ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೧೮
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಹದಿನಾರನೆಯ ಅಧ್ಯಾಯ
ಶಿವನಾಮ ಮಹಿಮೆ–ವಿಷ್ಣುಲೋಕವನ್ನು ಕುರಿತು ಪ್ರಯಾಣಮಾಡಿದ ಬ್ರಹ್ಮನಿಗೆ ವಿಷ್ಣುವು ಶಿವಪೂಜಾಮಹಿಮೆಯನ್ನು ವಿವರಿಸಿ ಹೇಳುವುದು. ಪ್ರದೋಷ ಕಾಲದಲ್ಲಿ ಶಿವಪೂಜೆಯನ್ನು ಮಾಡದೆ ಪಿಶಾಚತ್ವವನ್ನು ಪಡೆದವನ ವಿಚಾರ. ಅವನು ಶಾಂಭವನೊಬ್ಬನಿಂದ ಮಹಾದೇವ ಶಬ್ದವನ್ನು ಕೇಳಿ ಪೈಶಾಚವನ್ನು ಕಳೆದುಕೊಂಡ ವಿಷಯ. ಬ್ರಾಹ್ಮಣಪುತ್ರನೊಬ್ಬನು ಹದಿನಾರು ವರ್ಷ ಆಯುಸ್ಸನ್ನು ಪಡೆದು, ಮೃತ್ಯುಂಜಯ ಮಂತ್ರವನ್ನು ಜಪಿಸಿ, ಕಲ್ಪಪರ್ಯಂತವಾಗಿ ಆಯುಸ್ಸನ್ನು ಹೆಚ್ಚಿಸಿಕೊಂಡ ವಿಚಾರ ವಿವರಣೆ.
ಹದಿನೇಳನೆಯ ಅಧ್ಯಾಯ
ಶಿವಪೂಜಾವಿಧಿ, ಶಿವನಿಗೆ ಆರ್ಘ್ಯಕೊಡುವ ವಿಚಾರ, ಪಂಚಾಮೃತವನ್ನು ಶಿವನಿಗೆ ಅರ್ಪಿಸುವ ಮಂತ್ರಗಳು, ಶಿವಪೂಜೆಗೆ ಅಧಿಕಾರಿಯಾರು? ಅನಧಿಕಾರಿ ಯಾರು ಎಂಬ ವಿಷಯ. ಶಿವಪೂಜಾಸಾಧನಗಳೇನು ಎಂಬ ಪ್ರಶ್ನೆಗೆ ಉತ್ತರ.
ಹದಿನೆಂಟನೆಯ ಅಧ್ಯಾಯ
ಇಂದ್ರನಿಗೆ ಬೃಹಸ್ಪತ್ಯಾಚಾರ್ಯರು ಭೂಲೋಕದಲ್ಲಿರುವ ಶಾಂಭವರ ವಿಚಾರವನ್ನು ತಿಳಿಸಿದುದು. ಕಾಟಕೋಟರನು ಮಹಾಶೈವನಾಗಿದ್ದು, ಶಿವದ್ರೋಹಿಯಾಗಿದ್ದ ತನ್ನ ತಂದೆಯನ್ನೇ ಕೊಂದುಹಾಕಿದ ವಿಷಯ. ಹಣೆಯಲ್ಲಿ ಭಸ್ಮವಿಟ್ಟಮೇಲೆ ಮತ್ತೇನನ್ನು ಇಡಬಾರದೆಂಬ ನಿಯಮ. ವಿಪ್ರನು ಹಣೆಯಲ್ಲಿ ಮೃತ್ತಿಕೆಯೇ ಮೊದಲಾದುವುಗಳನ್ನು ಧರಿಸಬಾರದೆಂಬ ವಿಷಯನಿರೂಪಣೆ. ಕಾಟಕೋಟರನು ತನ್ನ ದರ್ಶನಾರ್ಥವಾಗಿ ಬಂಧ ರಾಜನಿಗೆ ಶಿವಧರ್ಮವನ್ನು ನಿರೂಪಿಸುವ ಪ್ರಕರಣ. ಸುಭಗಾ ಎಂಬ ಪತಿವ್ರತೆಯ ಕಥೆ–ಸುಭಗಾದೇವಿಯು ತನ್ನ ಪತಿಗೆ ಶಿವಪೂಜಾಮಹಿಮೆಯನ್ನು ವಿವರಿಸಿ, ಅವನಿಗೆ ಶಿವಭಕ್ತಿಯನ್ನುಂಟುಮಾಡುವಿಕೆ.
ಹತ್ತೊಂಬತ್ತನೆಯ ಅಧ್ಯಾಯ
ಕಾಲಹಸ್ತೀಶ್ವರ ಮಹಿಮೆ. ದಕ್ಷಿಣ ಕೈಲಾಸವೆನಿಸಿದ ಆ ಕ್ಷೇತ್ರದಲ್ಲಿ ಭಿಲ್ಲನೊಬ್ಬನ ಕಥೆ – ಕಾಲಹಸ್ತೀ ಎಂಬ ಹೆಸರು ಆ ಕ್ಷೇತ್ರಕ್ಕೆ ಬರಲು ಕಾರಣ. ಸುಭಗಾ ದೇವಿಯು ಮುಕ್ತಿಯನ್ನು ಪಡೆದ ವಿಚಾರ. ಪಾರ್ಥಿವಲಿಂಗ, ಬಾಣಲಿಂಗ, ಸ್ಥಾವರಲಿಂಗ ಎಂಬ ಶಿವಲಿಂಗಗಳನ್ನು ಸ್ತ್ರೀಯರು ಸ್ಪರ್ಶಮಾಡಬಾರದೆಂಬ ವಿಚಾರ.
ಇಪ್ಪತ್ತನೆಯ ಅಧ್ಯಾಯ
ಕಾಂಚೀಕ್ಷೇತ್ರದಲ್ಲಿರುವ ಏಕಾಂಬರೇಶ್ವರ ಮತ್ತು ಕಾಮಾಕ್ಷೀದೇವಿಯ ವರ್ಣನೆ ವಿಷ್ಣುವು ಮಾಡಿದ ತಪಸ್ಸಿನ ವರ್ಣನೆ. ಕುಬೇರನು ರತ್ನಗೋಪುರವನ್ನು ನಿರ್ಮಿಸಿದುದು. ಒಬ್ಬ ಮಹಾಪಾಪಿಯು ಮರಣಕಾಲದಲಿ ಸೋಮನೆಂಬ ತನ್ನ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಪಡೆದ ವಿಷಯ. ಸುಅವರ್ಣ, ಬಿಲ್ವಪತ್ರೆ, ರತ್ನ, ಬೆಳ್ಳಿ, ಇವು ಯಾವಾಗಲೂ ಪವಿತ್ರವಾದವುಗಳು ಎಂಬ ತತ್ತ್ವನಿರೂಪಣೆ. ಹಳೆಯ ಬಿಲ್ವಪತ್ರೆಯನ್ನೂ ಪೂಜೆಮಾಡ ಬಹುದೆಂಬ ವಿಚಾರ. ವಿಶ್ವಾಭಿಧನೆಂಬ ರಾಜನು ಶಿವಪ್ರೀತ್ಯರ್ಥವಾಗಿ ಶಿವಾಲಯ, ಶಿವರಥ, ಇವುಗಲನ್ನು ನಿರ್ಮಾಣಮಾಡಿ ಶಿವೋತ್ಸವಗಳನ್ನು ಕಾಂಚೀಕ್ಷೇತ್ರದಲ್ಲಿ ನಡೆಸಿದ ವಿಚಾರ. ಬ್ರಾಹ್ಮಣರಿಗೆ ಗೌತಮಋಷಿಗಳಿಂದ ಬಂದ ಶಾಪದ ವೃತ್ತಾಂತ. ಶಾಪಗ್ರಸ್ತರಾದವರು ಶೈವಧರ್ಮವನ್ನು ತ್ಯಜಿಸಿದ ವಿಚಾರ. ಜಪಮಾಲೆಯ ತರತಮಸ್ವಭಾವ. ಶಿವಮಂತ್ರ ಮಹಿಮೆ. ಶಿವಮಂತ್ರ ಜಪವಿಧಿ ಮತ್ತು ಅದರ ಫಲನಿರೂಪಣೆ.