ಭವಿಷ್ಯಮಹಾಪುರಾಣಂ – ಭಾಗ – ೧: ಬ್ರಾಹ್ಮಪರ್ವ – ಪ್ರಥಮ ಸಂಪುಟ
ವಿಷಯಾನುಕ್ರಮಣಿಕೆ
ಮಂಗಲಶ್ಲೋಕಗಳು, ಗ್ರಂಥ ಮತ್ತು ಗ್ರಂಥಕರ್ತೃ ವಿಚಾರ.
ಕಥಾಪ್ರಸ್ತಾವನೆ – ವ್ಯಾಸರೇ ಮುಂತಾದ ಮುನಿವರ್ಯರು ಶತಾನೀಕ ರಾಜನಿಂದ ಸತ್ಕೃತರಾದುದು. ಆ ರಾಜನು ಆ ಮುನಿಗಳನ್ನು ಧರ್ಮಶಾಸ್ತ್ರ ವಿಚಾರವನ್ನು ತಿಳಿಸಬೇಕೆಂದು ಕೇಳಿದುದು. ಆ ಮುನಿಗಳು ವ್ಯಾಸರೇ ಆ ಕೆಲಸಕ್ಕೆ ಸಮರ್ಥರು ಎಂದು ಹೇಳಿದುದು. ಆಗ ವ್ಯಾಸರು ತಮ್ಮ ಶಿಷ್ಯನಾದ ಸುಮಂತವು ತಿಳಿಸುವನೆಂದು ಅಭಿಪ್ರಾಯಪಟ್ಟುದು. ರಾಜನು ಸುಮಂತುಮುನಿವರ್ಯರನ್ನು ಪ್ರಾರ್ಥಿಸಿದುದು. ಸುಮಂತವು ಪುರಾಣಶ್ರವಣದ ಮಹಿಮೆಯನ್ನು ತಿಳಿಸಿ, ಭವಿಷ್ಯಪುರಾಣದ ವಿಚಾರವನ್ನು ಪ್ರಶಂಸಿಸುವುದು.
ಸೃಷ್ಟಿವರ್ಣನೆ – ಪುರಾಣಗಳು ಬ್ರಹ್ಮನ ಐದನೆಯ ಮುಖದಿಂದ ಉತ್ಪತ್ತಿಯಾದ ವಿಚಾರ. ಬ್ರಹ್ಮನ ಅಹೋರಾತ್ರಿಗಳ ಪರಿಮಾಣ. ದೇವಮಾನ, ಪಿತೃಮಾನ, ಮನುಷ್ಯಮಾನದ ವರ್ಷಗಳು, ಮನ್ವಂತರಗಳು, ಯುಗಧರ್ಮ, ಯುಗಾನುಕ್ರಮದಲ್ಲಿ ಧರ್ಮದ ಕ್ಷೀಣತೆ, ಚಾತುರ್ವರ್ಣ್ಯವಿಭಾಗ, ಅವರ ಕರ್ತವ್ಯಗಳು, ವೇದೋಕ್ತವಾದ ಬ್ರಾಹ್ಮಣ ಕರ್ಮಗಳು ಮತ್ತು ವಿಪ್ರರಲ್ಲಿರಬೇಕಾದ ಎಂಟು ಆತ್ಮಗುಣಗಳು. ಇವುಗಳಿಂದ ಬ್ರಹ್ಮತ್ವ ಪ್ರಾಪ್ತಿ ವಿಚಾರ.
ಉಪಸ್ಪರ್ಶವಿಧಿವರ್ಣನೆ – ಎಲ್ಲಾ ವರ್ಣಗಳಿಂದ ಆಶ್ರಮೋಚಿತ ಧರ್ಮವಿಚಾರ. ಶಿಶುವು ಗರ್ಭಸ್ಥವಾದಾಗ ಆಗಬೇಕಾದ ಗಭಾಧಾನಾದಿ ಸಂಸ್ಕಾರವರ್ಣನೆ. ಜನನವಾದ ಮೇಲೆ ನಾಮಕರಣ ಕಾಲ. ಅದರ ವಿಧಿ ಉಪನಯನ, ದಂಡಧಾರಣ, ಭಿಕ್ಷಾಚರಣೆ, ಶುದ್ಧಾಚಮನವಿಧಿ. ಈ ಆಚಮನದಿಂದ ಅವನ ದೇಹದಲ್ಲಿ ಉಂಟಾಗುವ ದೇವಮಯತ್ವ. ವಿಪ್ರನ ದಕ್ಷಿಣ ಹಸ್ತದಲ್ಲಿರುವ ರೇಖಾದಿಗಳ ಸ್ವರೂಪ ನಿರೂಪಣ. ವಿಪ್ರ ಮಹಿಮಾ ವಿಚಾರ.
ಉಪನಯನ ವಿಧಿವರ್ಣನ – ಉಪನೀತವಾದ ವಟುವಿನ ಗುರುಕುಲವಾಸ, ನಿಯಮಾನಸರಣ ನಿತ್ಯಕರ್ಮ. ಅಗ್ನಿಕಾರ್ಯ, ವೇದಾಭ್ಯಾಸ, ಪ್ರಣವೋಚ್ಚಾರಣ, ಪ್ರಣವಮಹಿಮಾ, ಗಾಯತ್ರಿಯ ಪವಿತ್ರತೆ, ಜಪಕ್ರಮ, ಜಪಕ್ಕೆ ಅನುಕೂಲವಾದ ಸ್ಥಳ, ಆಚಾರ್ಯಾದಿಗಳ ಲಕ್ಷಣ; ಗುರು, ಗುರುಪುತ್ರಾದಿಗಳ ವಿಚಾರದಲ್ಲಿ ಶಿಷ್ಯನ ನಡವಳಿಯ ವಿಚಾರ. ಮಹಾಗುರುವಿನ ಲಕ್ಷಣ. ಗುರುಶಿಷ್ಯರ ವಯೋಧರ್ಮ ವಿಚಾರ. ಬ್ರಾಹ್ಮಣಾತಿಕ್ರಮ ದೋಷ ವಿಚಾರ. ಗುರುಶುಶ್ರೂಷಾಧಿಕ್ಯದಿಂದ ವಿಶೇಷ ವಿದ್ಯಾರ್ಜನಸಾಧನ ವಿಚಾರ. ವಿದ್ಯಾರ್ಜನಾನಂತರ ವಿವಾಹಾರ್ಹತಾ ವಿಚಾರ. ವಿಪ್ರಗುರು ಸಿಕ್ಕದೆ ಅನಿವಾರ್ಯಪಕ್ಷದಲ್ಲಿ ಜಾತ್ಯಂತರದ ಗುರುವಿನಿಂದ ಉಪದೇಶ. ವರ್ಣತ್ರಯದವರಿಗೆ ಉಪನಯನಕ್ಕೆ ಉಕ್ತವಾದ ಕಾಲವಿಚಾರ.
ಸ್ತ್ರೀ ಶುಭಾಶುಭಲಕ್ಷಣವರ್ಣನ – ಸ್ತ್ರೀಯು ಅವಯವಸ್ವರೂಪದಿಂದ ಶುಭಾಶುಭತ್ವನಿರ್ಣಯ. ಸ್ತ್ರೀ ಗಮನ ಲಕ್ಷಣದಿಂದ ಉತ್ತಮಮಧ್ಯಮಾಧಮನಿರ್ಣಯ. ರಾಜಪತ್ನೀ ಲಕ್ಷಣ ನಿರ್ಣಯ. ಯಜ್ಞದೀಕ್ಷಿತಪತ್ನೀಲಕ್ಷಣ ನಿರ್ಣಯ. ವೈಶ್ಯಪತ್ನೀಲಕ್ಷಣ ನಿರ್ಣಯ. ಕೃಷೀವಲಪತ್ನೀಲಕ್ಷ ನಿರ್ಣಯ. ಗರ್ಭಿಣಿಸ್ತ್ರೀಯ ಪುಂಸ್ತ್ರೀ ಜನನಲಕ್ಷಣ ನಿರ್ಣಯ. ಹೆಸರಿನ ಕಾರಣದಿಂದ ಸ್ತ್ರೀ ಪರಿಗ್ರಹಕ್ಕೆ ಅನರ್ಹತೆಯ ವಿಚಾರ. ರೋಗ ನಿಮಿತ್ತವಾಗಿ ಅಪರಿಗ್ರಾಹ್ಯಸ್ತ್ರೀ ವಿಚಾರ.
ಸ್ತ್ರೀ ಸದ್ವೃತ್ತವರ್ಣನ – ಗೃಹಸ್ಥನ ದ್ರವ್ಯಾರ್ಜನೆಯ ಆವಶ್ಯಕತೆ. ಕುಟುಂಬಪೋಷಣೆ, ಧರ್ಮಕಾರ್ಯಾಚರಣೆ, ತ್ರಿವರ್ಗಸಾಧನೆ, ದ್ರವ್ಯಹೀನನಿಗೆ ಒದಗುವ ಕಷ್ಟನಷ್ಟಗಳ ವಿಚಾರ. ವಿವಾಹಿತನಾಗುವಾಗ ಮಾಡಬೇಕಾದ ಆಲೋಚನೆ. ದುಷ್ಕುಲಸಂಬಂಧದಿಂದ ಒದಗುವ ಅನರ್ಥ. ತನಗಿಂತುತ್ತಮಸಂಬಂಧದಲ್ಲಿ ತನಗೆ ಆಗುವ ತಿರಸ್ಕಾರ. ಸಮತ್ವಸಂಬಂಧದ ಮೇಲ್ಮೆ. ಸಂಬಂಧಿಗಳಲ್ಲಿರಬೇಕಾದ ಲಕ್ಷಣ. ಸಂಬಂಧಾನರ್ಹತೆಗೆ ಕಾರಣಗಳು. ಜಾತ್ಯಂತರ, ಕುಲಭ್ರಷ್ಠತೆ, ಇವುಗಳ ವಿಚಾರ. ಸ್ತ್ರೀ ಸದ್ವೃತ್ತವರ್ಣನ – ಗೃಹಸ್ಥನ ದ್ರವ್ಯಾರ್ಜನೆಯ ಆವಶ್ಯಕತೆ. ಕುಟುಂಬಪೋಷಣೆ, ಧರ್ಮಕಾರ್ಯಾಚರಣೆ, ತ್ರಿವರ್ಗಸಾಧನೆ, ದ್ರವ್ಯಹೀನನಿಗೆ ಒದಗುವ ಕಷ್ಟನಷ್ಟಗಳ ವಿಚಾರ. ವಿವಾಹಿತನಾಗುವಾಗ ಮಾಡಬೇಕಾದ ಆಲೋಚನೆ. ದುಷ್ಕುಲಸಂಬಂಧದಿಂದ ಒದಗುವ ಅನರ್ಥ. ತನಗಿಂತುತ್ತಮಸಂಬಂಧದಲ್ಲಿ ತನಗೆ ಆಗುವ ತಿರಸ್ಕಾರ. ಸಮತ್ವಸಂಬಂಧದ ಮೇಲ್ಮೆ. ಸಂಬಂಧಿಗಳಲ್ಲಿರಬೇಕಾದ ಲಕ್ಷಣ. ಸಂಬಂಧಾನರ್ಹತೆಗೆ ಕಾರಣಗಳು. ಜಾತ್ಯಂತರ, ಕುಲಭ್ರಷ್ಠತೆ, ಇವುಗಳ ವಿಚಾರ.
ವಿವಾಹವಿಧಿವರ್ಣನೆ – ನಾನಾವರ್ಣದವರ ವಿವಾಹವಿಧಾನ. ಪರಿಗ್ರಹಕ್ಕೆ ಅನರ್ಹರಾದ ಸ್ತ್ರೀಯರು. ಸವರ್ಣಸ್ತ್ರೀ ದೊರೆಯದಿದ್ದಾಗ ಅಸವರ್ಣಸ್ತ್ರೀ ಪರಿಗ್ರಹ ವಿಚಾರ. ಉತ್ತಮವರ್ಣದ ಸ್ತ್ರೀ ಹೀನವರ್ಣದ ಪುರುಷನನ್ನು ವರಿಸಕೂಡದೆಂಬ ವಿಚಾರ. ಕನ್ಯಾಶುಲ್ಕನಿಷೇಧ. ವರ್ಣಾಂತರ ಸಂಬಂಧದಿಂದ ಪತಿತರಾದವರ ದೃಷ್ಟಾಂತ. ವಿವಾಹದ ಎಂಟುವಿಧ. ಬ್ರಾಹ್ಮಣಾವಾಸಯೋಗ್ಯ ಪ್ರದೇಶ. ಬ್ರಹ್ಮಾವರ್ತಾದಿ ದೇಶಸ್ವರೂಪ ವಿವರಣೆ.
ಸ್ತ್ರೀಸ್ವಭಾವಪರೀಕ್ಷಣ – ಗೃಹನಿರ್ಮಾಣ ಸ್ಥಲಲಕ್ಷಣ. ಪರೋಕ್ಷದಲ್ಲಿ ಸ್ತ್ರೀ ಸ್ವಭಾವಪರೀಕ್ಷಾಕ್ರಮ. ಭಾತ್ಯ ಮತ್ತು ಸ್ತ್ರೀಯರ ಶಾಸನವಿಧಾನ. ಪುರುಷನ ಸ್ಥಿತಿಗತಿಗಳಿಂದ ಸ್ತ್ರೀಯ ಸ್ಥಿತಿಗತಿಗಳ ಬದಲಾವಣೆ. ಪತಿಯ ಕ್ರೌರ್ಯದಿಂದ ಪತ್ನೀಮನಃಪರಿವರ್ತನ, ಬಳಿಕ ಸ್ತ್ರೀಯ ಕೃತ್ರಿಮಾಚರಣೆ ಸ್ತ್ರೀಯರಿಂದ ವಂಚಿತರಾದ ರಾಜಾಧಿರಾಜರ ಇತಿಹಾಸ. ಪುರುಷನು ಜಾಗರೂಕನಾಗಿರಬೇಕಾದ ಆವಶ್ಯಕತೆ. ಉಪಾಯದಿಂದ ಸ್ತ್ರೀಯರನ್ನು ತಿದ್ದುವ ಕ್ರಮ.
ಆಗಮನಪ್ರಶಂಸಾ – ಸ್ತ್ರೀಯರ ಪತಿಸೇವಾಚರಣೆಯಿಂದ ಆಗುವ ಲಾಭ. ಸೇವಾಕ್ರಮದಲ್ಲಿರುವ ಶಾಸ್ತ್ರನಿಬಂಧನೆ. ಕಾಲಾನಂತರ ಸತಿಯು ಅನುಸರಿಸಬೇಕಾದ ಕರ್ತವ್ಯವಿಚಾರ. ಸ್ತ್ರೀಯರಿಗೆ ವೇದಾಧಿಕಾರರಾಹಿತ್ಯ. ಶಾಸ್ತ್ರಾಧಿಕಾರಯೋಗ್ಯತೆ. ಅಧ್ಯಯನಬಾಹಿರನಿಗೂ ವೇದೋಕ್ತಕರ್ಮಾನುಷ್ಠಾನ ನಿರೂಪಣ. ವೇದಾಧಿಕಾರದ ಯೋಗ್ಯತೆ ಇಲ್ಲದವರಿಗೂ ಇರುವ ಶಾಸ್ತ್ರಾನುಸರಣದ ರೂಢಿ. ಸಂಪ್ರದಾಯಕ್ಕಿಂತ ಶಾಸ್ತ್ರನಿಯಮಕ್ಕಿರುವ ಪ್ರಾಶಸ್ತ್ಯ. ಶಾಸ್ತ್ರ, ಪುರಾಣ ಇವುಗಳ ನಿರೂಪಣ ವ್ಯತ್ಯಾಸವಿದ್ದ ಸಂದರ್ಭದಲ್ಲಿ ಮಹಾಜನರ ಮಾರ್ಗವೆ ಸಾಧುವೆಂಬ ವಿಚಾರ. ಗೃಹಿಣಿಯಿಂದಲೇ ಗೃಹಸ್ಥನ ಏಳಿಗೆಯ ವಿಚಾರ.
ಸ್ತ್ರೀದುರ್ವೃತ್ತವರ್ಣನ – ಸ್ತ್ರೀಯು ಸತಿ ಮನೋನುಕೂಲೆಯಾಗಿರುವ ಆವಶ್ಯಕತೆ. ವಯೋಧರ್ಮಾನುಸಾರ ಸ್ತ್ರೀಯರ ವಿಭಾಗ. ಪುರುಷರಿಗೆ ಬಹುಪತ್ನೀಸ್ವೀಕಾರಾರ್ಹತೆ. ಅವರಲ್ಲಿ ತಾರತಮ್ಯ ವಿಂಗಡಣ. ಸ್ತ್ರೀವರ್ತನೆಯಲ್ಲಿ ನಾನಾಪ್ರಭೇದಗಳು. ಕುಲಸ್ತ್ರೀಧರ್ಮ. ಯಥೋಕ್ತ ಕರ್ಮಾಚರಣೆಯು ಕರ್ತವ್ಯವೆಂಬ ಭಾವನೆ. ದುರ್ಭಾವನೆಯ ಸ್ತ್ರೀಯರ ದೂರೀಕರಣ. ಕುಲಸ್ತ್ರೀಯರ ಸಚ್ಚರಿತ್ರೆಗಳು. ಪರಸ್ತ್ರೀವ್ಯಸನಾದಿ ಪುರುಷರ ದೋಷಗಳು. ಸ್ತ್ರೀಯ ದುರ್ಗುಣಗಳು. ಸುಗುಣಿಯಾದ ಸ್ತ್ರೀಯಿಂದ ಉಭಯ ಕುಲೋದ್ಧಾರವಿಚಾರ.
ಸ್ತ್ರೀಯರ ಗೃಹಧರ್ಮವಿಧಿವರ್ಣನ – ತ್ರಿಕರಣಶುದ್ಧಿಯಿಂದ ಪತಿಸೇವಾಪರಾಯಣತೆ ಪತಿಯ ಹಿತಾಹಿತರಲ್ಲಿ ಪತ್ನಿಯ ವರ್ತನ. ದೇವತಾಪಿತೃ ಅಭ್ಯಾಗತಸೇವೆಯಲ್ಲಿ ಸ್ತ್ರೀಯ ವಿತರಣೆ ಗೃಹ ನೈರ್ಮಲ್ಯ, ಗೋಶಾಲಾಶುದ್ಧಿ, ಭೃತ್ಯರಪೋಷಣೆ, ಭೃತ್ಯರಿಗೆ ಕಾರ್ಯನಿಯೋಜನೆ. ಗೃಹೋಪಕರಣ ಸಂಗ್ರಹ. ಪಾತ್ರಪದಾರ್ಥ ಧಾನ್ಯಶಾಕಾದಿಸಂಗ್ರಹಗಳಲ್ಲಿ ಸ್ತ್ರೀಯ ಮುಂಜಾಗ್ರತೆ. ಧಾನ್ಯಾದಿಗಳ ಅಫಘಾತಪೇಷಣಾದಿ ಸಂಸ್ಕಾರಗಳಲ್ಲಿ ಸ್ತ್ರೀಯು ಅರಿಯಬೇಕಾದ ಸಂಗತಿ.
ಧಾನ್ಯಸಂಗ್ರಹಾದಿ ವಿಚಾರದಲ್ಲಿ ಸ್ತ್ರೀಯ ಕರ್ತವ್ಯ – ಕುಟುಂಬ ಮತ್ತು ಸೇವಕರ ಪೋಷಣೆಗಾಗಿ ಸ್ತ್ರೀಯರು ಸಂಗ್ರಹಿಸಬಹುದಾದ ಧಾನ್ಯಗಳು ಅವುಗಳ ಸಾರಾಸಾರ ಪರಿಮಾಣ. ಸಂಸ್ಕಾರದಿಂದ ಆಗುವ ಧಾನ್ಯವೃದ್ಧಿಕ್ಷಯ ವಿಚಾರ. ವಿವಿಧ ಎಣ್ಣೆಯ ಬೀಜಗಳಲ್ಲಿರುವ ಎಣ್ಣೆಯ ಪರಿಮಾಣ. ಹಾಲಿನ ಬೆಣ್ಣೆಯ ಪರಿಮಾಣ. ಕರೆಯುವ ದನಗಳಿಗೆ ಕೊಡುವ ಆಹಾರ ಅದರಿಂದ ಹಾಲಿನ ವೃದ್ಧಿ ಕ್ಷಯಪರಿಚಯ. ದನಗಳ ಹಿಂಡಿನಲ್ಲಿ ಗೂಳಿಯ ವ್ಯವಸ್ಥೆ. ಉಡುಪಿನ ಸಾಮಗ್ರಿಗಳು. ಕಾಲಾನುಗುಣವಾಗಿ ಅವುಗಳ ವೃದ್ಧಿ ಕ್ಷಯ. ಸೇವಕರ ಆಹಾರವ್ಯವಸ್ಥೆ. ವೇತನವ್ಯವಎಯಲ್ಲಿ ಗುಣಪರಿಶೀಲನೆ. ಬಿತ್ತನೆಯ ಕಾಳಿನ ಸಂಗ್ರಹ. ಅದರ ರಕ್ಷಣೆ. ಸ್ತ್ರೀಯು ಎಲ್ಲಾ ಕಾರ್ಯಗಳಲ್ಲೂ ಪತಿಯೊಡನೆ ಸಮಾಲೋಚನೆ ಮಾಬೇಕೆಂಬ ವಿಚಾರ.
ಗೃಹಕಾರ್ಯನಿರ್ವಾಹ, ಗೃಹಿಣೀಕರ್ತಪ್ಯ – ಸ್ತ್ರೀಯು ಉಷಃಕಾಲಕ್ಕೇ ಏಳಬೇಕೆಂಬ ವಿಚಾರ, ಕಸಮುಸುರೆಗಳನ್ನು ಸಮೀಕರಿಸುವ ವಿಧಾನ, ವಸ್ತುಗಳ ಸ್ಥಾನನಿರ್ದೇಶ, ಹಾಲುಮೊಸರುಗಳ ಪಾತ್ರೆಯ ಪರಿಶುದ್ಧಿ, ವಾಚಕರನ್ನು ನಿಯಮಿಸುವುದರಲ್ಲಿ ಎಚ್ಚರಿಕೆ, ಪತಿಗೆ ಯಥಾಕಾಲದಲ್ಲಿ ಒದಗಿಸುವ ಆಹಾರ ವಿತರಣೆ. ಪತಿಪರಿಚಿತರ ಸತ್ಕಾರ. ಸಪತ್ನೀ ಸಮಭಾವನೆ. ರೋಗಿಗಳ ಉಪಚಾರ. ನಿರಪತ್ಯ ಸ್ತ್ರೀಯು ಪತಿಗೆ ವಿವಾಹಾಂತರವನ್ನು ಕಲ್ಪಿಸುವುದು. ಪತಿವಶ್ಯ ಮೂಲಿಕಾದಿಗಳ ನಿಷೇಧ. ಸ್ತ್ರೀಗೆ ಅಪಕೀರ್ತಿಕರ ಕಾರ್ಯಗಳ ದೂರೀಕರಣ. ಪತ್ಯುಪಚಾರಾಸಕ್ತಿ. ಸದ್ವರ್ತನೆಯೇ ಸ್ತ್ರೀಗೆ ಸದ್ಭೂಷಣವೆಂಬ ವಿಚಾರ. ಅದರಿಂದ ಒದಗುವ ತ್ರಿವರ್ಗಪ್ರಾಪ್ತಿ.
ಪತಿಯ ಪ್ರವಾಸಕಾಲದಲ್ಲಿ ಪತ್ನಿಯ ಕರ್ತವ್ಯ. ಅಲಂಕಾರ ಆಭರಣ ನಿರಪೇಕ್ಷ. ಪತಿ ಊರಿಗೆ ಬಂದಾಗ ಮಾಡಬೇಕಾದ ಸತ್ಕಾರ. ಪಿತೃಹೃಹದಿಂದ ಒದಗಿದ ಲಾಭಕ್ಕಾಗಿ ಅಹಂಕಾರ ಪಡದಿರುವುದು. ಸಪತ್ನೀ ನಿರ್ಮತ್ಸರತೆ. ತನ್ನ ಪಾಕಾದಿಗಳಿಂದ ಪತಿಯ ಮೆಚ್ಚಿಗೆ ಸಂಪಾದನೆ ಗೃಹಕಾರ್ಯಗಳನ್ನು ಪತಿಯಿಂದ ಹಂಚಿಸುವುದು. ಗೃಹಕಾರ್ಯದಲ್ಲಿ ಜಾಗರೂಕತೆ. ಯಶಸ್ಕರವಾದ ಸ್ತ್ರೀ ಧರ್ಮಗಳಲ್ಲಿ ಆಸಕ್ತಿ. ಪೂಜ್ಯರಲ್ಲಿ ವಿಧೇಯತೆ. ಭೃತ್ಯಪೋಷಣೆ. ಶೀಲಸಂರಕ್ಷಣೆಯ ವಿಚಾರ.
ಸ್ತ್ರೀಧರ್ಮ ವರ್ಣನೆ – ದುರದೃಷ್ಟದ ಸ್ತ್ರೀಗೆ ಒದಗುವ ಕಷ್ಟಗಳು. ಶಾಂತತೆಯಿಂದ ಅದನ್ನು ಸಹಿಸುವಿಕೆ. ಭೂಷಣಪರಿತ್ಯಾಗ ಅಥವಾ ಅಧಿಕ ಭೂಷಣ ಧಾರಣ ಇವುಗಳ ಬಾಧಕ. ನೈರ್ಮಲ್ಯ ನಿರಾಡಂಬರಗಳ ಅವಶ್ಯಕತೆ. ಗೃಹಕಾರ್ಯವೇ ಕರ್ತವ್ಯವೆಂಬ ಭಾವನೆ. ಸೇವೆಯಲ್ಲಿ ದಾದಿಯಂತೆ ಮಕ್ಕಳಲ್ಲಿ ಮಾತೆಯಂತೆ ಇರಬೇಕಾದ ಕ್ರಮ. ಸ್ತ್ರೀಯ ಶಾಸನದಿಂದ ಪುರುಷರಿಗೆ ಯಶಃಪ್ರಾಪ್ತಿ ವಿಚಾರ. ಇಂಗಿತಜ್ಞತೆಯಿಲ್ಲದ್ದು, ಲೋಕವಿರುದ್ಧಾಚರಣ ಮುಂತಾದ ಸ್ತ್ರೀಯ ಅಪಕೀರ್ತಿಕಾರಣ ವಿವರ. ಕೌಶಲಾದಿಗಳಿಂದ ಪತಿಹಿತಕೋರುವುದೇ ಪತಿವ್ರತಾ ಧರ್ಮವೆಂಬ ವಿಚಾರ.
ಆಹಾರ ಸಿದ್ಧತೆಯ ಕಾರ್ಯದಲ್ಲಿ ಗೃಹಸ್ಥನಿಗೆ ಉಂಟಾಗುವ ವಂಚಸೂನಾದೋಷಗಳು. ಅದರ ಪರಿಹಾರಕ್ಕಾಗಿ ಪಂಚಯಜ್ಞಾಚರಣೆ. ಯಜ್ಞಕ್ಕೆ ಅಗ್ನಿಪರಿಚರ್ಯೆಯ ಆವಶ್ಯಕತೆ. ಇದನ್ನು ಮಾಡಲಾರದವರ ಪೂಜಾನರ್ಹತೆ. ವ್ರತಾಚರಣ ಉಪವಾಸಾದಿಗಳಿಂದ ಅರ್ಹತಾ ಸಂಪಾದನೆ. ಪ್ರತ್ಯೇಕ ತಿಥಿಗಳಲ್ಲಿ ಕ್ಲುಪ್ತವಾದ ಆಹಾರಪಾನಸೇವನಾದಿಗಳಿಂದ ಆಗುವ ಮಹಾಫಲ. ತಿಥಿಗಳ ಉತ್ಪತ್ತಿ. ಪ್ರತಿಪತ್ವ್ರತಾಚರಣ ಕ್ರಮ. ಬ್ರಹ್ಮ ಪ್ರೀತಿಗಾಗಿ ಕ್ಷೀರದಾನ, ಪಾನ, ಅದರ ಫಲ. ವಿಶ್ವಾಮಿತ್ರನು ಪ್ರತಿಪದ್ವ್ರತಾಚರಣೆಯಿಂದ ಬ್ರಾಹ್ಮಣ್ಯವನ್ನು ಸಾಧಿಸಿದ ವಿಚಾರ.
ಸರ್ವಸೃಷ್ಟಿಕರ್ತ ಬ್ರಹ್ಮನ ಪೂಜಾರ್ಹತೆ. ದೇವಾಲಯ ನಿರ್ಮಾಣ ಬ್ರಹ್ಮಪ್ರತಿಷ್ಠಾ, ಆಲಯ ರಚನಾಸಾಮಗ್ರ್ಯನುಗುಣವಾಗಿ ಪುಣ್ಯಲಾಭದಲ್ಲಿ ತಾರತಮ್ಯ. ಆಲಯ ಸಮಾರ್ಜನ ಉಪಲೇಪನ ಕಾರ್ಯದಲ್ಲಿ ಪ್ರಾಣಿ ಅಹಿಂಸಾಪ್ರಾಮುಖ್ಯ. ವಿಶೇಷದಿನಲ್ಲಿ ಪೂಜಾಫಲ. ಪಂಚಾಮೃತ, ಪಂಚಗವ್ಯಗಳಿಂದ ಅಭಿಷೇಕ ಫಲ. ಭೂಮಿಯಲ್ಲಿ ಪದ್ಮರಚನಾ, ಮಂತ್ರಾಕ್ಷರನ್ಯಾಸ, ವೇದಾಂಗಾದ್ಯಾವಾಹನ. ಗಾಯತ್ರೀ ತತ್ವ, ಪೂಜಾಫಲ ವಿಚಾರ.