ಶ್ರೀ ಲಿಂಗಮಹಾಪುರಾಣಂ ಪೂರ್ವಭಾಗ – ಸಂಪುಟ ೪
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
೮೮ನೇ ಅಧ್ಯಾಯ —
ಯೋಗಾಂಗಳನ್ನು ಅಭ್ಯಾಸಮಾಡುವುದರಿಂದ ಉಂಟಾಗುವ ಫಲಗಳು; ಯೋಗದಸ್ವರೂಪ, ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ಎಂಬ ಅಷ್ಟೈಶ್ವರ್ಯಗಳು; ಇವುಗಳಲ್ಲಿ ಸಾವದ್ಯ, ನಿರವದ್ಯ, ಸೂಕ್ಷ್ಮ, ಎಂದು ಮೂರು ಬಗೆ; ಸಿದ್ಧಿಗಳ ಸ್ವರೂಪ; ಯೋಗಿಯ ನಿರ್ಲಿಪ್ತರೀತಿ, ಈ ಸಿದ್ಧಿಗಳು ಮೋಕ್ಷಕ್ಕೆ ಅಡ್ಡಿಗಳು; ಅವಕ್ಕೆ ಮನಸೋಲದ ಉಪಾಸಕನು ಮೋಕ್ಷವನ್ನೂ ಪಡೆಯುವನು. ಮೋಕ್ಷದ ಹೆಚ್ಚುಗಾರಿಕೆ; ಯೋಗಭ್ರಷ್ಟನ ಪುನರ್ಜನ್ಮ, ಗರ್ಭವಾಸ, ಹುಟ್ಟು, ಬೆಳವಣಿಗೆ, ಸುಖ ದುಃಖಾನುಭವ, ಈ ನಿರ್ಬಂಧ ದುಃಖದಿಂದ ಬಿಡುಗಡೆಯಾಗಬೇಕಾದರೆ ಈಶ್ವರಾನುಗ್ರಹವುಬೇಕು; ಆರು ಬಗೆಯ ಜನ್ಮಗಳು; ಧರ್ಮಾಚರಣೆಯಿಂದಲೇ ಸದ್ಗತಿಯೂ, ಕಡೆಗೆ ಮೋಕ್ಷವೂ ದೊರೆಯುತ್ತದೆ; ಪ್ರಾಣಾಗ್ನಿ ಹೋತ್ರಕ್ರಮದ ವಿವರಗಳು;
೮೯ನೇ ಅಧ್ಯಾಯ —
ಶೌಚಾಚಾರದಸ್ವರೂಪ; ಮಾನಾವಮಾನಗಳು ವಿಷಾಮೃತಗಳು; ಗುರುಸೇವಾ, ಯಮನಿಯಮಪಾಲನ, ದೇಶಾಟನ, ದೃಷ್ಟಿ ಶುದ್ಧ ಸಂಚಾರ, ಶುದ್ಧಜಲಪಾನ, ಸತ್ಯವದನ, ಮನಶ್ಯುದ್ಧಾಚರಣ; ಭಿಕ್ಷಾಜೀವನ; ಚಾಂದ್ರಾಯಣ, ಅಸ್ತೇಯಾದಿಗಳು, ಸಂಧ್ಯಾಕರ್ಮ, ದೇವಪೂಜಾ, ಶುಚಿತ್ವಸಂಪಾದನ; ಸೂತಕಗಳು; ಶಾವಾಶೌಚ, ವರ್ಣಾಶ್ರಮ ಭೇದದಿಂದ ಶೌಚಭೇದ; ದಾಂಪತ್ಯಧರ್ಮ, ಪುತ್ರನ ಫಲ, ಪಡೆಯುವಕ್ರಮ, ಧರ್ಮವೇ ತಾರಕವು;
೯೦ನೇ ಅಧ್ಯಾಯ —
೯೧ನೇ ಅಧ್ಯಾಯ —
೯೨ನೇ ಅಧ್ಯಾಯ —
ಕಾಶೀಕ್ಷೇತ್ರ ಮಹಿಮೆಯ ವಿವರಗಳು; ಕುರುಕ್ಷೇತ್ರ, ಶ್ರೀಪರ್ವತ; ಅವಿಮುಕ್ತಕ್ಷೇತ್ರ, ಈಶ್ವರೋದ್ಯಾನಗಳ ವರ್ಣನೆ; ಪ್ರಯಾಗಕ್ಷೇತ್ರ; ಧರ್ಮಕ್ಕೆ ಸತ್ಯವೂ, ಮೋಕ್ಷಕ್ಕೆ ಶಮವೂ, ತಿರುಳಾಗಿದೆ; ಇಲ್ಲಿ ಶಿವನು ಯಾವಾಗಲೂ ಬಿಡದೆ ಸನ್ನಿಹಿತನಾಗಿರುವುದರಿಂದ ಇದು ಅವಿಮುಕ್ತವೆನಿಸಿದೆ; ಯೋಗಸಿದ್ಧಿಯು ಇಲ್ಲಿ ಸುಲಭ ಮತ್ತು ಶೀಘ್ರವಾಗಿ ಲಭಿಸುತ್ತದೆ; ಸಿದ್ಧರು ಜೈಗೀಷವ್ಯ, ಕುಬೇರ, ಇಂದ್ರ, ವ್ಯಾಸ, ಮುಂತಾದವರು; ಬ್ರಹ್ಮಾ, ವಿಷ್ಣು ಶಿವಲಿಂಗಪ್ರತಿಷ್ಠೆಮಾಡಿ ಪೂಜಿಸಿದರು: ವ್ಯಾಘ್ರೇಶ್ವರಕ್ಷೇತ್ರ, ಹಿಮವಂತನು ಶೈಲೇಶ್ವರಲಿಂಗ ಪ್ರತಿಷ್ಠೆಮಾಡಿ ಪೂಜಿಸಿದನು; ಸಂಗಮೇಶ್ವರ, ಶುಕ್ರೇಶ್ವರ, ಮುಂತಾದ ಶಿವಲಿಂಗಗಳು; ಪಾರ್ವತಿಗೆ ಸಿದ್ಧಯೋಗಿಗಳ ಜ್ಯೋತಿದರ್ಶನವಾದುದು; ಕ್ಷೇತ್ರತೀರ್ಥ ವಿಶೇಷಗಳಲ್ಲಿ ತಿಥಿ ವಿಶೇಷಗಳಲ್ಲಿ ಫಲವಿಶೇಷಗಳು; ಪೂಜಾ, ಜಪ, ಧ್ಯಾನಗಳ ಫಲ;
೯೩ನೇ ಅಧ್ಯಾಯ —
೯೪ನೇ ಅಧ್ಯಾಯ —
೯೫ನೇ ಅಧ್ಯಾಯ —
೯೬ನೇ ಅಧ್ಯಾಯ —
೯೭ನೇ ಅಧ್ಯಾಯ —
೯೮ನೇ ಅಧ್ಯಾಯ —
೯೯ನೇ ಅಧ್ಯಾಯ —
ಸತೀದೇವಿಯ ಆವಿರ್ಭಾವ; ಶಿವ ಶಕ್ತಿ, ಲಿಂಗ ವೇದಿ, ಪುರುಷಸ್ತ್ರೀತತ್ವ, ಪರಬ್ರಹ್ಮ ಮಾಯಾ, ಪುರುಷ ಪ್ರಕೃತಿ, ಇವರ ಸಮಾಯೋಗದಿಂದ ಅರ್ಧನಾರೀಶ್ವರಾವಿರ್ಭಾವವಾಯಿತು. ಆಮೇಲೆ ಬ್ರಹ್ಮನೂ, ಹಿರಣ್ಯಗರ್ಭನೂ, ರುದ್ರನೂ ಆವಿರ್ಭವಿಸಲು, ಬ್ರಹ್ಮನು ಪ್ರಾರ್ಥಿಸಿದಂತೆ ವಾಮಾಂಗದಿಂದ ದೇವಿಯು ಅವತರಿಸಿ, ಆ ದೇವಿಯೇ ದಕ್ಷಪುತ್ರಿಯಾದ ಸತೀದೇವಿಯಾಗಿ, ಶಿವನನ್ನೇ ಮದುವೆಯಾದಳು; ದಕ್ಷನು ಶಿವನನ್ನು ನಿಂದಿಸಲು ಯಾಗಾಗ್ನಿಯಲ್ಲಿ ದೇಹತ್ಯಾಗಮಾಡಿ, ಪರ್ವತರಾಜನ ಪುತ್ರಿಯಾಗಿ ಪಾರ್ವತಿಯಾದಳು.
೧೦೦ನೇ ಅಧ್ಯಾಯ —
ದಕ್ಷನಯಾಗದಲ್ಲಿ ಸತೀದೇವಿಯು ದೇಹತ್ಯಾಗ ಮಾಡಲು, ಶಿವನು ವೀರಭದ್ರನನ್ನು ಉಂಟುಮಾಡಿ ಕಳುಹಿಸಲು, ಅವನು ತನ್ನ ಗಣಗಳೊಡನೆ ಹೋಗಿ ಆ ಯಾಗದಲ್ಲಿ ಭಾಗವನ್ನುವಹಿಸಿದ್ದ ಇಂದ್ರ, ಭಗ, ಪೂಷಾ, ಚಂದ್ರ, ಅಗ್ನಿ, ಯಮ, ವಿಷ್ಣು, ಯಜ್ಞಪುರುಷ, ದಕ್ಷ, ಸರಸ್ವತೀ ಇವರೇ ಮುಂತಾದವರನ್ನು ನಿಗ್ರಹಿಸಿದುದು; ಆ ಮೇಲೆ ಬ್ರಹ್ಮನ ಪ್ರಾರ್ಥನೆಯಂತೆ ಶಾಂತನಾದುದು; ಅಲ್ಲಿ ಶಿವನೂ ಆವಿರ್ಭವಿಸಿ ಎಲ್ಲರಿಗೂ ಪೂರ್ವದಂತೆ ಪ್ರಾಣದಾನಮಾಡಿದುದು;
೧೦೧ನೇ ಅಧ್ಯಾಯ —
೧೦೨ನೇ ಅಧ್ಯಾಯ —
೧೦೩ನೇ ಅಧ್ಯಾಯ —
೧೦೪ನೇ ಅಧ್ಯಾಯ —
೧೦೫ನೇ ಅಧ್ಯಾಯ —
೧೦೬ನೇ ಅಧ್ಯಾಯ —
೧೦೭ನೇ ಅಧ್ಯಾಯ —
ಉಪಮನ್ಯುವಿನ ಕಥೆ; ಉಪಮನ್ಯುವು ಮಾವನ ಮನೆಯಲ್ಲಿ ಕುಡಿದಂತಹ ಹಾಲನ್ನು ಕೊಡೆಂದು ತಾಯಿಯನ್ನು ಕೇಳಲು, ಬಡತನದಿಂದ ಹಾಲಿಲ್ಲದಿರಲು, ಅವಳು ಹಿಟ್ಟನ್ನು ನೀರಿನಲ್ಲಿ ಕದರಿ ಹಾಲೆಂದು ಕೊಟ್ಟಳು; ಮಗನು ಅಳಲು ಹಾಲನ್ನು ಪಡೆಯುವ ಪುಣ್ಯವನ್ನು ಶಿವ ಪೂಜೆಯಿಂದ ಪಡೆಯಬೇಕೆಂದು ಹೇಳಿದಳು; ಉಪಮನ್ಯುವು ಶಿವನನ್ನು ಕುರಿತು ತಪಸ್ಸುಮಾಡಲು, ಅವನ ತಪೋಜ್ವಾಲೆಯಿಂದ ಮೂರು ಲೋಕವೂ ತಪಿಸಲು, ಇಂದ್ರನು ಪ್ರತ್ಯಕ್ಷನಾಗಿ ತಾನೇ ವರವನ್ನು ಕೊಡುವುದಾಗಿಯೂ, ಶಿವಧ್ಯಾನವನ್ನು ಬಿಡೆಂದೂ ಹೇಳಲು, ಉಪಮನ್ಯುವು ಶಿವನನ್ನು ನಿಂದಿಸಿದ ಇಂದ್ರನನ್ನು ಮಂತ್ರಾಸ್ತ್ರದಿಂದ ನಿಗ್ರಹಿಸಿ, ಶಿವನಿಂದಾಶ್ರವಣ ಮಾಡಿದ ತನ್ನ ದೇಹವನ್ನು ಬಿಡಲು ನಿಶ್ಚಯಿಸಿರಲು, ಶಿವನು ಪ್ರತ್ಯಕ್ಷನಾಗಿ ಹಾಲು, ಮೊಸರು ತುಪ್ಪ ಇವುಗಳ ಸಮುದ್ರವನ್ನೇ ಅನುಗ್ರಹಿಸಿ, ಅವನನ್ನು ತನ್ನ ಪುತ್ರನನ್ನಾಗಿ ಅಂಗೀಕರಿಸಿದನು; ಅವನ ಕೋರಿಕೆಯಂತೆ ಶಿವಭಕ್ತಿಯನ್ನೂ ಕರುಣಿಸಿದನು;
೧೦೮ನೇ ಅಧ್ಯಾಯ —