ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಪದ್ಮಮಹಾಪುರಾಣಂ – ಸೃಷ್ಟಿಖಂಡ – ಎರಡನೆಯ ಭಾಗ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
ಹದಿನಾರನೆಯ ಅಧ್ಯಾಯ
ಪುಲಸ್ತ್ಯನು ಭೀಷ್ಮನಿಗೆ ಬ್ರಹ್ಮನು ಮಾಡಿದ ಯಾಗವನ್ನು ವರ್ಣಿಸುವುದು. ಬ್ರಹ್ಮನು ಮಾಡಿದ ವರ್ಣನೆ. ಬ್ರಹ್ಮನು ಗೋಪಕನ್ಯೆಯನ್ನು ಮದುವೆಯಾದುದು.
ಹದಿನೇಳನೆಯ ಅಧ್ಯಾಯ
ಬ್ರಹ್ಮನ ಯಜ್ಞದಲ್ಲಿ ಉಂಟಾದ ಆಶ್ಚರ್ಯದ ಪ್ರಶ್ನೆ. ಬ್ರಹ್ಮನ ಯಜ್ಞಭೂಮಿಗೆ ರುದ್ರನು ಭಿಕ್ಷೆಗೆ ಬರುವುದು. ಸದಸ್ಯರು ನಿಂದಿಸಲು ಕೋಪಗೊಂಡ ರುದ್ರನು ಅಲ್ಲಿಟ್ಟ ಕಪಾಲವನ್ನು ತೆಗೆದರೂ ಮತ್ತೆ ಮತ್ತೆ ಅಲ್ಲಿ ಹುಟ್ಟುವುದರ ಆಶ್ಚರ್ಯದ ಕಥನ. ಬ್ರಹ್ಮನಿಗೂ ರುದ್ರನಿಗೂ ಉಂಟಾದ ಸಂವಾದ. ಸದಸ್ಯರು ರುದ್ರನನ್ನು ಹಾಸ್ಯಮಾಡುವುದು. ಹಾಸ್ಯಮಾಡಿದರಿಗೆ ರುದ್ರನು ಶಾಪಕೊಟ್ಟದ್ದು. ಹಾಸ್ಯಮಾಡದವರಿಗೆ ರುದ್ರನು ವರ ಕೊಟ್ಟುದು. ಗೋಪಕನ್ಯೆಯನ್ನು ಹತ್ತಿರದಲ್ಲಿ ಕೂರಿಸಿಕೊಂಡು ಯಜ್ಞಮಾಡುತ್ತಿದ್ದುದನ್ನು ನೋಡಿ ಸಾವಿತ್ರಿಯು ಬ್ರಹ್ಮನನ್ನು ಹೆದರಿಸುವುದು. ಬ್ರಹ್ಮನು ಸಾವಿತ್ರಿಯನ್ನು ಕ್ಷಮಿಸುವಂತೆ ಕೇಳಿಕೊಳ್ಳುವುದು. ಸಾವಿತ್ರಿಯು ಬ್ರಹ್ಮನಿಗೂ ವಿಷ್ಣುವೇ ಮುಂತಾದವರಿಗೂ ಶಾಪಕೊಡುವುದು. ವಿಷ್ಣುವಿನ ಪ್ರಾರ್ಥನೆಯನ್ನು ತಿರಸ್ಕರಿಸಿ ಸಾವಿತ್ರಿಯನ್ನು ಪರ್ವತಕ್ಕೆ ಹೊರಟುಹೋದುದು. ವಿಷ್ಣುವು ಸಾವಿತ್ರಿಯನ್ನು ಸ್ತುತಿಸುವುದು. ಸಾವಿತ್ರಿಯು ವಿಷ್ಣುವಿಗೆ ವರವನ್ನು ಕೊಡುವುದು. ಗಾಯತ್ರಿಯು ಹೇಳಿದ ಕಾರ್ತಿಕ ಪೌರ್ಣಮಿಯ ದಿನದ ವ್ರತದ ನಿರೂಪಣೆ. ಗಾಯತ್ರಿಯು ಬ್ರಹ್ಮನನ್ನು ದೇವತೆಗಳನ್ನು ಕುರಿತು ಸಾವಿತ್ರಿಯು ಕೊಟ್ಟ ಶಾಪಕ್ಕೆ ನಾಶವನ್ನು ತಿಳಿಸುವುದು. ರುದ್ರನು ಗಾಯತ್ರಿಯನ್ನು ಸ್ತುತಿಸುವುದು. ರುದ್ರನಿಗೆ ಗಾಯತ್ರಿಯು ವರ ಕೊಡುವುದು.
ಹದಿನೆಂಟನೆಯ ಅಧ್ಯಾಯ
ಬ್ರಹ್ಮನ ಯಜ್ಞದ ವಿಸ್ತಾರ. ಅಲ್ಲಿದ್ದ ದೇವತೆಗಳಿಗೂ ರಾಕ್ಷಸರಿಗೂ ಉಂಟಾದ ಕಲಹ. ವಿಕಾರವಾದ ಋಷಿಗಳು ಪುಷ್ಕರದಲ್ಲಿ ಸ್ನಾನಮಾಡಲು ಅವರು ಸರಿಹೋಗುವುದು. ಪ್ರಾಚೀಸರಸ್ವತಿಯ ಚರಿತ್ರೆ. ಮಂಖಣನೆಂಬ ಋಷಿಯ ಕಥೆ. ಮಂಖಣನಿಗೆ ರುದ್ರನು ವರಕೊಟ್ಟುದು. ಪೂರ್ವದಿಕ್ಕಿನ ಮಹಿಮೆಯ ವರ್ಣನೆ. ಸರಸ್ವತಿಯು ಪೂರ್ವದಿಕ್ಕಿಗೆ ಹರಿಯಲು ಕಾರಣ. ದೇವತೆಗಳ ಮಾತಿನಂತೆ ಬ್ರಹ್ಮನು ಸರಸ್ವತಿಗೆ ಬಡಬಾನಲವನ್ನು ತೆಗೆದುಕೊಂಡು ಸಮುದ್ರಕ್ಕೆ ಹೋಗುವಂತೆ ಹೇಳುವುದು. ಗಂಗೆ ಸರಸ್ವತಿಯರ ಸಂವಾದ. ಉದ್ದಂಕಾಶ್ರಮಕ್ಕೆ ಸರಸ್ವತಿಯು ಬರುವುದು. ಸರಸ್ವತಿಯು ಬಡಬಾನಲವನ್ನು ತೆಗೆದುಕೊಳ್ಳುವುದು. ವಿಷ್ಣುವು ಸರಸ್ವತಿಗೆ ಬಡಬಾನಲನು ಸುಡದಂತೆ ವರ ಕೊಡುವುದು. ಸರಸ್ವತಿಯು ಕಾಣದಂತೆ ಪುಷ್ಕರಕ್ಕೆ ಹೋಗುವುದು. ಸರಸ್ವತಿಯಲ್ಲಿ ಸ್ನಾನದಾನಗಳ ಫಲ. ಪುಷ್ಕರದ ಸಮೀಪದಲ್ಲಿನ ಖರ್ಜೂರದ ವನದಲ್ಲಿ ಸರಸ್ವತಿಯು ಹುಟ್ಟುವುದು. ಸರಸ್ವತಿಗೆ ನಂದೆಯೆಂಬ ಹೆಸರು ಬರಲು ಕಾರಣ. ಭೂತವಾದ ಪ್ರಭಂಜನನೆಂಬ ರಾಜನ ಕಥೆಯ ವರ್ಣನೆ. ಕಾಡಿಗೆ ಹೋಗಿದ್ದ ಪ್ರಭಂಜನನಿಗೆ ಶಾಪಬರುತ್ತದೆ. ಕೊಲ್ಲಬಾರದ ಮೃಗಗಳ ವರ್ಣನೆ. ರಾಜನ ಪ್ರಾರ್ಥನೆಯಂತೆ ನಂದೆಯ ದರ್ಶನದಿಂದ ಶಾಪಮೋಚನದ ವಿಷಯ. ಪ್ರಭಂಜನನಿಗೆ ನಂದೆಯೆಂಬ ಹಸುವಿನೊಡನೆ ಸೇರುವಿಕೆ. ಹುಲಿಯಾಗಿದ್ದ ಪ್ರಭಂಜನನಿಗೂ ನಂದೆಗೂ ಚರ್ಚೆ. ನಂದೆಯು ಮತ್ತೆ ಬರುವೆನೆಂದು ಹುಲಿಯನ್ನು ಕೇಳಿ ಮಗನ ಬಳಿಗೆ ಬರುವುದು. ಆಗ ನಂದೆಯು ಬಹುವಾಗಿ ಪ್ರತಿಜ್ಞೆಗಳನ್ನು ಮಾಡುವುದು. ಮದುವೆ ಮುಂತಾದುವುಗಳಲ್ಲಿ ಪ್ರತಿಜ್ಞೆಮಾಡುವುದರಿಂದ ದೋಷವಿಲ್ಲದಿರುವಿಕೆ. ನಂದೆಯು ಮನೆಗೆ ಬಂದು ಮಗನೊಡನೆ ತನ್ನ ಸಾವಿನ ವಿಷಯವನ್ನು ತಿಳಿಸುವುದು. ಮಗನಿಗೆ ಉಪದೇಶ ಮಾಡುವುದು. ತಾಯಿ ಸಖಿಯರೊಡನೆ ಮಾತುಕಥೆ. ಸತ್ಯದ ಪ್ರಶಂಸೆ. ನಂದೆಯು ತನ್ನ ಮಗನನ್ನು ಕಾಪಾಡಲು ವನ ದೇವತೆಗಳನ್ನು ಪ್ರಾರ್ಥಿಸಿ ಮತ್ತು ಹುಲಿಯ ಬಳಿಗೆ ಹಿಂದಿರುಗುವುದು. ಹುಲಿಗೆ ತಾನು ಬಂದಿರುವುದನ್ನು ಹೇಳುವುದು. ನಂದೆಯ ಹೆಸರನ್ನು ಮತ್ತೆ ಕೇಳಿದೊಡನೆಯೇ ಹುಲಿಗೆ ಮೊದಲಿನ ದೇಹ ಬರುವುದು. ಧರ್ಮನು ನಂದೆಗೂ ಪ್ರಬಂಧನನೆಂಬ ಹುಲಿಯಾಗಿದ್ದವನಿಗೂ ವರ ಕೊಡುವುದು. ಸರಸ್ವತಿಯೇ ನಂದೆಯಾಗಿರುವುದನ್ನು ತಿಳಿಸುವುದು. ಖರ್ಜೂರೀ ವನದಿಂದ ಬೇರೆಕಡೆ ನಂದೆಯು ಹೋಗುವುದು. ಸರಸ್ವತೀ ನದಿಯಲ್ಲಿ ದಾನಮಾಡಿದ ಫಲದ ಪ್ರಶಂಸೆ.
ಹತ್ತೊಂಭತ್ತನೆಯ ಅಧ್ಯಾಯ
ಋಷಿಗಳು ತೀರ್ಥವನ್ನು ವಿಭಾಗಿಸಿರುವುದು. ಬ್ರಹ್ಮನು ಋಷಿಗಳಿಗೆ ವರ ದಾನಮಾಡುವುದು. ಪುಷ್ಕರ ಮಹಿಮೆಯ ವರ್ಣನೆ. ಪುಷ್ಕರದಲ್ಲಿ ಮಾಡಿದ ಸ್ನಾನದಾನಗಳ ವರ್ಣನೆ. ಪುಷ್ಕರದ ಆಶ್ರಮಗಳ ವರ್ಣನೆ. ಅಗಸ್ತ್ಯನ ಮಹಿಮೆ. ವೃತ್ರಾಸುರನ ವಧೆಯ ಕಥೆ. ವೃತ್ರನ ಕಡೆಯ ಕಾಲೇಯರಿಂದ ಹೆದರಿದ ದೇವತೆಗಳು ಬ್ರಹ್ಮನ ಬಳಿಗೆ ಹೋಗುವುದು. ಬ್ರಹ್ಮನ ಅಪ್ಪಣೆಯಂತೆ ದೇವತೆಗಳು ದಧೀಚಿಯ ಬಳಿಗೆ ಹೋಗುವುದು. ದೇವತೆಗಳಿಗೆ ದಧೀಚಿಯು ತನ್ನ ಮೂಳೆಯನ್ನು ಕೊಡುವುದು. ಆ ಮೂಳೆಯಲ್ಲಿ ವಜ್ರಾಯುಧ ನಿರ್ಮಾಣವು. ಯುದ್ಧದಲ್ಲಿ ವೃತ್ರಾಸುರನ ವಧೆ. ಕಾಲಕೇಯರು ಸಮುದ್ರದಲ್ಲಿ ಸೇರುವುದು. ದೇವತೆಗಳು ವಿಷ್ಣುವನ್ನು ಸ್ತುತಿಸುವುದು. ವಿಷ್ಣುವಿನ ಮಾತಿನಂತೆ ಆಗಸ್ತ್ಯನ ಬಳಿಗೆ ಹೋಗುವುದು. ಅಗಸ್ತ್ಯನು ವಿಂಧ್ಯಪರ್ವತವನ್ನು ನಮ್ರವನ್ನಾಗಿ ಮಾಡುವುದು. ದೇವತೆಗಳ ಮಾತಿನಂತೆ ಅಗಸ್ತ್ಯನು ಸಮುದ್ರವನ್ನು ಕುಡಿಯುವುದು. ಕಾಲೇಯರ ವಧೆ. ಭಗೀರಥನು ಮುಂದೆ ಗಂಗೆಯನ್ನು ತಂದು ಸಮುದ್ರವನ್ನು ತುಂಬುತ್ತಾನೆಂದು ಬ್ರಹ್ಮನು ಹೇಳುವುದು. ಪುಷ್ಕರದಲ್ಲಿ ಶ್ರಾದ್ಧಾದಿ ದಾನಗಳ ವಿವರಣೆ. ಪುಷ್ಕರದ ವಿಷಯಗಳ ಕಥೆಗಳು. ಅನಾವೃಷ್ಟಿಯಿಂದ ಅನ್ನ ಸಿಕ್ಕದಿರಲು ಸತ್ತ ಮಗನನ್ನು ಬೇಯಿಸುತ್ತಿರುವ ಋಷಿಗಳಿಗೂ ರಾಜನಿಗೂ ಸಂವಾದವು. ದಾನ ತೆಗೆದುಕೊಳ್ಳುವುದರಲ್ಲಿ ಇರುವ ದೋಷಗಳು. ಚಿನ್ನದ ನಾಣ್ಯವನ್ನು ತುಂಬಿರುವ ಕುಂಬಳಕಾಯನ್ನು ತೆಗೆದುಕೊಳ್ಳದಿರುವುದಕ್ಕೆ ವಸಿಷ್ಠನೇ ಮುಂತಾದವರ ಅಭಿಪ್ರಾಯಗಳು. ಶಾಂತಿಯ ಪ್ರಶಂಸೆ. ದುಡ್ಡನ್ನು ಕೂಡಿಡುವುದರಿಂದ ದೋಷ ಬರುವ ವಿವರಣೆ. ಆಶೆಯ ದೋಷ. ಸಂತೋಷದ ಪ್ರಶಂಸೆ. ಕಾಮದ ದೋಷ. ದಾನ ತಗೆದುಕೊಳ್ಳಲು ಯೋಗ್ಯನಾದವನು ಅದನ್ನು ತೆಗೆದುಕೊಳ್ಳದಿದ್ದರೆ ಬರುವ ಫಲದ ವರ್ಣನೆ. ಹಸಿವಿನಿಂದ ಉಂಟಾಗುವ ಅವಸ್ಥೆಗಳು. ಅನ್ನ ಪ್ರಶಂಸೆ. ಅನ್ನ ದಾನದ ಮಹಿಮೆ. ದಮದ ಪ್ರಶಂಸೆ. ಯಮದ ಪ್ರಶಂಸೆ. ಶಾನ್ತನ ಲಕ್ಷಣ. ಅಕ್ರೋಧಿ ಕ್ಷಮೆಗಳ ಪ್ರಶಂಸೆ. ಮಧ್ಯ ಪುಷ್ಕರದ ಪ್ರಶಂಸೆ. ಕಥೆಯನ್ನು ಓದುವುದರ ಫಲವು.
ಇಪ್ಪತ್ತನೆಯ ಅಧ್ಯಾಯ
ದಾನ ಪ್ರಶಂಸೆಯ ವಿಷಯದಲ್ಲಿ ಪುಷ್ಪವಾಹನ ರಾಜನ ಕಥೆ. ವಿಭೂತಿದ್ವಾದಶೀ ವ್ರತ, ನಕ್ತವ್ರತ, ರುದ್ರವ್ರತ, ನೀಲವ್ರತ ಮುಂತಾದ ವ್ರತಗಳು. ಸ್ನಾನದ ವಿಧಿಯ ವಿವರಣೆ.
ಇಪ್ಪತ್ತೊಂದನೆಯ ಅಧ್ಯಾಯ
ಧರ್ಮಮೂರ್ತಿಯೆಂಬ ರಾಜನ ಕಥೆ. ಧಾನ್ಯಾಚಲ ಮೊದಲಾದ ದಾನಗಳ ವಿಧಿ ನಿರೂಪಣೆ, ವಿಶೋಕದ್ವಾದಶಿಯ ವ್ರತ. ಗುಡಧೇನು ಮುಂತಾದ ಹತ್ತು ಧೇನುಗಳ ವಿವರಣೆ. ಧಾನ್ಯ ಶೈಲ ಮುಂತಾದ ಹತ್ತು ಶೈಲಗಳ ದಾನದ ವರ್ಣನೆ. ಸೌರ ಧರ್ಮದ ವಿವರಣೆ. ವಿಶೋಕ, ಶರ್ಕರ, ಕಮಲಸಪ್ತಮಿಗಳ ವಿವರಣೆ. ಮಂದಾರಸಪ್ತಮೀ ವ್ರತ. ಶುಭಸಪ್ತಮೀ ವ್ರತದ ವಿವರಣೆ.
ಇಪ್ಪತ್ತೆರಡನೆಯ ಅಧ್ಯಾಯ
ಭೂಲೋಕ ಮೊದಲುಗೊಂಡು ಎಲ್ಲಾ ಲೋಕಗಳ ಆಧಿಪತ್ಯದ ವಿಷಯದಲ್ಲಿ ಭೀಷ್ಮನು ಪುಲಸ್ತ್ಯನನ್ನು ಪ್ರಶ್ನಿಸುವುದು. ದೇವತೆಗಳಿಗೆ ಧರ್ಮಾಧರ್ಮ ಸಂಬಂಧವಿಲ್ಲದಿರುವಿಕೆ. ಅಗ್ನಿ ವಾಯುಗಳಿಗೆ ಇಂದ್ರನ ಶಾಪ, ಮತ್ತು ಮಿತ್ರಾವರುಣರ ವೀರ್ಯದಿಂದ ಮಡಕೆಯಲ್ಲಿ ವಸಿಷ್ಠ ಅಗಸ್ತ್ಯರು ಹುಟ್ಟುವುದು. ಕಣ್ಣಿನಲ್ಲಿರುವ ರೆಪ್ಪೆಯು ಹುಟ್ಟಲು ಕಾರಣ, ಅದರ ಕಥೆ. ಸಂಕ್ಷೇಪವಾಗಿ ಅಗಸ್ತ್ಯನ ಚರಿತ್ರೆ. ಅಗಸ್ತ್ಯನ ಪೂಜೆಗೋಸ್ಕರ ಆತನ ಆಶ್ರಮಕ್ಕೆ ಭೂಲೋಕವೇ ಮೊದಲಾದ ಲೋಕಗಳವರು ಬರುವುದು. ಅಗಸ್ತ್ಯನಿಗೆ ಅರ್ಘ್ಯದಾನದ ವಿಧಿ. ಉಮಾಮಹೇಶ್ವರರ ಸಂಪಾದದಲ್ಲಿ ಭಾದ್ರಪದ ಮಾಸಾದಿಗಳಲ್ಲಿ ಗೌರಿಯ ವ್ರತ. ರಸಕಲ್ಯಾಣಿ ಎಂಬ ತದಿಗೆಯ ವಿಧಿ. ಪಾಪನಾಶಿನಿ ಎಂಬ ತದಿಗೆಯ ವ್ರತ. ಸರಸ್ವತಿ ವ್ರತಗಳ ನಿರೂಪಣೆ.
ಇಪ್ಪತ್ತಮೂರನೆಯ ಅಧ್ಯಾಯ
ಕೃಷ್ಣಭೀಮ ಸಂವಾದದಲ್ಲಿ ಮಾಘ ಮಾಸದಲ್ಲಿ, ಭೀಮದ್ವಾದಶಿಯ ವ್ರತ ಕಥನ. ಶಾಪದಿಂದ ಸೂಳೆಯರಾದ ವಿಷ್ಣುವಿನ ಹೆಂಡಿರೊಡನೆ ದಾಲ್ಭ್ಯನ ಮಾತು. ದಾಲ್ಛ್ಯನು ವೇಶ್ಯರಿಗೆ ಅವರ ಅವರ ಧರ್ಮವನ್ನು ವಿವರಿಸುವುದು. ವೇಶ್ಯೆಯರಿಗೆ ವಿಷ್ಣುಲೋಕ ಪ್ರಾಪ್ತಿಯನ್ನು ಕೊಡುವ ಅನಂತದಾನವ್ರತದ ಬೋಧನೆ.
ಇಪ್ಪತ್ತನಾಲ್ಕನೆಯ ಅಧ್ಯಾಯ
ಶ್ರಾವಣ ಬಹುಳ ದ್ವಿತೀಯೆಯಲ್ಲಿ ಅಶೂನ್ಯಶಯನ ವ್ರತದ ನಿರೂಪಣೆ. ವೀರಭದ್ರನ ಉತ್ಪತ್ತಿಯ ನಿರೂಪಣೆ. ವೀರಭದ್ರನು ಅಂಗಾರಕ ಗ್ರಹನಾಗುವುದು. ಅಂಗಾರಕ ಚತುರ್ಥಿಯ ವ್ರತದ ನಿರೂಪಣೆ. ಆದಿತ್ಯಶಯನದ ವ್ರತದ ಕಥೆ. ರೋಹಿಣೀಚಂದ್ರ ಶಯನ ವ್ರತದ ನಿರೂಪಣೆ. ತಡಾಕವಿಧಿ ನಿರೂಪಣೆ. ಅಶ್ವತ್ಥಮರ ಬೆಳೆಸುವಿಕೆ. ಲಲಿತೆಯ ಉತ್ಪತ್ತಿ. ಸೌಭಾಗ್ಯಶಯನದ ವ್ರತದ ವಿಧಿಯು.