ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೮
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಹದಿನೇಳನೆಯ ಅಧ್ಯಾಯ
ಅಯೋ ನಿಜ ಸ್ತ್ರೀಪುರುಷರಿಗೆ ನಡೆಯುವ ವಿವಾಹಮಹೋತ್ಸವವರ್ಣನೆ, ಅಯೋನಿಜರಾದ ಆ ದಂಪತಿಗಳ ವರ್ಣನೆ ಮತ್ತು ಅವರಿಬ್ಬರಿಗೂ ಲಭಿಸುವ ಪುತ್ರಸಂಪತ್ತುಗಳ ವಿವರ ಮತ್ತು ಅದರ ವರ್ಣನೆ.
ಹದಿನೆಂಟನೆಯ ಅಧ್ಯಾಯ
ರಾಜ ಮತ್ತು ಗಂಧರ್ವ ಇವರಿಬ್ಬರ ಸಂವಾದ. ನೂರು ಮತ್ತು ಲಕ್ಷ ಸಂಖ್ಯೆಯ ಗಂಧರ್ವಕನ್ಯೆಯರ ವಿವಾಹವರ್ಣನೆ. ಸೌಂದರ್ಯನಿಧಿಯೆಂಬ ರಾಜನು ಒಂದೇ ಸಾರಿ ಆ ಗಂಧರ್ವಸ್ತ್ರೀಯರನ್ನೆಲ್ಲಾ ಮದುವೆಮಾಡಿಕೊಂಡು, ಶಿವಭಕ್ತಿಯ ಮಹಿಮೆಯಿಂದಲೂ, ಪ್ರದೋಷಕಾಲದ ಶಿವಾರ್ಚನೆಯ ಪ್ರಭಾವದಿಂದಲೂ, ನೂರು ಲಕ್ಷ ದೇಹಗಳನ್ನು ಸಂಪಾದಿಸಿ, ಅವರೆಲ್ಲರಲ್ಲಿಯೂ ಶಿವಭಕ್ತಿಯುತರಾದ ಪುತ್ರರನ್ನು ಸಂಪಾದಿಸಿಕೊಳ್ಳುವಿಕೆ.
ಹತ್ತೊಂಬತ್ತನೆಯ ಅಧ್ಯಾಯ
ವಿಶ್ವಾವಸು ನಂದಿಕೇಶ್ವರರ ಸಂವಾದ. ಹರಗೌರೀ ಸಂವಾದ. ಈಶ್ವರಪೂಜೆ ಮಾಡದವರಿಗೆ ಲಭಿಸುವ ನರಕಯಾತನೆಯ ವಿವರ.
ಇಪ್ಪತ್ತನೆಯ ಅಧ್ಯಾಯ
ವಿಂಧ್ಯಾಚಲಪ್ರಾಂತದಲ್ಲಿ ಬ್ರಾಹ್ಮಣವೇಷಧರನಾದ ಮಹಾಪಾಪಿ ಶೂದ್ರನೊಬ್ಬನ ವಿಚಾರ. ಆದರೆ ಮರಣಕಾಲದಲ್ಲಿ ಶಿವಶಬ್ದಸ್ಮರಣೆಮಾಡಿದುದರಿಂದ, ಯಮನಿಗೆ ಚಿತ್ರಗುಪ್ತನು ಆತನು ನರಕಿಯಲ್ಲವೆಂದು ಬೋಧಿಸುವುದು. ಅವನನ್ನು ದರ್ಶನಮಾಡಲು ವಿಷ್ಣುಬ್ರಹ್ಮಾದಿಗಳು ಬರುವಿಕೆ. ಆಗ ವಿಷ್ಣುವು ಶಿವನಾಮ ಮಹಿಮೆಯನ್ನು ಯಮನಿಗೆ ತಿಳಿಸುವುದು. ಒಡನೆಯೇ ಶಿವದೂತರು ಕೈಲಾಸಕ್ಕೆ ಕರೆದೊಯ್ಯುವುದು.
ಇಪ್ಪತ್ತೊಂದನೆಯ ಅಧ್ಯಾಯ
ಭಿಲ್ಲರರಾಣಿಯ ಶಿವಭಕ್ತಿ ಮತ್ತು ವೈರಾಗ್ಯವರ್ಣನೆ.
ಇಪ್ಪತ್ತೆರಡನೆಯ ಅಧ್ಯಾಯ
ಚಿತ್ರಕೇತುನಾಮಕನಾದ ರಾಜನ ಇತಿಹಾಸ
ಇಪ್ಪತ್ತುಮೂರನೆಯ ಅಧ್ಯಾಯ
ಚಿತ್ರಕೇತುರಾಜನಿಗೂ, ಚತುರ್ಮುಖಬ್ರಹ್ಮನಿಗೂ ನಡೆದ ಸಂಭಾಷಣೆ.
ಇಪ್ಪತ್ತುನಾಲ್ಕನೆಯ ಅಧ್ಯಾಯ
ಬಿಲ್ವಗ್ರಹಣವಿಧಿ, ಬಿಲ್ವಪೂಜಾವಿಧಿ, ಹರಿದಿರುವ, ಒಡೆದಿರುವ, ಒಣಗಿರುವ, ಅಥವಾ ಚೂರ್ಣವಾಗಿರುವ ಎಲ್ಲಾ ಬಿಲ್ವಗಳನ್ನು ಶಿವನಿಗೆ ಅರ್ಪಿಸಬಹುದೆಂಬ ವಿಚಾರ. ಅನೇಕವಿಧವಾದ ಪುಷ್ಪಾರ್ಚನಕ್ರಮ. ಕರವೀರಪುಷ್ಪಗಳ ಪೂಜೆಯಿಲ್ಲದುದರಿಂದ ಜನ್ಮಜನ್ಮಂತರಗಳಲ್ಲಿಯೂ ದಾರಿದ್ರವು ತಪ್ಪುವುದಿಲ್ಲ ಎಂಬ ವಿಚಾರ. ನವಧಾನ್ಯ ಪೂಜಾವಿಷಯ. ಪಂಚಾಮೃತಾಭಿಷೇಕವಿಧಿ. ಜಲಧಾರಾಪ್ರದಾನದ ವಿವರಣೆ.
ಇಪ್ಪತ್ತೈದನೆಯ ಅಧ್ಯಾಯ
ದೇವತೆಗಳು ಮಾಡಿದ ಶಿವಪೂಜೆ, ಶಿವಸ್ತುತಿ, ಶಿವಪ್ರಸಾದ ಇವುಗಳ ವರ್ಣನೆ.
ಇಪ್ಪತ್ತಾರನೆಯ ಅಧ್ಯಾಯ
ಶೇಷ ಮತ್ತು ರಾಜ ಇವರಿಬ್ಬರ ಸಂವಾದ. ಶಿವಭಕ್ತಿವರ್ಣನೆ. ವಿಷ್ಣುವಿನ ಆಗಮನ. ಆಗ ದ್ವಾರಪಾಲಕರು ವಿಷ್ಣುವನ್ನು ತಡೆಯುವುದು. ವಿಷ್ಣುವು ಪಶ್ಚಾತ್ತಾಪ ಪಡುವುದು. ಶನಿಪ್ರದೋಷಮಹಿಮೆ. ವಿಷ್ಣು ಮತ್ತು ಸನಂದ ಇವರಿಬ್ಬರ ಸಂವಾದ. ಸನಂದನನು ವಿಷ್ಣುವನ್ನು ಕುರಿತು ಶೈವಧರ್ಮವನ್ನು ಉಪದೇಶಿಸುವುದು.
ಇಪ್ಪತ್ತೇಳನೆಯ ಅಧ್ಯಾಯ
ವಿಷ್ಣು ಮತ್ತು ಸನಕಋಷಿ ಇವರಿಬ್ಬರ ಸಂವಾದ. ವಿಷ್ಣುವಿಗೆ ಶೈವಧರ್ಮೋ ಪದೇಶ. ಶಿವಾಲಯಕ್ಕೆ ವಿಷ್ಣುವಿನ ಪ್ರವೇಶ. ವಿಷ್ಣುವು ಮದ್ದಲೆಯನ್ನು ಬಾರಿಸುತ್ತಾ ನಾಟ್ಯ ಮಾಡುವಿಕೆ. ರಾಜನು ಶಿವನಿಗೆ ನೈವೇದ್ಯವನ್ನರ್ಫಿಸುವುದು. ನೈವೇದ್ಯದ ಮಹಿಮೆ. ವಿಷ್ಣು ಮತ್ತು ರಾಜ ಇವರಿಬ್ಬರ ಸಂವಾದ.