ಶ್ರೀ ತ್ರಿಪುರಾರಹಸ್ಯ – ಮಾಹಾತ್ಮ್ಯಖಂಡ (ಅಧ್ಯಾಯ ೬೧ – ೮೦)
ವಿಷಯಾನುಕ್ರಮಣಿಕೆ
ಮುನ್ನುಡಿ
61. ತ್ರಿಪುರಾಪರಮೇಶ್ವರಿಯ ಪಾರಮಾರ್ಥಿಕ ಮತ್ತು ವ್ಯಾವಹಾರಿಕ ರೂಪಗಳು; ಭಂಡಾಸುರನು ದೇವಿಯೊಡನೆ ಯುದ್ದಕ್ಕೆ ಹೊರಟುದು; ವಿಜಯನೆಂಬ ಮಂತ್ರಿಯು ಮಾಡಿದ ರಾಜನೀತಿಯ ಸಲಹೆ; ಗೂಢಚಾರರ ಮೂಲಕ ಎದುರು ಪಕ್ಷದ ಬಲಾಬಲಗಳನ್ನು ತಿಳಿಯಲು ಅಮಿತ್ರಘ್ನ, ವಿದ್ಯುನ್ಮಾಲಿ ಇವರನ್ನು ಕಳುಹಿಸಿದುದು; ಪರಾಭೂತರಾಗಿ ಅವರು ಹಿಂತಿರುಗಿದುದು; ಗೂಢಚಾರನ ಅರಿಕೆ;
62. ಅಮಿತ್ರಘ್ನನ ಅರಿಕೆ; ಭಂಡಾಸುರನು ಮನಸ್ಸಿನೊಳಗೆ ತ್ರಿಪುರಾಪರಮೇಶ್ವರಿಯಲ್ಲಿ ಭಕ್ತಿಯುಳ್ಳವನು; ಹೊರಗಿನ ವ್ಯವಹಾರದಲ್ಲಿ ರಾಕ್ಷಸರಾಜನಿಗೆ ತಕ್ಕಂತೆ ವೀರ್ಯ, ಶೌರ್ಯ ಪ್ರದರ್ಶನ; ದೇವಿಯ ಕಡೆಯಲ್ಲಿ ದಂಡನಾಯಕಿಯ ಯುದ್ಧಸಿದ್ಧತೆ;
63. ಲಲಿತಾಪರಮೇಶ್ವರಿಯ ಕುಮಾರಿಯಾದ ಎಟುವರ್ಷದ ವಯಸ್ಸಿನ ಬಾಲಾದೇವಿಯು ಯುದ್ಧೋತ್ಸಾಹವುಳ್ಳವಳು; ಬಲಾಂಬಾದೇವಿಯು ಕುಟಿಲಾಕ್ಷನನ್ನು ಮೂರ್ಚೆಗೊಳಿಸಿ, ವಿಶುಕ್ರನನ್ನು ಎದುರಿಸಿದಳು; ಸಾರಥಿಯು ಹೇಳಿದ ಅಪಾಯಶಂಕೆಯನ್ನೂ ಸಮಾಧಾನ ಪಡಿಸಿದಳು; ಬಾಲಾಂಬಾದೇವಿಯ ಪರಾಕ್ರಮ;
64. ವಿಶುಕ್ರನನ್ನೂ, ವಿಷಂಗನನ್ನೂ ಬಾಲಾದೇವಿಯು ಗುದ್ದಿ ಮೂರ್ಛೆಗೊಳಿಸಿದುದು; ಭಂಡಾಸುರನನ್ನು ಎದುರಿಸಲು ತವಕದಿಂದ ಹೋಗುತ್ತಾ ಅಡ್ಡಗಿಸಿದ ವಿಷಂಗನನ್ನು ಬಾಣದಿಂದ ಹೊಡೆದು ಮೂರ್ಛೆಗೊಳಿಸಿದುದು; ಲಲಿತಾ ಪ್ರತಿಬಿಂಬರೂಪಳಾದ ಆ ಬಾಲಾಂಬೆಯನ್ನು ಅಂತಃ ಜ್ಞಾನಿಯಾದ ಭಂಡಾಸುರನು ಬಾಣಗಳಿಂದಲೇ ಪೂಜಿಸಿದುದು; ಬಾಲಾದೇವಿಯು ಅಚ್ಚರೊಗೊಂಡ ತನ್ನ ಸಾರಥಿಗೆ ಭಂಡಾಸುರನ ಪೂರ್ವವೃತ್ತಾಂತವನ್ನು ಹೇಳಿದುದು; ದೈತ್ಯರಾಜ ದೇವೀ ಇವರಿಗೆ ಘೋರಯುದ್ಧ; ದಂಡಿನೀ ದೇವಿಯು ಬಾಲಾದೇವಿಯ ಅಸಹಾಯಶೌರ್ಯವನ್ನು ನೋಡಿ ನೆರವಿಗೆ ಬಂದುದು;
65. ಬಾಲಾದೇವಿಯನ್ನು ಅಪಾಯಶಂಕೆಯಿಂದ ತಡೆದು ಲಲಿತಾ ಪರಮೇಶ್ವರೀ ಸಮೀಪಕ್ಕೆ ಕರೆದುಕೊಂಡುಹೋಗಿ ವಿಜ್ಞಾಪಿಸಿದುದ; ಮಹಾರಾಣಿಯ ಅಭಿನಂದನೆ, ಸಂಪತ್ಕರೀ, ವಿಶುಕ್ರರಿಗೂ, ಅಶ್ವಾರೂಢಾ, ವಿಷಂಗರಿಗೂ, ದಂಡಿನೀ ಭಂಡಾಸುರರಿಗೂ ಯುದ್ಧವಾಗಿ ರಾಕ್ಷಸರು ಸೋತು ಹಿಮ್ಮೆಟ್ಟಿದುದು; ಅಮೃತೇಶಿಯು ಮೃತರಾಗಿದ್ದ ಶಕ್ತಿ ದೇವಿಯರನ್ನು ಬದುಕಿಸಿದಳು; ಅವರೊಡನೆ ಬಂದು ದಂಡಿನೀದೇವಿಯು ಈ ಜಯವನ್ನು ಮಹಾರಾಣಿಗೆ ವಿಜ್ಞಾಪಿಸಿದಳು!
66. ಭಂಡಾಸುರನು ತನ್ನ ರಾಜಧಾನಿಯಾದ ಶೂನ್ಯಕನಗರವನ್ನು ಪಡೆದು, ಅಂತಃಪುರದಲ್ಲಿ ಮೋಹಿನೀ ಮುಂತಾದ ತನ್ನ ಪತ್ನಿಯದು ಲಲಿತಾಪರಮೇಶ್ವರಿಯ ಮಹಿಮೆಯನ್ನು ನಾರದನಿಂದ ತಿಳಿದಿರಲು, ತನ್ನ ಸಂಹಾರವನ್ನೂ ಅನಿವಾರ್ಯವೆಂದು ತಿಳಿಸಿ, ಅವರನ್ನು ಸಮಾಧಾನಪಡಿಸಿ, ಸಭೆಗೆ ಬರಲು, ಅಲ್ಲಿ ಸೇನಾಪತಿಗಳು ಶತ್ರುಸಂಹಾರವನ್ನು ಪ್ರತಿಜ್ಞೆಮಾಡಿದುದು; ದುರ್ಮದನು ಯುದ್ಧದಲ್ಲಿ ಸಂಪತ್ಕರೀದೇವಿಯಿಂದ ಹತನಾದುದು;
67. ದುರ್ಮದನ ಅಣ್ಣನಾದ ಕುರಂಡನು ಅಶ್ವಾರೂಢಾದೇವಿಯಿಂದ ಯುದ್ಧದಲ್ಲಿ ಸಂಹೃತನಾದುದು; ಸೇನಾಪತಿಯಾದ ಕುಟಿಲಾಕ್ಷನಿಂದ ನಿಯುಕ್ತರಾದ ಕರಂಕಾದಿಗಳು ಸರ್ಪಿಣೀಮಾಯೆಯನ್ನು ಪ್ರಯೋಗಿಸಲು, ಶಕ್ತಿಗಳು ಪರಾಭೂತರಾದುದು; ಆಗ ದೇವಿಯು ನಕುಲೀಶ ಶಕ್ತಿಯನ್ನು ಕಳುಹಿಸಲು, ಆಕೆಯು ಸರ್ಪಗಳನ್ನೂ ರಾಕ್ಷಸತನ್ನೂ ನಾಶಮಾಡಿದುದು; ಕರಂಕ ಮುಂತಾದವರ ಸಂಹಾರ;
68. ದೈತ್ಯ ಸೇನಾನಾಯಕನಾದ ಕುಟಿಲಾಕ್ಷನು ಈ ಪರಾಜಯದಿಂದ ದುಃಖಿಸಿದುದು; ಭಂಡನ ತಮ್ಮನಾದ ವಿಶುಕ್ರನು ರಾಕ್ಷಸರೆಲ್ಲವೂ ಶಕ್ತಿಗಳೊಡನೆ ಯುದ್ಧದಲ್ಲಿ ತೊಡಗಿರಲು ಏಕಾಕಿನಿಯಾಗಿರುವ ಲಲಿತಾದೇವಿಯನ್ನು ಹಿಡಿದುತರುವೆನೆಂದುದು; ಯುದ್ಧದಲ್ಲಿ ಬಲಾಹಕ ಮುಂತಾದವರ ನೇತ್ರ ಜ್ವಾಲೆಯಿಂದ ಶಕ್ತಿಗಳು ಪರಾಹತರಾದುದು; ಶಕ್ತಿಸೇನಾ ನಾಯಕಿಯಾದ ಅಶ್ವಾರೂಢಾದೇವಿಯು ಚಕ್ರರಾಜ ರಕ್ಷಕಿಯಾದ ತಿರಸ್ಕರಿಣಿಯನ್ನು ನಿಯಮಿಸಿ ಬಲಾಹಕ ಮುಂತಾದವರನ್ನು ಸಂಹಾರಮಾಡಿಸಿದಳು; ಅಮೃತೇಶಿಯು ಮೃತರಾಗಿದ್ದ ಶಕ್ತಿಗಳನ್ನು ಬದುಕಿಸಿದುದು
69. ರಾತ್ರಿಯುದ್ಧವು ಪ್ರಾರಂಭವಾಗಲು, ಜ್ವಾಲಾಮುಖೀದೇವಿಯಿಂದ ತಮೋನಾಶನ; ಬಾಲಾಂಬಾದೇವಿಯು ಮೂವತ್ತು ಜನ ಭಂಡನ ಮಕ್ಕಳನ್ನೂ ಮೂರ್ಛೆಗೊಳಿಸಿದುದು; ಬಂಡನ ಸೋದರಳಿಯರಾದ ಉಲೂಕಾದಿಗಳು ಅಶ್ವಾರೂಢಾಸಂಪನ್ನಾಥಾದೇವಿಯರಿಂದ ಹತರಾದುದು; ಕುಟಿಲಾಕ್ಷನನ್ನು ದಂಡಿನಿಯು ಸಂಹರಿಸಿದಳು; ವಿಶುಕ್ರನು ಮಂತ್ರಿಣಿಯೊಡನೆ ಯುದ್ಧದಲ್ಲಿ ಮೂರ್ಛಿತನಾಗಲು ಅವನನ್ನು ಭಂಡನ ಸಮೀಪಕ್ಕೆ ಸಾಗಿಸಿದರು; ವಿಷಂಗನು ಮೋಸ ಯುದ್ಧದಿಂದ ಲಲಿತಾಪಹಾರಕ್ಕೆ ಬರಲು ಎಚ್ಚೆತ್ತ ಶಕ್ತಿಗಳು ತಡೆದು ಯುದ್ಧಮಾಡಿದರು;
70. ಆ ರಾತ್ರಿಯಲ್ಲಿ ದಮನಾದಿಗಳನ್ನು ಕಾಮೇಶ್ವರಿಯು ನಾಶ ಮಾಡಿದಳು; ವಿಷಂಗನು ಕಲ್ಪಿಸಿದ ಮಾಯಾಪುರುಷನನ್ನು ಕಾಮೇಶಿಯು ವಿಮಾಯಾಸ್ತ್ರದಿಂದ ನಾಶಮಾಡಿ, ಅವನನ್ನು ಶರೆಹಿಡಿದು ಲಲಿತಾಸಮೀಪಕ್ಕೆ ಸಾಗಿಸಿದಳು; ಮಂತ್ರಿಣೀ ಮುಂತಾದವರು ಅವನನ್ನು ಕೊಲ್ಲಲೆಳಸಲು ಲಲಿತಾಪರಮೇಶ್ವರಿಯು, ಬದ್ಧನು ಮೃತಸಮನು ಎಂದು ಹೇಳಿ, ಬಿಡಿಸಿ, ಈ ವೃತಾಂತವನ್ನು ಭಂಡನಿಗೆ ತಿಳಿಸಲು, ಕಳುಹಿಸಿದಳು; ಆಮೇಲೆ ಶಕ್ತಿ ಸೈನ್ಯದ ಆಯಾಸಪರಿಹಾರ ರಕ್ಷಣೆಗೆ ಜ್ವಾಲಾಮಾಲಿನಿಯು ಜ್ವಾಲೆಯ ಕೋಟೆಯನ್ನು ಕಲ್ಪಿಸಿದುದು;
71. ಪರಾಜಿತನಾದ ವಿಷಂಗನನ್ನು ಅವನ ಅಣ್ಣನಾದ ವಿಶುಕ್ರನು ಸಮಾಧಾನಪಡಿಸಿ, ಭಾರ್ಗವನಿಂದ ಪಡೆದಿದ್ದ ಶತ್ರುನಾಶಕ ಯಂತ್ರವನ್ನು ಕೊಡಲು, ಅವನು ಅದನ್ನು ಶಕ್ತಿ ಸೇನೆಯಲ್ಲಿ ಹಾಕಿದುದು; ಆ ವಿಘ್ನಯಂತ್ರದ ಪ್ರಭಾವದಿಂದ ಶಕ್ತಿಗಳು ಅಲಸರಾಗಿರಲು ದಂಡಿನಿಯು ಇದನ್ನು ಲಲಿತಾದೇವಿಗೆ ವಿಜ್ಞಾಪಿಸಿದುದು!
72. ಲಲಿತಾಪರಮೇಶ್ವರಿಯು ಶಕ್ತಿವಿಶಿಷ್ಟ ವಿಘ್ನೇಶ್ವರನನ್ನು ತನ್ನ ಮತ್ತು ಕಾಮೇಶ್ವರನ ಮುಖಸ್ಮಿತದಿಂದ ಉಂಟುಮಾಡಿ, ಆ ವಿಘ್ನಯಂತ್ರನಾಶಕ್ಕೆ ಕಳುಹಿಸಿದುದು; ಗಣೇಶನು ಆ ಯಂತ್ರವನ್ನು ನಾಶಪಡಿಸಿ ವಿಶುಕ್ರಾದಿಗಳನ್ನು ಹೊಡೆದು ಮೂರ್ಛೆಗೊಳಿಸಿದನು; ಎದುರಿಸಲು ಬಂದ ಆ ಗಣೇಶನೊಡನೆ ಯುದ್ಧಮಾಡಲು ಭಂಡನು ಗಜಾಸುರನನ್ನು ಸೃಜಿಸಿ ಕಳುಹಿಸಿದುದು; ಶಕ್ತಿಗಳೆಲ್ಲರೂ ಯುದ್ಧದಲ್ಲಿ ತೊಡಗಿದರು; ಬಾಲಾಂಬಾದೇವಿಯು ಒಬ್ಬಳೇ ಭಂಡ ಪುತ್ರರನ್ನು ಎದುರಿಸಿದುದು;
73. ಆ ಗಜಾಸುರನು ಸೃಜಿಸಿದ ಅನೇಕ ಗಜಾಸುರರನ್ನು ಗಣೇಶನು ಸೃಜಿಸಿದ ಗಣೆಶರು ಸಂಹರಿಸಿದುದು; ಗಣೇಶನು ಗಜಾಸುರನನ್ನು ಸಂಹರಿಸಿದುದು; ಭಂಡನು ಲಲಿತಾಪರಮೇಶ್ವರಿಯಿಂದ ಸಂಹಾರವನ್ನು ಬಯಸುವುದನ್ನು ತಿಳಿದು, ಮಹಾರಾಣಿಯು ಗಣೇಶನನ್ನು ಯುದ್ಧದಿಂದ ವಿಶ್ರಾಂತನನ್ನು ಮಾಡಿದುದು; ಬಾಲಾದೇವಿಯು ಮಂತ್ರಿಣೀ ದಂಡಿನೀ ದೇವಿಯರನ್ನು ಹಿಂದೆಮಾಡಿ, ಭಂಡಾಸುರನ ಮಕ್ಕಳನ್ನು ಒಬ್ಬಳೇ ಯುದ್ಧದಲ್ಲಿ ಸಂಹರಿಸಿದುದು;
74. ಬಾಲಾದೇವಿಯನ್ನು ಮಹಾರಾಣಿಯು ಅಭಿನಂದಿಸಿದುದು; ಭಂಡಾಸುರನು ಪುತ್ರಶೋಕದ ವ್ಯಾಕುಲತೆಯನ್ನು ಸ್ವಲ್ಪ ಕಾಲವಾದ ಮೇಲೆ ವಿವೇಕದಿಂದ ಸಹಿಸಿ ಲಲಿತಾಧ್ಯಾನ ಮಗ್ನನಾದುದು; ಆಗ ವಿಷಂಗ, ವಿಶುಕ್ರರು ಸಮಾಧಾನಪಡಿಸಿದುದು; ಭಂಡಾಸುರನು ತನ್ನ ಹೃದಯದಲ್ಲಿನ ತ್ರಿಪುರಾರೂಪಳಾದ ಲಲಿತಾಪರಮೇಶ್ವರಿಯಲ್ಲಿರುವ ಭಕ್ತಿಯನ್ನು ಮುಚ್ಚಿ, ದೈತ್ಯರಾಜನಂತೆ ವ್ಯವರಿಸುತ್ತಾ ಮಕ್ಕಳ ವಧೆಗಾಗಿ ದುಃಖಸಿದನು; ವಿಷಂಗನು ಚಕ್ರ ರಾಜದ ದಕ್ಷಿಣಪಾರ್ಶ್ಛದಲ್ಲಿಯೂ, ವಿಶುಕ್ರನು ವಾಮಪಾರ್ಶ್ವದಲ್ಲಿಯೂ, ಮುತ್ತಿದರು; ದಂಡಿನೀದೇವಿಯು ಸಾರಥಿಯಾದ ಭೈರವನಿಂದ ಮುಂದುಗಡೆಯಲ್ಲೂ, ಸ್ವಪ್ನೇಶ್ವರೀ ಕಾಲಸಂಕರ್ಷಿಣೀ ಶಕ್ತಿದೇವಿಯರಿಂದ ಹಿಂದುಗಡೆಯಲ್ಲೂ ಕೂಡಿ ವಿಷಂಗನನ್ನು ಎದುರಿಸದಳು; ಮಂತ್ರಿಣೀದೇವಿಯು ಶುಕಶ್ಯಾಮಲಾದೇವೀ ಮುಂತಾದವರೊಡನೆ ವಿಶುಕ್ರನನ್ನು ಎದುರಿಸಿದಳು; ಶುಕಶ್ಯಾಮಲಾ ದೇವಿಯು ಜೀಮೂತಕಾಯನನ್ನೂ, ಸಾರಿಕಾಶಕ್ತಿಯು ದೇವಾರಿಯನ್ನೂ, ಸಂಗೀತಜಕ್ತಿದೇವಿಯು ಕರಂಭನನ್ನೂ, ಸಾಹಿತ್ಯಶ್ಯಾಮಲಾದೇವಿಯು ಶಿಖಿಭಾಷಣನನ್ನೂ, ಹೀಗೆ ವಿಶುಕ್ರನ ಮಕ್ಕಳನ್ನು ಸಂಹರಿಸಿದುದು; ಅಷ್ಟರಲ್ಲಿ ಮಾಯೆಯಿಂದ ಬಂದ ವಿಶುಕ್ರನು ಲಘುಶ್ಯಾಮಲಾ ದೇವಿಯಿಂದ ಹತನಾಗಿ ಮೂರ್ಛೆಹೋಗಿದ್ದು ಎಚ್ಚತ್ತು, ಮಂತ್ರಿಣೀದೇವಿಯಿಂದ ಹತನಾದನು;
75. ಜಂಭಿನೀ, ಅಂಧಿನೀ, ಮೋಹಿನೀ ಮುಂತಾದ ಶಕ್ತಿದೇವಿಯರು ಕರಾಳವಕ್ತ್ರ ಮುಂತಾದ ಶಕ್ತಿದೇವಿಯರು ಕರಾಳವಕ್ತ್ರ ಮುಂತಾದ ವಿಷಂಗಪುತ್ರರನ್ನು ಸಂಹರಿಸಿದರು; ದಂಡಿನೀದೇವಿಯು ವಿಷಂಗನ ಮಾಯೆಯನ್ನು ನಾಶಮಾಡಿ, ಅವನನ್ನೂ ಸಂಹರಿಸಿದಳು;
76. ಸೋದರರ ಮರಣದಿಂದ ದುಃಖಿತನಾದ ಭಂಡಾಸುರನು ಲಲಿತಾದೇವಿಯಿಂದಲೇ ತನಗೆ ಮರಣ ಲಾಭವೂ, ಶ್ರೇಯಃಪ್ರಾಪ್ತಿಯೂ, ಆಗುವುದೆಂದು ತಿಳಿದು, ದುಃಖವನ್ನು ದೂರಮಾಡಿಕೊಂಡನು; ಆಮೇಲೆ ವ್ಯಾವಹಾರಿಕ ದೃಷ್ಟಿಯಿಂದ ದೈತ್ಯರಾಜನು ದೇವಿಯೊಡನೆ ಯುದ್ಧಕ್ಕೆ ಬಂದನು; ಲಲಿತಾಪರಮೇಶ್ವರಿಯೂ ಮಂತ್ರಿಣೀ, ದಂಡಿನೀ, ಬಾಲಾಂಬಾ, ಇವರೊಡನೆ ಮುಂದುವರಿದು ಭಂಡವನ್ನು ಎದುರಿಸಿದಳು; ಭಂಡಾಸುರನ ಆನಂದವನ್ನು ಗಮನಿಸಿ, ಅವನ ಸಾರಥಿಯು ಅದಕ್ಕೆ ಕಾರಣವನ್ನು ಕೇಳಿದನು; ಆಗ ಭಂಡಸುರನು ಲಲಿತಾಪರಮೇಶ್ವರಿಯು ಪರತತ್ವಸ್ವರೂಪಳೆಂಬುದನ್ನೂ, ತನ್ನ ಪೂರ್ವಜನ್ಮದ ಕಥೆಯನ್ನೂ ಸಾರಥಿಗೆ ತಿಳಿಯ ಹೇಳಿ, ದೇವಿಯಿಂದ ತನ್ನ ಮರಣವಾಗುವುದೆಂದು ವಿವರಿಸಿದನು;
77. ಭಂಡಾಸುರನು ತನ್ನನ್ನು ಎದುರಿಸಿದ ಮಂತೀಣೀ ಮುಂತಾದ ಶಕ್ತಿದೇವಿಯರಿಗೆ ತನ್ನ ಯುದ್ಧಸಾಮರ್ಥ್ಯಕೌಶಲಗಳನ್ನು ತೋರಿಸಿ, ತಾನು ಲಲಿತಾದೇವಿಯೊಡನೆ ಯುದ್ಧಮಾಡಬೇಕೆಂಬ ಆಸೆಯನ್ನು ತಿಳಿಸಿದನು; ಅವರು ಅವನನ್ನು ಜಯಿಸುವುದು ಲಲಿತಾಪರಮೇಶ್ವರೀ ದೇವಿಗೆ ಮಾತ್ರ ಸಾಧ್ಯವೆಂಬುದನ್ನೂ ಅದರ ಔಚಿತ್ಯವನ್ನೂ ತಿಳಿದು, ತಟಸ್ಧರಾದರು; ಆಮೇಲೆ ಭಂಡಾಸುರನು ಲಲಿತಾದೇವಿಯನ್ನು ಕಂಡು, ಆನಂದಭಕ್ತಿಯುತನಾಗಿ ಬಾಣಪುಷ್ಪಗಳಿಂದ ದೇವಿಯನ್ನು ಮೊದಲು ಪೂಜಿಸಿದನು; ಅನಂತರದಲ್ಲಿ ಭಂಡನಿಂದ ಸೃಜಿಸಲ್ಪಟ್ಟ ಮಧುಕೈಟಭ ಮುಂತಾದ ವಿಷ್ಣುಶತ್ರುಗಳನ್ನೂ, ಅಂಧಕ ಮುಂತಾದ ಶಿವಶತ್ರುಗಳನ್ನೂ, ಯುದ್ಧಕ್ಕೆ ಬಂದುದನ್ನು ನೋಡಿದ ಲಲಿತಾ ದೇವಿಯು ವಿಷ್ಣುವಿನ ದಶವತಾರಗಳನ್ನೂ, ಶಂಕರನನ್ನೂ ಉಂಟುಮಾಡಿ, ಅವರನ್ನು ಸಂಹಾರಮಾಡಿಸಿದಳು; ತರುವಾಯ ಭಂಡಾಸುರನ ಮಾಯಾಯುದ್ಧದಿಂದ ಎಲ್ಲರೂ ಕಂಗೆಡಲು, ಲಲಿತಾದೇವಿಯು ಪಾಶುಪತಾಸ್ತ್ರದಿಂದ ಇತರರೆಲ್ಲರನ್ನೂ ಸಂಹರಿಸಿದಳು; ತನ್ನ ಧ್ಯಾನದಲ್ಲಿ ತೊಡಗಿದ್ದ ಭಂಡಾಸುರನನ್ನು ಕಾಮೇಶಾಸ್ತ್ರದಿಂದ ಹೊಡೆದಳು; ಅದು ಭಂಡಾಸುರನನ್ನು ಅವನ ರಾಜಧಾನಿಯಾದ ಶೂನ್ಯಕಪುರ, ಹೆಂಡಿತಿ, ಮಕ್ಕಳೊಡನೆ ಸಂಹರಿಸಿತು; ಬ್ರಹ್ಮಾದಿದೇವತೆಗಳು ಬಂದು ಆನಂದದಿಂದ ದೇವಿಯನ್ನು ಗೌರವಿಸಿದರು;
78. ಬ್ರಮಾದಿ ದೇವತೆಗಳು ಮಾಡಿದ ಲಲಿತಾಪರಮೇಶ್ವರೀ ದೇವಿಯ ಸ್ತುತಿ; ಅನಂತ ಬ್ರಹ್ಮಾಂಡಗಳಿಂದ ಅನೇಕ ಬ್ರಹ್ಮಾದಿಗಳು ಬಂದು ದೇವಿಯನ್ನು ಪೂಜಿಸಿದರು; ವಿಶ್ವಕರ್ಮನು ಬ್ರಹ್ಮನ ಅಪ್ಪಣೆಯಂತೆ ಮೇರುಶೃಂಗದಲ್ಲಿ ರಚಿಸಿದ್ದ ಶ್ರೀಪುರದಲ್ಲಿ ನೆಲೆಸಿರುತ್ತಾ ಭಕ್ತರನ್ನು ಅನುಗ್ರಹಿಸುತ್ತಿರಬೇಕೆಂಬ ದೇವಾದಿಗಳ ಪ್ರಾರ್ಥನೆಯನ್ನು ದೇವಿಯು ಅಂಗೀಕರಿಸಿದಳು; ಬೃಹಸ್ಪತಿ, ಬ್ರಹ್ಮಾ, ವಸಿಷ್ಠ ಮುಂತಾದ ಮಹನೀಯರು ದೇವಿಯನ್ನು ಅಲ್ಲಿ ರತ್ನಸಿಂಹಾಸನದಲ್ಲಿ ಪಟ್ಟಾಭಿಷೇಕದಿಂದ ಪೂಜಿಸಿದರು; ಇಂತಹ ಶ್ರೀಪುರವನ್ನು ಅಗಸ್ತ್ಯನು ಕಾಣಲಾಗದಿರಲು ಕಾರಣವನ್ನು ಕೇಳಲು ಹಯಗ್ರೀವನು ತ್ರಿಪುರಾದೇವಿಯ ಉಪಾಸನೆಯನ್ನು ಗುರುವಿನಿಂದ ದೀಕ್ಷಾಗ್ರಹಣಪುರಸ್ಸರವಾಗಿ ಮಾಡದಿರುವುದೇ ಕಾರಣವೆಂದೂ ತಿಳಿಸಿದನು; ಸಿದ್ಧಿಯ ಲಾಭಕ್ಕೆ ಮಾಹಾತ್ಮ್ಯಾಶ್ರವಣವೇ ಕಾರಣವೆಂದೂ ವಿವರಿಸಿದನು;
79. ಪರಶುರಾಮನ ಭಕ್ತಿ, ಸಂತೋಷಗಳಿಂದ ಕೂಡಿ ದತ್ತಾತ್ರೇಯ ಗುರುವನ್ನು ನಮಸ್ಕರಿಸಿ, ಸಂವರ್ತವನ್ನು ಗುರುಭಕ್ತಿಪ್ರವರ್ತಕನಾದುದರಿಂದ ಮನಸ್ಸಿನಲ್ಲಿ ಸ್ತುತಿಸಿ, ಅಗಸ್ತ್ಯನು ಶ್ರೀಪುರದ ದರ್ಶನಕ್ಕೆ ಅನರ್ಹನಾಗಲು ಕಾರಣವನ್ನು ಕೇಳಲು, ದ್ವಿಜತ್ವಕ್ಕೆ ಉಪನಯನವು ಹೇಗೋ ಹಾಗೆ, ತ್ರಿಪುರೋಪಾಸನೆಯ ಸಿದ್ಧಿಗೆ ದೀಕ್ಷಾಗ್ರಹಣವು ಆವಶ್ಯಕವೆಂದು ತಿಳಿಸಿದನು; ವೈದಿಕ ಕರ್ಮಗಳೂ ತ್ರೆಗುಣ್ಯ ವಿಷಯಗಳೆಂದೂ, ಬ್ರಾಹ್ಮಣ್ಯದ ಹಾಗೆ ಶ್ರೀವಿದ್ಯೋಪಾಸನೆಯನ್ನು ದೀಕ್ಷಾಗ್ರಹಣದಿಂದ ಕಾಪಾಡಿಕೊಂಡಿರಬೇಕೆಂದೂ, ಎಲ್ಲರಲ್ಲೂ ಇರುವ ಚಿಚ್ಛಕ್ತಿಯೇ ತ್ರಿಪುರಾ ಪರಮೇಶ್ವರೀ ಎಂದೂ, ಎಲ್ಲ ವಸ್ತುವೂ ಚಿಚ್ಪಕ್ತಿಯ ಸತ್ವಗುಣದಿಂದಲೇ ಉಂಟಾಗುತ್ತದೆಂದೂ, ವೇದಾಗ ಮಗಳ ತಾತ್ಪರ್ಯಸಾಮರಸ್ಯವನ್ನು ತಿಳಿಯ ಹೇಳಿದನು; ಅಗಸ್ತ್ಯನ ಸಂಚಿತವಾಸನೆಗಳಿಂದ ಶ್ರೀಪುರದರ್ಶನದಲ್ಲಿ ಅಡ್ಡಿಯಾಗಿತ್ತೆಂದೂ, ಪತ್ನಿಯಾದ ಲೋಪಾಮುದ್ರಾ ದೇವಿಯಿಂದ ದೀಕ್ಷೆಯನ್ನು ಪಡೆದು ಸಿದ್ಧನಾದನೆಂದೂ ವಿವರಿಸಿದನು; ಸಂಸ್ಕತ ಸಾಹಿತ್ಯದಲ್ಲಿ ತಂತ್ರಶಾಸ್ತ್ರ ಗ್ರಂಥಗಳ ಸ್ಥಾನ, ವೇದಾಂತದರ್ಶನದೊಡನೆ ತಂತ್ರಶಾಸ್ತ್ರಗಳ ಸಿದ್ಧಾಂತ ಸಾಮರಸ್ಯ, ಉಪಾಸನೆಯು ಜ್ಞಾನ ಸಾಧನವು, ಆಚಾರ ವಿಶೇಷಗಳ ಔಚಿತ್ಯನಿರೂಪಣೆಗಳು;
80. ಜಾಗ್ರತೆಯಾಗಿ ಫಲವನ್ನುಂಟುಮಾಡುವ ತ್ರಿಪುರೋಪಾಸನ ವಿಧಾನವನ್ನು ಪರಶುರಾಮನು ಕೇಳಲು, ದತ್ತಗುರುವು ತ್ರಿಪುರಾಮೂರ್ತಿಪೂಜಾ, ಉತ್ಸವ, ಶ್ರೀವಿದ್ಯಾಮಂತ್ರ, ಜಪ, ಧ್ಯಾನ, ಶ್ರೀಚಕ್ರಸ್ಥಾಪನ, ದಾನ ಪೂಜಾದಿ ಕರ್ಮಗಳನ್ನು ವಿವರಿಸಿದನು; ಕಡೆಯಲ್ಲಿ ತ್ರಿಪುರಾಮಾಹಾತ್ಮ್ಯ ಶ್ರವಣವು ಎಲ್ಲಕ್ಕೂ ಮೂಲವಾದ ಮೊದಲ ಕಾರಣವೆಂದು ಹೇಳಿದುದು; ತ್ರಿಪುರಾನಾಮೋಲ್ಲೇಖ ಮಂಗಳದಿಂದ ಈ ಗ್ರಂಥವು ಮುಗಿದಿರುವುದು;