ಶ್ರೀ ಸೌರಪುರಾಣವು – ದ್ವಿತೀಯ ಸಂಪುಟ
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಮುನ್ನುಡಿ
ಮೂವತ್ತಾರನೆಯ ಅಧ್ಯಾಯ
ಮೂವತ್ತೇಳನೆಯ ಅಧ್ಯಾಯ
ಮೂವತ್ತೆಂಟನೆಯ ಅಧ್ಯಾಯ
ಶಿವಮಹಿಮಾವರ್ಣನೆ, ಶಿವ, ವಿಷ್ನು, ಇವರ ವಿಷಯವಾಗಿ ಸೂತ ಮತ್ತು ಶೌನಕಮಹರ್ಷಿಗಳ ಸಂವಾದ. ಪ್ರತರ್ದನರಾಜನ ಚರಿತ್ರೆ, ಪ್ರತರ್ದನ ಮತ್ತು ಕ್ಷಪಣಕರ ಸಂವಾದ ಪ್ರತರ್ದನನು ರಾಜ್ಯವನ್ನು ಬಿಟ್ಟು ತಪಸ್ಸನ್ನಾ ಚರಿಸುವಿಕೆ, ಬ್ರಹ್ಮ ಮತ್ತು ಪ್ರತರ್ದನ ಇವರ ಸಂವಾದ, ಪ್ರತರ್ದನನು ಪುನಃ ರಾಜ್ಯವಾಳುತ್ತಿರುವಾಗ ವರ್ಣಾಶ್ರಮಾಚಾರ ಧರ್ಮಗಳ ವರ್ಣನೆ, ಬೃಹಸ್ಪತಿ ಮತ್ತು ಇಂದ್ರ ಇವರ ಸಂವಾದ, ಪ್ರತರ್ದನನ ಪ್ರಜೆಗಳು ಸನ್ಮಾರ್ಗವನ್ನು ಬಿಟ್ಟು ಅಧರ್ಮವನ್ನು ಆಶ್ರಯಿಸುವಂತೆ ಒಂದುಪಾಯವನ್ನು ದೇವತೆಗಳಿಗೆ ಬೃಹಸ್ಪತಿಯು ಬೋಧಿಸುವಿಕೆ, ಅದರಂತೆ ಇಂದ್ರನು ಕಿನ್ನರನೊಬ್ಬನನ್ನು ಕರೆದು, “ನೀನು ಭೂಲೋಕಕ್ಕೆ ಹೋಗಿ ಶಿವನು ವಿಷ್ಣು ಕಿಂಕರನು ಎಂದು ಜನರಿಗೆ ಬೋದಿಸು” ಎಂದು ಆಜ್ಞಾಪಿಸುವಿಕೆ. ಅದರಂತೆ ಕಿನ್ನರನು ಪ್ರತರ್ದನನ ರಾಜ್ಯದಲ್ಲಿ ಬೋಧಿಸುತ್ತಿರುವಾಗ, ಪ್ರತರ್ದನ ಮತ್ತು ವೈಷ್ಣವಾಭಾಸ ಇವರಿಬ್ಬರಿಗೆ ನಡೆದ ಸಂಭಾಷಣೆ.
ಮೂವತ್ತೊಂಬತ್ತನೆಯ ಅಧ್ಯಾಯ
ನಲವತ್ತನೆಯ ಅಧ್ಯಾಯ
ನಲವತ್ತೊಂದನೆಯ ಅಧ್ಯಾಯ
ನಲವತ್ತೆರಡನೆಯ ಅಧ್ಯಾಯ
ನಲವತ್ತು ಮೂರನೆಯ ಅಧ್ಯಾಯ
ಉಮಾಮಹೇಶ್ವರ ವ್ರತವನ್ನು ಮಾಡಬೇಕಾದ ತಿಥಿಗಳು. ವ್ರತ ವಿಧಾನ, ವ್ರತಫಲ, ಶೂಲವ್ರತವಿಧಾನ, ಶೂಲವ್ರತಯೋಗ್ಯವಾದ ತಿಥಿಗಳು, ದೂರ್ವಾಗಣಪತಿವ್ರತ, ದೂರ್ವಾಗಣಪತಿಯ ಪೂಜೆಗೆ ಯೋಗ್ಯವಾದ ಪತ್ರಪುಷ್ಪ ನೈವೇದ್ಯಾದಿ ವಸ್ತುಗಳ ವಿವರಣೆ. ಅರ್ಘ್ಯ, ಆವಾಹನ, ಧೂಪ, ದೀಪ, ಉಪಹಾರ, ಪ್ರಾರ್ಥನೆ ಇವುಗಳ ಪ್ರತ್ಯೇಕ ಮಂತ್ರಗಳ ವಿವರಣೆ. ದೂರ್ವಾಗಣಪತಿ ವ್ರತಾಚರಣೆಯ ಫಲ,
ನಲವತ್ತುನಾಲ್ಕನೆಯ ಅಧ್ಯಾಯ
ನಲವತ್ತೈದನೆಯ ಅಧ್ಯಾಯ
ನಲವತ್ತಾರನೆಯ ಅಧ್ಯಾಯ
ನಲವತ್ತೇಳನೆಯ ಅಧ್ಯಾಯ
ನಲವತ್ತೆಂಟನೆಯ ಅಧ್ಯಾಯ
ನಲವತ್ತೊಂಭತ್ತನೆಯ ಅಧ್ಯಾಯ
ಧರ್ಮವನ್ನು ಸಂಸ್ಥಾಪನೆಮಾಡಲೋಸುಗ ಪಾರ್ವತಿಯು ಅವತರಿಸುವುದು, ರಕ್ತಾಸುರನ ಪರಾಕ್ರಮದ ವರ್ಣನೆ, ರಕ್ತಾಸುರನ ಮಂತ್ರಿಗಳ ಹೆಸರುಗಳು, ರಕ್ತಾಸುರನು ಸಕಲದೇವತೆಗಳನ್ನೂ ಕರೆದು ಇನ್ನು ಮುಂದೆ ನಾನೇ ನಿಮ್ಮೆಲ್ಲರಿಗೂ ಪೂಜ್ಯನಾದವನು, ಮತ್ತೆ ಯಾವ ದೇವರನ್ನೂ ಪೂಜಿಸಕೂಡದು ಎಂದು ಕಟ್ಟಪ್ಪಣೆ ಮಾಡುವುದು, ಲೋಕದಲ್ಲಿ ಧರ್ಮಮಾರ್ಗವು ನಾಶವಾಗುವಿಕೆ, ರಾಕ್ಷಸರಿಂದ ಪರಾಜಿತನಾದ ದೇವೇಂದ್ರನು ತನ್ನ ಗುರುವಾದ ಬೃಹಸ್ಪತ್ಯಾಚಾರ್ಯನ ಸಮೀಪಕ್ಕೆ ಹೋಗುವಿಕೆ, ಅಲ್ಲಿ ತನಗೆ ಉಂಟಾದ ಪರಾಭವವನ್ನು ತಿಳಿಸುವಿಕೆ, ಈ ಕಾಲವು ರಕ್ತಾಸುರನೊಡನೆ ಯುದ್ಧಮಾಡಲು ಯೋಗ್ಯವಾದದ್ದಲ್ಲವೆಂಬುದನ್ನು ಬೃಹಸ್ಪತ್ಯಾಚಾರ್ಯರು ಉಪದೇಶಮಾಡುವಿಕೆ, ಪುರೋಹಿತರಾದ ಬೃಹಸ್ಪತ್ಯಾಚಾರ್ಯರ ಮಾತುಗಳನ್ನು ಕೇಳಿ ದೇವೇಂದ್ರನು ದೈತ್ಯರಿಂದ ಪರಾಜಿತನಾಗಿ ಅವಮಾನವನ್ನು ಪಡೆದು ತಾನು ಜೀವಿಸಿರುವುದಿಲ್ಲವೆಂದು ಪ್ರತಿಜ್ಞೆಮಾಡುವಿಕೆ, ಆ ಸಮಯಕ್ಕೆ ಬಂದ ಬ್ರಹ್ಮನು ದೇವೇಂದ್ರನನ್ನು ಕುರಿತು ದೇವೇಂದ್ರನು ಇದಕ್ಕಾಗಿ ಹೆದರಬೇಕಾಗಿಲ್ಲವೆಂದೂ, ಭಕ್ತಿಯಿಂದ ಜಗನ್ಮಾತೆಯಾದ ಪಾರ್ವತಿಯನ್ನು ಆರಾಧಿಸಿ ಆ ಶಕ್ತಿದೇವತೆಯ ಅನುಗ್ರಹದಿಂದ ತಾನು ದೈತ್ಯರನ್ನು ಗೆಲ್ಲಬಹುದೆಂದೂ ಸಮಾಧಾನಪಡಿಸುವಿಕೆ, ಆಗ ಸಕಲ ದೇವತೆಗಳೊಡನೆ ಕೂಡಿ ಇಂದ್ರನು ಹಿಮಾಲಯ ಪರ್ವತವನ್ನು ಕುರಿತು ಪ್ರಯಾಣಮಾಡುವಿಕೆ, ಪಾರ್ವತಿಗೂ ರಾಕ್ಷಸರಿಗೂ ನಡೆದ ಯುದ್ಧ ವರ್ಣನೆ, ದೇವಿಯು ತನ್ನ ಶಕ್ತ್ಯಾಯುಧದಿಂದ ರಕ್ತಾಸುರನನ್ನು ಕೊಲ್ಲುವಿಕೆ, ಶತ್ರುವನ್ನು ಧ್ವಂಸ ಮಾಡಿ ದೇವಿಯು ದೇವೇಂದ್ರನಿಗೆ ಸಕಲೈಶ್ವರವನ್ನೂ ಒಪ್ಪಿಸುವಿಕೆ.
ಐವತ್ತನೆಯ ಅಧ್ಯಾಯ
ಐವತ್ತೊಂದನೆಯ ಅಧ್ಯಾಯ
ಇವತ್ತೆರಡನೆಯ ಅಧ್ಯಾಯ
ಬ್ರಹ್ಮಹತ್ಯಾ, ಸುರಾಪನ, ಸುವರ್ಣಸ್ತೇಯ, ಗುರುಪತ್ನೀಗಮನ ಅಗಮ್ಯಾಗಮನ, ಬಹಿಷ್ಠೆಯಾದ ಸ್ತ್ರೀಸಂಬಂಧ, ಕನ್ಯಕಾಗಮನ, ನಟೀ, ಶೈಲೂಷಿಕೀ ಮುಂತಾದ ಸ್ತ್ರೀಸಂಬಂಧ, ಭಕ್ಷ್ಯಭೋಜ್ಯಗಳ ಅಪಹಾರ, ಪಶು,ಪಕ್ಷಿ, ಪ್ರಾಣಿ ಮುಂತಾದುವುಗಳ ಅಪಹಾರ ಉಚ್ಛಿಷ್ಟಭೋಜನ, ಖರಯಾನಾದಿಗಳ ಸೇವನೆ, ಇವೇ ಮೊದಲಾನ ಅನೇಕ ಪಾಪಕಾರ್ಯಗಳ ನಿವಾರಣೆಗೆ ಮಾಡಬೇಕಾದ ಪ್ರಾಯಶ್ಚಿತ್ತಗಳು, ಅವುಗಳನ್ನು ಮಾಡದಿದ್ದರೆ ಬರತಕ್ಕ ದೋಷಗಳು.
ಐವತ್ತುಮೂರನೆಯ ಅಧ್ಯಾಯ
ಐವತ್ತುನಾಲ್ಕನೆಯ ಅಧ್ಯಾಯ
ಐವತ್ತೈದನೆಯ ಅಧ್ಯಾಯ
ಐವತ್ತಾರನೆಯ ಅಧ್ಯಾಯ
ಐವತ್ತೇಳನೆಯ ಅಧ್ಯಾಯ
ಐವತ್ತೆಂಟನೆಯ ಅಧ್ಯಾಯ
ಐವತ್ತೊಂಬತ್ತನೆಯ ಅಧ್ಯಾಯ
ಅರುವತ್ತನೆಯ ಅಧ್ಯಾಯ
ಅರುವತ್ತೊಂದನೆಯ ಅಧ್ಯಾಯ
ಅರುವತ್ತೆರಡನೆಯ ಅಧ್ಯಾಯ
ದೇವತೆಗಳು ಗರ್ಭಧಾರಣೆಮಾಡುವುದು, ಆ ಗರ್ಭದ ವಿಷಯವಾಗಿ ದೇವತೆಗಳು ಶಂಕರನೊಡನೆ ಮಾತನಾಡಿಕೊಳ್ಳುವುದು, ಶಿವ ರೇತಸ್ಸಿನ ಮಹಿಮಾವರ್ಣನೆ ಕುಮಾರಸ್ವಾಮಿಯ ಉತ್ಪತ್ತಿ, ಅವನ ವಿಷಯವಾಗಿ ಮತ್ತೆ ಶಿವಪಾರ್ವತಿಯರು ಮಾತನಾಡುವುದು, ಕುಮಾರಸ್ವಾಮಿಯ ಬಾಲಕ್ರೀಡಾವರ್ಣನೆ, ಕುಮಾರ ಸ್ವಾಮಿಯನ್ನು ನಾಶಪಡಿಸುವ ಉದ್ದೇಶಕ್ಕಾಗಿ ಭೂತಗಳು ದೇವೇಂದ್ರನೊಡನೆ ಮಾತನಾಡಿಕೊಳ್ಳುವುದು, ಬಾಲಕನನ್ನು ಕೊಲ್ಲುವ ಉದ್ದೇಶವನ್ನು ನೀವು ನನಗೆ ಹೇಳುವುದುಂಟೇ ಎಂದು ಇಂದ್ರನು ಭೂತಾದಿಗಳನ್ನು ಆಕ್ಷೇಪಿಸುವುದು, ಆತುರ, ಬಾಲಕ ಮುಂತಾದವರ ಹನನದಿಂದ ಬರುವ ಪಾತಕಗಳ ವಿವರಣೆ, ಆಗ ಭೂತಗಳು ದಿತೀದೇವಿಯ ಗರ್ಭವನ್ನು ನಿರ್ಭೇದಿಸಿದ ಸುದ್ದಿಯನ್ನು ಇಂದ್ರನಿಗೆ ಸ್ಮರಿಸಿ ಅದಕ್ಕಿಂತಲೂ ಇದು ಹೆಚ್ಚಿನ ಪಾತಕವಲ್ಲವೆಂಬುದನ್ನು ವಿವರಿಸುವಿಕೆ, ಆ ಮೇಲೆ ಸ್ಕಂದವನ್ನು ಕೊಲ್ಲುವ ಉದ್ದೇಶದಿಂದ ಇಂದ್ರನು ಸೈನ್ಯಸಮೇತನಾಗಿ ಪ್ರಯಾಣಮಾಡುವಿಕೆ.
ಅರುವತ್ತುಮೂರನೆಯ ಅಧ್ಯಾಯ
ಅರುವತ್ತುನಾಲ್ಕನೆಯ ಅಧ್ಯಾಯ
ಅರುವತ್ತೈದನೆಯ ಅಧ್ಯಾಯ
ಶಿವಪಂಚಾಕ್ಷರೀ ಮಂತ್ರ ಮಹಿಮಾವರ್ಣನೆ, ಬಿಲ್ವವೃಕ್ಷಮಹಿಮಾ ವರ್ಣನೆ, ಶಿವಾರ್ಚನೆಯಿಂದ ಬರುವ ಫಲಗಳು, ನಾನಾವಿಧವಾದ ಪುಷ್ಪಗಳಿಂದ ಮಾಡುವ ಶಿವಪೂಜಾ ಫಲಗಳು, ಈಶ್ವರನಿಗೆ ಇಷ್ಟವೆನಿಸುವ ಹೂವುಗಳ ಪರಸ್ಪರ ತಾರತಮ್ಯಗಳ ವಿವರಣೆ, ಶಿವಪೂಜೆಗೆ ನಿಷಿದ್ಧವಾದ ಪುಷ್ಪಗಳ ವಿವರಣೆ, ಬಿಲ್ವಪತ್ರೆಯೇ ಮೊದಲಾದ ಅನೇಕ ಪತ್ರಗಳ ಅರ್ಚನೆಯಿಂದ ಮಾಡಿದ ಶಿವಪೂಜೆಯಿಂದ ಬರುವ ಫಲಗಳು, ಶಿವದೇವಾಲಯವನ್ನು ಅಲಂಕರಿಸುವುದರಿಂದಾಗುವ ಫಲಗಳು, ಹೂವುಗಳಿಂದ ಅರ್ಚಿಸಿದರೆ ಬರುವ ಫಲಗಳು, ಬಾವಿ, ತೋಟ ಇವುಗಳನ್ನು ನಿರ್ಮಿಸುವುದರಿಂದಾಗುವ ಸುಕೃತಗಳು, ಶಿವಕ್ಷೇತ್ರದಲ್ಲಿ ಇರುವ ಪವಿತ್ರಾಂಶದ ಪರಿಮಿತಿ
ಅರವತ್ತಾರನೆಯ ಅಧ್ಯಾಯ
ಶಿವಪ್ರೀತಿಯಿಂದ ಒದಗುವ ಫಲ, ಶಿವಭಜನದಿಂದ ದೊರಕುವ ಫಲ, ಶಿವಸ್ಮರಣ ಫಲ, ಶಿವನಿರ್ಮಾಲ್ಯವನ್ನು ಧರಿಸುವುದರ ಫಲ, ಈಶ್ವರ ನಿರ್ಮಾಲ್ಯವನ್ನು ದಾಟುವುದರ ಫಲ, ಲಿಂಗ ಶಬ್ದಾರ್ಥ ವಿವರಣೆ, ಬ್ರಹ್ಮ, ವಿಷ್ಣು ಇವರಿಬ್ಬರಲ್ಲಿ ಯಾರು ದೊಡ್ಡವರು ಎಂಬ ಚರ್ಚೆ, ಅವರಿಬ್ಬರ ಗರ್ವವನ್ನು ಹೋಗಲಾಡಿಸಲು ಲಿಂಗದ ಆವಿರ್ಭಾವ, ನೀವಿಬ್ಬರೂ ದೊಡ್ಡವರು ಎಂಬ ಭಾವವನ್ನು ಬಿಟ್ಟುಬಿಡಿ ಎಂದು ಈಶ್ವರನ ಉಪದೇಶ, ನನ್ನ ಅನುಗ್ರಹದಿಂದ ಲೋಕದ ಸರ್ವವಸ್ತುಗಳಿಗೂ ನೀನು ದೊಡ್ಡವನೆನಿಸು ಎಂದು ಈಶ್ವರನು ವಿಷ್ಣುವಿಗೆ ವರಕೊಡುವಿಕೆ, ಚರಾಚರಾತ್ಮಕವಾದ ಈ ಜಗತ್ತಿನಲ್ಲಿ ನೀನು ಮಾನ್ಯನೆನಿಸಿಕೊಂಡಿರು ಎಂದು ಬ್ರಹ್ಮನಿಗೆ ಶಂಕರನ ವರ, ಬ್ರಹ್ಮ, ನಾರದ ಇವರಿಬ್ಬರ ಸಂವಾದ, ಸಮುದ್ರದರ್ಶನಾದಿಗಳಿಂದ ಒದಗುವ ಮಹಿಮೆ, ಸಪ್ತಕೋಟೀಶ್ವರಲಿಂಗದ ಪ್ರಭಾವವರ್ಣನೆ.
ಅರುವತ್ತೇಳನೆಯ ಅಧ್ಯಾಯ
ಅರುವತ್ತೆಂಟನೆಯ ಅಧ್ಯಾಯ
ತಿಥಿನಿರ್ಣಯ, ಸೋಮಸೂತ್ರ ಪ್ರದಕ್ಷಿಣಾಕ್ರಮ, ಮಂತ್ರವೀರ್ಯಹರವಾದ ಪದಾರ್ಥಗಳು, ಗುರುಶಬ್ದವ್ಯುತ್ಪತ್ತಿ, ಗುರುಗಳನು ದೂರಮಾಡುವುದರಿಂದ ಬರುವ ದೋಷಗಳು, ಶ್ರಾದ್ಧಕರ್ತೃವಿನ ನಿಯಮಗಳು, ಸಾಗ್ನಿಕ, ನಿರಗ್ನಿಕ, ಎಂಬ ಪದಗಳ ಅರ್ಥವಿವರಣೆ, ಒಂದು ಕೈಯ್ಯಿಂದ ಮಾಡುವ ಪ್ರಣಾಮಾದಿಗಳಿಂದ ಒವಗುವ ದೋಷಗಳು, ಕ್ಷಾರಗುಣ ಮತ್ತು ಅಕ್ಷಾರಗುಣಗಳ ವಸ್ತು ನಿರೂಪಣ, ಪರಭಕ್ಷಕರು ಯಾರು ಎಂಬುದರ ವಿವರಣೆ.
ಅರವತ್ತೊಂಬತ್ತನೆಯ ಅಧ್ಯಾಯ