ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಪದ್ಮಮಹಾಪುರಾಣಂ – ಸೃಷ್ಟಿಖಂಡ – ಒಂದನೆಯ ಭಾಗ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಪ್ರಸ್ತಾವನೆ
ಮೊದಲನೆಯ ಅಧ್ಯಾಯ
ವ್ಯಾಸಶಿಷ್ಯನಾದ ಲೋಮಹರ್ಷನಿಯು ಉಗ್ರಶ್ರವಸನೆಯಸೂತನಿಗೆ ಋಷಿಗಳಿಗೆ ಪುರಾಣವನ್ನು ಹೇಳುವಂತೆ ಹೇಳುವುದು. ನೈಮಿಷಾರಣ್ಯವು ಪುಣ್ಯದೇವು ಎಂದು ಹೇಳಿರುವುದು. ಹೆಸರು ಹಾಗೆ ಬರಲು ಕಾರಣ. ನೈಮಿಷಾರಣ್ಯಕ್ಕೆ ಬಂದ ಸೂತನೊಡನೆ ಶೌನಕಾದಿಗಳ ಸಂಭಾಷಣೆ. ಸೂತನನ್ನು ಪುರಾಣವನ್ನು ಹೇಳುವಂತೆ ಕೇಳಿಕೊಳ್ಳುವುದು. ಸೂತನ ಉತ್ಪತ್ತಿ ಮತ್ತು ಅವರ ಧರ್ಮಗಳ ಕಥನ. ವ್ಯಾಸೋತ್ಪತ್ತಿಯ ವರ್ಣನೆ. ವ್ಯಾಸನು ಪುರಾಣವನ್ನು ಬರೆಯಲು ಕಾರಣ. ಪದ್ಮಪುರಾಣದ ಪ್ರಶಂಸೆ. ಪದ್ಮಪುರಾಣದ ವಿಷಯ ನಿರ್ಣಯ.
ಎರಡನೆಯ ಅಧ್ಯಾಯ
ಸೃಷ್ಟಿಖಂಡದ ವಿಷಯಗಳ ನಿರ್ಣಯ. ಪುರಾಣ ತಿಳಿದವನ ಪ್ರಾಶಸ್ತ್ಯ. ಇತಿಹಾಸಪುರಾಣಗಳ ವೇದಾರ್ಥವನ್ನು ಪೋಷಿಸುತ್ತವೆ ಎಂದು ವಿವರಿಸುವುದು. ಬ್ರಹ್ಮನ ಮಾತಿನಂತೆ ಗಂಗಾದ್ವಾರದಲ್ಲಿ ಪುಲಸ್ತ್ಯನು ಭೀಷ್ಮನನ್ನು ನೋಡುವುದು. ಭೀಷ್ಮನು ಅವನನ್ನು ಸೃಷ್ಟಿಯ ವಿಷಯದಲ್ಲಿ ಪ್ರಶ್ನಿಸುವುದು. ಆತನು ಮೊದಲಿನಿಂದ ಕೊನೆಯವರೆಗೂ ಆ ವಿಷಯವನ್ನು ಹೇಳುವುದು.
ಮೂರನೆಯ ಅಧ್ಯಾಯ
ಕಾಲವನ್ನು ಭಾಗಮಾಡಿರುವುದನ್ನೇ ವಿವರಿಸುವುದು. ಪ್ರಳಯಕಾಲದ ವರ್ಣನೆ. ನೀರಿನಲ್ಲಿ ಮುಳುಗಿದ ಭೂಮಿಯು ವಿಷ್ಣುವನ್ನು ಸ್ತುತಿಸುವುದು. ವರಾಹರೂಪದಿಂದ ವಿಷ್ಣುವು ಭೂಮಿಯನ್ನು ಎತ್ತುವುದು. ವಿಷ್ಣುವಿನಿಂದ ವರವನ್ನು ಪಡೆದು ಬ್ರಹ್ಮನು ಒಂಭತ್ತುಬಗೆಯಾಗಿ ಸೃಷ್ಟಿಸುವುದು. ದೇವಾಸುರ ಮನುಷ್ಯರ ಸೃಷ್ಟಿಯನ್ನು ವಿಶೇಷವಾಗಿ ವರ್ಣಿಸುವುದು. ದೇವತೆಗಳು ಹಗುಲಿನಲ್ಲಿಯೂ ಅಸುರರು ರಾತ್ರಿಯಲ್ಲಿಯೂ ಬಲಿಷ್ಠರಾಗಿರಲು ಕಾರಣ. ಬ್ರಹ್ಮನ ಅವಯವಗಳಿಂದ ಬ್ರಾಹ್ಮಣರೇ ಮುಂತಾದ ಜಾತಿಯ ಉತ್ಪತ್ತಿಕಥನ. ಆ ಬ್ರಾಹ್ಮಣಾದಿಗಳಿಗೆ ಸ್ಥಾನನಿಯಮ. ಲೋಕಸೃಷ್ಟಿಗೋಸ್ಕರ ಉತ್ಪತ್ತಿಮಾಡಿದ ಭೃಗುವೇ ಮುಂತಾದವರು ಅದರಲ್ಲಿ ಅಪೇಕ್ಷೆಯನ್ನು ತೋರಿಸದಿರಲು ಕೋಪಗೊಂಡ ಬ್ರಹ್ಮನು ರುದ್ರನನ್ನು ಉತ್ಪತ್ತಿಮಾಡಿದುದು. ಸ್ವಾಯಂಭುವಮನುವೇ ಮುಂತಾದವರ ಉತ್ಪತ್ತಿ ಕಥನ.
ನಾಲ್ಕನೆಯ ಅಧ್ಯಾಯ
ಇಂದ್ರನಿಗೆ ದೂರ್ವಾಸನ ಶಾಪ. ಸಮುದ್ರವನ್ನು ಕಡೆದ ಕಥೆ. ವಿಷ್ಣುವಿಗೆ ಭೃಗುವು ಶಾಪಕೊಟ್ಟದ್ದು. ಶಾಪವನ್ನು ಹೊಂದಿದ ವಿಷ್ಣುವಿಗೂ ಬ್ರಹ್ಮನಿಗೂ ಸಂವಾದ. ಬ್ರಹ್ಮನು ವಿಷ್ಣುವನ್ನು ಸ್ತುತಿಸುವುದು. ನಾರದನು ಬ್ರಹ್ಮನನ್ನು ಸ್ತುತಿಸುವುದು. ಬ್ರಹ್ಮನು ನಾರದನಿಗೆ ವರವನ್ನು ಕೊಡುವುದು.
ಐದನೆಯ ಅಧ್ಯಾಯ
ದಕ್ಷಯಜ್ಞನಾಶದ ಕಥೆ. ದಕ್ಷನು ಶಂಕರನನ್ನು ಸ್ತುತಿಸುವುದು. ಶಂಕರನು ದಕ್ಷನಿಗೆ ವರವನ್ನು ಕೊಡುವುದು.
ಆರನೆಯ ಅಧ್ಯಾಯ
ದೇವದಾನವಗಂಧರ್ವ ಉರಗ ರಾಕ್ಷಸರ ಪೂರ್ವಸೃಷ್ಟಿಯ ಕಥೆ. ದಕ್ಷನು ಪೂರ್ವಸೃಷ್ಟಿಗೆ ಸಂಕಲ್ಪಸ್ಪರ್ಶನದರ್ಶನಗಳನ್ನೇ ಕಾರಣವಾಗಿಟ್ಟುಕೊಳ್ಳುವುದು. ದಕ್ಷನಿಗಿಂತಲೂ ಹಿಂದಿನ ಪ್ರಜೆಗಳ ಮೈಥುನ ವಿವರಣೆ. ವಿಶ್ವೇದೇವರ ಉತ್ಪತ್ತಿ. ವಸ್ತುಗಳ ಉತ್ಪತ್ತಿ. ರುದ್ರರು, ದ್ವಾದಶಾದಿತ್ಯರು, ಹಿರಣ್ಯಕಶಿಪುವೇ ಮುಂತಾದ ರೌದ್ರದೈತ್ಯರು ಇವರ ಉತ್ಪತ್ತಿಗಳು, ಬಾಣಾಸುರನ ಚರಿತ್ರೆ ಕಶ್ಯಪನಿಂದ ವಿನತೆಯಲ್ಲಿ ಗರುಡನು ಹುಟ್ಟಿದುದು. ಸಂಪಾತಿ ಜಟಾಯುಗಳ ಪೌರುಷ. ಮುನಿ, ಅಪ್ಸರಸ್ಸು, ಕಿನ್ನರ ಗಂಧರ್ವ ಇವರ ಉತ್ಪತ್ತಿಕಥನವು.
ಏಳನೆಯ ಅಧ್ಯಾಯ
ಮರುತ್ತುಗಳ ಉತ್ಪತ್ಯಾಖ್ಯಾನ. ದಿತಿಯ ಜ್ಯೇಷ್ಠ ಪೂರ್ಣಿಮಾವ್ರತವನ್ನು ಮಾಡಿದುದು. ದಿತಿಯು ಗರ್ಭಿಣಿಯಾದುದು. ಕಶ್ಯಪನು ದಿತಿಗೆ ಗರ್ಭಿಣೀಧರ್ಮವನ್ನು ಉಪದೇಶಿಸುವುದು. ದಿತಿಯು ಮಲಗಿರುವಾಗ ಆ ಗರ್ಭವನ್ನು ಶಕ್ರನು ವಜ್ರದಿಂದ ಏಳುಭಾಗವಾಗಿ ಮಾಡುವುದು. ಮತ್ತೆ ಒಂದೊಂದನ್ನು ಏಳುಏಳು ಪಾಲಾಗಿ ಕತ್ತರಿಸುವುದು. ವ್ರತಪ್ರಭಾವದಿಂದ ನಾಶವಾಗದ ಆ ನಾಲ್ವತ್ತೊಂಭತ್ತು ಗರ್ಭದ ಚೂರುಗಳಿಗೆ ಇಂದ್ರನು ಮರುತ್ತೆಂದು ಹೆಸರು ಇಡುವುದು. ಮರುತ್ ಎಂಬುದು ಹೇಗೆ ಬಂದಿತೆಂಬುದು. ಪ್ರತಿಸರ್ಗದ ಕಥನ. ಮನ್ವಂತರಕಥನ.
ಎಂಟನೆಯ ಅಧ್ಯಾಯ
ಪೃಥುವಿನ ಕಥೆ. ಪೃಥುವು ಮಾಡಿದ ಪೃಥಿವಿಗೆ ಸ್ವಯಂಭುವೇ ಮುಂತಾದ ವರ್ಷಗಳ ರೀತಿ ಮತ್ತು ಅದರಿಂದ ಅನ್ನಿವು ಹುಟ್ಟಿದ ಬಗೆಗಳನ್ನು ವರ್ಣಿಸುವುದು. ಪೃಥುವಿನ ಹೊಗಳಿಕೆ. ಆ ದಿವ್ಯ ವರಾಹಕಥನ. ಸಾವರ್ಣಮನುವಿನ ಉತ್ಪತ್ತಿ. ಸೂರ್ಯನ ಹೆಂಡತಿಯಾದ ಛಾಯೆಯ ಕಥೆ. ತೃಷ್ಟೃವು ಸೂರ್ಯನನ್ನು ಸಾಣೆಹಿಡಿವುದು. ಸೂರ್ಯನ ಪ್ರತಿಮೆಗೆ ಕಾಲುಗಳನ್ನು ಮಾಡದಿರಲು ಕಾರಣ ವರ್ಣನೆ. ಅಶ್ವಿನೀಕುಮಾರರ ಉತ್ಪತ್ತಿವರ್ಣನೆ. ಶನಿಯು ಗ್ರಹವಾದುದು. ಇಲನ ಚರಿತ್ರೆ. ಇಲನು ಶರವಣಕ್ಕೆ ಹೋಗಿ ಹೆಂಗಸಾದುದು. ಇಳೆಯು ಬುಧನ ಆಶ್ರಮದಲ್ಲಿರುದು. ಇಕ್ಷ್ವಾಕುವೇ ಮುಂತಾದವರು ಇಳನಿಗೆ ಸ್ತ್ರೀತ್ವಹೋಗುವುದಕ್ಕೆ ಪ್ರಯತ್ನಿಸುವುದು. ಬುಧನಿಗೆ ಇಳೆಯಲ್ಲಿ ಐಲನೆಂಬ ಮಗನು ಹುಟ್ಟಿದನು. ಇಕ್ಷ್ವಾಕುವೇ ಮುಂತಾದ ವಶದವರ ವರ್ಣನೆ. ಭಗೀರಥವಂಶವರ್ಣನೆ. ದಿಲೀಪವಂಶದ ವರ್ಣನೆ.
ಒಂಭತ್ತನೆಯ ಅಧ್ಯಾಯ
ಪಿತೃಗಳವಂಶದವರ್ಣನೆ ಅಗ್ನೌಕರಣದವರ್ಣನೆ. ಪಿತೃಗಳಿಗೆ ಪ್ರೀತಿಯನ್ನುಂಟುಮಾಡುವ ವಸ್ತುಗಳ ವರ್ಣನೆ. ಶಾದ್ಧದಲ್ಲಿ ನಿಷಿದ್ಧವಾದ ಪದಾರ್ಥಗಳ ವರ್ಣನೆ. ಶ್ರಾದ್ಧಪ್ರಶಂಸೆ. ಶ್ರಾದ್ಧವಿಧಿ, ಶ್ರಾದ್ಧಕಾಲಗಳ ವರ್ಣನೆ. ವಿಷವಾಯನ ದಿನಗಳಲ್ಲಿ ಸಾಧಾರಣ ಶ್ರಾದ್ಧವರ್ಣನೆ. ಉಪನಯನವಿಲ್ಲದವನು, ಹೆಂಡತಿಯಿಲ್ಲದವನು. ಇವರು ಸಾಧಾರಣಶ್ರಾದ್ಧವನ್ನು ಮಾಡುವ ಬಗೆ. ಶೂದ್ರನು ದಾನಕೊಡುವುದರ ವರ್ಣನೆ.
ಹತ್ತನೆಯ ಅಧ್ಯಾಯ
ಏಕೋದ್ಧಿಷ್ಟವಿಧಿಯ ನಿರೂಪಣೆ. ಬ್ರಾಹ್ಮಣಾದಿವರ್ಣಗಳಿಗೆ ಆಶೌಚಗಳ ನಿರ್ಣಯ. ಸೂತಕದ ಕೊನೆಯಲ್ಲಿ ಶಯ್ಯಾದಾನವರ್ಣನೆ. ಸಪಿಂಡ ವಿಧಾನ. ಲೇಪಭಾಗಿಗಳ ಪಿಂಡಭಾಗಿಗಳ ವರ್ಣನೆ. ಸಪ್ತಪುರುಷರಿಗೆ ಸಪಿಂಡಾತನದ ವರ್ಣನೆ ಭೀಷ್ಮನು ಬ್ರಾಹ್ಮಣರಿಗೆ ಹಾಕಿದ ಅನ್ನದಿಂದ ಪಿತೃಗಳಿಗೆ ತೃಪ್ತಿಹೇಗಾಗುವುದೆಂದು ಪುಲಸ್ತ್ಯನನ್ನು ಕೇಳುವುದು. ವಸುರುದ್ರಆದಿತ್ಯರೂಪರಾದ ಪಿತೃ ಪಿತಾಮಹಪ್ರಪಿತಾಮಹರಿಗೆ ಅಮೃತರೂಪವಾದ ಅನ್ನದ ಪ್ರಾಪ್ತಿಯವರ್ಣನೆ. ಪಿತೃಗಳ ದೈತ್ಯಾದಿರೂಪವನ್ನು ಹೊಂದಬೇಕಾದರೆ ಅವರವರು ತಿನ್ನುವ ರೀತಿಯಿಂದ ಶ್ರಾದ್ಧಾನ್ನ ಪರಿಣಮಿಸುವುದರ ವಿಚಾರ. ಶ್ರಾದ್ಧದಿಂದ ತೃಪ್ತರಾದ ಪಿತೃಗಳ ದೆಸೆಯಿಂದ ವಿದ್ಯಾದಿಗಳ ಪ್ರಾಪ್ತಿವರ್ಣನೆ. ಕೌಶಿಕನ ಮಕ್ಕಳು ಏಳುಜನ ವ್ಯಾಧರಾಗಿ ದಶಾರಣ್ಯದಲ್ಲಿದ್ದುದರ ವರ್ಣನೆ. ಪಿತೃಗಳ ಮಹಿಮೆಯನ್ನು ಹೇಳಿದುದರ ಕೇಳಿದುದರ ಫಲವು
ಹನ್ನೊಂದನೆಯ ಅಧ್ಯಾಯ
ಭೀಷ್ಮನು ಪುಲಸ್ತ್ಯನನ್ನು ಶ್ರಾದ್ಧದಕಾಲ, ದೇಶಸ್ವರೂಪಗಳನ್ನು ಕೇಳಿದುದು. ನೈಮಿಷವೇ ಮುಂತಾದ ಕ್ಷೇತ್ರಗಳಲ್ಲಿ ಶುದ್ಧಿಮಾಡಿದರೆ ಪ್ರಾಶಸ್ತ್ಯವಿವರಣೆ. ಗಯಾಶ್ರಾದ್ಧ ಪ್ರಾಶಸ್ತ್ಯವು. ತೀರ್ಥಗಳಲ್ಲಿ ಶ್ರಾದ್ಧಮಾಡುವಿಕೆ. ಶಾದ್ಧದಕಾಲ ಅಕಾಲಗಳು. ದರ್ಭೆ ಎಳ್ಳುಗಳು ವಿಷ್ಣುವಿನ ದೇಹದಿಂದ ಹುಟ್ಟಿದುವೆಂದು ವಿವರಿಸಿರುವುದು. ಈ ಅಧ್ಯಾಯವನ್ನು ಶಾದ್ಧಕಾಲದಲ್ಲಿ ಓದುವುದರ ಫಲವು.
ಹನ್ನೆರಡನೆಯ ಅಧ್ಯಾಯ
ಚಂದ್ರವಂಶಕಥನವು ಚಂದ್ರೋತ್ಪತ್ತಿಕಥನ. ಸೋಮನು ಬ್ರಹ್ಮಲೋಕಕ್ಕೆ ಹೋದುದು. ಓಷಧಿಗಳ ಉತ್ಪತ್ತಿಯು. ಓಷಧಿಗಳಿಗೆ ರಾತ್ರಿಯಲ್ಲಿ ಹೆಚ್ಚು ಕಾಂತಿ ಬರುವುದರ ವರ್ಣನೆ. ಸೋಮನು ಇಪ್ಪತ್ತೇಳುಜನ ದಕ್ಷಕನ್ಯೆಯರನ್ನು ಮದುವೆಯಾದುದು. ಸೋಮನು ಗುರುವಿನ ಹೆಂಡತಿಯಲ್ಲಿ ರಮಿಸಿದುದು. ದೇವತೆಗಳು ಸೋಮನೊಡನೆ ಯುದ್ಧಮಾಡಿದುದು. ಸೋಮನಿಗೆ ತಾರೆಯಲ್ಲಿ ಬುಧನು ಹುಟ್ಟಿದುದು. ಬುಧನಿಂದ ಇಳೆಯಲ್ಲಿ ಪುರೂರವನು ಹುಟ್ಟಿದುದು. ಪುರೂರವನ ಕಥೆ. ಪುರೂರವನ ವಂಶಕಥನ. ಕಾರ್ತವೀರ್ಯನ ಕಥೆ. ಕಾರ್ತಿವೀರ್ಯನ ವಂಶಸ್ವರೂಪದ ಕಥೆ. ಕಾರ್ತವೀರ್ಯನ ಹೆಸರಿನ ಫಲ. ಕ್ರೋಷ್ಟುವಿನ ಕಥೆ. ಸ್ಯಮಂತಕೋಪಾಖ್ಯಾನ. ಕುಂತಿಯ ಚರಿತ್ರೆ. ಮೂರುಜನರಿಂದ ಅರ್ಜುನನ ಉತ್ಪತ್ತಿಯ ವಿವರಣೆ. ಮಾದ್ರಿಯಲ್ಲಿ ನಕುಲ ಸಹದೇವರು ಹುಟ್ಟಿದುದು. ಬಲರಾಮಕೃಷ್ಣರ ಹುಟ್ಟುವಿಕೆಯ ಕಥೆ. ಕೃಷ್ಣಜನ್ಮದ ಕಥೆ. ವಸುದೇವ, ನಂದ, ದೇವಕಿ, ಯಶೋದೆಯ ಪೂರ್ವಜನ್ಮಕಥನ. ಕೃಷ್ಣನವಂಶಕಥನ. ವಿಷ್ಣುವು ಹತ್ತು ಅವತಾರ ತಾಳಲು ಕಾರಣ. ದೇವತೆಗಳು ಅಸುರರಿಗಿಂತಲೂ ಉತ್ಕೃಷ್ಟವೆಂಬುದು. ಶುಕ್ರನ ತಪಸ್ಸಿನ ವರ್ಣನೆ. ದೇವತೆಗಳಿಂದ ಸೋತ ದೈತ್ಯರು ಶುಕ್ರನ ತಾಯಿಯನ್ನು ಶರಣು ಹೊಂದುವುದು.
ಹದಿಮೂರನೆಯ ಅಧ್ಯಾಯ
ಶುಕ್ರನು ತಾಯಿಯು ದೇವತೆಗಳನ್ನು ಓಡಿಸುವುದು. ವಿಷ್ಣುವು ಶುಕ್ರನ ತಾಯಿಯನ್ನು ಕೊಂದುದು. ವಿಷ್ಣುವಿಗೆ ಭೃಗುವು ಶಾಪವನ್ನು ಕೊಡುವುದು. ಭೃಗುವು ಹೆಂಡತಿಯನ್ನು ಬದುಕಿಸುವುದು. ಶುಕ್ರನ ತಪಸ್ಸಿನ ಭಂಗಕ್ಕೋಸ್ಕರ ಇಂದ್ರನ ಮಗಳನ್ನು ಕಳುಹಿಸುವುದು. ತಪಸ್ಸಿನಲ್ಲಿದ್ದ ಶುಕ್ರನ ಅವಸ್ಥೆಯ ವರ್ಣನೆ. ಶುಕ್ರನಿಗೆ ಶಂಕರನು ವರವನ್ನು ಕೊಡುವುದು. ಇಂದ್ರನ ಮಗಳು ಶುಕ್ರನನ್ನು ವಶಮಾಡಿಕೊಳ್ಳುವುದು. ಶುಕ್ರನು ಜಯಂತಿಯೊಡನೆ ನೂರುವರ್ಷಗಳವರೆಗೆ ರಮಿಸುವುದು. ಬೃಹಸ್ಪತಿಯು ದೈತ್ಯರ ಬಳಿಗೆ ಶುಕ್ರನ ವೇಷದಿಂದ ಹೋಗುವುದು. ದಾನವರು ತನ್ನ ಉಪದೇಶವನ್ನು ತಿರಸ್ಕರಿಸಲು ಶುಕ್ರನು ಕೋಪಗೊಂಡು ಶಾಪಕೊಡುವುದು. ಶುಕ್ರನ ವೇಷದ ಬೃಹಸ್ಪತಿಯು ದಾನವರಿಗೆ ನಾಸ್ತಿಕವಾದ ತತ್ವವನ್ನುಪದೇಶಿಸುವುದು. ಬೃಹಸ್ಪತಿಯು ದಾನವರಿಗೆ ನಾಸ್ತಿಕಧರ್ಮದ ದೀಕ್ಷೆಯನ್ನು ಕೊಡುವುದು.
ಹದಿನಾಲ್ಕನೆಯ ಅಧ್ಯಾಯ
ಮೂರುಜನರಿಂದ ಅರ್ಜುನನು ಹುಟ್ಟಿದುದನ್ನು ಹೇಳುವುದು. ಶಿವನ ತಲೆಯನ್ನು ಕತ್ತರಿಸಲು ಕೋಪಗೊಂಡು ಬ್ರಹ್ಮನ ಬೆವರಿನಿಂದ ಪುರುಷನು ಹುಟ್ಟುವುದು. ಆ ಬೆವರಿನಿಂದ ಹುಟ್ಟಿದವನಿಂದ ಹೆದರಿ ಶಿವನು ವಿಷ್ಣುವಿನ ಬಳಿಗೆ ಓಡುವುದು. ಶಂಕರನಿಗೆ ವಿಷ್ಣುವು ಬಲತೋಳನ್ನು ಕೊಟ್ಟು ಅದನ್ನು ತ್ರಿಶೂಲದಿಂದ ಚುಚ್ಚಿ ಅದರಿಂದ ಬಂದ ರಕ್ತದಿಂದ ಒಬ್ಬ ಪುರುಷನು ಹುಟ್ಟುವುದು. ಬೆವರಿನಲ್ಲಿ ಹುಟ್ಟಿದವನಿಗೂ ರಕ್ತದಿಂದ ಹುಟ್ಟಿದವನಿಗೂ ಯುದ್ಧವು ನಡೆಯಲು ಬೆವರಿನವನು ಸೋಲುವುದು. ಆ ಸ್ವೇದಜ ರಕ್ತಜರೇ ಮುಂದೆ ಸುಗ್ರೀವರೂಪದಿಂದಲೂ ವಾಲಿರೂಪದಿಂದಲೂ ಹುಟ್ಟುವುದು. ಆ ಸುಗ್ರೀವವಾಲಿಗಳೇ ಮುಂದೆಯೂ ಅರ್ಜುನ ರೂಪದಿಂದಲೂ ಕರ್ಣರೂಪದಿಂದಲೂ ಹುಟ್ಟುವುದು. ಶಿವನು ಬ್ರಹ್ಮನ ತಲೆಯನ್ನು ಕತ್ತರಿಸಲು ಕಾರಣವರ್ಣನೆ. ಬ್ರಹ್ಮನು ಮಾಡಿದ ಅವಮಾನದಿಂದ ಹೆದರಿ ದೇವತೆಗಳು ಶಿವನನ್ನು ಸ್ತುತಿಸುವುದು. ದೇವತೆಗಳ ಇಷ್ಟವನ್ನು ಪೂರ್ತಿಮಾಡಲು ಶಂಕರನು ಬ್ರಹ್ಮನ ತಲೆಯನ್ನು ಕತ್ತರಿಸುವುದರ ವರ್ಣನೆ. ಬ್ರಹ್ಮಹತ್ಯೆಯ ಭೀತಿಯಿಂದ ಶಂಕರನು ಬ್ರಹ್ಮನನ್ನು ಸ್ತುತಿಸುವುದು, ಬ್ರಹ್ಮನ ಅಪ್ಪಣೆಯಂತೆ ಶಂಕರನು ವಿಷ್ಣುವನ್ನು ಸ್ತುತಿಸುವುದು. ವಿಷ್ಣುವು ಶಂಕರನಿಗೆ ಬ್ರಹ್ಮಹತ್ಯೆವನ್ನು ಕಳೆದುಕೊಳ್ಳಲು ಉಪಾಯವನ್ನು ಹೇಳುವುದು. ರುದ್ರನು ಎಲ್ಲಾ ಕ್ಷೇತ್ರಗಳಿಗೂ ತೀರ್ಥಗಳಿಗೂ ಹೋಗುವುದು. ಪುಷ್ಕರದಲ್ಲಿ ರುದ್ರನು ಮಾಡಿದ ಕಾಪಾಲಕ ವ್ರತಕಥನ. ಬ್ರಹ್ಮನು ಶಂಕರನಿಗೆ ವರಕೊಟ್ಟುದ್ದು. ಕಪಾಲಮೋಚನ ತೀರ್ಥೋತ್ಪತಿ ವರ್ಣನೆ. ವಾರಾಣಸೀಕ್ಷೇತ್ರದ ಮಹಿಮೆಯ ವರ್ಣನೆ. ಬ್ರಹ್ಮನ ಅಪ್ಪಣೆಯಂತೆ ಶಂಕರನು ವಾರಾಣಸಿಗೆ ಹೋಗುವುದು.
ಹದಿನೈದನೆಯ ಅಧ್ಯಾಯ
ಮೇರು ಶಿಖರದಲ್ಲಿರುವ ಸಭೆಯಲ್ಲಿ ಕುಳಿತ ಬ್ರಹ್ಮನ ಯೋಚನೆ. ಬ್ರಹ್ಮನು ಭೂಮಿಯಲ್ಲಿರುವ ವನಕ್ಕೆ ಬರುವುದು. ಬ್ರಹ್ಮನು ವೃಕ್ಷಗಳಿಗೆ ವರ ಕೊಡುವುದು. ಪುಷ್ಕರದ ಉತ್ಪತ್ತಿಯ ವರ್ಣನೆ. ಪುಷ್ಕರದಲ್ಲಿರುವ ಬ್ರಹ್ಮನ ಬಳಿಗೆ ದೇವತೆಗಳು ಹೋಗುವುದು. ದೇವತೆಗಳಿಗೆ ಬ್ರಹ್ಮನ ಉಪದೇಶ. ಪುಷ್ಕರವು ಹುಟ್ಟಲು ಕಾರಣ. ಪುಷ್ಕರತೀರ್ಥದಲ್ಲಿರುವವರ ಧರ್ಮದ ವಿವರಣೆ. ಮೂರು ವಿಧವಾದ ಭಕ್ತಿಯ ವರ್ಣನೆ. ತಮ್ಮ ಧರ್ಮದಲ್ಲಿಯೇ ಇದ್ದುಕೊಂಡು ಪುಷ್ಕರದಲ್ಲಿ ಸತ್ತವರಿಗೆ ಬರುವ ಫಲದ ವಿವರಣೆ. ಪುಷ್ಕರದಲ್ಲಿ ವಾಸಮಾಡುವವರಿಗೆ ಫಲದ ವಿವರಣೆ. ಪುಷ್ಕರದ ನೀರಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡವರಿಗೆ ಬರುವ ಫಲದ ವರ್ಣನೆ. ಪುಷ್ಕರದಲ್ಲಿ ವಾಸಿಸುವವರಿಗೆ ಬರುವ ಗತಿಯ ವರ್ಣನೆ. ಪುಷ್ಕರದಲ್ಲಿರುವವರ ಆಚಾರದ ವರ್ಣನೆ. ಪುಷ್ಕದಲ್ಲಿರುವವರು ಚಾಂದ್ರಾಯಣಾದಿ ವಿಧಿಗಳನ್ನು ಮಾಡುವಿಕೆ. ಬಾಹ್ಮಣನ ಲಕ್ಷಣ. ಭಿಕ್ಷುಕ (ಸನ್ಯಾಸಿಯ) ಧರ್ಮದ ವಿವರಣೆ.