ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೯
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಇಪ್ಪತ್ತೆಂಟನೆಯ ಅಧ್ಯಾಯ
ಮಹಾಲಕ್ಷ್ಮಿಯು ವೈಕುಂಠಲೋಕಕ್ಕೆ ವಿಷ್ಣುವಿನೊಡನೆ ರಾಜನಿಂದ ಸಕೃತಳಾಗಿ ಹಿಂದಿರುಗುವುದು. ಮತ್ತೊಬ್ಬ ಈಶ್ವರಭಕ್ತನ ಇತಿಹಾಸ. ಅವನಲ್ಲಿಗೆ ಯಮನೂ, ವಿಷ್ಣುವೂ ಬರುವುದು. ಯಮವಿಷ್ಣುಗಳು ಪ್ರೀತಿಯಿಂದ ಕೊಡುವ ವರಗಳನ್ನು ಆ ಆಸ್ತಿಕನು ನಿರಾಕರಿಸುವುದು.
ಇಪ್ಪತ್ತೊಂಬತ್ತನೆಯ ಅಧ್ಯಾಯ
ಸತ್ಯವ್ರತರಾಜ ಮತ್ತು ಸನಂದನಮಹರ್ಷಿ ಇವರಿಬ್ಬರ ಸಂಭಾಷಣೆ. ಆತನ ರಾಣಿಯ ಪೂರ್ವಜನ್ಮ ವೃತ್ತಾಂತಕಥನ, ನರ್ಮದಾಲಿಂಗಪೂಜಾಮಹಿಮಾ. ವ್ಯಭಿಚಾರಿಣಿಯಾದ ಭಿಲ್ಲಸ್ತ್ರೀಯು ಅಕಸ್ಮಾತ್ತಾಗಿ ಶಿವಲಿಂಗವನ್ನು ಪೂಜಿಸಿದುದರಿಂದ ಗಂಧರ್ವಲೋಕವನ್ನು ಸೇರುವುದು. ಅಲ್ಲಿ ಬಿಲ್ವಪತ್ರೆಯನ್ನು ಸಂಪಾದಿಸಲು ಬಿಲ್ವ ವೃಕ್ಷಕ್ಕೆ ಹತ್ತುವುದು. ಅಲ್ಲಿಂದ ವಾಯುವಿನ ವೇಗದಿಂದ ಕೆಳಗೆ ಬಿದ್ದು ಮೃತಳಾಗಿ ಬ್ರಹ್ಮಲೋಕವನ್ನು ಸೇರುವುದು. ಅವಳ ಪೂರ್ವಜನ್ಮ ಭವಿಷ್ಯ ವೃತ್ತಾಂತ.
ಮೂವತ್ತನೆಯ ಅಧ್ಯಾಯ
ಸತ್ಯವ್ರತನೆಂಬ ರಾಜನು ಬ್ರಹ್ಮಲೋಕದಿಂದ ತನ್ನ ಊರಿಗೆ ಹಿಂದಿರುಗುವುದು. ನಿಷಧರಾಜನಾದ ಪರಪುರಂಜಯರಾಜನ ಇತಿಹಾಸ. ಆತನ ಪತ್ನಿ ಪದ್ಮಾವತಿಯು ನರ್ಮದಾ ತೀರದಲ್ಲಿ ಶಿವಾಲಯವನ್ನು ನಿರ್ಮಿಸುವುದು. ಪ್ರದೋಷ ಕಾಲಾರ್ಚನೆಮಾಡುವುದು. ಗಾನನಾಟ್ಯಾದಿಗಳಲ್ಲೇ ರಾತ್ರಿಯನ್ನು ಕಳೆಯುವುದು, ಶಿವನೈವೇದ್ಯವನ್ನು ಭಕ್ಷಿಸುವುದು. ಅನಂತರ ಶಿವಾರಾಧನೆಗೆ ಬಂದ ಸೂರ್ಯನನ್ನು ದರ್ಶನಮಾಡುವುದು. ಸೂರ್ಯ ಮತ್ತು ಪದ್ಮಾವತಿಯರ ಸಂಭಾಷಣೆ. ಶಿವಪೂಜಾ ಮಹಿಮಾ. ಪಾರ್ವತೀ ಪರಶಿವರ ರತಿಕ್ರೀಡಾಕಾಲದಲ್ಲಿ ಹುಟ್ಟಿದ ಬೆವರಿನಿಂದ ಜಗತ್ತು ಉತ್ಪತ್ತಿಯಾಗುವುದು. ಸೂರ್ಯ ಮತ್ತು ರಾಣಿ ಇವರಿಬ್ಬರ ಸಂವಾದ. ಶಿವ ಪೂಜೆಯನ್ನು ಮಡದಿದ್ದರೆ ಸದ್ಗತಿಯಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದ ಇತಿಹಾಸ ವರ್ಣನೆ.
ಮೂವತ್ತೊಂದನೆಯ ಅಧ್ಯಾಯ
ವಿಟಸ್ತ್ರೀಯು ತನ್ನ ವಿಟಪುರುಷನ ಮೇಲಿನ ಕ್ರೋಧದಿಂದ, ಭೋಗಸಾಧನವಾಗಿದ್ದ ಜಲಾದಿಸಕಲವಸ್ತುಗಳನ್ನೂ ತೆಗೆದು ಎಸೆಯುವುದು. ಆಗ ಆ ವಸ್ತುಗಳು ಶಿವಲಿಂಗದ ಮೇಲೆ ಬಿದ್ದು ಪೂಜೆಯೆನಿಸುವುದು. ಆಗ ಅದನ್ನು ನೋಡಿದ ಒಬ್ಬ ಶಾಂಭವನು ಆಕೆಯ ಗುಣಗಳನ್ನೇ ವರ್ಣಿಸುವುದು.
ಮೂವತ್ತೆರಡನೆಯ ಅಧ್ಯಾಯ
ವಿಟಸ್ತ್ರೀಯನ್ನು ಕೈಲಾಸಕ್ಕೆ ಕರೆದೊಯ್ಯಲು ಭೃಂಗಿಯು ದಿವ್ಯವಿಮಾನಾ ರೂಢನಾಗಿ ಅಲ್ಲಿಗೆ ಬರುವಿಕೆ. ಭೃಂಗಿಯು ಅವಳ ಪೂಜೆಯನ್ನು ನೋಡಿ ಮಾತನಾಡುವುದು. ಆಕೆಗೆ ಅದು ಸ್ವಪ್ನದಂತಾಗಿ ಸ್ವಪ್ನದಲ್ಲಿಯೇ ಶಂಕರನನ್ನು ಪೂಜಿಸುವುದು. ಆಗ ಒಬ್ಬಳು ಗಂಧರ್ವ ಸ್ತ್ರೀಯು ಶಿವಪೂಜೆಗಾಗಿ ಬಂದು ಶಿವತೃಪ್ತ್ಯರ್ಥವಾಗಿ ಗಾನಮಾಡುವುದು. ಅವಳ ಪತಿಯು ಅವಳನ್ನೂ ತನ್ನ ನಗರಕ್ಕೆ ಕರೆಯುವುದು. ಅವಳ ಪೂರ್ವಕಥೆ. ಶಿವಾರ್ಚನವಿಧಿ. ಆಗ ತಪೋನಿಧಿಯೊಬ್ಬನು ಶಿವನನ್ನು ಅರ್ಚಿಸುವುದು. ಆ ಪೂಜೆಯನ್ನು ಕೆಡಿಸಲು ರಂಭೆಯು ಬರುವುದು. ಶಿವಪೂಜಾಮಧ್ಯದಲ್ಲಿ ವಿಘ್ನವನ್ನೊಡ್ಡಿದವನಿಗೆ ಬರುವ ಪಾಪವಿಷಯ. ಆಗ ದೇವ ಗಣಗಳು ಅಲ್ಲಿಗೆ ಬರುವುದು. ಮತ್ತು ಭೃಂಗಿಯೊಡನೆ ಸಂಭಾಷಣೆ ಮಾಡುವುದು.
ಮೂವತ್ತುಮೂರನೆಯ ಅಧ್ಯಾಯ
ಸ್ವಪ್ನದಲ್ಲಿ ಜಾರಿಣಿಯೊಬ್ಬಳು ಶಾಂಭವನೊಡನೆ ಸಂಭಾಷಿಸುವುದು. ರಾಜ ಕನ್ಯೆ ಮತ್ತು ಕಿನ್ನರ ಇವರಿಬ್ಬರ ಸಂವಾದ. ವಿಶ್ವಾವಸುವೆಂಬ ಗಂಧರ್ವನ ಕಥೆ.
ಮೂವತ್ತು ನಾಲ್ಕನೆಯ ಅಧ್ಯಾಯ
ವಿಶ್ವಾವಸು ಮತ್ತು ಪುತ್ರರ ಪರಸ್ಪರ ಸಂವಾದ. ವಿಷ್ಣುವಿನಿಂದ ಮನ್ಮಥನ ಜನನ. ಮನ್ಮಥನಿಗೆ ಇತರ ದೇವತೆಗಳ ಸಾಮ್ಯವು ಈಶ್ವರನಲ್ಲಿ ತೋರಿದುದು. ತತ್ಪ್ರಯುಕ್ತವಾಗಿ ಮಹಾಪ್ರಳಯ ಜ್ವಾಲಾಪ್ರಾಪ್ತಿ. ಮನ್ಮಥನು ವೈಕುಂಠಕ್ಕೆ ಹೋದುದು. ಅಲ್ಲಿಗೆ ಬ್ರಹ್ಮಾದಿ ಸಕಲ ದೇವತೆಗಳೂ ಆಗಮಿಸುವುದು, ಬ್ರಹ್ಮ, ವಿಷ್ಣು ಇವರಿಬ್ಬರ ಸಂವಾದ. ಅನಂತರ ಎಲ್ಲ ದೇವತೆಗಳೂ ಪಾತಾಳಕ್ಕೆ ಹೋಗಿ ಅಲ್ಲಿ ಆದಿಶೇಷನನ್ನು ಕುರಿತು ಈ ಸಮಾಚಾರವನ್ನು ಹೇಳುವುದು.
ಮೂವತ್ತೈದನೆಯ ಅಧ್ಯಾಯ
ಶಿವನಿಂದೆಯ ಪರಿಣಾಮವಾಗಿ ಸಕಲ ದೇವತೆಗಳಿಗೂ ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ ಶಿಕ್ಷಿಯು ಒದಗುವುದು. ಅದನ್ನು ನೋಡಿ ವ್ಯಥೆಪಟ್ಟ ಮನ್ಮಥನನ್ನು ವಿಷ್ಣುವು ದೂಷಿಸುವುದು. ಬ್ರಹ್ಮನು ಕೋಪಿಸಿಕೊಳ್ಳುವುದು. ಲಕ್ಷಿಯು ವಿಷ್ಣುವನ್ನು ಸಮಾಧಾನಪಡಿಸುವುದು. ವಿಷ್ಣುವು ಲಕ್ಷಿಯನ್ನು ಕುರಿತು ಮನ್ಮಥನ ದುರ್ಗುಣಗಳನ್ನು ವರ್ಣಿಸುವುದು. ಲಕ್ಷ್ಮೀ, ಸರಸ್ವತಿ, ಶಚೀ ಮೊದಲಾದ ದೇವತಾಸ್ತ್ರೀಯರು ಅಳುವುದು. ಅವರು ಅಳುವ ಧ್ವನಿಗೆ ಗಿರಿಗಹ್ವರಗಳಿಂದ ಬರುವ ಪ್ರತಿಧ್ವನಿ. ಆ ಧ್ವನಿಯ ವಿಷಯವಾಗಿ ಪಾರ್ವತಿಯು ಜಯೆಯನ್ನು ಪ್ರಶ್ನಿಸುವುದು. ಜಯಾ ಮತ್ತು ಪಾರ್ವತಿಯರ ಸಂವಾದ. ಅನೇಕ ಯುಗಗಳು ಹೀಗೆಯೇ ಕಳೆಯುವುದು. ಪ್ರಳಯಾಗ್ನಿಯ ಸಮಾಗಮ. ಅದು ವೈಕುಂಠ, ಸತ್ಯಲೋಕ, ಪಾತಾಳ ಇವುಗಳನ್ನು ಪ್ರವೇಶಿಸಿ, ಅಲ್ಲಿನ ದೇವತೆಗಳನ್ನೆಲ್ಲಾ ಹೊಡೆದೋಡಿಸುವುದು. ಹಾಗೆಯೇ ಕೂರ್ಮನನ್ನು ದಹಿಸಲು ಯತ್ನಿಸುವುದು. ಆಗ ಕೂರ್ಮನು ಪ್ರಾರ್ಥನೆ ಮಾಡುತ್ತಾ, ಶಿವಲಿಂಗವನ್ನು ಆರಾಧಿಸುವುದು. ಕೂರ್ಮ ಮತ್ತು ಕಾಲಾಗ್ನಿ ಇವರಿಬ್ಬರ ಸಂವಾದ. ಶಿವಧರ್ಮವನ್ನು ಕಾಲಾಗ್ನಿಯು ಕೇಳಬಯಸುವುದು. ಕೂರ್ಮನು ಅದನ್ನು ವಿವರಿಸುವುದು.
ಮೂವತ್ತಾರನೆಯ ಅಧ್ಯಾಯ
ಪ್ರಳಯಾಗ್ನಿಯ ಒಂದು ಕಿಡಿಯಿಂದ ಮನ್ಮಥನು ದಹಿಸಿಹೋಗುವುದು. ವಿಶ್ವಾವಸುವು ಪುತ್ರರನ್ನು ಕುರಿತು ಈ ಶಿವಧರ್ಮಗಳನ್ನು ವಿವರಿಸುವುದು. ಸಕಲ ವಸ್ತುಗಳಲ್ಲಿಯೂ ಭಸ್ಮವನಿನಿಟ್ಟು ಈಶ್ವರಾರ್ಪಣ ಮಾಡಬೇಕೆಂಬ ತತ್ತ್ವನಿರೂಪಣೆ.
ಮೂವತ್ತೇಳನೆಯ ಅಧ್ಯಾಯ
ವಿಶ್ವಾವಸು ಮತ್ತು ಅವನ ಪುತ್ರರ ಸಂವಾದ. ಗಂಧರ್ವರಾಜ ಮತ್ತು ಅವನ ಮಗಳ ಸಂಭಾಷಣೆ. ಧರ್ಮಧೇನು ಸಂವಾದ. ಹಾಟಕೇಶ್ವರ ಪೂಜೆಮಾಡಿ ಸಮುದ್ರರಾಜನು ಸ್ತುತಿಸುವುದು. ಸಾಗರ ಮತ್ತು ಪುಣ್ಯವಿಗ್ರಹ ಇವರಿಬ್ಬರ ಸಂವಾದ. ಯಮಾಲಯ ವರ್ಣನೆ.
ಮೂವತ್ತೆಂಟನೆಯ ಅಧ್ಯಾಯ
ರೇವಾತೀರದಲ್ಲಿರುವ ಶೈವಬ್ರಾಹ್ಮಣನ ಇತಿಹಾಸ. ದಂಪತಿಗಳ ಸಂವಾದ. ಸತ್ಯವ್ರತನೆಂಬ ಬ್ರಾಹ್ಮಣನ ಉಪದೇಶ. ಪಂಚವಿಧ ಧರ್ಮಗಳು. ವಿಭೂತಿಧಾರಣೆ. ರುದ್ರಾಕ್ಷಿಧಾರಣೆ, ರುದ್ರಾಧ್ಯಾಯಜಪ, ಬಿಲ್ವದಳದಿಂದ ಶಿವಲಿಂಗಪೂಜೆ, ಶಿವನೈವೇದ್ಯಭೋಜನ ಮತ್ತು ಶಿವಪಂಚಾಕ್ಷರೀಮಹಿಮಾವಿಶೇಷಗಳು. ಶ್ರೀರುದ್ರಾರ್ಥವ್ಯಾಖ್ಯಾ ಪ್ರಕರಣ. ಕುಮಾರಸ್ವಾಮಿಯನ್ನು ಕುರಿತು ಸೃಷ್ಟಿ ಸ್ಥಿತಿಲಯಗಳ ವಿಷಯವನ್ನು ಬೋಧಿಸುವುದು. ಕುಮಾರಸ್ವಾಮಿಯು ಮಂತ್ರಾರ್ಥಶ್ರವಣವನ್ನು ಅಪೇಕ್ಷಿಸುವುದು.
ಮೂವತ್ತೊಂಬತ್ತನೆಯ ಅಧ್ಯಾಯ
ಪಂಚಾಕ್ಷರವ್ಯಾಖ್ಯಾನ ಸಮಯದಲ್ಲಿ ಅನೇಕಕೋಟಿ ಶಿವವಿಗ್ರಹಗಳು ಉತ್ಪತ್ತಿಯಾಗುವಿಕೆ. ಸ್ಕಂದ ಮತ್ತು ನಂದೀಶ್ವರರ ಸಂವಾದ. ಕೈಲಾಸವನ್ನು ಕುರಿತು ವಿಷ್ಣು, ಬ್ರಹ್ಮಾದಿಗಳ ಆಗಮನ. ನಂದೀಶ್ವರ ಮತ್ತು ದೇವಗಣ ಇವುಗಳ ಸಂವಾದ. ಶ್ರೀಶೈಲಮಹಿಮಾವರ್ಣನೆ. ವೈಕುಂಠಕ್ಕೆ ಹೋಗಿ ವಿಷ್ಣುವಿಗೆ ವೈಕುಂಠನೆಂಬ ಹೆಸರನ್ನೂ, ವೈಕುಂಠಾಧಿಪತ್ಯವನ್ನೂ ನಂದೀಶ್ವರನು ಅನುಗ್ರಹಿಸುವುದು. ಹಾಗೆಯೇ ಶಿವಗಣಗಳಲ್ಲಿ ಒಬ್ಬನಿಗೆ ಸತ್ಯಲೋಕಾಧಿಪತ್ಯವನ್ನೂ ಮತ್ತೊಬ್ಬನಿಗೆ ಸ್ವರ್ಗಲೋಕಾಧಿಪತ್ಯವನ್ನೂ ಕರುಣಿಸುವುದು. ಹಾಗೆಯೇ ಶಿವೋದ್ಯಾನಪಾಲ ಕತ್ವವನ್ನು ಯಮನಿಗೂ, ಉಳಿದ ದಿಕ್ಪಾಲಕರಿಗೆಲ್ಲಾ ಒಂದೊಂದು ಲೋಕವನ್ನೂ ಆಳ್ವಿಕೆಗೆ ಒಪ್ಪಿಸುವುದು. ಹಾಗೆಯೇ ಗ್ರಹ, ನಕ್ಷತ್ರಾದಿಗಳು, ಕ್ರೂರ ಮತ್ತು ಸಾಧು ಪ್ರಾಣಿಗಳು, ಪಶುಪಕ್ಷಿ ಕೀಟಾದಿಗಳು ಇವೆಲ್ಲವನ್ನೂ ನಿರ್ಮಾಣಮಾಡಿ, ತಾನು ಕೈಲಾಸಕ್ಕೆ ಹೋಗುವುದು. ನಾಗಲೋಕನ ವರ್ಣನೆ.
ನಲವತ್ತನೆಯ ಅಧ್ಯಯ
ಸತ್ಯವ್ರತ ಮತ್ತು ಶುಕವಾಣೀ ಇವರಿಬ್ಬರ ಸಂವಾದ. ಪ್ರಪಂಡನೆಂಬ ಹೆಸರುಳ್ಳ ದೈತ್ಯನ ಕಥೆ. ದೇವಾಸುರ ಯುದ್ಧದಲ್ಲಿ ನಾರಾಯಣಾದಿಗಳ ಅಪಜಯ. ಕಪಿಲ ಋಷಿ ಮತ್ತು ಲಕ್ಷ್ಮೀ ಇವರಿಬ್ಬರ ಸಂವಾದ. ಹರಿತಾಲಿಕಾವ್ರತಕಥನ. ಪೂಜಾವಿಧಿ. ಅಂಗಪೂಜಾಸ್ತ್ರೋತ್ರ. ತ್ರಿಪುರಾಸುರೇಗಿಹಾಸ. ಪಾರ್ವತಿದೇವಿಯು ಆಗ ವ್ರತವನ್ನಾಚರಿಸುವುದು.