ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವಗೀತಾ
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಪ್ರಸ್ತಾವನೆ
ಪ್ರಥಮಾಧ್ಯಾಯ
ಮಂಗಳಶ್ಲೋಕಗಳು — ಸೂತಮಹರ್ಷಿಗಳು, ಶೌನಕಾದಿಮಹರ್ಷಿಗಳಿಗೆ ಶಿವಗೀತೆಯ ಪ್ರಾಶಸ್ತ್ಯವನ್ನೂ, ಶಿವಗೀತೆಯು ತಮಗೆ ತಿಳಿದ ಬಗೆಯನ್ನೂ ವಿವರಿಸುವುದು. ಮತ್ತು ದೇವತೆಗಳು ಜ್ಞಾನಾರ್ಜನೆಮಾಡುವವರಿಗೆ ತೊಂದರೆ ಕೊಡುವ ವಿಷಯವನ್ನು ಉಪಪಾದಿಸುವುದು — ಜ್ಞಾನಸಾಧನೆಗೆ ಶಿವಾರ್ಚನೆಯೇ ಮುಖ್ಯವೆಂಬುದನ್ನೂ, ಅದಕ್ಕಿಂತ ಶ್ರೇಷ್ಠವಾದ ಕರ್ಮ ಬೇರಿಲ್ಲವೆಂಬುದನ್ನೂ ನಿರೂಪಿಸಿ, ಪಾಶುಪತವ್ರತದ ಮಹಿಮೆಯನ್ನು ಸೂಚಿಸುವುದು.
ಎರಡನೆಯ ಅಧ್ಯಾಯ
ಅಗಸ್ತ್ಯಮಹರ್ಷಿಗಳು ಪತ್ನೀವಿಯೋಗದಿಂದ ದುಃಖಿಸುತ್ತಿರುವ ಶ್ರೀರಾಮನ ಸಮೀಪಕ್ಕೆ ಬಂದು, ದೇಹಾಭಿಮಾನವನ್ನೂ, ಸಂಸಾರದ ಆಸಕ್ತಿಯನ್ನೂ ಬಿಡುವಂತೆ ಬೋಧಿಸುವುದು. ಶ್ರೀರಾಮನು ತಾನು ಕ್ಷತ್ರಿಯನೆಂಬುದನ್ನು ಋಷಿಗಳಿಗೆ ತಿಳಿಯಪಡಿಸಿ, ಕ್ಷತ್ರಿಯ ಧರ್ಮಕ್ಕೆ ತಕ್ಕ ಪರಾಕ್ರಮವನ್ನು ತೋರ್ಪಡಿಸಲು ಉಪಾಯವನ್ನು ಬೇಡಿದುದು — ಮತ್ತೂ ಅಗಸ್ತ್ಯರು ಶ್ರೀರಾಮನಿಗೆ ವೈರಾಗ್ಯಸ್ವರೂಪವನ್ನು ವಿವರಿಸಿದುದು.
ಮೂರನೆಯ ಅಧ್ಯಾಯ
ಅಗಸ್ತ್ಯಮಹರ್ಷಿಗಳು, ರಾವಣನು ವರದಿಂದ ಸಂಪಾದಿಸಿರುವ ಸಮಸ್ತ ಬಲವನ್ನೂ ರಾಮನಿಗೆ ತಿಳಿಸಿ, ಅವನು ಯಾರಿಗೂ ಸೋಲಲಾರನೆಂಬುದನ್ನೂ ಸೂಚಿಸುವುದು. ಶ್ರೀರಾಮನು ಶೂರನಾದ ರಾವಣನ ವಧೆಗಾಗಿ ಮುಂದೆ ಮಾಡಬೇಕಾದ ಕರ್ತವ್ಯವೇನೆಂಬುದನ್ನು ಕೇಳಿಕೊಳ್ಳುವುದು. ಶ್ರೀರಾಮನ ಅಪೇಕ್ಷೆಯಂತೆ ಅಗಸ್ತ್ಯರು ವೇದಸಾರಶಿವಸಹಸ್ರನಾಮ ಸ್ತೋತ್ರವನ್ನು ಪಾರಾಯಣಮಾಡುತ್ತಾ, ವಿರಜಾದೀಕ್ಷೆಯನ್ನು ಪಡೆದು ಪಾಶುಪತವನ್ನಾಚರಿಸುವಂತೆ ಬೋಧಿಸಿದುದು
ನಾಲ್ಕನೆಯ ಅಧ್ಯಾಯ
ಶ್ರೀರಾಮನು ಗೋದಾವರೀ ನದೀದಡದಲ್ಲಿರುವ ರಾಮಗಿರಿಯಲ್ಲಿ ಪಾಶುಪತವ್ರತವನ್ನಾಚರಿಸಿ, ನಾಲ್ಕು ತಿಂಗಳುಕಾಲ ಶಿವಾರಾಧನೆಗೈದುದು — ಶ್ರೀರಾಮನ ಭಕ್ತಿಗೆ ಮೆಚ್ಚಿ ಪರಶಿವನು ಪ್ರತ್ಯಕ್ಷನಾದುದು — ಪಾರ್ವತೀ ಪರಶಿವರ ಮತ್ತು ಶಿವಾನುಚರರಾಗಿ ಬಂದ ಇತರ ದೇವತೆಗಳ ವರ್ಣನೆ — ಶ್ರೀರಾಮನು ಪಾರ್ವತೀಪರಮೇಶ್ವರರನ್ನು ನೋಡಿ ಆನಂದಿಸುವುದು.
ಐದನೆಯ ಅಧ್ಯಾಯ
ಶಿವಮಹಿಮೆಯಿಂದ ದಿವ್ಯರಥವೊಂದು ಪ್ರತ್ಯಕ್ಷವಾಗುವಿಕೆ — ಆ ರಥದ ವರ್ಣನೆ — ಪರಶಿವನು ರಥಾರೂಢನಾಗಿ, ರಾಮನನ್ನೂ ರಥದಲ್ಲಿ ಕೂರಿಸಿಕೊಂಡು, ಪಾಶುಪತಾಸ್ತ್ರವನ್ನು ಅನುಗ್ರಹಿಸುವಿಕೆ — ಶಿವಾಜ್ಞೆಯಂತೆ ಸಮಸ್ತ ದೇವತೆಗಳೂ ತಮ್ಮ ತಮ್ಮ ಅಮೋಘವಾದ ಶಸ್ತ್ರಾಸ್ತ್ರಗಳನ್ನೂ ಶ್ರೀರಾಮನಿಗೆ ಕರುಣಿಸಿಕೊಡುವುದು — ಪರಮೇಶ್ವರನು ಶ್ರೀರಾಮನಿಗೆ ಸಂಪೂರ್ಣವಾದ ಅಭಯವನ್ನಿತ್ತು, ರಾವಣಸಂಹಾರವು ನಿನ್ನಿಂದ ನಿಜವಾಗಿಯೂ ನಡೆಯುವುದೆಂದು ವರ ಕೊಡುವುದು.
ಆರನೆಯ ಅಧ್ಯಾಯ
ಶ್ರೀರಾಮನು ಪರಮೇಶ್ವರನನ್ನು ಕುರಿತು ನಿನ್ನ ನಿಜಸ್ವರೂಪವೇನು ? ಎಂದು ಪ್ರಶ್ನಿಸುವುದು — ಪರಶಿವನು ಸ್ವಸ್ವರೂಪವನ್ನು ವಿವರಿಸುತ್ತಾ, ತಾನು ನಿರ್ವಿಕಾರಸ್ವರೂಪನೆಂದೂ, ಮಾಯಾಸಂಸರ್ಗದಿಂದ ಪ್ರಪಂಚರೂಪದಲ್ಲಿ ತೋರಿಬರುವನೆಂದೂ ತಿಳಿಯಪಡಿಸುವುದು.
ಏಳನೆಯ ಅಧ್ಯಾಯ
ಶ್ರೀರಾಮನು ಪರಶಿವನಲ್ಲಿ ವಿಶ್ವವೇ ಅಡಗಿರುವುದು ಹೇಗೆ ಎಂದು ಅನುಮಾನಿಸುವುದು. ಆ ಸಂದೇಹ ನಿವೃತ್ತಿಗಾಗಿ ಮಹಾದೇವನು ವಿಶ್ವರೂಪವನ್ನು ತನ್ನ ವದನದಲ್ಲಿ ತೋರ್ಪಡಿಸುವುದು — ಅಖಂಡ ಪ್ರಪಂಚವೇ ಪರಶಿವನ ಮುಖದಲ್ಲಿ ತೋರಿಬರುವಿಕೆ — ಶ್ರೀರಾಮಕೃತವಾದ ಪರಶಿವಸ್ತುತಿ — ವಿಶ್ವರೂಪದ ಉಪಸಂಹಾರ.
ಎಂಟನೆಯ ಅಧ್ಯಾಯ
ಪಾಂಚಭೌತಿಕವಾದ ದೇಹದ ಉತ್ಪತ್ತಿಕ್ರಮವನ್ನು ತಿಳಿಸಬೇಕೆಂದು ಶ್ರೀರಾಮನು ಪರಶಿವನನ್ನು ಪ್ರಾರ್ಥಿಸುವುದು — ಪರಮೇಶ್ವರನು, ಜರಾಯುಜಾದಿ ನಾಲ್ಕುವಿಧಗಳಾದ ದೇಹಗಳು ಉತ್ಪತ್ತಿಯಾಗುವ ವಿಷಯವನ್ನೂ, ದೇಹಕ್ಕೆ ಆಗಾಗ ಒದಗುವ ದುಃಖಗಳನ್ನೂ ವಿವರವಾಗಿ ತಿಳಿಸಿದುದು.
ಒಂಬತ್ತನೆಯ ಅಧ್ಯಾಯ
ಮಾನವರ ದೇಹದ ಸ್ವರೂಪ, ಅಂತಃಕರಣದ ಒಳಭೇದಗಳು — ಸತ್ತ್ವರಜಸ್ತಮೋಗುಣಗಳಿಂದ ಆಗುವ ವ್ಯತ್ಯಾಸ — ಪ್ರಾಣಾದಿಪಂಚವಾಯುಗಳ ಚೇಷ್ಟಾದಿಗಳು — ಒಂದು ದೇಹದಲ್ಲಿ ಕಂಡುಬರುವ ಸಪ್ತಧಾತುಗಳ, ಮೂಳೆಗಳ, ಸಂಧಿಭಾಗಗಳ ಪರಿಮಾಣ ಮತ್ತು ಸಂಖ್ಯಾದಿಗಳು — ಇವುಗಳನ್ನು ವಿಸ್ತಾರವಾಗಿ ಬೋಧಿಸುವುದು.
ಹತ್ತನೆಯ ಅಧ್ಯಾಯ
ಜೀವದ ಸ್ವರೂಪವಾಗಿ ಮತ್ತೆ ಶ್ರೀರಾಮನು ಪ್ರಶ್ನಿಸುವುದು — ಸ್ಥೂಲ, ಸೂಕ್ಷ್ಮ, ಕಾರಣಶರೀರಗಳ ಕ್ರಮವನ್ನು ವಿವರಿಸುವುದು — ಈಶ್ವರಚೈತನ್ಯದ ಪ್ರತಿಬಿಂಬವೇ ಜೀವವೆಂಬುದರ ವಿವರಣೆ — ಜೀವನಿಗೆ ಅನೇಕ ದೇಹಗಳು ಸಂಭವಿಸುವ ವಿಚಾರ — ಜಾಗ್ರತ್, ಸ್ವಪ್ನ — ಸುಷುಪ್ತ್ಯಾದ್ಯವಸ್ಥೆಗಳ ವಿಚಾರವು ಜೀವಿಗೆ ಒದಗುವಕ್ರಮ — ಒಬ್ಬನೇ ಆತ್ಮನು ನಾನಾ ಜೀವಭಾವದಿಂದಿರುವ ಚಮತ್ಕಾರ — ಇವುಗಳನ್ನು ಮಹೇಶ್ವರನು ಶ್ರೀರಾಮನಿಗೆ ಬೋಧಿಸುವಿಕೆ.
ಹನ್ನೊಂದನೆಯ ಅಧ್ಯಾಯ
ಜೀವನಿಗೆ, ದೇಹಾಂತರ ಮತ್ತು ಲೋಕಾಂತರಗಳು ದೊರಕುವ ವಿಚಾರ — ಕರ್ಮಾನುಗುಣವಾಗಿ ಜೀವನು ನರಕ, ಸ್ವರ್ಗ ಇವುಗಳನ್ನು ಸೇರಿ, ಅಲ್ಲಿ ದುಃಖ ಮತ್ತು ಸುಖ ಇವುಗಳನ್ನು ಅನುಭವಿಸುವಿಕೆ — ಮಾನುಷಾನಂದವೇ ಮೊದಲಾಗಿ ಬ್ರಹ್ಮಾನಂದಪರ್ಯಂತವಿರುವ ಆನಂದಸ್ವರೂಪನಿರೂಪಣೆ — ಜ್ಞಾನಿಯ ಪ್ರಾಶಸ್ತ್ಯ.
ಹನ್ನೆರಡನೆಯ ಅಧ್ಯಾಯ
ಉಪಾಸನಾಸ್ವರೂಪವನ್ನು ವಿವರಿಸುವುದು — ಸಂಪತ್, ಆರೋಪ, ಸಂವರ್ಗ, ಅಧ್ಯಾಸಗಳೆಂಬ ನಾಲ್ಕು ವಿಧ ಉಪಾಸನೆಗಳ ಸ್ವರೂಪನಿರೂಪಣೆ — ಉಪಾಸನೆಯಕಾಲದಲ್ಲಿ ಬ್ರಹ್ಮಸ್ವರೂಪವನ್ನು ಅರಿಯುವ ಕ್ರಮ.
ಹದಿಮೂರನೆಯ ಅಧ್ಯಾಯ
ಶ್ರೀರಾಮನು ಮುಕ್ತಿಲಕ್ಷಣವನ್ನು ತಿಳಿಸಬೇಕೆಂದು ಮಹಾದೇವನನ್ನು ಪ್ರಾರ್ಥಿಸುವಿಕೆ. ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ, ಸಾಯುಜ್ಯ, ಈ ನಾಲ್ಕು ವಿಧ ಮುಕ್ತಿಸ್ವರೂಪವನ್ನು ವಿವರಿಸುವುದು — ಶುದ್ಧ ಜ್ಞಾನವನ್ನು ಸಂಪಾದಿಸುವ ಕ್ರಮ — ಅಜ್ಞಾನಹೃದಯ ಗ್ರಂಥಿನಾಶವೇ ಮೋಕ್ಷವೆಂದು ಸಿದ್ಧಾಂತ ಪಡಿಸುವಿಕೆ.
ಹದಿನಾಲ್ಕನೆಯ ಅಧ್ಯಾಯ
ಸಗುಣೋಪಾಸನವಿಧಿ — ಪ್ರಾಣಮಯಾದಿ ಪಂಚಕೋಶಗಳ ಸ್ವರೂಪವಿವರಣೆ — ಲಿಂಗಶರೀರವು ಸಪ್ತದಶವಸ್ತುಸಂಸರ್ಗಾತ್ಮಕವೆಂಬುದನ್ನು ತಿಳಿಯಪಡಿಸುವುದು — ಶಿವಮಾಯಾ ಪ್ರಭಾವ ವರ್ಣನೆ.
ಹದಿನೈದನೆಯ ಅಧ್ಯಾಯ
ಭಕ್ತಿಯೋಗನಿರೂಪಣೆ — ಶಿವಪಂಚಾಕ್ಷರ ಮಂತ್ರಜಪ, ಪ್ರಣವಮಂತ್ರಜಪ ಇವುಗಳ ಪ್ರಾಶಸ್ತ್ಯ — ಪರಶಿವನ ಭಕ್ತನು ಅನುಷ್ಠಾನಮಾಡಬೇಕಾದ ಕರ್ಮಗಳ ವಿವರಣೆ.
ಹದಿನಾರನೆಯ ಅಧ್ಯಾಯ
ಮೋಕ್ಷಮಾರ್ಗಕ್ಕೆ ಅಧಿಕಾರಿಗಳು ಯಾರು ಎಂಬುದರ ವಿವರಣೆ — ಮುಕ್ತಿಯು ಯಾವ ಯಾವ ಕರ್ಮಾಚರಣೆಗಳಿಂದ ಸುಲಭವಾಗಿ ಲಭಿಸುವುದು ಎಂಬುದರ ವಿಚಾರ — ಶಿವಲಿಂಗ ಮತ್ತು ಶಿವಪ್ರತಿಮೆಗಳನ್ನು ನಿರ್ಮಿಸುವ ಕ್ರಮ ಮತ್ತು ಶಿವಾರ್ಚನೆ ಮಾಡುವ ವಿಧಾನ — ಜಪಾಸನಗಳು, ಜಪಮಾಲೆಗಳು, ಜಪಕಾಲದಲ್ಲಿ ಮುದ್ರಾವಿನ್ಯಾಸಗಳು, ಇವುಗಳ ಫಲಾಫಲ ನಿರೂಪಣೆ — ಶಿವಗೀತಾ ಪಾರಾಯಣ ಫಲಪ್ರಶಂಸೆ.