ಶ್ರೀ ವರಾಹಮಹಾಪುರಾಣಂ – ಮೊದಲನೆಯ ಭಾಗ – ೧ – ೫೩ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ಮೊದಲನೆಯ ಅಧ್ಯಾಯ
ಎರಡನೆಯ ಅಧ್ಯಾಯ
ಮೂರನೆಯ ಅಧ್ಯಾಯ
ನಾಲ್ಕನೆಯ ಅಧ್ಯಾಯ
ಐದನೆಯ ಅಧ್ಯಾಯ
ಆರನೆಯ ಅಧ್ಯಾಯ
ಏಳನೆಯ ಅಧ್ಯಾಯ
ಎಂಟನೆಯ ಅಧ್ಯಾಯ
ವಸುರಾಜನ ದೇಹದಿಂದುದಿಸಿದ ಧರ್ಮವ್ಯಾಧನ ಕಥೆ — ಅವನ ಧರ್ಮಕಮಾಸಕ್ತಿ ಜೀವನಕ್ರಮ.
ಅವನು ಮತಂಗಋಷಿ ಪುತ್ರನಿಗೆ ಕನ್ಯಾದಾನ ಮಾಡಿದುದು.
ಅವನು ಮತಂಗಮುನಿಗೆ ಗೋದುವೆ,, ಬತ್ತ ಮೊದಲಾದುವೂ ಪ್ರಾಣಿಗಳೆಂಬುದನ್ನೂ, ಪಂಚಮಹಾಯಜ್ಞಗಳನ್ನೂ ತಿಳಿಸಿದುದು.
ಅವನು ಪುರುಷೋತ್ತಮತೀರ್ಥದಲ್ಲಿ ತಪೋನಿರತನಾದುದು.
ಅವನ ಪುರುಷೋತ್ತಮ ಸ್ತೋತ್ರ.
ಅವನಿಗೆ ದೇವನು ಪ್ರತ್ಯಕ್ಷನಾಗಿ ವರವನ್ನಿತ್ತುದು.
ಒಂಬತ್ತನೆಯ ಅಧ್ಯಾಯ.
ಹತ್ತನೆಯ ಅಧ್ಯಾಯ
ಸೃಷ್ಟಿವರ್ಣನೆ.
ಭಜಿಸಿದ ದೇವತೆಗಳಿಗೆ ವಿರಾಡ್ರೂಪದರ್ಶನ, ವರದಾನ.
ಆತ್ರೇಯಮುನಿಯು ಇಂದ್ರನಿಗೆ ಶಾಪವನ್ನೂ ಸುಪ್ರತೀಕರಾಜನಿಗೆ (ದುರ್ಜಯನೆಂಬ) ಪುತ್ರವರವನ್ನೂ ಕೊಟ್ಟುದು.
ದುರ್ಜಯಚರಿತೆ – ದುರ್ಜಯನು ಭಾರತಾದಿ ವರ್ಷಗಳೆಲ್ಲವನ್ನೂ ಜಯಿಸಿ, ದೇವೆಂದ್ರನನ್ನು ಮನುಷ್ಯಲೋಕಕ್ಕೆ ಓಡಿಸಿದುದು.
ದುರ್ಜಯನು ವಿದ್ಯುತ್ಸುವಿದ್ಯುತ್ತುಗಳೆಂಬ ಮುನಿಗಳಿಗೆ ಸ್ವರ್ಗಾದಿಲೋಕಪಾಲಕತ್ವವನ್ನು ಕೊಟ್ಟುದು.
ಸ್ವಾಯಂಭೂವ ಮನುವಿನ ಪುತ್ರರಾದ ಹೆತೃಪ್ರಹೇತೃಗಳ ಕಥೆ. ದುರ್ಜಯನಿಗೆ ಅವರ ಪುತ್ರಿಯರ ವಿವಾಹ.
ವೇಟೆಗಾಗಿ ವನಕ್ಕೆ ಬಂದ ದುರ್ಜಯನು ಗೌರಮುಖನೆಂಬ ಮುನಿಯನ್ನು ಸಂದರ್ಶಿಸಿದುದು.
ಹನ್ನೊಂದನೆಯ ಅಧ್ಯಾಯ
ಮತ್ತೆ ದುರ್ಜಯಚರಿತ್ರೆ — ಗೌರಮುಖಮುನಿಯು, ವಿಷ್ಣುವಿನಿಂದ ದಿವ್ಯಮಣಿಯನ್ನು ಪಡೆದು, ಅದರ ಪ್ರಭಾವದಿಂದ ಅಕ್ಷೆಹಿಣೀಸೈನ್ಯಸಮೇತನಾದ ದುರ್ಜಯನಿಗೆ ಅತಿಶಯವಾದ ಆತಿಥ್ಯವನ್ನು ಮಾಡಿದುದು. ಆಶ್ರಮದ ರಾತ್ರಿಯ ವರ್ಣನೆ.
ಋಷಿಯ ದಿವ್ಯಮಣಿಯ ಮಹಿಮೆಯನ್ನರಿತು, ಆದನ್ನು ಅಪಹರಿಸಲು ಬಯಸಿದ ದುರ್ಜಯನಿಗೂ, ಮಣಿಯಿಂದುದಿಸಿದ ಸುಪ್ರಭಾದಿಗಳಾದ ಹದಿನೈದುಜನ ಮಹಾವೀರರಿಗೂ ನಡೆದ ಘೋರಯುದ್ಧ.
ಗೌರಮುಖನಿಂದ ಸ್ಮೃತನಾದ ಹರಿಯು ತನ್ನ ಚಕ್ರದಿಂದ ದುರ್ಜಯಾದಿಗಳನ್ನು ನಿಮಿಷಮಾತ್ರದಲ್ಲಿ ಸಂಹರಿಸಿ, ಆ ವನಕ್ಕೆ ನೈಮಿಷಾರಣ್ಯವೆಂಬ ಹೆಸರಿತ್ತುದು.
ಹನ್ನೆರಡನೆಯ ಅಧ್ಯಾಯ
ಹದಿಮೂರನೆಯ ಅಧ್ಯಾಯ
ಹದಿನಾಲ್ಕನೆಯ ಅಧ್ಯಾಯ
ಹದಿನೈದನೆಯ ಅಧ್ಯಾಯ
ಹದಿನಾರನೆಯ ಅಧ್ಯಾಯ.
ದುರ್ವಾಸಶಾಪದಿಂದ ಪದಚ್ಯುತನಾದ ಇಂದ್ರನು ಕಾಶಿಯಲ್ಲಿ ಬಂದು ನೆಲಸಿದುದು.
ದುರ್ಜಯನ ಮರನವನ್ನು ಕೇಳಿ, ವಿದ್ಯುತ್ಸುವಿದ್ಯುತ್ತುಗಳು ದೇವತೆಗಳ ಮೇಲೆ ಯುದ್ಧಕ್ಕೆ ಪ್ರಯತ್ನಿಸಿದುದು.
ಅವರನ್ನು ಜಯಿಸುವ ಶಕ್ತಿಯನ್ನು ಪಡೆಯಲು ದೇವತೆಗಳು ಬೃಹಸ್ಪತಿಯ ಉಪದೇಶದಂತೆ ಗೋಮೇಧ ಯಜ್ಞಮಾಡಲು ನಿಶ್ಚಯಿಸಿ, ಯಜ್ಞ ಪಶುಗಳನ್ನು ಸಂಚಾರಕ್ಕೆ ಬಿಟ್ಟು, ಸರಮೆಯೆಂಬ ನಾಯನ್ನು ರಕ್ಷಣೆಗಾಗಿ ಕಳುಹಿಸಿದುದು.
ರಾಕ್ಷಸರು ಆ ಹಸುಗಳನ್ನು ಅಪಹರಿಸಿ, ಸರಮೆಗೆ ಹಾಲನ್ನು ಲಂಚಕೊಟ್ಟುದು.
ಹಸುಗಳನ್ನು ಕಾಣೆನೆಂದು ಸುಳ್ಳುಹೇಳಿದ ಸರಮೆಯು ಇಂದ್ರನಿಂದ ಒದೆಯಿಸಿಕೊಂಡು ಹಾಲನ್ನು ಕಕ್ಕುತ್ತಾ ಹೋಗಿ ಹಸುಗಳನ್ನು ತೋರಿಸಿದುದು.
ದೇವತೆಗಳು ಯಜ್ಞದಿಂದ ಶಕ್ತಿಪಡೆದು ಶತ್ರುಗಳನ್ನು ಜಯಿಸಿ ಮತ್ತೆ ಸ್ವರ್ಗಾಧಿಪತ್ಯವನ್ನು ಪಡೆದುದು.
ಸರಮೋಖ್ಯಾನ ಶ್ರವಣಫಲ.
ಹದಿನೇಳನೆಯ ಅಧ್ಯಾಯ
ಮಹಾತಪಮುನಿಯ ಮತ್ತು ಪ್ರಜಾಪಾಲರಾಜನ ಚರಿತ್ರೆ – ಮಣಿಜನಾದ ಸುಪ್ರಭನು ಶ್ರುತಕೀರ್ತಿಮಹಾರಾಜನಿಗೆ ಪ್ರಜಾಪಾಲನೆಂಬ ಹೆಸರಿನಿಂದ ಪುತ್ರನಾಗಿ ಉದಿಸಿ, ಮಹಾತಪಮುನಿಯ ಆಶ್ರಮಕ್ಕೆ ಹೋದುದು.
ಮಹಾತಪನ ಆಶ್ರಮದ ವರ್ಣನೆ.
ಮಹಾತಪನ ಸಂದರ್ಶನ. ಅವನಿಂದ ಮುಕ್ತಿಮಾರ್ಗ ಶ್ರವಣ.
ಮುಕ್ತಿಯನ್ನು ಬಯಸುವವರು ವಿಷ್ಣುವನ್ನು ಒಲಿಸಲು ಹೇಗೆ ಪೂಜಿಸಬೇಕೆಂದು ಪ್ರಶ್ನಿಸಿದ ಪ್ರಜಾಪಾಲನಿಗೆ,ಮಹಾತಪಮುನಿಯು ಬ್ರಹ್ಮಾದಿ ಸಕಲ ದೇವತೆಗಳೂ ವಿಷ್ಣುವಿನಿಂದಲೇ ಉದಿಸಿದವರೆಂದು ಹೇಳಿದುದು.
ಅಗ್ನಿ, ಅಶ್ವಿನೀದೇವತೆಗಳು, ಗೌರಿ, ಗಣಪತಿ ಮೊದಲಾದವರೆಲ್ಲರೂ ಗರ್ವಿತರಾಗಿ ಸೋತು, ಮತ್ತೆ ವಿಷ್ನುವಿಗೆ ಶರಣಾಗತರಾಗಿ ಸ್ತುತಿಸಿ ಮರೆಹೊಕ್ಕರೆಂದುದು.
ದೇವನು ಲೀಲೆಗಾಗಿ ಅವರನ್ನು ಸೃಷ್ಟಿಸಿದ್ದಾಗಿ ಹೇಳಿ ಅವರಿಗೆ ಸಾಕಾರ ನಿರಾಕಾರವೆಂಬ ಎರಡೆರಡು ರೂಪಗಳನ್ನು ಕೊಟ್ಟನೆಂಬುದು.
ಹದಿನೆಂಟನೆಯ ಅಧ್ಯಾಯ
ಹತ್ತೊಂಬತ್ತನೆಯ ಅಧ್ಯಾಯ
ಇಪ್ಪತ್ತನೆಯ ಅಧ್ಯಾಯ
ಸೂರ್ಯೋತ್ಪತ್ತಿ.
ಸೂರ್ಯ ಸಂಜ್ಞಾದೇವಿಯರ ವಿವಾಹ.
ಅವರಿಗೆ ಯಮ ಯಮುನೆಯರ ಜನನ.
ಸಂಜ್ಞಾದೇವಿಯು ಛಾಯಾದೇವಿಯನ್ನು ತನಗೆ ಬದಲಾಗಿ ನಿಲ್ಲಿಸಿ ತಾನು ಹೆಣ್ಣು ಕುದುರೆಯಾಗಿ ಹೊರಟುಹೋದುದು.
ಸೂರ್ಯ ಛಾಯೆಯರಿಂದ ಶನಿ ತಪತಿಗಳ ಉತ್ಪತ್ತಿ.
ಯಮನಿಗೆ ಛಾಯೆಯ ಶಾಪ, ಸೂರ್ಯನ ವರ.
ಅಶ್ವಿನೀ ದೇವತೆಗಳ ಉತ್ಪತ್ತಿ (ಸೂರ್ಯಸಂಜ್ಞೆಯರಿಂದ).
ಅಶ್ವಿನೀ ದೇವತೆಗಳು ನಾರಾಯಣನನ್ನು ಒಲಿಸಿದುದು.
ಅಶ್ವಿನೀದೇವತೆಗಳು ಮಾಡಿದ ಬ್ರಹ್ಮಪಾರಸ್ತೋತ್ರ.
ಅಶ್ವಿನೀದೇವತೆಗಳು ಪಡೆದ ಸೌಂದರ್ಯಾದಿ ವರಗಳು.
ಅಶ್ವಿನೀದೇವತೆಗಳ ಜನ್ಮ ಶ್ರವಣದ ಮತ್ತು ಅವರ ತಿಥಿಯಾದ ಬಿದಿಗೆಯ ವ್ರತದ ಫಲ.
ಇಪ್ಪತ್ತೊಂದನೆಯ ಅಧ್ಯಾಯ
ಗೌರೀರುದ್ರರ ಸೃಷ್ಟಿ, ವಿವಾಹ.
ಪ್ರಜಾಸೃಷ್ಟಿಶಕ್ತಿಯನ್ನು ಪಡೆಯಲು ರುದ್ರನು ನೀರಿನಲ್ಲಿ ಮುಳುಗಿದುದು.
ಬಈಕ ದಕ್ಷಬ್ರಹ್ಮನಿಂದ ದೇವಾದಿ ಪ್ರಜೆಗಳ ಸೃಷ್ಟಿ.
ಗೌರಿಯು ದಕ್ಷಬ್ರಹ್ಮನಿಗೆ ಪುತ್ರಿಯಾದುದು. ದಕ್ಷಬ್ರಹ್ಮನ ಯಜ್ಞ.
ನೀರಿನಿಂದೆದ್ದ ರುದ್ರನು ಸೃಷ್ಟಿಯು ದಕ್ಷಬ್ರಹ್ಮನಿಂದಾದುದಕ್ಕಾಗಿ ಕೋಪಗೊಂಡು ದಕ್ಷಯಜ್ಞವನ್ನು ದ್ವಂಸ ಮಾಡಿದುದು.
ರುದ್ರಗಣ ದೇವಾದಿಗಳ ಯುದ್ಧ.
ಹರಿಹರರ ಮತ್ತು ನಾರಾಯಣಾಸ್ತ್ರ ಪಾಶುಪತಾಸ್ತ್ರಗಳ ದೀರ್ಘಯುದ್ಧ
ಬ್ರಹ್ಮನು ಬಂದು ಹರಿಹರರಿಗೂ ಅವರ ಅಸ್ತ್ರಗಳಿಗೂ ಪರಸ್ಪರ ಸಮಾಧಾನವನ್ನುಂಟುಮಾಡಿದುದು.
ರುದ್ರನಿಗೆ ಯಜ್ಞದಲ್ಲಿ ಭಾಗವು ಸಲ್ಲುವಂತೆಯೂ, ದೇವತೆಗಳೆಲ್ಲರೂ ರುದ್ರನನ್ನು ಸ್ತುತಿಸುವಂತೆಯೂ, ರುದ್ರನು ದಕ್ಷ ಯಜ್ಞವು ಪೂರ್ತಿಯಗುವಂತೆ ಅನುಗ್ರಹಿಸಿ ಎಲ್ಲರಿಗೂ ಸೂಕವನ್ನುಂಟು ಮಾಡುವಂತೆಯೂ ಮಾಡಿದುದು.
ದೇವತೆಗಳ ರುದ್ರಸ್ತುತಿ.
ದಕ್ಷಾದಿದೇವತೆಗಳಿಗೆ ರುದ್ರನ ವರದಾನ, ರುದ್ರನ ಪಶುಪತಿತ್ವ.
ಬ್ರಹ್ಮನ ಮಾತಿನಂತೆ ದಾಕ್ಷಾಯಿಣಿ (ಗೌರಿ)ಯನ್ನು ಮತ್ತೆ ರುದ್ರನಿಗೆ ಒಪ್ಪಿಸಿದುದು.
ಗೌರೀ ರುದ್ರರ ಕೈಲಾಸಗಮನ. ಬ್ರಹ್ಮಾದಿಗಳ ಸ್ವಸ್ಥಾನ ಪ್ರಯಾಣ
ಇಪ್ಪತ್ತೆರಡನೆಯ ಅಧ್ಯಾಯ
ಪಾರ್ವತಿಯ ವಿವಾಹ ವಿಚಾರ – ದಾಕ್ಷಾಯಣಿಯು ತಪಸ್ಸಿನಿಂದ ದೇಹವನ್ನು ತ್ಯಜಿಸಿ, ಪಾರ್ವತಿಯಾಗಿ ಜನಿಸಿ, ಮತ್ತೆ ಶಿವನನ್ನೇ ಪತಿಯಾಗಿ ಪಡೆಯಲು ಅವನನ್ನು ಕುರಿತು ತಪಸ್ಸನ್ನಾಚರಿಸಿದುದು.
ಮಹೇಶ್ವರನು ವೃದ್ಧಬಾಹ್ಮಣ ವೇಷದಿಂದ ಅವಳ ಧರ್ಮವನ್ನು ಪರೀಕ್ಷಿಸಿದುದು. ಪಾಣಿಗ್ರಹಣ.
ಸ್ವಸ್ವರೂಪವನ್ನು ಧರಿಸಿದ ಶಿವನಿಗೂ ಪಾರ್ವತಿಗೂ ಸಲ್ಲಾಪ.
ಪಾರ್ವತಿಯು ತಂದೆಗೆ ತನ್ನ ವಿವಾಹ ವಿಚಾರವನ್ನು ತಿಈಸಿದುದು.
ಹಿಮವಂತನು ಬ್ರಹ್ಮನ ಅನುಮತಿಯಂತೆ ಪಾರ್ವತಿಯನ್ನು ಈಶ್ವರನಿಗೆ ಕೊಟ್ಟು, ಅತಿವೈಭವದಿಂದ ವಿವಾಹವನ್ನು ಮಾಡಿದುದು.
ಪಾರ್ವತಿಗೆ ಬ್ರಹ್ಮನ ಅಭಿನಂದನ.
ಪಾರ್ವತಿಗೆ ವಿವಾಹವಾದ ತದಿಗೆಯ ವ್ರತಾದಿಗಳ ಫಲ.
ಇಪ್ಪತ್ತಮೂರನೆಯ ಅಧ್ಯಾಯ
ಗಣಪತಿಯ ವಿಚಾರ – ದೇವಾದಿಗಳು ಕೈಲಾಸಕ್ಕೆ ಹೋಗಿ ದುಷ್ಕಾರ್ಯಕ್ಕೆ ವಿಘ್ನಕಾರಿಯನ್ನಾರನ್ನಾದರೂ ಸೃಷ್ಟಿಸಬೇಕೆಂದು ರುದ್ತ್ರನನ್ನು ಪ್ರಾರ್ಥಿಸಿದುದು.
ಪಾರ್ವತಿಯ ಮುಖವನ್ನು ನೋಡುತ್ತಿದ್ದ ರುದ್ರನ ನಗುವಿನಿಂದ ಅತಿರೂಪತೇಜೋವಂತನಾದ ಪುತ್ರನೊಬ್ಬನು ಉದಿಸಿದುದು.
ಲೋಕಸಮ್ಮೋಹಕನಾದ ಅವನನ್ನು ಪಾರ್ವತಿಯು ಎವೆಯಿಕ್ಕದೆ ಪ್ರೀತಿಯಿಂದ ನೋಡುತ್ತಿರಲು, ಆ ಕುಮಾರನ ಸೌಂದರ್ಯವೇ ಅದಕ್ಕೆ ಕಾರಣವೆಂದರಿತು, ಉಗ್ರಕೋಪದಿಂದ ಅವನನ್ನು ಗಜಮುಖನೂ ಲಂಬೋದರನೂ ಆಗೆಂದು ಶಪಿಸಿದುದು.
ಕೋಪದಿಂದ ಮೈಯ್ಯೊದರಿದ ಶಿವನ (ರುದ್ರನ) ಬೆವರ ನೀರಿನಿಂದ ಅಸಂಖ್ಯಾತರಾದ ಗಜಮುಖರುದಿಸಿ ಲೋಕವನ್ನು ಅಲ್ಲೋಲಕಲ್ಲೋಲ ಮಾಡಿದುದು.
ರುದ್ರನೂ ದೇವತೆಗಳೂ ಚಿಂತಿಸುತ್ತಿರಲು, ಬ್ರಹ್ಮನು ಅಲ್ಲಿ ಬಂದು, ರುದ್ರನ ಮುಖದಿಂದುದಿಸಿದವನು ಉಳಿದ ವಿನಾಯಕರಿಗೆ ಪ್ರಭುವಾಗಲೆಂದು ಹೇಳಿ, ರುದ್ರನು ಆತನಿಗೆ ಹಲವು ವರಗಳನ್ನು ಕೊಡುವಂತೆ ಮಾಡಿದುದು.
ರುದ್ರನು ಗಜಮುಖನಿಗೆ ಸರ್ವಕರ್ಮಗಳಲ್ಲೂ ಅಗ್ರ ಪೂಜೆಯೇ ಮೊದಲಾದ ಅನೇಕ ವರಗಳನ್ನು ಕೊಟ್ಟು, ಸುವರ್ಣ ಕಲಶೋದಕದಿಂದ ಅಭಿಷೇಕ ಮಾಡಿದುದು.
ಅಭಿಷೇಕಕಾಲದಲ್ಲಿ ದೇವತೆಗಳು ಮಾಡಿದ ವಿನಾಯಕ ಸ್ತುತಿ.
ಗಣಪತಿಯ ಜನ್ಮದಿನವಾದ ಚೌತಿಯ ವ್ರತದ ಫಲ.
ಗಣಪತಿಯ ಜನ್ಮಶ್ರವಣ ಫಲ.
ಇಪ್ಪತ್ತನಾಲ್ಕನೆಯ ಅಧ್ಯಾಯ
ಸರ್ಪಗಳ ವಿಚಾರ – ಕಶ್ಯಪನಿಂದ ಕದ್ರುವಿನಲ್ಲಿ ಅನಂತವಾಸುಕ್ಯಾದಿಗಳ ಜನನ.
ಹೆಚ್ಚಿದ ನಾಗರಿಂದ ಪ್ರಪಂಚವು ಹಾಳಾಗುತ್ತಿರಲು ಎಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟುದು.
ವಾಸುಕಿಯೇ ಮೊದಲಾದ ನಾಗರಿಗೆ ಬ್ರಹ್ಮನ ಶಾಪ.
ನೀನೇ ವಿಷವೇಗವನ್ನುಂಟುಮಾಡಿ, ನಮ್ಮನ್ನು ಈಗ ಶಪಿಸುವುದು ಸರಿಯಲ್ಲವೆಂದು, ಕ್ಷಮೆಯನ್ನೂ ಬೇರೆಯಾದ ವಾಸಸ್ಥಳವನ್ನೂ ನಾಗರು ಬೇಡಿದುದು.
ಬ್ರಹ್ಮನು, ನಾಗರಿಗೆ ಪಾತಾಳ ವಿತಲ ಸುತಲಗಳೆಂಬ ಮೂರು ಲೋಕಗಳನ್ನು ವಾಸಕ್ಕೆ ಕೊಟ್ಟು, ಕೆಲವು ನಿಯಮಗಳನ್ನೂ ಮಾಡಿದುದು.
ನಾಗರಿಗೆ ಪ್ರಿಯತಿಥಿಯಾದ ಪಂಚಮಿಯ ವ್ರತದ ಫಲ.
ಇಪ್ಪತ್ತೈದನೆಯ ಅಧ್ಯಾಯ
ಷಣ್ಮುಖ ವಿಚಾರ – ರಾಕ್ಷಸರನ್ನು ಜಯಿಸಲು ತಕ್ಕ ಸೇನಾಪತಿಯು ಅಗತ್ಯವೆಂದು ಬ್ರಹಸ್ಪತಿಯು ಉಪದೇಶಿಸಲು, ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದುದು.
ಬ್ರಹ್ಮನು ಎಲ್ಲರೊಡನೆ ರುದ್ರನ ಬಳಿಗೆ ಹೋದುದು.
ದೇವತೆಗಳು ಮಾಡಿದ ರುದ್ರಸ್ತುತಿ.
ದೇವತೆಗಳ ಪ್ರಾರ್ಥನೆಯಂತೆ, ಶಕ್ತಿಯನ್ನು ಮಧಿಸಿ ಕುಮಾರ (ಷಣ್ಮುಖ)ನನ್ನು ಸೃಷ್ಟಿಸಿದುದು.
ಕುಮಾರ (ಷಣ್ಮುಖ)ನಿಗೆ ರುದ್ರಾದಿಗಳ ದೇವಸೇನಾಪತಿತ್ವವೇ ಮೊದಲಾದ ವಿವಿಧ ವರದಾನ
ಕುಮಾರನಿಗೆ ಷಾಣ್ಮಾತುರ, ಕಾರ್ತಿಕೇಯ, ಪಾವಕಿ ಎಂಬ ಹೆಸರುಗಳು ಬರಲು ಕಾರಣ.
ಕುಮಾರಾಭಿಷೇಕ ದಿನವಾದ ಷಷ್ಠಿಯ ವ್ತ್ರತದ ಫಲ.
ಇಪ್ಪತ್ತಾರನೆಯ ಅಧ್ಯಾಯ
ಇಪ್ಪತ್ತೇಳನೆಯ ಅಧ್ಯಾಯ
ಅಷ್ಟ ಮಾತ್ರುತ್ಪತ್ತಿ, ಅಂಧಕಾಸುರ ಸಂಹಾರ – ಅಂಧಕಾಸುರ ಪೀದಿತರಾದ ದೇವತೆಗಳು ಬ್ರಹ್ಮನೊಡನೆ ಶಿವನ ಸನ್ನಿಧಿಗೆ ಹೋದುದು.
ಶಿವನು ಅವರನ್ನು ಸತ್ಕರಿಸುವಷ್ಟರಲ್ಲೇ ಸೇನೆಯೊಡನೆ ಅಂಧಕನು ಅಲ್ಲೇ ಬಂದು, ಶಿವಪಾರ್ವತಿಯರನ್ನು ಕೊಲ್ಲಲು ಯತ್ನಿಸಿದುದು.
ದೇವಸಹಿತನಾದ ರುದ್ರನಿಗೂ ಅಂಧಕನಿಗೂ ಯುದ್ಧ. ಗಜಾಸುರವಧೆ. ಶಿವನು ಗಜಚರ್ಮಾಂಬರನಾದುದು.
ನಾರಾಯಣನು ರುದ್ರನ ಸಹಾಯಕ್ಕೆ ಬಂದುದು.
ರುದ್ರನು ತ್ರಿಶೂಲದಿಂದ ಅಂಧಕನನ್ನು ಚುಚ್ಚಿ ಎತ್ತಿ ಹಿಡಿದುದು. ಅಂಧಕರಕ್ತದಿಂದ ಹಲವರು ಅಂಧಕರುದಿಸಿದುದು.
ರುದ್ರನ ಕೋಪದ ಜ್ವಾಲೆಯಿಂದ ಯೋಗೇಶ್ವರಿಯುದಿಸಿದುದು, ವಿಷ್ಣುಬ್ರಹ್ಮಾದಿಗಳು ಒಬ್ಬೊಬ್ಬರು ದೇವಿಯರನ್ನು ನಿರ್ಮಿಸಿದುದು.
ಅಷ್ಟಮಾತೃಗಳ ಸ್ವರೂಪ, ಅಷ್ಟಮಾತೃಗಳ ಅಂಧಕನ ರಕ್ತವನ್ನು ಇಂಗಿಸಿದುದು, ಅಂಧಕ ಮೃತಿ.
ಅಷ್ಟಮಾತೃಗಳಿಗೆ ನಿರ್ದಿಷ್ಟವಾದ ಅಷ್ಟಮಿಯ ವ್ರತದಫಲ.
ಇಪ್ಪತ್ತೆಂಟನೆಯ ಅಧ್ಯಾಯ
ದುರ್ಗಿಯ ಉತ್ಪತ್ತಿ, ವೇತ್ರಾಸುರ ಸಂಹಾರ – ಸಿಂಧುದ್ವೀಪನೆಂಬ ರಾಜನು, ವೇತ್ರವತಿಯಲ್ಲಿ ಇಂದ್ರಶತ್ರುವಾದ ವೇತ್ರಾಸುರನೆಂಬ ಪುತ್ರನನ್ನು ಪಡೆದುದು.
ವೇತ್ರಾಸುರನು ಇಂದ್ರಾದಿದೇವತೆಗಳನ್ನು ಜಯಿಸಿದುದು.
ಇಂದ್ರಾದಿ ಲೋಕಪಾಲರು ಬ್ರಹ್ಮನೆಡೆಗೆ ಹೋಗಿ ಮೊರೆಯಿಟ್ಟುದು.
ಗಂಗೆಯೊಳಗೆ ತಪಸ್ಸು ಮಾಡುತ್ತಿದ್ದ ಬ್ರಹ್ಮನು ಚಿಂತಿಸಲು ಅಷ್ಟಭುಜಳು, ಸಿಂಹವಾಹನೆಯೂ ಆದ ದುರ್ಗಾ ದೇವಿಯು ಗಂಗೆಯ ನೀರಿನಿಂದೆದ್ದು ಅವನೆದುರಿಗೆ ನಿಂತುದು.
ದುರ್ಗಾದೇವಿಯು ವೇತ್ರಾಸುರನನ್ನು ಸಂಹರಿಸಿದುದು.
ದೇವತೆಗಳ ದುರ್ಗಿಯ ಸ್ತುತಿ.
ಬ್ರಹ್ಮನ ವರದಾನ. ಮುಂದೆ ದುರ್ಗಿಯಿಂದ ಮಹಿಷಾಸುರ ವಧೆಯಾಗಬೇಕೆಂದುದು. ದೇವಿಯ ಹಿಮಾಲಯನಗಮನ. ನವಮಿ ಅಥವಾ ನಂದಾತಿಥಿಯ ವ್ರತದಫಲ.
ಇಪ್ಪತೊಂಬತ್ತನೆಯ ಅಧ್ಯಾಯ
ಮೂವತ್ತನೆಯ ಅಧ್ಯಾಯ
ಮೂವತ್ತೊಂದನೆಯ ಅಧ್ಯಾಯ
ಮೂವತ್ತೆರಡನೆಯ ಅಧ್ಯಾಯ
ಧರ್ಮ ವಿಚಾರ – ಪರಬ್ರಹ್ಮನ ದೇಹದಿಂದ ಧರ್ಮಪುರುಷನುದಿಸಿದುದು, ಅವನ ಸ್ವರೂಪ.
ಚಂದ್ರನ ಪೀಡೆಯಿಂದ ಧರ್ಮವು ವನಗತವಾದುದು.
ಧರ್ಮನಾಶದಿಂದ ಲೋಕದಲ್ಲುಂಟಾದ ಅನರ್ಥ.
ಬ್ರಹ್ಮನು ದೇವಾಸುರರೊಡನೆ ಧರ್ಮನಿದ್ದೆಡೆಗೆ ಹೋಗಿ, ಅವರಿಂದ ಧರ್ಮನನ್ನು ಒತ್ರಮಾಡಿಸಿದುದು.
ಧರ್ಮಸ್ತುತಿ.
ಒಲಿದ ಧರ್ಮ (ವೃಷ)ನ ಶಾಂತದೃಷ್ಟಿಗೊಳಗಾದ ಅವರೆಲ್ಲರೂ ಜ್ಞಾನಿಗಳಾಗಿ ಸದ್ಧರ್ಮಯುತರಾದುದು.
ಬ್ರಹ್ಮನು ತ್ರಯೋದಶೀತಿಥಿಯೇ ಮೊದಲಾದುವನ್ನು ಧರ್ಮನಿಗೆ ಅನುಗ್ರಹಿಸಿದುದು.
ಧರ್ಮೋತ್ಪತ್ತಿ ಶ್ರವಣದ ಮತ್ತು ತ್ರಯೋದಶೀ ವ್ರತದಫಲ.
ಮೂವತ್ತಮೂರನೆಯ ಅಧ್ಯಾಯ
ಮೂವತ್ತನಾಲ್ಕನೆಯ ಅಧ್ಯಾಯ
ಮೂವತ್ತೈದನೆಯ ಅಧ್ಯಾಯ
ಮೂವತ್ತಾರನೆಯ ಅಧ್ಯಾಯ
ಮೂವತ್ತೇಳನೆಯ ಅಧ್ಯಾಯ
ಪ್ರಾಚೀನೇತಿಹಾಸ – ಭಗದ್ಭಕ್ತರ ಮಾನಸಿಕ, ಕಾಯಿಕ, ವಾಚಿಕ ವ್ರತಗಳು
ಆರುಣಿಯೆಂಬ ತಪಸ್ವಿಯ ವೃತ್ತಾಂತ, ಆರುಣಿಯನ್ನು ಕೊಲ್ಲಲು ಬಂದ ಬೇಡನು ಅವನ ಬ್ರಹ್ಮತೇಜಸ್ಸಿನಿಂದ ಸಾಧುವಾಗಿ ಅವನಿಂದ ಉಪದೇಶವನ್ನು ಬೇಡುತ್ತ ನಿಂತು, ಆರುಣಿಯನ್ನು ಕೊಲ್ಲಲು ಬಂದ ಹುಲಿಯನ್ನು ಕೊಂದುದು.
ಪ್ರಾಣಬಿಡುವಾಗ ಆರುಣಿಯಿಂದ “ನಮೋನಾರಾಯಣಾಯ” ಎಂಬ ವಾಕ್ಯವನ್ನು ಕೇಳಿದ ಹುಲಿಯು ಪುರುಷನಾದುದು.
ಆ ಪುರುಷನು “ದೀರ್ಘಬಾಹುವೆಂಬ ರಾಜನಾಗಿದ್ದೆ”ನೆಂದು ತನ್ನ ಹಿಂದಿನ ಕಥೆಯನ್ನೂ ವಿಷ್ಣುಸ್ಮರಣಿಯ ಮಹಿಮೆಯನ್ನೂ ಹೇಳಿದುದು.
ಆರುಣಿಯು ಬೇಡನಿಗೆ ಧರ್ಮೋಪದೇಶಮಾಡಿ, ತಪಸ್ಸಿಗೆ ತಾನು ಬೇರೆಡೆಗೆ ಹೋದುದು.
ಮೂವತ್ತೆಂಟನೆಯ ಅಧ್ಯಾಯ
ಮೂವತ್ತೊಂಬತ್ತನೆಯ ಅಧ್ಯಾಯ
ಸತ್ಯತಪ ದುರ್ವಾಸರ ಸಂವಾದ – ಸತ್ಯತಪ (ವ್ಯಾಥ)ನಿಗೆ ದುರ್ವಾಸರು ಶರೀರದಲ್ಲಿ ಅಧರ್ಮ, ಧರ್ಮ, ಭೋಗಗಳೆಂಬ ಮೂರು ಭೇದವನ್ನೂ, ಬ್ರಾಹ್ಮಣಾದಿ ವರ್ಣಗಳಿಗೆ ಕರ್ಮವನ್ನೂ ತಿಳಿಸಿದುದು.
ತಪೋಯಜ್ಞಗಳನ್ನು ಮಾಡಲಾರದ ಸರ್ವವರ್ಣದವರೂ ಸುಲಭವಾಗಿ. ದೇವನನ್ನು ಪಡೆಯುವ ಮಾರ್ಗವನ್ನು ತಿಳಿಸಬೇಕೆಂದು ಸತ್ಯತಪನು ಕೇಳಿದುದು.
ದುರ್ವಾಸರು, ರಸಾತಲದಲ್ಲಿ ಮುಳುಗಿದ್ದ ಭೂದೇವಿಯು ಮಾಡಿದ ಅನೇಕ ವ್ರತಗಳಲ್ಲಿ ಮೊದಲನೆಯದಾದ ಮತ್ಸ್ಯದ್ವಾದಶೀವ್ರತವನ್ನು ಸತ್ಯತಪನಿಗೆ ತಿಳಿಸಿದುದು. ಮತ್ಸ್ಯದ್ವಾದಶೀವ್ರತದ ಕಾಲ, ವಿಧಾನ, ಫಲಾದಿಗಳು.
ನಲವತ್ತನೆಯ ಅಧ್ಯಾಯ
ನಲವತ್ತೊಂದನೆಯ ಅಧ್ಯಾಯ
ನಲವತ್ತೆರಡನೆಯ ಅಧ್ಯಾಯ
ನಲವತ್ತಮೂರನೆಯ ಅಧ್ಯಾಯ
ನಲವತ್ತನಾಲ್ಕನೆಯ ಅಧ್ಯಾಯ
ನಲವತ್ತೈದನೆಯ ಅಧ್ಯಾಯ
ನಲವತ್ತಾರನೆಯ ಅಧ್ಯಾಯ
ನಲವತ್ತೇಳನೆಯ ಅಧ್ಯಾಯ
ನಲವತ್ತೆಂಟನೆಯ ಅಧ್ಯಾಯ
ನಲವತ್ತೊಂಬತ್ತನೆಯ ಅಧ್ಯಾಯ
ಐವತ್ತನೆಯ ಅಧ್ಯಾಯ
ಐವತ್ತೊಂದನೆಯ ಅಧ್ಯಾಯ
ಐವತ್ತೆರಡನೆಯ ಅಧ್ಯಾಯ
ಐವತ್ತಮೂರನೆಯ ಅಧ್ಯಾಯ