ಶ್ರೀ ಶಿವರಹಸ್ಯ – ಸಂಪುಟ ೧೦
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ನಲವತ್ತೊಂದನೆಯ ಅಧ್ಯಾಯ
ನಲವತ್ತೆರಡನೆಯ ಅಧ್ಯಾಯ
ಸ್ತ್ರೀಪುರುಷರ ನಿತ್ಯವ್ರತಕಥನ, ತತ್ಪ್ರಯುಕ್ತವಾದ ಇತಿಹಾಸಗಳು, ರೇವಾ ನದೀತೀರಕ್ಕೆ ರಾಜನು ಬರುವುದು, ಶಿವಪೂಜಕನೊಬ್ಬನು ಅಲ್ಲಿಗೆ ಬರುವುದು, ಹುಲಿಯ ಸಮಾಗ, ಶೈವನಿಗೆ ಪುತ್ರೋತ್ಸವವಾಗುವುದು, ಅದೇ ಮಾರ್ಗದಲ್ಲಿ ಜಲಪಾನಾರ್ಥವಾಗಿ ಬರುವ ಹುಲಿಯು ಪತ್ನಿ ಪುತ್ರಸಮೇತನಾಗಿ ಶಿವಪೂಜೆಗೆ ಅಡ್ಡಿ ಮಾಡದೆ ನಿಂತಿರುವುದು, ಮತ್ತು ಅಲ್ಲಿಯೇ ಇದ್ದ ವಿಭೂತಿಯನ್ನು ಧರಿಸುವುದು, ಮತ್ತು ಮರಣ ಹೊಂದಲು ಪ್ರಯತ್ನಿಸುವುದು, ಅಲ್ಲಿಗೆ ನಾರದನು ಬರುವುದು, ಹುಲಿಯ ಪೂರ್ಜಜನ್ಮ ವೃತ್ತಾಂತ, ಶಿವರಾತ್ರೀಮಹಿಮಾ, ಭೃಗು ಮತ್ತು ಯಮ ಇವರಿಬ್ಬರ ಸಂವಾದ.
ನಲವತ್ತು ಮೂರನೆಯ ಅಧ್ಯಾಯ
ನಲವತ್ತು ನಾಲ್ಕನೆಯ ಅಧ್ಯಾಯ
ಸತ್ಯಮೂರ್ತಿಯೆಂಬ ಬ್ರಾಹ್ಮಣನಕಥೆ, ಅವನ ನೂರು ಮಕ್ಕಳಲ್ಲಿ ಕೊನೆಯವನೊಬ್ಬನು ಮಾತ್ರ ಶಿವಪೂಜಾವಿಮುಖನಾಗಿರುವುದು, ಅದಕ್ಕಾಗಿ ಸತ್ಯಮೂರ್ತಿಯು ತನ್ನ ಮಗನ ಜನ್ಮದಲ್ಲಿ ಶಂಶಯ ಹೊಂದಿ ಪತ್ನಿಯನ್ನು ಪ್ರಶ್ನಿಸುವುದು, ಆಕೆಯು ತನ್ನ ಸ್ವಪ್ನವೃತ್ತಾಂತವನ್ನು ತಿಳಿಸುವುದು, ಅದರಿಂದ ಅವಳು ಪಾಪಿನಿಯಲ್ಲವೆಂದು ತಿಳಿದು ಮಗನಿಗೆ ಶಿವತತ್ತ್ವೋಪದೇಶಮಾಡುವುದು, ಆ ತತ್ತ್ವದ ಮಹಿಮೆಯಿಂದ ಆತನಿಗೆ ಶಿವಾರ್ಚನೆಯಲ್ಲಿ ಮನಸ್ಸುಂಟಾಗುವುದು, ಪತಂಗ (ಮಿಡತೆಯು)ವು ಸೂರ್ಯನನ್ನು ಮರೆಮಾಡುವುದು, ಅದರ ಇತಿಹಾಸದಲ್ಲಿ ರಾಜಪತಿ ಮತ್ತು ಮುದ್ಗಲ ಋಷಿಯ ಸಂವಾದ, ಸ್ತ್ರೀಯರಿಗೆ ವಿಶ್ವಪತಿಯೆನಿಸಿದ ಶಂಕರನೇ ನಿಜವಾದ ಪತಿಯು, ಆತನ ಪೂಜೆಯೇ ಪತಿವ್ರತಾಧರ್ಮವೆಂದು ಮುದ್ಗಲನು ಬೋಧಿಸುವುದು, ಅದರಂತೆ ಅವರು ಶಿವಾರ್ಚನೆಮಾಡಿ ಸದ್ಗತಿಯನ್ನು ಪಡೆಯುವುದು, ಆಗ ಸತ್ಯವ್ರತನು ಈ ಇತಿಹಾಸವನ್ನು ಹೇಳಿ ತನ್ನ ಮಗನು ಸೊಸೆಗೆ ಕೊಡುವ ಶಾಪವನ್ನು ತಪ್ಪಿಸುವುದು.
ನಲವತ್ತೈದನೆಯ ಅಧ್ಯಾಯ
ನಲವತ್ತಾರನೆಯ ಅಧ್ಯಾಯ
ವನಪಾಲಕ ಮತ್ತು ಶಿವದುಂಡೀ ಇವರಿಬ್ಬರ ಸಂಭಾಷಣೆ, ಲಿಂಗಪೂಜಾ ಮಹಿಮಾ, ಮತ್ತು ಇತಿಹಾಸ, ಸ್ವಪುತ್ರಿಯಲ್ಲಿ ಮೋಹಿತನಾಗಿದ್ದರೂ ರಾಜನೊಬ್ಬನು ಶಿವಲಿಂಗದರ್ಶನ ಮಾತ್ರದಿಂದ ಕೈಲಾಸವನ್ನು ಹೊಂದಿದನೆಂಬ ವಿಚಾರ, ಬಿಲ್ವ ಮೂಲಸ್ಥ ಲಿಂಗಮಹಿಮಾ, ಬಿಲ್ವಾರ್ಪಣಮಹಿಮಾ, ಬಿಲ್ವವೃಕ್ಷಪೋಷಣ ಮತ್ತು ಬಿಲ್ವವನ ಪಾಲನ ಮಹಿಮಾ, ಭಿಲ್ಲಜಾತಿಯ ಹೆಂಗಸೊಬ್ಬಳೂ ಬಿಲ್ವವೃಕ್ಷವನ್ನು ನೆಟ್ಟು, ಅದರ ಪಾತಿಯಲ್ಲಿ ನರ್ಮದಾಲಿಂಗವನ್ನು ಸ್ಥಾಪಿಸಿ, ಆ ತೀರ್ಥಪ್ರಾಶನಮಾಡಿದ್ದರಿಂದ ಆಕೆಗೆ ಸದ್ಗತಿ ಬಂದ ವಿಚಾರ, ಯಮನು ಆಕೆಗೆ ಇಂದ್ರಾಣಿಯಾಗುವಂತೆ ವರಕೊಡುವುದು, ಅದರಂತೆ ಆಕೆಯು ಅರಣ್ಯದಲ್ಲಿದ್ದಾಗ ಇಂದ್ರನು ಆಕೆಯನ್ನು ಮೋಹಿಸಿ ವಿವಾಹವಾಗುವುದು, ಶಿವಧುಂಢಿಯು ಶಿವನೈವೇದ್ಯವನ್ನು ತಿಂದು ಹಸಿವನ್ನು ಹೋಗಲಾಡಿಸಿಕೊಂಡುದು, ಆನೆ ಸಿಂಹಗಳಿಗೆ ಸದ್ಗತಿ ಬಂದ ವಿಚಾರ.
ನಲವತ್ತೇಳನೆಯ ಅಧ್ಯಾಯ
ಶಿವಧುಂಢಿಯು ಇತರ ಋಷಿಕುಮಾರರೊಡನೆ ವನಾಂತರದಲ್ಲಿ ಬಿಲ್ವವನಕ್ಕೆ ಹೋಗಿ ಶಿವರಾತ್ರಿಯ ದಿನ ಶಿವಾರಾಧನೆ ಮಾಡುವುದು, ಅಲ್ಲಿರುವ ಸಕಲ ಮೃಗಗಳೂ ಶಿವಾರ್ಚನೆ ಮಾಡುವುದು, ಸಿಂಹಕ್ಕೆ ಶಿವಧರ್ಮವನ್ನು ವಿವರಿಸುವುದು, ಶಿವರಾತ್ರೀ ನಿರ್ಣಯ, ಶಿವವ್ರತಾಧಿಕಾರಿ ನಿರ್ಣಯ, ಮದ್ದಾನೆಯು ಹಿಂದೆ ಶಿವಾರ್ಚನೆಮಾಡಿದ್ದರೂ, ಪ್ರದೋಷಕಾಲದಲ್ಲಿ ನಾರಾಯಣಸ್ಮರಣೆಮಾಡಿದ್ದರಿಂದ ಆ ಮದ್ದಾನೆಯ ಜನ್ಮ ಬಂದುದು, ಆ ಸಂಸ್ಕಾರದಿಂದ ಮತ್ತೆ ಶಿವಾರ್ಚನೆಮಾಡಿ ಮುಕ್ತಿಯನ್ನು ಹೊಂದಿದುದು, ಪ್ರದೋಷಕಾಲದಲ್ಲಿ ನಾರಾಯಣನು ಲಕ್ಷ್ಮೀಲೋಲನಾಗಿದ್ದುದರಿಂದ, ಅವನ ಸ್ಮರಣೆಯು ಪ್ರದೋಷಕಾಲದಲ್ಲಿ ನಿಷಿದ್ಧವೆಂದು ಭೃಗಋಷಿಯು ಪ್ರತಿಪಾದಿಸುವುದು, ಇದರಿಂದ ಶಿವಧರ್ಮಕ್ಕೆ ಸದೃಶವಾದ ಮತ್ತೊಂದು ಧರ್ಮವಿಲ್ಲವೆಂದು ಶಿವದುಂಢಿಯು ತಿಳಿಯುವುದು, ಶಿವದುಂಢಿಗೆ ಶಿವಲೋಕಪ್ರಾಪ್ತಿವಿಚಾರ, ಇದನ್ನು ತಿಳಿದ ಭಿಲ್ಲನು ಅರಣ್ಯದಲ್ಲಿದ್ದ ಸಕಲ ಶಿವಲಿಂಗಗಳನ್ನೂ ಪೂಜಿಸಿ ತಾನೂ ಮುಕ್ತಿಯನ್ನು ಹೊಂದುವುದು.
ನಲವತ್ತೆಂಟನೆಯ ಅಧ್ಯಾಯ
ಪುಣ್ಯಮೂರ್ತಿಯೆಂಬ ರಾಜನ ಚರಿತ್ರೆ, ಆತನು ರಾಜ್ಯವನ್ನು ಜ್ಯೇಷ್ಠಪುತ್ರನಿಗೆ ಅರ್ಪಿಸಿ ತಾನು ರೇವಾತೀರಕ್ಕೆ ಹೋಗುವುದು, ಅಲ್ಲಿ ಬಿಲ್ವವನ ನಿರ್ಮಾಣ ಮಾಡಿ ಈಶ್ವರಾರಾಧನೆ ನಡೆಸುತ್ತಿರುವುದು. ರಾಜನಿಂದ ಮಹರ್ಷಿಗಳಿಗೆ ದೊರಕುವ ಸತ್ಕಾರ, ರಾಜನಿಗೆ ಮಧ್ಯೆ ಮರಣವು ಸಂಭವಿಸುವುದು, ವಿಮಾನಾರೂಢನಾಗಿ ಬಂದ ನಂದಿಯನ್ನು ರಾಜಪುತ್ರರು ತಮ್ಮ ತಂದೆಯೇಕೆ ಮೃತನಾದನೆಂದು ಪ್ರಶ್ನಿಸುವುದು, ನಂದಿಯು ಮೃತದೇಹಕ್ಕಾಗಿ ವ್ಯಥೆಪಡಕೂಡದೆಂದು ಬೋದಿಸುದುವು, ಆದರೂ ಆ ಮಕ್ಕಳು ಯಮಲೋಕಕ್ಕೆ ಹೋಗಿ ಯಮನನ್ನು ಧಿಕ್ಕರಿಸುವುದು, ಯಮನು ಅದು ಕಾಲಮೃತ್ಯುವಿನ ತಪ್ಪೆಂದು ತಪ್ಪಿಸಿಕೊಳ್ಳುವುದು, ಆಗ ಆ ಮಕ್ಕಳು ಮೃತ್ಯುವನ್ನು ಎಳೆದು ತಂದು ಕೊಳಕ್ಕೆ ಎಸೆಯುವುದು, ಆಗ ರಾಜನು ಸಜೀವನಾಗಿ ಎದ್ದು ಮತ್ತೆ ಭಸ್ಮತ್ರಿಪುಂಡ್ರಾದಿಗಳಿಂದ ಶಿವಾರ್ಚನೆಗೆ ತೊಡಗುವುದು, ನಂದಿಯನ್ನು ಪೂಜಿಸಿ ಶಿವನನ್ನು ಸ್ತುತಿಸುವುದು, ರಾಜಾ ಮತ್ತು ನಂದಿಕೇಶ್ವರನ ಸಂಭಾಷಣೆ, ರಾಜನು ಮೃತ್ಯುವೇ ಮೊದಲಾದವರನ್ನು ಬಿಡಿಸಿ ರಕ್ಷಿಸುವುದು, ರಾಜಕೃತ ಶಿವಪೂಜಾ ವರ್ಣನೆ.
ನಲವತ್ತೊಂಬತ್ತನೆಯ ಅಧ್ಯಾಯ
ಶಿವಭಕ್ತ ಮತ್ತು ರತ್ನಾಕರ ಇವರ ಸಂಭಾಷಣೆ, ಕಾಟಕೋಟರನ ತಂದೆಯು ಗೋಮಯವಾದ ಶಿವಲಿಂಗದ ಮೇಲೆ ಪಾದವನ್ನಿಡುವುದು, ಅವನ ಮಗನು ಕೊಡಲಿಯಿಂದ ತಂದೆಯ ಎರಡು ಕಾಲುಗಳನ್ನೂ ಕತ್ತರಿಸಿ ತಾನೂ ಮೃತನಾಗುವುದು, ಇದರಿಂದ ಅವರಿಬ್ಬರೂ ಮುಕ್ತರಾಗುವುದು, ಶಿವಭಕ್ತ ಮತ್ತು ಗಂಧರ್ವ ಕನ್ಯೆಯರ ಸಂವಾದ, ಸಮುದ್ರರಾಜನಿಗೆ ಅಧಿಕಾರನಾಶಕ್ಕೆ ಕಾರಣ, ಅದಕ್ಕೆ ಸಂಬಂಧಿಸಿದ ಇತಿಹಾಸ, ಈಶ್ವರ ಸೇವಕರಿಲ್ಲದ ರಾಜ್ಯದಲ್ಲಿ ಒಬ್ಬ ರಾಜನು ಒಂದು ಸಾರಿ ಅರಣ್ಯಕ್ಕೆ ಹೋಗುವುದು, ಅಲ್ಲಿ ಈಶ್ವರಪೂಜಕನ ಪುತ್ರಿಯನ್ನು ಕಂಡು ಜಲವನ್ನು ಯಾಚಿಸುವುದು, ಆಕೆಯು ಆತನನ್ನು ಸಕ್ತರಿಸಿ, ತಾನು ಮಾಡುವ ಗೌರೀಪೂಜೆಗೆ ರಾಜನ ಕಂಠೀಹಾರವನ್ನು ಯಾಚಿಸುವುದು, ಆತನು ಅದನ್ನು ತಿರಸ್ಕರಿಸಿ ಮುಂದುವರಿಯುವುದು, ಅಲ್ಲಿ ಸರ್ಪದಿಂದ ದಷ್ಟನಾಗಿ ಆತನು ಮೃತಿಹೊಂದುವುದು, ಹಾಗೆಯೇ ಅವನ ರಾಜ್ಯವೆಲ್ಲಾ ನಾಶವಾಗುವುದು, ಸತ್ಪಾತ್ರನಿಗೆ ದಾನಮಾಡಲೇಬೇಕೆಂಬ ವಿಷಯ, ಅರಣ್ಯದಲ್ಲಿದ್ದ ಒಬ್ಬ ಶೈವನಿಗೂ ಒಬ್ಬ ಬ್ರಾಹ್ಮಣನಿಗೂ ನಡೆಯುವ ಸಂಭಾಷಣೆ, ಅಶಕ್ತನು ಭೋಜನ ಸಮಯದಲ್ಲಿ ಅನ್ನಪತಿಯಾದ ಶಿವಪ್ರೀತ್ಯರ್ಥವಾಗಿ ಸ್ವಲ್ಪ ಕವಳವನ್ನಾದರೂ ದಾನಮಾಡಬೇಕು, ದರಿದ್ರನೊಬ್ಬನು ಶಿವನೈವೇದ್ಯವನ್ನು ದಾನಮಾಡಿ ತಾನು ಶ್ರೀಮಂತನಾದುದು, ರೇವಾತೀರಸ್ಥನಾದ ಬ್ರಾಹ್ಮಣನನ್ನು ಕುರಿತು ಶಿವತತ್ತ್ವವನ್ನು ಪ್ರಶ್ನಿಸುವುದು, ರಾಜ ಮತ್ತು ಬ್ರಾಹ್ಮಣ ಇವರಿಬ್ಬರ ಸಂವಾದ, ರಾಜನು ಆ ಬ್ರಾಹ್ಮಣನಿಗೆ ಅತಿಶಯವಾದ ಐಶ್ವರ್ಯವನ್ನು ಕೊಡುವುದು.
ಐವತ್ತನೆಯ ಅಧ್ಯಾಯ
ಧರ್ಮಧೇನುಬೆಂಬ ರಾಜನಿಗೂ ಚಿತ್ರಾಶ್ವನೆಂಬ ಗಂಧರ್ವನಿಗೂ ನಡೆಯುವ ಸಂವಾದ, ಶಿವಪೂಜಾ ಮಹಿಮಾ, ಶಿವಮಂತ್ರೋಪದೇಶ, ಪಾಪರಾಶಿಯು ನಿವೃತ್ತಿ, ಸೂರ್ಯನು ಸ್ವಪ್ನವೃತ್ತಾಂತವನ್ನು ಹೇಳುವುದು, ನಂದೀಶ್ವರ ಮತ್ತು ಚಾರಣ ಸ್ತ್ರೀ ಇವರಿಬ್ಬರ ಸಂವಾದ, ಕೈಲಾಸಕ್ಕೆ ಭೃಂಗೀಶ್ವರನು ಹೋಗುವುದು, ಶಿವಮಂತ್ರೋಪ ದೇಶದಿಂದ ಶಿವನನ್ನು ಪೂಜಿಸುವುದು, ಯಾಜ್ಞವಲ್ಕ್ಯನು ಜನಕರಾಜನಿಗೆ ಶಿವಪಂಚಾಕ್ಷರೀಮತ್ರವನ್ನು ಉಪದೇಶಿಸುವುದು, ಶಿವಪೂಜೆ ಮತ್ತು ಶಿವರಹಸ್ಯ ಇವುಗಳ ಮಹಿಮೆ, ಶೌನಕನ ಇತಿಹಾಸ ಗರ್ಗ ಮತ್ತು ಪಿಶಾಚಿ ಇವರ ಸಂವಾದ ಶಿವಕಥಾಶ್ರವಣದಿಂದ ಪೈಶಾಚಿಕ ನಿವೃತ್ತಿ, ಗಂಧರ್ವದೇಹಪ್ರಾಪ್ತಿ, ಶಿವರಹಸ್ಯ ಶ್ರವಣಮಹಿಮಾ, ಪ್ರದೋಷಕಾಲಾರ್ಚನಮಹಿಮಾ, ಪುಸ್ತಕ ದಾನಫಲ, ಇತಿಹಾಸ ಶ್ರವಣಫಲಂ.