ಶ್ರೀ ಮತ್ಸ್ಯಮಹಾಪುರಾಣಂ – ಸಂಪುಟ ೩
ವಿಷಯಾನುಕ್ರಮಣಿಕೆ
೧೧೩. ಭೂಗೋಳವರ್ಣನ (ಜಂಭೂ ಮೊದಲಾದ ಸಪ್ತದ್ವೀಪಗಳು, ವರ್ಷಪರ್ವತಗಳು, ಭಾರತ ಮುಂತಾದ ವರ್ಷಗಳು)
೧೧೪. ಭೂಗೋಳವರ್ಣನ (ಭಾರತವರ್ಷದ ಮಹಿಮೆ, ಸಪ್ತಕುಲ ಪರ್ವತಗಳು, ನದಿಗಳು ಮತ್ತು ದೇಶಗಳು, ಕಿಂಪುರುಷ ಮತ್ತು ಹರಿವರ್ಷಗಳು)
೧೧೫. ಭೂಗೋಳವರ್ಣನ (ಪುರೂರವಸ್ಸಿನ ಪೂರ್ವಜನ್ಮ ವೃತ್ತಾಂತ, ಆತನು ತಪೋವನಕ್ಕೆ ಹೋದುದು, ಐರಾವತೀನದಿಯನ್ನು ಕಂಡುದು)
೧೧೬. ಭೂಗೋಳವರ್ಣನ (ಐರಾವತೀನದಿಯ ವರ್ಣನೆ)
೧೧೭. ಭೂಗೋಳವರ್ಣನ (ಹಿಮಾಲಯ ಪರ್ವತದ ವರ್ಣನೆ)
೧೧೮. ಭೂಗೋಳವರ್ಣನ (ಅತ್ರಿಮಹರ್ಷಿಯ ಆಶ್ರಮವರ್ಣನೆ)
೧೧೯. ಭೂಗೋಳವರ್ಣನ (ದೇವಾಲಯದ ವರ್ಣನೆ, ಅತ್ರಿಮಹರ್ಷಿಯು ಪ್ರತಿಷ್ಠೆಮಾಡಿದ್ದ ವಾಸುದೇವ ಮೂರ್ತಿಯ ವರ್ಣನೆ, ಪುರೂರವ ರಾಜನ ತಪಸ್ಸು)
೧೨೦. ಭೂಗೋಳವರ್ಣನ (ಗಂಧರ್ವರ ಮತ್ತು ಅಪ್ಸರಸ್ತ್ರೀಯರ ಕ್ರೀಡಾವರ್ಣನೆ, ರಾಜರ್ಷಿಗೂ ಅವರಿಗೂ ನಡೆದ ಸಂವಾದ, ಅತ್ರಿಮುನಿಗೆ ಪುರೂರವರಾಜನು ತನ್ನ ಕನಸನ್ನು ಹೇಳಿದುದು)
೧೨೧. ಭೂಗೋಳವರ್ಣನ (ಜಂಬೂದ್ವೀಪವರ್ಣನೆ)
೧೨೨. ಭೂಗೋಳವರ್ಣನ (ಶಾಕ, ಕುಶ, ಕ್ರೌಂಚ ಮತ್ತು ಶಾಲ್ಮಲಿದ್ವೀಪಗಳ ವರ್ಣನೆ, ಅಲ್ಲಿನ ನಿವಾಸಿಗಳ ಆಚಾರ ವ್ಯವಹಾರಗಳು)
೧೨೩. ಭೂಗೋಳವರ್ಣನ (ಗೋಮೇದ ಮತ್ತು ಪುಷ್ಕರದ್ವೀಪಗಳು, ಇವುಗಳನ್ನು ಸುತ್ತುಗಟ್ಟಿರುವ ಸುರಾಸಮುದ್ರ ಮತ್ತು ಶುದ್ಧೋದಕಸಮುದ್ರಗಳು, ಈ ದ್ವೀಪನಿವಾಸಿಗಳ ಲಕ್ಷಣ)
೧೨೪. ಖಗೋಳವರ್ಣನ (ಸೂರ್ಯಚಂದ್ರರ ಮಂಡಲಪ್ರಮಾಣ, ಗತಿಭೇದಗಳು, ಭೂಮಂಡಲದ ವಿಸ್ತಾರ, ದಕ್ಷಿಣೋತ್ತರಾಯನಗಳು, ದೇವಯಾನ ಪಿತೃಯಾನಗಳು)
೧೨೫. ಖಗೋಲವರ್ಣನ (ಸೂರ್ಯಚಂದ್ರರ ಸಂಚಾರಕ್ರಮ, ಮೇಘ ಪ್ರಭೇದಗಳು, ಸೂರ್ಯನ ರಥದ ಸ್ವರೂಪ, ಧ್ರುವಮಂಡಲದ ವರ್ಣನೆ)
೧೨೬. ಖಗೋಳವರ್ಣನ (ವಸಂತ ಮೊದಲಾದ ಋತುಗಳಲ್ಲಿ ಸೂರ್ಯನೊಡನೆ ಸಂಚರಿಸುವ ಬೇರೆ ಬೇರೆ ಗಣಗಳು, ಚಂದ್ರನ ರಥನ ಸ್ವರೂಪ, ಅವನ ವೃದ್ಧಿಕ್ಷಯಗಳು)
೧೨೭. ಖಗೋಳವರ್ಣನ (ಕುಜ, ಬುಧ, ಗುರು ಮೊದಲಾದವರ ರಥಗಳ ಲಕ್ಷಣ, ಧ್ರುವನ ಮಹಿಮೆ, ಶಿಂಶುಮಾರವೆಂಬ ಕಾಲಚಕ್ರದ ಸ್ವರೂಪ)
೧೨೮. ಖಗೋಳವರ್ಣನ (ಅಗ್ನಿಯ ಮೂರು ಪ್ರಭೇದಗಳು, ಸೂರ್ಯನ ಬಗೆಬಗೆಯ ಕಿರಣಗಳು ಮತ್ತು ಅವುಗಲ ಕಾರ್ಯ, ಅಂತರಿಕ್ಷದಲ್ಲಿ ಗ್ರಹಗಳ ಸನ್ನಿವೇಶ)
೧೨೯. ತ್ರಿಪುರೋಪಾಖ್ಯಾನ (ಮಯನು ಬ್ರಹ್ಮನಿಂದ ವರವನ್ನು ಪಡೆದುದು, ಚಿನ್ನ, ಬೆಳ್ಳಿ ಮತ್ತು ಕಬ್ಬಿಣಗಳಿಂದ ಮೂರು ಪಟ್ಟಣಗಳನ್ನು ರಚಿಸಿದುದು)
೧೩೦. ತ್ರಿಪುರೋಪಾಖ್ಯಾನ (ತ್ರಿಪುರವರ್ಣನೆ)
೧೩೧. ತ್ರಿಪುರೋಪಾಖ್ಯಾನ (ತ್ರಿಪುರಾಸುರರ ಪ್ರಾಬಲ್ಯ, ಹಸಿವು ಬಾಯಾರಿಕೆಗಳೂ ಈರ್ಷ್ಯಾಸೂಯೆಗಳೂ ತ್ರಿಪುರವನ್ನು ಪ್ರವೇಶಿಸಿದುದು, ಮಯನು ದುಃಸ್ವಪ್ನವನ್ನು ಕಂಡುದು, ದಾನವರು ಅಧರ್ಮನಿರತರಾದುದು)
೧೩೨. ತ್ರಿಪುರೋಪಾಖ್ಯಾನ (ದೇವತೆಗಳು ಬ್ರಹ್ಮನನ್ನು ಮರೆಹೊಕ್ಕುದು, ಎಲ್ಲರೂ ಕೂಡಿ ಪರಮೇಶ್ವರನನ್ನು ಸ್ತೋತ್ರಮಾಡಿದುದು.)
೧೩೩. ತ್ರಿಪುರೋಪಾಖ್ಯಾನ (ದೇವತೆಗಳು ಮಹಾದೇವನ ಅಭಯದಾನ, ಅದ್ಭುತವಾದ ರಥನ ನಿರ್ಮಾಣ, ಜೈತ್ರಯಾತ್ರಾವರ್ಣನ)
೧೩೪. ತ್ರಿಪುರೋಪಾಖ್ಯಾನ (ತ್ರಿಪುರನಗರಕ್ಕೆ ನಾರದಮಹರ್ಷಿಯ ಆಗಮನ, ಮಯನಾರದರ ಸಂವಾದ, ಹಿಂಜರಿಯದೆ ಯುದ್ಧ ಮಡಬೇಕೆಂದು ದೈತ್ಯರಿಗೆ ಮಯನ ಪ್ರೋತ್ಸಹ)
೧೩೫. ತ್ರಿಪುರೋಪಾಖ್ಯಾನ (ದೇವಾಸುರರ ಯುದ್ಧ, ಮಯನ ಮಾಯೆಯಿಂದ ಗಣೇಶ್ವರರು ಮೋಹಗೊಂಡುದು, ಇಂದ್ರಾದಿ ದಿಕ್ಪಾಲಕರ ಯುದ್ಧ, ದೈತ್ಯರ ಪರಾಜಯ)
೧೩೬. ತ್ರಿಪುರೋಪಾಖ್ಯಾನ (ವಿದ್ಯುನ್ಮಾಲಿಯ ಮರಣ, ಮೃತರಾದ ದಾನವರನ್ನು ಬದುಕಿಸುವುದಕ್ಕಾಗಿ ಮಯನು ಅಮೃತದ ಬಾವಿಯನ್ನು ನಿರ್ಮಿಸಿದುದು, ವಿಷ್ಣುವು ಎತ್ತಿನ ರೂಪದಿಂದ ಬಂದು ಅದನ್ನು ಕುಡಿದುಬಿಟ್ಟುದು)
೧೩೭. ತ್ರಿಪುರೋಪಾಖ್ಯಾನ (ತ್ರಿಪುರನಗರದ ಮುತ್ತಿಗೆ, ಮಯನು ತನ್ನ ನಗರದೊಡನೆ ಸಮುದ್ರವನ್ನು ಪ್ರವೇಶಿದುದು, ಇಂದ್ರನು ಅವರ ಮೇಲೆ ಯುದ್ಧಕ್ಕೆ ಹೊರಟುದು)
೧೩೮. ತ್ರಿಪುರೋಪಾಖ್ಯಾನ (ತಾರಕಾಖ್ಯನ ವಧೆ, ದೇವಾಸುರ ಯುದ್ಧ)
೧೩೯. ತ್ರಿಪುರೋಪಾಖ್ಯಾನ (ಮಯನು ದಾನವರನ್ನು ಯುದ್ಧಕ್ಕಾಗಿ ಪ್ರೋತ್ಸಾಹಿಸಿದುದು, ದಾನವರ ಚಂದ್ರಿಕಾವಿಹಾರವರ್ಣನೆ)
೧೪೦. ತ್ರಿಪುರೋಪಾಖ್ಯಾನ (ನಂದಿಯಿಂದ ವಿದ್ಯುನ್ಮಾಲಿಯ ವಧೆ. ಪರಮೇಶ್ವರನು ತ್ರಿಪುರವನ್ನು ದಹಿಸಿದುದು, ಹೆಂಗಸರ ಮತ್ತು ಮಕ್ಕಳ ಗೋಳಾಟ)
೧೪೧. ಮನ್ವಂತರಾನುಕೀರ್ತನ (ಪುರೂರವರಾಜನು ಪಿತೃಗಳಿಗೆ ತೃಪ್ತಿಯನ್ನುಂಟುಮಾಡುವ ರೀತಿ, ಅಮಾವಾಸ್ಯೆಯ ಮತ್ತು ಹುಣ್ಣಿಮೆಯ ಪ್ರಭೇದಗಳು, ಪಿತೃದೇವತೆಗಳ ಬೇರೆ ಬೇರೆ ಪಂಗಡಗಳು ಮತ್ತು ಅವರನ್ನು ತೃಪ್ತಿಗೊಳಿಸುವ ಕ್ರಮ)
೧೪೨. ಮನ್ವಂತರಾನುಕೀರ್ತನ (ವಿಧವಿಧವಾದ ಕಾಲಮಾನಗಳು, ಮನುಷ್ಯವರ್ಷ, ದೇವವರ್ಷ, ಪಿತೃವರ್ಷ, ಯುಗಪ್ರಮಾಣ, ತ್ರೇತಾಯುಗಸ್ವಭಾವ)
೧೪೩. ಮನ್ವಂತರಾನುಕೀರ್ತನ (ತ್ರೇತಾಯುಗದಲ್ಲಿ ಯಜ್ಞವು ಪ್ರಚಾರಕ್ಕೆ ಬಂದುದು, ಋಷಿಗಳಿಗೂ ದೇವತೆಗಳಿಗೂ ಸಂವಾದ, ವಸುರಾಜನಿಗೆ ಋಷಿಗಳ ಶಾಪ)
೧೪೪. ಮನ್ವಂತರಾನುಕೀರ್ತನ (ದ್ವಾಪರಯುಗದ ಧರ್ಮಗಳು, ಕಲಿ ಯುಗದ ಲಕ್ಷಣ, ಯುಗಾಂತದಲ್ಲಿ ಪ್ರಮತಿಯಿಂದ ಧರ್ಮ ಕಂಟಕರ ನಿಗ್ರಹ, ಕೃತಯುಗದ ಪ್ರಾದುರ್ಭಾವ)
೧೪೫. ಮನ್ವಂತರಾನುಕೀರ್ತನ (ಯುಗಭೇದದಿಂದ ಪ್ರಾಣಿಗಳ ಶರೀರದ ಪ್ರಮಾಣದಲ್ಲಿ ವ್ಯತ್ಯಾಸ, ಆಚಾರ್ಯ, ಸಾಧು ಮೊದಲಾದವರ ಲಕ್ಷಣ, ಮಂತ್ರಕರ್ತರೆಂದು ಪ್ರಸಿದ್ಧರಾದ ಗೊಂಬತ್ತೆರಡು ಜನ ಋಷಿಗಳು. ಈಶ್ವರರು, ಋಷೀಕರು ಮೊದಲಾದ ಐದು ಪಂಗಡದ ಋಷಿಗಳು)