ಶ್ರೀ ತ್ರಿಪುರಾರಹಸ್ಯ – ಮಾಹಾತ್ಮ್ಯಖಂಡ (ಅಧ್ಯಾಯ ೪೧ – ೬೦)
ವಿಷಯಾನುಕ್ರಮಣಿಕೆ
ಮುನ್ನುಡಿ
41. ಶ್ರೀಕಾತ್ಯಾಯಿನೀ ದೇವಿಯ ಕಥೆಯನ್ನು ಹೇಳಬೇಕೆಂದು ಪರಶುರಾಮನು ಪ್ರಾರ್ಥಿಸಲು ದತ್ತಾತ್ರೇಯಮುನಿಯು ಅದನ್ನು ಹೇಳಿದುದು; ಶ್ರೀಕೃಷ್ಣನು ಯಾದವರೊಡನೆ ದ್ವಾರಕಾನಗರಕ್ಕೆ ಹೋದಮೇಲೆ, ಶುಂಭ, ನಿಶುಂಭ ಎಂಬ ರಾಕ್ಷಸರು ಗೋಕುಲಕ್ಕೆ ಬಂದು ನಂದ, ಗೋಪಕನ್ಯೆಯರು ಮುಂತಾದವರನ್ನು ಸೆರೆಹಿಡಿದುಕೊಂಡು ಹೋಗಲು ಪ್ರಯತ್ನಿಸಿದುದು; ಯಶೋದೆಯು ಕಾತ್ಯಾಯನನ ಬುದ್ಧಿವಾದದಂತೆ ಕಾತ್ಯಾಯನೀದೇವಿಯನ್ನು ಪ್ರಾರ್ಥಿಸಲು, ಆ ದೇವಿಯು ಅವರೊಡನೆ ಯುದ್ಧಮಾಡಿ ಸೋಲಿಸಿ ಓಡಿಸಿದುದು; ನಿಶುಭನು ವಿಂಧ್ಯಪರ್ವತದ ಗುಹೆಯಲ್ಲೂ, ಶುಂಭನು ಗಂಗಾನದಿಯಲ್ಲೂ ಅಡಗಿರಲು, ದೇವಿಯು ಕಾಳೀ ಮುಂತಾಗಿ ಮೂರು ರೂಪಗಳನ್ನು ತಾಳಿ, ಅವರನ್ನು ಸಂಹರಿಸಿದುದು; ಕಲಿಯುಗದ ಅನಾಚಾರಗಳ ವರ್ಣನೆಯನ್ನು ಕೇಳಿ ಅವರ ಉದ್ಧಾರಕ್ಕಾಗಿ ದೇವಿಯು ಅಲ್ಲಿ ನೆಲೆಸಿದುದು;
42. ಶುಂಭ, ನಿಶುಂಭ, ಎಂಬ ರಾಕ್ಷಸರ ಕಥೆಯನ್ನು ಹೇಳಬೇಕೆಂದು ಭಾರ್ಗವರಾಮನು ಕೇಳಲು ದತ್ತಗುರುವು ಹೇಳಿದುದು; ಆದಿದೈತ್ಯರಾದ ಮಧು, ಕೈಟಭರ ವಂಶದಲ್ಲಿ ಶುಂಭ, ನಿಶುಂಭರು ಹುಟ್ಟಿ, ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಅವನಿಂದ ಪುರುಷರು ತಮ್ಮನ್ನು ಕೊಲ್ಲಲಾಗದಿರುವಂತೆ ವರವನ್ನು ಪಡೆದು, ಮೂರು ಲೋಕಗಳನ್ನೂ ಜಯಿಸಿ, ಸ್ವರ್ಗವನ್ನು ಆಕ್ರಸಿ, ಇಂದ್ರಾದಿಗಳನ್ನು ಓಡಿಸಿದುದು; ದೇವತೆಗಳು ಬ್ರಹ್ಮನಲ್ಲಿ ಮೊರೆ ಇಡಲು, ಅವನು ಶಿವ, ವಿಷ್ಣುಗಳೊಡನೆ, ಗಂಗಾತೀರದಲ್ಲಿ ತ್ರಿಪುರಾ ದೇವಿಯನ್ನು ಆರಾಧಿಸಿದುದು; ತ್ರಿಪುರಾದೇವಿಯು ಪ್ರಸನ್ನಳಾಗಿ ಗೌರೀದೇವಿಯನ್ನು ಕಳುಹಿಸಲು, ಅವಳು ದೇವತೆಗಳ ದುಃಖದಿಂದ ಕೋಪಗೊಂಡು ಕಾಳೀರೂಪವನ್ನು ಪಡೆದುದು; ಅವಳಿಂದ ಹೊರಹೊಮ್ಮಿದ ಶಕ್ತಿಗೆ ಚಡಿಕಾ ಎಂದು ಬ್ರಹ್ಮನು ಹೆಸರಿಟ್ಟುದು; ಈ ವಿಷಯವನ್ನು ತಿಳಿಡ ಚಂಡಮುಂಡಾಸುರರು ಸುಂದರಿಯಾದ ಶಕ್ತಿಯನ್ನು ಕಾಮಿಸಿ ಹಿಡಿಯಹೋಗಲು, ಅವಳಿಂದ ಪರಾಜಿತರಾಗಿ ಹೋಗಿ ಶುಭ ನಿಶುಂಭರಿಗೆ ಹೇಳಿದುದು; ಸುಗ್ರೀವದೂತನನ್ನು ಅವನು ಕಳುಹಲು, ಅವನು ಬಂದು ದೈತ್ಯವಧೆಗಾಗಿ ದೇವಿಯು ಅವತರಿಸಿರುವುದನ್ನು ದೇವಿಯಿಂದಲೇ ತಿಳಿದುಹೋಗಿ ಹೇಳಿದುದು; ಧೂಮ್ರಲೋಚನನನ್ನು ಕಳುಹಿಸಿದುದು;
43. ಚಂಡಿಕಾದೇವಿಗೆ ವಿಷ್ಣುವು ದೇವಪ್ರಾರ್ಥನಾನುಸಾರವಾಗಿ ಸಿಂಹರೂಪವನ್ನು ತಾಳಿ ವಾಹನವಾದುದು; ದೇವಿಯು ಹುಂಕಾರದಿಂದಲೇ ಧೂಮ್ರಲೋಚನನನ್ನು ಸಂಹರಿಸಲು, ಸಿಂಹವು ದೈತ್ಯರ ಸೇನೆಯನ್ನು ನಾಶಮಾಡಿದುದು; ಆಮೇಲೆ ಶುಂಭನಿಶುಂಭರಿಂದ ಕಳುಹಲ್ಪಟ್ಟ ಚಂಡ ಮುಂಡರನ್ನೂ ದೇವಿಯು ಸಂಹರಿಸಿದುದು; ಶುಂಭನ ಸೇನೆಯನ್ನು ದೇವಿಯು ಸೃಜಿಸಿದ ಬ್ರಾಹ್ಮ್ಯಾದಿಸಕ್ತಿಗಳು ನಾಶಮಾಡಲು, ರಕ್ತಬೀಜಾಸುರನು ಯುದ್ಧಕ್ಕೆ ಮುಂದಾದುದು; ಅವನ ದೇಹದಿಂದ ಹೊರಟ ರಕ್ತಬಿಂದುಗಳನ್ನು ದೇವಿಯ ಆಪ್ಪಣೆಯಂತೆ ಕಾಳಿಯು ಪಾನ ಮಾಡುತ್ತಾ ಬರಲು, ಶಕ್ತಿಗುಂದಿದ ರಕ್ತಬೀಜಾಸುರನನ್ನು ಸಂಹರಿಸಿದುದು; ಆಮೇಲೆ ಯುದ್ಧಕ್ಕೆ ಬಂದ ನಿಶುಂಭಾ ಸುರನನ್ನು ದೇವಿಯು ಖಡ್ಗದಿಂದ ಕೊಂದುದು; ಆ ಬಳಿಕ ಶುಂಭನೇ ಯುದ್ಧಕ್ಕೆ ಬಂದುದು; ದೇವಿಯೂ ಇತರಶಕ್ತಿಗಳನ್ನು ಉಪಸಂಹರಿಸಿ, ಒಬ್ಬಳೇ ಅವನೊಡನೆ ಯುದ್ಧಮಾಡಿದುದು; ಅವನನ್ನು ದೇವಿಯು ಕಡೆಗೆ ಶೂಲಾಯುಧದಿಂದ ಸಂಹರಿಸಿದದು; ದೇವತೆಗಳು ದೇವಿಯನ್ನು ಸ್ತುತಿಸಿದುದು; ತ್ರಿಪುರಾದೇವಿಯೇ ಬ್ರಹ್ಮಾ ವಿಷ್ಣು ರುದ್ರರಿಗೂ ಶಕ್ತಿದಾಯಕಳು;
44. ತ್ರಿಪುರಾದೇವಿಯ ಅಂಶರಾದ ಕಾತ್ಯಾಯನೀ, ಚಂಡಿಕಾದೇವಿಯರ ಕಥೆಯನ್ನು ಕೇಳಿದಮೇಲೆ, ದೇವಿಯ ಇತರ ಕಥೆಯನ್ನು ಕೇಳಲು, ದತ್ತಗುರುವು ಪರಶುರಾಮನಿಗೆ ಕಾಳಿಕಾ ದೇವಿಯ ಕಥೆಯನ್ನು ಹೇಳಿದುದು; ದ್ವಿತಿಪುತ್ರರಾದ ಕಾಲ ಖಂಜರು ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡು, ಪುರುಷರಿಂದ ಅಜೇಯತ್ವವನ್ನೂ, ಪ್ರಾಕೃತಚರಿತ್ರರಾದ ಸ್ತ್ರೀಯರಿಂದಲೂ ಅಜೇಯತ್ವವನ್ನೂ ವರವನ್ನಾಗಿ ಪಡೆದುದು; ಜಿತರಾದ ದೇವತೆಗಳ ದುರ್ದಶೆ; ಅವರಿಂದ ಪ್ರಾರ್ಥಿತನಾದ ಬ್ರಹ್ಮನು ಅಪ್ರಾಕೃತಚರಿತ್ರಳಾದ ಸ್ತ್ರೀಯನ್ನು ಪಡೆಯಲು ತ್ರಿಪುರಾದೇವಿಯನ್ನು ಪ್ರಾರ್ಥಿಸಿದುದು; ಇದನ್ನು ತಿಳಿದು ದೈತ್ಯರು ಆ ದೇವತೆಗಳನ್ನು ಸಂಹರಿಸಲು ಬಂದುದು; ತ್ರಿಪುರಾದೇವಿಯು ಮಹಾಶಬ್ದದೊಡನೆ ಆವಿರ್ಭವಿಸಿ, ಆ ರಾಕ್ಷಸರನ್ನು ಸಂಹರಿಸಿ, ಕಾಳಿಕಾದೇವಿಯನ್ನು ಹುಂಕಾರದಿಂದ ಹೊರಹೊಮ್ಮಿಸಿ ಕಳುಹಿಸಿದುದು; ಅವಳು ಪಾನಮತ್ತಳಾಗಿ ಆ ರಾಕ್ಷಸರನ್ನು ಸಂಹರಿಸಿ, ಕಾಮದಿಂದ ಪತಿಯನ್ನು ಅಪೇಕ್ಷಿಸಿದುದು; ತ್ರಿಪುರಾದೇವಿಯ ಅಪ್ಪಣೆಯಂತೆ ಶಂಕರನು ಮಹಾಕಾಲ ರೂಪದಲ್ಲಿ ಕಾಳಿಯ ಇಚ್ಛೆಯನ್ನು ನೆರವೇರಿಸಿದುದು; ರಾಕ್ಷಸರನ್ನೆಲ್ಲರನ್ನೂ ಕೊಂದು ಮತ್ತಳಾದ ಕಾಳಿಯು ತಾಂಡವವಾಡಲು, ಜಗತ್ತು ನಡುಗಲು, ಅದರ ರಕ್ಷಣೆಗಾಗಿ ವಿಷ್ಣುವಿನ ಪ್ರಾರ್ಥನಾನುಸಾರವಾಗಿ ಮಹಾಕಾಲನು ಸಮಾಧಾನ ಪಡಿಸಿದುದು; ಕಾಳಿಯು ಅಲ್ಲಿ ನೆಲೆಸಿದುದು;
45. ದತ್ತಗುರುವು ದುರ್ಗಾऽऽಖ್ಯಾನವನ್ನು ಭಾರ್ಗವನಿಗೆ ಹೇಳಿದುದು; ಐಶ್ವರ್ಯಮತ್ತನಾದ ಇಂದ್ರನು ವಿಂಧ್ಯಶಿಖರದಲ್ಲಿ ತಪಸ್ವಿಯಾದ ಸುನೇತ್ರಮುನಿಯ ಹೆಂಡಿತಿಯೂ, ಗೌತಮ ಪುತ್ರಿಯೂ, ಪತಿವ್ರತೆಯೂ, ಆದ ಸುಮಿತ್ರೆಯನ್ನು ಅವಳ ಕುರೂಪಕ್ಕಾಗಿ ‘ಮಹಿಷೀ’ ಎಂದು ಹಾಸ್ಯಮಾಡಿದುದು; ಶಚಿಯು ಮಹಿಷರೂಪದಿಂದಲೇ ನಿನ್ನ ಶತ್ರುವನ್ನು ಪ್ರಸವಿಸಲಿ ಎಂದು ಆಕೆಯು ಶಪಿಸಿದುದು; ಇಂದ್ರನಿಂದ ಪ್ರಾರ್ಥಿಸಲ್ಪಟ್ಟ ಸುನೇತ್ರನು, ಮುದ್ಗಲಋಷಿಯ ಪತ್ನಿಯು ವಾಯುವನ್ನು ತಡೆದಿದ್ದುದನ್ನೂ, ಇಂದ್ರಾದಿಗಳ ಸೇವೆಯಿಂದ ಮೆಚ್ಚಿ ವಾಯುವನ್ನು ಬಿಟ್ಟುದನ್ನೂ ತಿಳಿಸಿ, ಹಾಗೆ ಸುಮಿತ್ರೆಯನ್ನೇ ಪ್ರಾರ್ಥಿಸ ಹೇಳಿದುದು; ಶಚಿಯು ಕೈಟಭನ ವೀರ್ಯವುಳ್ಳ ಹುಲ್ಲನ್ನು ಮಹಿಷಿಯಾಗಿ ತಿಂದು, ಮಹಿಷನನ್ನು ಪ್ರಸವಿಸಿ ಹೋದುದು; ತ್ರಿಪುರಾರಾಧನೆಯಲ್ಲಿದ್ದ ದೇವತೆಗಳನ್ನು ಬಿಡಾಲಾಕ್ಷನು ಕೊಲ್ಲ ಬಂದುದು; ಶಿವ, ವಿಷ್ಣ್ವಾದಿದೇವತೆಗಳಿಂದ ಹೊರಟ ತೇಜಸ್ಸುಳ್ಳ ಕೋಪವು ಸ್ತ್ರೀರೂಪವಾಗಿ ದುರ್ಗಾರೂಪದಲ್ಲಿ ಸಿಂಹಾರೂಢವಾಗಿ ಮಹಿಷಾಸುರ ವಧೆಗೆ ಹೊರಟುದು;
46. ಮಹಿಷನ ಸೇನಾಪತಿಯಾದ ಬಿಡಾಲಾಕ್ಷನು ಪಲಾಯನ ಮಾಡಲು, ಯುದ್ಧದಲ್ಲಿ ಸಿಂಹವು ರಾಕ್ಷಸಸೇನೆಯೊಳಕ್ಕೆ ನುಗ್ಗಿ, ಉದಗ್ರ ಮುಂತಾದ ಐದು ಜನ ಮಹಿಷನ ಸೇನಾ ನಾಯಕರನ್ನೂ, ಉದಗ್ರ ಮುಂತಾದ ಎಂಟು ಜನ ಮಹಿಷಾಸುರನ ಮಕ್ಕಳಲ್ಲಿ, ಉದಗ್ರನನ್ನೂ ಸಂಹರಿಸಿತು; ದೇವಿಯು ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು, ತೆನೇ ಉಳಿದವರನ್ನು ಸಂಹರಿಸದಳು; ಕಡೆಗೆ ಮಹಿಷನೂ ಯುದ್ಧದಲ್ಲಿ ದೇವಿಯಿಂದ ಸಂಹೃತನಾದುದು; ದೇವಿಯನ್ನು ದೇವತೆಗಳು ಸ್ತುತಿಸಿದುದು;
47. ಶಿವನೇತ್ರಾಗ್ನಿಯಿಂದ ಭಸ್ಮವಾದ ಕಾಮನು ತ್ರಿಪುರಾದೇವಿಯ ಕಣ್ಣಿನಲ್ಲಿ ಅಡಗಲು, ಪುನಃ ಅವನು ಆವಿರ್ಭವಿಸಿದುದು ಹೇಗೆಂದು ಭಾಗವನು ಕೇಳಲು ದತ್ತಗುರುವು ಲಲಿತಾ ದೇವಿಯ ಕಥೆಯನ್ನು ಹೇಳಿದುದು; ಭಂಡಾಸುರನು ತಪೋಬಲದಿಂದ ಅನೇಕ ಬ್ರಹ್ಮಾಂಡಗಳನ್ನೂ ತ್ರಿಮೂರ್ತಿಗಳನ್ನೂ ಸೃಜಿಸಿ ಆಳುತ್ತಾ ಲೋಕಪೀಡಕನಾದುದು; ಲಲಿತಾಪರಮೇಶ್ವರೀ ರೂಪದಿಂದ ತ್ರಿಪುರಾದೇವಿಯು ಅವನನ್ನು ಕೊಂದುದು; ದೇವಪ್ರಾರ್ಥನೆಯಂತೆ ಕಾಮನು ಉಜ್ಜೀವಿಸಿದುದು; ಕಾಮನು ಅನಂಗನಾಗಿದ್ದರೂ ಅವನನ್ನು ತನ್ನ ಅಪಾಂಗದಿಂದ ಉಜ್ಜೀವಿಸಿದ ಅವನಿಂದ ಆಹತನಾಗಿ ಶಿವನು ಗೌರೀದೇವಿಯಲ್ಲಿ ಷಣ್ಮುಖನನ್ನು ಪಡೆದುದು; ಕಾಲಾಂತರದಲ್ಲಿ ಮೋಹಿನೀರೂಪದಲ್ಲಿದ್ದ ವಿಷ್ಣುವನ್ನೂ ಶಿವನು ಸಂಗಮಿಸಿದುದು;
48. ದೇವಾಸುರಯುದ್ಧದಲ್ಲಿ ಸೋತ ದೇವತೆಗಳು ರಾಕ್ಷಸರೊಡನೆ ಸಮುದ್ರಮಥನದಿಂದ ಅಮೃತವನ್ನು ಪಡೆದುದು; ರಾಕ್ಷಸರಿಗೆ ತಪ್ಪಿಸಿ ದೇವತೆಗಳಿಗೆ ಅದನ್ನು ಕೊಡಲು ವಿಷ್ಣುವು ಮೋಹಿನೀರೂಪದಿಂದ ಅಪಹರಿಸಿದುದು; ಶಿವನು ಮೋಹಿನೀರೂಪವನ್ನು ನೋಡಬಯಸಿದುದು; ತನ್ನ ಇಂದ್ರಿಯ ನಿಗ್ರಹದ ಹೆಮ್ಮೆಯನ್ನು ಹೇಳಲು, ವಿಷ್ಣುವು ತ್ರಿಪುರಾ ದೇವಿಯನ್ನು ತಪಸ್ಸಿನಿಂದ ಮೆಚ್ಚಿಸಿ ತ್ರಿಪುರಾಂಶವನ್ನು ಪಡೆದು, ಶಿವನು ಮೋಹಿತನಾಗುವಂತೆ ಮಾಡಿದುದು; ಶಿವನು ಮೋಹಿತನಾಗಿ ನಾಚಿಕೆಗೊಂಡುದು; ಕಾಮನು ವಿದ್ಯಾಪ್ರವರ್ತಕನೂ ತ್ರಿಪುರಾಭಕ್ತನೂ ಆದುದು; ಮನ್ವಾದಿಗಳು ವಿದ್ಯಾಪ್ರವರ್ತಕರೂ, ಪ್ರಾತಸ್ಮರಣೀಯರಾದುದು;
49. ಭಂಡಾಸುರನ ಕಥೆಯ ವಿಸ್ತಾರವರ್ಣನೆ; ಅಗಸ್ತ್ಯಮುನಿಯು ವಿಷ್ಣುವನ್ನು ತಪಸ್ಸಿನಿಂದ ಒಲಿಸಿಕೊಂಡು ಲಲಿತಾದೇವಿಯ ಕಥೆಯನ್ನು ಹೇಳೆನ್ನಲು, ಅವನ ಅಂಶವುಳ್ಳ ಹಯಗ್ರೀವನು ವಿಷ್ಣುವಿನ ಅಪ್ಪಣೆಯಂತೆ ಅಗಸ್ತ್ಯನಿಗೆ ಅದನ್ನು ಹೇಳಿದುದು; ಶಂಕರನಿಂದ ಅಭಯವರವನ್ನು ಪಡೆದು ಮತ್ತನಾದ ಭಂಡಾಸುರನು ಮೂರುಲೋಕಗಳನ್ನು ಜಯಿಸಿ, ಭೂಲೋಕದಲ್ಲಿ ವಿಶುಕ್ರನನ್ನೂ, ಪಾತಾಳದಲ್ಲಿ ವಿಷಂಗನನ್ನೂ ಆಳಲು ನಿಯಮಿಸಿ, ತಾನು ಸ್ವರ್ಗದಲ್ಲಿ ಇಂದ್ರಾದಿಗಳನ್ನು ಸೇವೆಗೆ ನಿಯಮಿಸಿದುದು; ಶಚಿಯು ಗುಟ್ಟಾಗಿ ಪಾರ್ವತಿಯನ್ನು ಆಶ್ರಯಿಸಿದುದು; ಔಶನಸನಿಂದ ದೇವತೆಗಳ ಬಿಡುಗಡೆ; ದೇವತೆಗಳಿಂದ ಶೋಣಿತಪುರದ ನಾಶವಾಗಲು ಭಂಡನು ಸ್ವರ್ಗವನ್ನು ನಾಶಮಾಡಿ, ಶೂನ್ಯ ಪಟ್ಟಣದಲ್ಲಿದ್ದುದು; ಅನೇಕ ಬ್ರಹ್ಮಾಂಡಗಳನ್ನು ಸೃಜಿಸಿ ಆಳುತ್ತಿದ್ದುದು;
50. ಭಂಡಾಸುರನಿಂದಾದ ಇಂದ್ರಜಯವನ್ನು ವಿಸ್ತಾರವಾಗಿ ಹೇಳೆಂದು ಕೇಳಿದ ಅಗಸ್ತ್ಯನಿಗೆ ಹಯಗ್ರೀವನು ಹೇಳಿದುದು; ಕಾಮನು ಶಿವಕೋಪಾಗ್ನಿಯಿಂದ ಭಸ್ಮವಾಗಲು, ಗಣೇಶನು ಆಭಸ್ಮವನ್ನು ಕೂಡಿಸಿ ಮನುಷ್ಯರೂಪವನ್ನು ಕೊಟ್ಟುದು; ಪಾರ್ವತಿಯ ಕೋರಿಕೆಯಂತೆ ಶಿವನು ಅದನ್ನು ಬದುಕಿಸು ಗಣೇಶನ ಆಟಕ್ಕೆ ಕೊಟ್ಟುದು; ಅವನು ತಾಮಸರಾರಾಕ್ಷಸನಾದುದು; ಅವನು ತಪಸ್ಸಿನಿಂದ ಶಿವನನ್ನು ಮೂರಾವೃತ್ತಿ ಮೆಚ್ಚಿಸಿ, ಅಜೇಯತ್ವವನ್ನೂ, ದೇವಾಸುರರಿಂದಲೂ, ಯೋನಿಜರಿಂದಲೂ ಅಮರತ್ವವನ್ನೂ ಪಡೆದುದು. ಅವನು ಗೌರೀದೇವಿಗೆ ಈ ಅಂಶವನ್ನು ತಿಳಿಸಿ ಪಾತಾಳದಲ್ಲಿ ಆಳುತ್ತಿದುದು, ತ್ರಿಲೋಕಜಯವನ್ನು ಪಡೆದುದು; ಕಡೆಗೆ ಶಚಿಯನ್ನೂ ಕಾಮಿಸಲು, ಬ್ರಹ್ಮನು ಅವನನ್ನು ಭಂಡನೆಂದು ಹೇಳಿದುದು; ದೇವತೆಗಳನ್ನು ಜಯಿಸಿ ತನ್ನ ಸೇವೆಗೆ ಇಟ್ಟುದು; ಇದನ್ನು ಕೇಳಿ ತಾರಕಾಸುರನೂ ತನ್ನ ಮಕ್ಕಳನ್ನು ಭಂಡಾಸುರನಿಗೆ ಕೊಟ್ಟು ತಾನೂ ಅವನೊಡನೆ ಸೇರಿದುದು; ಆಮೇಲೆ ಬ್ರಹ್ಮಾದಿಗಳನ್ನೂ ಜಯಿಸಲು ಹೋದುದು; ಕೈಲಾಸಕ್ಕೂ ಹೋಗಿ ಗಣಪತಿಯಿಂದ ಪೆಟ್ಟು ತಿಂದು ಮೂರ್ಚ್ಪಿತನಾಗಿ ಅಡೆಗೆ ಗೌರಿಯಿಂದ ಜಿತನಾಗಿ, ಶಿವನ ವರದಿದ ಪಾರಾಗಿ, ಹಿಂತಿರುಗಿ ಶೂನ್ಯನಗರಕ್ಕೆ ಬಂದುದು;
51. ಭಂಡನಿಂದ ಜಿತರಾದದೇವತೆಗಳು ಅವನಿಗೆ ಸೇವಕರಾಗಿದ್ದುದು; ಬೃಹಸ್ಪತಿಯ ಬುದ್ಧಿವಾದದಂತೆ ವಾಯು ಸಹಾಯದಿಂದ ಹಿಮಾಲಯದಲ್ಲಿ ದೇವತೆಗಳೆಲ್ಲರೂ ತ್ರಿಪುರಾಪೂಜೆಯನ್ನು ಮಾಡಿದುದು; ಕಡೆಗೆ ಯಾಗದ ಅಂತ್ಯದಿನದಲ್ಲಿ ಮಹಾಶಬ್ದದೊಡನೆ ದೇವಿಯು ಅವಿರ್ಭವಿಸಲು, ಗುರುವು ದೇವಿಯನ್ನು ಸ್ತುತಿಸಿದುದು; ಜಯಜನನಿ
52. ಭಂಡಾಸುರನಾಶವನ್ನು ಗುರುವು ಪ್ರಾರ್ಥಿಸಲು, ದೇವತೆಗಳು ತ್ರಿಪುರಾರಾಧನೆಯನ್ನು ಮಾಡಬೇಕೆಂದು ಶಿವನು ಹೇಳಿದುದು; ಅವರು ಹಾಗೆ ಮಾಡಲು ಶುಕ್ರಾಚಾರ್ಯನು ಇದನ್ನು ತಿಳಿದು ದೈತ್ಯರನ್ನು ಎಚ್ಚರಿಸಿ ಕಳುಹಲು, ದೇವಿಯು ದೇವತೆಗಳನ್ನು ಜ್ವಾಲಾಮಾಲಿನಿಯಿಂದ ಮರೆಮಾಡಲು, ಅವರು ಹಿಂತಿರುಗಿದುದು; ಯಾಗ ಪೂರ್ತಿಯಾಗಿ, ಪೂರ್ಣಾಹುತಿಯಲ್ಲಿ ದೇವಿಯು ಮೈದೋರಿ ವರವನ್ನು ಕೊಟ್ಟದ್ದು;
53. ಬ್ರಹ್ಮಾದಿಗಳ ಕೋರಿಕೆಯಂತೆ ದೇವಿಯು ಜ್ವಾಲಾಮಾಲಿನೀ ರೂಪದಲ್ಲಿ ಮೇರುಶೃಂಗದಲ್ಲಿ ವಿಶ್ವಕರ್ಮನಿಂದ ನಿರ್ಮಿತವಾದ ನಗರದಲ್ಲಿ ಕಾಮೇಶ್ವರ ಕಾಮೇಶ್ವರೀರೂಪದಲ್ಲಿ ನೆಲೆಸಿದುದು; ಶಿವವಿಷ್ಣ್ವಾದಿಭಕ್ತಿದ್ವಾರಕವಾದ ತ್ರಿಪುರಾ ಭಕ್ತಿಯೇ ಶ್ರೇಯಸ್ಸಿಗೆ ಕಾರಣ; ಅಗಸ್ತ್ಯನ ಹೆಂಡಿತಿಯಾದ ಲೋಪಾಮುದ್ರೆಯು ತನ್ನ ತಂದೆಯಂತೆ ತ್ರಿಪುರಾಪೂಜೆಯಿಂದ ಶ್ರೀವಿದ್ಯೆಯನ್ನು ಪಡೆದು ಉಪಾಸನೆ ಮಾಡಿ, ಶ್ರೀಸೂಕ್ತವಿಧಾನದಿಂದ ತ್ರಿಪುರಾರ್ಚನೆಯನ್ನು ಮಾಡಿದುದು; ಶ್ರಿಪುರವನ್ನು ವರ್ಣಿಸಿದುದು;
54. ಶ್ರೀಪುರನಿರ್ಮಾಣಕ್ಕಾಗಿ ಚತುರ್ದ್ವಾರ ಪ್ರಾಕಾರ, ಮಹಾಕಾಲ ವಸಂತಾದಿಸ್ಥಾನ, ಮಾತಂಗ್ಯಾದಿ ಅಷ್ಟಮಂತ್ರಿಣೀಸ್ಥಾನ, ಅಷ್ಟಭೈರವಸ್ಥಾನ, ವಿಷ್ಣು ಶಂಕರಸ್ಥಾನ ವಜ್ರಾನದೀ, ತಾರಾದೇವಿ, ರತಿ ಮನ್ಮಥರು, ಮಹಾಪದ್ಮವನ, ಸೂರ್ಯ ಸೋಮಪಾತ್ರ, ಚಿದಗ್ನಿಕುಂಡ, ಚಿಂತಾಮಣಿಗೃಹ, ಶ್ರೀಚಕ್ರ, ಪಂಚಬ್ರಹ್ಮಮಂಚ, ಕಾಮೇಶ್ವರಾಂಕದಲ್ಲಿ ಜ್ಯೋತಿರ್ಮಯೀ, ತ್ರಿಪುರಾಸ್ಥಾನ ಇವುಗಳಿಂದ ಕೂಡಿದ ಶ್ರೀನಗರ ನಿರ್ಮಾಣವನ್ನು ಮಾಡೆಂದು ವಿಶ್ವಕರ್ಮನಿಗೆ ಹೇಳಿದುದು;
55. ಹೆಚ್ಚು ವಿಶದವಾದ ವಿವರಣೆಯನ್ನು ತ್ವಷ್ಟೃವು ಕೇಳಲು ಬ್ರಹ್ಮನು ಹೇಳಿದುದು; ಚಿದ್ರೂಪಿಣಿಯಾದ ದೇವಿಯು ಸೃಜಿಸಿದ ಬ್ರಹ್ಮಾದಿಗಳು ಸೃಷ್ಟ್ಯಾದಿಗಳನ್ನು ಬಿಟ್ಟು ತ್ರಿಪುರಾರ್ಚನೆಯಲ್ಲಿ ತೊಡಗಲು, ದೇವಿಯು ಅವರನ್ನು ನಿವಾರಿಸಿದುದು; ಅವರಿಗಾಗಿ ದೇವಿಯು ಮಣಿದ್ವೀಪದಲ್ಲಿ ಸ್ಥೂಲಮೂರ್ತಿಯಲ್ಲಿ ಕಾಣಿಸಿಕೊಂಡುದು; ಶಿವನೇತ್ರಾಗ್ನಿಯು, ವಿಷ್ಣುಚಿತ್ತ ಸಮಿತ್ತಿನಿಂದ ಜ್ವಲಿಸಲು, ಮನೋಬುದ್ಧ್ಯಾದಿ ಹವಿಸ್ಸಿನಿಂದ ಚಿದಗ್ನಿಕುಂಡದಲ್ಲಿ ದೇವಿಯ ಧ್ಯಾನಾವಿರ್ಭಾವಗಳು; ಕಾಮೇಶ್ವರ, ಕಾಮೇಶ್ವರೀ ವಿವಾಹ; ಮಹಾ ತ್ರಿಪುರಸುಂದರೀದೇವಿಯಿಂದ ಷೋಡಶ ಮತ್ತು ನವಶಕ್ತಿಗಳ ನಿರ್ಮಾಣ;
56. ಮಹಾ ತ್ರಿಪುರಸುಂದರೀ ನಿರ್ಮಿತವಾದ ಶಕ್ತಿಗಳನ್ನು ತ್ರಿಪುರಾ ನಿರ್ಮಿತವಾದ ಶ್ರೀಚಕ್ರದಲ್ಲಿ ಆಯಾ ಸ್ಠಾನಗಳಲ್ಲಿ ಸ್ಠಾಪಿಸಿದುದು; ಮುದ್ರಾಶಕ್ತಿಗಳ ವಿವರಣೆ; ಶ್ರೀಚಕ್ರದಲ್ಲಿ ಇವರ ಸ್ಥಾನ ವಿನಿಯೋಗ;
57. ಬ್ರಹ್ಮನು ತ್ವಷ್ಟೃವಿಗೆ ತ್ರಿಪುರಾತತ್ವವನ್ನು ಶ್ರೀಚಕ್ರಸ್ವರೂಪದೊಡನೆ ಹೇಳಿದುದು; ತ್ರಿಪುರಾಂಬೆಯು ಚಿನ್ಮಾತ್ರ ರೂಪಳೂ ಅದ್ವಿತೀಯಳೂ ಆದರೂ ಜಗತ್ಸೃಷ್ಟಿಸ್ಥಿತಿ ಲಯಗಳ ನಿದ್ವಾಹಕ್ಕಾಗಿ, ಬ್ರಹ್ಮಾದಿಯಾದ ಅನೇಕ ರೂಪಳಾಗುತ್ತಾಳೆ; ಶಕ್ತಿಗಳು ಹೊರಾಟವನ್ನು ಬಿಟ್ಟು ತಪಸ್ಸಿನಿಂದ ತಮ್ಮ ತಮ್ಮ ಯೋಗಸ್ಥಾನಗಳನ್ನೂ ಆಧಿಪತ್ಯಗಳನ್ನೂ ಪಡೆದುದು; ಹೀಗೆ ಸ್ತ್ರೀಶಕ್ತಿವ್ಯಾಪ್ತವಾದ ಶ್ರೀಚಕ್ರದಲ್ಲಿ ಕಾಮೇಶ್ವರನೂ, ಮಿತ್ರೀಶ ಮುಂತಾದ ಗುರುವರ್ಗದವರನ್ನೂ ಸೃಜಿಸಲು ಅವರೂ ತಪಸ್ಸಿನಿಂದ ಶ್ರೀಚಕ್ರದಲ್ಲಿ ತಕ್ಕ ಸ್ಠಾನ, ಅಧಿಕಾರಗಳನ್ನು ಪಡೆದುದು;
58. ತ್ವಷ್ಟೃವು ಬ್ರಹ್ಮನನ್ನು ಕುರಿತು ಶ್ರೀಚಕ್ರದಲ್ಲಿ ಚಿದಗ್ನಿಕುಂಡದಲ್ಲಿ ಸ್ತ್ರೀರೂಪವನ್ನೇ ಧ್ಯಾನಿಸಲು ಕಾರಣವನ್ನು ಕೇಳಲು ಬ್ರಹ್ಮನ ವಿವರಣೆ; ಗುರುವರ್ಗದವರ ನಾಮಗಳನ್ನೂ ವಿವರಿಸಿದುದು; ಮಹಾಪದ್ಮವನದ ಮಧ್ಯದಲ್ಲಿ, ಶ್ರೀಚಕ್ರದಲ್ಲಿ, ಚಿಂತಾಮಣಿಗೃಹದಲ್ಲಿ ತ್ರಿಪುರಾದೇವಿಯು ಬ್ರಹ್ಮಾದಿ ಸೇವಿತಳಾಗಿದಾಳೆ; ಅದರಂತೆ ಮೇರುಶಿಖರದಲ್ಲಿ ಶ್ರೀಪುರವನ್ನು ನಿರ್ಮಾಣಮಾಡೆನ್ನಲು, ಹಾಗೆ ಮಾಡಿದುದು;
59. ಭಂಡಾಸುರನು ಹಿಂತಿರುಗಿದ ಮೇಲೆ, ನಾರದನಿಂದ ನಿಜವನ್ನು ತಿಳಿದುದು; ಭಂಡಾಸುರನ್ನು ತ್ರಿಪುರಾಮಹಿಮೆಯನ್ನು ತಿಳಿಸಿ, ತನ್ನ ಪೂರ್ವಕಥೆಯನ್ನು ತಿಳಿಸಿದುದು; ತಾನುರಮಾದೇವೀ ದೂತನಾದ ಮಾಣಿಕ್ಯಶೇಕರನು, ಗಂಗೆಯಲ್ಲಿ ಮುಳುಗಿತ್ತಿದ್ದ ಕಿನ್ನರಿಯನ್ನು ಉದ್ಧರಿಸಿದುದು; ಅವಳಲ್ಲಿ ಕಾಮನೆಯಿಂದ ಪ್ರವರ್ತಿಸಲು, ರಮಾಶಾಪ, ಅಸುರತ್ವಪ್ರಾಪ್ತಿ; ಶಾಪಮೋಚನೆಗೆ ತ್ರಿಪುರಾ ದೇವಿಯಿಂದ ಸಂಹಾರಕ್ಕಾಗಿ, ಕಾಮದೇವನಿಂದ ಜನನ, ಬ್ರಹ್ಮಾಂಡ ಸೃಷ್ಟಿ, ಅಧಿಪತ್ಯಾನುಭವ, ಈಗ ಲಲಿತಾ ದೇವಿಯಿಂದ ವಧನಿರೀಕ್ಷಣೆ, ಇವುಗಳನ್ನು ಕೇಳಿ ನಾರದನು ಹಿಂತಿರುಗಿಹೋದುದು;
60. ಬಾಹ್ಯಾಂತರಜ್ಞಾನಕಾರಣಗಳ ವಿವರಣೆಯ ಪ್ರಶ್ನೆಗೆ ಉಪಪತ್ತಿಯು ಇನ್ನೊಂದು ಖಂಡದಲ್ಲಾಗುವುದೆಂದು ಹಾರಿತಾಯನನು ಹೇಳಿದುದು; ದತ್ತಗುರುವು ಭಾರ್ಗವರಾಮನನ್ನು ಕುರಿತು, ಹಯಗ್ರೀವನು ಅಗಸ್ತ್ಯನನ್ನು ಕುರಿತು ಭಂಡಾಸುರ, ದೇವೀ ಇವರ ಯುದ್ಧಕಥೆಯನ್ನು ವಿವರಿಸಿದುದನ್ನು ಹೇಳಿದುದು; ಕಾಮೇಶ್ವರನು ಅಗ್ನಿಕುಂಡ ಸಮುದ್ಭೂತಳಾದ ಲಲಿತಾದೇವಿಯಿಂದ ಆವಿರ್ಭವಿಸಿದುದು; ಅವರ ವಿವಾಹ, ಭಂಡವಧೆಗೆ ಪ್ರಯಾಣಮಾಡುವುದಕ್ಕೆ ಮುಂಚೆ ಶಕ್ತಿದೇವಿಯರ ಸೃಷ್ಟಿ; ಆಗ ನಾರದನು ಅಲ್ಲಿಗೆ ಬಂದು ಭಂಡಾಸುರನ ಸ್ಥಿತಿಯನ್ನು ತಿಳಿಸಿದುದು; ತ್ರಿಪುರಾಭಕ್ತನಾದ ಭಂಡನಿಗೆ ವಧೆ ಹೇಗೆ? ಎಂಬ ಅಂಶವನ್ನು ಮಂತ್ರಿಣೀದೇವಿಯಿಂದ ತಿಳಿದು ಹಿಂತಿರುಗಿದುದು; ನಾರದನ ನಿತ್ಯಮುಕ್ತತೆಯ ವಿವರಣೆ; ಲಲಿತಾಪರಮೇಶ್ವರಿಯು ಧನುರ್ವೇದ, ಮಂತ್ರಿಣೀದೇವಿ ಮುಂತಾದವರೊಡಣೆ ಹೊರಡಲು, ಭಂಡನೂ ಯುದ್ಧದ ಆವಶ್ಯಕತೆ ಔಚಿತ್ಯಗಳನ್ನು ವಿಮಶಿಸಿ, ಯುದ್ಧಕ್ಕೆ ಬಂದುದು;