ಶ್ರೀಮತ್ಸ್ಕಾಂದಪುರಾಣಾಂತರ್ಗತಾ – ಸೂತಸಂಹಿತಾ – ಬ್ರಹ್ಮಗೀತಾ
ವಿಷಯಾನುಕ್ರಮಣಿಕೆ
ಮುನ್ನುಡಿ
1. ಪುರುಷಾರ್ಥಸ್ವರೂಪ; ಮೋಕ್ಷವು ದುಃಖದ ಅತ್ಯಂತಿಕವಾದ ನಿವೃತ್ತಿಯು; ಜ್ಞಾನವೇ ಮೋಕ್ಷಸಾಧನ; ಬ್ರಹ್ಮ ಗೀತೆಯ ವ್ಯಾಸಂಗದಿಂದ ಜ್ಞಾನಲಾಭವಾಗುತ್ತದೆ. ಬ್ರಹ್ಮ ಗೀತೆಯನ್ನು ಬ್ರಹ್ಮನು ದೇವತೆಗಳಿಗೆ ಉಪದೇಶಿಸಿದನೆಂದು, ಸೂತಮಹರ್ಷಿಯು ಶೌನಕಾದಿ ಋಷಿಗಳಿಗೆ ಉಪದೇಶಮಾಡಿದನು; ಮೇರು ಶೃಂಗದಲ್ಲಿ ಬ್ರಹ್ಮವನದಲ್ಲಿ ಬ್ರಹ್ಮಪುರದ ಮಧ್ಯದಲ್ಲಿ ರತ್ನ ಮಂತಪದಲ್ಲಿ ಬ್ರಹ್ಮನು ಸರಸ್ವತಿಯೊಡನೆ ಇದಾನೆ; ದೇವತೆಗಳು ಬ್ರಹ್ಮನನ್ನು ಕಂಡು ಮಾಡಿದ ಸ್ತೋತ್ರ;
2. ವೇದಗಳ ಮುಖ್ಯಾರ್ಥವನ್ನು ತಿಳಿಯಬೇಕೆಂದು ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದರು; ಮೊದಲು ಋಗ್ವೇದಕ್ಕೆ ಸಂಬಂಧಿಸಿದ ಐತರೇಯೋಪನಿಷತ್ತಿನ ಮುಖ್ಯ ತಾತ್ಪರ್ಯರ್ಥವನ್ನು ಬ್ರಹ್ಮನು ವಿವರಿಸಿ ಹೇಳಿದನು; ಆತ್ಮತತ್ವದ ಅರ್ಥ ವಿವರಣೆ; ಪ್ರಳಯದ ಕ್ರಮ ಮತ್ತು ಸೃಷ್ಟಿಯ ಕ್ರಮಗಳ ವಿವರಣೆ; ಶಕ್ತಿ ಅಥವಾ ಮಾಯೆಯ, ಸ್ವರೂಪ ವಿವರಣೆ; ಜಗತ್ಕಾರಣವಾದ ತತ್ವದ ವಿಷಯದಲ್ಲಿರುವ ಮತಭೇದಗಳು; ಅವುಗಳಿಗೆ ಅನುಕೂಲವಾದ ತರ್ಕಗಳ ಸ್ವರೂಪ; ಅವುಗಳಲ್ಲಿರುವ ದೋಷಗಳ ವಿವರಣೆ; ವೇದಾಂತಸಿದ್ಧಾಂತದ ದೃಷ್ಟಿಯು; ತತ್ವವು ಒಂದೇ ರೂಪವುಳ್ಳುದು; ಸಾಂಖ್ಯಾದಿ ಮತಗಳಲ್ಲಿ ದೊಡ್ಡ ಜನರೂ ಸೇರಿದುದೇಕೆ? ಜನರ ಚಿತ್ತಪರಿಪಾಕಕ್ಕೆ ಅನುಗುಣವಾದ ಮತವನ್ನು ಅನುಸರಿಸುತ್ತಾರೆ; ಅದ್ವೈತದಲ್ಲಿ ಆದರವು ಶಿವಪ್ರಸಾದ ಮಹಿಮೆಯಿಂದ ಉಂಟಾಗುತ್ತದೆ; ವೇದಾರ್ಥ ವಿಚಾರ;
3. ಯಜುಶ್ಯಾಖೆಯ ತೈತ್ತಿರೀಯ ಉಪನಿಷತ್ತಿನ ಮುಖ್ಯ ತಾತ್ಪರ್ಯ ವಿವರಣೆ; ಶಂಕರನು ಸಾಕ್ಷಿಸ್ವರೂಪನು; ಸಾಕ್ಷಿ ಇಲ್ಲದೆ ಪ್ರಪಂಚದ ಭಾನವು ಆಗಲಾರದು; ಪ್ರಮಾಣಗಳ ಸ್ವರೂಪ; ಪ್ರತ್ಯಕ್ಷವಾಗುವ ಕ್ರಮ; ಪ್ರಾಚೀನರ ಅಭಿಪ್ರಾಯ; ಆಧುನಿಕರ ಅಭಿಪ್ರಾಯ ವಿವರಣೆ; ಆತ್ಮನೇ ಸರ್ವಸಾಕ್ಷಿ; ಆತ್ಮರೂ ಬ್ರಹ್ಮವೂ ಅಭಿನ್ನ ತತ್ವವು; ಪರವಿದ್ಯೆ ಅಪರವಿದ್ಯೆ; ಬ್ರಹ್ಮವನ್ನು ತಿಳಿಯುವುದರಿಂದ ಬ್ರಹ್ಮನೇ ಆಗುತ್ತಾನೆ; ಈ ಅಭೇದವು ತಿಳಿಯದಿರಲು ಮಾಯೆಯ ಎರಡು ಶಕ್ತಿಗಳ ಪ್ರಭಾವ; ಪಂಚಕೋಶಗಳ ವಿವರಣೆ; ಬ್ರಹ್ಮತತ್ವವು ವಿಶ್ವವ್ಯಾಪಿಯಾಗಿದೆ; ಹಾಗಿದ್ದರೆ ಎಲ್ಲರಿಗೂ ಏಕೆ ಗೊತ್ತಾಗುವುದಿಲ್ಲ? ವಿಚಾರವಿಲ್ಲದ್ದರಿಂದ ತಿಳಿಯದೆ ಇದೆ; ಆನಂದವು ಬ್ರಹ್ಮಸ್ವರೂಪವು; ಆನಂದ ತಾರತಮ್ಯ; ಸಾಕ್ಷಿತತ್ವವು ನಿರ್ಲಿಪ್ತವಾದುದು;
4. ಸಾಮಶಾಖೆಯ ಕೇನೋ (ತಲವಕಾರೋ) ಪನಿಷತ್ತಿನ ಮುಖ್ಯ ತಾತ್ಪರ್ಯಾರ್ಥವಿವರಣೆ; ದೇಹ, ಇಂದ್ರಿಯ ಮನೋಬುದ್ಧ್ಯಾದಿಗಳಿಗೂ, ಎಲ್ಲ ಪ್ರಪಂಚಕ್ಕೂ ಪ್ರೇರಕನು ಯಾರು? ಆತ್ಮನೇ ಸರ್ವ ಪ್ರೇರಕನು; ವ್ಯಾವಹಾರಿಕ ಮತ್ತು ಪಾರಮಾರ್ಥಿಕ ದೃಷ್ಟಿಗಳು; ಆತ್ಮಜ್ಞಾನದಿಂದ ಮುಕ್ತಿ; ಆತ್ಮನು ಒಬ್ಬನೇ ಆದರೆ ಒಬ್ಬನಿಗೆ ಮುಕ್ತಿಯಾದರೆ ಎಲ್ಲರಿಗೂ ಮುಕ್ತಿಯೇ? ಜ್ಞಾನಿಗೂ ಅಜ್ಞಾನಿಗೂ ಇರುವ ವಿಶೇಷ; ಆತ್ಮನೇ ಎಲ್ಲ ಪ್ರಮಾಣಗಳಿಗೂ ಅವಧಿಯು; ದೇವಾಸುರರ ಯುದ್ಧದಲ್ಲಿ ದೇವತೆಗಳಿಗೆ ಜಯ; ದೇವತೆಗಳ ಅಹಂಕಾರ; ಅದ್ಭುತವಾದ ಭೂತದ ಆವಿರ್ಭಾವ; ಅಗ್ನಿ, ವಾಯು, ಇಂದ್ರರ ಪ್ರಯತ್ನವು ನಿಷ್ಫಲವಾಗಲು, ಉಮಾದೇವಿಯು ಬ್ರಹ್ಮೋಪದೇಶವನ್ನು ಅನುಗ್ರಹಿಸಿದುದು; ಬ್ರಹ್ಮಾತ್ಮೈಕ್ಯಜ್ಞಾನಕ್ಕೆ ಸಾಧನವಾದ ಧರ್ಮಗಳು;
5. ಸಾಮಶಾಖೆದ ಸೇರಿದ ಛಾಂದೋಗ್ಯೋಪನಿಷತ್ತಿನ ಮುಖ್ಯಾರ್ಥದ ವಿವರಣೆ; ಆದೇಶಪದಾರ್ಥವಿವರಣೆ; ಬ್ರಹ್ಮವು ಸರ್ವಪ್ರಪಂಚಕ್ಕೂ ಮೂಲ, ಅಧಿಷ್ಠಾನಕಾರಣವು; ಸತ್ಕಾರ್ಯವಾದ ಅಸತ್ಕಾರ್ಯವಾದ; ಏಕವಿಜ್ಞಾನದಿಂದ ಸರ್ವವಿಜ್ಞಾನ; ಕಾರಣಜ್ಞಾನದಿಂದ ಕಾರ್ಯಸಾಮಾನ್ಯದ ಜ್ಞಾನ; ಅನ್ನದ ಮೂರು ಬಗೆಯ ಪರಿಣಾಮ; ತತ್ಪದಾರ್ಥ ತ್ವಂಪದಾರ್ಥಗಳ ವಿವರಣೆ; ಮೂರು ಬಗೆಯ ಭೇದವೂ ಇಲ್ಲದ ಬ್ರಹ್ಮತತ್ವದ ಸ್ವರೂಪವಿವರಣೆ; ಬ್ರಹ್ಮವು ಪ್ರಪಂಚಕ್ಕೆ ಅಭಿನ್ನ ನಿಮಿತ್ತೋಪಾದಾನಕಾರಣವೆಂದರೇನು? ಅಭ್ಯಾಸವು ತಾತ್ಪರ್ಯಗ್ರಾಹಕಲಿಂಗವು; ಭೂಮವಿದ್ಯಾಸ್ವರೂಪ; ಮುಕ್ತಿಸ್ವರೂಪ;
6. ಬ್ರಹ್ಮಪುರ ಅಥವಾ ದಹರಾಕಾಶದ ಸ್ವರೂಪ; ಹಾರ್ದಾಕಾಶವು ಆತ್ಮಜ್ಞಾನಕ್ಕೆ ಉಲಬ್ಧಿಸ್ಥಾನವು; ಆತ್ಮನು ಮೂರು ಬಗೆಯ ಪರಿಚ್ಛೇದವಿಲ್ಲದವನು; ಆತ್ಮನು ಸಚ್ಚಿದಾನಂದ ರೂಪನಾಗಿದಾನೆಂದು ಎಲ್ಲರಿಗೂ ಅನುಭವಕ್ಕೆ ಬರುವುದು; ದಹರೋಪಾಸನೆಯ ಕ್ರಮ;
7. ಅಥರ್ವಣಶಾಖೆಗೆ ಸೇರಿದ ಮುಂಡಕೋಪನಿಷತ್ತಿನ ಮುಖ್ಯ ತಾತ್ಪರ್ಯದ ವಿವರಣೆ; ಪರವಿದ್ಯೆ, ಅಪರವಿದ್ಯೆ; ಜಗತ್ತು ಹೊರಹೊಮ್ಮುವ ಬಗೆ, ಮತ್ತು ಕಾರಣದ ವಿವರಣೆ; ಅಧಿಷ್ಠಾನ ಬ್ರಹ್ಮಜ್ಞಾನದಿಂದ ಮುಕ್ತಿಲಾಭ; ಫಂಚಾಗ್ನಿ ವಿದ್ಯಾಸ್ವರೂಪವು; ಆತ್ಮವೇದನ; ಪ್ರಣವೋಪಾಸನೆ; ಪರಬ್ರಹ್ಮ; ಅಪರಬ್ರಹ್ಮ; ಶರೀರದಲ್ಲಿ ಜೀವಾತ್ಮ ಪರಮಾತ್ಮರು; ಈ ಎರಡೂ ಅಭಿನ್ನ ತತ್ವವು; ಭೇದವು ಯಾವ ಪ್ರಮಾಣದಿಂದಲೂ ಸಿದ್ಧಿಸುವುದಿಲ್ಲವಾದುದರಿಂದ ಅದ್ವೈತವೇ ಸಿದ್ಧಾಂತವಾಗಿರುತ್ತದೆ; ಕರ್ಮಸಾಮ್ಯದಿಂದ ಮೋಕ್ಷ;
8. ಕೈವಲ್ಯೋಪನಿಷತ್ತಿನ ಮುಖ್ಯತಾತ್ಪರ್ಯದ ಸ್ವರೂಪ; ವಿಷಯ, ಪ್ರಯೋಜನ, ಸಾಧನ, ಅಧಿಕಾರಿಗಳ ಸ್ವರೂಪವಿವರಗಣೆಯೊಡನೆ ಆತ್ಮವಿದ್ಯಾಸ್ವರೂಪವನ್ನು ತಿಳಿಯಹೇಳಿದುದು; ಜಾಗ್ರತ್ಸ್ವಪ್ನಸುಷುಪ್ತಿಗಳೆಂಬ ಅವಸ್ಥಾತ್ರಯಕ್ಕೆ ಆತ್ಮನ ಪುರತ್ರಯವೆಂದೂ ಹೆಸರು; ಪರಶಿವನ ಧಾಮತ್ರಯವೆಂದೂ ಹೆಸರು; ಈ ಅವಸ್ಥಾಭಿಮಾನಿಗಳಿಗೆ ವಿಶ್ವ, ತೈಜಸ, ಪ್ರಾಜ್ಞರೆದೂ ಹೆಸರಿದೆ; ಅವಸ್ಥಾತ್ರಯಸಾಕ್ಷಿಯಾದ ಆತ್ಮನೇ ಶಿವಸ್ವರೂಪನೂ, ಬ್ರಹ್ಮಸ್ವರೂಪನೂ ಆಗಿದ್ದಾನೆ;
9. ಬೃಹದಾರಣ್ಯಕೋಪನಿಷತ್ತಿನ ಮುಖ್ಯತಾತ್ಪರ್ಯವಿವರಣೆ; ಈ ಪ್ರಪಂಚದ ಗಂಡ, ಹೆಂಡತಿ, ಮಕ್ಕಳು, ಹಣ, ಮನೆ, ಮುಂತಾದವೆಲ್ಲವೂ ಆತ್ಮಕಾಮನೆಯಿಂದ ಪ್ರಿಯವಾಗಿವೆ; ವೇದ, ಶಾಸ್ತ್ರ, ಪುರಾಣಗಳಲ್ಲೂ, ಬೌದ್ಧ, ಆರ್ಹತ, ಮುಂತಾದ ಅವೈದಿಕ ಆಗಮಗಳಲ್ಲೂ, ಶೈವ, ವೈಷ್ಣವ, ಶಾಕ್ತೇಯ ಮುಂತಾದ ವೈದಿಕಾಗಮಗಳಲ್ಲೂ ಸಾಮರಸ್ಯವನ್ನು ಕಾಣಬೇಕು; ಕ್ರಿಮಿ, ಪಶು, ಮಾನವರಲ್ಲಿ ಕ್ರಮವಾಗಿ ಹೆಚ್ಚು ಪ್ರಜ್ಞೆಯ ಆವಿರ್ಭಾವ; ಅದ್ವೈತದಲ್ಲಿಯೇ ಎಲ್ಲಕ್ಕೂ ಮುಖ್ಯ ತಾತ್ಪರ್ಯ;
10. ಉಷಸ್ತಬ್ರಾಹ್ಮಣವಾಕ್ಯಗಳಿಗೂ ಮುಖ್ಯ ತಾತ್ಪರ್ಯವು ಅದ್ವೈತ ಪ್ರತಿಪಾದನೆಯಲ್ಲಿದೆ; ಸಾಕ್ಷಿಚೈತನ್ಯವು ಸರ್ವಾಂತರತತ್ವವಾಗಿದೆ; ಆ ಆತ್ಮನೇ ಸರ್ವಾಂತರ್ಯಾಮಿಯೂ ಆಗಿದಾನೆ; ಸರ್ವಾಂತರ್ಯಾಮಿಯೇ ಬ್ರಹ್ಮತತ್ವವೂ ಆಗಿದೆ; ವರ್ಣಾಶ್ರಮ ಧರ್ಮಾಚರಣೆ, ಸದ್ಗುರುಸೇವಾ, ಇತ್ಯಾದಿಗಳು ಮೋಕ್ಷ ಸಾಧನಗಳು;
11. ಪ್ರಾಪ್ಯವಾದ ಪರಬ್ರಹ್ಮತತ್ವದ ದರ್ಶನಕ್ಕೆ ಮಾರ್ಗ ವಿವರಣೆ ಕಠೋಪನಿಷತ್ತಿನಲ್ಲಿ ಹೇಳಿರುವಂತೆ ಓಂಕಾರೋಪಾಸನೆಯು ಮುಖ್ಯವೂ ಸುಲಭವೂ ಖಚಿತವೂ ಆಗಿರುವ ಮಾರ್ಗವಾಗಿದೆ; ಸಗುಣವೂ, ಸಾಕಾರವೂ, ಆಗಿರುವ ಅಪರಬ್ರಹ್ಮ ಸಾಕ್ಷಾತ್ಕಾರಕ್ಕೂ, ನಿರ್ಗುಣವೂ, ನಿರಾಕಾರವೂ, ನಿತ್ಯವೂ ಆಗಿರುವ ಪರಬ್ರಹ್ಮ ತತ್ವದ ಅಪರೋಕ್ಷಾನುಭವಕ್ಕೂ ಓಂಕಾರವೇ ಸಮಾನವಾದ ಉಪಾಸನೆಗೆ ಪ್ರತೀತವಾಗಿದೆ; ಆತ್ಮನಲ್ಲಿ ರಥಿಕನ ರೂಪಣೆ ಸಾವಯವಾಗಿದೆ; ಪರಮಾತ್ಮನ ಭಯದಿಂದಲೇ ಎಲ್ಲವೂ ಎಲ್ಲರೂ ತಮ್ಮ ತಮ್ಮ ಕಾರ್ಯನಿರ್ವಾಹದಲ್ಲಿ ಪ್ರೇರಿತರಾಗಿ ನೆರವೇರಿಸುತ್ತಿದ್ದಾರೆ; ಶ್ವೇತಾಶ್ವತರೋಪನಿಷತ್ತಿನ ಮುಖ್ಯ ತಾತ್ಪರ್ಯವಿವರಣೆ; ಜ್ಞಾಜ್ಞರು ಜೀವಾಜೀವರು; ನಿಸ್ಕಾಮ ಕರ್ಮಾಚರಣೆ, ಈಶ್ವರಪ್ರಸಾದ, ಚಿತ್ತಶುದ್ಧಿ, ಜ್ಞಾನಪ್ರಾಪ್ತಿ, ಮೋಕ್ಷಾನಂದಾನುಭವಗಳು ಕ್ರಮವಾಗಿ ಎಲ್ಲರಿಗೂ ಆಗುತ್ತವೆ;
12. ಸರ್ವಶಾಸ್ತ್ರಾರ್ಥಗಳನ್ನೂ ಸಂಗ್ರಹಿಸಿ ಜ್ಞಾಪಕ ಸೌಕರ್ಯಕ್ಕಾಗಿ ಹೇಳಿದೆ; ಪ್ರತ್ಯಗಾತ್ಮ, ಸಾಕ್ಷಿವೈತನ್ಯ, ಪರಮಾತ್ಮ ಬ್ರಹ್ಮ ತತ್ವಗಳು ಅಭಿನ್ನ ತತ್ವವು; ಇದರ ಸಾಕ್ಷಾತ್ಕಾರ ಉಪಾಸನೆಯಿಂದ; ಅದರ ತಿಳಿವಳಿಕೆಯು ಸದ್ಗುರುವಿನಿಂದ; ಗುರುಸೇವಾಮುಖ್ಯಧರ್ಮ; ಶಿವನು ಕೋಪಗೊಂಡರೆ ಗುರುವು ರಕ್ಷಕನು; ಗುರುವು ಕೋಪಗೊಂಡರೆ ರಕ್ಷಕರಿಲ್ಲವು; ಶಿವನೇ ಪರಮ ಗುರುವು; ಎಂದು ಬ್ರಹ್ಮನು ದೇವತೆಗಳಿಗೆ ಹೇಳಿದ್ದನ್ನು, ಸೂತನು ಋಷಿಗಳಿಗೆ ಉಪದೇಶಿಸಿದನು; ಶಿವಪೂಜಾ, ಉಪಾಸನೆಗಳು, ಸರ್ವಸುಲಭವೂ, ನಿಶ್ರೇಯಸಸಾಧನವೂ ಎಲ್ಲರಿಗೂ ಕ್ರಮವಾಗಿ ಆಗುತ್ತದೆ.