ಶ್ರೀಮತ್ಸ್ಕಾಂದಪುರಾಣಾಂತರ್ಗತಾ – ಸೂತಸಂಹಿತಾ – ಯಜ್ಞವೈಭವಖಂಡ, ಭಾಗ – ೧
ವಿಷಯಾನುಕ್ರಮಣಿಕೆ
ಮುನ್ನುಡಿ
1. ಸರ್ವವೇದಾರ್ಥ ಪ್ರಶ್ನೆ;
2. ಪರಾಪರವೇದಾರ್ಥವಿಚಾರ; ಪರಬ್ರಹ್ಮತತ್ವವೇ ಪರವೂ, ಮುಖ್ಯವೂ, ಫಲರೂಪವೂ ಆದ ವೇದಾರ್ಥವು; ಕಾಮ್ಯ, ನಿತ್ಯ, ನೈಮಿತ್ತಿಕ, ಕರ್ಮಗಳೇ ಸಾಧನರೂಪವಾದ ಅಪರ ವೇದಾರ್ಥವು; ಇದೇ ವರ್ಣಾಶ್ರಮಧರ್ಮವು; ಅಧಿಕಾರಿಗಳಲ್ಲಿ ವಾನಪ್ರಸ್ಥನೂ, ನೈಷ್ಠಿಕಬ್ರಹ್ಮಚಾರಿಯೂ, ಬ್ರಹ್ಮಲೋಕವನ್ನು ಪಡೆಯುತ್ತಾರೆ. ಗೃಹಸ್ಥನು ಪಿತೃಲೋಕವನ್ನೂ, ಸನ್ಯಾಸಿಯು ಪರಶಿವಜ್ಞಾನದಿಂದ ಮೋಕ್ಷವನ್ನೂ ಪಡೆಯುತ್ತಾರೆ; ಪರೋಕ್ಷಜ್ಞಾನದಿಂದ ಬುದ್ಧಿಪೂರ್ವಕವಾದ ಪಾಪನಾಶವೂ, ಅಪರೋಕ್ಷಜ್ಞಾನದಿಂದ ಸಂಸಾರದುಃಖದ ಬಿಡುಗಡೆಯೂ ಲಭಿಸುತ್ತವೆ; ಪರಮಹಂಸನಿಗೆ ಪ್ರಣವ ಜಪದಿಂದ ಸಮ್ಯಕ್ ಜ್ಞಾನವಾಗುತ್ತದೆ; ಇತರರಿಗೆ ಶತರುದ್ರೀಯ ಜಪದಿಂದ ಕ್ರಮವಾಗಿ ಜ್ಞಾನವಾಗುತ್ತದೆ; ಪಂಚಾಕ್ಷರಿಯಲ್ಲಿ ಮಹಾದೇವನು ಉಪಾಸ್ಯನು; ಮಾಯೆಯು ಗುಣತ್ರಯರೂಪವಾದುದು; ಶುಕ್ಲವರ್ಣದ ಸತ್ವದಿಂದ ಸುಖ, ಜ್ಞಾನ, ವೈರಾಗ್ಯಗಳೂ, ಲೋಹಿತವರ್ಣದ ರಜಸ್ಸಿನಿಂದ ದುಃಖ, ಪ್ರವೃತ್ತಿ, ಕಾಮಗಳೂ, ಕೃಷ್ಣವರ್ಣದ ತಮಸ್ಸಿನಿಂದ ಮೋಹ, ಭ್ರಾಂತಿ, ಆಲಸ್ಯಗಳೂ, ಉಂಟಾಗುತ್ತವೆ; ಸ್ಥೂಲ, ಕರ್ಮಯಜ್ಞ; ಸೂಕ್ಷ್ಮ, ಜ್ಞಾನಯಜ್ಞ; ಕಾಯಿಕ, ವಾಚಿಕ, ಮಾನಸಿಕ; ವಿಷ್ಣುಧ್ಯಾನವು ಶಿವಜ್ಞಾನಕ್ಕೆ ಸಾಧನವು. ಪರಶಿವನೇ ಸರ್ವೋತ್ತಮನು, ವಿಶುದ್ಧಜ್ಞಾನಕ್ಕೆ ಚಿನ್ಹೆಗಳು — ಕರ್ಮಾಲಂಬನ, ಜ್ಞಾನಾಲಂಬನ; ಕಣಾದ, ಕಪಿಲ ಮುಂತಾದವರು ಹೇಳಿರುವ ಜ್ಞಾನಗಳು ಸೋಪಾನಕ್ರಮದಲ್ಲಿ ಅದನ್ನು ತಿಳಿಸುತ್ತವೆ; ಪರಶಿವ ಜ್ಞಾನದಿಂದ ಮೋಕ್ಷವಾಗುತ್ತದೆ;
3. ಕರ್ಮಯಜ್ಞ ಸ್ವರೂಪ, ವೈಭವ; ಕಾಮ್ಯ, ನಿತ್ಯ, ನೈಮಿತ್ತಿಕ; ನಿತ್ಯಕರ್ಮಾನುಷ್ಠಾನದಿಂದ ಚಿತ್ತಶುದ್ಧಿ; ಯಾವ ಕರ್ಮವನ್ನಾಗಲಿ ಶಿವಾರಾಧನೆ ಎಂದು ಭಾವಿಸುತ್ತಾ ಮಾಡಿದರೆ ಮಹಾಯಜ್ಞವೆನಿಸುತ್ತದೆ; ಫಲಭೇದಕ್ಕೆ ಭಾವನೆಯೇ ಮುಖ್ಯವು;
4. ವಾಚಿಕಯಜ್ಞದ ವಿವರಣೆ; ಶಬ್ದೋತ್ಪತ್ತಿ ಪ್ರಕಾರ; ಶಬ್ದ ಬ್ರಹ್ಮವಿಚಾರ; ನಾದ, ಬಿಂದು; ಪರಾ, ಪಶ್ಯಂತೀ, ಮಧ್ಯಮಾ, ವೈಖರೀ ಎಂದು ಶಬ್ದಕ್ಕೆ ನಾಲ್ಕು ರೂಪ; ಮಾತೃಕಾವಿಚಾರ;
5. ಪ್ರಣವವಿಚಾರ; ಪರಪ್ರಣವವು ಬ್ರಹ್ಮರೂಪಾವಾದುದು; ಪ್ರಣವದ ಮಹಿಮೆಯನ್ನು ತಿಳಿಸುವ ಐತರೇಯ ಬ್ರಾಹ್ಮಣದಲ್ಲಿನ ಕಥೆ; ಓಂಕಾರವು ಬ್ರಹ್ಮವಾಚನವು; ಅಕಾರ ಉಕಾರ ಮಕಾರಗಳು ಅದರ ಅವಯವಗಳು; ಅವುಗಳ ಋಷಿಗಳು, ವರ್ನ, ಛಂದಸ್ಸು, ಗುಣಗಳು;
6. ಗಾಯತ್ತ್ರೀ ವಿವರಣೆ; ವ್ಯಾಹೃತಿಗಳು; ಋಷಿ, ಛಂದಸ್ಸು, ಅರ್ಥ, ಇವುಗಳ ವಿವರಣೆ; ಗಾಯತ್ತ್ರೀಜಪದ ಫಲ – ;
7. ಆತ್ಮಮಂತ್ರದಸ್ವರೂಪ; ವಿಷಯ ಬ್ರಹ್ಮ; ಗಾಯತ್ತ್ರೀ ಮಂತ್ರ, ಜಪ, ಫಲಗಳು; ಮಂತ್ರ ಪದಾರ್ಥ; ಅಜಪಾ ಮಂತ್ರದ ಸ್ವರೂಪ; ಇದಕ್ಕೇ ಜೀವಮಂತ್ರವೆಂದೂ ಹೆಸರು; ಚಿತ್ ಅನ್ಯಶೇಷವಾದುದಲ್ಲದು; ಅದು ಭ್ರಾಂತಿಯಿಂದ, ಉಪಾಧಿಯ ಪ್ರಭಾವದಿಂದ, ಹಾಗೆ ತೋರುತ್ತದೆ; ಜೀವನು ಸುಖರೂಪನು; ಪೂರ್ಣರೂಪನು;
8. ಷಡಕ್ಷರ ವಿಚಾರ; ಋಷಿ, ದೇವತಾ, ಛಂದಸ್ಸುಗಳು; ಅದರ ಅರ್ಥವು; ಜಗತ್ತೂ ಶಿವಸ್ವರೂಪವಾದುದು; ಮಂತ್ರ ಪುರಶ್ಚರಣ, ಹೋಮಫಲಗಳು; ಹೃತ್ಪದ್ಮಸ್ಥಾನ; ಸೂರ್ಯ, ಚಂದ್ರ, ಅಗ್ನಿ, ಪ್ರತಿಮಾ, ಪೂಜೆಗಳನ್ನು ಮಾಡಬೇಕು;
9. ಧ್ಯಾನಯಜ್ಞದಿಂದ ಮುಕ್ತಿಯು; ಶುದ್ಧನಾದ ಪರಶಿವನ ಮೂರ್ತರೂಪಧ್ಯಾನ; ಉಪಾಸ್ಯದ ಮೂರು ಬಗೆ; ಬ್ರಹ್ಮಾ, ವಿಷ್ಣು, ಮಹೇಶ್ವರ ಎಂದು, ಒಂದೇ ಬ್ರಹ್ಮವು ಸತ್ವರಜಸ್ತಮೋರೂಪವಾದ ಮಾಯೆ ಎಂಬ ಉಪಾಧಿಯಿಂದ ಈ ವ್ಯವಹಾರವನ್ನು ಪಡೆದಿದೆ; ಭೂತ, ಭೌತಲೋಕ, ಬ್ರಹಾಂಡ, ದಿಕ್, ವರ್ಣ, ಆಶ್ರಮ, ಸುಖ, ದುಃಖ, ಕರ್ತೃ, ಕಾರಯಿತೃ, ಪ್ರಮಾತೃ, ಪ್ರಮೇಯ, ಪ್ರಮಿತಿ, ವಿಧಿ, ನಿಷೇಧ, ವಿದ್ಯಾ, ಅವಿದ್ಯಾ, ಸತ್, ಅಸತ್, ಈ ಎಲ್ಲದರಲ್ಲೂ ಬ್ರಹ್ಮ ಎಂದು ಉಪಾಸನೆ ಮಾಡಿದರೆ, ಈಶ್ವರನ ಸಾಕ್ಷಾತ್ಕಾರವಾಗುತ್ತದೆ. ಇದೇ ಧ್ಯಾನಯಜ್ಞವು
10. ಜ್ಞಾನಯಜ್ಞ; ಸ್ವರೂಪಜ್ಞಾನ, ಮಾಯಾ ಉಪಾಧಿಸಂಬಂಧದಿಂದ ಈಶ್ವರ, ಅವಿದ್ಯಾ ಉಪಾಧಿ ಸಂಬಂಧದಿಂದ ಜೀವ; ಅವಿದ್ಯಾಬದ್ಧವಿಜ್ಞಾನವೂ, ಸ್ಥೂಲಸೂಕ್ಷ್ಮಶರೀರಾವಚ್ಛಿನ್ನ ವಿಜ್ಞಾನವೂ ವೃತ್ತಿರೂಪ; ಚಿತ್ತವೂ ಸ್ವಪ್ರಚಾರಾಶ್ರಯ ಜೀವಪ್ರಕಾಶಕ; ಇದರಿಂದ ಜ್ಞಾತೃತ್ವ, ಸುಖಿತ್ವ, ದುಃಖಿತ್ವ, ಪ್ರಮಾಣ, ಭ್ರಾಂತಿ, ಸಂದೇಹ, ವಿಪರ್ಯಯಗಳೆಂದು ಚಿತ್ತದ ಅನೇಕ ರೂಪಗಳು; ಅಕ್ಷರ, ಪದ, ವಾಕ್ಯ; ಪ್ರಧಾನ, ಗುಣ, ಮಹಾವಾಕ್ಯಗಳು; ವಿಧಿ, ನಿಷೇಧ, ಸಿದ್ಧ, ವಾಕ್ಯಗಳು; ಕರ್ತವ್ಯವಿಷಯವು ಅನಾತ್ಮ ವಿಷಯಕವು; ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ, ಅರ್ಥಾಪತ್ತಿ, ಅನುಪಲಬ್ಧಿ ಎಂದು ಆರು ಪ್ರಮಾಣಗಳು; ಪ್ರತ್ಯಗಾತ್ಮಾ ಶಿವನು; ಪರಾಗರ್ಥವೆಲ್ಲವೂ ಅನಾತ್ಮ; ಪ್ರತ್ಯಕ್ಬ್ರಹ್ಮರ ಅಭೇದ ಸಾಕ್ಷಾತ್ಕಾರ ಸಂಸಾರನಿವರ್ತಕ; ಆತ್ಮನು ವಸ್ತುತಃ ಬದ್ಧನಾದರೆ ಮೋಕ್ಷ ಅಸಂಭವ; ಆತ್ಮನಿಗೆ ಭೇದ ಔಪಾಧಿಕ; ಆಕಾಶಕ್ಕೆ ಭೇದ ಘಟಾದ್ಯುಪಾಧಿಭೇದದಿಂದ ತೋರುತ್ತದೆಯೇ ಹೊರತು, ಸ್ವರೂಪತಃ ಭೇದವಿಲ್ಲ; ಉಪಾಧಿಯಿಂದ ಭೇದವೆಂದರೆ ಉಪಾಧಿಗೆ ಭೇದವೇ ಹೊರತು ಆತ್ಮನಿಗಲ್ಲ; ಇದು ತರ್ಕಪ್ರಮಾಣ ಗಮ್ಯ; ಸ್ವರೂಪದಿಂದಲಾಗಲಿ ಧರ್ಮದಿಂದಲಾಗಲಿ ಭೇದವು ಸಿದ್ಧಿಸದು; ಅನ್ಯತ್ವಭೇದಗಳಿಗೆ ಅನ್ಯೋನ್ಯಾಶ್ರಯದೋಷವಿದೆ; ಏಕತ್ವದರ್ಶನಕ್ಕೆ ಶೋಕಮೋಹ ನಿವೃತ್ತಿ ಫಲ; ತರ್ಕ, ಪ್ರಮಾಣ, ವಿದ್ವದನುಭವಗಳು ಏಕತ್ವಪ್ರಮಾಣಗಳು;
11. ಜ್ಞಾನಯಜ್ಞವಿಶೇಷ, ಧರ್ಮಾಧರ್ಮಗಳ ಅಸ್ತಿತ್ವವಿಜ್ಞಾನ, ಶ್ರುತಿಸ್ಮೃತಿವಿಶ್ವಾಸ; ಬ್ರಹ್ಮಾ ವಿಷ್ಣು ರುದ್ರ ಈಶ್ವರ ಇವರು ಕ್ರಮವಾಗಿ ಉತ್ಕೃಷ್ಟರು; ಶಿವನು ಕಾರಣತ್ವೋಪಲಕ್ಷಿತನು; ದೇಹ ಪ್ರಾಣ ಬುದ್ಧಿ ಎಚ್ಚರ ಕನಸು ನಿದ್ದೆಗಳಿಗಿಂತಲೂ ಪ್ರತ್ಯಗಾತ್ಮನು ಭಿನ್ನನು; ಪ್ರಮಾಣಗಳಿಗೆ ಆಗಮ್ಯ, ಅವಕ್ಕೂ ಪ್ರಕಾಶಕ; ಸಚ್ಚಿದಾನಂದರೂಪನು; ಜೀವೇಶ್ವರಾಭೇದಸಾಕ್ಷಾತ್ಕಾರ ಮಹಾವಾಕ್ಯಾರ್ಥಜ್ಞಾನದಿಂದ;
12. ಷಡಕ್ಷರವಿವರಣ; ಪ್ರಪಂಚಸ್ವರೂಪ, ಬ್ರಹ್ಮವೇ ಆತ್ಮವಾಗಿದೆ; ಸತ್ ಅಸತ್ತಾಗಿ, ಏಕ ಅನೇಕದ ಹಾಗೆ ತೋರುತ್ತದೆ; ವಿಭಾಗವು ಶಕ್ತಿಯಿಂದ, ಮಾಯೆಯಿಂದ ಕಲ್ಪಿತವು, ವಾಸ್ತವವಲ್ಲವು; ವರ್ಣಾಶ್ರಮಧರ್ಮ, ನಿಯೋಜ್ಯತ್ವ, ಕರ್ತೃತ್ವ, ವಿಧಿ, ನಿಷೇಧ, ತತ್ಸಾಧನ, ಎಲ್ಲವೂ ಕಲ್ಪಿತವು;
13. ಜ್ಞಾನಯಜ್ಞವಿಶೇಷ; ಮಾಯೆಯು ಚಿನ್ಮಾತ್ರಾಶ್ರಯವಾಗಿ, ಜಗತ್ಕಾರಣತ್ವಾಪನ್ನವಾಗಿ, ಶಿವಶಕ್ತಿ ಎನಿಸುತ್ತದೆ; ಶಿವನಿಗೆ ಈ ಉಪಾಧಿಯಿಂದ ಸರ್ವಜ್ಞತ್ವ, ಸರ್ವಶಕ್ತತ್ವಗಳು, ಈಶ್ವರತ್ವ; ಹಾಗೆಯೇ ಈಕ್ಷಿತೃತ್ವ, ರುದ್ರತ್ವ ಮುಂತಾದವೂ; ಸೂತ್ರಾತ್ಮತ್ವ, ವಿರಾಡ್ರೂಪತ್ವವೂ ಆ ಶಕ್ತಿಯಿಂದಲೇ ತೋರುತ್ತವೆ; ಅದು ಶಿವಾಭಿನ್ನವೂ, ಸಾಕ್ಷಿಯೂ, ಆಗಿರುತ್ತದೆ; ಉಮಾಶಂಕರರ ಅಭೇದ ದರ್ಶನ ಒಳ್ಳೆಯದು, ಭೇದದರ್ಶನ ಕೆಟ್ಟುದು; ಪಾರ್ವತೀ ಬ್ರಹ್ಮವಿದ್ಯಾಪ್ರದಾಯನೀ ಉಮಾ; ಪೂರ್ಣವೇ ನಿಜರೂಪವು, ಅಪೂರ್ಣವಾಗಿ ಮಾಯೆಯಿಂದ ತೋರುತ್ತದೆ; ಜೀವ, ಜಗತ್, ಈಶ್ವರ, ಮಾಯಾಗಳು ಆತ್ಮವ್ಯತಿರಿಕ್ತವಾಗಿಲ್ಲವೆಂಬುದು ಶುದ್ಧ ವಿಜ್ಞಾನವು; ಇಂಥಾ ಜ್ಞಾನಿಗೆ ಸ್ವಾಚ್ಚಂದ್ಯ;
14. ಜ್ಞಾನಯಜ್ಞವಿಶೇಷ; ಶಿವನ ಐದುರೂಪ, ಸದ್ಯೋಜಾತ, ವಾಮದೇವ, ತತ್ಪುರುಷ, ಅಘೋರ, ಈಶಾನ, ಎಂದು; ಜ್ಞಾನಕರ್ಮೇಂದ್ರಿಯಗಳಿಗೆ ಅಧಿಷ್ಠಾತೃಗಳು; ಎಲ್ಲವೂ ಶಿವರೂಪ; ಆತ್ಮ ಸ್ವತಸ್ಸಿದ್ಧ, ಜಗತ್ಪ್ರಕಾಶಕ; ಆಭರಣಗಳನ್ನು ಚಿನ್ನವು ಸೃಜಿಸಿ ನುಂಗುತ್ತದೆ; ಊರ್ಣನಾಭಿ ತನ್ನ ಸ್ವಪ್ನವು ತನ್ನ ಎಚ್ಚರದಿಂದ ತನ್ನಲ್ಲಿ ಅಡಗುವ ಹಾಗೆ; ಲೋಕ, ಶಾಸ್ತ್ರ, ದೇಹಗಳ ವಾಸನಾಕ್ಷಯದಿಂದ, ವಿಷ್ಣ್ವಾದ್ಯನುಗ್ರಹವೂ ಶಿವಾನುಗ್ರಹದಿಂದ, ಮೋಕ್ಷ; ಶ್ರವಣ, ಮನನ, ನಿದಿಧ್ಯಾಸನ;
15. ಸತ್ತಾ ಏಕರೂಪವಾದುದು; ವಿಶೇಷರೂಪದಿಂದ ಅದೂ ಭಿನ್ನವೆಂಬುದು ಅಸಂಗತ; ವಿಶೇಷವೇ ಸಿದ್ಧಿಸದು; ಭೇದಾಕಾರವು ಸತ್ತೆಗಿಂತ ಭಿನ್ನವೂ, ಅಭಿನ್ನವೂ, ಭಿನ್ನಾಭಿನ್ನವೂ, ಅಲ್ಲವು; ಸರ್ಪರೂಪದಿಂದ ತೋರುವ ಹಗ್ಗವು ಸರ್ಪವಲ್ಲವು; ಹಾಗೆ ಜಗದ್ರೂಪದಿಂದ ತೋರುವ ಬ್ರಹ್ಮವು ಜಗದ್ರೂಪವಲ್ಲವೂ; ಜಗತ್ತು ಬ್ರಹ್ಮರೂಪವು;
16. ಜ್ಞಾನೋತ್ಪತ್ತಿಕಾರಣ; ಮೋಕ್ಷಲಾಭದಲ್ಲಿ ವಿಶ್ವಾಸ, ಅದಕ್ಕೆ ಅನುಗುಣವಾಗಿ ದೇವತಾಪ್ರಾರ್ಥನೆ, ಶಾಂತಿಮಂತ್ರಪಾಠ, ಮಂತ್ರಹೋಮ, ಜಪಗಳು; ಗುರುಶುಶ್ರೂಷಾ, ಶ್ರವಣ, ಲಿಂಗಪೂಜಾ, ಶಾಂತಿ, ದಾಂತಿ, ಷಡಕ್ಷರಜಪ ಮುಂತಾದುವು;
17. ವೈರಾಗ್ಯವಿಚಾರ; ಜೀವಬ್ರಹ್ಮೈಕ್ಯಾಜ್ಞಾನದಿಂದ, ಕರ್ಮಪಾಕದಿಂದ, ಪೂರ್ವವಾಸನಾ, ಶೋಭನಾಶೋಭನಭ್ರಾಂತಿಗಳಿಂದ ವೈರಾಗ್ಯಬರದೆ ಇದೆ; ಶುಭವಾಸನಾ ಎರಡು ಬಗೆ; ಐಹಲೌಕಿಕ, ಪಾರಲೌಕಿಕ; ರಾಗ, ದ್ವೇಷ, ಧರ್ಮಾಧರ್ಮ, ದೇವತಿರ್ಯಙ್ಮನುಷ್ಯಾದಿಜನ್ಮ, ದೇಹಾದಿಗಳಲ್ಲಿ ಅಹಂ ಮಮ ಬುದ್ಧಿಯು ದೋಷದರ್ಶನದಿಂದ ಕಡಿಮೆಯಾಗಿ, ಆತ್ಮ ಜ್ಞಾನೇಚ್ಛಾ; ವಿರಕ್ತನಿಗೇ ಜ್ಞಾನದಲ್ಲಿ ಅಧಿಕಾರ;
18. ಅನಿತ್ಯವಸ್ತುವಿಚಾರದಿಂದ ವೈರಾಗ್ಯ; ಆತ್ಮಭಿನ್ನವೆಲ್ಲವೂ ಅನಿತ್ಯ; ಶ್ರುತಿ ಅನ್ಯಾನಪೇಕ್ಷವಾಗಿ ಅರ್ಥಸಾಧಕ; ಬ್ರಹ್ಮ ಧರ್ಮಗಳ ಜ್ಞಾನ; ಸಂಗಿರನ ಕಥೆ; ವೇದಾಂತಶ್ರವಣ, ಶ್ರೌತಸ್ಮಾರ, ಸದಾಚಾರ, ಚಿತ್ತಶುದ್ಧಿ;
19. ನಿತ್ಯವಸ್ತುವಿಚಾರ; ಆತ್ಮ ಒಬ್ಬನೇ ನಿತ್ಯ; ವೃತ್ತಿಗೆ ಅಭಿವ್ಯಕ್ತಿ ನಾಶಗಳು, ವ್ಯಂಜಕವಾದ ವೃತ್ತಿಯ ಅನಿತ್ಯತ್ವವನ್ನು ವ್ಯಂಗ್ಯನಾದ ಆತ್ಮನಲ್ಲೂ ಭ್ರಾಂತಿಯಿಂದ ತಿಳಿಯುತ್ತಾರೆ; ಚಿದ್ರೂಪಕ್ಕೆ ನಾಶವಿಲ್ಲ, ಸಾಕ್ಷಿಭೇದವಿಲ್ಲ, ಆತ್ಮಾ ಸರ್ವಸಾಕ್ಷೀ, ಎಕ;
20. ವಿಶಿಷ್ಟಧರ್ಮವಿಚಾರ; ದೇವತಾರಾಧನಧರ್ಮವು; ಬೌದ್ಧ, ಜೈನ, ಪ್ರಾಜಾಪತ್ಯ, ವೈಷ್ಣವ ಆಗಮಗಳಿಗಿಂತ ಶೈವಾಗಮ ಶ್ರೇಷ್ಠ; ಧರ್ಮ ಎರಡು ಬಗೆ, ಅಧಸ್ಸ್ರೋತೋದ್ಭವ; ಊರ್ಧ್ವಸ್ರೋತೋದ್ಭವ; ಸ್ಮಾರ್ತಕ್ಕಿಂತ ಶ್ರೌತಧರ್ಮ ಉತ್ತಮ; ಎಲ್ಲಕ್ಕಿಂತ ಜ್ಞಾನಧರ್ಮ ಉತ್ತಮ; ವೇದಾಂತದಿಂದ ಸಮ್ಯಕ್ಜ್ಞಾನವಾಗುತ್ತದೆ; ಗುರುಸಮನಾದ ರಕ್ಷಕನೂ, ವೇದಸಮವಾದ ಪ್ರಮಾಣವೂ, ಹೇಗೆ ಮತ್ತೊಂದಿಲ್ಲವೋ, ಹಾಗೆ ಜ್ಞಾನಸಮವಾದ ಮತ್ತೊಂದು ಮೋಕ್ಷಸಾಧನವಿಲ್ಲವು’
21. ಮುಕ್ತಿಸಾಧನಪ್ರಕಾರ; ದೇವತೆಗಳು ಋಷಿಗಳೂ ವ್ಯಾಘ್ರಪುರಿಯಲ್ಲಿ ವರ್ಣಾಶ್ರಮಧರ್ಮಾಚರಣೆಯನ್ನು ಮಾಡುತ್ತಾ, ತಪಸ್ಸನ್ನು ನೆರವೇರಿಸಿ, ಚಿತ್ತಶುದ್ಧಿಯನ್ನು ಪಡೆದು, ಪುಣ್ಯದಿಂದ ಜ್ಞಾನವನ್ನು ಸಂಪಾದಿಸಿ ಮುಕ್ತರಾದರು; ಇತರರೂ ಹಾಗೆಯೇ ಮಾಡಬೇಕು; ಇತರ ಮಾರ್ಗ ವಿಚಾರದಿಂದ ವೇದಮಾರ್ಗದಲ್ಲಿ ರುಚಿ;
22. ಮಾರ್ಗಪ್ರಾಮಾಣ್ಯವರ್ಣನೆ; ಮುಕ್ತಿಸಾಧನಮಾರ್ಗಗಳು ಅನೇಕವಾಗಿವೆ; ಅವೈದಿಕವಾದ ಚಾರ್ವಾಕ (ಲೋಕಯತ, ಬೌದ್ಧ, ಜೈನ, ಕ್ರಿಸ್ತ, ಮುಸಲ್ಮಾನ್) ತಾಂತ್ರಿಕ, ಆಗಮಿಕ, ಮಾರ್ಗಗಳು; ವೈದಿಕವಾದ ತರ್ಕ, ಧರ್ಮಶಾಸ್ತ್ರ, ಪುರಾಣ, ಇತಿಹಾಸ, ಉಪನಿಷತ್ತುಗಳು; ನ್ಯಾಯವೈಶೇಷಿಕ; ವ್ಯಾಕರಣ, ಪೂರ್ವಮೀಮಾಂಸಾ, ಸಾಂಖ್ಯ, ಯೋಗಶಾಸ್ತ್ರಗಳು; ಇವೆಲ್ಲಮಾರ್ಗಗಳನ್ನೂ ಪರಶಿವನೇ ಆಯಾ ದೇಶಗಳ ಜನರ ರುಚಿ ಸಂಸ್ಕೃತಿಗಳಿಗೆ ತಕ್ಕಂತೆ ಆಯಾ ಆಚಾರ್ಯರ ಮೂಲಕ ನಿರ್ಮಿಸಿದನು; ಆದುದರಿಂದ ಇವೆಲ್ಲವೂ ಪ್ರಮಾಣಗಳೇ, ಎಂದು ತಿಳಿಯಬೇಕು. ಅಧಿಕಾರಿಭೇದದಿಂದ, ಸೋಪಾನಕ್ರಮದಲ್ಲಿ ಅವಕ್ಕೂ ಫಲವುಂಟು;
23. ಶಂಕರಪ್ರಸಾದಕ್ರಮ; ಉಪದೇಶ ಗುರುಪರಂಪರೆ; ಶಿವನಿಂದ ವಿಷ್ಣುವಿಗೆ, ಸನತ್ಕುಮಾರರಿಗೆ, ವ್ಯಾಸರಿಗೆ, ಸೂತರಿಗೆ, ಋಷಿಗಳಿಗೆ ಕ್ರಮವಾಗಿ ಉಪದೇಶ; ಈಶ್ವರಾನುಗ್ರಹ, ಸಂಸಾರದೋಷದರ್ಶನ, ವೈರಾಗ್ಯ, ವೇದಾಂತ ವಿಚಾರ, ನಿಷ್ಕಾಮಕರ್ಮಾಚರಣೆ, ಚಿತ್ತಶುದ್ಧಿ, ವಿಷ್ಣುಪ್ರಸಾದದಿಂದ ಮುಮುಕ್ಷುತ್ವ, ವಿಘ್ನರಾಜಪ್ರಸಾದದಿಂದ ಗುರುಲಾಭ ಮತ್ತು ಯೋಗಪ್ರಾಪ್ತಿ, ಧ್ಯಾನಸಿದ್ಧಿ, ಉಮಾಪ್ರಸಾದದಿಂದ ಜ್ಞಾನಲಾಭ, ಪರಶಿವನುಗ್ರಹದಿಂದ ಮೋಕ್ಷಪ್ರಾಪ್ತಿ; ಇತರ ದೇವತೆಗಳೂ ಪ್ರಣಾಡೀ ಮೂಲಕವಾಗಿ ಮುಕ್ತಿಯನ್ನು ಕೊಡಬಲ್ಲವರು; ಧ್ಯಾನಕ್ಕೆ ಸಾಧನಗಳಲ್ಲಿ ಪ್ರಣವವು ಶ್ರೇಷ್ಠವಾದುದು; ಚಿದಂಬರದಲ್ಲಿ ಆಕಾಶಲಿಂಗ, ಕಾಳಹಸ್ತಿಯಲ್ಲಿ ವಾಯುಲಿಂಗ, ಜಂಬುಕೇಶ್ವರದಲ್ಲಿ ಅಬ್ಲಿಂಗ;
24. ಶಿವಪ್ರಸಾದ ವೈಭವ; ದುರ್ಘಟನೆಂಬ ಶೂದ್ರನ ಕಥೆ;
25. ಶಿವಾನುಗ್ರಹಮಹಿಮೆ; ಸತ್ಯಸಂಧನೆಂಬ ಬ್ರಾಹ್ಮಣನ ಕಥೆ;