ಶ್ರೀಮತ್ಸ್ಕಾಂದಪುರಾಣಾಂತರ್ಗತಾ – ಸೂತಸಂಹಿತಾ – ಸೂತಗೀತಾ
ವಿಷಯಾನುಕ್ರಮಣಿಕೆ
ಮುನ್ನುಡಿ
ನೈಮಿಶಾರಣ್ಯವಾಸಿಗಳಾದ ಶೌನಕಾದಿ ಋಷಿಗಳು ಮಾಡಿದ ಸೂತಮಹರ್ಷಿಯ ಸ್ತೋತ್ರ; ಅದ್ವೈತ ಸಿದ್ಧಾಂತದ ಮುಖ್ಯ ವಿಷಯಗಳು; ಋಷಿಗಳು ಸೂತಗೀತೆಯನ್ನು ಕೇಳಲು ಪ್ರಶ್ನೆಮಾಡಿದುದು; ವ್ಯಾಸರನ್ನು ಧ್ಯಾನಿಸಿ ಪ್ರತ್ಯಕ್ಷರಾದ ಅವರಿಂದ ಅನುಜ್ಞೆಯನ್ನು ಪಡೆದು, ಸೂತನು ಸೂತಗೀತೆಯನ್ನು ಹೇಳಿದುದು;
ಪರಮಾತ್ಮನು, ಪಶು, ಪಾಶಗಳಿಗೆ ಪತಿಯು; ಪಂಚಭೂತಗಳು, ಪಂಚಗುಣಗಳು, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ದಶಪ್ರಾಣಗಳು, ನಾಲ್ಕು ಅಂತಃಕರಣಗಳು, ಅವಿದ್ಯೆ, ಈ ಮೂವತ್ತೈದು ಜೀವರಬಂಧಕಗಳಾದ ಪಾಶಗಳು; ಅವಿದ್ಯೆ, ಜೀವರು ಪಶುಗಳು; ಮಾಯೆ, ಈಶ್ವರ; ಬ್ರಹ್ಮಾ, ವಿಷ್ಣು, ರುದ್ರರು ಈಶ್ವರಾಂಶರು; ಮಾಯೋಪಾಧಿಕರು; ಭೇದವು ಔಷಾಧಿಕವು; ರುದ್ರನಲ್ಲಿ ವಿಶೇಷಗುಣ; ತ್ರಿಮೂರ್ತಿಗಳು ಈಶ್ವರ ಕೋಟಿಗೆ ಸೇರಿದವರು; ಜೀವಕೋಟಿಗೆ ಸೇರಿದವರಲ್ಲವು;
ಪರತತ್ವರೂಪನಾದ ಸದಾಶಿವನಿಂದ ಪ್ರಪಂಚವು ಸೃಷ್ಟಿಸಲ್ಪಟ್ಟ ಕ್ರಮ; ಜೀವಾತ್ಮ ಪರಮಾತ್ಮರಿಗಿರುವ ವಿಶೇಷ; ಅಧ್ಯಾರೋಪ ಅಪವಾದನ್ಯಾಯವನ್ನು ಅನುಸರಿಸಿ ಸೃಷ್ಟಿಲಯಗಳ ವಿವರಣೆ; ಈ ವಿಷಯದಲ್ಲಿ ಶಾಸ್ತ್ರಗಳ ವಾದ ವಿಶೇಷಗಳು;
ಸಾಮಾನ್ಯಸೃಷ್ಟಿ ವಿವರಣೆ; ವಿಶೇಷ ಸೃಷ್ಟಿವಿವರಣೆ; ಅನಾದಿ ಕರ್ಮವಾಸನಾರೂಪವಾದ ಮಾಯೆಯು ಮೂಲಪ್ರಕೃತಿಯು; ಅದರಿಂದ ಮೊದಲು ತ್ರಿಮೂರ್ತಿಗಳು ಉಂಟಾದುದು; ಸಮಷ್ಟಿ ವ್ಯಷ್ಟಿಗಳು ಉಂಟಾದ ಬಗೆ; ಅಭಿಮಾನಿದೇವತೆಗಳು;
ಆತ್ಮಸ್ವರೂಪವಿವರಣೆ; ಆತ್ಮಾನಾತ್ಮವಿವೇಚನೆ; ಅಹಂಮಮಾಭಿಮಾನದಿದ ಜೀವರು; ಜೀವೇಶ್ವರರ ಸ್ವರೂಪ ಭೇದ; ಅವಿದ್ಯಾऽವರಣಕ್ಕೆ ಜೀವರು ಅಧೀನರು; ತ್ರಿಮೂರ್ತಿಗಳು ಮಾಯಾಸಂಬಂಧವುಳ್ಳವರಾದರೂ ಅದಕ್ಕೆ ಅಧೀನರಲ್ಲವು; ಅವರಲ್ಲಿಯೂ ಆವರಣಾಭಿಮಾನತಾರತಮ್ಯ; ಮಾಯೆಯ ಮೂರು ಗುಣಗಳು;
ಸರ್ವಶಾಸ್ತ್ರಾರ್ಥಸಂಗ್ರಹವರ್ಣನ; ಸಚ್ಚಿದಾನಂದರೂಪವಾದ ಪರತತ್ವವು ಎಲ್ಲರಿಗೂ ಆತ್ಮಭೂತವಾಗಿದೆ ತ್ರಿಮೂರ್ತಿಗಳಲ್ಲಿ ಪ್ರಕಾಶತಿರೋಭಾವಗಳು, ಪರತತ್ವದ ಅಜ್ಞಾನರೂಪವಾದ ಮಾಯೆಯ ಆವರಣವಿಕ್ಷೇಪಗಳು, ಜೀವರಲ್ಲಿ ಹೇಗೋ ಹಾಗೆ, ಕರ್ಮಾಧೀನವಲ್ಲವು; ಆಥರ್ವಶಿಖೋಪನಿಷತ್ತಿನಲ್ಲಿ ಸಂಸಾರವೃಕ್ಷದ ವಿವರಣೆ; ಜ್ಞಾನದಿದ ಗುರ್ವನುಗ್ರಹದಿಂದ, ಈಶ್ವರಪ್ರಸಾದದಿಂದ ಮೋಕ್ಷಲಾಭ;
ರಹಸ್ಯವಾದ ಮೋಕ್ಷಸಾಧನದ ಉಪದೇಶ; ಬ್ರಹ್ಮಾ, ವಿಷ್ಣು, ರುದ್ರ, ಈಶ್ವರ, ಸದಾಶಿವರೆಂಬ ದೇವತಾಕ್ರಮ; ಶರೀರಗಳಲ್ಲಿನ ಅವಯವಗಳಿಗೆ ಅಭಿಮಾನಿದೇವತೆಗಳ ವಿವರಣೆ;ವೈದಿಕಾವೈದಿಕ ತಾಂತ್ರಿಕಮಾರ್ಗಗಳು; ಎಲ್ಲವೂ ಆಯಾ ಅಧಿಕಾರಿಗಳ ಯೋಗ್ಯತಾಭೇದದಿಂದ ಅವರವರಿಗೆ ಉಪಾದೇಯಗಳು;
ಸರ್ವವೇದಾಂತಸಂಗ್ರಹವಿವರಣೆ; ಪರಬ್ರಹ್ಮತತ್ವದ ಸಕಲ ನಿಷ್ಕಲ, ಸ್ವರೂಪ, ನಿಷ್ಕಲ ಪರತತ್ವಜ್ಞಾನದಿಂದ ಮೋಕ್ಷ; ಜ್ಞಾನೇಚ್ಛೆಗೆ ಕಾರಣಗಳು; ಸಾಧನಧರ್ಮಗಳು; ತಾಂತ್ರಿಕ ಧರ್ಮಕ್ಕಿಂತ ಸ್ಮಾರ್ತಧರ್ಮದ ಉತ್ಕರ್ಷ; ಎಲ್ಲಕ್ಕಿಂತಲೂ ಶ್ರೌತಧರ್ಮದ ಉತ್ಕರ್ಷ, ಆದರಿಂದಲೇ ಪರಮಪುರುಷಾರ್ಥಲಾಭ; ಎಲ್ಲ ಧರ್ಮಗಳೂ ಸೋಪಾನಕ್ರಮದಲ್ಲಿ ಆಯಾ ಅಧಿಕಾರಿಗಳಿಗೆ ಉಪಯುಕ್ತಗಳಾಗಿವೆ; ಗುರೂಪ ದೇಶ, ಈಶ್ವರಪ್ರಸಾದ, ಭಕ್ತಿ ಶ್ರದ್ಧೆಯಿಂದ ಕೂಡಿದ ಧರ್ಮಾಚರಣೆ, ಚಿತ್ತಶುದ್ಧಿ ಜ್ಞಾನಪ್ರಾಪ್ತಿಯಿಂದ ಎಲ್ಲರಿಗೂ ಕ್ರಮವಾಗಿ ಮೋಕ್ಷಲಾಭವುಂಟು;