ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಪದ್ಮಮಹಾಪುರಾಣಂ – ಸೃಷ್ಟಿಖಂಡ – ಮೂರನೆಯ ಭಾಗ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
ಇಪ್ಪತ್ತೈದನೆಯ ಅಧ್ಯಾಯ
ವಾಮನಾವತಾರದ ಕಥೆಯ ವರ್ಣನೆ. ವಾಮನನು ಮೂರು ಹೆಜ್ಜೆ ಭೂಮಿಯನ್ನು ಕೇಳಿಕೊಂಡು ಬಲಿಯನ್ನು ವಂಚನೆ ಮಾಡಿದುದು.
ಇಪ್ಪತ್ತಾರನೆಯ ಅಧ್ಯಯ
ಬ್ರಹ್ಮನು ಸರ್ಪಗಳಿಗೆ ಜನಮೇಜಯನಿಂದ ಸುಡಲ್ಪಟ್ಟು ಸಾಯಿರೆಂದು ಶಾಪಕೊಡುವುದು. ನಾಗತೀರ್ಥದ ಉತ್ಪತ್ತಿಯ ವರ್ಣನೆ. ನಾಗತೀರ್ಥದಲ್ಲಿ ಪಂಚಮಿಯ ದಿನ ಹಾಲಿನಿಂದ ಆ ಸರ್ಪಗಳಿಗೆ ತರ್ಪಣಕೊಡುವ ವಿಧಿ. ಶಿವದೂತಿಯ ಕಥೆಯ ಪ್ರಾರಂಭ ಪಾರ್ವತಿಯ ತಪಸ್ಸು ಮಾಡುವಿಕೆ. ರುರುದೈತ್ಯನಿಂದ ಹೆದರಿದ ದೇವತೆಗಳ ಪ್ರಾರ್ಥನೆಯಂತೆ ಶಿವದೂತಿಯು [ಪಾರ್ವತಿಯು] ತನ್ನ ಮುಖದಿಂದ ಅನೇಕ ದೇವಿಯರನ್ನು ಸೃಷ್ಟಿಸುವುದು. ಆ ದೇವಿ ಆ ಸೈನ್ಯದೊಡನೆ ಕೂಡಿಕೊಂಡು ರುರುದೈತ್ಯನನ್ನು ಕೊಲ್ಲುವುದು ಶಿವದೂತಿಯ ಮುಖದಿಂ ಹುಟ್ಟಿದ ದೇವಿಯರಿಗೆ ರುದ್ರನು ಬೇರೆ ಹೆಂಗಸರು ಗಂಡಸರು ಉಟ್ಟ ಬಟ್ಟೆಗಳನ್ನು ಉಟ್ಟಿ ಗರ್ಭಿಣಿಯರು ಒಂದು ವರ್ಷದ ಮಕ್ಕಳು ಇವರೇ ಮುಂತಾದವರನ್ನು ತಿನ್ನುವುದರ ರೂಪವಾದ ವರವನ್ನು ಕೊಡುವುದು. ಶಿವದೂತಿಯ ಮುಖದಿಂದ ಹುಟ್ಟಿದವರಿಗೆ ಅಪೂರ್ವವಾದ ಭಕ್ಷ್ಯಗಳನ್ನು ಕೊಡಬೇಕೆಂದು ಶಿವನನ್ನು ಶಿವದೂತಿಯು ಕೇಳಿಕೊಳ್ಳಲು ಅದಕ್ಕೆ ರುದ್ರನು ತನ್ನ ವೃಷಣರೂಪವಾದ ಅಪೂರ್ವ ಭಕ್ಷವನ್ನು ಕೊಡುವುದು. ಶಿವದೂತಿಯ ಮುಖದಿಂದ ಹುಟ್ಟಿದ ದೇವಿಯರು ಲೋಕಮಾತೆಯರಾಗುವಿಕೆ. ರುದ್ರನು ಶಿವದೂತಿ ಸ್ತೋತ್ರವನ್ನು ಮಾಡುವುದು. ಶಿವದೂತಿ ಸ್ತೋತ್ರ ಪಠನದ ಫಲವು.
ಇಪ್ಪತ್ತೇಳನೆಯ ಅಧ್ಯಾಯ
ಪ್ರೇತರೂಪವು ಬರುವ ಪಾಪಕೆಲಸದ ಪ್ರಶ್ನೆ. ಐದು ಪ್ರೇತಗಳ ಕಥೆ ಪ್ರೇತಭಾವವು ಹೋಗುವ ಕೆಲಸದ ವರ್ಣನೆ. ಪ್ರೇತಭಾವ ಬರುವ ಪಾಪಕಾರ್ಯದ ವರ್ಣನೆ. ಪುಷ್ಕರತೀರ್ಥವು ಅಂತರಿಕ್ಷದಲ್ಲಿರುವುದರ ವರ್ಣನೆ. ಋಷಿಗಳ ಪ್ರಾರ್ಥನೆಯಿಂದ ಪುಷ್ಕರವು ಭೂಮಿಗೆ ಇಳಿಯುವುದು. ಪುಷ್ಕರದಲ್ಲಿ ಸ್ನಾನದಾನಗಳಿಗೆ ಪ್ರಶಸ್ತವಾದ ಅನೇಕ ಯೋಗಗಳ ವರ್ಣನೆ. ಉದುಂಬರ ವನದಿಂದ ಬಂದ ಸರಸ್ವತೀ ನದಿಯು ಮಾಡಿದ ಪುಷ್ಕರತೀರ್ಥದ ವರ್ಣನೆ. ಪೂರ್ವ ಸರಸ್ವತಿಯಲ್ಲಿ ಮಾಡಬೇಕಾದ ವಿಧಿಯ ವರ್ಣನೆ. ಸರಸ್ವತಿಯು ಪೂರ್ವಮುಖವಾಗಲು ಕಾರಣಗಳ ವರ್ಣನೆ. ಸುಧಾವಟತೀರ್ಥದವರ್ಣನೆ.
ಇಪ್ಪತ್ತೆಂಟನೆಯ ಅಧ್ಯಾಯ
ಮಾರ್ಕಂಡೇಯನ ಉತ್ಪತ್ತಿಯ ವರ್ಣನೆ. ಅವಿಯೋಗ ವಾಪಿಯ ವರ್ಣನೆ. ಅತ್ರಿ ಋಷಿಯ ಆಜ್ಞೆಯಂತೆ ಅವಿಯೋಗವಾಪಿಗೆ ಹೋಗುತ್ತಿರುವ ರಾಮನಿಗೆ ಮಾರ್ಕಂಡೇಯನು ಸಿಕ್ಕುವುದು. ಮಾರ್ಕಂಡೇಯಾಶ್ರಮದಲ್ಲಿ ಮಲಗಿದ್ದ ರಾಮನಿಗೆ ಸ್ವಪ್ನದಲ್ಲಿ ದಶರಥನೇ ಮುಂತಾದವರು ಕಾಣುವುದು. ಸತ್ತವರನ್ನು ಸ್ವಪ್ನದಲ್ಲಿ ಕಂಡರೆ ಶ್ರಾದ್ಧಮಾಡಬೇಕು, ಎಂದು ಋಷಿಯು ಅಪ್ಪಣೆ ಮಾಡಲು ರಾಮನು ಶ್ರಾದ್ಧವನ್ನು ಮಾಡುವುದು. ಜ್ಯೇಷ್ಠ ಪುಷ್ಕರಮರ್ಯಾದಾಪರ್ವತಗಳ ಮಧ್ಯದಲ್ಲಿರುವ ಕ್ಷೇತ್ರಗಳ ಮಹಿಮೆಯಿಂದ ರಾಮಲಕ್ಷ್ಮಣರಿಗೆ ಜಗಳವುಂಟಾಗುವಿಕೆ. ಲಕ್ಷ್ಮಣನು ಸೀತೆಯನ್ನು ಗದ್ದರಿಸುವುದು. ಲಕ್ಷ್ಮಣನನ್ನು ರಾಮನು ಬಿಟ್ಟು ಬಿಡುವುದು. ರಾಮನು ಅಜಗಂಧೇಶ್ವರನ ದರ್ಶನಕ್ಕೆ ಹೋಗುವುದು. ರಾಮನು ಅಜಗಂಧೇಶ್ವರನನ್ನು ಸ್ತೋತ್ರಮಾಡುವುದು. ರಾಮನಿಗೆ ಅಜಗಂಧೇಶ್ವರನು ವರವನ್ನು ಕೊಡುವುದು. ರಾಮನು ಇಂದ್ರಮಾರ್ಗನದಿಗೆ ಹೋಗುವುದು. ಅಲ್ಲಿ ರಾಮಲಕ್ಷ್ಮಣರು ಮತ್ತೆ ಸೇರುವುದು, ಮತ್ತು ಪ್ರೇಮದ ಸಂಭಾಷಣೆ ಮಾಡುವುದು. ರಾಮನು ರೇವಾನದಿಗೆ ಹೋಗುವುದು.
ಇಪ್ಪತ್ತೊಂಬತ್ತನೆಯ ಅಧ್ಯಾಯ
ಬ್ರಹ್ಮನು ಮಾಡಿದ ಯಜ್ಞದಲ್ಲಿ ಉಳಿದ ಕಥೆಯನ್ನು ಹೇಳುವುದು. ಬ್ರಹ್ಮನು ಮಾಡಿದ ಯಾಗದ ಕಾಲದ ವರ್ಣನೆ. ಋತ್ವಿಕ್ಕುಗಳ ಪರಿಮಾಣದ ವರ್ಣನೆ. ನಾರದಾದಿ ಋಷಿಗಳು ಬ್ರಹ್ಮನೇ ಮುಂತಾದ ಋತ್ವಿಕ್ಕುಗಳಾಗುವಿಕೆ. ಋತ್ವಿಕ್ಕುಗಳಿಗೆ ಕೊಡಬೇಕಾದ ದಕ್ಷಿಣೆಯ ನಿಯಮ. ಬ್ರಹ್ಮನು ಗಾಯಿತ್ರಿಯನ್ನು ಮದುವೆ ಮಾಡಿಕೊಂಡ ಕೋಪದಿಂದ ಸಾವಿತ್ರಿಯು ಹೊರಟುಹೋಗಲು ಬ್ರಹ್ಮನ ಮಾತಿನಂತೆ ವಿಷ್ಣುರುದ್ರರು ಆಕೆಯ ಬಳಿಗೆ ಹೋಗಿ ಸಮಾಧಾನಪಡಿಸಿ ಕರೆತರುವುದು. ಬ್ರಹ್ಮನು ಎಲ್ಲ ದೇವತೆಗಳಿಗೂ ವರವನ್ನು ಕೊಡುವುದು. ವಿಷ್ಣುವು ಬ್ರಹ್ಮನನ್ನು ಸ್ತುತಿಸುವುದು. ಪುಷ್ಕರವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಚತುರ್ಮುಖವೇ ಮುಂತಾದ ಬಗೆಬಗೆಯ ಹೆಸರಿನಿಂದ ಬ್ರಹ್ಮನು ನೆಲಸಿರುವುದು, ಪುಷ್ಕರದ ಮಹಿಮೆಯ ವರ್ಣನೆ. ಪುಷ್ಕರದಲ್ಲಿ ಮಾಡಬೇಕಾದ ಅನೇಕ ವಿಧಿಗಳ ವರ್ಣನೆ.
ಮೂವತ್ತನೆಯ ಅಧ್ಯಾಯ
ಕ್ಷೇಮಂಕರಿಯ ಕಥೆಯ ಪ್ರಾರಂಭವು. ತಪಸ್ಸು ಮಾಡುತ್ತಿರುವ ಕ್ಷೇಮಂಕರಿಗೆ ಕುಮಾರಿಯರು ಹುಟ್ಟಿದುದು. ನಾರದನು ಕ್ಷೇಮಂಕರಿಯ ರೂಪವನ್ನು ವರ್ಣಿಸಿ ಅವಳಲ್ಲಿ ಮೋಹವುಂಟಾಗುವಂತೆ ಮಹಿಷಾಸುರನಿಗೆ ಮಾಡುವುದು. ಅವಳನ್ನು ಆ ಮಹಿಷನು ಹೊಂದಲು ಮೊದಲು ದೇವತೆಗಳೊಡನೆ ಯುದ್ಧಮಾಡುವುದು. ಮಹಿಷಾಸುರದ ಉತ್ಪತ್ತಿಯ ವರ್ಣನೆ ದೇವತೆಗಳನ್ನು ಜಯಿಸಿ ಮಹಿಷನು ಕ್ಷೇಮಂಕರಿಯ ಬಳಿಗೆ ಬರುವುದು. ಕ್ಷೇಮರಿಕರಿಯು ಮಹಿಷಾಸುರನನ್ನು ವಧಿಸುವುದು. ಮಹಿಷಾಸುರನ ವಧೆಯಿಂದ ಸಂತೋಷಪಟ್ಟು ದೇವತೆಗಳು ಕ್ಷೇಮಂಕರಿಯನ್ನು ಸ್ತುತಿಸುವುದು. ಕ್ಷೇಮಂಕರಿಯ ಸ್ತೋತ್ರಪಠನ ಆಕೆಯ ಪೂಜೆಯಫಲದ ವರ್ಣನೆ. ಬ್ರಹ್ಮ, ವಿಷ್ಣು, ರುದ್ರ ಶಕ್ತಿಗಳ ಭೇದವರ್ಣನೆ.
ಮೂವತ್ತೊಂದನೆಯ ಅಧ್ಯಾಯ
ವೈಷ್ಣವೀ ಚಾಮುಂಡಿಯವರ ರೂಪವಾದ ವಿಷ್ಣು ರುದ್ರ ಶಕ್ತಿಯು ದೈತ್ಯರನ್ನು ವಧೆಮಾಡಿದುದರ ವರ್ಣನೆ. ಮಹಿಷಾಸುರ ವಧೆಯ ಕಥೆಯು, ಜ್ಞಾನದಿಂದ ಅಜ್ಞಾನ ನಾಶರೂಪವಾದ ತಾತ್ಪರ್ಯವುಳ್ಳುದೆಂದು ಹೇಳುವುದು. ಪಂಚಮಹಾಪಾತಕಗಳನ್ನು ನಾಶ ಮಾಡುವ ಬ್ರಹ್ಮ ಪೂಜೆಯ ವಿಧಾನ. ನವಗ್ರಹಗಳವ್ರತವಿಧಿ. ಮತ್ತು ಅದರ ಫಲ. ಬ್ರಹ್ಮಾಂಡದಾನದ ವಿಧಾನ. ಅದಕ್ಕೋಸ್ಕರ ಶ್ವೇತರಾಜನ ಕಥೆಯ ವರ್ಣನೆ. ದಾನ ಮಾಡದ ವಸ್ತು ಸಿಕ್ಕುವುದಿಲ್ಲವೆಂಬುದರ ವರ್ಣನೆ.
ಮೂವತ್ತೆರಡನೆಯ ಅಧ್ಯಾಯವು
ರಾಮನು ಶೂದ್ರಕನನ್ನು ಕೊಂದುದರ ವರ್ಣನೆ.
ಮೂವತ್ತಮೂರನೆಯ ಅಧ್ಯಾಯವು
ಶೂದ್ರಕನ ವಧೆಯಾದ ಮೇಲೆ ರಾಮನು ಅಗಸ್ತ್ಯಾಶ್ರಮಕ್ಕೆ ಹೋದುದು. ಅಗಸ್ತ್ಯರಾಮರ ಸಂವಾದ, ಕ್ಷತ್ರಿಯನೂ ದಾನ ತೆಗೆದುಕೊಳ್ಳುವ ಅಧಿಕಾರದ ವರ್ಣನೆ. ಅಗಸ್ತ್ಯನು ಕೊಟ್ಟ ಆಭರಣವನ್ನು ರಾಮನು ತೆಗೆದುಕೊಂಡುದು. ಆ ಆಭರಣವು ಬಂದಕಾರಣಕ್ಕೆ ಶ್ವೇತನ ಕಥೆಯನ್ನು ರಾಮನಿಗೆ ಅಗಸ್ತ್ಯನು ಹೇಳುವುದು.
ಮೂವತ್ತನಾಲ್ಕನೆಯ ಅಧ್ಯಾಯ
ವಿಂಧ್ಯಪರ್ವತದ ಅರಣ್ಯಕ್ಕೆ ದಂಡಕಾರಣ್ಯವೆಂದು ಹೆಸರು ಬರಲು ಕಾರಣದ ವರ್ಣನೆ. ಹದ್ದುಗೂಬೆಗಳ ಕಥೆ.
ಮೂವತ್ತೈದನೆಯ ಅಧ್ಯಾಯವು
ಕನ್ಯಕುಬ್ಬದಲ್ಲಿ ರಾಮನು ವಾಮನಮೂರ್ತಿಯನ್ನು ಪ್ರತಿಷ್ಠೆಮಾಡಿದುದು. ರಾಮನು ಭರತನಿಗೆ ಸೀತೆಯನ್ನು ಕದ್ದುಕೊಂಡು ಹೋದಂದಿನಿಂದ ಮೊದಲುಗೊಂಡು ಅವಳನ್ನು ತಂದವರೆಗಿನ ಕಥೆ.
ಮೂವತ್ತಾರನೆಯ ಅಧ್ಯಾಯ
ವಿಷ್ಣುವಿನ ಹೊಕ್ಕಳಿನ ಪದ್ಮವು ಹುಟ್ಟಿದ ಕಥೆ, ಕೃತಯುಗಾದಿ ಯುಗಗಳ ಅಳತೆ ಆ ಯುಗಗಳಲ್ಲಿರುವ ಧರ್ಮಗಳ ವರ್ಣನೆ. ಜಗತ್ತಿನ ಸಂಹಾರದ ವರ್ಣನೆ ಮಾರ್ಕಂಡೇಯನಿಗೆ ಭಗವಂತನು ಉಪದೇಶಮಾಡುವುದು. ಪೃಥಿವ್ಯಾದಿಪಂಚಭೂತಗಳು ನಾಶವಾಗುವುದು. ಜಲಕ್ರೀಡೆಯನ್ನು ಮಾಡುತ್ತಿರುವ ಭಗವಂತನ ಹೊಕ್ಕುಳಿನಿಂದ ಚಿನ್ನದ ಕಮಲವು ಹುಟ್ಟಿದುದು.