ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಪದ್ಮಮಹಾಪುರಾಣಂ – ಪಾತಾಳಖಂಡ – ನಾಲ್ಕನೆಯ ಭಾಗ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
ನೂರನೆಯ ಅಧ್ಯಾಯ
ಅಶ್ವಮೇಧಯಾಗಕ್ಕೆ ಮೊದಲು ರಾಮನು ಹುಟ್ಟಿದುದನ್ನು ವಿವರಿಸುವ ಪ್ರಶ್ನೆ. ಬ್ರಾಹ್ಮಣರೂಪಿನಿಂದ ಬಂದಿರುವ ಶಿವನು ರಾಮನ ಮನೆಗೆ ಹೋಗುವುದು. ಶ್ರೀರಾಮನು ವಿಭೀಷಣನನ್ನು ಬಂಧಿಸಿರುವುದನ್ನು ಕೇಳುವುದು. ಪುರಾಣ ಹೇಳುದವನ ಲಕ್ಷಣ ನಿರೂಪಣ. ಅಷ್ಟಾದಶಪುರಾಣಗಳನ್ನು ವಿವರಿಸುವುದು. ಪುರಾಣವನ್ನು ಕೇಳುವವರ, ಹೇಳುವವರ ನಿಯಮದ ವರ್ಣನೆ. ಪುರಾಣಶ್ರವಣದ ವಿಧಿಯ ನಿರೂಪಣೆ. ಪುರಾಣದ ಪ್ರಾರಂಭದಲ್ಲಿ ಶಕುನವನ್ನು ನೋಡುವುದು. ರಾಮನು ವಿಭೀಷಣನನ್ನು ಬಿಡಿಸುವುದು. ಬ್ರಾಹ್ಮಣಾವಮಾನದಿಂದ ಬಂದ ಪಾಪದ ಸಂಬಂಧವಾದ ದುಃಖವು
ನೂರೊಂದನೆಯ ಅಧ್ಯಾಯ
ರಾಮನು ಪುಷ್ಪಕದಲ್ಲಿ ಶ್ರೀರಂಗಕ್ಕೆ ಹೋಗುವುದು. ರಾಮನು ವೈಕುಂಠಕ್ಕೆ ಹೋಗುವುದು, ಅಲ್ಲಿ ನಾರಾಯಣನ ದರ್ಶನ. ನಾರಾಯಣ ರಾಮರ ಮಾತುಗಳು. ರಾಮಲಕ್ಷ್ಮಣರ ಸಂವಾದ. ಅನಂತರ ರಾಮನು ಭಾರದ್ವಾಜರ ಆಶ್ರಮಕ್ಕೆ ಬರುವುದು. ಶ್ರಾದ್ಧದಿನದಲ್ಲಿ ಬ್ರಾಹ್ಮಣಾರ್ಥ ಮಾಡುವವನ ಮತ್ತು ಕರ್ತನ ನಿಯಮಗಳು. ಶ್ರಾದ್ಧಕಾಲ ನಿರ್ಣಯವು. ಶಿವಲಿಂಗದ ಸ್ಥಾಪನೆ. ಪೂಜೆಗಳ ವಿಧಿಯ ನಿಯಮವು. ಅದರ ಮಹಿಮೆಯ ಕಥನವು. ಭಸ್ಮಮಹಿಮೆಯ ವರ್ಣನೆಯು. ಭಸ್ಮಮಹಿಮೆಯ ಕಥನಪ್ರಸಂಗದಲ್ಲಿ ಧನಂಜಯನೆಂಬ ಬ್ರಾಹ್ಮಣನ ಚರಿತ್ರೆಯ ವರ್ಣನೆ. ಭಸ್ಮಸ್ನಾನದ ಮಹಿಮೆ
ನೂರ ಎರಡನೆಯ ಅಧ್ಯಾಯ
ಭಸ್ಮಮಹಿಮೆಯ ಪ್ರಸಂಗದಿಂದ ಒಂದು ನಾಯಿಗೆ ಬಂದ ವಿವರಣೆ. ಸಹಗಮನ ಮಾಡುವವರ ವಿಷಯವನ್ನು ಅವ್ಯಯೆಯ ಚರಿತ್ರೆ ನಿರೂಪಣೆ
ನೂರ ಮೂರನೆಯ ಅಧ್ಯಾಯ
ತ್ರ್ಯಾಯುಷವೆಂಬ ಮಂತ್ರದ ಮಹಿಮೆ. ಅದಕ್ಕೊಂದು ಇತಿಹಾಸ
ನೂರ ನಾಲ್ಕನೆಯ ಅಧ್ಯಾಯ
ಭಸ್ಮದ ಉತ್ಪತ್ತಿಯ ಕಥನ. ಭಸ್ಮವನ್ನು ಮಾಡುವ ರೀತಿ. ಭಸ್ಮವನ್ನು ತೆಗೆದು ಧರಿಸುವುದರ ವಿಧಿಯ ವಿವರಣೆ
ನೂರ ಐದನೆಯ ಅಧ್ಯಾಯ
ಶಿವಲಿಂಗದ ಪೂಜೆಯ ಮಹಿಮೆಯ ವರ್ಣನೆಯ ದೆಸೆಯಿಂದ ಇಕ್ಷ್ವಾಕುವೆಂಬ ಬ್ರಾಹ್ಮಣನ ಚರಿತ್ರೆಯ ನಿರೂಪಣೆ. ಶಿವಲಿಂಗದ ಪೂಜೆಯ ನಿಯಮ ನಿರೂಪಣೆಯ
ನೂರ ಆರನೆಯ ಅಧ್ಯಾಯ
ಅಗ್ನಿಮುಖನೆಂಬ ಶಿವಗಣದ ಕಥೆ.ಅಗ್ನಿಮುಖ ವೀರಭದ್ರರ ಮಾತು. ಕಾರಾಂಕಿತನೆಂಬ ರಾಜನ ಮತ್ತು ಒಬ್ಬ ವೇಶ್ಯೆಯ ಚರಿತ್ರೆ
ನೂರ ಏಳನೆಯ ಅಧ್ಯಾಯ
ಹರನ ನಾಮದ ಮಹಿಮೆ. ವಿಧೃತನೆಂಬ ರಾಜನ ಚರಿತ್ರೆ
ನೂರ ಎಂಟನೆಯ ಅಧ್ಯಾಯ
ಮಹೇಶನ ನಾಮಮಹಿಮೆಯ ವರ್ಣನೆಯ ಪ್ರಸಂಗದಿಂದ ದೇವರಾತನ ಮಗಳಾದ ಕಮಲೆಯ ಚರಿತ್ರೆ. ಗೌರಿಯು ಮಾಡಿದ ಸೋಮವಾರ ವ್ರತದ ನಿರೂಪಣೆ
ನೂರ ಒಂಬತ್ತನೆಯ ಅಧ್ಯಾಯ
ಪುರಾಣವನ್ನು ಕೇಳುವ ಮಹಿಮೆಯ ನಿರೂಪಣೆ. ಪುರಾಣವನ್ನು ಹೇಳುವವನ ಪೂಜೆಯ ವಿವರಣೆ
ನೂರ ಹತ್ತು, ನೂರ ಹನ್ನೊಂದನೆಯ ಅಧ್ಯಾಯ
ಗೌತಮನು ಮಾಡಿದ ಶಿವಪೂಜೆಯ ವರ್ಣನೆ. ಗೌತಮನ ಮನೆಯಲ್ಲಿ ಬಾಣನೇ ಮುಂತಾದ ಶಿವಭಕ್ತರ ಬರುವುದು. ಗೌತಮನ ಮನೆಯಲ್ಲಿ ಬ್ರಹ್ಮ ವಿಷ್ಣು ಶಿವನೇ ಮುಂತಾದ ದೇವರುಗಳು ಬರುವಿಕೆ. ಶಿವವಿಷ್ಣುಗಳ ಜಲಕ್ರೀಡೆಯ ವರ್ಣನೆ. ಗೌತಮನ ಮನೆಯಲ್ಲಿ ದೇವತೆಗಳೆಲ್ಲಾ ಊಟಮಾಡುವುದು. ಹನುಮಂತನ ಶಿವಭಕ್ತಿ ವರ್ಣನೆ. ಹನುಮಂತನು ಮಾಡಿದ ಶಿವಪೂಜೆಯ ವರ್ಣನೆ. ನಾಲ್ಕು ಯುಗಗಳ ಧರ್ಮದ ನಿರೂಪಣೆಯ. ಕಲಿಯುಗದಲ್ಲಿ ದಾನದ ಮಹಿಮೆಯ ವರ್ಣನೆ. ಹರಿಕೀರ್ತನೆಯ ಮಹಿಮೆಯ ವರ್ಣನೆ. ಪುರಾಣ ಶ್ರವಣದ ಮಹಿಮೆ. ಪುರಾಣ ಹೇಳುವುದಕ್ಕೆ, ಕೇಳುವುದಕ್ಕೆ ಅಧಿಕಾರಿಗಳು ಯಾರೆಂಬ ವಿಚಾರ. ಗೌತಮನೆಂಬ ಬ್ರಾಹ್ಮಣನ ಚರಿತ್ರೆ. ಪುರಾಣ ಹೇಳುವವನ ಮತ್ತು ಕೇಳುವವರ ಲಕ್ಷಣಗಳು. ಪುರಾಣ ಹೇಳುವ ಕ್ರಮದ ನಿರೂಪಣೆ ಮತ್ತು ವಿಧಿ. ಪೌರಾಣಿಕನಿಗೆ ಸತ್ಕಾರಮಾಡುವಿಕೆ.ಭಾರತವನ್ನು ಕೇಳುವೆ ವಿಧಿಯ ನಿರೂಪಣೆ, ಅದರ ಮಹಿಮೆ, ಪುರಾಣಗಳ, ಮಹಾಪುರಾಣ ಉಪಪುರಾಣಗಳ ಹೆಸರುಗಳನ್ನು ತಿಳಿಸುವುದು
ನೂರ ಹನ್ನೆರಡನೆಯ ಅಧ್ಯಾಯ
ಶ್ರೀರಾಮ ಜಾಂಬವರ ಸಂವಾದದಲ್ಲಿ ಹಿಂದಿನ ಕಲ್ಪದ ರಾಮಾಯಣ ನಿರೂಪಣೆಯು
ನೂರ ಹದಿಮೂರನೆಯ ಅಧ್ಯಾಯ
ನ್ಯಾಯದಿಂದ ಬಂದ ದ್ರವ್ಯದಿಂದ ದೇವರ ಪೂಜೆಯನ್ನು ಮಾಡಿದರೆ ಬರುವ ಪುಣ್ಯದ ವಿವರಣೆ. ಮಂಕಣನ ಮಗನಾದ ಆಕಥನ ಚರಿತ್ರೆ. ರಾಮನು ಕೌಸಲ್ಯೆಗೆ ಮಾಸಿಕ ಶ್ರಾದ್ಧವನ್ನು ಮಾಡಿದುದು. ಶ್ರಾದ್ಧಮಾಡುವಾಗ ಅತಿಥಿಯು ಬರುವುದು. ಅತಿಥಿಯು ಶ್ರೀರಾಮ ಸೀತೆಯರನ್ನು ಮೋಸಗೊಳಿಸುವುದು. ಅನ್ಯಾಯದ ದ್ರವ್ಯದಿಂದ ಪೂಜೆಮಾಡಿದವನಿಗೆ ಬರುವ ಪಾಪ. ಅದರ ದುಃಖ. ರೂಪಕನೆಂಬ ರಾಕ್ಷಸನ ಚರಿತ್ರೆ. ರಾಮ ಶಂಭು ಸಂವಾದದಲ್ಲಿ ನಜರಾಗಿ ಕೊಟ್ಟದ್ರವ್ಯದಿಂದ ಪೂಜೆಯನಿಷೇಧವು. ಚೇಕಿತಾನಿಯೆಂಬ ಬ್ರಾಹ್ಮಣನ ಚರಿತ್ರೆ. ಧರ್ಮವಾಗಿ ಕೊಟ್ಟ ಘಂಟೆಯ ವಿಷಯದಲ್ಲಿ ಮಂದಾಖ್ಯ ಚರಿತ್ರೆ. ಪಾತಾಳಖಂಡ ಶ್ರವಣದ ಫಲವು. ಶಿವರಾಘವರ ಸಂವಾದವನ್ನು ಕೇಳಿದುದರ ಫಲ. ಪುರಾಣ ಹೇಳಿದವನ ಸತ್ಕಾರ ನಿರೂಪಣೆಯು