ಶ್ರೀ ತ್ರಿಪುರಾರಹಸ್ಯ – ಜ್ಞಾನಖಂಡ
ವಿಷಯಾನುಕ್ರಮಣಿಕೆ
ಮುನ್ನುಡಿ
1. ಮಂಗಳಾಚರಣೆ, ತ್ರಿಪುರಾದೇವಿಯ ತತ್ವವಿವರಣೆ; ಈ ಗ್ರಂಥದಲ್ಲಿ ಪ್ರತಿಪಾದ್ಯವಾದ ವಿಷಯ, ಶಾಕ್ತೇಯಸಿದ್ಧಾಂತದ ಮೂಲತತ್ವಗಳು; ಸಂವರ್ತನು ಪರಶುರಾಮನಿಗೆ ಮಾಡಿದ ಉಪದೇಶವನ್ನು ದತ್ತಾತ್ರೇಯ ಗುರುವು ವಿವರಿಸಿದುದು; ಅದನ್ನು ಹಾರೀತಾಯನನು ನಾರದನಿಗೆ ಹೇಳಿದುದು; ದತ್ತಸಂಹಿತೆ, ಪರಶುರಾಮಸೂತ್ರ, ತ್ರಿಪುರಾರಹಸ್ಯ; ಹಾರೀತಾಯನನು ಸುಮೇಧನಿರಬಹುದು; ತ್ರಿಪುರಾ ದೇವಿಯ ಸ್ವರೂಪ; ಪೂಜೆಯ ಬಗೆಗಳು; ವೇದಾಂತ ಶಾಸ್ತ್ರದಲ್ಲಿ ಶಕ್ತಿತತ್ವದ ಸ್ಥಾನ; ಉಪಾಸನೆಯ ಮತ್ತು ಜ್ಞಾನದ, ಸ್ವರೂಪ; ತ್ರಿಪುರಾಪದಾರ್ಥ ವಿವರಣೆ; ತ್ರಿಪುರಾ ದೇವಿಯು ಶ್ರೀವಿದ್ಯಾತತ್ವವು; ಪರಶುರಾಮನಿಗೆ ದತ್ತ ಗುರುವಿನಿಂದ ತತ್ವೋಪದೇಶ; ಉಪಾಸನೆಯ ಪ್ರಶ್ನೆ; ಗುರುವಿನ ಅನುಗ್ರಹ; ಉಫಾಸನೆಗಾಗಿ ಪರಶುರಾಮನು ಮಹೇಂದ್ರಪರ್ವತಕ್ಕೆ ಹೋದನು; ಶ್ರೀರಾಮನಿಂದಾದ ಕಳಾಕರ್ಷಣಪರಾಭವಗಳ ಫಲವಾಗಿ ಸಂವರ್ತನು ಮಾಡಿದ್ದ ಉಪದೇಶವನ್ನು ಪರಶುರಾಮನು ಜ್ಞಾಪಿಸಿಕೊಳ್ಳಲಾರದೆ ಮಾಡಿದ ವಿಚಾರ ಸರಣಿ; ಮಾಡಬೇಕಾದ ಕೆಲಸವು ಉಳಿದಿರುವಂತೆ ತೋರುತ್ತಿರುವವರೆಗೆ ಪೂರ್ಣಸುಖಾನುಭವವಿಲ್ಲ; ದುಃಖಮಿತ್ರ ಸುಖಾಭಾಸಾನುಭವ ಮಾತ್ರ; ಸಂದೇಹಸಾಗರವನ್ನು ದಾಟಿಸಲು ಗುರೂಪದೇಶವೇ ಹಡಗು; ಪರಶುರಾಮನು ಗಂಧಮಾದನಪರ್ವತಕ್ಕೆ ಹೋಗಿ ದತ್ತಗುರುವನ್ನು ಕಂಡು ಉಪದೇಶಾನುಗ್ರಹದ ಪ್ರಾರ್ಥನೆ ಮಾಡಿದನು;
2. ದತ್ತಗುರುವಿನ ಉಪದೇಶ; ಪರಶುರಾಮನ ಆತ್ಮಕಥಾ ವಿಜ್ಞಾಪನೆ, ಸುಖದುಃಖಸ್ವರೂಪ; ಉಪಾಸನೆಯ ಕರ್ತವ್ಯಕರ್ಮಶೇಷವೂ, ಪ್ರಾಪ್ತವ್ಯಕಾಮ್ಯಶೇಷವೂ, ಇಲ್ಲದಿರುವುದರಿಂದ ಸಂವರ್ತನು ಜೀವನ್ಮುಕ್ತನೂ, ಶಾಂತನೂ, ಶೀತಲಸ್ವಭಾವದವನೂ ಆಗಿದಾನೆ; ಅಂತಹ ಜ್ಞಾನಕ್ಕಾಗಿ ಪರಶುರಾಮನು ದತ್ತಮುನಿಯನ್ನು ಕೇಳಿದನು; ಕ್ಷುಧಿತರಾದ ಪಥಿಕರು ವಿಷಮುಷ್ಟಿ ಫಲವನ್ನು ತಿಂದ ಕಥೆ; ವಿಚಾರವೇ ಪ್ರಥಮ ಕಾರ್ಯ; ಅವಿಚಾರ ಪ್ರವೃತ್ತಿಯ ದುಷ್ಫಲಗಳು; ದೇವೀಭಕ್ತಿಯೇ ಶ್ರೇಯಸ್ಸಾಧನ; ದೇವೀಮಹಾತ್ಮ್ಯಶ್ರವಣ, ಪೂಜಾ, ಧ್ಯಾನಗಳಿಂದ ವಿಚಾರಶಕ್ತಿಯ ಪ್ರಾಪ್ತಿ;
3. ಮಹಾತ್ಮ್ಯಶ್ರವಣವು ಸತ್ಸಂಗದಿಂದ ಆಗಬೇಕು; ದಶಾರ್ಣ ದೇಶದ ಹೇಮಚೂಡನ ಕಥೆ ವ್ಯಾಘ್ರಪಾದನ ಧರ್ಮ ಪುತ್ರಿಯಾದ ಹೇಮಲೇಖೆಯೊಡನೆ ವಿವಾಹ; ಜ್ಞಾನಿಯಾದ ಹೇಮಲೇಖೆಯಿಂದ ಕಾಮಿಯಾದ ಹೇಮಚೂಡನಿಗೆ ಉಪದೇಶ;
4. ಪ್ರಿಯಾ ಪ್ರಿಯ ವಿಷಯವಿವೇಚನೆ; ವಿಷಯಗಳಲ್ಲಿ ಅದು ಆಪೇಕ್ಷಿತವಾದುದು; ಆಸೆಯಿಂದ ಸುಖಾಭಾಸದ ಅನುಭವ; ಆಸೆಯ ನಾಶದಿಂದ ತಾತ್ಕಾಲಿಕವಾಗಿ ಆತ್ಮಸುಖಾಭಾಸ; ಹೇಮಲೇಖೆಯು ಹೇಳಿದ, ರಾಜಪುತ್ರದಂಪತಿಯರ ಕಥೆ; ರಾಜಪುತ್ರನಿಗೆ ಮದ್ಯಪಾನ, ಸೇವಕಿಯಲ್ಲಿ ಭೋಗ; ರಾಜಪುತ್ರಿಗೆ ಕುತ್ಸಿತನಾದ ಸೇವಕನಲ್ಲಿ ಭೋಗ; ಕಡೆಗೆ ಮೋಸ ಗೊತ್ತಾಗಲು ರಾಜಪುತ್ರನು ವೈರಾಗ್ಯದಿಂದ ತ್ಯಾಗಮಾಡಿದ; ಸುಖಕ್ಕೆ ವಿಷಯದ ಸೌಂದರ್ಯವು ಕಾರಣವಲ್ಲ, ಮನಸ್ಸಿನಲ್ಲಿ ಅದರ ಉಲ್ಲೇಖವೇ ಕಾರಣ; ವಿಷಯಗಳಲ್ಲಿ ಸೌಂದರ್ಯವು ಸ್ವಾಭಾವಿಕವಾಗಿಲ್ಲ; ಸ್ತ್ರೀಪುರಷರಲ್ಲಿ ಸೌಂದರ್ಯಜ್ಞಾನವು ಅಭಿಮಾನ ಮೂಲಕವಾದುದು; ದೋಷಾಜ್ಞಾನದಿಂದ ಸೌಂದರ್ಯಾಭಿಮಾನ ನಾಶವಾಗುತ್ತದೆ; ಹೇಮಚೂಡನೇ ಮುಂತಾಗಿ ಎಲ್ಲರೂ ತ್ರಿಪುರಾಪರಮೇಶ್ವರಿಯಲ್ಲಿ ಭಕ್ತಿಯಿಂದ ಜ್ಞಾನವನ್ನು ಪಡೆದರು; ಸತ್ಸಂಗದಿಂದ ಸುಖ; ಮಾನವರೂ, ಪಶುಪಕ್ಷಿಗಳೂ, ಎಲ್ಲರೂ ಜ್ಞಾನಿಗಳಾದುದರಿಂದ ಆ ಪಟ್ಟಣಕ್ಕೆ ವಿದ್ಯಾನಗರವೆಂದು ಪ್ರಸಿದ್ಧಿಯಾಯಿತು;
5. ಹೇಮಚೂಡನಿಗೆ ಹೇಮಲೇಖೆಯು ಬೋಧಿಸಿದ ವಿವರ, ಬಗೆಗಳನ್ನು ತಿಳಿಸಬೇಕೆಂಬ ಪರಶುರಾಮನ ಪ್ರಶ್ನೆಗೆ ದತ್ತಗುರುವಿನ ಉತ್ತರ; ವಿಷಯಸುಖಗಳಲ್ಲಿ ದೋಷದರ್ಶನದಿಂದ ಅವನ್ನು ಅನುಭವಿಸಲಾರನು, ವಾಸನಾವಶದಿಂದ ಬಿಡಲೂ ಆರನು; ಇದೇ ವೈರಾಗ್ಯದ ಬೀಜವು. ಹೇಮಲೇಖೆಯು ತನ್ನ ಕಥೆಯನ್ನು ಹೇಳಿದಳು; ಅಪ್ರಸ್ತುತಾಲಂಕಾರದ ರೀತಿಯಲ್ಲಿ, ಸಾಂಕೇತಿಕವಾದ ಕ್ರಮದಲ್ಲಿ ತತ್ವಬೋಧನೆ; ಆತ್ಮನಿಗೆ ಜ್ಞಾನವೇ ತಾಯಿ, ಬುದ್ಧಿಯೇ ಸಖಿ, ತಾನೇ ಜೀವ, ವ್ಯಾವಹಾರಿಕವಾದ ಸುಖದುಃಖಾನುಭವವೇ ಆಟ; ಸತ್ವಗುಣಪ್ರಧಾನವಾದ ಬುದ್ಧಿ ಪತಿವ್ರತೆ; ಅವಿದ್ಯೆಯೇ ಅಸತೀ; ಅವಿದ್ಯಾಸಂಗದಿಂದ ಮೋಹ, ಕರ್ಮಾಸಕ್ತಿಗಳೂ ಮನಸ್ಸೂ ಉಂಟಾದುದು; ಕರ್ತೃತ್ವ, ಭೋಕ್ತೃತ್ವ, ಜನನ, ಮರಣ, ಪರಂಪರೆ ಎಂಬ ಸಂಸಾರದಲ್ಲಿ ಅಭಿಮಾನ ಅಜ್ಞಾನಗಳಿಂದ ಸಿಕ್ಕಿಕೊಂಡು ಸಂಕಟಪಡುತ್ತಿರುವುದು; ಆಶೆಯೇ ಹೆಂಡತಿ, ಪಂಚಜ್ಞಾನೇಂದ್ರಿಯಗಳೇ ಮಕ್ಕಳು; ನಾನಾಬಗೆಯ ಅನುಭವಗಳು; ಕಡೆಗೆ ದುಃಖವೇ ಫಲ; ಸ್ವಪ್ನದಲ್ಲೂ ಮಕ್ಕಳನ್ನು ಬಿಟ್ಟು ಅನುಭವ; ನಿಂದ್ಯವೃತ್ತ, ಜ್ವಾಲಾಮುಖರು ಮೊಮ್ಮಕ್ಕಳು, ಸುಷುಪ್ತಿಯ ಸುಖಾನುಭವ; ಸಾಂಸಾರಿಕಸುಖಾಭಾಸಗಳನ್ನು ಪುನಃ ಅನುಭವಿಸಲು ಬೇಸರ; ಇದು ಬಂಧ ಸ್ವರೂಪ; ಆಧ್ಯಾರೋಪಕ್ರಮ;
6. ಈ ಸಂಸಾರವು ಖಚಿತ್ರದಂತೆ ಇದೆ; ಯಾವುದನ್ನು ಸರಿ ಎಂದು ನಂಬಬೇಕು? ಎಕೆ, ಹೇಗೆ ನಂಬಬೇಕು? ಆಪ್ತ ವಾಕ್ಯವೆಂಬ ಶ್ರುತಿಯಿಂದಲೂ, ಇದುವರೆಗಿನ ಅನುಭವದ ಒಟ್ಟಿನ ಆಧಾರದ ಮೇಲೂ, ವಿಚಾರಪೂರ್ವಕವಾದ ಸತ್ತರ್ಕದಿಂದಲೂ ನಿಜವಾದುದನ್ನು ಊಹಿಸಿ, ನಂಬಿ, ಮುಂದುವರೆದು, ಮನಗಾಣಬೇಕು; ವಿಚಾರವಿಲ್ಲದಿದ್ದರೆ ಇದುವರೆಗಿನಂತೆಯೇ ಮುಂದಕ್ಕೂ ಸುಖಾಭಾಸ ದುಃಖಾನುಭವಗಳಲ್ಲಿಯೇ ಇರಬೇಕಾಗುತ್ತದೆ; ವಿಚಾರಕ್ಕೆ ಮೊದಲುಮಾಡಿ ಮುಂದುವರಿದರೆ ಇವೆಲ್ಲವೂ ಮುಂಚಿನಂತೆ ಸುಖಾವೆಂದಾಗಲಿ, ಸುಖಸಾಧನವೆಂದಾಗಲಿ, ಈಗಲೂ ಪ್ರೇರಿಸಲಾರದವಾಗುತ್ತವೆ! ಇದು ಏಕೆ? ನಂಬಿಕೆ ಇಲ್ಲದೆ ಐಹಿಕ ಮತ್ತು ಆಮುಷ್ಮಿಕ ಸುಖಸಾಧನಗಳಲ್ಲಿ ಪ್ರವೃತ್ತಿಯು ಅಸಂಭವವು; ನಂಬಿಕೆಯನ್ನು ಹಿತೈಷಿಗಳಾದ ವಿದ್ವಾಂಸರಲ್ಲಿ ಇಡಬೇಕು; ಇವರು ಸಜ್ಜನರು, ಇವರು ಅಲ್ಲ, ಎಂಬ ತಿಳಿವಳಿಕೆಗೂ ಮೊದಲು ನಂಬಿಕೆಯೇ ಮೂಲಾಧಾರ; ಆದರೆ ಕುತರ್ಕವನ್ನು ಅವಲಂಬಿಸಿ ನಂಬಿಕೆಯನ್ನು ಕೆಡಿಸಿಕೊಳ್ಳಬಾರದು; ಏಕೆಂದರೆ ಕೌಶಿಕನ ಶಿಷ್ಯರು ವಿಚಾರಮಾಡುತ್ತಿದ್ದಾಗ ಶುಂಗನೆಂಬ ವಿದ್ಯಾ ಕುಶಲನು ಬಂದು ತನ್ನ ಬುದ್ಧಿಚಮತ್ಕಾರದಿಂದ ಅವರ ವಾದಗಳನ್ನು ಖಂಡಿಸಿದನು; ಅವರಲ್ಲಿ ಕೆಲವರು ಅವನು ಹೇಳಿದಂತೆ ತಮ್ಮ ನಂಬಿಕೆಯನ್ನು ಬಿಟ್ಟು ಅವನ ಶೂನ್ಯವಾದವನನ್ನು ಅನುಸರಿಸಿದರು; ಮತ್ತೆ ಕೆಲವರು ಅವನು ಹೇಳಿದುದನ್ನು ಗುರುಗಳಲ್ಲಿ ವಿಜ್ಞಾಪಿಸಿ ಅವರ ಮಾತಿನಂತೆ ವಿವೇಕದಿಂದ ಚಿತ್ತಸಮಾಧಾನವನ್ನು ಪಡೆದರು;
7. ವಿವೇಚನೆಯಿಂದ ವೈರಾಗ್ಯ; ವಿಚಾರದಿಂದ ಅಜ್ಞಾನನಾಶ ಪ್ರಯತ್ನ; ಕಾಮಿನೀ ಕಾಂಚನಾದಿಗಳೆಲ್ಲವೂ ನಶ್ವರ, ಮೃತ್ಯುಗ್ರಸ್ತ; ಈ ಪ್ರಪಂಚ ಸಂಸಾರವನ್ನು ಉಂಟೂಮಾಡಿರುವವನು ಮಹೇಶ್ವರನು; ದೊಡ್ಡ ಐಂದ್ರಜಾಲಿಕನು; ಪ್ರತಿವಿದ್ಯೆಯಿಂದ ಮಾಯೆಯನ್ನು ತಡೆಗಟ್ಟಬೇಕು; ಸದಾಶಿವ, ಚಿಚ್ಪಕ್ತಿ, ಇವರ ಆರಾಧನೆಯಿಂದ ವಿವೇಕ, ವೈರಾಗ್ಯಗಳು ಶೀಘ್ರಫಲಕಾರಿಗಳು; ಉಪಾಸನಾ ಗುಣತಾರತಮ್ಯದಿಂದ ಫಲತಾರತಮ್ಯ; ಕಾಲಕರ್ಮ ಸಂಯೋಗದಿಂದ ಸಿದ್ಧಿಪ್ರಾಪ್ತಿ; ನಿಷ್ಕಾಮಕರ್ಮದಿಂದ ಈಶ್ವರತೃಪ್ತಿ; ಪ್ರಾರಬ್ಧ, ನಿಯತಿ ಇವು ಎಲ್ಲರಿಂದಲೂ ಅನುಸರಿಸಲ್ಪಡಬೇಕು; ನಿಯತಿಯು ಈಶ್ವರನ ಸಂಕಲ್ಪರೂಪವಾದ ಶಕ್ತಿ; ಶಿವಶರಣಾಗತಿಯೇ ಕ್ಷೇಮಕರವಾದ ಮೊದಲ ಮೆಟ್ಟಲು; ಆಸ್ತಿಕ್ಯ, ಶ್ರದ್ಧೆಗಳು ಅವಶ್ಯಕವು; ಈ ಜಗತ್ಕರ್ತೃವಿಗೆ ಶಿವ, ವಿಷ್ಣು, ಗಣಪತಿ, ಸೂರ್ಯ; ನೃಸಿಂಹ, ಬುದ್ಧ, ಅರ್ಹಂತ, ಪ್ರಾಣ, ಚಂದ್ರ, ಅಗ್ನಿ, ಕರ್ಮ, ಪ್ರಧಾನ ಮುಂತಾದ ಹೆಸರುಗಳು ಆಯಾ ಮತೀಯರಿಂದಲೂ ದಾರ್ಶನಿಕರಿಂದಲೂ ಕೊಡಲ್ಪಟ್ಟಿವೆ; ಇವರೆಲ್ಲರಲ್ಲೂ ವ್ಯಾಪಿಸಿರುವ ಚೈತನ್ಯವೇ ಸರ್ವಮೂಲ ಕಾರಣವು; ಮನಸ್ಸು ಕಪಿಯಂತಿದೆ; ಸುಷುಪ್ತಿಯಲ್ಲಿ ಮನಶ್ಚಾಂಚಲ್ಯವಿಲ್ಲದ್ದರಿಂದ ಸುಖವಾಗುತ್ತದೆ; ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಬೇಕು; ಪುರುಷಪ್ರಯತ್ನದಿಂದ ಎಲ್ಲರೂ ಫಲವನ್ನು ಪಡೆಯುತ್ತಾರೆ; ಕರ್ಮವು ಶ್ರದ್ಧೆಯ ಬೆಂಬಲವುಳ್ಳದ್ದಾಗಿದ್ದರೆ, ಎಲ್ಲರಿಗೂ, ಯಾವಾಗಲೂ, ಫಲವನ್ನು ಕೊಟ್ಟೇಕೊಡುತ್ತದೆ; ವಿವೇಚನೆಯಿಂದಲೇ ನಂಬಬೇಕು; ಹಿಂದಿನ ಅನುಭವದ ಸುಖಾಭಾಸಗಳಲ್ಲಿ ಆವೃತ್ತಿಯಿಂದ ಬೇಸರವಾಗಲು, ವಿವೇಚನೆಯಿಂದ ಮುಂದಿನ ಶ್ರೇಯೋಮಾರ್ಗವನ್ನೂ ಅನುಸರಿಸಬೇಕು; ಜೀವಾತ್ಮನಿಗೆ ದೇಹಾದಿ ಸಾಧನಾಪೇಕ್ಷ ಇದೆ. ಪರಮಾತ್ಮನಿಗೆ ಹಾಗಲ್ಲ; ಏಕೆಂದರೆ ಪರಮಾತ್ಮನು ಪೂರ್ಣನೂ, ಸ್ವತಂತ್ರನೂ ಆಗಿದಾನೆ; ಭಕ್ತರ ಉಪಾಸನೆಗೆ ತಕ್ಕಂತೆ ಪ್ರತ್ಯಕ್ಷನಾಗಿ ಅವರ ಕೋರಿಕೆಗಳನ್ನು ಸಲ್ಲಿಸುತ್ತಾನೆ; ಹೀಗೆ ಜೀವ, ಜಗತ್ತು,ಈಶ್ವರ, ಎಲ್ಲರಲ್ಲೂ ಚೈತನ್ಯರೂಪದಿಂದ ತ್ರಿಪುರಾದೇವಿಯೇ ಇದಾಳೆ; ಆದುದರಿಂದ ಶಿವ, ವಿಷ್ಣು ಮುಂತಾದವರಲ್ಲಿ ಉತ್ತಮ ಅಧಮ ಮುಂತಾಗಿ ಭೇದಭಾವನೆಯನ್ನು ಮಾಡಬಾರದು; ಪರಶಿವನ ಪರ ಮತ್ತು ಅಪರ ರೂಪಗಳಲ್ಲಿ, ಸದಾಶಿವನಿಂದ ಹುಲ್ಲುಕಡ್ಡಿಯವರೆಗಿನ ರೂಪಗಳು ಕಲ್ಪಿತವಾದುವಾಗಿ, ಅಪರೂಪವೆನಿಸಿಕೊಂಡಿವೆ; ಪರರೂಪವು ನಿತ್ಯ, ನಿರ್ಗುಣ, ನಿರಾಕಾರ, ಸಚ್ಚಿದಾನಂದರೂಪವಾದುದು; ಅದನ್ನೇ ಕಡೆಯ ತತ್ವವೆಂದರಿಯಬೇಕು; ನಿರ್ಗುಣ ಪರತತ್ವದ ಧ್ಯಾನವನ್ನು ಮಾಡಲು ಅಸಮರ್ಥನಾದರೆ ಬುದ್ಧಿವಂತನಾದ ಅಂತಹ ಭಕ್ತನು ತನ್ನ ಮನಸ್ಸಿಗೆ ಒಪ್ಪಿ ಬರುವ ಸಗುಣಮೂರ್ತಿಯನ್ನೇ ಪೂಜಾ, ಧ್ಯಾನ, ಉಪಾಸನೆಗಳಿಂದ ಆರಾಧಿಸುತ್ತಾ, ಕ್ರಮವಾಗಿ ಶ್ರೇಯಸ್ಸನ್ನು ಪಡೆಯಬಹುದು;
8. ಹೇಮಚೂಡನು ಹೇಮಲೇಖೆಯ ಉಪದೇಶದಿಂದ ತೃಪ್ತಿಗೊಂಡು, ತ್ರಿಪುರಾದೇವಿಯ ಸಗುಣಮೂರ್ತಿಯ ಆರಾಧನೆಯನ್ನು ಮಾಡಿದನು; ಕೆಲವು ತಿಂಗಳಲ್ಲಿಯೇ ವಿಚಾರಾಸಕ್ತಿಯುಂಟಾಯಿತು; ಹೇಮಲೇಖೆಯನ್ನು ಅವನು ಪುನಃ ಕಂಡು ಮುಂದಿನ ಉಪದೇಶವನ್ನು ಪಡೆಯಲು ಬಂದನು; ಹಿಂದೆ ಸಾಂಕೇತಿಕವಾದ ರೀತಿಯಲ್ಲಿ ಹೇಳಿದ್ದ ಉಪದೇಶವನ್ನು ವಿವರಿಸೆಂದು ಕೇಳಿದನು; ಜ್ಞಾನವೇ ತಾಯಿ. ಬುದ್ಧಿಯೇ ಸಖಿ, ಅವಿದ್ಯೆಯೇ ಅಸತೀ, ಅವಿದ್ಯೆಯು ಹಗ್ಗದಲ್ಲಿ ಹಾವನ್ನು ತೋರಿಸಿ ಭಯಜನಕವಾಗಿದೆ, ಮಹಾಮೋಹನೇ ಮಗ, ಮನಸ್ಸು ಮೊಮ್ಮಗ, ಕಲ್ಪನೆಯೇ ಮನಸ್ಸಿನ ಹೆಂಡಿತಿ, ಪಂಚೇಂದ್ರಿಯಗಳು ಮಕ್ಕಳು, ಮನಸ್ಸು ವಿಷಯಗಳನ್ನು ಕದ್ದಂತೆ ಸಂಸ್ಕಾರ ರೂಪದಲ್ಲಿ ಅಡಗಿಸಿಕೊಂಡಿರುತ್ತದೆ. ಮಹಾಶನಾ ಎಂಬ ಆಹೆಯೇ ಸೊಸೆಯು, ಕ್ರೋಧ, ಲೋಭಗಳು ಮಕ್ಕಳು, ಪ್ರಾಣವೇ ಸ್ನೇಹಿತನು, ಕಾಡು ಮುಂತಾದುದೇ ನರಕ, ಬುದ್ಧಿಯೊಡನೆ ಕೂಡಿರುವುದೇ ಸಮಾಧಿಯು, ಸಮ್ಯಕ್ ಜ್ಞಾನಪ್ರಾಪ್ತಿಯೇ ಮೋಕ್ಷವು;
9. ಎಲ್ಲರಿಗೂ ಇದು ಅನುಭವಕ್ಕೆ ಬರುತ್ತಿರುವುದು; ಚಿಚ್ಪಕ್ತಿ ಸ್ವರೂಪಳಾದ ತ್ರಿಪುರಾದೇವಿಯೇ ತಾಯಿಯು; ಆತ್ಮ ಸ್ವರೂಪದ ಅರಿವಿನಿಂದ ಆ ತಾಯಿಯ ದರ್ಶನವಾಗುತ್ತದೆ. ಆತ್ಮತತ್ಮವೂ ತ್ರಿಪುರಾತತ್ವವೂ ಒಂದೇ ಆಗಿದೆ; ಜ್ಞಾನಿಯಾದ ಗುರುವಿನ ಅನುಗ್ರಹದಿಂದ ಆ ಅನುಭವವು ಬರುವುದು; ನನ್ನದು ಎಂಬ ಭಾವವು ಹೋಗಿ ನಾನು ಎಂಬ ಭಾವವು ಬರಬೇಕು: ಹೇಮಚೂಡನು ಆತ್ಮೋಪಾಸನೆ ಮಾಡಿದುದು; ದೇಹ, ಪ್ರಾಣ, ಮನಸ್ಸು, ಬುದ್ಧಿಗಳು ನನ್ನವು, ನಾನಲ್ಲ ಎಂದರೆ ಆತ್ಮಸ್ವರೂಪವಲ್ಲ; ನಾನು ಇರುವ ನಿಶ್ಚಯವು ಎಚ್ಚರ ಕನಸು ನಿದ್ರೆಗಳಲ್ಲಿ ಅನುಸ್ಯೂತವಾಗಿದೆ; ದೃಶ್ಯಗಳನ್ನು ಬಿಟ್ಟು ದೃಕ್ ಆತ್ಮವೆಂದು ತಿಳಿದುದು; ವೃತ್ತಿಸಾಮಾನ್ಯವನ್ನೂ ವಿರೋದಿಸಿ ಆತ್ಮಜ್ಯೋತಿಯ ದರ್ಶನ; ಪ್ರಕಾಶ, ಆನಂದ, ಕತ್ತಲೆಗಳ ದರ್ಶನ; ಹೇಮಲೇಖೆಯನ್ನು ಅವನು ಕರೆಯಿಸಿದನು; ಆತ್ಮವಿಚಾರದಿಂದ ಅಂಧಕಾರ, ಪ್ರಕಾಶ, ಸುಖಗಳ ಅನುಭವ; ಆ ಸಮಾಧಿಯು ಸ್ಥಿರವಾದರೆ ಕತ್ತಲೆ, ಬೆಳಕುಗಳನ್ನು ದಾಟಿ ಚೈತನ್ಯಾನಂದದ ಅಪರೋಕ್ಷಾನುಭವವೇ ಆತ್ಮಸ್ವರೂಪವಾದುದು; ಅದೇ ತ್ರಿಪುರಾ ಪರಾಶಕ್ತಿ ಸ್ವರೂಪವು; ಅದು ಅಪ್ರಾಪ್ತಪ್ರಾಪ್ತಿಯಲ್ಲ; ಮನೋನಿರೋಧದಿಂದ ಇತರ ಅನುಭವಗಳು ತಪ್ಪಿ, ಶೇಷಭಾವದಿಂದ ಆತ್ಮದರ್ಶನ; ಅಖಂಡ ಚೈತನ್ಯದ ಅಪರೋಕ್ಷವು ವೃತ್ತಿರೂಪವಲ್ಲ; ವೃತ್ತಿಯನ್ನು ಮೀರಿದ ಚಿದ್ರೂಪ; ಅದು ಆಕಾಶದಂತಿದೆ; ಎಚ್ಚರ ಕನಸುಗಳ ಅನುಭವಗಳಲ್ಲಿ ಜಗತ್ತಿನ ಪ್ರಕಾಶಕ್ಕೆ ಅಧಿಷ್ಠಾನವಾದ ಸಾಮಾನ್ಯ ಚೈತನ್ಯವೂ ತೋರುತ್ತಿದೆ; ಅದನ್ನು ಅಂತರ್ಮುಖ ದೃಷ್ಟಿಯಿಂದ ತಿಳಿಯಬೇಕು; ನಿರ್ವಿಕಲ್ಪ ಸಮಾಧಿಯಲ್ಲಿ ಹೇಮಚೂಡನು ಆತ್ಮತತ್ವದಲ್ಲಿ ಶಾಂತಿ ಸುಖವನ್ನು ಅನುಭವದಿಂದ ತಿಳಿದನು;
10. ಹೇಮಲೇಖೆಯು ಇದನ್ನು ಮನಗಂಡಳು; ಸಮಾಧಿಯನ್ನು ಪಡೆಯುವುದು, ಆಮೇಲೆ ಕಣ್ಣು ಮುಚ್ಚಿದಾಗಲೇ ಆತ್ಮ ಸ್ವರೂಪವನ್ನು ಅನುಭವಿಸುವುದು, ಇದನ್ನು ಮೀರಿ ಯಾವಾಗಲೂ ಹೇಗಿದ್ದರೂ ಅಖಂಡ ಸಚ್ಚಿದಾನಂದ ರೂಪನಾದ ಆತ್ಮನನ್ನು ಮನಗಾಣುತ್ತಿರುವಂತಾಗುವುದು ಪರಮಪದವಿಯು, ಜೀವನ್ಮುಕ್ತಿಯು, ಎಂದು ಉಪದೇಶಿಸಿದಳು; ಜಗತ್ತಿನಲ್ಲಿಯೇ, ಇತರ ಅನುಭವಗಳಾಗುತ್ತಿರುವಾಗಲೂ, ಆಕಾಶದಂತೆ ಎಲ್ಲಕ್ಕೂ ಅಧಿಷ್ಠಾನವಾಗಿರುವ ಚೈತನ್ಯವನ್ನು ಆವಿಚ್ಪಿನ್ನವಾಗಿ, ಅಂತರ್ಮುಖವಾಗಿರುವಾಗ ಹೇಗೋ ಹಾಗೆ ಬಹಿರ್ಮುಖವಾಗಿರುವಾಗಲೂ, ಅಖಂಡ ಸಾಮಾನ್ಯ ಚೈತನ್ಯವನ್ನು ಅನುಭವಿಸುವುದು ಪರಮ ಪದವಿಯು; ಈ ಸ್ವರೂಪಜ್ಞಾನವಿಲ್ಲದಿರುವಿಕೆಯೇ ಮೋಹವೆಂಬ ಹಗ್ಗವು; ಇದರಿಂದಲೇ ದೇಹಾದಿಗಳಲ್ಲಿ ಆತ್ಮಬುದ್ಧಿಯು ಗಂಟಾಗಿರುವುದು; ಹೀಗೆಯೇ ಜೀವೇಶ್ವರ ಭೇದವೂ, ಜೀವ ಜೀವ ಭೇದವೂ ಆತ್ಮಸ್ವರೂಪದ ಅಜ್ಞಾನದಿಂದ ಉಂಟಾಗಿದೆ; ಕಾಲ ದೇಶಗಳು ಕನ್ನಡಿಯಂತೆ ಶೂನ್ಯಗಳು; ಕಣ್ಣು ಮುಚ್ಚಿಯೇ ಆತ್ಮದರ್ಶನವಾಗುವಂತಿದ್ದರೆ ಪರಮಪದವಿಯನ್ನು ಪಡೆದಂತಾಗುವುದಿಲ್ಲ; ಇದನ್ನೂ ಹೇಮಚೂಡನು ಧ್ಯಾನದಿಂದ ಮನಗಂಡನು; ಹೀಗೆ ಜೀವನ್ಮುಕ್ತ ಸ್ಥಿತಿಯನ್ನು ಪಡೆದ ಹೇಮಚೂಡನನ್ನು ನೋಡಿ, ತಂದೆಯಾದ ಮುಕ್ತಾಚೂಡನೂ, ತಮ್ಮನಾದ ಮಣಿಚೂಡನೂ, ಆಮೇಲೆ ಮಂತ್ರಿಗಳೂ, ಇತರ ಪ್ರಜೆಗಳು ಗಂಡಸರೂ, ಹೆಂಗಸರೂ, ಎಲ್ಲರೂ ಕ್ರಮವಾಗಿ ಆತ್ಮಜ್ಞಾನಿಗಳಾದರು; ವ್ಯವಹಾರಗಳೆಲ್ಲವೂ ವೇದಾಂತದ ತಿಳಿವಳಿಕೆಯಿಂದಲೇ ನೆರವೇರುತ್ತಿತ್ತು! ಅದರಿಂದ ಆ ಪಟ್ಟಣಕ್ಕೆ ವಿದ್ಯಾನಗರವೆಂದು ಹೆಸರಾಯಿತು; ಶ್ರೇಯೋಲಾಭಕ್ಕೆ ಸತ್ಸಂಗವೇ ಮೂಲ ಕಾರಣವು.
11. ದೃಶ್ಯವಾದ ಜಗತ್ತು ಚೇತನ ಮಾತ್ರ ಸ್ವರೂಪವಾಗಿರುವುದೆಂಬುದು ಹೇಗೆ? ಎಂದು ಪರಶುರಾಮನ ಪ್ರಶ್ನೆ; ಜಗತ್ತು ಕಾರ್ಯರೂಪವಾದುದು; ಕಾರಣವು ಪರಮಾಣುಗಳೆಂದು ತಾರ್ಕಿಕರವಾದವು, ಅಸತ್ಕಾರ್ಯವಾದವು ಅನುಭವ ಯುಕ್ತಿಗಳಿಗೆ ವಿರುದ್ಧವಾದುದು; ಕಾರಣವು ಉಪಲಬ್ಧವಾಗಲು ಅನರ್ಹವಾಗಿರಲು, ಅನುಮಾನವೂ ಪ್ರತ್ಯಕ್ಷವನ್ನೇ ಅನುಸರಿಸಿರಲು, ಕಾರ್ಯಕಾರಣಭಾವವೇ ಅಸಿದ್ಧವಾಗುತ್ತದೆ; ಜಗತ್ತಿನ ಕರ್ತೃವು ಪೂರ್ಣನೂ, ಸರ್ವ ವ್ಯಾಪ್ತಿಯೂ, ಸರ್ವಜ್ಞನೂ ಆಗಿರಬೇಕು; ಅವನು ಪ್ರಪಂಚದಿಂದ ಹೊರಗಿದ್ದು ಸೃಷ್ಟಿಸುತ್ತಾನೆಯೇ? ಒಳಗಿದ್ದೇ ಸೃಜಿಸುವನೇ? ಪರಮಾತ್ಮನಿಗೂ ಈ ಚರಾಚರಪ್ರಪಂಚವು ಶರೀರವೆನ್ನಬೇಕು; ಜೀವಾತ್ಮನಿಗೆ ದೇಹೇಂದ್ರಿಯಗಳು ಹೇಗೆ ಸ್ವರೂಪವಲ್ಲವೋ ಹಾಗೆ ಪ್ರಪಂಚವೂ ಪರಮಾತ್ಮನಿಗೆ ಸ್ವರೂಪವಲ್ಲವು; ಕನ್ನಡಿಯಲ್ಲಿ ಹೇಗೋ ಹಾಗೆ ಪರಮಾತ್ಮನಲ್ಲಿ ಜಗತ್ತು ಪ್ರಕಾಶಿತವಾಗುತ್ತದೆ; ಯೋಗಿಯ ಸಂಕಲ್ಪದಂತೆ ತೋರುತ್ತದೆ; ಆತ್ಮನು ಸ್ವಪ್ರಕಾಶನು, ಪೂರ್ಣನು, ನಿರ್ಮಲನು; ಆದುದರಿಂದ ಜಗತ್ತು ಅಸತ್ಯವಾದುದು; ಶೈಲಲೋಕ ಸೃಷ್ಟಿಯು ಯೋಗಸಿದ್ಧಿಯ ಫಲ;
12. ಈ ಜಗತ್ತು, ಅಸತ್ಯವಾದರೂ ಸತ್ಯವಾಗಿರುವಂತೆ ಏಕೆ ತೋರುತ್ತಿದೆ? ಆತ್ಮಸ್ವರೂಪದ ಅಜ್ಞಾನವೇ ಇದಕ್ಕೆ ಕಾರಣವು; ಸುಷೇಣನ ಕಥೆ, ಯಜ್ಞಾಶ್ವವನ್ನು ಜಯಶೀಲರಾಗಿ ಹಿಂಬಾಲಿಸುತ್ತಿದ್ದ ರಾಜಕುಮಾರನು ತಂಗಣ ಋಷಿಗೆ ಗೌರವವನ್ನು ಸಲ್ಲಿಸಲಿಲ್ಲ; ತಂಗಣಪುತ್ರನು ಅವರನ್ನು ಕೈಸೆರೆ ಹಿಡಿದು ಶೈಲಲೋಕದೊಳಗಿಟ್ಟನು; ಮಹಾಸೇನನು ಬಂದು ವಿನಯದಿಂದ ಅವನ ಅನುಗ್ರಹವನ್ನು ಪಡೆದುದು; ತಂಗಣನ ಪೂರ್ವಕಥೆ; ಯೋಗ ಸಮಾಧಿಯ ಮಹಿಮೆ; ಶೈಲಲೋಕಾವಲೋಕನ;
13. ಅನುಭವಗಳ ವಾಸನೆ ಅಥವಾ ಸಂಸ್ಕಾರಗಳಿಂದ ಕೂಡಿದ ಸೂಕ್ಷ್ಮ ಅಥವಾ ಲಿಂಗದೇಹವು ಶರೀರಕ್ಕೆ ಸೇರಿಸಲ್ಪಟ್ಟ ಮೇಲೆ ಎಚ್ಚತ್ತ ಮಹಾಸೇನನು ಈ ಲೋಕವನ್ನು ಹೊಸದಾಗಿರುವಂತೆ ನೋಡಿ ದುಃಖಿಸುತ್ತಿದ್ದ; ಮಹಾಸೇನನನ್ನು ಮುನಿಕುಮಾರನು ಸಂತೈಸಿದುದು; ಶೈಲಲೋಕದಲ್ಲಿನ ಕಾಲಪರಿಮಾಣವು ಬೇರೆಯ ಬಗೆಯದು ಎಂದರೆ ದೇವ ಮಾನದಂತೆ ಅದಕ್ಕಿಂತಲೂ ತುಂಬ ಹೆಚ್ಚಿನ ಪ್ರಮಾಣದಲ್ಲಿರುತ್ತದೆ; ಆ ಕಾಲದಲ್ಲಿ ಈ ಲೋಕದಲ್ಲಿ ಬಹಳ ಬದಲಾವಣೆಗಳಾಗಿವೆ; ಜನನ ಮರಣಗಳು ಸ್ವಾಭಾವಿಕ ಮತ್ತು ಅನಿವಾರ್ಯ; ಅನಿತ್ಯವಾದ, ಸ್ವಪ್ನ, ಇಂದ್ರಜಾಲಗಳಂತಿರುವ ಅವಕ್ಕಾಗಿ ಚಿಂತಿಸಬಾರದು; ನಿತ್ಯವಾದ ಆತ್ಮತತ್ವವನ್ನು ಸಾಕ್ಷಾತ್ಕರಿಸಬೇಕು; ಅವಸ್ಥಾತ್ರಯ ವಿಮರ್ಶೆಯಿಂದ ಆತ್ಮನಿತ್ಯತ್ವವನ್ನು ಮನಗಾಣಬೇಕು; ಜಾಗ್ರತ್ತೆಂಬ ಚಿತ್ರಕ್ಕೆ ಆತ್ಮನು ಕನ್ನಡಿಯಂತಿರುವನು;
14. ಸಮಾಧಾನಗೊಂಡ ಮಹಾಸೇನನ ಪ್ರಶ್ನೆ; ಏಕಕಾಲದಲ್ಲಿ ದೇಶಕಾಲಗಳು ಭಿನ್ನವಾಗಿ ಸಾಗುವುದು ಹೇಗೆ; ಭಾವನೆಯಿಂದ ಪ್ರಪಂಚವ್ಯವಹಾರವು; ಸಿದ್ದಭಾವನೆ, ಅಸಿದ್ಧ ಭಾವನೆ; ಶೈಲಲೋಕಸೃಷ್ಟಿಯು ಸಿದ್ಧಭಾವನೆಯ ಫಲ; ಬಾಸ್ಯವೆಲ್ಲವೂ ಭಾಸಕದೊಳಗೇ ಇರುತ್ತದೆ; ಚೈತನ್ಯವು ಸರ್ವಭಾಸಕವು; ಆದರೂ ಕನ್ನಡಿಯಂತೆ ನಿರ್ವಿಕಾರವಾಗಿರುತ್ತದೆ; ಅವ್ಯಕ್ತ, ಅವಿದ್ಯಾ, ಜಡಶಕ್ತಿ, ಸದಾಶಿವ, ಈಶ್ವರ, ಶುದ್ಧವಿದ್ಯಾ, ಪಂಚಕಂಚುಕ, ಪ್ರಕೃತಿ, ಚಿತ್ತ, ಪುರುಷ, ತ್ರಿಪುರಾಶಕ್ತಿ, ಹಿರಣ್ಯಗರ್ಭ; ಭೇದಔಷಾಧಿಕ; ಭಾವನಾಸಿದ್ಧವಾದ ಭ್ರಾಂತಿತ್ಯಾಗವೇ ಮೋಕ್ಷ;
15. ಅದ್ವಿತೀಯಜ್ಞಾನ ಒಂದೇ ಸತ್ಯ; ಪ್ರಪಂಚವು ಸ್ವಾತ್ಮಭಿತ್ತಿಯಲ್ಲಿ ಮಾಯಾಶಕ್ತಿಯ ಸ್ವಾತಂತ್ರ್ಯದಿಂದ ತೋರುತ್ತಿದೆ; ಆದರೆ ಜ್ಞಾನವು ವಿಷಯವಿಲ್ಲದೆ ಹೇಗೆ ಇರಬಲ್ಲರು? ಜ್ಞಾನಿಗಳ ಸ್ಥಿತಿಯಲ್ಲೂ ಭೇದವು ಏಕೆ ಇದೆ? ಎಲ್ಲರ ಸಾಧನಫಲಗಳಲ್ಲಿ ತರತಮಭಾವವೇಕೆ? ಜನಕನ ಕಥೆ, ತ್ರಿಪುರಾಭಕ್ತಿ; ವರುಣನ ಯಾಗ, ವರುಣಪುತ್ರನು ಜನಕನ ಸದಸ್ಯರನ್ನು ದೂಷಿಸಿದುದು; ವಿತಂಡಾ, ಜಲ್ಪ, ಕ್ರಮದಲ್ಲಿ ಅಷ್ಟಾವಕ್ರನಿಂದ ಪರಾಭವ; ತಾಪಸಿಯಿಂದ ಅಷ್ಟಾವಕ್ರನಿಗೆ ಉಪದೇಶ; ಆತ್ಮತತ್ವವು ಸ್ವಪ್ರಕಾಶ ತತ್ವವು; ಕಂಠಚಾಮೀಕರನ್ಯಾಯ; ತ್ರಿಪುರಾತತ್ವವೇಚಿಚ್ಫಕ್ತಿಯು; ಅಂತರ್ದಶನದಿಂದ ಕಾಣಬೇಕು;
16. ತಾಪಸಿಯು ಅಂತರ್ಧಾನವನ್ನು ಹೊಂದಿದ ಮೇಲೆ ಜನಕನು ಅಷ್ಟಾವಕ್ರನಿಗೆ ವಿವರಿಸಿದ ಬಗೆ; ಏಕವಿಜ್ಞಾನದಿಂದ ಸರ್ವವಿಜ್ಞಾನ; ವೇದವೆಲ್ಲವೂ ಜಡ; ಕನ್ನಡಿಗೆ ಸ್ವಚ್ಛತೆ ಒಂದೇ ಸ್ವರೂಪವು; ಸ್ಥಿರವಲ್ಲದ್ದರಿಂದ ಶರೀರಾದಿಗಳು ಆತ್ಮವಲ್ಲವು; ಅಹಂಭಾವದ ಸ್ಫೂರ್ತಿಯು ಸಾರ್ವಜನೀನ, ಸರ್ವಾಂತರ ಮತ್ತು ಸ್ವಪ್ರಕಾಶ; ಶುದ್ಧಮನಸ್ಸಿನಿಂದ ತಿಳಿಯಬೇಕು; ನಿದ್ರಾಧೀನವಾದ ಮನಸ್ಸು ಚಿದ್ವಸ್ತುವನ್ನು ತಿಳಿಸಲಾರದು: ಎಲ್ಲವೂ ಮಾಯೆಯೆಂದಲ್ಲ, ಎಲ್ಲವೂ ಶಿವನೆಂದು ತಿಳಿಯುವುದು ಶುದ್ಧವಿದ್ಯೆಯು; ವೃತ್ತಿರಹಿತಸ್ಥಿತಿಗೆ ಸಮಾಧಿ ಎಂದು ಹೆಸರು; ಸಷುಪ್ತಿಯು ನಿರ್ವೃತ್ತಿಯಾದರೂ ಜಡಸ್ಥಿತಿಯು;
17. ವ್ಯವಹಾರದೆಶೆಯಲ್ಲೂ ಸೂಕ್ಷ್ಮಸಮಾಧಿಗಳುಂಟು; ನಿರ್ವಿಕಲ್ಪ ಸಮಾಧಿ; ಅಭ್ಯಾಸಾತಿಶಯದಿಂದ ಅಪರೋಕ್ಷ ಸಾಕ್ಷಾತ್ಕಾರ; ಸೋಹಂ ಎಂಬ ಪ್ರತ್ಯಭಿಜ್ಞಾಸಮಾಧಿ; ಶ್ರವಣ, ಮನನ, ನಿದಿಧ್ಯಾಸನಗಳಿಂದ ಪ್ರತ್ಯಗಾತ್ಮಧ್ಯಾನದಲ್ಲಿ ಪರಿಪಾಕದಿಂದ ಸಿದ್ಧಿಲಾಭ; ಸ್ಮೃತಿ, ಪ್ರತ್ಯಭಿಜ್ಞೆಗಳ ಭೇದ; ಕರ್ತವ್ಯಶೇಷವಿದುವವರೆಗೂ ಸಿದ್ಧಿ ಇಲ್ಲವು; ತ್ರಿಪುಟಿಯ ಭಾನವೂ ಅಳಿದರೆ ಸಿದ್ಧಿಯು; ಇದೇ ವೇದ್ಯತ್ವವಿಲ್ಲದ ಜ್ಞಾನದ ಉಪಲವ್ಧಿಯು; ಇದರಲ್ಲಿ ಅರಿವಿಗಿಂತ ಬೇರೆಯಾದ ವಿಷಯವೇ ಇಲ್ಲವು
18. ಮಾಯೆಯಿಂದ ಸ್ವಸ್ವರೂಪಾಜ್ಞಾನಕ್ಕೆ ಅಡ್ಡಿಯು; ಶಾಸ್ತ್ರಸಾರದ ನಿರೂಪಣೆ; ಶುದ್ಧ ಚಿತ್ ಒಂದೇ ನಾನಾ ಬಗೆಯಾಗಿ ತೋರುತ್ತದೆ; ಅರ್ಥಕ್ರಿಯಾಕಾರಿಗಾದರೂ ಜಾಗತವಸ್ತುವು ಅಸತ್ಯವು ಹೇಗೆ? ಚಂಚಲವಾದ ಚಿತ್ತೇ ಮನಸ್ಸು, ನಿಶ್ಚಲವಾದ ಚಿತ್ತು ಆತ್ಮ ಇವೇ ಕ್ರಮವಾಗಿ ಬಂಧಮೋಕ್ಷಗಳು; ಸ್ವಪ್ನದಂತೆ ಎಚ್ಚರವೂ ಮಿಥ್ಯಾ; ಸತ್ಯಾಸತ್ಯ ಸ್ವರೂಪ; ಜ್ಞಾನಿಗಳಲ್ಲಿ ಉತ್ತಮ, ಮಧ್ಯಮ ಅಧಮ, ಭೇದಗಳು; ಬುದ್ಧಿಭೇದದಿಂದ, ಜ್ಞಾನಪಾಕ ಭೇದದಿಂದ, ಪ್ರಾರಬ್ಧಕರ್ಮಫಲಭೇದದಿಂದ, ವ್ಯವಹಾರದ ವೈಚಿತ್ರ್ಯವು;
19. ಜೀವನ್ಮುಕ್ತರ ವ್ಯವಹಾರವು ಹೇಗಿರುತ್ತದೆಂದು ಪುನಃ ವಿವರಣೆಗಾಗಿ ಪ್ರಶ್ನೆ; ಜ್ಞಾನವು ಒಂದೇಬಗೆಯಾಗಿರುವುದರಿಂದ ಅದರಲ್ಲಿ ಪಾಕಭೇದವು ಹೇಗೆ? ಸಾಧನ ತಾರತಮ್ಯದಿಂದ ಫಲಪ್ರಾಪ್ತಿಯಲ್ಲಿ ಭೇದ; ಬುದ್ಧಿಗೆ ಆವರಣವು ವಾಸನೆಯಿಂದ, ಅಪರಾಧ, ಕಾಮ, ಕರ್ಮಗಳಿಂದ ವೈವಿಧ್ಯವು; ವಾಸನಾ ನಿವೃತ್ತಿಪ್ರಕಾರ; ಸತ್ಸಂಗಾದಿ ಮೂರರಲ್ಲಿ ಮುಖ್ಯವಾವುದು? ಸತ್ಸಂಗದಿಂದ ಮೋಕ್ಷಪ್ರಾಪ್ತಿ; ಉತ್ಕೃಷ್ಟ ಪುಣ್ಯತಾರತಮ್ಯದಿಂದ ವಸಿಷ್ಠ ಜನಕಾದಿಗಳ ಭಿನ್ನಸ್ಥಿತಿಗಳು; ಕರ್ಮವಾಸನಾ ಸ್ವಲ್ಪವಿದ್ದರೂ ಜ್ಞಾನೋದಯವಾಗದು; ಅಮನಸ್ಕನಿಗಿಂತ ಉತ್ತಮ ಮಧ್ಯಮ ಯೋಗಿಗಳ ವೆಶಿಷ್ಟ್ಯ; ಮಂದಜ್ಞಾನಿಯು ಸಮನಸ್ಕನು; ಉತ್ತಮ ಜ್ಞಾನಿಗೆ ವ್ಯವಹಾರ ಕಾಲದಲ್ಲೂ ಸಮಾಧಿಯುಂಟು;
20. ಬ್ರಹ್ಮನ ಸಭೆಯಲ್ಲಿ ಜ್ಞಾನದ ಪ್ರಸಂಗವು ನಡೆಯಲು, ಸನಕಾದಿಗಳು ಕೆಲವರು ಕರ್ಮನಿಷ್ಠರೂ ಮತ್ತೆ ಕೆಲವರು ಭಕ್ತಿನಿಷ್ಠರೂ ಆಗಿರುವುದೇಕೆಂದು ಪ್ರಶ್ನೆ ಮಾಡಿದರು; ಸನ್ಮಾರ್ಗನಿಶ್ಚಯಕ್ಕಾಗಿ ಬ್ರಹ್ಮಾ, ವಿಷ್ಣು, ರುದ್ರರು ತ್ರಿಪುರಾಧನೆ ಮಾಡಿದುದು; ತ್ರಿಪುರಾದೇವಿಯು ತನ್ನ ಪರ ಮತ್ತು ಅಪರರೂಪಗಳನ್ನು ವಿವರಿಸಿದಳು; ಅವರ ಐಶ್ವರ್ಯವೂ ಅಪರಿಚ್ಛಿನ್ನವು; ಅದ್ವೈತ ನಿರೂಪಣೆ, ಅಜ್ಞಾನನಾಶ; ಮೋಕ್ಷಸ್ವರೂಪದಲ್ಲಿ ಶಂಕಾ ಸಮಾಧಾನ; ಬುದ್ಧಿಯಲ್ಲಿ ಮಾಲಿನ್ಯದ ತಾರತಮ್ಯದಿಂದ ಕಾಲ ತಾರತಮ್ಯ; ಸಾಧಕನ ಯೋಗ್ಯತಾನುಸಾರವಾಗಿ ಸಿದ್ಧಿ ಪ್ರಾಪ್ತಿ; ಪಾಪನಾಶಕ ವಿದ್ಯಾಗೀತೆ;
21. ಜ್ಞಾನಸಾಧನ, ಜ್ಞಾನಿಲಕ್ಷಣ; ದೇವತಾನುಗ್ರಹದಿಂದ ಜ್ಞಾನಲಾಭ; ಜ್ಞಾನಿಗಳಿಗೆ ದೇಹಸಂಯೋಗ ವಿಯೋಗಳಲ್ಲಿ ಸ್ಥಿತಿಭೇದವಿರದು; ಬುದ್ಧಿಯ ಪರಿಪಾಕ ತಾರತಮ್ಯದಿಂದ ಜ್ಞಾನಿಗಳಲ್ಲಿ ಉತ್ತಮ, ಮಧ್ಯಮ, ಅಧಮ, ಭೇದ; ರುಕ್ಮಾಂಗದ ಹೇಮಾಂಗದರ ಕಥೆ; ಕೊಳದ ದಡದಲ್ಲಿ ಬ್ರಹ್ಮರಾಕ್ಷಸನೊಡನೆ ಸಂವಾದ; ಪ್ರಶ್ನೋತ್ತರಗಳು; ಹೇಮಾಂಗದನ ಉತ್ತರದಿಂದ ಪರಾಜಿತನಾದ ಬ್ರಹ್ಮರಾಕ್ಷಸನು ಮುಂಚಿನಂತೆ ಬ್ರಾಹ್ಮಣನಾದುದು;
22. ಶಾಪಮುಕ್ತನಾದ ಆ ವಸುಮಂತನೆಂಬ ಬ್ರಾಹ್ಮಣನು ಅಷ್ಟಕ ಮುನಿಯಿಂದ ತಿಳಿದಿದ್ದ ಆತ್ಮತತ್ವವನ್ನು ಹೇಮಾಂಗದನಿಂದ ಚನ್ನಾಗಿ ತಿಳಿದು, ಜ್ಞಾನಿಯಾದ ಹೇಮಾಂಗದನಿಗೆ ಬೇಟೆ ಮುಂತಾದ ವ್ಯವಹಾರದಲ್ಲಿ ಪ್ರವೃತ್ತಿ ಹೇಗೆಂದು ಕೇಳಿದನು; ಜ್ಞಾನಕ್ಕೆ ವ್ಯವಹಾರದಿಂದ ಬಾಧೆ ತಟ್ಟದು; ನಿರ್ವಿಕಲ್ಪಜ್ಞಾನ ವಾಸ್ತವ; ಸವಿಕಲ್ಪತ್ವವು ಭ್ರಾಂತಿಮೂಲಕವು; ಭ್ರಮಾಭ್ರಮ ವಿವೇಚನೆ; ಜ್ಞಾನಿಗಳಲ್ಲಿ ಉತ್ತಮ, ಮಧ್ಯಮ, ಮಂದರು; ಕರ್ಮಭೇದದಿಂದ ವಾಸನಾಭೇದ; ದತ್ತಗುರುವು ಶಾಸ್ತ್ರಸಾರವನ್ನು ಪುನಃ ಹೇಳಿದುದು; ಈ ವಿಜ್ಞಾನದಿಂದ ಮೋಹ ನಿರಾಸವಾಗುತ್ತೆಂದು ನಾರದನಿಗೆ ಹಾರೀತಾಯನನ ವಿವರಣೆ; ಫಲಶ್ರುತಿ;