈಸಿ ವ್ಯಾಜ್ಯವನ್ನು ಪರಿಹರಿಸಿ ಮಕ್ಕಳಿಗೆ ವರ ಕೊಟ್ಟದ್ದು, ಯಮನು ಛಾಯೆಯ ನಿಜವಾದ ತಾಯಿಯಲ್ಲವೆಂದು ತಿಳಿಸಿದ್ದು, ಸೂರ್ಯನು ದಕ್ಷನಲ್ಲಿ ಈ ವಿಚಾರ ತಿಳಿಸಿ, ಅವನ ಸೂಚನೆಯಂತೆ ತನ್ನ ದೇಹವನ್ನು ಸಾಣೆ ಹಿಡಿಸಿಕೊಂಡು ಉತ್ತರಕುರುವಿಗೆ ಹೋಗಿ ತಾನೂ ಅಶ್ವರಾಗಿ ಆಕೆಯೊಡಗೂಡಿದ್ದು, ಆಕೆಯು ಮೂಗಿನಿಂದ ವೀರ್ಯ ವಿಸರ್ಜನೆಮಾಡಿದ್ದು, ಅಶ್ವಿನೀ ದೇವತೆಗಳ ಮತ್ತು ರೇವಂತನ ಉತ್ಪತ್ತಿ, ಇವೆಲ್ಲಾ ನಡೆದುದು, ಸಪ್ತಮಿಯಾದ್ದರಿಂದ ಆ ತಿಥಿ ಮಾರ್ತಂಡ ಪ್ರಿಯವಾಯ್ತು. ಇದರಲ್ಲಿ ರಥಸಪ್ತಮೀ, ಶಾಕಸಪ್ತಮೀ ಮೊದಲಾದ ಪ್ರಭೇದಗಳು.
ಸಪ್ತಮೀ ಕಲ್ಪವರ್ಣನೆ, ಕೃಷ್ಣ, ಸಾಂಬ ಇವರ ಸಂವಾದ – ಜಾಂಬವತೀ ಪುರತ್ರನಾದ – ಸಾಂಬನು ಜ್ಞಾನವನ್ನು ಉಪದೇಶಿಸೆಂದು ತಂದೆಯಾದ ಕೃಷ್ಣನನ್ನು ಪ್ರಾರ್ಥಿಸಿದ್ದು, ಕೃಷ್ಣನು ದಾರಿದ್ರ್ಯರೋಗಾದಿಗಳ ಪರಿಹಾರಕ್ಕೆ ದೇವತಾನುಗ್ರಹಬೇಕೆಂದೂ ಸೂರ್ಯನೇ ಪ್ರತ್ಯಕ್ಷ ದೇವರೆಂದೂ ತಿಳಿಸಿದ್ದು, ಮತ್ತು ಅವನ ಸರ್ವದೇವಮಯತ್ವ, ಸರ್ವಚೇತನದಾಯಕತ್ವ ಇವನ್ನು ವಿವರಿಸಿದ್ದು, ಅವನನ್ನು ಮಂಡಲ ಸ್ವರೂಪದಲ್ಲಿ ಆರಾಧಿಸತಕ್ಕದ್ದೆಂಬ ವಿಚಾರ.
ಆದಿತ್ಯ ನಿತ್ಯಾರಾಧನಕ್ರಮ – ಸ್ನಾನಾಹ್ನಿಕಾನಂತರ ಮಂಡಲಾರ್ಚನೆಗೆ ಸಂಕಲ್ಪ, ಕಲಶವೂಜೆ, ತನ್ನ ಅವಯವದಲ್ಲಿ ದೇವತಾನ್ಯಾಸ, ಮಂಡಲದಲ್ಲಿ ಆವಾಹನೆ, ಸಾನ್ನಿಧ್ಯ ಕಲ್ಪನೆ, ಷೋಡಶೋಪಚಾರಪೂಜೆ, ಜಪ, ಮುದ್ರಾದರ್ಶನ, ವ್ಯೋಮಮುದ್ರೆಯ ಪ್ರಾಶಸ್ತ್ಯ, ಫಲಶ್ರುತಿ.
ಆದಿತ್ಯ ನೈಮಿತ್ತಿಕಾರಾಧನಕ್ರಮ – ಸಪ್ತಮಿ, ಸಂಕ್ರಮಣ, ಗ್ರಹಣ ಕಾಲ ಇವು ಆದಿತ್ಯನ ನೈಮಿತ್ತಿಕ ಪೂಜಾದಿನಗಳು, ಆ ದಿನ ನಕ್ತೆಭೋಜನ, ಭೂಶಯನ, ಮರುದಿನ ಸೂರ್ಯಾಗ್ನಿಕರಣ, ಅದರ ವಿಧಾನ, ವರುಣನಾಮಕ ಆದಿತ್ಯನಿಗೆ ಶತಾಹುತಿ ಹೋಮ, ಪ್ರತಿ ಮಾಸದಲ್ಲೂ ಆಹುತಿ ಕೊಡಬೇಕಾದ ಆದಿತ್ಯನ ಸಂಜ್ಞಾ ನಾಮಗಳು, ವರ್ಷಾಂತ್ಯದಲ್ಲಿ ಸುವರ್ಣ ರಥದಾನ, ಈ ದಾನದ ವಿಚಾರದಲ್ಲಿ ಶಕ್ತ್ಯನುಸಾರ ತಾರತಮ್ಯ, ಕಲ್ಪೋಕ್ತಾಚರಣೆಯಿಂದ ಶೀಘ್ರಫಲ ಪ್ರಾಪ್ತಿವಿಚಾರ.
ಮಾಘ ಶುಕ್ಲ ಸಪ್ತಮೀ ತಿಥಿಯು ಮಹಾಸಪ್ತಮೀ ವ್ರತಾಚರಣ ಮಹಾತ್ಮ್ಯವರ್ಣನಂ – ಈ ವ್ರತಾಂಗವಾಗಿ ಪಂಚಮಿ ಏಕಭುಕ್ತ, ಷಷ್ಠಿಯಲ್ಲಿ ಪೂಜೆ, ನಕ್ತಭೋಜನ, ಸಪ್ತಮಿಯಲ್ಲಿ ಉಪವಾಸ, ಮಾರನೆದಿನ ಪಾರಣೆ, ಇದೊಂದು ಕಲ್ಪ; ಷಷ್ಠಿಯದಿನ ಉಪವಾಸ, ಸಪ್ತಮೀದಿನ ಪಾರಣೆ ಇದು ಒಂದುಕಲ್ಪ ಕಾರ್ತಿಕ ಮಾಸದಲ್ಲಿ ಪಂಚಗವ್ಯಸ್ನಾನ, ಅತಸೀಪುಷ್ಪಪೂಜಾ, ಈಪ್ರಕಾರ ಮೂರುವರ್ಷದ ಆಚರಣೆ, ವ್ರತಸಾಂಗತಾಸಿದ್ಧಿಆಗಾಗಿ ಸುವರ್ಣ ರಥ ದಾನಾದಿಗಳು.
ರಥಯಾತ್ರಾ ವಿಧಿವರ್ಣನ – ಬ್ರಹ್ಮನು ರುದ್ರನಿಗೆ ಸೂರ್ಯರಥೋತ್ಸವ ವಿಧಾನವನ್ನು ತಿಳಿಸಿದ್ದು, ಸೂರ್ಯರಥದ ರಚನಾಕ್ರಮ, ಸೂರ್ಯನು ದಿನವಹಿ ಸಂಚರಿಸುವ ದೂರ, ರಥದ ಪ್ರತ್ಯಂಗಗಳು, ಒಂದೊಂದು ಋತುವಿನಲ್ಲಿಯೂ ಸೂರ್ಯನಜತೆ ಇರಲು ಗೊತ್ತಾದ ದೇವತೆಗಳು, ಗಂಧರ್ವರು, ಯಕ್ಷರು, ರಾಕ್ಷಸರು ಇವರ ಪ್ರತ್ಯೇಕವಾದ ಜೋಡಿಗಳು, ಸೂರ್ಯನಮಸ್ಕಾರ ಕ್ರಮ.
ಸೂರ್ಯಸಾರಥಿ ವರ್ಣನ ಸೂರ್ಯಮಂಡಲದಲ್ಲಿರುವ ದೇವತಾ ವರ್ಣನ, ಸೂರ್ಯಗತಿ ವಿವೇಕ, ಸರ್ವದೇವ ಪೂಜ್ಯತ್ವವರ್ಣನ – ಇಂದ್ರ ಅಗ್ನಿ ಮುಂತಾದವರು ಸೂರ್ಯಸೇವೆಗೆ ನೇಮಿಸಿದ ಅನುಚರರು, ಆ ಅನುಚರರು ಮಾಡುವ ಸೇವಾವಿವರ, ಆ ವ್ಯಕ್ತಿಗಳಿಗೆ ರಥದಲ್ಲಿ ಸ್ಥಾನನಿರ್ದೇಶ, ಚಂದ್ರಸ್ಥ ಅಮೃತದಿಂದ ದೇವತಾ ತೃಪ್ತಿಯಾಗುವಿಕೆ, ಅವರು ಕೊಡುವ ಮಳೆಯಿಂದ ಮಾನವತೃಪ್ತಿ, ದಿಕ್ಪಾಲಕರು ಸೂರ್ಯನನ್ನು ಅರ್ಚಿಸುವ ಕಾಲ.
ಆದಿತ್ಯನ ಸರ್ವಶ್ರೇಷ್ಠತೆ, ಸೂರ್ಯಮಹಾತ್ಮೆ – ಸೂರ್ಯನ ಸರ್ವದೇವ ಮಯತ್ವ, ಸರ್ವಕಾರಣತ್ವ, ಮೋಕ್ಷಸಾಧಕತ್ವ, ಲೋಕಪ್ರಕಾಶಕತ್ವ, ಆದರಿಂದ ಜೀವಪೋಷಣ, ಋತುಧರ್ಮಾನುಗುಣ ಕಿನಣಪ್ರಸಾರಣ, ಕಿರಣದಿಂದ ಲೋಕಕ್ಕೆ ಫಲವಿಚಾರ.
ರಥಯಾತ್ರಾಕಾಲದಲ್ಲಿ ಕರ್ತವ್ಯಕರ್ಮವರ್ಣನ – ರಥೋತ್ಸವ ಮಾಡಿಸುವುದರಿಂದ ದೇಶಕ್ಕೆ ಆಗುವಫಲ, ಮಾಘ ಚತುರ್ಥಿ ಮೊದಲುಗೊಂಡು ಆಹಾರ ನಿಯಮ, ಈ ವಿಚಾರದಲ್ಲಿ ಭಿನ್ನ ಭಿನ್ನ ಕಲ್ಪಗಳ ವಿಚಾರ, ಸಪ್ತಮೀದಿನ ಘೃತಸ್ನಾನ ನಿವೇದನ, ಷಷ್ಠೀ ಸಪ್ತಮಿಗಳಲ್ಲಿ ಪುಣ್ಯತೀರ್ಥಾಭಿಷೇಕ, ಪ್ರತಿಮಾ ಅಧಿವಾಸನ, ಸೂರ್ಯರಥ ನಿರ್ಮಾಣಕ್ರಮ, ಪ್ರತಿಮಾಚಲನದ ಸಾಧುತ್ವ ವಿಚಾರ, ರಥೋತ್ಸವಕಾಲದ ಅನ್ನದಾನ ವಸ್ತ್ರದಾನಾದಿಗಳು, ಊರಿನ ನಾಲ್ಕು ದಿಗ್ದ್ವಾರದಲ್ಲೂ ಒಂದೊಂದುದಿನ ರಥ ನಿಲ್ಲಿಸುವುದು, ಸ್ವಸ್ಥಾನ ಪ್ರಾಪ್ತಿಕಾಲ, ಆಗಿನ ಕರ್ತವ್ಯ, ರಥವನ್ನು ಹತ್ತಬಾರದವರ ವಿಚಾರ, ಸೇವಾರ್ಥಕಾರರಿಗೆ ಫಲಪ್ರಾಪ್ತಿ ವಿಚಾರ.
ರಥ ಪರ್ಯಟನ ವಿಧಿವರ್ಣನ – ಮಾರ್ಗದಾರ್ಢ್ಯ ಶೋಧನಕ್ಕಾಗಿ ಪ್ರತೀಹಾರ ರಥಚಲನ, ರಥಾವಯವ ಪರೀಕ್ಷಣ, ವಿವಿಧ ರಥಾವಯವ ಭಂಗಫಲ, ಉತ್ಪಾತ ಶಾಂತಿವಿಚಾರ, ರಥೊರೋಹಣ ಲಗ್ನಕ್ಕೆ ಅರಿಷ್ಟಸ್ಥಾನದಲ್ಲಿರುವ ಗ್ರಹಗಳಿಗೆ ಶಾಂತಿವಿಚಾರ, ಶಾಂತ್ಯುಪಯುಕ್ತ ವಸ್ತುಗಳು, ನವಗ್ರಹ ಪ್ರತಿಮಾ ನಿರ್ಮಾಣ, ಗ್ರಹಾರಾಧನ ಮಂತ್ರ, ಅಗ್ನಿ ಮುಖ, ಹೋಮವಿಚಾರ, ಪೂಜ್ಯ ಪೂಜಾವ್ಯತಿಕ್ರಮದ ಹಾನಿ, ರಥದ ಪುನಸ್ಸಿದ್ಧತೆ, ಉತ್ಸವ ಸಂಪೂರ್ಣತಾ ವಿಚಾರ.
ಸರ್ವದೇವತಾ ಬಲಿ ಪ್ರದಾನ ವಿಚಾರ – ಪರಿವಾರ ದೇವತೆಗಳ ಸಹಿತ ಸೂರ್ಯನಿಗೆ ನಿವೇದಿಸಬೇಕಾದ ವಸ್ತುಗಳು, ಗ್ರಹಚಾರ ಶಾಂತ್ಯರ್ಥವಾದ ತಿಲದಾನ, ದೇವರನ್ನು ರಥದಿಂದ ಇಳಿಸಿ ದೃಷ್ಟಿಪರಿಹಾರಕ್ಕೆ ಆರತಿ ನಿವಳಿಸುವುದು, ವೇದಿಕಾರೋಹಣ, ದಾಶಾಹಿಕಪೂಜೆ, ನಾಲ್ಕನೇದಿನ ಅಭ್ಯಂಗ, ದಾಶಾಹಿಕ ಪೂಜಾ ನಂತ ಮೂಲಪೀತಾರೋಹಣ.
ಸೂರ್ಯಯಾತ್ರಾಮಹಾತ್ಮ್ಯ – ರಥೋತ್ಸವ ಮಾಡಿಸುವ ಸೇವಾರ್ಥ, ಘೃತಸ್ನಾನ, ಅಭಿಷೇಕ, ಅಗ್ರೋದಕ ಸಮರ್ಪಣ, ಉತ್ಸವ ವಾಹನ, ರಥಾಕರ್ಷಣ, ರಥಾಮಾರ್ಗಸಮ್ಮಾರ್ಜನ, ಉಪಲೇಪನ, ರಂಗವಲ್ಲಿ ರಚನ, ತೋರಣ ಪುಷ್ಪಮಾಲಾದ್ಯಲಂಕಾರ ರಚನ, ವಾದ್ಯವಾದನ, ನರ್ತನ, ಗಾಯನ, ಜಾಗರಣ, ದಾಶಾಹಿಕಪೂಜೆ, ಈ ಮೊದಲಾದ ಸೇವಾ ಮಾಡಿಸುವುದರ ಫಲಗಳು, ನೈಮಿತ್ತಿಕ ಪೂಜಾದಿನ ಅರ್ಚಕನ ದೀಕ್ಷಾಧಾರಣ, ದೀಕ್ಷಿತನ ಲಕ್ಷಣ.
ಮಾಘಶುದ್ಧ ಸಪ್ತಮೀ ಸೂರ್ಯಸಮಾರಾಧನ ಪ್ರಕಾರ – ತೃತೀಯಾ ತಿಥಿ ಮೊದಲ್ಗೊಂದು ಆಹಾರ ನಿಯಮ ವಿಚಾರ, ಸುವರ್ಣ ರಥ ರಚನೆ, ಅಲಂಕಾರ ಸಾಮಗ್ರಿ ಮತ್ತು ಕ್ರಮ, ಅದರಲ್ಲಿ ಸೂರ್ಯಾರಾಧನ ಕ್ರಮವಿಚಾರ, ವಾಚಕ ವಿಪ್ರನಿಗೆ ವಸ್ತ್ರಯುಗ್ಮ ಸಹಿತ ರಥದಾನ, ಉಪವಾಸಕರಣ ಫಲ.
ಸೂರ್ಯ ಪರಿಚರ್ಯಾ ಮಹಾತ್ಮ್ಯ ವರ್ಣನ – ಸೂರ್ಯನ ಹಣೆಯಿಂದ ಶಿವನು, ಮತ್ತು ಎರಡು ಕೈಗಳಿಂದ ಬ್ರತ್ಮ ವಿಷ್ಣುಗಳ ಉತ್ಪತ್ತಿವಿಚಾರ, ಸೂರ್ಯಪ್ರೀತ್ಯರ್ಥವಾದ ಜಪಹೋಮಾದಿಗಳ ಫಲ, ಸೂರ್ಯಮಂತ್ರದ ಸವಿತ್ರತೆಯ ವಿಚಾರ, ಅವನ ಕೀರ್ತನಸ್ಥಳದ ಶ್ರೇಷ್ಠತೆ, ಅವನ ಸೇವಾತತ್ಪರಗಳಾದ ಇಂದ್ರಿಯಗಳ ಸಾರ್ಥಕತೆ, ಸೂರ್ಯ ನಮಸ್ಕಾರವು ಭವತಾರಕವಾಗುವ ವಿಚಾರ, ಸರ್ವರ ಹೃದಯದಲ್ಲೂ ಇವನ ಭಕ್ತಿ ಸ್ಥಿರನಾಗಿರಬೇಕಾದ ವಿಚಾರ.
ಅಲ್ಪಾಯುಗಳೂ, ಚಂಚಲಮನಸ್ಕರೂ ಅಜತೆಂದ್ರಿಯರೂ ಆದವರಿಗೆ ಪರಬ್ರಹ್ಮಯೋಗ ಪ್ರಾಪ್ತಿಯ ಅಸಾಧ್ಯತೆ, ಈ ಯೋಗ ಪ್ರಾಪ್ತಿಯಿಲ್ಲದೆ ಭವತಾರಣದ ದುಸ್ಸಾಧ್ಯತೆಯ ವಿಚಾರ, ಈ ಯೋಗಪ್ರಾಪ್ತಿಗೆ ಮಾಡಬೇಕಾದ ಸೇವಾತತ್ಪರತೆ, ಸರ್ವ ವ್ಯಾಪಿತ್ವಜ್ಞಾನಮುಖ್ಯವೆಂಬ ವಿಚಾರ, ಈ ತತ್ವತಿಳಿದರೆ ಪರ ಬ್ರಹ್ಮವೇ ಪ್ರಪಂಚತ್ವೇನ ವರ್ತಿಸಿದೆ ಎಂಬ ಭಾವಪ್ರಾಪ್ತಿ, ಅದರಿಂದ ನೈಷ್ಕರ್ಮ್ಯ ಸಿದ್ಧಿವಿಚಾರ.
ಬ್ರಹ್ಮಹತ್ಯಾಭಿಭೂತನಾದ ದಿಂಡಿಯು ಸೂರ್ಯನನ್ನು ಸ್ತುತಿಸಿ ಅನುಗ್ರಹ ಪಡೆದವಿಚಾರ. ಅದರಿಂದ ದೋಷಪರಿಹಾರವಾಗಿ ದೇವತ್ವ ಲಭಿಸಿದ ವಿಚಾರ, ಇದು ಸಧ್ಯವೇ ಎಂಬದಾಗಿ ಪ್ರಶ್ನಿಸಲು ಅದು ಸಾಧ್ಯ ಎಂಬುದನ್ನು ತೋರಿಸಿರುವ ಕ್ರಮ, ಪರಬ್ರಹ್ಮ ಯೀಗವನ್ನು ಅನುಸರಿಸುವಾಗ ಇಂದ್ರಿಯಗಳಿಗೆ ವಿಷಯ ಚಾಪಲ್ಯ ತೋರಿದರೆ ದೇವಗುಣಗಾನ, ದೇವಕಥಾ ಶ್ರವಣ, ದೇವಾಯತನಕ್ಕೆಸಂಚಾರ, ಈರೀತಿ ಆ ಚಪಲವನ್ನು ತೃಪ್ತಿಪಡಿಸುವುದು, ರಾಗಾದಿಗಳು ಕಡಮೆಯಾಗದಿದ್ದರೂ ಸ್ವಾಮಿಗೆ ಪ್ರಿಯವಾದ ಕಾರ್ಯವನ್ನೇ ನಡೆಯಿಸಿದಂತಾಗುವುದೆಂಬದಾಗಿ ಸಾಧ್ಯತೆ ತೋರಿಸುವ ವಿಚಾರ.
ದಿಂಡಿಯ ಪ್ರಾರ್ಥನೆಯಂತೆ ಬ್ರಹ್ಮನು ಕರ್ಮಯೋಗವನ್ನು ತಿಳಿಸುವುದು, ಸೌರದೀಕ್ಷಾ ಕ್ರಮವಿವರಣೆ, ಸೌರಲಕ್ಷಣ, ದೀಕ್ಷೆವಹಿಸು ವನಲ್ಲಿರಬೇಕಾದ ಗುಣಗಳು, ಸೂರ್ಯದೇವಾಲಯ ನಿರ್ಮಾಣ ಫಲ ವಿಚಾರ, ಸೂರ್ಯಪ್ರೀತ್ಯರ್ಥವಾಗಿ ಮಾಡುವ ದಾನ ಯಜ್ಞಾದಿಗಳ ಫಲ ವಿಚಾರ.
ಉಪವಾಸ ಮಹಾತ್ಮ್ಯವರ್ಣನೆ, ಸಪ್ತಮೀ ಫಲನಿರೂಪಣ – ಸದ್ವಿಷಯದಲ್ಲಿ ಮನುಪ್ರವೃತ್ತಿಯು ಅವಶ್ಯವೆಂಬ ವಿಚಾರ, ಸೂರ್ಯಾರಾ ಧನಕ್ಕಿಂತ ಹೆಚ್ಚಿನ ಸದ್ವಿಷಯವಿಲ್ಲವೆಂಬ ನಿರ್ಧರ, ಅವನ ಪೂಜಾ ದ್ರವ್ಯಸಿದ್ಧತೆ, ದೇವಾಲಯ ಸಮ್ಮಾರ್ಜನ, ಉಪಲೇಪನ, ದೀಪಾರಾಧನಾದಿಗಳು, ಸದ್ವಿಷಯಗಳೇ; ಫಲ ಸಪ್ತಮೀ ವ್ರತವಿಧಾನ, ವ್ರತದ ಪೂರ್ವದಿನದಲ್ಲಿ ಆಚರಿಸುವ ನಿಯಮ ವಿಚಾರ, ಹನ್ನೆರಡು ತಿಂಗಳಲ್ಲೂ ಸ್ನಾನಕ್ಕೆ ಉಪಯೋಗಿಸುವ ವಸ್ತುಗಳು, ಪ್ರಾಶನ ವಿಧಿ ವಿಚಾರ, ಪೂಜಾ ವಿಧಾನ, ಯಥಾಶಕ್ತಿ ದಾನ, ಆಚಾರ್ಯ ಸಂಭಾವನೆ ಫಲ ಸೇವನಾ ವಿಚಾರ.
ರಹಸ್ಯಸಪ್ತಮೀವ್ರತ ಮಹಾತ್ಮ್ಯವರ್ಣನಂ – ಈ ವ್ರತದ ಮಹತ್ವ ವಿಚಾರ, ಇದರ ಮುಖ್ಯನಿಯಮಗಳು, ನೀಲವಸ್ತ್ರ ನಿಷೇಧ ವಿಚಾರ, ನೀಲೀಗಿಡದ ಬೆಳೆ, ನೀಲಿಯ ಎಣ್ಣೆ, ಇವುಗಳ ಅಪರಿಶುದ್ಧವಿಚಾರ, ಸಪ್ತಮೀದಿನ ತ್ಯಾಜ್ಯಮಾಡಬೇಕಾದ ಕಾರ್ಯಗಳ ವಿಚಾರ, ಮತ್ತು ತ್ಯಾಜ್ಯವಸ್ತುಗಳು, ಈ ವ್ರತಾಂಗವಾಗಿ ಚೈತ್ಯಶುದ್ಧ ಸಪ್ತ ಇ ಮೊದಲುಮಾಡಿ ಪ್ರತಿ ತಿಂಗಳೂ ಬೇರೆ ಹೆಸರಿನಿಂದ ಸೂರ್ಯಾರಾಧನೆ ಮಾಡುವ ವಿಚಾರ, ಬ್ರಾಹ್ಮಣ ಭೋಜನ, ತದಂಗವಾದ ಸಂಭಾವನಾ ವಿಚಾರ.
ಇವನ್ನು ತಿಳಿಸಿ ಬ್ರಹ್ಮನು ಅಂತರ್ಧಾನನಾಗುವುದು, ದಿಂಡಿಯು ಸೂರ್ಯನನ್ನು ಆರಾಧಿಸಿದುದು – ಶಂಖ ಋಷಿಯ ಆಶ್ರಮದಲ್ಲಿ ಭೋಜ ಕುಮಾರರ ವ್ಯಾಸಂಗ, ಆಗಂತುಕ ದ್ವಿಜನಿಗೂ ಶಂಖನಿಗೂ ಸಂಭಾಷಣೆ, ಆಗ ಶಂಖನು ಸಪ್ತಮಿಯಲ್ಲಿ ಸೂರ್ಯಾರ್ಚನ ಕ್ರಮವನ್ನು ತಿಳಿಸಿದ ವಿಚಾರ, ನಿದರ್ಶನಕ್ಕಾಗಿ ಸಾಂಬ ವೃತ್ತಾಂತವನ್ನು ತಿಳಿಸುವುದು. ಕೃಷ್ಣನು ಸಾಂಬನಿಗೆ ಸೂರ್ಯ ಮಹಿಮೆಯನ್ನು ನಿರೂಪಣಮಾಡಿದ ವಿಚಾರ, ಬ್ರಹ್ಮ ಯಾಜ್ಞ್ಯವಲ್ಕ್ಯರ ಸಂವಾದ, ಬ್ರಹ್ಮನು ಯಾಜ್ಞವಲ್ಕ್ಯರಿಗೆ ಆದಿತ್ಯ ಮಾಹಾತ್ಮ್ಯವನ್ನೂ ಪೂಜಾ ವಿಧಾನವನ್ನೂ ತಿಳಿಸಲು ಸಮ್ಮತಿಸಿದ ವಿಚಾರ.
ಸೂರ್ಯಸ್ವರೂಪ ಮಾಹಾತ್ಮ್ಯವರ್ಣನಂ – ಬ್ರಹ್ಮನು ಯಾಜ್ಞವಲ್ಕ್ಯರಿಗೆ ಸೂರ್ಯಮಹಿಮಾ ನಿರೂಪಣಮಾಡುವಾಗ ತಾನು ಸೃಷ್ಟ್ಯಾದಿಯಲ್ಲಿಮಾಡಿದ ಸೂರ್ಯಾರಾಧನೆ, ಸೂರ್ಯಪ್ರತ್ಯಕ್ಷವಾಗುವುದು, ಬ್ರಹ್ಮನು ಸೂರ್ಯನನ್ನು ನಿನ್ನ ಆರಾಧ್ಯದೇವತೆಯಾರೆಂದು ಪ್ರಶ್ನಿಸುವುದು, ಅದು ಬಹುರಹಸ್ಯವೆಂದೂ ಸಾಂಖ್ಯರೂ, ವೇದಾಂತಿಗಳೂ ನಾಮಾಂತರದಿಂದ ಹೇಳುವ ವಿರಾಡ್ರೂಪವೇ ತನ್ನ ಆರಾಧ್ಯ ದೇವನೆಂದು ತಿಳಿಸಿದ್ದು, ಜಲ, ಅಗ್ನಿ, ವಾಯು, ದೀಪ ಇವುಗಳ ನಿದರ್ಶನದಿಂದ ವಿರಾಟ್ಪುರುಷನಿಗೆ ಏಕತ್ವ ಬಹುತ್ವವೆರಡೂ ಸಾಧ್ಯವೆಂದು ತಿಳಿಸಿದ ವಿಚಾರ.
ಸೂರ್ಯಾರಾಧನೆ, ಸೂರ್ಯಪ್ರಿಯವಾದ ಪುಷ್ಪಗಳು, ಅವುಗಳ ಫಲ, ಘೃತತೈಲಾದಿ ದಾನ ಫಲ, ಸಿದ್ಧಾರ್ಥ ಸಪ್ತಮೀಮಾಹಾತ್ಮ್ಯ – ಸೂರ್ಯಾರಾಧನಾನಂತರ ಸಿದ್ಧಾರ್ಥ ಸೇವನೆಯ ವಿಚಾರ, ಪ್ರತಿ ತಿಂಗಳಲ್ಲೂ ಸಿದ್ಧಾರ್ಥದ ಜತೆಯಲ್ಲಿ ಸೇವಿಸಬೇಕಾದ ಬೇರೆ ಬೇರೆ ವಸ್ತುಗಳ ವಿಚಾರ, ಅಭಿಮಂತ್ರಿಸುವ ಮಂತ್ರ, ಹವಿಷ್ಯ ಜಪಮಂತ್ರ, ಇದರಿಂದ ಇಷ್ಟಾರ್ಥಸಿದ್ಧಿಯಾಗುವ ವಿಚಾರ.